Homeಸಾಮಾಜಿಕಭಾರತೀಯ ಪುರಾತನ ವೈದ್ಯಶಾಸ್ತ್ರದಲ್ಲಿ ಮಾಂಸದ ಔಷಧಿಗಳು

ಭಾರತೀಯ ಪುರಾತನ ವೈದ್ಯಶಾಸ್ತ್ರದಲ್ಲಿ ಮಾಂಸದ ಔಷಧಿಗಳು

- Advertisement -
- Advertisement -

ಪರಿಮಳಾ ವಾರಿಯರ್ |

ಬಹುಸಂಖ್ಯಾತ ಮಾಂಸಾಹಾರಿಗಳ ದೇಶವಾಗಿರುವ ಭಾರತದಲ್ಲಿ ಮಾಂಸಾಹಾರವನ್ನು ಎರಡನೇ ದರ್ಜೆಯ ಆಹಾರಕ್ರಮವಾಗಿ ನೋಡುವ ರೋಗಪೀಡಿತ ಮನಸ್ಥಿತಿಯನ್ನು ನಿರ್ಮಿಸಲಾಗಿದೆ. ಭಾರತದ ಧಾರ್ಮಿಕತೆ, ನಂಬಿಕೆ, ಸಂಪ್ರದಾಯಗಳನ್ನು ಸಸ್ಯಾಹಾರದ ಮೂಲಕವೇ ಪ್ರಸ್ತುತಪಡಿಸುವ ಕಾಯಿಲೆ ಇವತ್ತು ನಿನ್ನೆಯದಲ್ಲ. ಸಸ್ಯಾಹಾರವೇ ಶ್ರೇಷ್ಠ, ಮಾಂಸಾಹಾರ ಕನಿಷ್ಠ ಎಂಬ ಸುಳ್ಳುಸಿದ್ಧಾಂತವನ್ನು ಜನಗಳ ಮೇಲೆ ಹೇರಿದ ಪರಿಣಾಮವಾಗಿ ಧಾರ್ಮಿಕ ಆಚರಣೆಗಳಲ್ಲಿ ಸಸ್ಯಾಹಾರದ ಶಿಫಾರಸು ಮತ್ತು ಕೆಲವೊಂದು ರಾಷ್ಟ್ರೀಯ ದಿನಾಚರಣೆಗಳು ಮತ್ತು ಹಬ್ಬಗಳಲ್ಲಿ ಮಾಂಸಾಹಾರವನ್ನು ಕಾನೂನಾತ್ಮಕ ವಾಗಿಯೇ ನಿಷೇಧಿಸುವ ಮಟ್ಟಕ್ಕೂ ಸಸ್ಯಾಹಾರದ ವಕಾಲತ್ತುದಾರರು ತಲುಪಿರುವುದು ಈ ದೇಶದ ದುರಂತ.

ದೇಶದ ಮುಕ್ಕಾಲುಪಾಲು ಜನಸಂಖ್ಯೆ ಹೊಂದಿರುವ ದಲಿತ, ಶೂದ್ರ ಮತ್ತು ಬುಡಕಟ್ಟು ವಾಸಿಗಳ ಸಂಪ್ರದಾಯಗಳು ಮಾಂಸಾಹಾರವನ್ನೇ ಅನುಸರಿಸುತ್ತ ಬಂದಿರುವುದು ಮೂಲನಿವಾಸಿ ಭಾರತೀಯರ ಸಂಸ್ಕೃತಿ. ಇದನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಭಾರತದ ಮೂಲಭೂತವಾದಿ ಸನಾತನಿಗಳು ಮೂಲತಃ ಮಾಂಸಾಹಾರಿಗಳ ದೇಶವಾಗಿದ್ದ ಭಾರತದಲ್ಲಿ ಸಸ್ಯಾಹಾರವೇ ಶ್ರೇಷ್ಠ ಎಂದು ಬಡಬಡಿಸುವ ಆತುರದಲ್ಲಿ ಈ ಸನಾತನ ಪರಂಪರೆಯವರು ತಮ್ಮ ಮೂಲ ಇತಿಹಾಸದಲ್ಲೇ ಮಾಂಸಾಹಾರ ಶ್ರೇಷ್ಠವಾಗಿದ್ದುದನ್ನು ಮುಚ್ಚಿಡುತ್ತಾರೆ. ಅವುಗಳನ್ನು ಒಂದೊಂದಾಗಿ ನಾವು ನೋಡಿದರೆ ಈ ಸಸ್ಯಾಹಾರಿ ವಕಾಲತ್ತುದಾರರ ಬಣ್ಣ ಬಯಲಾಗುತ್ತದೆ.

