Homeಮುಖಪುಟಶಾಸ್ತ್ರೀಯ 1: ಪರಂಪರೆಯ ವಸಾಹತೀಕರಣ ಮತ್ತು ಚರಿತ್ರೆಯ ಮರುಕಟ್ಟುವಿಕೆಯ ಅಗತ್ಯ

ಶಾಸ್ತ್ರೀಯ 1: ಪರಂಪರೆಯ ವಸಾಹತೀಕರಣ ಮತ್ತು ಚರಿತ್ರೆಯ ಮರುಕಟ್ಟುವಿಕೆಯ ಅಗತ್ಯ

ಲಿಖಿತ ಆಕರಗಳ ಒಡಲಲ್ಲಿ ಸುಪ್ತವಾಗಿರುವ ಇಂಜನಿಯರಿಂಗ್, ಕುಂಬಾರಿಕೆ, ಕಂಬಾರಿಕೆ, ಚಮ್ಮಾರಿಕೆ, ಬಡಿಗತನ, ಅಕ್ಕಸಾಲಿ ಇತ್ಯಾದಿ ಉದ್ಯಮಗಳನ್ನು ಮತ್ತು ಅವರ ಭೌದ್ದಿಕತೆಯನ್ನು ಯಾವ ಪೇಟೆಂಟ್ ಇಲ್ಲದೇ ಹೈಜಾಕ್ ಮಾಡಿದ ಕಾಲಘಟ್ಟದ ಸತ್ಯವನ್ನು ಈಗ ಪುನರುಜ್ಜೀವನಗೊಳಿಸಬೇಕಿದೆ.

- Advertisement -
- Advertisement -

ಭಾರತದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಚರಿತ್ರೆ ರಚನೆಯಾಗಲು ಬಹುಮುಖ್ಯವಾದ ಆಕರಗಳೆಂದರೆ ಶಾಸನಗಳು. ಕರ್ನಾಟಕ ಚರಿತ್ರೆ ಮತ್ತು ಸಾಂಸ್ಕೃತಿಕ ಇತಿಹಾಸದ ನುಡಿ ನಿರೂಪಣೆಯೂ ವಸಾಹತೀಕರಣದ ಫಲ. ಬಿ.ಎಲ್.ರೈಸ್, ಇ.ಪಿ.ರೈಸ್, ಕರ್ನಲ್ ಮೆಕೆಂಝಿ ಮುಂತಾದ ಬ್ರಿಟಿಷ್ ಮಿಷನರಿಗಳಿಗೆ ಸೇರಿದ ಈ ವ್ಯಕ್ತಿಗಳಂತೆ ಹಲವರು ಸಂಗ್ರಹ ಮಾಡಿದ ಬಹುಸಂಖ್ಯೆಯ ಶಾಸನಗಳು ಮತ್ತು ಹಸ್ತಪ್ರತಿಗಳು ಕನ್ನಡ ನಾಡಿನ ಗತಕಾಲದ ಚಾರಿತ್ರಿಕ ಚಹರೆಯ ಮುಖ್ಯವಾದ ಸಾಮಗ್ರಿಗಳು.

ಬ್ರಿಟಿಷ್ ವಸಾಹತುಶಾಹಿ ರಚನೆಗಳು ಪರಂಪರೆಯೊಂದಿಗೆ ಶಾಸನ ಮತ್ತು ಹಸ್ತಪ್ರತಿಗಳನ್ನು ಮುಖಾಮುಖಿ ಮಾಡಿದವು. ಆದರ ಮೊದಲ ಅಧ್ಯಯನದ ಈ ಘಟ್ಟದಲ್ಲಿ ಸಂಗ್ರಹ, ಸಂಪಾದನೆ, ವಿವರಣೆ ನೆಲೆಯಲ್ಲಿ ತನ್ನ ಚಹರೆಯನ್ನು ಗುರುತಿಸಿಕೊಂಡಿತು. ಈ ಚರಿತ್ರೆಕಾರರ ಮಾದರಿಯಲ್ಲಿ ನಮ್ಮ ದೇಸಿ ವಿದ್ವಾಂಸರು ಎರಡನೇ ಕಾಲಘಟ್ಟದಲ್ಲಿ ಆಕರಮುಖಿ ಅಧ್ಯಯನಕ್ಕೆ ತೆರೆದುಕೊಂಡರು. ಆದರೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಭೌದ್ದಿಕ ಅಹಂಕಾರಿಗಳು ನಮ್ಮ ನೆಲದ ನಿಜ ಚರಿತ್ರೆಯನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಂಡವು.

