Homeಮುಖಪುಟ'ಯುದ್ಧ ಮತ್ತು ಮಕ್ಕಳು': ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

‘ಯುದ್ಧ ಮತ್ತು ಮಕ್ಕಳು’: ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

ಯುದ್ಧಕ್ಕೆ ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ, ಪ್ರತೀಕಾರ ಮತ್ತು ವಾಣಿಜ್ಯ ಹೀಗೆ ಹಲವು ಕಾರಣಗಳಿವೆ. ಕಾರಣ ಯಾವುದೇ ಇದ್ದರೂ ಅದು ಹುಟ್ಟಿ ಹಾಕುವುದು ಹಿಂಸೆ, ನೋವು ಮತ್ತು ಹತಾಶೆ. ಇದು ಮಾನವ ಸಂಬಂಧದ ಬೆಸುಗೆಯನ್ನು ಅವಮಾನಿಸುವುದಲ್ಲದೇ, ಸಂಬಂಧಗಳ ಬೆಳವಣಿಗೆಗೆ ಮರ್ಮಾಘಾತವನ್ನು ನೀಡುತ್ತದೆ.

- Advertisement -
- Advertisement -

ಎರಡನೇ ವಿಶ್ವಯುದ್ಧದ ಕಾಲದಲ್ಲಿ ಆ್ಯನಿ ಫ್ರಾಯ್ಡ್ (ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಮಗಳು) ಮತ್ತು ಅವಳ ಆತ್ಮೀಯರಾದ ಡೊರೋಥಿ ಬರ್ಲಿಂಗ್ ಹ್ಯಾಮ್ ಇಬ್ಬರೂ ಕೂಡಿ ತಮ್ಮ ಸಾಂದರ್ಭಿಕ ಅಧ್ಯಯನದ ಫಲವಾಗಿ ‘ವಾರ್ ಆ್ಯಂಡ್ ಚಿಲ್ಡ್ರನ್’ ಪ್ರಕಟಿಸಿದರು. ನಾಜೀ ಜರ್ಮನಿಯ ಆಕ್ರಮಣಕ್ಕೆ ತುತ್ತಾದ ಇಂಗ್ಲೆಂಡಿನ ಮಕ್ಕಳು ತಮ್ಮ ಪೋಷಕರಿಂದ ಅಗಲಬೇಕಾದ ವ್ಯಥೆಯ ವಾಸ್ತವ ದಾಖಲೆ ಅದು. ಆ್ಯನಿ ಮತ್ತು ಬರ್ಲಿಂಗ್ ಹ್ಯಾಮ್ ಇಬ್ಬರೂ ಯುದ್ಧ ಕಾಲದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತತ್ಕಾಲದ ಆಶ್ರಯವನ್ನು ನೀಡುವಂತಹ ವಾರ್ ನರ್ಸರಿಗಳಲ್ಲಿ ಕೆಲಸ ಮಾಡಿದ್ದರು. ಈ ಪುಸ್ತಕಕ್ಕೆ ಆ ಅನುಭವದ ಹಿನ್ನೆಲೆ ಇತ್ತು.

