Homeಅಂಕಣಗಳುಕೊರೊನಾ ಕಲಿಸಿಕೊಟ್ಟ ಇನ್ನೂ ಒಂದ ಪಾಠ ಏನಪಾ ಅಂದರಾ......

ಕೊರೊನಾ ಕಲಿಸಿಕೊಟ್ಟ ಇನ್ನೂ ಒಂದ ಪಾಠ ಏನಪಾ ಅಂದರಾ……

- Advertisement -
- Advertisement -

ಕೇಂದ್ರದ ಕಾನೂನುಗಳು ಬೆಂಗಳೂರಿಗೆ ಅರ್ಥ ಆಗಲಿಲ್ಲ. ರಾಜ್ಯದ ಕಾನೂನುಗಳು ಜಿಲ್ಲೆ, ತಾಲೂಕಿನಾಗ ಜಾರಿ ಆಗಲಿಲ್ಲ. ಮೈಸೂರು, ಬೆಳಾಗಾವಿ, ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಲ್ಲಾ ಶಂಕಿತರನ್ನ ಒಂದೇ ಹಾಲಿನಲ್ಲಿ ಕೂಡಿ ಇಟ್ಟದ್ದಕ್ಕ ಪಾಸಿಟಿವ್ ಇದ್ದವರಿಂದ ಅನೇಕ ನೆಗಾಟಿವ್ ಇದ್ದವರಿಗೆ ಕೋರೋನಾ ಬಂತು.

ಈ ಕೋರೋನಾ ಗದ್ದಲದಾಗ ಬರ್ತಾ ಇರೋ ಸುದ್ದಿಗಳ ಮಹಾಪೂರದಾಗ ಒಂದು ಭಾರಿ ಮಜಾ ಸುದ್ದಿ ಬಂದಿದ್ದು ಏನಪಾ ಅಂದ್ರ ಯಾವ ದೇಶದಾಗ ವಿಕೇಂದ್ರೀಕರಣ ಅದನೋ ಆ ದೇಶದಾಗ ಕೋರೋನಾ ಸರಿಯಾಗಿ ನಿಯಂತ್ರಣಕ್ಕ ಬಂದದ. ಅದು ಇರಲಾರದ ಕಡೆ ಬಹಳ ಸಮಸ್ಯೆ ಆಗೇದ.

ಇದು ಒಂದು ರೀತಿಯ ಚೇತೋಹಾರಿ ಸುದ್ದಿ. ಯಾಕ ಅಂದ್ರ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ ಅವರು ಕೋರೋನಾಗೆ ಸಂಪೂರ್ಣ ಚಿಕಿತ್ಸೆ ಸಾಧ್ಯವಿಲ್ಲ. ಅದರ ಗುಣಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು ಅಷ್ಟೇ ಅಂತ ಹೇಳಿದಾರು. ಆದರ ಅಂತರಾಷ್ಟ್ರೀಯ ಅಧ್ಯಯನ ಮಾಡಿದ ಪರಿಣಿತರು ಇದಕ್ಕ ಸಂಪೂರ್ಣ ಉಲ್ಟಾ ಅಭಿಪ್ರಾಯ ಕೊಟ್ಟಾರು.

`ಕೋರೋನಾ ಅನ್ನುವುದು ನಮ್ಮ ಸರ್ಕಾರಿ ವ್ಯವಸ್ಥೆಯ ಶವ ಪರೀಕ್ಷೆ ಮಾಡಿದೆ. ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದೆ’ ಅಂತ ಪಿ.ಸಾಯಿನಾಥ್ ಹೇಳಿದಾರು.

ಹಂಗ ಅಂದ್ರ ಈ ಹಿನ್ನೆಲೆಯೊಳಗ ವಿಕೇಂದ್ರೀಕರಣ ಅಂದ್ರ ಏನು? ಮೊದಲನೆದಾಗಿ, ಅದು ಅಲ್ಲಲ್ಲಿಗೆ ಸಂಬಂಧಪಟ್ಟ ವಿಷಯಗಳಿಗೆ ಅಲ್ಲಲ್ಲೇ ನಿರ್ಧಾರ ತೊಗೋಳೋದು.

