Homeಅಂಕಣಗಳುಎಲೆಮರೆ-43: ಪರಿಸರ ಪ್ರಜ್ಞೆ, ಅತ್ಯಾಧುನಿಕ ತಾಂತ್ರಿಕತೆಯಿಂದ ದೇಶದ ಗಮನಸೆಳೆದ ಗೊಜನೂರು ಸರಕಾರಿ ಪ್ರೌಢಶಾಲೆ

ಎಲೆಮರೆ-43: ಪರಿಸರ ಪ್ರಜ್ಞೆ, ಅತ್ಯಾಧುನಿಕ ತಾಂತ್ರಿಕತೆಯಿಂದ ದೇಶದ ಗಮನಸೆಳೆದ ಗೊಜನೂರು ಸರಕಾರಿ ಪ್ರೌಢಶಾಲೆ

‘ಬೆಸ್ಟ ಇಕೋ-ಕ್ಲಬ್’ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಶಾಲೆಯೆಂಬ ಗರಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಸರಕಾರಿ ಪೌಢಶಾಲೆಗೆ ಇದೆ.

- Advertisement -
- Advertisement -

ಶಾಲಾ ಆವರಣವನ್ನು ’ಪರಿಸರ’ಮಯಗೊಳಿಸುವುದಲ್ಲದೆ, ನಿಸರ್ಗಪ್ರೇರಿತ ಕಲಿಕೆಯ ಕಾರಣಕ್ಕೆ ಈ ಪ್ರೌಢಶಾಲೆ ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲೂ `ರಾಷ್ಟ್ರಮಟ್ಟಕ್ಕೆ’ ಆರಿಸಲಾಗುತ್ತದೆ. 2019 ರ ಡಿಸೆಂಬರ್ 20 ರಂದು ಗುಜರಾತಿನ ಕೇವಡಿಯಾದಲ್ಲಿ ಕೇಂದ್ರ ಪರಿಸರ ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯವು ಆಯೋಜಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ದೇಶದ ಆರು ಪ್ರೌಢಶಾಲೆಗಳು ‘ಬೆಸ್ಟ ಇಕೋ-ಕ್ಲಬ್ ಪ್ರಶಸ್ತಿ’ಪಡೆಯುತ್ತವೆ.

ಅದರಲ್ಲಿ ಈ ಶಾಲೆಯೂ ಆಯ್ಕೆಯಾಗುತ್ತದೆ. ಇದರೊಂದಿಗೆ ಈ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಶಾಲೆಯೆಂಬ ಗರಿ ಮೂಡುತ್ತದೆ. ಅದುವೆ ಗದಗ ಜಿಲ್ಲೆ, ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಸರಕಾರಿ ಪೌಢಶಾಲೆ. ಈ ಹಂತಕ್ಕೆ ಶಾಲೆಯನ್ನು ರೂಪಿಸಲು ಕಳೆದ ಹತ್ತು ವರ್ಷದಿಂದ ತನ್ನನ್ನು ತಾನು ತೇದುಕೊಂಡ ಮುಖ್ಯ ಶಿಕ್ಷಕ ರವಿ ಬಸವಣ್ಣೆಪ್ಪ ಬೆಂಚಳ್ಳಿಯವರು.