1936ರಲ್ಲಿ ಸ್ಪೇನ್ ದೇಶದ ಆಕ್ರಮಣಕ್ಕೆ ಮಕ್ಕಳು ತುತ್ತಾದಾಗಿನಿಂದ ಅಂತಹ ಮಹಾಯುದ್ಧಗಳ ಕಾಲದಲ್ಲಿ ಮಕ್ಕಳಿಗೆ ಪೋಷಣೆ ಮಾಡುವ ಸಾಕು ತಂದೆ ತಾಯಿಗಳನ್ನು ಗುರುತಿಸುವ ಮತ್ತು ಅವರಿಗೆ ಯೋಜನೆಗಳನ್ನು ರೂಪಿಸುವಂತಹ ಕೆಲಸಗಳು ನಡೆಯುತ್ತಿತ್ತು. ನಂತರ ಅದೇ ರೀತಿಯಲ್ಲಿ ಆ್ಯನಿ ಮತ್ತು ಬರ್ಲಿಂಗ್ ಹ್ಯಾಮ್ ಇಬ್ಬರೂ ಫ್ರೆಂಚ್, ಪೋಲಿಶ್, ಡಚ್ ಮತ್ತು ಬೆಲ್ಜಿಯನ್ ಮಕ್ಕಳ ಆರೈಕೆಗಾಗಿ ಫ್ರಾನ್ಸಿನಲ್ಲಿ ಕೆಲಸ ಮಾಡಿದರು. ಫ್ರಾನ್ಸಿನ ಪತನದ ನಂತರ ಅದೇ ಬಗೆಯ ಯುದ್ಧ ಕಾಲದ ಶಿಶುವಿಹಾರದ ಕೆಲಸವನ್ನು ಇಂಗ್ಲೆಂಡಿನಲ್ಲಿ ಮಾಡತೊಡಗಿದರು.

ವಾರ್ ನರ್ಸರಿಯಲ್ಲಿ 20,000ಕ್ಕೂ ಹೆಚ್ಚಿನ ಮಕ್ಕಳನ್ನು ಅಧ್ಯಯನ ಮಾಡಲಾಯಿತು. ಆ್ಯನಿಯ ಸಿಬ್ಬಂದಿಗಳಿಗೆಲ್ಲಾ ಇದೇ ಕೆಲಸ. ಆ್ಯನಿ ಮತ್ತು ಡೊರೋಥಿ ಇಂಗ್ಲೆಂಡಿನಲ್ಲಿ ಮೂರು ವಾರ್ ನರ್ಸರಿಗಳಿಗೆ ಮತ್ತು ಸಾಕು ಪೋಷಕರ ಯೋಜನೆಗೆ ನಿರ್ದೇಶಕರಾಗಿದ್ದರು.

ಯುದ್ಧ ಮತ್ತು ಮಕ್ಕಳು: ಈ ಕೃತಿ ಮನಶಾಸ್ತ್ರದಲ್ಲಿ ತುಂಬಾ ಗಮನೀಯವಾದ ಸ್ಥಾನವನ್ನು ಪಡೆಯುತ್ತದೆ. ಏಕೆಂದರೆ ಯುದ್ಧದ ಸಂಕಷ್ಟದಲ್ಲಿ ನೊಂದ ಮಕ್ಕಳ ಕಥನವನ್ನು ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ಇದರಲ್ಲಿ ದಾಖಲಿಸಲಾಗಿದೆ. ಮಕ್ಕಳ ಮೇಲಾಗುವ ಆಧುನಿಕ ಕಾಲದ ಯುದ್ಧದ ಪ್ರಭಾವಗಳನ್ನು ಮನಶಾಸ್ತ್ರೀಯ ಶಿಸ್ತಿನಲ್ಲಿ ಅಧ್ಯಯನ ಮಾಡಲಾಗಿದೆ.

