Homeಅಂಕಣಗಳುಹೆಣ್ಮಕ್ಕಳ ಮೂಕವೇದನೆ ಕೊನೆಯಾಗಲಿ

ಹೆಣ್ಮಕ್ಕಳ ಮೂಕವೇದನೆ ಕೊನೆಯಾಗಲಿ

- Advertisement -
- Advertisement -
ರಾಜಕುಮಾರನಾಗಿದ್ದ ಸಿದ್ಧಾರ್ಥ, ಬುದ್ಧನಾದ. ಬುದ್ಧನಾದ ಮೇಲೆ ಭಾರತದ ಎಲ್ಲ ಕಡೆ ಪ್ರವಾಸಕ್ಕೆ ಹೊರಟ. ಹಾಗೆ ಹೊರಟವನು ಒಮ್ಮೆ ತನ್ನ ಊರಾದ ಕಪಿಲವಸ್ತುವಿಗೂ ಭೇಟಿ ನೀಡಿದ. ಕಪಿಲವಸ್ತುವಿನಲ್ಲಿ ಮೊಕ್ಕಾಂ ಹೂಡಿದಾಗ, ಬುದ್ಧನ ಸೇವೆಯಲ್ಲಿದ್ದ ಸಿದ್ದಾರ್ಥನ ಸೋದರಳಿಯ ಆನಂದ ಬುದ್ಧನ ಪೂರ್ವಾಶ್ರಮದ ಮಡದಿ ಯಶೋಧರಾ ಅವರನ್ನು ಕಾಣಲು ಅವಳ ಅರಮನೆಗೆ ಬಂದ. ಆಕೆ ಪೂರ್ವಾಶ್ರಮದ ಗಂಡ ಸಿದ್ಧಾರ್ಥನ ಯೋಗಕ್ಷೆÃಮ ವಿಚಾರಿಸಿದಳು. ಬುದ್ಧನ ಕೀರ್ತಿ ಭಾರತದಲ್ಲಿ ಪಸರಿಸುತ್ತಿರುವುದನ್ನು ಕೇಳಿ ತಿಳಿದು ಸಂಪ್ರಿÃತಳಾದಳು. ಪೂರ್ವಾಶ್ರಮದ ಮಡದಿಯಾದ ಯಶೋಧರೆ ತನ್ನ ಮನೆಗೆ ಆತಿಥ್ಯ ಸ್ವಿÃಕರಿಸಲು ಬುದ್ಧನನ್ನು ಆನಂದನ ಮೂಲಕ ಆಹ್ವಾನಿಸಿದಳು. ಹಿಂತಿರುಗಿ ಬಂದ ಆನಂದ ಯಶೋಧರೆಯ ಆಹ್ವಾನದ ಬಗೆಗೆ ಬುದ್ದನಿಗೆ ತಿಳಿಸಿದ. ಮನೆ ತೊರೆದು ಸನ್ಯಾಸ ಸ್ವಿÃಕರಿಸಿದವರು ತನ್ನ ಪೂರ್ವಾಶ್ರಮದ ಮಡದಿ-ಮಕ್ಕಳನ್ನು ನೋಡಲು ಹೋಗುವುದು ಆ ದಿನಗಳಲ್ಲಿ ನಿಷೇಧಿಸಲ್ಪಟ್ಟಿತ್ತು. ಬುದ್ದ ಈ ನಿಯಮವನ್ನು ಮೀರಲು ತೀರ್ಮಾನಿಸಿದ. ಯಶೋಧರೆಯ ಕೋರಿಕೆಯನ್ನು ಮನ್ನಿಸಿ ಆಕೆಯ ಅರಮನೆಗೆ ಹೊರಟ.
