Homeಮುಖಪುಟಮೋದಿ 2.1: ಆರು ವರ್ಷ ಆಡಳಿತದ ಮೋದಿಯ ಮಹಾನ್ ಕಣ್ಕಟ್ಟು: ಅಭದ್ರತೆಯೇ ಆಡಳಿತ!

ಮೋದಿ 2.1: ಆರು ವರ್ಷ ಆಡಳಿತದ ಮೋದಿಯ ಮಹಾನ್ ಕಣ್ಕಟ್ಟು: ಅಭದ್ರತೆಯೇ ಆಡಳಿತ!

- Advertisement -
- Advertisement -

ಸರಿಯಾಗಿ ಒಂದು ವರ್ಷದ ಹಿಂದೆ ಬರೆದಿದ್ದ ಈ ಲೇಖನವು ಮೊದಲು ಹಫಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾಗಿತ್ತು. ನರೇಂದ್ರ ಮೋದಿಯವರ ನೇತೃತ್ವದ ಈಗಿನ ಸರ್ಕಾರವು ಮತ್ತೆ ಗೆದ್ದುಬಂದ ಸರ್ಕಾರವಾದ್ದರಿಂದ ಒಂದು ಹಿನ್ನೋಟದ ಅಗತ್ಯವೂ ಇದೆ. ಹಾಗಾಗಿ ಇದನ್ನು ಪುನರ್‍ಮುದ್ರಿಸಲಾಗಿದೆ.

ಒಂದು ಹಳೆಯ ಜಾನಪದ ಕತೆ ಹೀಗಿದೆ: ತನ್ನ ಪಾಪಗಳನ್ನು ತೊಳೆಯಲು ಒಬ್ಬ ವ್ಯಕ್ತಿ ದೀರ್ಘಕಾಲ ಘನಘೋರ ತಪಸ್ಸು ಮಾಡುತ್ತಾನೆ. ದೇವರು ಆತನ ಮುಂದೆ ಪ್ರತ್ಯಕ್ಷನಾಗಿ ಒಂದು ವರವನ್ನು ದಯಪಾಲಿಸುತ್ತಾನೆ. ಆದರೆ, ಒಂದು ಶರತ್ತು ಇದೆ. ಅದೆಂದರೆ, ಅವನು ಏನು ಕೇಳುತ್ತಾನೋ ಅದರ ಎರಡು ಪಾಲು ಅವನ ಗೆಳೆಯನಿಗೆ ಸಿಗುತ್ತದೆ. ಗೆಳೆಯನಿಗೆ ಸಿಗುತ್ತದೆ ಎಂದು ಚಿಂತಿತನಾದ ಆ ವ್ಯಕ್ತಿ ಸ್ವಲ್ಪ ಕಾಲ ಯೋಚಿಸಿ, ತನ್ನ ಒಂದು ಕಣ್ಣು ತೆಗೆಯುವಂತೆ ಹೇಳುತ್ತಾನೆ. ಅವನ ಗೆಳೆಯ ಎರಡೂ ಕಣ್ಣು ಕಳೆದುಕೊಂಡು ಸಂಪೂರ್ಣ ಕುರುಡನಾಗುತ್ತಾನೆ.
ನರೇಂದ್ರ ಮೋದಿಯ ಭಾರತದಲ್ಲಿ ಇದು ಕತೆಯಾಗಿ ಉಳಿದಿಲ್ಲ. ಅದು ಒಂದು ಆಡಳಿತ ಪದ್ಧತಿಯಾಗಿ ಬೆಳೆದಿದೆ. ಒಬ್ಬ ವ್ಯಕ್ತಿಯ ಅತ್ಯಂತ ಅಭದ್ರತೆಯೇ ಆಡಳಿತಕ್ಕೆ ಚಾಲಕಶಕ್ತಿಯಾಗಿದೆ. ಅದು ಹೇಗೆಂದರೆ ತನ್ನ ಸಂಕಷ್ಟಗಳನ್ನು “ಇತರರ” ವಿರುದ್ಧ ಹೋಲಿಸಲು ಕಲಿಸುವುದರ ಮೂಲಕ. ಕಳೆದ ಐದು ವರ್ಷಗಳಲ್ಲಿ ಈ “ಇತರರು” ಬೇರೆಬೇರೆ ರೂಪ ತಳೆದಿದ್ದಾರೆ- ಮುಸ್ಲಿಮರು, ದಲಿತರು, ಆದಿವಾಸಿಗಳು, ಮಹಿಳೆಯರು, ರೈತರು, ನಿರುದ್ಯೋಗಿಗಳು ಮತ್ತು ಉದ್ಯೋಗ ಮಾಡಲಾಗದವರು.