ಎರಡನೇಯದು, ಹಳ್ಳಿ, ನಗರಗಳ ಮೇಲೆ ತಾಲೂಕು, ಜಿಲ್ಲೆ, ರಾಜ್ಯ, ಕೇಂದ್ರ ಸರ್ಕಾರಗಳು ರಾಜ್ಯಭಾರ ಮಾಡದೇ, ನಿಗರಾಣಿ ಮಾಡದೇ, ತಮ್ಮ ತಮ್ಮ ಕೆಲಸ ಮಾಡಬೇಕು. ಉದಾಹರಣೆಗೆ ನೋಡೋಣ- ಒಂದು ಹಳ್ಳಿಯೊಳಗ ಒಂದು ಸಂಡಾಸು ಕಟ್ಟಬೇಕು ಅಂದರ ಅದಕ್ಕ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ, ಬೆಂಗಳೂರಿನ ಐಎಏಸ್ಸು, ದೆಹಲಿಯ ಐಎಎಸ್ಸು, ಎಲ್ಲರನ್ನೂ ಪರವಾನಗಿ ಕೇಳಬೇಕು. ಅವರು ಹೂಂ ಅಂದ್ರ ಕಟ್ಟಬೇಕು, ಇಲ್ಲಾಂದರ ಸುಮ್ಮನ ಚರಿಗಿ ತೊಗೊಂಡು ಹೋಲದ ಕಡೆ ಹೋಗಬೇಕು.

ಆದರ ನಿಮ್ಮದಷ್ಟು ನೀವು ನೋಡಿಕೊಳ್ರಿ ಅಂತ ದೆಹಲಿ ಸುಲ್ತಾನರು, ಬೆಂಗಳೂರಿನ ದೊಣ್ಣೆ ನಾಯಕರು ನಮ್ಮನ್ನು ಬಿಟ್ಟರ, ದಿನಾ ಸಂಜೀಕೆ ಹಾವು ಚೋಳು, ಹುಳಾ ಹುಪಟಿ ಹೆದರಿಕೆ ಇರಲಾರದೆ ನಾವು ನಮ್ಮ ಕೆಲಸ ಮುಗಸಬಹುದು.

ಇದಕ್ಕ ಒಂದು ಇಲ್ಲಿಯ ಉದಾಹರಣೆ, ಒಂದು ಹೊರಗಿನ ಉದಾಹರಣೆ ನೋಡೋಣು. ಕೇರಳದಾಗ ಸಣ್ಣ ಹಳ್ಳಿಗಳು ಸಹಿತ ಕೊರೋನಾದ ವಿರುದ್ಧದ ಹೋರಾಟವನ್ನು ಗಂಭೀರವಾಗಿ ತೊಗೊಂಡವು. ಪ್ರತಿ ಹಳ್ಳಿಯ ಪ್ರತಿ ಮನಿಗೆ ಒಬ್ಬ ಡಾಕ್ಟರು ಭೇಟಿ ಕೊಟ್ಟಾರ ಅಂತ ಅಲ್ಲಿಯ ಆರೋಗ್ಯ ಸಚಿವರು ಹೇಳಿಕೆ ಕೊಟ್ಟಾರ.