ಇದರ ಮುಂದುವರಿಕೆಯಾಗಿ ಕನ್ನಡದ ಅಕ್ಷರ ಕಲಿತುಕೊಂಡ ಇಂಗ್ಲೀಷ್ ಶಿಕ್ಷಣ ಪಡೆದ ದೇಸಿ ವಿದ್ವಾಂಸರ ಪಡೆಯು ಸಾಮ್ರಾಜ್ಯಶಾಹಿ ಬೌದ್ಧಿಕ ರಾಜಕಾರಣದ ಜೊತೆ ಒಳರಾಜಿ ಮಾಡಿಕೊಂಡಂತೆ ಮೇಲ್‌ಚಹರೆಯ ಚರಿತ್ರೆಯ ಬರೆಹಕ್ಕೆ, ಇಲ್ಲವೇ ಧರ್ಮಾಧಾರಿತ ಚರಿತ್ರೆಯ ರಚನೆಗೆ ಮುಂದಾದರು. ಇದೊಂದು ಬಗೆಯಲ್ಲಿ ಒಂದು ಕೋಮಿನ ಚರಿತ್ರೆ, ಒಂದು ವರ್ಗದ ಚರಿತ್ರೆ ಆಗಿದ್ದುಕೊಂಡು ಸಂಸ್ಕೃತಿಯ ರೂಪದಂತೆ ನಮ್ಮೆದುರಿಗೆ ಕಾಣುತ್ತಿದೆ ಅಷ್ಟೇ.

ಕರ್ನಾಟಕದ ಶಾಸನ, ಹಸ್ತಪ್ರತಿ, ನಾಣ್ಯ ಮತ್ತು ಸ್ಮಾರಕಗಳ ಸಂಶೋಧನೆ ಅಧ್ಯಯನಗಳು ವಿಭಿನ್ನ ಆಯಾಮಗಳಲ್ಲಿ ನಡೆದಿಲ್ಲ. ಬಹುತೇಕ ಕೆಳ ಚಲನೆಯ ಸತ್ಯಗಳು ಗೈರುಹಾಜರಿಯಲ್ಲಿವೆ. ಶಾಸನದಂತಹ ರಾಜಶಾಹಿ ಕಾನೂನು ಬರಹದ ಒಳಗಡೆ ಸಂಸ್ಕೃತಿ ರೂಪಿಸುವ ಜನ ಸಮುದಾಯದ ಇತಿಹಾಸ ಇದೆಯೆಂಬುದು ಮುಖ್ಯ. ಸಬಾಲ್ಟ್ರನ್ ನೆಲೆಯಲ್ಲಿ ಅದು ಕೇವಲ ಸಾಹಿತ್ಯದ ಅಧ್ಯಯನವಾಗಿದೆಯೇ ಹೊರತು ಚರಿತ್ರೆಯ ಅಧ್ಯಯನವು ಈಗತಾನೆ ಆರಂಭವಾಗಿದೆ ಅಷ್ಟೇ. ಆದರೆ ಇದು ತೋರುಂಬ ಲಾಭ. ತಳಸಮುದಾಯ ಮತ್ತು ಹಿಂದುಳಿದ ವರ್ಗಗಳ ಲೋಕದಿಂದ ಬಂದ ಬೌದ್ಧಿಕ ಜಗತ್ತು ಶಾಸನ, ನಾಣ್ಯ, ಹಸ್ತಪ್ರತಿಗಳ ಸಬಾಲ್ಟ್ರನ್ ಮಾದರಿಯ ಫಲಿತಗಳನ್ನು ನಿರೂಪಿಸಬೇಕಾದ ತುರ್ತು ಇದೆ. ಶಾಸನದಂತಹ ಶಾಸ್ತ್ರೀಯ ಭೌತಿಕ ಆಕರಗಳಿಗೆ ಅಂತರ್‌ಶಿಸ್ತೀಯ ನೆಲೆಯಿಂದ, ಅವುಗಳ ಆಂತರಿಕ ಸಾಂಸ್ಕೃತಿಕ ರಾಜಕಾರಣದ ಸ್ವರೂಪವನ್ನು ಕಟ್ಟಿಕೊಡಬೇಕು.

