Homeಅಂಕಣಗಳುಯುಗಧರ್ಮ | ಯೋಗೇಂದ್ರ ಯಾದವ್ಡಿಸೆಂಬರ್ 11ರ ಫಲಿತಾಂಶವು 2019ರ ಮೇಲೆ ಏನು ಪರಿಣಾಮ ಬೀರಲಿದೆ?

ಡಿಸೆಂಬರ್ 11ರ ಫಲಿತಾಂಶವು 2019ರ ಮೇಲೆ ಏನು ಪರಿಣಾಮ ಬೀರಲಿದೆ?

- Advertisement -
- Advertisement -

ಪ್ರೊ. ಯೋಗೇಂದ್ರ ಯಾದವ್ |

ಒಂದೆಡೆ ಶಾಲೆಗಳಲ್ಲಿ ಪ್ರೀ-ಬೋರ್ಡ್ ಪರೀಕ್ಷೆಗಳ ತಯಾರಿ ನಡೆದಿದ್ದರೆ, ಇನ್ನೊಂದೆಡೆ ಮೋದಿ ಸರಕಾರವೂ ಐದು ರಾಜ್ಯಗಳಲ್ಲಿಯ ವಿಧಾನಸಭೆ ಚುನಾವಣೆಗಳಲ್ಲಿ ತನ್ನ ಪ್ರಿಬರ‍್ಡ್ ಪರೀಕ್ಷೆಗೆ ಅಣಿಯಾಗಿದೆ. ಡಿಸೆಂಬರ್ 11ರಂದು ಈ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗ, ನಮಗೆ 2019ರ ಚುನಾವಣೆಯ ಫಲಿತಾಂಶದ ಒಂದು ಝಲಕ್ ಕಾಣಿಸುವುದಂತೂ ಖಂಡಿತ. ಇಲ್ಲಿಯವರೆಗೆ ನಮಗೆ ಕಾಣಿಸಿರುವಷ್ಟು ಮುನ್ನೋಟದಿಂದ ಬಿಜೆಪಿ ವಿಚಲಿತವಾಗಿರುವುದು ಸ್ವಾಭಾವಿಕವೆನಿಸುತ್ತಿದೆ.

ಈ ಚುನಾವಣೆಗಳನ್ನು ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದು ಕೆಲವರು ಕರೆಯಲಾರಂಭಿಸಿದ್ದಾರೆ; ಅದೇಕೋ ತಿಳಿಯದು. ಪ್ರತೀ ವಿಧಾನಸಭೆ ಚುನಾವಣೆಯನ್ನು ಕೇಂದ್ರ ಸರಕಾರದ ಮೇಲೆ ರೆಫರೆಂಡಮ್ ಎಂದು ಘೋಷಿಸಲಾಗುತ್ತಿದೆ. ನಾನು ವೈಯಕ್ತಿಕವಾಗಿ ಪ್ರೀ-ಬರ‍್ಡ್ ಎಂದು ಕರೆಯಲು ಇಷ್ಟಪಡುತ್ತೇನೆ. ಅಂತಿಮ ಪರೀಕ್ಷೆಗೆ ಮುಂಚಿನ ಈ ಚಿಕ್ಕ ಪರೀಕ್ಷೆಯಲ್ಲಿ ಮಾಡಿದ ತಯಾರಿಯ ವಿಶ್ಲೇಷಣೆ ಮಾಡಲಾಗುವ, ದೌರ್ಬಲ್ಯಗಳನ್ನು ಪತ್ತೆ ಹಚ್ಚುವ, ಕೊನೆಯಲ್ಲಿ ಎಷ್ಟು ಅಂಕಗಳನ್ನು ಪಡೆಯಬಹುದು ಎನ್ನುವ ಅಂದಾಜು ಹಾಕಲಾಗುವ ಪ್ರಿ ಬೋರ್ಡ್ ಪರೀಕ್ಷೆಗಳು. ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳೂ ಇಂತಹ ಪರೀಕ್ಷೆಯೇ ಆಗಿವೆ. ಇವುಗಳ ಸೋಲು ಗೆಲುವುಗಳಿಂದ 2019ರ ಚುನಾವಣೆಯಲ್ಲಿ ನೇರಾನೇರ ಪರಿಣಾಮವಾಗಲಿದೆ. ಆದರೆ ಈ ಚುನಾವಣೆಯ ಒಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಲೋಕಸಭೆಯ ಚುನಾವಣೆಯ ಒಂದು ಜಾಡು ಸಿಗಬಹುದಾಗಿದೆ.

