Homeಮುಖಪುಟ'ಯುದ್ಧ ಮತ್ತು ಮಕ್ಕಳು': ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

‘ಯುದ್ಧ ಮತ್ತು ಮಕ್ಕಳು’: ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

ಯುದ್ಧಕ್ಕೆ ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ, ಪ್ರತೀಕಾರ ಮತ್ತು ವಾಣಿಜ್ಯ ಹೀಗೆ ಹಲವು ಕಾರಣಗಳಿವೆ. ಕಾರಣ ಯಾವುದೇ ಇದ್ದರೂ ಅದು ಹುಟ್ಟಿ ಹಾಕುವುದು ಹಿಂಸೆ, ನೋವು ಮತ್ತು ಹತಾಶೆ. ಇದು ಮಾನವ ಸಂಬಂಧದ ಬೆಸುಗೆಯನ್ನು ಅವಮಾನಿಸುವುದಲ್ಲದೇ, ಸಂಬಂಧಗಳ ಬೆಳವಣಿಗೆಗೆ ಮರ್ಮಾಘಾತವನ್ನು ನೀಡುತ್ತದೆ.

- Advertisement -
- Advertisement -

ಎರಡನೇ ವಿಶ್ವಯುದ್ಧದ ಕಾಲದಲ್ಲಿ ಆ್ಯನಿ ಫ್ರಾಯ್ಡ್ (ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಮಗಳು) ಮತ್ತು ಅವಳ ಆತ್ಮೀಯರಾದ ಡೊರೋಥಿ ಬರ್ಲಿಂಗ್ ಹ್ಯಾಮ್ ಇಬ್ಬರೂ ಕೂಡಿ ತಮ್ಮ ಸಾಂದರ್ಭಿಕ ಅಧ್ಯಯನದ ಫಲವಾಗಿ ‘ವಾರ್ ಆ್ಯಂಡ್ ಚಿಲ್ಡ್ರನ್’ ಪ್ರಕಟಿಸಿದರು. ನಾಜೀ ಜರ್ಮನಿಯ ಆಕ್ರಮಣಕ್ಕೆ ತುತ್ತಾದ ಇಂಗ್ಲೆಂಡಿನ ಮಕ್ಕಳು ತಮ್ಮ ಪೋಷಕರಿಂದ ಅಗಲಬೇಕಾದ ವ್ಯಥೆಯ ವಾಸ್ತವ ದಾಖಲೆ ಅದು. ಆ್ಯನಿ ಮತ್ತು ಬರ್ಲಿಂಗ್ ಹ್ಯಾಮ್ ಇಬ್ಬರೂ ಯುದ್ಧ ಕಾಲದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತತ್ಕಾಲದ ಆಶ್ರಯವನ್ನು ನೀಡುವಂತಹ ವಾರ್ ನರ್ಸರಿಗಳಲ್ಲಿ ಕೆಲಸ ಮಾಡಿದ್ದರು. ಈ ಪುಸ್ತಕಕ್ಕೆ ಆ ಅನುಭವದ ಹಿನ್ನೆಲೆ ಇತ್ತು.

