Homeಕರ್ನಾಟಕವರ್ಷಗಳ ಕಾಲ ವೇತನ ರಹಿತ ರಜೆ: ಸಂಕಷ್ಟದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು

ವರ್ಷಗಳ ಕಾಲ ವೇತನ ರಹಿತ ರಜೆ: ಸಂಕಷ್ಟದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು

ಪತ್ರದಲ್ಲಿನ ಷರತ್ತು ಮತ್ತು ‌ನಿಬಂಧನೆಗಳಲ್ಲಿ ಕೂಡ ಸಿಬ್ಬಂದಿ, ಅಧಿಕಾರಿಗಳು ಇಚ್ಛೆಯಿದ್ದಲ್ಲಿ ಮಾತ್ರ ಈ ರಜೆಯನ್ನು ತೆಗೆದುಕೊಳ್ಳಬಹುದಾಗಿದ್ದು, ವರ್ಷದ ನಂತರ ಅವರು ಕರ್ತವ್ಯಕ್ಕೆ ಹಾಜರಾಗಬಹುದು ಎಂದು ನಮೂದಿಸಲಾಗಿದೆ ಎನ್ನಲಾಗಿದೆ.

- Advertisement -
- Advertisement -

ಕೊರೊನಾ ಎಲ್ಲರನ್ನು ನಿರಾಶೆ ಮತ್ತು ಆತಂಕದಲ್ಲಿ ಮುಳುಗಿಸಿದೆ. ಕೊರೊನಾ ಕಾರಣಕ್ಕೆ ಹೇರಿದ ಲಾಕ್‌ಡೌನ್‌ನಿಂದ ಲಕ್ಷಾಂತರ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಅಂತವರ ಸಾಲಿಗೆ ಹೊಸ ಸೇರ್ಪಡೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರು ಸೇರುವ ಆತಂಕ ಎದುರಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒಂದು ವರ್ಷದ ಅವಧಿಗೆ ವೇತನ, ಭತ್ಯೆ ರಹಿತ ವಿಶೇಷ ರಜೆ ಮಂಜೂರು ಮಾಡಿದೆ. ಕೊರೊನಾ ಕಾಲದಲ್ಲಿಯೂ ಜೀವ ಕೈಯ್ಯಲ್ಲಿ ಹಿಡಿದು ಭಯದಿಂದಲೇ ಸೇವೆ ಸಲ್ಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ನೌಕರರ ಪಾಲಿಗೆ ಇದು ಅರಗಿಸಲಾಗದ ಸಂಗತಿಯಾಗಿದೆ.

1948ರಲ್ಲಿ ಪ್ರಾರಂಭವಾದ ಕೆಎಸ್‌ಆರ್‌ಟಿಸಿ ಸಂಸ್ಥೆಯು ಪ್ರಸ್ತುತ ದೇಶದ ಐದನೇ ಅತಿದೊಡ್ಡ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿದೆ. ಕರ್ನಾಟಕದ ನಾಲ್ಕೂ ವಿಭಾಗಗಳನ್ನು ಸೇರಿಸಿದರೆ 24 ಸಾವಿರಕ್ಕಿಂತಲೂ ಹೆಚ್ಚಿನ ಬಸ್ಸುಗಳು ಸಂಸ್ಥೆಗಿದ್ದು, ಒಟ್ಟು 1.2 ಲಕ್ಷಕ್ಕಿಂತಲೂ ಹೆಚ್ಚು ಉದ್ಯೋಗಿಗಳಿದ್ದಾರೆ. ದಿನವೊಂದಕ್ಕೆ ಸರಾಸರಿ 9 ಕೋಟಿ ರೂ ವ್ಯವಹಾರವನ್ನು ಸಂಸ್ಥೆಯ ಬಸ್ಸುಗಳಲ್ಲಿ ದಿನವೊಂದಕ್ಕೆ 30 ಲಕ್ಷ ಜನ ಪ್ರಯಾಣಿಸುತ್ತಿದ್ದರು ಎಂದು ಅದರ ವೆಬ್‌ಸೈಟ್‌ ತಿಳಿಸುತ್ತದೆ.

ಪ್ರಸ್ತುತ ಸಂಸ್ಥೆಯ ಈ ವೇತನರಹಿತ ರಜೆ ಪ್ರಸ್ತಾಪವು ನೌಕರರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಒಂದು ವರ್ಷದ ವರೆಗೂ ಯಾವುದೇ ಭತ್ಯೆಯಿಲ್ಲದೆ ರಜೆಯನ್ನು ಮಂಜೂರು ಮಾಡಲು ಹೊರಟಿರುವುದು ನೌಕರರಲ್ಲಿ ಆತಂಕ ಉಂಟು ಮಾಡಿದೆ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು “ಇದು ಇನ್ನೂ ಅಭಿಪ್ರಾಯ ಕೋರುವ ಹಂತದಲ್ಲಿದ್ದು, ಆದೇಶ‌ವಾಗಿಲ್ಲ. ಇದರಲ್ಲಿ ಯಾವುದೇ ಒತ್ತಡವಾಗಲಿ, ನಿರ್ಬಂಧವಾಗಲಿ ಇರುವುದಿಲ್ಲವೆಂದು” ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆಯೂ ಸಾರಿಗೆ ಸಂಸ್ಥೆಯಲ್ಲಿ ಐದು ವರ್ಷಗಳ ಅವಧಿಗೆ ಹೆಚ್ಚಿನ ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆ ಹಾಗೂ ಇತರೆ ತುರ್ತು ಪರಿಸ್ಥಿತಿಯಲ್ಲಿ ವೇತನ‌ರಹಿತ ರಜೆ ತೆಗೆದುಕೊಳ್ಳುವ ಅವಕಾಶವಿತ್ತು ಎಂದು ಅವರು ಹೇಳುತ್ತಾರೆ.