ಒಂದುವೇಳೆ ಈ ಚುನಾವಣೆಗಳನ್ನು ಲೋಕಸಭೆ ಚುನಾವಣೆಗಳ ದೃಷ್ಟಿಯಲ್ಲಿ ನೋಡಬೇಕಾದರೆ ಮೊದಲು ಮಿಝೋರಾಂ ಮತ್ತು ತೆಲಂಗಾಣ ರಾಜ್ಯಗಳನ್ನು ಮರೆತುಬಿಡಬೇಕಿದೆ. ಮಿಝೋರಾಂ ಎಷ್ಟು ವಿಶಿಷ್ಟ ರಾಜ್ಯವೆಂದರೆ ಮಿಕ್ಕ ದೇಶ ಬಿಡಿ, ಅದರಿಂದ ಈಶಾನ್ಯ ಭಾರತದ ರಾಜಕೀಯದ ಅಂದಾಜನ್ನೂ ಹಾಕಲಾಗುವುದಿಲ್ಲ. ತೆಲಂಗಾಣದಲ್ಲಿ ಸ್ವತಂತ್ರ ರಾಜ್ಯ ಆದ ನಂತರದ ಮೊದಲ ಚುನಾವಣೆಯಿದು. ನಿಸ್ಸಂದೇಹವಾಗಿಯೂ ಇದೊಂದು ಐತಿಹಾಸಿಕ ಚುನಾವಣೆ. ಆದರೆ ತೆಲಂಗಾಣದ ವಿಶಿಷ್ಟ ಪರಿಸ್ಥಿತಿಯೊಂದಿಗೆ ತಳುಕುಹಾಕಿಕೊಂಡ ಚುನಾವಣೆ ಇದಾಗಿದೆ. ಇದರ ಒಲವಿನಿಂದ ಪಕ್ಕದ ಆಂಧ್ರಪ್ರದೇಶದ ರಾಜಕೀಯದ ಒಳನೋಟವೂ ಕಾಣಸಿಗುವುದಿಲ್ಲ. ರಾಜ್ಯದ 17 ಸೀಟುಗಳು ಯಾರ ತೆಕ್ಕೆಗೆ ಬೀಳಬಹುದು ಎನ್ನುವ ಅಂದಾಜನ್ನು ಮಾತ್ರ ನಾವು ಹಾಕಬಹುದು. ಆದರೆ ಇಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಗೆಲ್ಲಲು ಅಥವಾ ಸೋಲಲು ಹೆಚ್ಚೇನಿಲ್ಲ. ಟಿಡಿಪಿ ಮತ್ತು ತೆಲಂಗಾಣ ಜನ ಸಮಿತಿಯೊಂದಿಗೆ ತನ್ನ ಮೈತ್ರಿಯನ್ನು ಕಾಂಗ್ರೆಸ್ ಚುನಾವಣೆಯ ಯುದ್ಧದಲ್ಲಿ ನಿಭಾಯಿಸಬಲ್ಲದೇ ಅಥವಾ ಇಲ್ಲವೇ ಎನ್ನುವುದನ್ನು ಮಾತ್ರ ನೋಡಬಹುದು,

