Homeಮುಖಪುಟಶಾಸ್ತ್ರೀಯ 1: ಪರಂಪರೆಯ ವಸಾಹತೀಕರಣ ಮತ್ತು ಚರಿತ್ರೆಯ ಮರುಕಟ್ಟುವಿಕೆಯ ಅಗತ್ಯ

ಶಾಸ್ತ್ರೀಯ 1: ಪರಂಪರೆಯ ವಸಾಹತೀಕರಣ ಮತ್ತು ಚರಿತ್ರೆಯ ಮರುಕಟ್ಟುವಿಕೆಯ ಅಗತ್ಯ

ಲಿಖಿತ ಆಕರಗಳ ಒಡಲಲ್ಲಿ ಸುಪ್ತವಾಗಿರುವ ಇಂಜನಿಯರಿಂಗ್, ಕುಂಬಾರಿಕೆ, ಕಂಬಾರಿಕೆ, ಚಮ್ಮಾರಿಕೆ, ಬಡಿಗತನ, ಅಕ್ಕಸಾಲಿ ಇತ್ಯಾದಿ ಉದ್ಯಮಗಳನ್ನು ಮತ್ತು ಅವರ ಭೌದ್ದಿಕತೆಯನ್ನು ಯಾವ ಪೇಟೆಂಟ್ ಇಲ್ಲದೇ ಹೈಜಾಕ್ ಮಾಡಿದ ಕಾಲಘಟ್ಟದ ಸತ್ಯವನ್ನು ಈಗ ಪುನರುಜ್ಜೀವನಗೊಳಿಸಬೇಕಿದೆ.

- Advertisement -
- Advertisement -

ಭಾರತದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಚರಿತ್ರೆ ರಚನೆಯಾಗಲು ಬಹುಮುಖ್ಯವಾದ ಆಕರಗಳೆಂದರೆ ಶಾಸನಗಳು. ಕರ್ನಾಟಕ ಚರಿತ್ರೆ ಮತ್ತು ಸಾಂಸ್ಕೃತಿಕ ಇತಿಹಾಸದ ನುಡಿ ನಿರೂಪಣೆಯೂ ವಸಾಹತೀಕರಣದ ಫಲ. ಬಿ.ಎಲ್.ರೈಸ್, ಇ.ಪಿ.ರೈಸ್, ಕರ್ನಲ್ ಮೆಕೆಂಝಿ ಮುಂತಾದ ಬ್ರಿಟಿಷ್ ಮಿಷನರಿಗಳಿಗೆ ಸೇರಿದ ಈ ವ್ಯಕ್ತಿಗಳಂತೆ ಹಲವರು ಸಂಗ್ರಹ ಮಾಡಿದ ಬಹುಸಂಖ್ಯೆಯ ಶಾಸನಗಳು ಮತ್ತು ಹಸ್ತಪ್ರತಿಗಳು ಕನ್ನಡ ನಾಡಿನ ಗತಕಾಲದ ಚಾರಿತ್ರಿಕ ಚಹರೆಯ ಮುಖ್ಯವಾದ ಸಾಮಗ್ರಿಗಳು.

ಬ್ರಿಟಿಷ್ ವಸಾಹತುಶಾಹಿ ರಚನೆಗಳು ಪರಂಪರೆಯೊಂದಿಗೆ ಶಾಸನ ಮತ್ತು ಹಸ್ತಪ್ರತಿಗಳನ್ನು ಮುಖಾಮುಖಿ ಮಾಡಿದವು. ಆದರ ಮೊದಲ ಅಧ್ಯಯನದ ಈ ಘಟ್ಟದಲ್ಲಿ ಸಂಗ್ರಹ, ಸಂಪಾದನೆ, ವಿವರಣೆ ನೆಲೆಯಲ್ಲಿ ತನ್ನ ಚಹರೆಯನ್ನು ಗುರುತಿಸಿಕೊಂಡಿತು. ಈ ಚರಿತ್ರೆಕಾರರ ಮಾದರಿಯಲ್ಲಿ ನಮ್ಮ ದೇಸಿ ವಿದ್ವಾಂಸರು ಎರಡನೇ ಕಾಲಘಟ್ಟದಲ್ಲಿ ಆಕರಮುಖಿ ಅಧ್ಯಯನಕ್ಕೆ ತೆರೆದುಕೊಂಡರು. ಆದರೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಭೌದ್ದಿಕ ಅಹಂಕಾರಿಗಳು ನಮ್ಮ ನೆಲದ ನಿಜ ಚರಿತ್ರೆಯನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಂಡವು.

