Homeನ್ಯಾಯ ಪಥರಣಕೇಕೆಯ ಮಾಧ್ಯಮಗಳ ನಡುವೆ ನಮ್ಮ ಕರ್ತವ್ಯ; ನ್ಯಾಯಪಥ ಸಂಪಾದಕೀಯ

ರಣಕೇಕೆಯ ಮಾಧ್ಯಮಗಳ ನಡುವೆ ನಮ್ಮ ಕರ್ತವ್ಯ; ನ್ಯಾಯಪಥ ಸಂಪಾದಕೀಯ

ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಜನರ ಜೀವದ ಜೊತೆಗೆ ತಮ್ಮ ಲಾಭಕ್ಕಾಗಿ ಚೆಲ್ಲಾಟವಾಡುತ್ತಿರುವ ಪತಂಜಲಿ ಸಂಸ್ಥೆ ಮತ್ತು ಅದರ ಸಂಸ್ಥಾಪಕ ಮತ್ತು ಒಡೆಯರ ಮೇಲೆ ತೆಗೆದುಕೊಂಡಿರುವ ಕ್ರಮಗಳು ಏನು?

- Advertisement -
- Advertisement -

ಗೆಳೆಯರೇ, ಕಳೆದ ವಾರ ಸಂಪಾದಕೀಯ ಟಿಪ್ಪಣಿಯಲ್ಲಿ ನಿವೇದಿಸಿಕೊಂಡಿದ್ದ ನನ್ನ ವೈಯಕ್ತಿಕ ಕೊರೊನ ಶಂಕೆಯ ಆತಂಕ ಕಳೆದಿದೆ. ಆದರೆ ರಾಜ್ಯದಲ್ಲಿ ಕೊರೊನ ಆತಂಕ ಇದೇ ಸಮಯದಲ್ಲಿ ದುಪ್ಪಟ್ಟು – ಮೂರು ಪಟ್ಟು ಬೆಳೆದಿದೆ. ಅದರ ಸುತ್ತ ಟಿವಿ ಮಾಧ್ಯಮಗಳು ನೂರು ಪಟ್ಟು ಭಯವನ್ನು ಜನರಲ್ಲಿ ಬೆಳೆಸಿವೆ. ಈ ಮಾಧ್ಯಮಗಳು ನಿಜವಾಗಿಯೂ ಒತ್ತಡ ಹಾಕಬೇಕಿದ್ದು, ಪ್ರಶ್ನಿಸಬೇಕಿದ್ದುದು ಸರ್ಕಾರವನ್ನು.

ಖಾಸಗಿ ಆಸ್ಪತ್ರೆಗಳನ್ನು ಈಗ ಕೋವಿಡ್ ಚಿಕಿತ್ಸೆ ನೀಡಲು ತೊಡಗಿಸಿಕೊಳ್ಳಲು ಸರ್ಕಾರ ನಿರ್ಧರಿಸಿ, ದರಪಟ್ಟಿಯನ್ನು ಸೂಚಿಸಿದೆ. ಯಾವುದೇ ನಿಖರತೆಯಿಲ್ಲದೆ ಸೊರಗಿರುವ ಈ ಸೂಚನೆಗಳು ಖಾಸಗಿ ಆಸ್ಪತ್ರೆಗಳಿಗೆ ಲಾಭದಾಯಕವಾಗಿರುವುದರ ವಿರುದ್ಧ ಮಾಧ್ಯಮಗಳು ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ತಿಳಿವು ಮೂಡಿಸಬೇಕಿತ್ತು. ಮಾಧ್ಯಮಗಳಿಗೆ ಮಹಾ ಮರೆವು!