ಆದರ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯದಾಗ ಜನ ಗಂಭೀರ ರೋಗ ಬಂದು ಸತ್ತಾಗ ನೋಡಲಿಕ್ಕೆ ಒಬ್ಬ ಡಾಕ್ಟರ ಅಲ್ಲಾ, ಒಬ್ಬ ಕಂಪೌಂಡರು ಸಿಗಲಿಲ್ಲ. `ಕೋರೋನಾ ಅಂದ್ರ ಅಂಥಾದೇನೂ ಅಲ್ಲರಿಪಾ, ಅದರಿಂದಾ ಚೇತರಿಸಿಕೊಳ್ಳಬಹುದು’ ಅಂತ ಹೇಳಬೇಕಾದವರು, ಐದೂವರೆ ವರ್ಷ ಎಂಬಿಬಿಎಸ್ಸು ಓದಿದವರು ಹೇಳಬೇಕಾಗಿತ್ತು. ಆದರ ಅವರು ಕನಿಷ್ಟ ಅದನ್ನೂ ಮಾಡದೇ ಹೋದರು. ಅವರಿಗೆ ತಮ್ಮ ಕ್ಲಿನಿಕ್ಕು ಕಾಲಿ ಹೊಡದು ಅದರ ಬಾಡಿಗೆ ಕೊಡೋದು ಮೀ ಮ್ಯಾಲೆ ಬಂದರೂ ಅವರು ತಲಿ ಕೆಡಿಸಿಕೊಳ್ಳದೇ ಕೂತರು. ನಮ್ಮ ಸರ್ಕಾರದವರು ಆ ಡಾಕ್ಟರುಗಳಿಗೆ ಒಂದು ನೋಟೀಸು ಸಹಿತ ಕೊಡಲಿಲ್ಲ.

ಕೇಂದ್ರದ ಕಾನೂನುಗಳು ಬೆಂಗಳೂರಿಗೆ ಅರ್ಥ ಆಗಲಿಲ್ಲ. ರಾಜ್ಯದ ಕಾನೂನುಗಳು ಜಿಲ್ಲೆ, ತಾಲೂಕಿನಾಗ ಜಾರಿ ಆಗಲಿಲ್ಲ. ಮೈಸೂರು, ಬೆಳಾಗಾವಿ, ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಲ್ಲಾ ಶಂಕಿತರನ್ನ ಒಂದೇ ಹಾಲಿನಲ್ಲಿ ಕೂಡಿ ಇಟ್ಟದ್ದಕ್ಕ ಪಾಸಿಟಿವ್ ಇದ್ದವರಿಂದ ಅನೇಕ ನೆಗಾಟಿವ್ ಇದ್ದವರಿಗೆ ಕೋರೋನಾ ಬಂತು. ಅದು ಪೇಪರಿನಾಗ ಬಂದ ಮೇಲೆ ರಾಜ್ಯದ ಹಿರಿಯ ಅಧಿಕಾರಿಗಳ ತಲಿಯೊಳಗ ಟ್ಯೂಬು ಲೈಟು ಹತ್ತಿ ಅವರನ್ನ ಬೇರೆ ಬೇರೆ ರೂಮಿನ್ಯಾಗ ಇಡಲಿಕ್ಕೆ ಹತ್ತಿದರು.

ಅಂತರರಾಜ್ಯ ಓಡಾತದ್ದು ಒಂದು ಜಿಲ್ಲೆ ಯೊಳಗ ಒಂದು ಕಾನೂನು. ಕೆಲವರು ಬಿಡತಾರ, ಕೆಲವರು ಇಲ್ಲ. ಮೊದಲಿಗೆ ನಮ್ಮ ಊರಾಗ ಕರೆಂಟು ಹೋದರ ಕೇಈಬಿಯವರು ಇದು ನಮ್ಮ ಕಡೆ ಇಲ್ಲಾರೀ. ಜೋಗ ಜಲಪಾತದಾಗನ ಹೋಗೇತಿ, ಅಂತಿದ್ದರು. ಹಂಗ ಈಗ ಯಾವುದರ ಗ್ರಾಮ ಪಂಚಾಯಿತಿ, ನಗರಸಭೆ ಒಳಗ ಎನಾರ ಕೆಲಸ ಕೇಳಾಕ ಹೋದರ ಆ ಒಂದು ಕಾಗದ ಪತ್ರ, ದಾಖಲಾತಿ, ಧನಸಹಾಯ ಎಲ್ಲಾ ಬೆಂಗಳೂರಿನಿಂದ ಬರಬೇಕು ದೇಹಲಿಯಿಂದ ಬರಬೇಕು ಅಂತ ಹೇಳಿ ಕೈ ತೊಳಕೋತಾರ.