ಯುದ್ಧಕ್ಕೆ ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ, ಪ್ರತೀಕಾರ ಮತ್ತು ವಾಣಿಜ್ಯ ಹೀಗೆ ಹಲವು ಕಾರಣಗಳಿವೆ. ಕಾರಣ ಯಾವುದೇ ಇದ್ದರೂ ಅದು ಹುಟ್ಟಿ ಹಾಕುವುದು ಹಿಂಸೆ, ನೋವು ಮತ್ತು ಹತಾಶೆ. ಇದು ಮಾನವ ಸಂಬಂಧದ ಬೆಸುಗೆಯನ್ನು ಅವಮಾನಿಸುವುದಲ್ಲದೇ, ಸಂಬಂಧಗಳ ಬೆಳವಣಿಗೆಗೆ ಮರ್ಮಾಘಾತವನ್ನು ನೀಡುತ್ತದೆ. ಹೂವಿನಂತೆ ಮನಸ್ಸು ಮತ್ತು ಮಾನುಷ ಸಂಬಂಧಗಳು ಅರಳುವ ಬದಲು ಕೆರಳುತ್ತವೆ ಮತ್ತು ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಯುದ್ಧದ ನಕಾರಾತ್ಮಕವಾದ ಪರಿಣಾಮವು, ನೇರವಾಗಿ ಅದರಲ್ಲಿ ಭಾಗಿಯಾಗುವವರ ಮೇಲಾಗುವುದಕ್ಕಿಂತ, ಸಮಾಜದ ಸೂಕ್ಷ್ಮ ಸಂವೇದನೆಯ ಸಮೂಹವಾದ ಮಹಿಳೆಯರ ಮತ್ತು ಮಕ್ಕಳ ಮೇಲೆ ಬಹಳ ಆಕ್ರಮಣಕಾರಿಯಾಗಿರುತ್ತದೆ. ಯಾವುದೇ ಸಮಾಜದ ಸಂತತಿ ಅಥವಾ ಪೀಳಿಗೆಯ ಸೃಷ್ಟಿ, ಉಳಿಕೆ, ಬಾಳಿಕೆ ಮತ್ತು ಮುಂದುವರಿಕೆಯು ಮಹಿಳೆಯರು ಮತ್ತು ಮಕ್ಕಳ ಮೇಲೆ ಅವಲಂಬಿತವಾಗಿರುವುದರಿಂದ ಅವರು ಯುದ್ಧದ ಪರಿಣಾಮವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಗಂಭೀರವಾಗಿ ಗಮನಿಸಬೇಕು ಎಂದು ಆ್ಯನಿ ಫ್ರಾಯ್ಡ್ ಒತ್ತಿ ಹೇಳುತ್ತಾರೆ. ಹಾಗಾಗಿ ಸಮಾಜದಲ್ಲಿ ಸೂಕ್ಷ್ಮವಾಗಿರುವ ಈ ಸಮೂಹದ ಭದ್ರತೆಗೆ ಮತ್ತು ಅವರ ಅಗತ್ಯಗಳಿಗೆ ಕೆಲಸ ಮಾಡುವವರ ಅವಶ್ಯಕತೆ ಯುದ್ಧಕಾಲದಲ್ಲಿ ಹೆಚ್ಚಿರುತ್ತದೆ.

ಯುದ್ಧ ಕಾಲದಲ್ಲಿ ತಂದೆ ಇಲ್ಲದ ಮಕ್ಕಳು ಹಾಸುಗೆ ಹಿಡಿದಿರುವ ತಾಯಂದಿರನ್ನು ನೋಡಿಕೊಳ್ಳಬೇಕಾದ ಅಗತ್ಯಗಳು ಬಂದಿದ್ದರಿಂದ ಅವರ ಮಾನಸಿಕ ಒತ್ತಡವು ಅನೇಕ ಕಾರಣಗಳಿಂದ ಹೆಚ್ಚಾಗುತ್ತಿತ್ತಿತ್ತು. ಪುನರಾವರ್ತಿತ ವೈಮಾನಿಕ ದಾಳಿಗಳಿರಬಹುದು, ಆರ್ಥಿಕ ಮುಗ್ಗಟ್ಟು, ಸಂಪರ್ಕ ಸಾಧಿಸಲಾಗದಂತಹ ಸಮಸ್ಯೆ, ಆಹಾರ ಮತ್ತು ವೈದ್ಯಕೀಯ ಅಗತ್ಯಗಳ ಕೊರತೆ, ಇತ್ಯಾದಿ ಸಮಸ್ಯೆಗಳು ಹಾಗೂ

ಆತ್ಮೀಯರನ್ನು ಮತ್ತು ಎಳೆವಯದಲ್ಲಿ ಆಧಾರವಾಗಿರುವವರನ್ನು ಕಳೆದುಕೊಳ್ಳುವ ಮಕ್ಕಳಿಗೆ ಮಾನಸಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಆಘಾತವನ್ನು ಉಂಟುಮಾಡುತ್ತಿತ್ತು.