ಯಶೋಧರೆ ಬುದ್ದನನ್ನು ಸಡಗರದಿಂದ, ಭಕ್ತಿಯಿಂದ ಸ್ವಾಗತಿಸಿದಳು. ತನಗೂ ದೀಕ್ಷೆ ನೀಡಬೇಕೆಂದು ವಿನಂತಿಸಿಕೊಂಡಳು. ಹೆಂಗಸರಿಗೆ ದೀಕ್ಷೆ ನೀಡಿದರೆ ನನ್ನ ಧರ್ಮಕ್ಕೆ ಅರ್ಧಾಯಸ್ಸು; ಆದ್ದರಿಂದ ದೀಕ್ಷೆ ಕೊಡಲೊಲ್ಲೆ ಎಂದರು ಬುದ್ದ. ಯಶೋಧರೆ ಕೆರಳಿದ ಸಿಂಹಿಣಿಯಂತಾದಳು. ಬುದ್ಧನಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದಳು. ಪುರುಷರಿಗೆ ಮಾತ್ರ ಮನ್ನಣೆ ನೀಡುವ ಈ ನಿಮ್ಮ ಧರ್ಮದಲ್ಲಿ ಪರಿಪೂರ್ಣತೆಯಿಲ್ಲ; ಅದು ಮುಕ್ಕಾದ ಧರ್ಮ. ಈ ನಿಮ್ಮ ನಿಲುವನ್ನು ಒಪ್ಪಲಾಗುವುದಿಲ್ಲ’ ಎಂದಳು. ಬುದ್ಧ ಜಿಜ್ಞಾಸೆಗೆ ತೊಡಗಿದ. ಈ ಚರ್ಚೆಯ ಪರಿಣಾಮವಾಗಿ, ಯಶೋಧರೆಯ ಅಪೇಕ್ಷೆಯಂತೆ ಬುದ್ಧ ಆಕೆಗೆ ಧರ್ಮ ದೀಕ್ಷೆ ನೀಡಿದ.

ಬುದ್ದ ಹೆಂಗಸರಿಗೂ ಧರ್ಮ ದೀಕ್ಷೆ ನೀಡಿದ್ದರಿಂದ ಬೌದ್ಧ ಧರ್ಮಕ್ಕೆ ಅರ್ಧಾಯಸ್ಸು ಆದಂತೆ ಕಾಣುತ್ತಿಲ್ಲ. ಹಲವು ದೇಶಗಳಿಗೆ ವಿಸ್ತರಿಸಿ ಗಟ್ಟಿಯಾಗೇ ಬೇರುಬಿಟ್ಟಂತೆ ಕಾಣುತ್ತಿದೆ. ಹಾಗೆಯೇ ಮಹಿಳೆಯರಿಗೂ ಧರ್ಮ ದೀಕ್ಷೆ ಕೊಡುವ ಬುದ್ಧನ ನೀತಿ ವ್ಯಾಪಕ ಪರಿಣಾಮ ಬೀರಿದ್ದಂತೂ ನಿಜ. ಕಾಲದಿಂದ ಕಾಲಕ್ಕೆ ಈ ಸಾಮಾಜಿಕ ಜಾಗೃತಿ ವಿಸ್ತರಿಸುತ್ತಾ ಸಾಗಿದೆ. ಈಗಿನ ಕಾಲದಲ್ಲಿ ಸಿನಿಮಾ, ನಾಟಕ ಕಂಪನಿಗಳಲ್ಲಿ, ಸರ್ಕಾರದಲ್ಲಿ, ಖಾಸಗಿ ಕಂಪನಿಗಳಲ್ಲಿ, ಮಿಲ್ಲುಗಳಲ್ಲಿ, ಐಟಿ ಬಿಟಿಗಳಲ್ಲಿ, ಖಾಸಗಿ ಮತ್ತು ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಪುರುಷರು ಮತ್ತು ಸ್ತಿçÃಯರು ಒಟ್ಟಿಗೆ ಕೆಲಸ ಮಾಡುವ ಅವಕಾಶಗಳು ಹೆಚ್ಚುತ್ತಾ ಸಾಗಿವೆ. ಈ ಅವಕಾಶಗಳು ಹೆಚ್ಚಿದಂತೆಲ್ಲಾ ಸ್ತಿçÃಯರ ಮೇಲಿನ ದೌರ್ಜನ್ಯ, ಲಂಪಟತನ ಮಿತಿಮೀರಿ ಬೆಳೆದಿರುವುದಂತೂ ನಿಜ. ಇದಕ್ಕೆ ಮೊದಲು ನಮ್ಮ ದೇಶದಲ್ಲಿ ಇದೆಲ್ಲ ಇರಲಿಲ್ಲವೇ? ಇತ್ತು, ಸೀಮಿತವಾಗಿತ್ತು.