ಪ್ರಾಚೀನ ಭಾರತದ ಔಷಧಶಾಸ್ತ್ರದ ಪಿತಾಮಹನೆಂದು ಕರೆಯಲಾಗುವ ‘ಆಚಾರ್ಯ ಚರಕ’ನು ಬರೆದಿರುವ ಚರಕಸಂಹಿತೆ ವೈದ್ಯಗ್ರಂಥವು ಮನುಷ್ಯನನ್ನು ಕಾಡುವ ನಾನಾ ಬಗೆಯ ರೋಗರುಜಿನಗಳಿಗೆ ಮಾಂಸಾಧಾರಿತ ಔಷಧಿಗಳನ್ನು ಶಿಫಾರಸ್ಸು ಮಾಡುತ್ತದೆ. ಯಾವುದೇ ಬಗೆಯ ಪ್ರಾಣಿಯ ಮಾಂಸವನ್ನು ನೀರಿನಲ್ಲಿ ಕುದಿಸಿ ತಯಾರಿಸುವ ಮಾಂಸರಸ (ಸೂಪ್) ಅನ್ನು ಚರಕನು ಸರ್ವರೋಗ ಪ್ರಸ್ಥಾನಂ (ಎಲ್ಲ ಬಗೆಯ ರೋಗಗಳಿಗೂ ಉತ್ತಮ ಔಷಧಿ) ಎಂದು ಬಣ್ಣಿಸಿದ್ದ್ತಾನೆ. ಮುಂದುವರೆದು ಹೇಳುವ ಚರಕನು ಸೂತ್ರಸ್ಥಾನ ಅಧ್ಯಾಯದಲ್ಲಿ ಹಲವು ಬಗೆಯ ಪ್ರಾಣಿಪಕ್ಷಿಗಳ ಮಾಂಸವು ಹಲವು ಬಗೆಯ ಕಾಯಿಲೆಗಳನ್ನು ತಡೆಯುತ್ತದೆಂದು ಹೇಳುತ್ತಾನೆ. ಅದರಂತೆ ಕಣ್ಣಿನ ಆರೋಗ್ಯ, ಕಿವಿಯ ಆರೋಗ್ಯಕ್ಕಾಗಿ ನವಿಲಿನ ಮಾಂಸವನ್ನೂ, ಧ್ವನಿ ಉತ್ತಮತೆ ಮತ್ತು ದೇಹದ ಶಕ್ತಿವರ್ಧನೆಗಾಗಿ ಬಾತುಕೋಳಿಯ ಮಾಂಸವನ್ನೂ, ಪಿತ್ಥ, ಕಫ ನಿವಾರಣೆಗಾಗಿ ಮತ್ತು ರಕ್ತಶುದ್ಧಿಗಾಗಿ ಗೌಜುಗನಹಕ್ಕಿಯ ಮಾಂಸವನ್ನೂ, ಕೆಮ್ಮಿನ ಉಪಶಮನಕ್ಕಾಗಿ ಗಿಣಿಮಾಂಸವನ್ನೂ, ಪುರುಷರ ವೀರ್ಯವೃದ್ಧಿಗಾಗಿ ಗುಬ್ಬಿಯ ಮಾಂಸವನ್ನೂ ತಿನ್ನಬೇಕೆಂದು ಚರಕ ತನ್ನ ಚರಕಸಂಹಿತೆ ವೈದ್ಯಕೃತಿಯಲ್ಲಿ ಹೇಳುತ್ತಾನೆ.