ಮೂಲತಃ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ವಾಸನ ಗ್ರಾಮದ ರವಿ ಬಿ. ಬೆಂಚಳ್ಳಿಯವರು 2009-10 ರಲ್ಲಿ ಆಯ್ಕೆಯಾಗಿ ಸರಕಾರಿ ಪ್ರೌಢಶಾಲೆ ಗೊಜನೂರದಲ್ಲಿ ಮುಖ್ಯ ಶಿಕ್ಷಕರಾಗಿ ಬರುತ್ತಾರೆ. ಕಳೆದ ಹತ್ತು ವರ್ಷದಲ್ಲಿ ರವಿಯವರು ಗೊಜನೂರು ಹೈಸ್ಕೂಲಿನ ಚಹರೆಯನ್ನೆ ಬದಲಿಸಿದರು. ಈ ಶಾಲೆಯ ಪರಿಸರವನ್ನು ಪುಟ್ಟ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಂತೆ ಮೇಲ್ದರ್ಜೆಗೇರಿಸಿದರು. ಆರಂಭಕ್ಕೆ ಶಾಲೆಯನ್ನು ತಮ್ಮ ಗ್ರಾಮ ಪಂಚಾಯ್ತಿಯಲ್ಲಿ, ನಂತರ ತಾಲೂಕಿನಲ್ಲಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ ಕಡೆಯದಾಗಿ ದೇಶವೇ ಗಮನಿಸುವಂತೆ ರೂಪಿಸಿದರು.

ಈ ಪಯಣದಲ್ಲಿ ಅವರೊಂದಿಗೆ ಗ್ರಾಮದ ಪಾಲಕ-ಪೋಷಕರು, ಗಣ್ಯರು, ಜನಪ್ರತಿನಿಧಿಗಳು, ಸಹಶಿಕ್ಷಕರು, ಸಿಬ್ಬಂದಿಯವರು, ಸಮುದಾಯ ಹಾಗೂ ವಿದ್ಯಾರ್ಥಿಗಳು, ಇದೆಲ್ಲಕ್ಕೂ ಸಹಕರಿಸಿ ಪ್ರೋತ್ಸಾಹಿಸಿದ ಇಲಾಖೆ ಅಧಿಕಾರಿಗಳು ಜೊತೆಯಾದರು. ಇದೆಲ್ಲದರ ಕೂಡುಶಕ್ತಿಯ ಫಲವಾಗಿ ನಾನಾ ವಿಭಾಗಗಳಲ್ಲಿ ಈ ತನಕ ಗೊಜನೂರು ಪ್ರೌಢಶಾಲೆಗೆ ಎಂಟು ಪ್ರಶಸ್ತಿಗಳು, ಮುಖ್ಯ ಶಿಕ್ಷಕರಾದ ರವಿ ಅವರಿಗೆ ಹನ್ನೆರಡು ಪ್ರಶಸ್ತಿಗಳು, ಇತರೆ ಶಿಕ್ಷಕ ವರ್ಗಕ್ಕೆ ಏಳು ಪ್ರಶಸ್ತಿಗಳು ಲಬಿಸಿವೆ.

ಹಾಗಾದರೆ ಈ ಪ್ರೌಢಶಾಲೆ ರೂಪಿಸಿದ ಮಾದರಿ ಯಾವುದು?

ಮುಖ್ಯವಾಗಿ ಶಾಲೆಯ ಶೈಕ್ಷಣಿಕ ವಾತಾವರಣವನ್ನು ಸಮುದಾಯ ಸಹಭಾಗಿತ್ವದಲ್ಲಿ ಕ್ರಿಯಾಶೀಲಗೊಳಿಸಲಾಗಿದೆ. ಶಾಲಾ ಆವರಣದಲ್ಲಿ ಸಾವಯವ ಕೃಷಿ, ಮಳೆಕೊಯ್ಲು, ವನಮಹೋತ್ಸವ, ಸಾಮಾಜಿಕ ಜಾಗೃತಿ, ಗ್ರಾಮ-ಮರ-ಕೆರೆ ದತ್ತು ಪಡೆಯುವಿಕೆ ಹಾಗೂ ಸ್ವಚ್ಚತೆ, ಪ್ಲಾಸ್ಟಿಕ್ ರದ್ದು ಜಾಗೃತಿ, ಶಾಲಾ ಕೈತೋಟ, ನೀರು-ಶಕ್ತಿ ಉಳಿತಾಯ, ಕಸ ವಿಲೇವಾರಿ, ಶ್ರಮದಾನ ಆರೋಗ್ಯ ರಕ್ಷಣೆ, ಪರಿಸರ ಹಾಗೂ ಆರೋಗ್ಯದ ಕುರಿತು ದಿನಾಚರಣೆಗಳಲ್ಲಿ ಊರನ್ನು ಒಳಗೊಳ್ಳುವಿಕೆ, ನವೀನ ಸೃಜನಾತ್ಮಕ ಕಲಿಕಾ ಚಟುವಟುಕೆಗಳು ಹಾಗೂ ಗುಣಾತ್ಮಕ ಕಲಿಕಾ ವಾತಾವರಣ ಹೀಗೆ ಇಡೀ ಶಾಲೆಯನ್ನು ಒಂದು ನಿರಂತರ ಪ್ರಯೋಗಶಾಲೆಯನ್ನಾಗಿ ರೂಪಿಸಲಾಗಿದೆ.