ಅಲ್ಲದೆ ಪತ್ರದಲ್ಲಿನ ಷರತ್ತು ಮತ್ತು ‌ನಿಬಂಧನೆಗಳಲ್ಲಿ ಕೂಡ ಸಿಬ್ಬಂದಿ, ಅಧಿಕಾರಿಗಳು ಇಚ್ಛೆಯಿದ್ದಲ್ಲಿ ಮಾತ್ರ ಈ ರಜೆಯನ್ನು ತೆಗೆದುಕೊಳ್ಳಬಹುದಾಗಿದ್ದು, ವರ್ಷದ ನಂತರ ಅವರು ಕರ್ತವ್ಯಕ್ಕೆ ಹಾಜರಾಗಬಹುದು ಎಂದು ನಮೂದಿಸಲಾಗಿದೆ ಎನ್ನಲಾಗಿದೆ.

ಆದರೆ ಕೊರೊನಾ ಸಮಯದಲ್ಲಿ ಎಲ್ಲರೂ ಆರ್ಥಿಕ ಸಮಸ್ಯೆಯಲ್ಲಿರುವಾಗ ಇರುವ ಕೆಲಸವನ್ನು ಬಿಟ್ಟು ರಜೆ ತೆಗೆದುಕೊಳ್ಳುವ ನಿರ್ಧಾರವನ್ನು ಯಾರು ಕೈಗೊಳ್ಳುತ್ತಾರೆ ಎಂಬುವುದಾಗಿದೆ. ಒಂದು ವೇಳೆ ಯಾರು ರಜೆ ಪಡೆಯಲು ನಿರ್ಧರಿಸದಿದ್ದರೆ ನಿಗಮದ ಮುಂದಿನ ನಡೆಯೇನು? ಇಷ್ಟು ದಿನ ಸಂಸ್ಥೆಗಾಗಿ ಬೆವರು ಸುರಿಸಿದ ಕಾರ್ಮಿಕರನ್ನು ಈ ಸಮಯದಲ್ಲಿ ಕೈಬಿಡಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಪ್ರಸ್ತುತ ತನ್ನ ವೆಬ್ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿಯಂತೆ ಕೆಎಸ್‌ಆರ್‌ಟಿಸಿ 180 ಕೋಟಿ ನಷ್ಟದಲ್ಲಿದೆ ಎಂದು ಹೇಳಲಾಗುತ್ತಿದ್ದರೂ ಒಂದು ಸರ್ಕಾರಿ ಸಂಸ್ಥೆಗೆ ಇದೇನು ದೊಡ್ಡ ಮೊತ್ತದ ಹಣವೇನು ಅಲ್ಲ.

ಕೊರೊನಾ ಸಾಂಕ್ರಾಮಿಕದ ಕಾರಣಕ್ಕಾಗಿ ಸಂಸ್ಥೆಯು ತನ್ನ ಒಟ್ಟು ಬಸ್‌ಗಳಲ್ಲಿ ಶೇ.20 ರಷ್ಟನ್ನು ಮಾತ್ರ ಕಾರ್ಯಾಚರಣೆಗಿಳಿಸಿದೆ. ಹಾಗಾಗಿ ಎಲ್ಲಾ ಡಿಪೋಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಸಿಬ್ಬಂದಿ ಬಂದು ಕ್ಯೂನಲ್ಲಿ ನಿಂತುಕೊಳ್ಳಬೇಕು. ಮೊದಲು ಬಂದವರಿಗೆ ಆದ್ಯತೆಯಾಗಿದ್ದು 20% ಬಸ್ಸುಗಳಲ್ಲಿನ ಸಿಬ್ಬಂದಿಗೆ ಕೆಲಸ ಸಿಗುತ್ತಿದೆ. ಉಳಿದವರು ವೇತನ ರಹಿತ ರಜೆ ಪಡೆದು ಮನೆಗೆ ತೆರಳಬೇಕಾಗಿದೆ ಎಂದು ಹೆಸರು ಹೇಳಲು ಇಚ್ಛಿಸಿದ ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

55 ವರ್ಷ ಮೇಲ್ಪಟ್ಟ ಮತ್ತು ಆರೋಗ್ಯ ಸಮಸ್ಯೆಗಳಿರುವವರನ್ನು ಈಗಾಗಲೇ ಮನೆಗೆ ಕಳಿಸಲಾಗಿದೆ. ಅವರು ಯಾವುದೇ ಕಾರಣಕ್ಕೂ ಡಿಪೋ ಹತ್ತಿರ ಸುಳಿಯದಂತೆ ತಡೆಯಲಾಗಿದೆ. ಉಳಿದವರಲ್ಲಿಯೂ ಶೇ.80 ರಷ್ಟು ಸಿಬ್ಬಂದಿ ಕೆಲಸವಿಲ್ಲದೇ ಕಷ್ಟದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...