ಈ ಸಂಚಿಕೆಯಲ್ಲಿ ಡಾ.ಅಖಿಲಾ ಮತ್ತು ಡಾ.ಸಿಲ್ವಿಯಾ ಅವರು ಸದ್ಯದ ಕೊರೊನ ಚಿಕಿತ್ಸೆಯ ನೀತಿಯ ಸಮಸ್ಯೆಗಳ ಮೇಲೆ ಚರ್ಚಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯದ ಬಗ್ಗೆ, ಖಾಸಗಿ ಆಸ್ಪತ್ರೆಗಳು ಸೃಷ್ಟಿಸಬಹುದಾದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ಚರ್ಚೆಗಳ ಸಮಯದಲ್ಲಿಯೇ ಕೊರೊನ ಚಿಕಿತ್ಸೆಯನ್ನು ನೀಡಲು ನಿರಾಕರಿಸಿ ಬೆಂಗಳೂರು ನಗರದಲ್ಲಿ ಆಸ್ಪತ್ರೆಗಳನ್ನು ಮುಚ್ಚುತ್ತಿರುವ ವರದಿಗಳು ಕೂಡ ಬರುತ್ತಿವೆ. ಈ ವಿಷಯಗಳನ್ನು ಕೂಡ ಸದ್ಯದ ದೊಡ್ಡ ಮಾಧ್ಯಮಗಳು ಚರ್ಚೆಗೆ ತೆಗೆದುಕೊಳ್ಳುವುದಿಲ್ಲ ಎಂಬುದು ತಿಳಿದಿರುವ ವಿಷಯವೇ. ಇದರ ಬಗ್ಗೆ ನಾವು ಮುಂದಿನ ದಿನಗಳಲ್ಲಿ ಬಯಲಿಗೆಳೆದು, ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಖಾಸಗಿ ಆಸ್ಪತ್ರೆಗಳು ತೋರುತ್ತಿರುವ ಸಣ್ಣತನವನ್ನು ಹಾಗೂ ಸರ್ಕಾರದ ಬೇಜವಾಬ್ದಾರಿತನವನ್ನು ಬಿಚ್ಚಿಡಲಿದ್ದೇವೆ.

ಈ ಬಿಕ್ಕಟ್ಟಿನ ಸಮಯದಲ್ಲಿಯೂ ಪಾರಂಪರಿಕ ಚಿಕಿತ್ಸಾ ಪದ್ಧತಿ ಆಯುರ್ವೇದದ ಬಗ್ಗೆ ಭಾರತದ ಜನರಿಗೆ ಇರುವ ಭಾವನಾತ್ಮಕ ಸಂಬಂಧವನ್ನು ದುರುಪಯೋಗಪಡಿಸಿಕೊಂಡ ಪತಂಜಲಿ ಸಂಸ್ಥೆಯ ಹಗರಣವೂ ನಡೆದಿದೆ. ಬಾಬಾ ರಾಮದೇವ್ ಸ್ಥಾಪಿಸಿದ ಈ ಕಂಪೆನಿಯು ಯಾವುದೇ ನಿಖರ ಪ್ರಯೋಗ ನಡೆಸದೆ, ಕೊರೊನಿಲ್ ಎಂಬ ಔಷಧ ಈ ಸಾಂಕ್ರಾಮಿಕ ರೋಗವನ್ನು ವಾಸಿ ಮಾಡಬಲ್ಲದು ಎಂಬ ಜಾಹೀರಾತಿನೊಂದಿಗೆ ಬಿಡುಗಡೆ ಮಾಡಿದ ಸುದ್ದಿಯನ್ನು ನೀವೆಲ್ಲರೂ ಗಮನಿಸಿರುತ್ತೀರಿ.

ಸಣ್ಣ ಪುಟ್ಟ ಟೀಕೆಯ ಟ್ವಿಟರ್ ಸಂದೇಶಗಳಿಗೆ ದೊಡ್ಡ ಕೇಸುಗಳನ್ನು ಹಾಕುವ ಈ ಸರ್ಕಾರಗಳು, ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಜನರ ಜೀವದ ಜೊತೆಗೆ ತಮ್ಮ ಲಾಭಕ್ಕಾಗಿ ಚೆಲ್ಲಾಟವಾಡುತ್ತಿರುವ ಪತಂಜಲಿ ಸಂಸ್ಥೆ ಮತ್ತು ಅದರ ಸಂಸ್ಥಾಪಕ ಮತ್ತು ಒಡೆಯರ ಮೇಲೆ ತೆಗೆದುಕೊಂಡಿರುವ ಕ್ರಮಗಳು ಏನು? ಇವುಗಳನ್ನು ಯಾವ ಮಾಧ್ಯಮಗಳು ಖಂಡಿಸಿ ಚರ್ಚೆ ಮಾಡಿದವು? ಇವೆಲ್ಲವೂ ದೇಶಪ್ರೇಮದ ಅಡಿಯಲ್ಲಿ ಬರುವುದಿಲ್ಲವೇ? ಈ ಸಂಚಿಕೆಯಲ್ಲಿ ಆಯುರ್ವೇದ ವೈದ್ಯೆ ಡಾ.ಸಾಮ್ನಾ ಅವರು ಹೇಗೆ ಇಂತಹ ಸಂಸ್ಥೆಗಳು ಆಯುರ್ವೇದವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂಬುದನ್ನು ಚರ್ಚಿಸಿದ್ದಾರೆ.