1936ರಲ್ಲಿ ಸ್ಪೇನ್ ದೇಶದ ಆಕ್ರಮಣಕ್ಕೆ ಮಕ್ಕಳು ತುತ್ತಾದಾಗಿನಿಂದ ಅಂತಹ ಮಹಾಯುದ್ಧಗಳ ಕಾಲದಲ್ಲಿ ಮಕ್ಕಳಿಗೆ ಪೋಷಣೆ ಮಾಡುವ ಸಾಕು ತಂದೆ ತಾಯಿಗಳನ್ನು ಗುರುತಿಸುವ ಮತ್ತು ಅವರಿಗೆ ಯೋಜನೆಗಳನ್ನು ರೂಪಿಸುವಂತಹ ಕೆಲಸಗಳು ನಡೆಯುತ್ತಿತ್ತು. ನಂತರ ಅದೇ ರೀತಿಯಲ್ಲಿ ಆ್ಯನಿ ಮತ್ತು ಬರ್ಲಿಂಗ್ ಹ್ಯಾಮ್ ಇಬ್ಬರೂ ಫ್ರೆಂಚ್, ಪೋಲಿಶ್, ಡಚ್ ಮತ್ತು ಬೆಲ್ಜಿಯನ್ ಮಕ್ಕಳ ಆರೈಕೆಗಾಗಿ ಫ್ರಾನ್ಸಿನಲ್ಲಿ ಕೆಲಸ ಮಾಡಿದರು. ಫ್ರಾನ್ಸಿನ ಪತನದ ನಂತರ ಅದೇ ಬಗೆಯ ಯುದ್ಧ ಕಾಲದ ಶಿಶುವಿಹಾರದ ಕೆಲಸವನ್ನು ಇಂಗ್ಲೆಂಡಿನಲ್ಲಿ ಮಾಡತೊಡಗಿದರು.

ವಾರ್ ನರ್ಸರಿಯಲ್ಲಿ 20,000ಕ್ಕೂ ಹೆಚ್ಚಿನ ಮಕ್ಕಳನ್ನು ಅಧ್ಯಯನ ಮಾಡಲಾಯಿತು. ಆ್ಯನಿಯ ಸಿಬ್ಬಂದಿಗಳಿಗೆಲ್ಲಾ ಇದೇ ಕೆಲಸ. ಆ್ಯನಿ ಮತ್ತು ಡೊರೋಥಿ ಇಂಗ್ಲೆಂಡಿನಲ್ಲಿ ಮೂರು ವಾರ್ ನರ್ಸರಿಗಳಿಗೆ ಮತ್ತು ಸಾಕು ಪೋಷಕರ ಯೋಜನೆಗೆ ನಿರ್ದೇಶಕರಾಗಿದ್ದರು.

ಯುದ್ಧ ಮತ್ತು ಮಕ್ಕಳು: ಈ ಕೃತಿ ಮನಶಾಸ್ತ್ರದಲ್ಲಿ ತುಂಬಾ ಗಮನೀಯವಾದ ಸ್ಥಾನವನ್ನು ಪಡೆಯುತ್ತದೆ. ಏಕೆಂದರೆ ಯುದ್ಧದ ಸಂಕಷ್ಟದಲ್ಲಿ ನೊಂದ ಮಕ್ಕಳ ಕಥನವನ್ನು ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ಇದರಲ್ಲಿ ದಾಖಲಿಸಲಾಗಿದೆ. ಮಕ್ಕಳ ಮೇಲಾಗುವ ಆಧುನಿಕ ಕಾಲದ ಯುದ್ಧದ ಪ್ರಭಾವಗಳನ್ನು ಮನಶಾಸ್ತ್ರೀಯ ಶಿಸ್ತಿನಲ್ಲಿ ಅಧ್ಯಯನ ಮಾಡಲಾಗಿದೆ.