ಚರಕ ಸಂಹಿತೆಯ ಚಿಕಿತ್ಸಾಸ್ಥಾನದ 11ನೇ ಅಧ್ಯಾಯದಲ್ಲಿ ಮನುಷ್ಯರ ಎದೆನೋವಿಗೆ ಮೇಕೆಯ ಚರ್ಬಿಯ ತೈಲವನ್ನು ಮದ್ಯದೊಡನೆ ಬೆರೆಸಿ ಸೇವಿಸಬೇಕೆಂದು ಹೇಳಲಾಗಿದೆ. ತನ್ನ ಸೂತ್ರಸ್ಥಾನ ಕೃತಿಯಲ್ಲಿ ಮೇಕೆಮಾಂಸದ ಆರೋಗ್ಯಕಾರಿ ಉಪಯೋಗಗಳನ್ನು ವಿವರಿಸುವ ಚರಕನು.. ಮೇಕೆ ಮಾಂಸವು ಸರ್ವಋತುಗಳಲ್ಲೂ ಸೇವಿಸಬಹುದಾದ ಶಕ್ತಿಪುಷ್ಟ ಆಹಾರವಾಗಿದೆ, ಮೇಕೆ ಮಾಂಸವು ಶೀತವೂ ಅಲ್ಲದ ಉಷ್ಣವೂ ಅಲ್ಲದ ಆಹಾರವಾಗಿರುವುದರಿಂದ ಮನುಷ್ಯರ ಆರೋಗ್ಯಕ್ಕೆ ಮೇಕೆಮಾಂಸ ಉಪಯೋಗಕಾರಿಯೆಂದು ಚರಕನು ಬಣ್ಣಿಸಿದ್ದಾನೆ.

ಆಯುರ್ವೇದ ಶಾಸ್ತ್ರವನ್ನು ಎಲ್ಲರೂ ಸಸ್ಯಕೇಂದ್ರಿತ ವೈದ್ಯವಿಜ್ಞಾನವೆಂದು ಇವತ್ತಿಗೂ ತಿಳಿದಿದ್ದಾರೆ. ಅದಕ್ಕೆ ವಿರುದ್ಧವಾಗಿ ಆಯುರ್ವೇದವು ಸಸ್ಯ-ಮಾಂಸ ಆಧರಿತ ಔಷಧಜ್ಞಾನವಾಗಿರುವುದಕ್ಕೆ ಪ್ರಾಚೀನ ಆಯುರ್ವೇದ ಕೃತಿಯಲ್ಲೇ ಸಾಕ್ಷಿಗಳಿವೆ. ಆಯುರ್ವೇದ ವೈದ್ಯಪದ್ಧತಿಯಲ್ಲಿ ಮೇಕೆಮಾಂಸದ ಚರ್ಬಿಯ ತೈಲವನ್ನು ‘ಮಹಾಮಾಂಸ ತೈಲ’ವೆಂದು ಗುರುತಿಸಲಾಗಿದೆ. ಈ ತೈಲವನ್ನು ಹಚ್ಚುವುದರಿಂದ ಲಕ್ವ, ಸ್ನಾಯು ಸೆಳೆತ, ತಲೆನೋವು ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಬಹುದೆಂದು ಆಯುರ್ವೇದ ವೈದ್ಯ ವಿಜ್ಞಾನವು ಪ್ರತಿಪಾದಿಸುತ್ತದೆ. ‘ಅಜಸ್ವಾಗಂಧ ಲೇಹ್ಯಂ’ ಎಂಬ ಮೇಕೆಮಾಂಸದಿಂದ ತಯಾರಿಸಿದ ತೈಲವನ್ನು ದೇಹದಾರ್ಢ್ಯತೆಯನ್ನು ಬೆಳೆಸಿಕೊಳ್ಳಲು ಅತ್ಯವಶ್ಯಕವಾಗಿ ಆಯುರ್ವೇದವು ಶಿಫಾರಸ್ಸು ಮಾಡುತ್ತದೆ. ಆಯುರ್ವೇದದ ‘ಭಾವಪ್ರಕಾಶ’ ಎಂಬ ಅಧ್ಯಾಯದಲ್ಲಿ ಪ್ರಾಣಿಗಳ ಮಾಂಸದ ರಸದ ಉಪಯೋಗಗಳನ್ನು ‘ಪುನರ್ವಾಧ್ಯಾರಿಷ್ಟ’ ಎಂಬ ಹೆಸರಿನಲ್ಲಿ ವಿವರಿಸಲಾಗಿದೆ. ಇದಲ್ಲದೇ ಆಯುರ್ವೇದದ ಬಹಳಷ್ಟು ಔಷಧಿಗಳಲ್ಲಿ ಪ್ರಾಣಿಗಳ ಮಾಂಸವನ್ನು ಬಳಸಿ ತಯಾರಿಸಬೇಕೆಂದು ಆಯುರ್ವೇದವು ಹೇಳುತ್ತದೆ.