ನಮ್ಮ ಹೆಣ್ಣು ಮಕ್ಕಳು ಕಳೆದ 50 ವರ್ಷಗಳಿಂದ ಈ ಬಗೆಯ ದೌರ್ಜನ್ಯವನ್ನು ಮೌನವಾಗಿ ಅನುಭವಿಸಿಕೊಂಡು ಬಂದಿದ್ದಾರೆ. ಮುಚ್ಚುಮರೆಯಲ್ಲಿ ನಡೆಯುತ್ತಿದ್ದ ಈ ಬಗೆಯ ದೌರ್ಜನ್ಯ ಈಗ ಮಿತಿಮೀರಿದೆಯಾಗಿ, ಹೆಣ್ಣು ಮಕ್ಕಳು ಒಬ್ಬೊಬ್ಬರೇ ತಮಗಾದ ಅಪಮಾನವನ್ನು ಬಾಯ್ತೆರೆದು ಹೇಳಿಕೊಳ್ಳುತ್ತಿದ್ದಾರೆ. ಹೇಳಿಕೊಂಡರೆ ತಮ್ಮ ಭವಿಷ್ಯ ಹಾಳಾಗುವುದೆಂದು ಭಾವಿಸಿ ಬಾಯಿಯನ್ನು ಬಿಗಿಯಾಗಿ ಹಿಡಿದುಕೊಂಡು ಮೂಕವೇದನೆ ಅನುಭವಿಸುತ್ತಿರುವ ಸಹಸ್ರಾರು ಹೆಣ್ಣು ಮಕ್ಕಳು ನಮ್ಮ ನಡುವೆಯೇ ಇದ್ದಾರೆ. ಬಹಳ ಕಾಲದಿಂದ ನಡೆದು ಬಂದಿರುವ ಕಿರುಕುಳ ತಾಳಲಾದರೆ, ಆಕ್ರೊÃಶಗೊಂಡು ಕೆಂಡಾಮಂಡಲರಾದ ಅಸಹಾಯಕ ಸ್ತಿçÃಯರು ಈಗ ಒಬ್ಬೊಬ್ಬರಾಗಿ ಭುಗಿಲೆದ್ದು ತಮ್ಮ ಆಕ್ರೊÃಶ ವ್ಯಕ್ತ ಪಡಿಸುತ್ತಿದ್ದಾರೆ. ಈ ಪ್ರತಿಕ್ರಿಯೆ ಸಹಜವಾದುದು. ನೊಂದ ಹೆಣ್ಣುಮಕ್ಕಳ ಪರವಾಗಿ ದನಿಯೆತ್ತುವುದು ಸಮಾಜದ ಸ್ವಾಸ್ಥö್ಯ ಬಯಸುವ ಎಲ್ಲರ ಕರ್ತವ್ಯ.
ಈ ಸಂದರ್ಭದಲ್ಲಿ ಸರ್ಕಾರಗಳು, ನ್ಯಾಯಾಲಯಗಳು ಕಾನೂನಿನ ಮಿತಿಯಲ್ಲಿ ತಾನೇನು ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ತೆಗೆದುಕೊಂಡಿವೆ ಎಂಬುದು ನಿಜ. ಆದರೆ ಈ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಇದಿಷ್ಟೆÃ ಸಾಕೆ? ಖಂಡಿತ ಸಾಲದು.