ಇದರ ಮುಂದುವರಿಕೆಯಾಗಿ ಕನ್ನಡದ ಅಕ್ಷರ ಕಲಿತುಕೊಂಡ ಇಂಗ್ಲೀಷ್ ಶಿಕ್ಷಣ ಪಡೆದ ದೇಸಿ ವಿದ್ವಾಂಸರ ಪಡೆಯು ಸಾಮ್ರಾಜ್ಯಶಾಹಿ ಬೌದ್ಧಿಕ ರಾಜಕಾರಣದ ಜೊತೆ ಒಳರಾಜಿ ಮಾಡಿಕೊಂಡಂತೆ ಮೇಲ್‌ಚಹರೆಯ ಚರಿತ್ರೆಯ ಬರೆಹಕ್ಕೆ, ಇಲ್ಲವೇ ಧರ್ಮಾಧಾರಿತ ಚರಿತ್ರೆಯ ರಚನೆಗೆ ಮುಂದಾದರು. ಇದೊಂದು ಬಗೆಯಲ್ಲಿ ಒಂದು ಕೋಮಿನ ಚರಿತ್ರೆ, ಒಂದು ವರ್ಗದ ಚರಿತ್ರೆ ಆಗಿದ್ದುಕೊಂಡು ಸಂಸ್ಕೃತಿಯ ರೂಪದಂತೆ ನಮ್ಮೆದುರಿಗೆ ಕಾಣುತ್ತಿದೆ ಅಷ್ಟೇ.

ಕರ್ನಾಟಕದ ಶಾಸನ, ಹಸ್ತಪ್ರತಿ, ನಾಣ್ಯ ಮತ್ತು ಸ್ಮಾರಕಗಳ ಸಂಶೋಧನೆ ಅಧ್ಯಯನಗಳು ವಿಭಿನ್ನ ಆಯಾಮಗಳಲ್ಲಿ ನಡೆದಿಲ್ಲ. ಬಹುತೇಕ ಕೆಳ ಚಲನೆಯ ಸತ್ಯಗಳು ಗೈರುಹಾಜರಿಯಲ್ಲಿವೆ. ಶಾಸನದಂತಹ ರಾಜಶಾಹಿ ಕಾನೂನು ಬರಹದ ಒಳಗಡೆ ಸಂಸ್ಕೃತಿ ರೂಪಿಸುವ ಜನ ಸಮುದಾಯದ ಇತಿಹಾಸ ಇದೆಯೆಂಬುದು ಮುಖ್ಯ. ಸಬಾಲ್ಟ್ರನ್ ನೆಲೆಯಲ್ಲಿ ಅದು ಕೇವಲ ಸಾಹಿತ್ಯದ ಅಧ್ಯಯನವಾಗಿದೆಯೇ ಹೊರತು ಚರಿತ್ರೆಯ ಅಧ್ಯಯನವು ಈಗತಾನೆ ಆರಂಭವಾಗಿದೆ ಅಷ್ಟೇ. ಆದರೆ ಇದು ತೋರುಂಬ ಲಾಭ. ತಳಸಮುದಾಯ ಮತ್ತು ಹಿಂದುಳಿದ ವರ್ಗಗಳ ಲೋಕದಿಂದ ಬಂದ ಬೌದ್ಧಿಕ ಜಗತ್ತು ಶಾಸನ, ನಾಣ್ಯ, ಹಸ್ತಪ್ರತಿಗಳ ಸಬಾಲ್ಟ್ರನ್ ಮಾದರಿಯ ಫಲಿತಗಳನ್ನು ನಿರೂಪಿಸಬೇಕಾದ ತುರ್ತು ಇದೆ. ಶಾಸನದಂತಹ ಶಾಸ್ತ್ರೀಯ ಭೌತಿಕ ಆಕರಗಳಿಗೆ ಅಂತರ್‌ಶಿಸ್ತೀಯ ನೆಲೆಯಿಂದ, ಅವುಗಳ ಆಂತರಿಕ ಸಾಂಸ್ಕೃತಿಕ ರಾಜಕಾರಣದ ಸ್ವರೂಪವನ್ನು ಕಟ್ಟಿಕೊಡಬೇಕು.