ಲೋಕಸಭೆ ಚುನಾವಣೆಯ ದೃಷ್ಟಿಯಲ್ಲಿ ಈ ಸಲ ಎಲ್ಲಕ್ಕಿಂತ ಮಹತ್ವಪೂರ್ಣ ಚುನಾವಣೆಗಳು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಗಢದಲ್ಲಿ ನಡೆಯಲಿವೆ. ಈ ಮೂರು ರಾಜ್ಯಗಳಲ್ಲಿ ಒಟ್ಟು 65 ಸೀಟುಗಳಿವೆ. ಕಳೆದ ಬಾರಿ ಬಿಜೆಪಿ ಈ 65 ರಲ್ಲಿ 62 ಸೀಟುಗಳಲ್ಲಿ ಜಯಶಾಲಿಯಾಗಿತ್ತು. ಈ ರಾಜ್ಯಗಳಲ್ಲಿ ತನ್ನ ಗರಿಷ್ಠ ಸೀಟುಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಈ ಮೂರು ರಾಜ್ಯಗಳ ಫಲಿತಾಂಶದಿಂದ 2014ರಲ್ಲಿ ಹಿಂದಿ ಬೆಲ್ಟಿನಲ್ಲಿ ಬೀಸಿದ್ದ ಮೋದಿ ಅಲೆ ಇನ್ನೂ ಹಾಗೇ ಇದೆಯೋ ಅಥವಾ ಇಲ್ಲವೋ ಎನ್ನುವ ಸೂಚನೆಯೂ ಸಿಗಲಿದೆ.

ಸದ್ಯಕ್ಕಂತೂ ಅಲೆಯು ಹಿಂದೆ ಇದ್ದ ಪ್ರಮಾಣದಲ್ಲಿ ಇದ್ದ ಹಾಗೆ ಕಾಣುತ್ತಿಲ್ಲ. ಇಲ್ಲಿಯವರೆಗೆ ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗಿವೆ. ಚುನಾವಣೆಯ ಫಲಿತಾಂಶಗಳ ಕುರಿತ ಭವಿಷ್ಯವಾಣಿಯನ್ನು ಅನೇಕರು ನುಡಿದಿದ್ದಾರೆ. ಆದರೆ ಕಳೆದ ಕೆಲಸಮಯದಲ್ಲಿ ಈ ಭವಿಷ್ಯವಾಣಿಗಳ ಗುಣಮಟ್ಟ ಎಷ್ಟು ಕುಸಿದಿದೆಯೆಂದರೆ ಇವುಗಳ ಆಧಾರದ ಮೇಲೆ ಏನು ಹೇಳಲೂ ಭಯವಾಗುತ್ತಿದೆ. ಆದರೆ ನೀವು ಚುನಾವಣಾಪೂರ್ವ ಭವಿಷ್ಯವಾಣಿಗಳನ್ನು ಬಿಟ್ಟು ನೋಡಿದಾಗ ಈ ಎಲ್ಲಾ ಸರ್ವೆಗಳಿಂದ ಗಾಳಿ ಯಾವ ದಿಕ್ಕಿನಲ್ಲಿ ಬೀಸುತ್ತಿದೆ, ಜನತೆಯ ಮನದಲ್ಲಿ ಏನಿದೆ ಎನ್ನುವುದನ್ನು ಖಂಡಿತವಾಗಿಯೂ ಪತ್ತೆಹಚ್ಚಬಹುದು.