ವೀರಗಲ್ಲು, ಮಾಸ್ತಿಗಲ್ಲು, ನಿಸಧಿಗಲ್ಲುಗಳನ್ನು ನಮ್ಮ ಪರಂಪರೆಯ ಚರಿತ್ರೆಯ ಹೆಮ್ಮೆ ಎಂದು ಕಳೆದ ಶತಮಾನದುದ್ದಕ್ಕೂ ಚರಿತ್ರೆ ಬರೆದವರು ಆಖ್ಯಾನ ಮಾಡಿದ್ದಾರೆ. ವೀರ ಮರಣವಾದವರು ಯಾವ ಸಾಮುದಾಯಿಕ ಹಿನ್ನಲೆಯಿಂದ ಬಂದವರು? ಅವರ ನೆಲೆ- ಹಿನ್ನಲೆಗಳೇನು? ಪ್ರಭುತ್ವದ ರಚನೆಗೆ ಅವರ ಕೊಡುಗೆ ಏನು? ಹಾಗೂ ಪ್ರಭುತ್ವದಲ್ಲಿ ಅವರಿಗಿದ್ದ ಸ್ಥಾನಮಾನಗಳೇನು? ಎಂಬ ಸತ್ಯಗಳು ಪರದೆಯ ಹಿಂದೆ ಉಳಿದಿವೆ. ಒಂದು ಪ್ರಭುತ್ವದ ರಚನೆಗೆ ಕಾರಣರಾದ ಈ ವೀರರ ಹೊಸ ಚರಿತ್ರೆಯನ್ನು ಕಟ್ಟಬೇಕಿದೆ. ನಾಡಿನ ತುಂಬ ಕಾಣುವ ಮಾಸ್ತಿಗಲ್ಲುಗಳು ಒಂದು ದೇಶದ ಹೆಮ್ಮೆ ಆಗಬಲ್ಲುವೇ?

ಅದೆಷ್ಟೋ ಮಹಿಳೆಯರ ಪ್ರಾಣಗಳು ಆಹುತಿಯಾದ ನೆಲೆಗಳನ್ನು ಮತ್ತೆ ಮತ್ತೆ ವರ್ತಮಾನದ ಸಂದರ್ಭದಲ್ಲಿಟ್ಟು “ರಿಚೆಕ್” ಮಾಡಬೇಕಿದೆ. ಧರ್ಮದ ಚೌಕಟ್ಟಿನೊಳಗಡೆ ನಿಸಧಿ ಮರಣ ಹೊಂದಿದ ಅಮಾಯಕ ಧರ್ಮ ಅನುಸರಣೆಕಾರರ ಹಿಂದಿರುವ ಪ್ರಲೋಭನೆಗಳನ್ನು ಈ ಕಾಲದಲ್ಲಿ ಅಧ್ಯಯನ ಮಾಡಬೇಕಿದೆ. ವಾಸ್ತವವಾಗಿ ಇಂತಹ ಸ್ಮಾರಕಗಳ ಆಂತರಿಕ ಕವಾಟದಲ್ಲಡಗಿದ ಶೋಷಣೆಯ ಸ್ವರೂಪವನ್ನು ಪ್ರತಿಪಾದಿಸಬೇಕಾಗಿದೆ. ಈ ನೆಲದಲ್ಲಿ ಶಾಸ್ತ್ರೀಯ (ಕ್ಲಾಸಿಕಲ್) ಆಗಿರಲು ಯಾವ ಆಕರಕ್ಕೆ ಸಾಧ್ಯವಿದೆ? ನಿಜವಾಗಿಯೂ ಅದು ಮೊದಲು ದೇಸಿ, ಜನಪದ, ಜನರೂಪಿತ. ಇಂತಹ ಸೈದ್ಧಾಂತಿಕ ಸಂಶ್ಲೇಷಣೆಯನ್ನು ನಮ್ಮ ಪಂಡಿತಮಾನ್ಯ ಚರಿತ್ರೆಕಾರರು ಗಮನಿಸಲೇ ಇಲ್ಲ. ಅಥವಾ ಮುಸುಕು ಹಾಕಿಟ್ಟಿರುವುದು ನಿಚ್ಚಳವಾಗಿದೆ.