ಯಾರಾದರೂ ಇದನ್ನು ಮತ್ತೆಮತ್ತೆ ಮಾಡುವುದು ಹೇಗೆ ಸಾಧ್ಯ? ಅದು ಕೊನೆಯೇ ಇಲ್ಲದ ಮೋಸದ ಮೂಲಕ; ಸರಕಾರದ ಮೇಲೆ ಜನರಿಗೆ ಇರುವ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ; ಬಡಾಯಿಯ ಧೋರಣೆಗಳನ್ನು ರೂಪಿಸುವ ಮೂಲಕ; ರಣಕೇಕೆ ಹಾಕುವ ಮೂಲಕ; ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಮೂಲಕ.

ಈ ಪ್ರಕ್ರಿಯೆಯಲ್ಲಿ ಅವರು ಜನರ ಗಮನವನ್ನು ಸರಕಾರದ ವೈಫಲ್ಯದಿಂದ ದೂರಕ್ಕೆ ಸೆಳೆಯಲು ಯಶಸ್ವಿಯಾಗಿದ್ದಾರೆ. ಚುನಾವಣಾ ಕಾಲ ಮುಗಿಯುತ್ತಿರುವಂತೆ ಸರಕಾರದ ವೈಫಲ್ಯಗಳನ್ನು ನೆನಪಿಸುವುದು ಅತೀ ಮುಖ್ಯ- ನಾವು ಸರಕಾರದ ಭಾಗವಾಗಿರುವುದಕ್ಕಾಗಿ ಮಾತ್ರವಲ್ಲ; ಬಿಜೆಪಿ ಸರಕಾರವು ಮಾಡಿರುವ ರಾಚನಿಕ ಮತ್ತು ಸಾಂಸ್ಥಿಕ ಹಾನಿಯ ಪರಿಣಾಮ ಮುಂಬರುವ ಕೆಲವು ವರ್ಷಗಳ ತನಕ ಕಾಡಲಿರುವುದರಿಂದ.

ನೋಟು ಅಮಾನ್ಯೀಕರಣ

ಅತ್ಯಂತ ದೊಡ್ಡ ಆರ್ಥಿಕ ಅಪಹಾಸ್ಯವೆಂದರೆ ಖಂಡಿತವಾಗಿಯೂ ನೋಟು ಅಮಾನ್ಯೀಕರಣ. ಮೋದಿ ನವೆಂಬರ್ 2016ರಲ್ಲಿ ಜನರು ತಮ್ಮದೇ ಕಷ್ಟಪಟ್ಟು ದುಡಿದ ಹಣವನ್ನು ಪಡೆಯಲು ಸಾಲುಗಟ್ಟಿ ಬೇಡುವಂತೆ ಮಾಡಿದ್ದರು. ಉದ್ದವಾದ ಸರತಿ ಸಾಲು ಮತ್ತು ಜನರು ಎದುರಿಸಿದ ಸಂಕಷ್ಟಕ್ಕೆ ಅತಿರಿಕ್ತವಾಗಿ ದೊಡ್ಡ ಹೊಡೆತವೆಂದರೆ, ಇಡೀ ಪ್ರಕ್ರಿಯೆಯೇ ಒಂದು ದೊಡ್ಡ ನಾಟಕವಾಗಿತ್ತು. ಕಪ್ಪು ಹಣವೆಂಬ ಮಿಥ್ಯೆಯನ್ನು ತೊಲಗಿಸುವ ಬದಲಾಗಿ ಅದು ಆರ್ಥಿಕತೆಯಿಂದ ಹಣವನ್ನೇ ತೊಲಗಿಸಿತು. ಸ್ಥಾಪಿತವಾಗಿದ್ದ ವ್ಯಾಪಾರ ಜಾಲಗಳು ಸರ್ವನಾಶವಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು.