ಇದು ಬದಲು ಆಗಬೇಕು. ಇದಕ್ಕ ಒಂದು ಉದಾಹರಣೆ ನೋಡೋಣ. ರಾಜ್ಯದಾಗ ಸುಮಾರು 300 ಐಎಎಸ್ಸು, 350 ಐಪಿಎಸ್ಸು ಅಧಿಕಾರಿಗಳು ಅದಾರ. ಅದರಾಗ ಸುಮಾರು 60 ಜನ ಐಎಎಸ್ಸು ಹಾಗೂ 70 ಜನ ಐಪಿಎಸ್ಸು ಮಾತ್ರ ಬೆಂಗಳೂರು ಬಿಟ್ಟು ಹೊರಗ ಇದ್ದಾರ. ಒಬ್ಬ ಅಧಿಕಾರಿ ಸರಾಸರಿ 35 ವರ್ಷ ನೌಕರಿ ಮಾಡತಾರ. ಅದರಾಗ ಬರೇ 10 ವರ್ಷ ಅಷ್ಟನ ಜಿಲ್ಲೆಯೊಳಗ ಕೆಲಸ ಮಾಡತಾರ. ಉಳಿದ 25 ವರ್ಷ ಬೆಂಗಳೂರಿನಯಾಗ ಠಿಕಾಣಿ ಹೊಡಕೊಂಡು ಕೂತಿರತಾರ.

ಇದ್ದದ್ದರಾಗ ಪೊಲೀಸು ಮತ್ತು ಅರಣ್ಯ ಅಧಿಕಾರಿಗಳು ಬೇಕು. ಅವರಿಗೆ ಸುಮಾರು ಹಿರೇತನ ಬಂದ ನಂತರನೂ ಜಿಲ್ಲೆಯೊಳಗ ಕೆಲಸ ಮಾಡಲಿಕ್ಕೆ ಅವಕಾಶ ಐತಿ. ಆಡಳಿತ ಸೇವೆ ಅಧಿಕಾರಿಗಳಿಗೆ ಮಾತ್ರ ಆ ಭಾಗ್ಯ ಇಲ್ಲ. ಅವರು ಒಮ್ಮೆ ವಿಧಾನಸೌಧ ಅನ್ನೋ ಜೇನುಗೂಡಿನೊಳಗ ಹೋಗಿ ಕೂತುಕೊಂಡರು ಅಂದ್ರ ಅವರು ಹೂವಿನ ತೋಟದಾಗ ಅಲಿಯೋ ದಿಲ್ಲಾ, ಹೊರಗ ಹೋಗಿ ಮಕರಂದ ಮೂಸಂಗಿಲ್ಲ. ಬೇಡವಾದ ಮನಸ್ಸಿನಿಂದ ಜಿಲ್ಲಾಕ್ಕ ಉಸ್ತುವಾರಿ ಮಾಡಲಿಕ್ಕೆ ಬರ್ತಾರ. ಅದೂ ಬೆಂಗಳೂರಿನಿಂದ ಬೆಳಿಗ್ಗೆ ತಿಂಡಿ ಮಾಡಿ ಹೊರಟು ಮಧ್ಯಾನ ಐ.ಬಿ. ಒಳಗ ಊಟ ಮಾಡಿ ಸಂಜೀ ಕಾಫಿಗೆ ಮತ್ತ ಡಾಲರ್ ಕಾಲನಿಯ ಮನಿಗೆ ವಾಪಸ್ ಹೋಗೋ ಹಂಗ ತಯಾರಿ ಮಾಡಿಕೊಂಡು ಬಂದಿರತಾರ.