ಶಾಸನ ಇತ್ಯಾದಿ ಚರಿತ್ರೆಯ ಆಕರಗಳು ಎಡೆಪಡೆಯುವ ಹಿಂದಣ ಹುನ್ನಾರಗಳನ್ನು ವಸಾಹತು ಮತ್ತು ವಸಾಹತೋತ್ತರ ಸಾಮಾಜಿಕ ಸಂದರ್ಭಗಳ ಜೊತೆ ಹಾಜರುಪಡಿಸಬೇಕಾಗುತ್ತದೆ. ಆಕರ ಸಾಮಗ್ರಿಗಳ ಆಂತರಿಕ ಆರ್ತನಾದದ ಕ್ಷೀಣ ಸ್ವರವನ್ನು ಎಲ್ಲರಿಗೂ ಕೇಳಿಸುವಂತೆ ಮಾಡಬೇಕಿದೆ. ಪ್ರಭುತ್ವಶಾಹಿ, ಪುರೋಹಿತಶಾಹಿಗಳ ಒಡಲಾಗಿವೆಯೆಂಬಂತೆ ತೋರುವ ಆಕರಗಳ ಒಳಗೆ ಈ ನೆಲದ ಮಕ್ಕಳ, ಶ್ರಮಜೀವಿಗಳ ಬಹುಧ್ವನಿಗಳು ಅಡಗಿವೆ. ಇಲ್ಲಿಯವರೆಗೂ ಚರಿತ್ರೆಯ ಅಧ್ಯಯನಗಳನ್ನು “ಯಜಮಾನ ಮಾದರಿ”ಯಲ್ಲಿ ತಂದಿಟ್ಟ ಪಳಯುಳಿಕೆಯನ್ನೆ ವಿಶ್ವವಿದ್ಯಾಲಯಗಳು ಸಂಶೊಧನೆಯ ವೈಧಾನಿಕತೆಯನ್ನಾಗಿ ಮಾಡಿಕೊಂಡ ದುರಂತವು ನಮ್ಮೆದುರಿಗಿದೆ. ವರ್ತಮಾನದ ಸಂದರ್ಭದಲ್ಲಿ ಪರ್ಯಾಯವಾಗಿ ಧರ್ಮ, ವರ್ಗ, ವರ್ಣ, ಲಿಂಗ ನಿಯಂತ್ರಣದಲ್ಲಿರುವ ಮೀಡಿಯಾ ಕಂಟ್ರೋಲ್‌ನ್ನು ಕಳಚಿಕೊಂಡು ಹೊಸರೂಪ ಧರಿಸಬೇಕಿದೆ.

ವಿಕಾಸ ನಾಗರಿಕತೆ ಸಂಸ್ಕೃತಿಯನ್ನು ಈ ನೆಲದಲ್ಲಿ ಕಟ್ಟಿದ ಸಮುದಾಯಗಳ ಪ್ರಾತಿನಿಧಿಕ ಆಕರ ಸಾಮಗ್ರಿಗಳು ಕರ್ನಾಟಕದ ಬೆಟ್ಟ-ಗುಡ್ಡಗಳಲ್ಲಿ ಹೇರಳವಾಗಿವೆ. ಇವು ಅಡವಿ ಮಕ್ಕಳ ಚರಿತ್ರೆಗಳಲ್ಲವೇ? ಜೊತೆಗೆ ಈ ಸಮುದಾಯಗಳು ರೂಪಿಸಿಕೊಂಡ ಭಾಷಿಕ ಸಂಕಥನವು ರೋಚಕವಾಗಿದೆ. ಭಾಷೆಯು ಕ್ಲಾಸಿಕಲ್ ಎಂದು ಶಾಸನಗಳ ಮುಖೇನ ಹೇಳುವಾಗಲೂ ಜನ ಭಾಷೆಯ ಸ್ವರೂಪವನ್ನು ಮುಖ್ಯವಾಗಿ ಗಮನಿಸಬೇಕು. ಶಾಸನೋಕ್ತ ವೃತ್ತಿಗಳ ಸಮಗ್ರ ಅಧ್ಯಯನ ಮಾಡುವುದಿರಲೀ ಪ್ರಾಸ್ತಾವಿಕ ಬರಹಗಳೂ ಧರ್ಮ ನಿಯಂತ್ರಣವಾದಿ ಚೌಕಟ್ಟಿನಲ್ಲಿ ಬಂಧಿಸಲ್ಪಟ್ಟಿವೆ. ಭಾಷೆಯನ್ನು ಕಾಪಿಟ್ಟುಕೊಂಡು ಬಂದ ಅಕ್ಷರೋದ್ಯಮದ ಸಂವಹನಗಳಾದ ಹಸ್ತಪ್ರತಿ, ನಾಣ್ಯ, ಶಾಸನಗಳ ಹಿಂದಿನ ಜನರ ಶ್ರಮದ ನೆಲೆಯನ್ನು ಬಿಡಿಸಬೇಕು.