‘ಅಮೃತಪ್ರಾತ ಘೃತ’ ಎಂಬ ತುಪ್ಪದ ತಯಾರಿಕೆಯಲ್ಲಿ ಮೇಕೆ ಮಾಂಸವನ್ನು, ರಸಾಯನ ತಯಾರಿಕೆಯಲ್ಲಿ ಹಸುವಿನ ಜಠರದ ಮಾಂಸವನ್ನು, ‘ಅಶ್ವಗಂಧಿ ಲೇಹ್ಯ’ ತಯಾರಿಕೆಯಲ್ಲಿ ಮೇಕೆಮಾಂಸವನ್ನೂ, ‘ಕಸ್ತೂರ್ಯಾದಿ ಗುಳಿಗೆ’, ಕಸ್ತೂರಿ ಭೈರವ ರಸ ಮತ್ತು ಗೋಪಾಲತೈಲ ತಯಾರಿಕೆಯಲ್ಲಿ ಕಸ್ತೂರಿ ಮೃಗದ ಮಾಂಸವನ್ನೂ, ‘ಕಾಮದೂಧ ರಸ’ ತಯಾರಿಕೆಯಲ್ಲಿ ಶಂಖು ಹುಳುವಿನ ಮಾಂಸವನ್ನೂ, ಶೃಂಗಭಸ್ಮ ತಯಾರಿಕೆಯಲ್ಲಿ ಜಿಂಕೆಯ ಕೊಂಬನ್ನೂ ಚುಕ್ಕುಂತಿಪಲ್ಯಾಡಿ ಗುಳಿಗೆ ತಯಾರಿಯಲ್ಲಿ ಕಾಡುಬೆಕ್ಕಿನ ವೀರ್ಯವನ್ನೂ ಬಳಸಬೇಕೆಂದು ಆಯುರ್ವೇದ ಹೇಳುತ್ತದೆ. ಜೊತೆಗೆ ಮಾಂಸಾಹಾರವನ್ನು ಬೆಳಗಿನ 11ರಿಂದ ಮಧ್ಯಾಹ್ನ 2 ಗಂಟೆಯ ಒಳಗೆ ಸೇವಿಸಿದರೆ ಒಳ್ಳೆಯದೆಂದು ಮಾಂಸಾಹಾರವನ್ನು ಪ್ರೋತ್ಸಾಹಿಸುವ ಆಯುರ್ವೇದವು ಈ ಸಮಯದಲ್ಲಿ ಅಗ್ನಿದೇವನ ಶಕ್ತಿ ಹೆಚ್ಚಿರುವುದರಿಂದ ಜೀರ್ಣಶಕ್ತಿಗೆ ಅನುಕೂಲಕರವೆಂದು ಹೇಳುತ್ತದೆ. ಪ್ರಾಚೀನ ಆಯುರ್ವೇದವೇ ಹೇಳುವಂತೆ ಕೋಳಿ ಮತ್ತು ಮೀನಿನ ಸೇವನೆಯಿಂದ ವಾತದೋಷ ನಿವಾರಣೆಯಾಗುತ್ತದೆ, ಹಂದಿಮಾಂಸದ ಸೇವನೆಯಿಂದ ದೇಹದ ತೂಕ ಹೆಚ್ಚಿಸಿಕೊಳ್ಳಬಹುದು, ಸ್ನಾಯು ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಗೋಮಾಂಸ ಸೇವನೆ ಉಪಕಾರಿಯೆಂಬ ಆರೋಗ್ಯ ಸಲಹೆಗಳನ್ನು ಆಯುರ್ವೇದ ನೀಡುತ್ತದೆ.