ಯುದ್ಧಕ್ಕೆ ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ, ಪ್ರತೀಕಾರ ಮತ್ತು ವಾಣಿಜ್ಯ ಹೀಗೆ ಹಲವು ಕಾರಣಗಳಿವೆ. ಕಾರಣ ಯಾವುದೇ ಇದ್ದರೂ ಅದು ಹುಟ್ಟಿ ಹಾಕುವುದು ಹಿಂಸೆ, ನೋವು ಮತ್ತು ಹತಾಶೆ. ಇದು ಮಾನವ ಸಂಬಂಧದ ಬೆಸುಗೆಯನ್ನು ಅವಮಾನಿಸುವುದಲ್ಲದೇ, ಸಂಬಂಧಗಳ ಬೆಳವಣಿಗೆಗೆ ಮರ್ಮಾಘಾತವನ್ನು ನೀಡುತ್ತದೆ. ಹೂವಿನಂತೆ ಮನಸ್ಸು ಮತ್ತು ಮಾನುಷ ಸಂಬಂಧಗಳು ಅರಳುವ ಬದಲು ಕೆರಳುತ್ತವೆ ಮತ್ತು ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಯುದ್ಧದ ನಕಾರಾತ್ಮಕವಾದ ಪರಿಣಾಮವು, ನೇರವಾಗಿ ಅದರಲ್ಲಿ ಭಾಗಿಯಾಗುವವರ ಮೇಲಾಗುವುದಕ್ಕಿಂತ, ಸಮಾಜದ ಸೂಕ್ಷ್ಮ ಸಂವೇದನೆಯ ಸಮೂಹವಾದ ಮಹಿಳೆಯರ ಮತ್ತು ಮಕ್ಕಳ ಮೇಲೆ ಬಹಳ ಆಕ್ರಮಣಕಾರಿಯಾಗಿರುತ್ತದೆ. ಯಾವುದೇ ಸಮಾಜದ ಸಂತತಿ ಅಥವಾ ಪೀಳಿಗೆಯ ಸೃಷ್ಟಿ, ಉಳಿಕೆ, ಬಾಳಿಕೆ ಮತ್ತು ಮುಂದುವರಿಕೆಯು ಮಹಿಳೆಯರು ಮತ್ತು ಮಕ್ಕಳ ಮೇಲೆ ಅವಲಂಬಿತವಾಗಿರುವುದರಿಂದ ಅವರು ಯುದ್ಧದ ಪರಿಣಾಮವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಗಂಭೀರವಾಗಿ ಗಮನಿಸಬೇಕು ಎಂದು ಆ್ಯನಿ ಫ್ರಾಯ್ಡ್ ಒತ್ತಿ ಹೇಳುತ್ತಾರೆ. ಹಾಗಾಗಿ ಸಮಾಜದಲ್ಲಿ ಸೂಕ್ಷ್ಮವಾಗಿರುವ ಈ ಸಮೂಹದ ಭದ್ರತೆಗೆ ಮತ್ತು ಅವರ ಅಗತ್ಯಗಳಿಗೆ ಕೆಲಸ ಮಾಡುವವರ ಅವಶ್ಯಕತೆ ಯುದ್ಧಕಾಲದಲ್ಲಿ ಹೆಚ್ಚಿರುತ್ತದೆ.

ಯುದ್ಧ ಕಾಲದಲ್ಲಿ ತಂದೆ ಇಲ್ಲದ ಮಕ್ಕಳು ಹಾಸುಗೆ ಹಿಡಿದಿರುವ ತಾಯಂದಿರನ್ನು ನೋಡಿಕೊಳ್ಳಬೇಕಾದ ಅಗತ್ಯಗಳು ಬಂದಿದ್ದರಿಂದ ಅವರ ಮಾನಸಿಕ ಒತ್ತಡವು ಅನೇಕ ಕಾರಣಗಳಿಂದ ಹೆಚ್ಚಾಗುತ್ತಿತ್ತಿತ್ತು. ಪುನರಾವರ್ತಿತ ವೈಮಾನಿಕ ದಾಳಿಗಳಿರಬಹುದು, ಆರ್ಥಿಕ ಮುಗ್ಗಟ್ಟು, ಸಂಪರ್ಕ ಸಾಧಿಸಲಾಗದಂತಹ ಸಮಸ್ಯೆ, ಆಹಾರ ಮತ್ತು ವೈದ್ಯಕೀಯ ಅಗತ್ಯಗಳ ಕೊರತೆ, ಇತ್ಯಾದಿ ಸಮಸ್ಯೆಗಳು ಹಾಗೂ

ಆತ್ಮೀಯರನ್ನು ಮತ್ತು ಎಳೆವಯದಲ್ಲಿ ಆಧಾರವಾಗಿರುವವರನ್ನು ಕಳೆದುಕೊಳ್ಳುವ ಮಕ್ಕಳಿಗೆ ಮಾನಸಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಆಘಾತವನ್ನು ಉಂಟುಮಾಡುತ್ತಿತ್ತು.