ಕೊರೊನ ತಂದೊಡ್ಡಿದ ಆರ್ಥಿಕ ಸಂಷ್ಟಗಳನ್ನು ನ್ಯಾಯಪಥ ಪತ್ರಿಕೆ ಹಲವು ವಾರಗಳ ಕಾಲ ಕವರ್ ಮಾಡಿದೆ. ಇದು ಮನರಂಜನಾ ಕ್ಷೇತ್ರಕ್ಕೂ ದೊಡ್ಡ ಸವಾಲನ್ನು ಒಡ್ಡಿದೆ. ಇದೇ ಸಂದರ್ಭದಲ್ಲಿ ಮೂಡಿದ ಹಲವು ಡಬ್ ಧಾರಾವಾಹಿಗಳು, ಡಬ್ಬಿಂಗ್ ಬಗ್ಗೆ ಮತ್ತೆ ಹೊಸ ಚರ್ಚೆಗಳನ್ನು ಎತ್ತಿವೆ. ರಾಮಾಯಣ – ಮಹಾಭಾರತದಂತಹ ಪುರಾಣಗಳನ್ನು ದೃಶ್ಯ ಮಾಧ್ಯಮದಲ್ಲಿ ಕಟ್ಟಿದ ಬಗೆ ಹೇಗೆ ಒಂದು ಪಕ್ಷದ ಸಿದ್ಧಾಂತವನ್ನು ಜನಪ್ರಿಯಗೊಳಿಸಿದವು ಎಂಬುದು ಹಳೆಯ ಚರ್ಚೆ.

ಈಗ ಡಬ್ಬಿಂಗ್ ಮೂಲಕವೂ ಇಂತಹ ಕಾರ್ಯಕ್ರಮಗಳೇ ಕನ್ನಡ ಭಾಷೆಗೆ ಬರುವುದಾದರೆ ಮತ್ತು ಇಲ್ಲಿ ಹುಟ್ಟಬಹುದಾದ ತಾತ್ವಿಕ ಪ್ರತಿರೋಧಗಳನ್ನು ಅವುಗಳು ಹತ್ತಿಕ್ಕಬಹುದಾದ ಸಂದರ್ಭ ಹೆಚ್ಚಾದರೆ ಡಬ್ಬಿಂಗ್ ಎಷ್ಟು ಉಪಯುಕ್ತ? ಅಲ್ಲದೆ ಡಬ್ ಮಾಡಿ ಪ್ರಸಾರ ಮಾಡುವುದು, ಇಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡುವುದಕ್ಕಿಂತ ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗಿರುವ ಸನ್ನಿವೇಶದಲ್ಲಿ, ಹಲವು ನಿರ್ಮಾಣ ಸಂಸ್ಥೆಗಳು ಧಾರಾವಾಹಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿವೆ. ಇದರಿಂದ ಹಲವು ನಟರು, ತಂತ್ರಜ್ಞರು ಉದ್ಯೋಗ ಕಳೆದುಕೊಳ್ಳುತ್ತಿರುವ ವರದಿಗಳು ಕಾಣಿಸಿಕೊಂಡಿವೆ.