ಪ್ರಾಚೀನ ಸಮಾಜದ ಕಾನೂನುಮಾಪನವಾಗಿ ಗುರುತಿಸಲ್ಪಟ್ಟಿದ್ದ ಮನುಧರ್ಮಶಾಸ್ತ್ರವು ಮಾಂಸಾಹಾರಕ್ಕೆ ವಿರೋಧಿಯಾಗಿಲ್ಲ. ಇದಕ್ಕೆ ಮನುಶಾಸ್ತ್ರದ ಕೆಲವೊಂದು ಶ್ಲೋಕಗಳೇ ಉದಾಹರಣೆಯಾಗಿವೆ. ಮನುಸ್ಮೃತಿಯ 5ನೇ ಅಧ್ಯಾಯದ 28ನೇ ಶ್ಲೋಕವು ‘ಜಗತ್ತಿನ ಸೃಷ್ಟಿಕರ್ತನಾದ ಪ್ರಜಾಪತಿಯು ಜೀವ ಇರುವ ಜೀವಗಳು ಆಹಾರವಾಗಿ ಬಳಸಲೆಂದು ಎಲ್ಲವನ್ನೂ ಸೃಷ್ಟಿಸಿದ್ದಾನೆ’ ಎನ್ನುತ್ತದೆ. ಇದೇ ಅಧ್ಯಾಯದ 32ನೇ ಶ್ಲೋಕವು ‘ದೇವರಿಗೆ ಪ್ರಸಾದವಾಗಿ ಅರ್ಪಿಸಿದ ಪ್ರಾಣಿಗಳ ಮಾಂಸವನ್ನು ಮನುಷ್ಯರು ತಿನ್ನುವುದು ತಪ್ಪಾಗುವುದಿಲ್ಲ’ ಎನ್ನುತ್ತದೆ. ಆ ಕಾಲಘಟ್ಟದಲ್ಲಿ ಸರ್ವೇ ಸಾಧಾರಣವಾಗಿದ್ದ ಮಾಂಸಾಹಾರವು ಆಹಾರಕ್ರಮದಲ್ಲಿ, ದೇವರಪೂಜೆಯಲ್ಲಿ, ಔಷಧಿಯ ರೂಪದಲ್ಲಿಯೂ ಬಳಕೆಯಾಗುತ್ತಿದ್ದವು ಎನ್ನುವುದಕ್ಕೆ ಮನುಸ್ಮೃತಿಯ ಈ ಉಲ್ಲೇಖಗಳೇ ಸಾಕ್ಷಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್: ಸರ್ಕಾರಕ್ಕೆ ನಾಲ್ಕು ಪ್ರಮುಖ ಹಕ್ಕೊತ್ತಾಯ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ.

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ರೈತರು ಹಾಗೂ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಹೋರಾಟ...

ತಮಿಳುನಾಡು| ಮರ್ಯಾದೆಗೇಡು ಹತ್ಯೆ ಶಂಕೆ; 25 ವರ್ಷದ ದಲಿತ ಯುವಕನ ಭೀಕರ ಕೊಲೆ

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಮರ್ಯಾದೆಗೇಡು ಕೊಲೆಯ ಶಂಕೆ ವ್ಯಕ್ತವಾಗಿದೆ. ಆಗಸ್ಟ್ 16 ರಂದು ರಾತ್ರಿ ಚೆಂಗಲ್ಪಟ್ಟುವಿನ ಕೇಳಂಬಾಕ್ಕಂ ನಿವಾಸಿ ಪ್ರವೀಣ್ ಅವರ ಮೇಲೆ ದಾಳಿಕೋರರಾದ...

44 ಲಕ್ಷ ಮತದಾರರಿಗೆ ನೋಟಿಸ್: BLA ಗಳಿಗೆ ಪಟ್ಟಿ ನೀಡಿ, ಪಾರದರ್ಶಕತೆ ಕಾಯ್ದುಕೊಳ್ಳಲು ‘ಜಾಗೃತ ಕರ್ನಾಟಕ’ ಒತ್ತಾಯ

ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಪ್ರಕಟಗೊಳ್ಳುತ್ತಿರುವ ಕರಡು ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಎಚ್ಚರವಹಿಸಬೇಕು ಹಾಗೂ ನೋಟಿಸ್ ಪ್ರಕ್ರಿಯೆಗೆ ಕಾಲಾವಕಾಶ ವಿಸ್ತರಿಸಬೇಕು ಎಂದು ಆಗ್ರಹಿಸಿ ‘ಜಾಗೃತ...