ಈ ಸಾಮಾಜಿಕ ಪಿಡುಗಿಗೆ ನಮ್ಮ ಸಮಾಜದ ಚಾರಿತ್ರö್ಯದ ಕೊರತೆ ಪ್ರಮುಖ ಕಾರಣ. ಚಾರಿತ್ರö್ಯವಿಲ್ಲದ ಜನ ಮತ್ತು ಚಾರಿತ್ರö್ಯವಿಲ್ಲದ ದೇಶಕ್ಕೆ ಭವಿಷ್ಯವಿಲ್ಲ. ಆದ್ದರಿಂದ ವಿದ್ಯೆ ಕಲಿಸುವಾಗ ಚಾರಿತ್ರö್ಯ ವೃದ್ಧಿಯ ಶಿಕ್ಷಣವನ್ನು ಜೊತೆಜೊತೆಗೆ ನೀಡಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಶಿಕ್ಷಣವನ್ನು ನಾವು ಕೊಡುತ್ತಿಲ್ಲ. ಹೀಗಾಗಿ ಅನೈತಿಕತೆ, ದ್ವೆÃಷ ಭಾವನೆ, ಕಾಮಾತುರತೆ, ದುರಾಸೆ, ಅಹಂಕಾರ, ಸೇಡಿನ ಮನೋಭಾವ ಇವೆಲ್ಲವೂ ಏಕಕಾಲದಲ್ಲಿ ನಮ್ಮ ಸಮಾಜವನ್ನು ಕಾಡುತ್ತಿವೆ.
* ಪ್ರಾಥಮಿಕ ಶಾಲೆಗಳಲ್ಲಿ ಕೋ-ಎಜುಕೇಷನ್ ಇರಬೇಕು, ಇಲ್ಲಿ ಶಿಕ್ಷಕರು ಎಲ್ಲರೂ ಮಹಿಳೆಯರೇ ಇದ್ದರೆ ಚೆನ್ನ. ಹಾಗೆ ಅಲ್ಲಿಂದ ಮುಂದಕ್ಕೆ ತಕ್ಷಣದ ಕ್ರಮವಾಗಿ, ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೆÃಕ ಶಾಲೆಗಳನ್ನು ಮಾಡುವುದು ಒಳ್ಳೆಯದು. ಹೆಣ್ಣುಮಕ್ಕಳ ಶಾಲೆಗಳಲ್ಲಿ ಪೂರ್ತಿ ಮಹಿಳಾ ಶಿಕ್ಷಕಿಯರೇ ಇರುವಂತೆಯೂ ಹಾಗೂ ಗಂಡುಮಕ್ಕಳ ಶಾಲೆಗಳಲ್ಲಿ ಪುರುಷ ಶಿಕ್ಷಕರು ಇರುವಂತೆಯೂ ವ್ಯವಸ್ಥೆ ಮಾಡಬೇಕು. ಇದು ಶಾಶ್ವತ ಪರಿಹಾರವಲ್ಲವಾದರೂ ಬಿಗಡಾಯಿಸಿರುವ ಇಂದಿನ ಪರಿಸ್ಥಿತಿಗೆ ಒಂದು ತಾತ್ಕಾಲಿಕ ಉಪಕ್ರಮ ಆಗಬಹುದು.