ಹಾಗೆಯೇ ದೇವಾಲಯ ಮತ್ತು ರಥಗಳ ಮಹತ್ತರ ನಿರ್ಮಾಣ, ಕರಕುಶಲಗಾರಿಕೆ ಅಜ್ಞಾತ ಇಂಜಿನಿಯರಿಂಗ್ ಕುರಿತ ಯಾವ ಪಾಠಗಳನ್ನು ನಾವು ಕಲಿತಿದ್ದೇವೆ? ಹಾಗೆಯೇ ಕನ್ನಡ ರಾಜಮನೆತನಗಳ ಚರಿತ್ರೆಯಲ್ಲಿಯೂ ಕುಲದ ಕಾರಣಕ್ಕಾಗಿ ಪ್ರಸಿದ್ಧ ದೊರೆಗಳು ಅವರ ಲೋಕೋಪಯೋಗಿ ಕೆಲಸಗಳು ಪಠ್ಯಗಳಲ್ಲಿ ಗೈರುಹಾಜರಾದ ಕೆಲ ಪ್ರಸಂಗಗಳಿವೆ. ಇವೆಲ್ಲಾ ದೊಡ್ಡ ಪ್ರಶ್ನೆಗಳು.

ಭೂತ ಮತ್ತು ವರ್ತಮಾನದ ಸಂಬಂಧಗಳನ್ನು ಬೆಸೆಯುವ ತಳಸಮುದಾಯಗಳ ವೃತ್ತಿಪರತೆಯನ್ನು ಕಟ್ಟಿಕೊಡುವ ಕೆಲಸ ಸಾಕಷ್ಟಿದೆ. ನಮ್ಮ ಗತಕಾಲದ ಕೇಳು ಮತ್ತು ಹೇಳು ಪರಂಪರೆಯು ಶಾಸ್ತ್ರೀಯವಾದದ್ದು ಯಾವ ಸಂದರ್ಭದಲ್ಲಿ? ಎಂಬುದನ್ನು ಹುಡುಕಬೇಕು. ಲಿಖಿತ ಆಕರಗಳ ಒಡಲಲ್ಲಿ ಸುಪ್ತವಾಗಿರುವ ಇಂಜನಿಯರಿಂಗ್, ಕುಂಬಾರಿಕೆ, ಕಂಬಾರಿಕೆ, ಚಮ್ಮಾರಿಕೆ, ಬಡಿಗತನ, ಅಕ್ಕಸಾಲಿ ಇತ್ಯಾದಿ ಉದ್ಯಮಗಳನ್ನು ಮತ್ತು ಅವರ ಭೌದ್ದಿಕತೆಯನ್ನು ಯಾವ ಪೇಟೆಂಟ್ ಇಲ್ಲದೇ ಹೈಜಾಕ್ ಮಾಡಿದ ಕಾಲಘಟ್ಟದ ಸತ್ಯವನ್ನು ಈಗ ಪುನರುಜ್ಜೀವನಗೊಳಿಸಬೇಕಿದೆ. ಇಂತಹ ಕೆಲವು ಸಂಗತಿಗಳ ಕೆಲವು ಟಿಪ್ಪಣಿಗಳನ್ನು ಈ ಅಂಕಣದಲ್ಲಿ ಮಂಡಿಸುವ ಪ್ರಯತ್ನ ಮುಂದಿನ ಕಂತುಗಳಲ್ಲಿ ಮಾಡಲಾಗುತ್ತದೆ.

ಡಾ. ಜಾಜಿ ದೇವೇಂದ್ರಪ್ಪ, ಸಂಯೋಜಕರು, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ


ಇದನ್ನೂ ಓದಿ: 35,000 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ವಜಾ: 8 ಅತಿಥಿ ಉಪನ್ಯಾಸಕರ ಆತ್ಮಹತ್ಯೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚರಿತ್ರೆಯ ಮರು ಅವಲೋಕನ ಮಾಡುವ ವಿಧಾನ ಮತ್ತು ಸಬಾಲ್ಟ್ರನ್ ಅಧ್ಯಯನ ಇಂದಿನ ಅಗತ್ಯ… ಗತಕಾಲದ ಹೇಳು ಮತ್ತು ಕೇಳು ಸಂಪ್ರದಾಯ ಗಳು ಶಾಸ್ತ್ರೀಯ ಆದದ್ದು ಎಂದು ಎಂಬುದರ ಅವಲೋಕನ ಮತ್ತು ರೀಚೆಕ್… ಹೀಗೆ ಅನೇಕ ವಿಚಾರಗಳನ್ನು ಶಾಸನ ಚರಿತ್ರೆಯ ಕುರಿತ ಡಾ. ಜಾಜಿ ದೇವೇಂದ್ರಪ್ಪ ಅವರ ಬರಹ ಅರ್ಥಪೂರ್ಣ….

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...