ಆ್ಯನಿ ಹೇಳುವುದೇನೆಂದರೆ, ಯುದ್ಧ ಕಾಲದಲ್ಲಿ ಮಕ್ಕಳಿಗೆ ಉಂಟಾಗುವ ಆತಂಕ, ಒತ್ತಡ, ಸಮಸ್ಯೆ ಇತ್ಯಾದಿಗಳನ್ನು ವಿಶ್ಲೇಷಣೆ ಮಾಡುವ ಬದಲು ಮಕ್ಕಳ ಅಭಿವೃದ್ಧಿಗೆ, ಅವರ ಅಗತ್ಯಗಳ ಪೂರೈಗೆಗೆ ಮತ್ತು ಅವರ ರಕ್ಷಣೆಗೆ ಸತತವಾಗಿ ಕೆಲಸವನ್ನು ಮಾಡುವ, ಆ ಧ್ಯೇಯೋದ್ದೇಶಕ್ಕೆ ಬದ್ಧವಾಗಿರುವಂತಹ ಶಿಶು ಮತ್ತು ಮಕ್ಕಳ ಆರೈಕೆ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ಕೊಡಬೇಕು. ಅಥವಾ ಅಸ್ತಿತ್ವದಲ್ಲಿರುವ ಅಂತಹ ಕೇಂದ್ರಗಳ ಬಲ ಸಂವರ್ಧನೆಗೆ ಮುಂದಾಗಬೇಕು. ಅದಕ್ಕೆ ಹಣದ ಅಗತ್ಯವಿರುತ್ತದೆ. ಅದರ ಜೊತೆಗೆ ಬಹಳ ಮುಖ್ಯವಾಗಿ ಸೂಕ್ಷ್ಮ ಸಂವೇದನೆಯುಳ್ಳ, ವೃತ್ತಿಪರತೆಯುಳ್ಳ, ಸೂಕ್ಷ್ಮಗ್ರಾಹಿಗಳಾದ, ವೃತ್ತಿಯಲ್ಲಿ ಕೌಶಲ್ಯವುಳ್ಳಂತಹ ನಿಪುಣರು, ಮಕ್ಕಳನ್ನು ಪ್ರೀತಿಸುವವರು ಬೇಕಾಗಿರುತ್ತಾರೆ. ಸಮಾಜದ ವ್ಯವಸ್ಥೆಯಲ್ಲಿ ಎಂತಹುದೇ ಏರುಪೇರುಗಳಾದರೂ ಯಾವುದೇ ಕಾರಣಕ್ಕೂ ಮಕ್ಕಳ ಸಮೂಹವನ್ನು ನಿರ್ಲಕ್ಷಿಸಬಾರದು.

ನಿಗದಿತ ಅಥವಾ ಸೀಮಿತವಾದ ಆರ್ಥಿಕ ಮತ್ತು ಇತರ ಸಂಪನ್ಮೂಲಗಳಲ್ಲಿ ಇಂತಹ ಕೇಂದ್ರಗಳನ್ನು ಹೇಗೆ ನಿಭಾಯಿಸಬಹುದೆಂಬ ಕೌಶಲ್ಯವನ್ನೂ ಅಧ್ಯಯನ ಸೂಚಿಸುತ್ತದೆ. ಇವರ ಅಧ್ಯಯನದ ವ್ಯಾಪ್ತಿಗೆ ಒಳಪಟ್ಟ ಮಕ್ಕಳು ಒಂದು ವಾರದ ಮಗುವಿನಿಂದ ಹಿಡಿದು ಹದಿನಾಲ್ಕು ವರ್ಷದವರೆಗೂ ಇದ್ದರು.