ಮೋದಿಯ ನೋಟು ಅಮಾನ್ಯೀಕರಣದ ಅಮಾನವೀಯತೆ

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ 2019ರ ವರದಿಯಂತೆ ಅಮಾನ್ಯೀಕರಣದ ಬಳಿಕ 50 ಲಕ್ಷ ಉದ್ಯೋಗಗಳು ನಷ್ಟವಾದವು. ಬಡವರೇ ಹೆಚ್ಚಾಗಿ ಇದರ ಭಾರವನ್ನು ಹೊತ್ತರು. ಇದರ ದುಷ್ಪರಿಣಾಮಗಳ ಕುರಿತು ರಿಸರ್ವ್ ಬ್ಯಾಂಕ್ ಮೊದಲಾಗಿಯೇ ಸರಕಾರವನ್ನು ಎಚ್ಚರಿಸಿತ್ತು. ಆದರೂ ಮೋದಿ ಮತ್ತವರ ಕೂಟವು ಇದನ್ನು ಕಡೆಗಣಿಸಿ ಮುಂದಡಿಯಿಟ್ಟಿತು. ಯಾಕೆ? ಯಾಕೆಂದರೆ, ಭ್ರಷ್ಟಾಚಾರ ನಿರ್ಮೂಲನೆಗೆ ಸರಕಾರ ಬದ್ಧ ಎಂದು ತೋರಿಸುವ ದೊಡ್ಡ ಪ್ರದರ್ಶನವೊಂದು ನಡೆಯಬೇಕಿತ್ತು.

ಆರ್ಥಿಕ ಒಳಗೊಳ್ಳುವಿಕೆ

ಬಿಜೆಪಿ ಸರಕಾರವು ಆರ್ಥಿಕ ಒಳಗೊಳ್ಳುವಿಕೆಯ ಕುರಿತು ಭಾರೀ ಭರವಸೆಗಳನ್ನು ನೀಡಿತ್ತು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಜನ ಧನ್ ಯೋಜನಾ (ಪಿಎಂಜೆಡಿವೈ) ಅಡಿಯಲ್ಲಿ ಲಕ್ಷಾಂತರ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಆರ್ಥಿಕ ಒಳಗೊಳ್ಳುವಿಕೆಯು ಅಗತ್ಯವಾಗಿದ್ದರೂ, ಕೇವಲ ಬ್ಯಾಂಕ್ ಖಾತೆ ತೆರೆಯುವುದರಿಂದ ಯಾವುದೇ ಆರ್ಥಿಕ ಒಳಗೊಳ್ಳುವಿಕೆಯು ಸಾಧ್ಯವಾಗದು. ಇಲ್ಲಿ ವಾದಿಸಲಾಗಿರುವಂತೆ ಸಕಾಲಿಕ ಹೂಡಿಕೆ ಮತ್ತು ಗ್ರಾಹಕ ಶಕ್ತಿ ಹೆಚ್ಚುವಂತೆ ಮಾಡುವ ಸಲುವಾಗಿ ಕೈಗೆಟಕುವ ಸಾಲ ಒದಗಿಸುವ ವ್ಯವಸ್ಥೆ ಬಡವಾಗಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಉದ್ಯೋಗಾವಕಾಶ ಕುಸಿತ ಮತ್ತು ನೈಜ ಸಂಬಳದ ಕುಸಿತದಿಂದ ಬಡವರಲ್ಲಿ ಸಾಕಷ್ಟು ಉಳಿತಾಯವಿಲ್ಲ. ಇದು ಅವರು ಔಪಚಾರಿಕ ಆರ್ಥಿಕ ವ್ಯವಸ್ಥೆಯಲ್ಲಿ ಪಾಲುಗೊಳ್ಳದಂತೆ ಮಾಡುತ್ತದೆ. ಆದುದರಿಂದಲೇ ದೊಡ್ಡ ಸಂಖ್ಯೆಯಲ್ಲಿ ಇಂತಹಾ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿವೆ.

ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಕೇವಲ 14.06 ಬ್ಯಾಂಕ್ ಶಾಖೆಗಳಿವೆ. ಈ ಸಂಖ್ಯೆ ಕಳೆದ 15 ವರ್ಷಗಳಿಂದ ಏರುತ್ತಿದೆಯಾದರೂ, ಏರಿಕೆಯ ದರ ತೀರಾ ನಿಧಾನವಾಗಿದೆ. ಬ್ಯಾಂಕುಗಳು ಗ್ರಾಮೀಣ ಜನರನ್ನು ಮುಟ್ಟುವಂತೆ ಮಾಡಲು ಯಾವುದೇ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಬದಲಾಗಿ ಸರಕಾರವು ಕಾಗದದ ದಾಖಲೆಗಳಿಲ್ಲದ ಬ್ಯಾಂಕಿಂಗ್ (ಬಿ.ಸಿ. ಅಂದರೆ, ಬ್ಯಾಂಕಿಂಗ್ ಕರೆಸ್ಪೋಂಡೆಂಟ್ಸ್) ಮೂಲಕ ಆಧಾರ್ ಆಧರಿತ ಪಾವತಿ ವ್ಯವಸ್ಥೆಯನ್ನು ತಳ್ಳಲು ಯತ್ನಿಸುತ್ತಿದೆ. ಈ ಮೂಲಕ ಪಾವತಿ ಪಡೆಯುವ ಗ್ರಾಮೀಣ ಜನತೆಗೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಅಪ್‍ಡೇಟ್ ಮಾಡುವಂತಹ ಮೂಲಸೌಕರ್ಯಗಳೂ ಇಲ್ಲ. ಈ ಬಿ.ಸಿ.ಗಳು ಉತ್ತಮವಾದ ನಿಯಂತ್ರಣ ಮತ್ತು ಕಣ್ಗಾವಲು ವ್ಯವಸ್ಥೆ ಹೊಂದಿದ್ದರೂ, ನಿಜವಾದ ಬ್ಯಾಂಕ್‍ಗಳಿಗೆ ಬದಲಿಯಾಗುವುದು ಸಾಧ್ಯವಿಲ್ಲ. ವಾಸ್ತವ ಸ್ಥಿತಿಯಲ್ಲಿ ಈ ಬಿ.ಸಿ.ಗಳಿಗೆ ಸದ್ಯಕ್ಕೆ ಯಾವುದೇ ಉತ್ತರದಾಯಿತ್ವ ನಿಯಮಗಳಿಲ್ಲ. ಆರ್ಥಿಕ ಒಳಗೊಳ್ಳುವಿಕೆಗೆ ಸ್ಪಷ್ಟವಾದ ಧೋರಣೆಗಳು ಇಲ್ಲದೇ ಇರುವುದರಿಂದ ಈಗಾಗಲೇ ಸಿಬ್ಬಂದಿ ಕೊರತೆ ಹೊಂದಿರುವ ಸಾರ್ವಜನಿಕ ರಂಗದ ಗ್ರಾಮೀಣ ಬ್ಯಾಂಕ್‍ಗಳು ತೀರಾ ಒತ್ತಡದಲ್ಲಿವೆ.

ಪ್ರಧಾನಮಂತ್ರಿ ಜನ ಧನ ಯೋಜನೆಯು ಬಿಜೆಪಿಯ ಜೆಎಎಂ (ಜನ ಧನ್-ಆಧಾರ್ ಮೊಬೈಲ್)ನ ಆಧಾರ್‍ನ ಸುಲಲಿತ ವ್ಯವಸ್ಥೆಯ ಜೊತೆಗೆಯೇ ಆರಂಭವಾಯಿತಾದರೂ ಸಾಕಷ್ಟು ಇತರ ಸಮಸ್ಯೆಗಳೂ ಇದ್ದವು. ಮೊದಲನೆಯದಾಗಿ, 2015ರಲ್ಲಿ ಮಾಹಿತಿ ಹಕ್ಕು ಕಾಯಿದೆಯ ಅನುಸಾರ ಸಲ್ಲಿಸಲಾದ ಅರ್ಜಿಗೆ ಬಂದ ಉತ್ತರದ ಪ್ರಕಾರ, ಆಧಾರ್ ಸಂಖ್ಯೆಗಳನ್ನು ನೀಡಲಾಗುವ ಮೊದಲೇ ಜನರಲ್ಲಿ ಆಗಲೇ ಕನಿಷ್ಟ ಎರಡು ಗುರುತಿನ ದಾಖಲೆಗಳು ಇದ್ದವು. ಬಹುತೇಕ ಉದ್ದೇಶಿತ ಜನರು ಒಂದು ಸರಕಾರಿ ಗುರುತು ದಾಖಲೆ ಹೊಂದಿದ್ದು, ಆಗಲೇ ಇಲೆಕ್ಟ್ರಾನಿಕ್ ಹಣ ವರ್ಗಾವಣೆ ವ್ಯವಸ್ಥೆಯ ಮೂಲಕ ಹಣವು ಗ್ರಾಮೀಣ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗುತ್ತಿತ್ತು. ಹೀಗಿರುವಾಗ ಆಧಾರ್ ಕಾರ್ಡನ್ನು ಹೊಸದಾಗಿ ಪರಿಚಯಿಸಿದುದರ ಹಿಂದಿನ ತರ್ಕವೇ ಪ್ರಶ್ನಾರ್ಹವಾಗಿತ್ತು.