ಇದೇ ಸಮಯದಲ್ಲಿ, ನಮ್ಮಲ್ಲಿ ಪ್ರಾದೇಶಿಕವಾಗಿ ತಯಾರಿಸಲು ಸಮಸ್ಯೆ ಇರುವ ವಿಜ್ಞಾನ ಸಂಬಂಧಿ, ಇತಿಹಾಸ – ಪರಿಸರ ಸಂಬಂಧಿ ಕಾರ್ಯಕ್ರಮಗಳು ಡಬ್ ಆಗಿ ಕನ್ನಡಿಗರಿಗೆ ಸಿಗಬಾರದೇ ಎಂಬ ಯಾವತ್ತಿನ ಪ್ರಶ್ನೆಯೂ ಮುಖ್ಯವಾಗುತ್ತದೆ. ಈ ಪರ-ವಿರೋಧಿ ಚರ್ಚೆಗಳನ್ನು ಬಿ.ಸುರೇಶ್ ಮತ್ತು ಅಮರ್ ಇಲ್ಲಿ ಮತ್ತೆ ನಿಮ್ಮ ಮುಂದಿಟ್ಟಿದ್ದಾರೆ. ಎರಡೂ ವಾದಗಳ ಸಮನ್ವಯದ ಅಗತ್ಯತೆ ಕಂಡುಬಂದಿದೆ ಮತ್ತು ಇದು ಚರ್ಚೆಯನ್ನು ಮತ್ತಷ್ಟು ವಿಸ್ತರಿಸಲಿದೆ.

ಕಳೆದ ಸಂಚಿಕೆಯಲ್ಲಿ ಚೈನಾದ ಜೊತೆಗಿನ ವಿವಾದದ ಕುರಿತು ಮೂರು ಲೇಖನಗಳು ಇದ್ದವು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಸಕಾರಾತ್ಮಕ ಬೆಳವಣಿಗೆ ನಮಗೆ ಕಂಡುಬಂದಿಲ್ಲ. ಎಂದಿನಂತೆ ಮಾಧ್ಯಮಗಳು ಜಿಂಗೋಯಿಸಂ ಸಂಭ್ರಮಿಸುವುದನ್ನೇ ಮುಂದುವರೆಸಿವೆ.

ಈ ಜಿಂಗೋಯಿಸಂ ನಡುವೆ ತಮಿಳುನಾಡಿನಲ್ಲಿ ಪೊಲೀಸರ ದೌರ್ಜನ್ಯದಿಂದ ಪ್ರಾಣ ಕಳೆದುಕೊಂಡ ಜಯರಾಜ್-ಬೆನಿಕ್ಸ್ (ಅಪ್ಪಮಗ) ಬಗ್ಗೆ ನಮ್ಮ ದೇಶದಲ್ಲಿ ಸಾರ್ವಜನಿಕ ಆಕ್ರೋಶ ಮೂಡಲೇ ಇಲ್ಲ. ಈ ದೌರ್ಜನ್ಯದ ಬಗ್ಗೆ ತೇಜಸ್ವಿ ಈ ಸಂಚಿಕೆಯಲ್ಲಿ ಬರೆದಿದ್ದು, ಪೊಲೀಸ್ ಸಂಸ್ಥೆಯಲ್ಲಿ ಅಗತ್ಯವಿರುವ ಸುಧಾರಣೆಗಳ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ನಾವು ಲೇಖನಗಳನ್ನು ಪ್ರಕಟಿಸಲಿದ್ದೇವೆ. ವಾರವಾರದಂತೆ ಅಂಕಣಗಳು ಮತ್ತು ವಿಶೇಷ ಬರಹಗಳು ನಿಮಗೆ ಇಷ್ಟವಾಗಿ ಚಿಂತನೆಗೆ ಹಚ್ಚಬಲ್ಲವು ಎಂಬ ನಂಬಿಕೆ ಇದೆ. ಮುಂದಿನ ವಾರ ಇನ್ನಷ್ಟು ಹೊಸತನದಿಂದ ನಿಮ್ಮ ಮುಂದೆ ಬರಲಿದ್ದೇವೆ.


ಇದನ್ನೂ ಓದಿ: ಪತಂಜಲಿಯಿಂದ ಕೊರೊನಾ ಗುಣಪಡಿಸಬಹುದೆಂದು ನಾವು ಹೇಳಿಲ್ಲ: ಸಿಇಒ ಆಚಾರ್ಯ ಬಾಲಕೃಷ್ಣ


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...