ಆ್ಯನಿ ಹೇಳುವುದೇನೆಂದರೆ, ಯುದ್ಧ ಕಾಲದಲ್ಲಿ ಮಕ್ಕಳಿಗೆ ಉಂಟಾಗುವ ಆತಂಕ, ಒತ್ತಡ, ಸಮಸ್ಯೆ ಇತ್ಯಾದಿಗಳನ್ನು ವಿಶ್ಲೇಷಣೆ ಮಾಡುವ ಬದಲು ಮಕ್ಕಳ ಅಭಿವೃದ್ಧಿಗೆ, ಅವರ ಅಗತ್ಯಗಳ ಪೂರೈಗೆಗೆ ಮತ್ತು ಅವರ ರಕ್ಷಣೆಗೆ ಸತತವಾಗಿ ಕೆಲಸವನ್ನು ಮಾಡುವ, ಆ ಧ್ಯೇಯೋದ್ದೇಶಕ್ಕೆ ಬದ್ಧವಾಗಿರುವಂತಹ ಶಿಶು ಮತ್ತು ಮಕ್ಕಳ ಆರೈಕೆ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ಕೊಡಬೇಕು. ಅಥವಾ ಅಸ್ತಿತ್ವದಲ್ಲಿರುವ ಅಂತಹ ಕೇಂದ್ರಗಳ ಬಲ ಸಂವರ್ಧನೆಗೆ ಮುಂದಾಗಬೇಕು. ಅದಕ್ಕೆ ಹಣದ ಅಗತ್ಯವಿರುತ್ತದೆ. ಅದರ ಜೊತೆಗೆ ಬಹಳ ಮುಖ್ಯವಾಗಿ ಸೂಕ್ಷ್ಮ ಸಂವೇದನೆಯುಳ್ಳ, ವೃತ್ತಿಪರತೆಯುಳ್ಳ, ಸೂಕ್ಷ್ಮಗ್ರಾಹಿಗಳಾದ, ವೃತ್ತಿಯಲ್ಲಿ ಕೌಶಲ್ಯವುಳ್ಳಂತಹ ನಿಪುಣರು, ಮಕ್ಕಳನ್ನು ಪ್ರೀತಿಸುವವರು ಬೇಕಾಗಿರುತ್ತಾರೆ. ಸಮಾಜದ ವ್ಯವಸ್ಥೆಯಲ್ಲಿ ಎಂತಹುದೇ ಏರುಪೇರುಗಳಾದರೂ ಯಾವುದೇ ಕಾರಣಕ್ಕೂ ಮಕ್ಕಳ ಸಮೂಹವನ್ನು ನಿರ್ಲಕ್ಷಿಸಬಾರದು.

ನಿಗದಿತ ಅಥವಾ ಸೀಮಿತವಾದ ಆರ್ಥಿಕ ಮತ್ತು ಇತರ ಸಂಪನ್ಮೂಲಗಳಲ್ಲಿ ಇಂತಹ ಕೇಂದ್ರಗಳನ್ನು ಹೇಗೆ ನಿಭಾಯಿಸಬಹುದೆಂಬ ಕೌಶಲ್ಯವನ್ನೂ ಅಧ್ಯಯನ ಸೂಚಿಸುತ್ತದೆ. ಇವರ ಅಧ್ಯಯನದ ವ್ಯಾಪ್ತಿಗೆ ಒಳಪಟ್ಟ ಮಕ್ಕಳು ಒಂದು ವಾರದ ಮಗುವಿನಿಂದ ಹಿಡಿದು ಹದಿನಾಲ್ಕು ವರ್ಷದವರೆಗೂ ಇದ್ದರು.