ರಾಜಸ್ಥಾನದಲ್ಲಿ ಪ್ರತಿಯೊಂದು ಸರ್ವೇ, ಪ್ರತಿಯೊಬ್ಬ ರಾಜಕೀಯ ವಿಶ್ಲೇಷಕ ಹಾಗೂ ಪ್ರತಿಯೊಬ್ಬ ರಸ್ತೆಬದಿ ವ್ಯಾಪಾರಿ ಹೇಳುತ್ತಿರುವುದು ಒಂದೇ. ಬಿಜೆಪಿ ಸೋಲುತ್ತೆ ಹಾಗೂ ಅತ್ಯಂತ ಕೆಟ್ಟ ರೀತಿಯಲ್ಲಿ ಸೋಲುತ್ತೆ. 2013ರ ಚುನಾವಣೆಗೆ ಮುಂಚೆ ಅಶೋಕ್ ಗೆಹ್ಲಾಟ್ ಅವರ ಸರಕಾರ ಎಷ್ಟು ಅಪ್ರಿಯವಾಗಿತ್ತೋ, ವಸುಂಧರಾ ರಾಜೆ ಸರಕಾರವೂ ಅಷ್ಟೇ ಅಪ್ರಿಯವಾಗಿದೆ. ಕೇವಲ 33% ಜನರು ಬಿಜೆಪಿ ಸರಕಾರಕ್ಕೆ ಇನ್ನೊಂದು ಅವಕಾಶ ನೀಡಬೇಕು ಎಂದು ಆಶಿಸಿದರೆ, 44% ಜನರು ಈ ಪಕ್ಷ ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುತ್ತಿದ್ದಾರೆ. ರಾಜಸ್ಥಾನದಲ್ಲಿ ಇರುವ ಪ್ರಶ್ನೆ ಒಂದೇ, ಬಿಜೆಪಿಯ ಸೋಲಿನ ಅಂತರ ಎಷ್ಟು ಎನ್ನುವುದು. ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋತನಂತರ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ತನ್ನ ಕೆಲವು ಸೀಟುಗಳನ್ನು ಉಳಿಸಿಕೊಳ್ಳಲಾಗುವುದೇ? 1999ರಲ್ಲಿ ಆದ ಲೋಕಸಭೆ ಚುನಾವಣೆಯನ್ನು ಬಿಟ್ಟರೆ, ಮಿಕ್ಕೆಲ್ಲಾ ಚುನಾವಣೆಗಳಲ್ಲೂ ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದವರೇ ಲೋಕಸಭೆ ಚುನಾವಣೆಗಳಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದಿದ್ದಾರೆ.

ಮಧ್ಯಪ್ರದೇಶದಲ್ಲಿ ಮಾತ್ರ ಬೇರೆ ಬೇರೆ ಸರ್ವೇಗಳು ಬೇರೆ ಬೇರೆ ರೀತಿಯಲ್ಲಿ ಭವಿಷ್ಯವಾಣಿ ನುಡಿದಿವೆ. ಆದರೆ ಎರಡು ವಿಷಯಗಳಲ್ಲಿ ಎಲ್ಲಾ ಸರ್ವೇಗಳು ಸಹಮತವನ್ನು ಹೊಂದಿವೆ: ಸ್ಪರ್ಧೆ ತೀವ್ರವಾಗಿದೆ ಹಾಗೂ ಮುಂಚೆಗಿಂತ ಹೋಲಿಕೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸರಕಾರದ ಜನಪ್ರಿಯತೆ ಬಹಳಷ್ಟು ಕುಸಿದಿದೆ. 2103ರ ಚುನಾವಣಾಪೂರ್ವದಲ್ಲಿ ಸಿಎಸ್‌ಡಿಎಸ್ ಸರ್ವೇ ಮಾಡಿದಾಗ 53% ಜನರು ಬಿಜೆಪಿ ಮತ್ತೇ ಸರಕಾರ ಸ್ಥಾಪಿಸಲಿ ಎಂದು ಬಯಸಿದ್ದರು ಹಾಗೂ ಕೇವಲ 20% ಜನರು ಬಿಜೆಪಿ ಸರಕಾರ ಹೋಗಬೇಕು ಎಂದು ಬಯಸಿದ್ದರು. ಆದರೆ ಈ ಸಲ ಅಕ್ಟೋಬರ್ ತಿಂಗಳಲ್ಲಿ 45% ಜನರು ಬಿಜೆಪಿ ಸರಕಾರ ಮರಳಿಬರಲೆಂದು ಆಶಿಸಿದರೆ 43% ಜನರು ಬಿಜೆಪಿ ಸರಕಾರವನ್ನು ತೆಗೆದುಹಾಕುವ ಮೂಡಿನಲ್ಲಿದ್ದಾರೆ. ಸಿಎಸ್‌ಡಿಎಸ್ ಸರ್ವೇಯಲ್ಲಿ ಬಿಜೆಪಿ ಮುಂದಿದ್ದರೂ ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್‌ಗಿಂತ ಹಿಂದಿದೆ. ನಗರಪ್ರದೇಶಗಳಲ್ಲಿ ದೊಡ್ಡ ಗೆಲುವನ್ನು ಮತ್ತೆ ಸಾಧಿಸಿದರೂ ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ಬಿದ್ದರೆ ಬಹುಮತದ ಸಂಖ್ಯೆಯನ್ನು ದಾಟಲಾಗುವುದಿಲ್ಲ. ಏನೇ ಆದರೂ 2014ರಲ್ಲಿ 29ರಲ್ಲಿ 27 ಸೀಟುಗಳನ್ನು ಗೆದ್ದ ತನ್ನ ದಾಖಲೆಯನ್ನಂತೂ ಮತ್ತೊಮ್ಮೆ ಸಾಧಿಸಲಾಗದು.