* ಹೆಂಗಸರು ಗಂಡಸರು ಕೂಡಿ ಕೆಲಸ ಮಾಡುವ ಎಲ್ಲೆಡೆಯೂ ಹೆಣ್ಣು ಮಕ್ಕಳ ವಿಜಿಲೆನ್ಸ್ ಕಮಿಟಿ ರಚಿಸಬೇಕು. ಈ ಸಲಹಾ ಸಮಿತಿ ನೀಡುವ ವರದಿಯನ್ನು ಪರಿಶೀಲಿಸಿ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳಲು, ಜೊತೆಜೊತೆಗೇ ಒಂದು ನಿಷ್ಪಕ್ಷವಾದ ಉನ್ನತ ಸಮಿತಿಯನ್ನು ರಚಿಸಬೇಕು. ತಪ್ಪಿತಸ್ಥರು ದೊಡ್ಡ ಅಧಿಕಾರಿಯಾಗಿರಲಿ, ಸಾಮಾನ್ಯ ನೌಕರರಾಗಿರಲಿ ಎಲ್ಲರಿಗೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅಪರಾಧ ಎಸಗಿದವರನ್ನು ಕೆಲಸದಿಂದ ಕಿತ್ತೆಸೆಯಬೇಕು. ಹೀಗೆ ಮಾಡುವುದರಿಂದ ಬಹುಮಟ್ಟಿಗೆ ಮಹಿಳೆಯರ ಮೇಲಿನ ದೌರ್ಜನ್ಯ ಇಳಿಮುಖವಾಗುವುದೆಂದು ನಾನು ಭಾವಿಸುತ್ತೆÃನೆ.
* ಮುಂದಿನ ಪೀಳಿಗೆಯಲ್ಲಾದರೂ ಈ ಪಿಡುಗು ಸಮಾಜದಿಂದ ದೂರವಾಗಲಿ ಎಂಬ ಧ್ಯೆÃಯ ನಮ್ಮದಾದರೆ, ಶಾಲೆಯ ಮಕ್ಕಳಿಗೆ ಅರಿಷಡ್ವರ್ಗಗಳನ್ನು ದೂರ ಮಾಡುವ ಶಿಕ್ಷಣ ನೀಡಬೇಕು. ಕಾಮ, ಕ್ರೊÃಧ, ಮೋಹ, ಲೋಭ, ಮದ, ಮತ್ಸರಗಳು ಅರಿಷಡ್ವರ್ಗಗಳು. ಇವು ನಮ್ಮ ಅರಿಗಳು, ಶತ್ರುಗಳು. ಈ ಅರಿಷಡ್ವರ್ಗಗಳನ್ನು ಗೆದ್ದರೆ ಮನುಷ್ಯ ಸ್ವಚ್ಛಮನಸ್ಸಿನವನಾಗುತ್ತಾನೆ.
ಈ ಅರಿಷಡ್ವರ್ಗಗಳಲ್ಲಿ ಈಗ ನಮ್ಮ ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಶತ್ರುವೆಂದರೆ ಕಾಮ. ಕಾಮವನ್ನು ಗೆಲ್ಲಬೇಕಾದರೆ ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳುವುದನ್ನು ಕಲಿಸಬೇಕು. ಕಾಮ ಎನ್ನುವ ಶತ್ರು ಕಾಡುತ್ತಾ ಬಂದಾಗ ನಮ್ಮ ಮನಸ್ಸನ್ನು ನಿಗ್ರಹಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಆಮೆ ತನ್ನ ಶತ್ರುವನ್ನು ಕಂಡೊಡನೆ ಹೇಗೆ ತನ್ನ ಶರೀರವನ್ನು ತನ್ನ ಚಿಪ್ಪಿನೊಳಕ್ಕೆ ಎಳೆದುಕೊಳ್ಳುತ್ತದೆಯೋ ಹಾಗೆ ಕೆಟ್ಟ ವಿಷಯಗಳು ಮನಸ್ಸನ್ನು ಆಕ್ರಮಿಸಿದಾಗ ನಾವು ನಮ್ಮ ಮನಸ್ಸನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡು, ಆ ಕೆಟ್ಟ ವಿಚಾರಗಳು ನಮ್ಮನ್ನು ಅಧೋಗತಿಗಿಳಿಸುವುದನ್ನು ತಡೆಗಟ್ಟಬಹುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...