ಓರ್ವ ದಾದಿ ಶೂ ರಿಪೇರಿ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳುವುದರಿಂದ ಹಿಡಿದು, ಮಗುವೊಂದು ಗೊಂಬೆಗಳನ್ನು ಮಾಡುವ ಯೋಜನೆಯವರೆಗೂ ಸಾಮೂಹಿಕ ಚಟುವಟಿಕೆಗಳು ವ್ಯವಸ್ಥಿತವಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಆರೋಗ್ಯ ಕಾರ್ಯಕ್ರಮ, ರೋಗ ನಿರೋಧಕ ಕಾರ್ಯಕ್ರಮಗಳು, ತರಕಾರಿಗಳ ತೋಟ, ದಾಖಲೆಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೆಲಸ, ಸಾರಿಗೆ ಮತ್ತು ಸಂಪರ್ಕ; ಇಂತಹವನ್ನೆಲ್ಲಾ ರೂಢಿಸುವುದರ ಜೊತೆಗೆ ವ್ಯಕ್ತಿಯು ಸಾಮಾಜಿಕವಾಗಿ ಬೆರೆಯುವ, ಸಮುದಾಯದ ಸೇವೆಯನ್ನು ತನ್ನ ಏಳ್ಗೆಗೂ, ತನ್ನ ಪ್ರತಿಭೆ ಮತ್ತು ಕೌಶಲ್ಯಗಳನ್ನು ಸಾಮುದಾಯಕ ಬೆಳವಣಿಗೆಗೆ ಸಲ್ಲಿಸುವುದನ್ನೂ ಕೂಡಾ ರೂಢಿಸಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಸಂಪೂರ್ಣ ಅನಾಥರಾಗಿರುವ ಮಕ್ಕಳನ್ನು ಒಳಗೊಳ್ಳುವಂತಹ ಕುಟುಂಬಗಳನ್ನು ರಚಿಸುವುದೂ ಕೂಡಾ ಅಲ್ಲಾಗಿತ್ತು. ಸಮಾಜದಲ್ಲಿ ಏನೇ ಏರುಪೇರಾದರೂ ತನ್ನನ್ನು ತಾನು ಮಾನಸಿಕವಾಗಿ, ಶಾರೀರಿಕವಾಗಿ ಮತ್ತು ಸಾಮಾಜಿಕವಾಗಿ ಗುಣ ಪಡಿಸಿಕೊಳ್ಳುವ ಮತ್ತು ಸಶಕ್ತನನ್ನಾಗಿಸಿಕೊಳ್ಳುವ ಕುಶಲತೆಗೆ ಆ ಕೇಂದ್ರಗಳಲ್ಲಿ ಪ್ರಾಶಸ್ತ್ಯ ಕೊಡಲಾಗಿತ್ತು.

ಹಾಗಾಗಿ ಈ ಕೃತಿ ಆಗಿನ ಯುದ್ಧದ ಸಮಯದ್ದಾದರೂ ಅನೇಕ ವಿಷಯಗಳಲ್ಲಿ ಪ್ರಸ್ತುತಕ್ಕೂ ಅನ್ವಯವಾಗುತ್ತದೆ. ಬಹಳ ಮುಖ್ಯವಾಗಿ ಇದನ್ನು ಕೇಸ್ ಸ್ಟಡಿಗಳನ್ನು ಆಧರಿಸಿ ಬರೆದಿದ್ದು, ಮಗುವು ವ್ಯಕ್ತಿಯಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಅಗತ್ಯವಾದ ಮನಶಾಸ್ತ್ರೀಯ ಒಳನೋಟಗಳನ್ನು, ತಾತ್ವಿಕವಾದ ಸೂಕ್ಷ್ಮ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತದೆ.

  • ಯೋಗೇಶ್ ಮಾಸ್ಟರ್

ಇದನ್ನೂ ಓದಿ: ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ಕೇಳಿದ್ದೀರಾ ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...