ಯಾವ ದೇಶದ ಶೇಕಡಾ 70 ಜನ ಗ್ರಾಮೀಣ ಪ್ರದೇಶದಾಗ ಇರತಾರೋ, ಆ ದೇಶದಾಗಿನ ಕೇವಲ ಶೇಕಡಾ 20 ಅಧಿಕಾರಿಗಳು ತಮ್ಮ ಸೇವೆಯ ಅವಧಿಯ 25 ಶೇಕಡಾ ಕಾಲವನ್ನು ಮಾತ್ರ ರಾಜಧಾನಿಯಿಂದ ಹೊರಗೆ ಕಳೀತಾರೆ.

ಇದು ಎಲ್ಲರಿಗೂ ಅರ್ಥ ಆದರ ಒಳ್ಳೆಯದು.

ಇನ್ನ ನಮ್ಮನ್ನು ಆಳುವವರು ಬೆಂಗಳೂರಿನ/ದೆಹಲಿಯ ಒಂದು ಮೂಲಿಯೊಳಗ ಕೂತಗೊಂಡು, ಇಡೀ ರಾಜ್ಯಕ್ಕ, ದೇಶಕ್ಕ, ಒಂದೇ ಕಾನೂನು ಅಂತ ಮಾಡೋದು, ಭಾರಿ ಭಯಂಕರ ಪರಿಣಾಮ ಬೀರಬಹುದು. ಅವರು ಪ್ರಾದೇಶಿಕ ವ್ಯತ್ಯಾಸಗಳನ್ನ ಮನಸಿನಲ್ಲಿ ಇಟಗೋಬೇಕು. ಅರವತ್ತರ ದಶಕದಾಗ ಹಸಿವಿನ ಮಾರಿಗೆ ಮಹಾ ಔಷಧ ಅಂತ ಹೇಳಿ ಇಡೀ ದೇಶಕ್ಕ ಅಕ್ಕಿ, ಗೋಧಿ, ತಿನಸಲಿಕ್ಕೆ ಹತ್ತಿದರು, ಆಗಿನ ನಮ್ಮ ಆಳುವವರು. ಅದರ ಅವರಿಗೆ ಉತ್ತರ ಕರ್ನಾಟಕದವರು ಜೋಳ ತಿನ್ನೋದು, ದಕ್ಷಿಣದವರು ರಾಗಿ, ಕರಾವಳಿಯವರು ಕೆಂಪು ಅಕ್ಕಿ ತಿನ್ನೋದು ಕಲ್ಪನಾ ಇರಲಿಲ್ಲ. ಇದ್ದರೂ ಒಂದು ದೇಶ, ಒಂದು ನೀತಿ ಅನ್ನೋ ಗದ್ದಲದಾಗ ಅವರಿಗೆ ಇನ್ನೂ ಮಾಡ್ಲಿಕ್ಕೆ ಆಗಲಿಲ್ಲ.

ಅಂದಿನ ಗಡಿಬಿಡಿಯ ನಿರ್ಧಾರ ಇಂದಿಗೂ ಮುಂದುವರೆದಿದೆ. ಕೋಟ್ಯಾಂತರ ಜನರ ಆಹಾರ ಪದ್ಧತಿ ಬದಲು ಆದ ಮೇಲೆ ಸಹಿತ ಸರ್ಕಾರಗಳಿಗೆ ಇಂತಹ ಮೂಲಭೂತ ವಿಷಯಗಳ ಬದಲಾವಣೆ ಸಾಧ್ಯ ಆಗಿಲ್ಲ. ಇದರ ಬದಲಿಗೆ ರಾಜ್ಯದ ಬೇರೆ ಬೇರೆ ಪ್ರದೇಶಗಳಿಗೆ, ಜಿಲ್ಲೆಗಳಿಗೆ ಬೇರೆ ಬೇರೆ ನೀತಿಗಳು ಲಾಗೂ ಆಗಬಹುದು, ಆದರ ತಪ್ಪು ಏನಿಲ್ಲ, ಅದೇನು ದೇಶದ್ರೋಹ ಅಲ್ಲ ಅಂತ ಅವರ ಚಿಂತನೆ ಇಲ್ಲ.