ಕೇರಳ ಬಿಜೆಪಿಗೆ ಹಿರಿಯ ನಟ ಎಸ್. ದೇವನ್ ಗುಡ್‌ಬೈ: ‘ದಳಪತಿ’ ವಿಜಯ್ ಟಿವಿಕೆ ಪಕ್ಷ ಸೇರಲು ಒಲವು!

ಮಲಯಾಳಂ ನಟ ಹಾಗೂ ರಾಜಕಾರಣಿ ಎಸ್. ದೇವನ್ ಅವರು ತಮಿಳುನಾಡಿನ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವನ್ನು ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಕೇರಳ...

ಮತ್ತೆ ಜೈಲಿನಿಂದ ಹೊರಬಂದ ಅತ್ಯಾಚಾರಿ ರಾಮ್ ರಹೀಮ್! 6 ವರ್ಷದಲ್ಲಿ 17ನೇ ಬಾರಿ ಪೆರೋಲ್

ನವದೆಹಲಿ/ರೋಹ್ಟಕ್: ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಪುನಃ...

ಎಸ್‌ಐಆರ್‌ ಕರಡು ತಿರಸ್ಕರಿಸಿದ ನಾಗರಿಕ ಸಂಘಟನೆಗಳು; ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ

ಆಗಸ್ಟ್ 24 ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಎಸ್‌ಐಆರ್‌ ಕರಡು ಪಟ್ಟಿಯನ್ನು ಕರ್ನಾಟಕದ ನಾಗರಿಕ ಸಂಘಟನೆಗಳು ತಿರಸ್ಕರಿಸಿದ್ದು, ಲಕ್ಷಾಂತರ ಮತದಾರರಿಗೆ ನೋಟಿಸ್‌ ಕೊಡಲು ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ...

‘ಕೇಂದ್ರ ಸರ್ಕಾರ ಜಾತಿ ಗಣತಿಗೆ ರೂಪಿಸಿರುವ ಪ್ರಶ್ನಾವಳಿ ವಿಧಾನ ದಾರಿತಪ್ಪಿಸುವಂತಿವೆ’: ಹೊಸ ಪ್ರಶ್ನಾವಳಿ ರಚಿಸಲು ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಪತ್ರ

ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರೂಪಿಸಿರುವ ಪ್ರಶ್ನಾವಳಿಯ ವಿಧಾನವು ಅತ್ಯಂತ ದಾರಿತಪ್ಪಿಸುವಂತಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ...

ಪತ್ರಕರ್ತ ಅಭಿಷೇಕ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ಆದೇಶ

ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದ್ದು,...

2027ರ ಜನಗಣತಿಯಲ್ಲಿ ಪೋಷಕರ ಧರ್ಮ, ಜನ್ಮಸ್ಥಳದ ವಿವರ ಏಕೆ? ಕೇಂದ್ರದ ವಿರುದ್ಧ ಸಿಪಿಐ(ಎಂ) ಆಕ್ರೋಶ

2027ರ ಜನಗಣತಿ ಪ್ರಶ್ನಾವಳಿಯಲ್ಲಿ ಪೋಷಕರ ಧರ್ಮ ಹಾಗೂ ಜನ್ಮಸ್ಥಳದ ಕುರಿತಾದ ವಿವರಗಳನ್ನು ಸಂಗ್ರಹಿಸಲು ಉದ್ದೇಶಿಸಿರುವುದರ ವಿರುದ್ಧ ಸಿಪಿಐ(ಎಂ) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಕ್ರಮವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುವ...

ಟಿಎಂಸಿ ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಶಾಕ್: 20 ಎಂಪಿಗಳಿಗೆ ನೋಟಿಸ್ ಜಾರಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು, ಎನ್‌ಸಿಪಿಐ (NCPI) ಎಂಬ ಅಷ್ಟಾಗಿ ಜನಪ್ರಿಯವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಒಕ್ಕೂಟವನ್ನು ಸೇರಿಕೊಂಡಿರುವ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಟಿಎಂಸಿ ಪ್ರಧಾನ...