ವೀರಗಲ್ಲು, ಮಾಸ್ತಿಗಲ್ಲು, ನಿಸಧಿಗಲ್ಲುಗಳನ್ನು ನಮ್ಮ ಪರಂಪರೆಯ ಚರಿತ್ರೆಯ ಹೆಮ್ಮೆ ಎಂದು ಕಳೆದ ಶತಮಾನದುದ್ದಕ್ಕೂ ಚರಿತ್ರೆ ಬರೆದವರು ಆಖ್ಯಾನ ಮಾಡಿದ್ದಾರೆ. ವೀರ ಮರಣವಾದವರು ಯಾವ ಸಾಮುದಾಯಿಕ ಹಿನ್ನಲೆಯಿಂದ ಬಂದವರು? ಅವರ ನೆಲೆ- ಹಿನ್ನಲೆಗಳೇನು? ಪ್ರಭುತ್ವದ ರಚನೆಗೆ ಅವರ ಕೊಡುಗೆ ಏನು? ಹಾಗೂ ಪ್ರಭುತ್ವದಲ್ಲಿ ಅವರಿಗಿದ್ದ ಸ್ಥಾನಮಾನಗಳೇನು? ಎಂಬ ಸತ್ಯಗಳು ಪರದೆಯ ಹಿಂದೆ ಉಳಿದಿವೆ. ಒಂದು ಪ್ರಭುತ್ವದ ರಚನೆಗೆ ಕಾರಣರಾದ ಈ ವೀರರ ಹೊಸ ಚರಿತ್ರೆಯನ್ನು ಕಟ್ಟಬೇಕಿದೆ. ನಾಡಿನ ತುಂಬ ಕಾಣುವ ಮಾಸ್ತಿಗಲ್ಲುಗಳು ಒಂದು ದೇಶದ ಹೆಮ್ಮೆ ಆಗಬಲ್ಲುವೇ?

ಅದೆಷ್ಟೋ ಮಹಿಳೆಯರ ಪ್ರಾಣಗಳು ಆಹುತಿಯಾದ ನೆಲೆಗಳನ್ನು ಮತ್ತೆ ಮತ್ತೆ ವರ್ತಮಾನದ ಸಂದರ್ಭದಲ್ಲಿಟ್ಟು “ರಿಚೆಕ್” ಮಾಡಬೇಕಿದೆ. ಧರ್ಮದ ಚೌಕಟ್ಟಿನೊಳಗಡೆ ನಿಸಧಿ ಮರಣ ಹೊಂದಿದ ಅಮಾಯಕ ಧರ್ಮ ಅನುಸರಣೆಕಾರರ ಹಿಂದಿರುವ ಪ್ರಲೋಭನೆಗಳನ್ನು ಈ ಕಾಲದಲ್ಲಿ ಅಧ್ಯಯನ ಮಾಡಬೇಕಿದೆ. ವಾಸ್ತವವಾಗಿ ಇಂತಹ ಸ್ಮಾರಕಗಳ ಆಂತರಿಕ ಕವಾಟದಲ್ಲಡಗಿದ ಶೋಷಣೆಯ ಸ್ವರೂಪವನ್ನು ಪ್ರತಿಪಾದಿಸಬೇಕಾಗಿದೆ. ಈ ನೆಲದಲ್ಲಿ ಶಾಸ್ತ್ರೀಯ (ಕ್ಲಾಸಿಕಲ್) ಆಗಿರಲು ಯಾವ ಆಕರಕ್ಕೆ ಸಾಧ್ಯವಿದೆ? ನಿಜವಾಗಿಯೂ ಅದು ಮೊದಲು ದೇಸಿ, ಜನಪದ, ಜನರೂಪಿತ. ಇಂತಹ ಸೈದ್ಧಾಂತಿಕ ಸಂಶ್ಲೇಷಣೆಯನ್ನು ನಮ್ಮ ಪಂಡಿತಮಾನ್ಯ ಚರಿತ್ರೆಕಾರರು ಗಮನಿಸಲೇ ಇಲ್ಲ. ಅಥವಾ ಮುಸುಕು ಹಾಕಿಟ್ಟಿರುವುದು ನಿಚ್ಚಳವಾಗಿದೆ.