ಇದಕ್ಕೆ ವ್ಯತಿರಿಕ್ತವಾಗಿ ಆಧಾರ್ ಸಂಬಂಧಿಸಿದ ಅನೇಕ ಹಣ ವರ್ಗಾವಣೆಗಯು ಹಲವಾರು ಕಾರಣಗಳಿಗಾಗಿ ಬೇರೆ ಖಾತೆಗಳಿಗೆ ವರ್ಗಾವಣೆ ಆಗುವುದು, ಪಾವತಿ ತಿರಸ್ಕೃತವಾಗುವುದು ನಡೆದೇ ಇದೆ. ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿನ ಅನೇಕ ಪಾವತಿಗಳಿಗೆ ಇದೇ ಗತಿಯಾಗಿರುವುದು ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‍ಬಿ) ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇದು ತೀರಾ ಹತಾಶೆಯ ವಿಷಯ. ಆಧಾರ್ ಸಂಬಂಧಿ ಬಯೋಮೆಟ್ರಿಕ್ ವೈಫಲ್ಯಗಳ ಕಾರಣದಿಂದ ಪಡಿತರ ನಿರಾಕರಿಸಲಾಗಿರುವುದು ಕನಿಷ್ಟ 75ರಷ್ಟು ಹಸಿವಿನಿಂದ ಸಾವಿಗೆ ಕಾರಣವಾಗಿದೆ. ಇಂತಹಾ ಮಹಾನ್ ತಪ್ಪಿಗಾಗಿ ಯಾಕೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಯಿತು ಎಂಬ ಬಗ್ಗೆ ಬಿಜೆಪಿ ಸರಕಾರವು ತೆಪ್ಪಗಿದೆ. ವೃದ್ಧಾಪ್ಯ ವೇತನಕ್ಕೂ ಇದೇ ಗತಿಯಾಗಿದೆ.

ಉದ್ಯೋಗ ಖಾತರಿ

ಉದ್ಯೋಗ ಖಾತರಿ ಯೋಜನೆಗೆ ಈ ತನಕಕ್ಕಿಂತ ಅತ್ಯಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿಗೆ ವ್ಯತಿರಿಕ್ತವಾಗಿ ಈ ಅನುದಾನ ಪಾತಾಳ ತಲುಪಿದೆ. ಪ್ರತಿವರ್ಷವೂ ಸರಾಸರಿಯಾಗಿ 23 ಶೇಕಡಾ ಅನುದಾನ ವಾಸ್ತವವಾಗಿ ಹಿಂದಿನ ವರ್ಷದ ಪಾವತಿ ಬಾಕಿಯಾಗಿತ್ತು. ಈ ವರ್ಷದ 60,000 ಕೋಟಿ ರೂ. ಅನುದಾನದಲ್ಲಿ 10,000 ಕೋಟಿ ರೂ. ಹಿಂದಿನ ವರ್ಷಗಳ ಪಾವತಿ ಬಾಕಿಯಾಗಿತ್ತು ಎಂದು ಲೇಖಕರ ಲೆಕ್ಕಾಚಾರ. ಇದರಿಂದ ಕೃಷಿ ಬಿಕ್ಕಟ್ಟನ್ನು ಬಿಜೆಪಿ ಸರಕಾರವು ಇನ್ನಷ್ಟು ಉಲ್ಭಣಗೊಳಿಸಿದೆ. ವಾಸ್ತವವಾಗಿ ಈ ವರ್ಷದ ಅನುದಾನವು 2010-11ರ ಅನುದಾನಕ್ಕಿಂತಲೂ ಕಡಿಮೆ. ಜನರ ಕೆಲಸದ ಬೇಡಿಕೆಗಿಂತ 33 ಶೇಕಡಾ ಕಡಿಮೆ ಉದ್ಯೋಗ ನೀಡಲಾಗುತ್ತಿದೆ. ಸರಾಸರಿಯಾಗಿ ದೇಶದಾದ್ಯಂತ ಉದ್ಯೋಗ ಖಾತರಿ ಯೋಜನೆಯ ಸಂಬಳ ಮಾಮೂಲಿ ಕೃಷಿ ಕೂಲಿಗಿಂತಲೂ ಕಡಿಮೆಯಾಗಿದೆ.