ಛತ್ತೀಸಗಢದಲ್ಲಿ ಕೆಲವು ಸರ್ವೇಗಳು ಬಿಜೆಪಿಯ ದೊಡ್ಡ ಗೆಲುವಿನ ಬಗ್ಗೆ ಮಾತನಾಡಿದರೆ ಇನ್ನೂ ಕೆಲವು ಸಣ್ಣ ಸೋಲಿನ ಬಗ್ಗೆ ಹೇಳುತ್ತಿವೆ. ಕಳೆದ ಎರಡು ವಿಧಾನಸಭೆಯ ಚುನಾವಣೆಗಳಲ್ಲಿ ಬಿಜೆಪಿ ಸೋಲಿನಿಂದ ಕೂದಲೆಳೆಯಲ್ಲಿ ಪಾರಾಗಿತ್ತು. ಈ ಸಲ ಎರಡೂ ರೀತಿಯ ಸರ್ವೇಗಳು ಒಪ್ಪಿಕೊಳ್ಳುವುದೇನೆಂದರೆ, ಕಳೆದ ಬಾರಿಯ ಹೋಲಿಕೆಯಲ್ಲಿ ಈ ಬಾರಿ ರಮಣ್‌ಸಿಂಗ್ ಸರಕಾರದ ಜನಪ್ರಿಯತೆ ಕಡಿಮೆಯಾಗಿದೆ. ಎಲ್ಲರೂ ಒಪ್ಪಿಕೊಳ್ಳುತ್ತಿರುವ ಇನ್ನೊಂದು ಮಾತೆಂದರೆ, ಒಂದು ವೇಳೆ ಬಿಜೆಪಿ ಗೆದ್ದಲ್ಲಿ ಅದರ ಶ್ರೇಯ ಅಜಿತ್ ಜೋಗಿ ಹಾಗೂ ಬಸಪ ಮಧ್ಯದ ಮೈತ್ರಿಯಿಂದ ಕಾಂಗ್ರೆಸ್‌ಗೆ ಆಗಲಿರುವ ನಷ್ಟಕ್ಕೇ ಸಲ್ಲುತ್ತದೆ. ಒಂದು ವೇಳೆ ಹೀಗಾದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ 10 ಸೀಟುಗಳನ್ನು ಹೇಗೆ ಉಳಿಸಿಕೊಳ್ಳಬಲ್ಲದು?