ಶಾಸನ ಇತ್ಯಾದಿ ಚರಿತ್ರೆಯ ಆಕರಗಳು ಎಡೆಪಡೆಯುವ ಹಿಂದಣ ಹುನ್ನಾರಗಳನ್ನು ವಸಾಹತು ಮತ್ತು ವಸಾಹತೋತ್ತರ ಸಾಮಾಜಿಕ ಸಂದರ್ಭಗಳ ಜೊತೆ ಹಾಜರುಪಡಿಸಬೇಕಾಗುತ್ತದೆ. ಆಕರ ಸಾಮಗ್ರಿಗಳ ಆಂತರಿಕ ಆರ್ತನಾದದ ಕ್ಷೀಣ ಸ್ವರವನ್ನು ಎಲ್ಲರಿಗೂ ಕೇಳಿಸುವಂತೆ ಮಾಡಬೇಕಿದೆ. ಪ್ರಭುತ್ವಶಾಹಿ, ಪುರೋಹಿತಶಾಹಿಗಳ ಒಡಲಾಗಿವೆಯೆಂಬಂತೆ ತೋರುವ ಆಕರಗಳ ಒಳಗೆ ಈ ನೆಲದ ಮಕ್ಕಳ, ಶ್ರಮಜೀವಿಗಳ ಬಹುಧ್ವನಿಗಳು ಅಡಗಿವೆ. ಇಲ್ಲಿಯವರೆಗೂ ಚರಿತ್ರೆಯ ಅಧ್ಯಯನಗಳನ್ನು “ಯಜಮಾನ ಮಾದರಿ”ಯಲ್ಲಿ ತಂದಿಟ್ಟ ಪಳಯುಳಿಕೆಯನ್ನೆ ವಿಶ್ವವಿದ್ಯಾಲಯಗಳು ಸಂಶೊಧನೆಯ ವೈಧಾನಿಕತೆಯನ್ನಾಗಿ ಮಾಡಿಕೊಂಡ ದುರಂತವು ನಮ್ಮೆದುರಿಗಿದೆ. ವರ್ತಮಾನದ ಸಂದರ್ಭದಲ್ಲಿ ಪರ್ಯಾಯವಾಗಿ ಧರ್ಮ, ವರ್ಗ, ವರ್ಣ, ಲಿಂಗ ನಿಯಂತ್ರಣದಲ್ಲಿರುವ ಮೀಡಿಯಾ ಕಂಟ್ರೋಲ್‌ನ್ನು ಕಳಚಿಕೊಂಡು ಹೊಸರೂಪ ಧರಿಸಬೇಕಿದೆ.

ವಿಕಾಸ ನಾಗರಿಕತೆ ಸಂಸ್ಕೃತಿಯನ್ನು ಈ ನೆಲದಲ್ಲಿ ಕಟ್ಟಿದ ಸಮುದಾಯಗಳ ಪ್ರಾತಿನಿಧಿಕ ಆಕರ ಸಾಮಗ್ರಿಗಳು ಕರ್ನಾಟಕದ ಬೆಟ್ಟ-ಗುಡ್ಡಗಳಲ್ಲಿ ಹೇರಳವಾಗಿವೆ. ಇವು ಅಡವಿ ಮಕ್ಕಳ ಚರಿತ್ರೆಗಳಲ್ಲವೇ? ಜೊತೆಗೆ ಈ ಸಮುದಾಯಗಳು ರೂಪಿಸಿಕೊಂಡ ಭಾಷಿಕ ಸಂಕಥನವು ರೋಚಕವಾಗಿದೆ. ಭಾಷೆಯು ಕ್ಲಾಸಿಕಲ್ ಎಂದು ಶಾಸನಗಳ ಮುಖೇನ ಹೇಳುವಾಗಲೂ ಜನ ಭಾಷೆಯ ಸ್ವರೂಪವನ್ನು ಮುಖ್ಯವಾಗಿ ಗಮನಿಸಬೇಕು. ಶಾಸನೋಕ್ತ ವೃತ್ತಿಗಳ ಸಮಗ್ರ ಅಧ್ಯಯನ ಮಾಡುವುದಿರಲೀ ಪ್ರಾಸ್ತಾವಿಕ ಬರಹಗಳೂ ಧರ್ಮ ನಿಯಂತ್ರಣವಾದಿ ಚೌಕಟ್ಟಿನಲ್ಲಿ ಬಂಧಿಸಲ್ಪಟ್ಟಿವೆ. ಭಾಷೆಯನ್ನು ಕಾಪಿಟ್ಟುಕೊಂಡು ಬಂದ ಅಕ್ಷರೋದ್ಯಮದ ಸಂವಹನಗಳಾದ ಹಸ್ತಪ್ರತಿ, ನಾಣ್ಯ, ಶಾಸನಗಳ ಹಿಂದಿನ ಜನರ ಶ್ರಮದ ನೆಲೆಯನ್ನು ಬಿಡಿಸಬೇಕು.