ಈಗಂತೂ ಕಾಲ ಬದಲಾಗಿ ಹೋಗೇದ. ಕೇಂದ್ರ ಆಹಾರ ಮಂತ್ರಿ ರಾಮ್ ವಿಲಾಸ್ ಪಾಸ್ವಾನ್ ಅವರು ಒಂದು ದೇಶ ಒಂದು ಪಡಿತರ ಚೀಟಿ ಅಂತ ಘೋಷಣೆ ಮಾಡಿದಾರ. ಇನ್ನ ಇದರಿಂದ ಏನೇನು ಘಟಿಸಲಿಕ್ಕೆ ಅದನೋ ಏನೋ.

ಪರಿಸರ ರಕ್ಷಣೆಯಂತಹ ಅನೇಕ ವಿಷಯಗಳಲ್ಲಿ ಒಳ್ಳೆ ಪಾಠ ಕಳಿಸಿಕೊಟ್ಟ ಕೋರೋನಾ ಆಡಳಿತದ ವಿಷಯಕ್ಕೆ ನಮಗ ದೋಖಾ ಮಾಡಿತು. ಯಾವ ಜಿಲ್ಲೆಯೊಳಗ ಎಷ್ಟು ಕೇಸು ಅದಾವು ಅನ್ನೋ ಸಣ್ಣ ವಿಷಯದಿಂದ ಹಿಡದು, ದುಡ್ಡು, ಸೂಕ್ತಕ್ರಮದ ಸೂಚಿ, ವಲಸಿಗರ ಓಡಾಟ, ಮುಂತಾದ ಗಂಭೀರ ವಿಷಯಗಳಿನ್ನೂ ಸಹಿತ ಕೇಂದ್ರ ರಾಜ್ಯಗಳಿಗೆ ತಾಕೀತು ಮಾಡಿತು.

ಇದೇ ಸರಿಯಾದ ದಾರಿ ಅಂತ ಜನರಿಗೆ ಗಿಣಿಮಾತು ಹೇಳಿಕೊಟ್ಟಿತು. ಇದನ್ನು ವಿರೋಧಿಸೋದು – ಇತರ ವಿಷಯಗಳನ್ನು ವಿರೋಧಿಸಿದಂತೆ – ರಾಷ್ಟ್ರದ್ರೋಹದ ಮಾದರಿ ಅಂತ ಅನ್ನುವಷ್ಟು ಜನರ ತಲಿಯೊಳಗ ಕೂಡಿಸಿಬಿಟ್ಟಿತು. ವಿಕೇಂದ್ರೀಕರಣಕ್ಕ ಸಂಬಂಧ ಪಟ್ಟಂತೆ, ನಾವು ಯಾವ ದಿಕ್ಕಿನಾಗ ಹೋಗಬೇಕಾಗಿತ್ತೋ ಅದರ ಸಂಪೂರ್ಣ ವಿರುದ್ಧ ದಿಕ್ಕಿನಾಗ ಹೋಗಲಿಕ್ಕ ಹತ್ತೇವಿ. ಇಂತಹ ಕಾಲದಾಗ, ರಾಜನ ಮೈ ಮೇಲೆ ಬಟ್ಟೆಗಳು ಇಲ್ಲ ಅಂತ ಹೇಳೋರು ಯಾರು, ಮನೋಲ್ಲಾಸಿನಿ?


ಇದನ್ನು ಓದಿ: ಚೀನಾದ 1.7 ಲಕ್ಷ ಖಾತೆಗಳನ್ನು ಸ್ಥಗಿತಗೊಳಿಸಿದ ಟ್ವಿಟ್ಟರ್‌: ಕಾರಣವೇನು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...