ಓರ್ವ ದಾದಿ ಶೂ ರಿಪೇರಿ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳುವುದರಿಂದ ಹಿಡಿದು, ಮಗುವೊಂದು ಗೊಂಬೆಗಳನ್ನು ಮಾಡುವ ಯೋಜನೆಯವರೆಗೂ ಸಾಮೂಹಿಕ ಚಟುವಟಿಕೆಗಳು ವ್ಯವಸ್ಥಿತವಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಆರೋಗ್ಯ ಕಾರ್ಯಕ್ರಮ, ರೋಗ ನಿರೋಧಕ ಕಾರ್ಯಕ್ರಮಗಳು, ತರಕಾರಿಗಳ ತೋಟ, ದಾಖಲೆಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೆಲಸ, ಸಾರಿಗೆ ಮತ್ತು ಸಂಪರ್ಕ; ಇಂತಹವನ್ನೆಲ್ಲಾ ರೂಢಿಸುವುದರ ಜೊತೆಗೆ ವ್ಯಕ್ತಿಯು ಸಾಮಾಜಿಕವಾಗಿ ಬೆರೆಯುವ, ಸಮುದಾಯದ ಸೇವೆಯನ್ನು ತನ್ನ ಏಳ್ಗೆಗೂ, ತನ್ನ ಪ್ರತಿಭೆ ಮತ್ತು ಕೌಶಲ್ಯಗಳನ್ನು ಸಾಮುದಾಯಕ ಬೆಳವಣಿಗೆಗೆ ಸಲ್ಲಿಸುವುದನ್ನೂ ಕೂಡಾ ರೂಢಿಸಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಸಂಪೂರ್ಣ ಅನಾಥರಾಗಿರುವ ಮಕ್ಕಳನ್ನು ಒಳಗೊಳ್ಳುವಂತಹ ಕುಟುಂಬಗಳನ್ನು ರಚಿಸುವುದೂ ಕೂಡಾ ಅಲ್ಲಾಗಿತ್ತು. ಸಮಾಜದಲ್ಲಿ ಏನೇ ಏರುಪೇರಾದರೂ ತನ್ನನ್ನು ತಾನು ಮಾನಸಿಕವಾಗಿ, ಶಾರೀರಿಕವಾಗಿ ಮತ್ತು ಸಾಮಾಜಿಕವಾಗಿ ಗುಣ ಪಡಿಸಿಕೊಳ್ಳುವ ಮತ್ತು ಸಶಕ್ತನನ್ನಾಗಿಸಿಕೊಳ್ಳುವ ಕುಶಲತೆಗೆ ಆ ಕೇಂದ್ರಗಳಲ್ಲಿ ಪ್ರಾಶಸ್ತ್ಯ ಕೊಡಲಾಗಿತ್ತು.

ಹಾಗಾಗಿ ಈ ಕೃತಿ ಆಗಿನ ಯುದ್ಧದ ಸಮಯದ್ದಾದರೂ ಅನೇಕ ವಿಷಯಗಳಲ್ಲಿ ಪ್ರಸ್ತುತಕ್ಕೂ ಅನ್ವಯವಾಗುತ್ತದೆ. ಬಹಳ ಮುಖ್ಯವಾಗಿ ಇದನ್ನು ಕೇಸ್ ಸ್ಟಡಿಗಳನ್ನು ಆಧರಿಸಿ ಬರೆದಿದ್ದು, ಮಗುವು ವ್ಯಕ್ತಿಯಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಅಗತ್ಯವಾದ ಮನಶಾಸ್ತ್ರೀಯ ಒಳನೋಟಗಳನ್ನು, ತಾತ್ವಿಕವಾದ ಸೂಕ್ಷ್ಮ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತದೆ.

  • ಯೋಗೇಶ್ ಮಾಸ್ಟರ್

ಇದನ್ನೂ ಓದಿ: ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ಕೇಳಿದ್ದೀರಾ ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...