ಹಾಗೆಯೇ ದೇವಾಲಯ ಮತ್ತು ರಥಗಳ ಮಹತ್ತರ ನಿರ್ಮಾಣ, ಕರಕುಶಲಗಾರಿಕೆ ಅಜ್ಞಾತ ಇಂಜಿನಿಯರಿಂಗ್ ಕುರಿತ ಯಾವ ಪಾಠಗಳನ್ನು ನಾವು ಕಲಿತಿದ್ದೇವೆ? ಹಾಗೆಯೇ ಕನ್ನಡ ರಾಜಮನೆತನಗಳ ಚರಿತ್ರೆಯಲ್ಲಿಯೂ ಕುಲದ ಕಾರಣಕ್ಕಾಗಿ ಪ್ರಸಿದ್ಧ ದೊರೆಗಳು ಅವರ ಲೋಕೋಪಯೋಗಿ ಕೆಲಸಗಳು ಪಠ್ಯಗಳಲ್ಲಿ ಗೈರುಹಾಜರಾದ ಕೆಲ ಪ್ರಸಂಗಗಳಿವೆ. ಇವೆಲ್ಲಾ ದೊಡ್ಡ ಪ್ರಶ್ನೆಗಳು.

ಭೂತ ಮತ್ತು ವರ್ತಮಾನದ ಸಂಬಂಧಗಳನ್ನು ಬೆಸೆಯುವ ತಳಸಮುದಾಯಗಳ ವೃತ್ತಿಪರತೆಯನ್ನು ಕಟ್ಟಿಕೊಡುವ ಕೆಲಸ ಸಾಕಷ್ಟಿದೆ. ನಮ್ಮ ಗತಕಾಲದ ಕೇಳು ಮತ್ತು ಹೇಳು ಪರಂಪರೆಯು ಶಾಸ್ತ್ರೀಯವಾದದ್ದು ಯಾವ ಸಂದರ್ಭದಲ್ಲಿ? ಎಂಬುದನ್ನು ಹುಡುಕಬೇಕು. ಲಿಖಿತ ಆಕರಗಳ ಒಡಲಲ್ಲಿ ಸುಪ್ತವಾಗಿರುವ ಇಂಜನಿಯರಿಂಗ್, ಕುಂಬಾರಿಕೆ, ಕಂಬಾರಿಕೆ, ಚಮ್ಮಾರಿಕೆ, ಬಡಿಗತನ, ಅಕ್ಕಸಾಲಿ ಇತ್ಯಾದಿ ಉದ್ಯಮಗಳನ್ನು ಮತ್ತು ಅವರ ಭೌದ್ದಿಕತೆಯನ್ನು ಯಾವ ಪೇಟೆಂಟ್ ಇಲ್ಲದೇ ಹೈಜಾಕ್ ಮಾಡಿದ ಕಾಲಘಟ್ಟದ ಸತ್ಯವನ್ನು ಈಗ ಪುನರುಜ್ಜೀವನಗೊಳಿಸಬೇಕಿದೆ. ಇಂತಹ ಕೆಲವು ಸಂಗತಿಗಳ ಕೆಲವು ಟಿಪ್ಪಣಿಗಳನ್ನು ಈ ಅಂಕಣದಲ್ಲಿ ಮಂಡಿಸುವ ಪ್ರಯತ್ನ ಮುಂದಿನ ಕಂತುಗಳಲ್ಲಿ ಮಾಡಲಾಗುತ್ತದೆ.

ಡಾ. ಜಾಜಿ ದೇವೇಂದ್ರಪ್ಪ, ಸಂಯೋಜಕರು, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ


ಇದನ್ನೂ ಓದಿ: 35,000 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ವಜಾ: 8 ಅತಿಥಿ ಉಪನ್ಯಾಸಕರ ಆತ್ಮಹತ್ಯೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚರಿತ್ರೆಯ ಮರು ಅವಲೋಕನ ಮಾಡುವ ವಿಧಾನ ಮತ್ತು ಸಬಾಲ್ಟ್ರನ್ ಅಧ್ಯಯನ ಇಂದಿನ ಅಗತ್ಯ… ಗತಕಾಲದ ಹೇಳು ಮತ್ತು ಕೇಳು ಸಂಪ್ರದಾಯ ಗಳು ಶಾಸ್ತ್ರೀಯ ಆದದ್ದು ಎಂದು ಎಂಬುದರ ಅವಲೋಕನ ಮತ್ತು ರೀಚೆಕ್… ಹೀಗೆ ಅನೇಕ ವಿಚಾರಗಳನ್ನು ಶಾಸನ ಚರಿತ್ರೆಯ ಕುರಿತ ಡಾ. ಜಾಜಿ ದೇವೇಂದ್ರಪ್ಪ ಅವರ ಬರಹ ಅರ್ಥಪೂರ್ಣ….

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...