ನಿರುದ್ಯೋಗ

ಸೋರಿಕೆಯಾದ ಸರಕಾರಿ ದಾಖಲೆಗಳ ಪ್ರಕಾರವೇ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅತ್ಯಂತ ಹೆಚ್ಚಿದೆ. ಐವರಲ್ಲಿ ಒಬ್ಬರು ಶಿಕ್ಷಿತ ಯುವಜನರು ನಿರುದ್ಯೋಗಿಯಾಗಿದ್ದಾರೆ. 20-24ರ ಹರೆಯದಲ್ಲಿರುವ ನಗರವಾಸಿ ಯುವಕರು ದುಡಿಯಬಲ್ಲ ಜನರ ಸಂಖ್ಯೆಯಲ್ಲಿ 13.5 ಶೇಕಡಾ ಇದ್ದಾರೆ. ಅವರಲ್ಲಿಯೇ 60 ಶೇಕಡಾ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಮುದ್ರಾ ಯೋಜನೆಯೂ ಇದೇ ರೀತಿಯಲ್ಲಿ ವಿಫಲಗೊಂಡಿದೆ. ಇದಕ್ಕೆ ಸರಕಾರದ ಪ್ರತಿಕ್ರಿಯೆ ಏನು? ಅದುವೇ ಅಂಕಿ ಅಂಶಗಳನ್ನು ಮುಚ್ಚಿಡುವುದು! ದೋಷಪೂರಿತ ಜಿಎಸ್‍ಟಿ ಚಿಕ್ಕ ವ್ಯಾಪಾರಿಗಳು ಮತ್ತು ಉದ್ಯಮಿಗಳನ್ನು ಸರ್ವನಾಶ ಮಾಡಿದೆ.

ಕೇವಲ ಆರ್ಥಿಕತೆಯಲ್ಲ…

ಮಾಹಿತಿ ಆಯೋಗ, ಚುನಾವಣಾ ಆಯೋಗ ಇತ್ಯಾದಿ ಸಾಂವಿಧಾನಿಕ ಸಂಸ್ಥೆಗಳನ್ನೂ ದುರ್ಬಲಗೊಳಿಸಲಾಗಿದೆ. ಭಾರತವನ್ನು ಲಿಂಚಿಸ್ಥಾನ್ ಎಂದು ಕರೆಯುವಂತೆ ಮಾಡಲಾಗಿದೆ. ಭಾರತದ ನೈತಿಕ ಸತ್ವವನ್ನು ಗುಣಪಡಿಸುವವರು ಯಾರು? ವಿಷವುಣಿಸಲಾದ ಜನರು ಮಾಡುವುದಾದರೂ ಏನನ್ನು? ಪ್ರಜಾಪ್ರಭುತ್ವದ ಈ ಉತ್ಸವವನ್ನು ಸಾವು ಸುಳ್ಳುಗಳು, ವಿಡಿಯೋ ಟೇಪುಗಳ ಸಂತೆಯನ್ನಾಗಿ ಮಾಡಿದ್ದಾರೆ. ದ್ವೇಷ, ನೈತಿಕ ಅಧಃಪತನ ಇತ್ಯಾದಿಗಳನ್ನು ನೋಡಿದರೆ, ನಾವು ಆರಂಭದಲ್ಲಿ ಹೇಳಿದ ಜಾನಪದ ಕತೆಯ ಮನುಷ್ಯನಾಗಿದ್ದೇವೆಯೆ?

ಮೂಲ: ರಾಜೇಂದ್ರನ್ ನಾರಾಯಣ್, ಸಯನ್‍ದೇಬ್ ಚೌಧರಿ
ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

(ರಾಜೇಂದ್ರನ್ ನಾರಾಯಣ್ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ಮತ್ತು ಸಯನ್‍ದೇಬ್ ಚೌಧರಿ ದಿಲ್ಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...