ಈ ಚುನಾವಣೆಗಳನ್ನು ಪ್ರೀ-ಬೋರ್ಡ್ ಎಂದು ಕರೆಯುವುದರಲ್ಲಿ ಒಂದು ತೊಂದರೆಯಿದೆ. ಪ್ರೀ-ಬೋರ್ಡ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ನಿಜವಾದ ಪರೀಕ್ಷೆಯಲ್ಲಿ ಸೇರಿಸುವುದಿಲ್ಲ. ಆದರೆ ಐದು ರಾಜ್ಯಗಳ ಚುನಾವಣೆಗಳು ಲೋಕಸಭೆ ಚುನಾವಣೆಯ ಮೇಲೆ ನೇರವಾದ ಪರಿಣಾಮ ಬೀರಲಿವೆ. ಒಂದು ವೇಳೆ ಬಿಜೆಪಿ ಮೂರೂ ರಾಜ್ಯಗಳಲ್ಲಿ ಜಯಶಾಲಿಯಾದಲ್ಲಿ ಖಂಡಿತವಾಗಿಯೂ ಲೋಕಸಭೆ ಚುನಾವಣೆಯನ್ನೆದುರಿಸಲು ಬಿಜೆಪಿಯ ಆತ್ಮವಿಶ್ವಾಸ ಹಾಗೂ ದೇಶಾದ್ಯಂತ ಗಾಳಿ ಬೀಸಲು ಬೇಕಾದ ಕ್ಷಮತೆಯಲ್ಲಿ ವೃದ್ಧಿಯಾಗುವುದು. ಆದರೆ ಒಂದುವೇಳೆ ಬಿಜೆಪಿ ರಾಜಸ್ಥಾನದೊಂದಿಗೆ ಇತರೆ ರಾಜ್ಯಗಳಲ್ಲಿ ಸೋಲನ್ನಪ್ಪಿದರೆ ಅಥವಾ ಕಷ್ಟಪಟ್ಟು ಗೆದ್ದರೂ, ಅದರಿಂದ ದೇಶಾದ್ಯಂತ ರಾಜಕೀಯ ವಾತಾವರಣ ಬದಲಾಯಿಸುವುದು. ಪ್ರತಿಪಕ್ಷಗಳ ಕಾರ್ಯಕರ್ತರ ಉತ್ಸಾಹ ಹೆಚ್ಚುವುದು. ದೊಡ್ಡ ಉದ್ಯೋಗಪತಿಗಳು ಈಗ ಬಿಜೆಪಿ ಬಿಟ್ಟು ಬೇರಾವುದೇ ಪಕ್ಷಕ್ಕೆ ಹಣ ನೀಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಆದರೆ ಬಿಜೆಪಿ ಸೋತಲ್ಲಿ ಅವರು ನಿರ್ಭಯವಾಗಿ ತಮ್ಮ ಹಣದ ಚೀಲ ಬಿಚ್ಚುವುದರಲ್ಲಿ ಸಂದೇಹವಿಲ್ಲ. ಎಲ್ಲಕ್ಕಿಂತ ಮುಖ್ಯ ವಿಷಯವೇನೆಂದರೆ ಮಾಧ್ಯಮಗಳ ಒಲವೂ ಬದಲಾಗಲಿದೆ. ಇಂದು ಬಿಜೆಪಿಯ ಸನ್ನೆಗನುಗುಣವಾಗಿ ಕುಣಿಯುತ್ತಿರುವ ಮಾಧ್ಯಮಗಳು ತನ್ನ ಕುಣಿತದ ಹೆಜ್ಜೆಗಳನ್ನು ಬದಲಿಸುವುದು ಅನಿವಾರ್ಯವಾಗಲಿದೆ. ಮೋದಿ ಸರಕಾರದ ಸತ್ಯ ಸಾಮಾನ್ಯ ಜನರಿಗೆ ತಲುಪಲು ಶುರುವಾಗುವುದು. ಹೀಗೆ ಆದಲ್ಲಿ 2019ರ ಚುನಾವಣೆಯ ಸಮೀಕರಣದಲ್ಲಿ ತೀವ್ರವಾದ/ಚಮತ್ಕಾರಕವಾದ ಬದಲಾವಣೆಗಳು ಬರಬಹುದು.

ಅನುವಾದ: ಡಾ.ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...