ಶಾಲೆಯಲ್ಲಿ ಸಾವಯವ ಕೃಷಿ ಪದ್ಧತಿಯ ಎರೆಹುಳು ಗೊಬ್ಬರ ಘಟಕ, ಎರೆಜಲ, ಜೀವಾಮೃತ, ಜೀವಸಾರ ಘಟಕ, ಪಂಚಗವ್ಯ, ಪೈಪ್ ಕಾಂಪೋಸ್ಟ್ ಇತ್ಯಾದಿಗಳನ್ನು ನೆಲೆಗೊಳಿಸಲಾಗಿದೆ. ಶಾಲಾ ಅಂಗಳದಲ್ಲಿ ಅಂತರ್ಜಲ ಬಳಕೆ ಸಹಕಾರಿಗೆ ಇಂಗುಗುಂಡಿ, ನೀರಿನ ಸಂಗ್ರಹಕ್ಕೆ ಮಳೆನೀರು ಸಂಗ್ರಹ ತೊಟ್ಟಿ, ಶುದ್ಧ ಕುಡಿಯುವ ನೀರಿಗೆ ಮಳೆನೀರು ಕೊಯ್ಲು ನೀರಿನ ಪುನರ್ಬಳಕೆ ಮಾಡಿ ಸಸ್ಯಪಾಲನೆ ಮಾಡಲಾಗುತ್ತದೆ. ಶಕ್ತಿ ಹಾಗೂ ಇಂಧನ ಉಳಿತಾಯಕ್ಕಾಗಿ ಸೋಲಾರ್ ವ್ಯವಸ್ಥೆ, ಎಲ್.ಇ.ಡಿ. ಬಲ್ಬ್ ಬಳಕೆ ಮಾಡಲಾಗಿದೆ. ಜೈವಿಕ ಸಸ್ಯಗಳಾದ ಹೊಂಗೆ, ಸುಬಾಬುಲ್, ಬೇವು, ನೀಲಗಿರಿ ಇತ್ಯಾದಿ ಸಸ್ಯಗಳನ್ನು ಬೆಳೆಸಲಾಗಿದೆ.

ತಾಂತ್ರಿಕವಾಗಿ ಅತ್ಯುತ್ತಮ ಗುಣಮಟ್ಟದ ಸೌಲಭ್ಯವಿರುವ ‘ಗಣಕಯಂತ್ರ ಮಾಹಿತಿ ತಂತ್ರಜ್ಞಾನ ಕೊಠಡಿ’ಯನ್ನು ‘ರಾಜೀವಶೆಟ್ಟಿ ಚಾರಿಟೆಲ್ ಸೋಸೈಟಿ (ರಿ)’ ಬೆಂಗಳೂರು ಇವರ 5 ಲಕ್ಷ ದೇಣಿಗೆಯಿಂದ ಸ್ಥಾಪಿಸಲಾಗಿದೆ, ಹೀಗಾಗಿ ಮಕ್ಕಳಿಗೆ ‘ಗಣಕಯಂತ್ರ ಶಿಕ್ಷಣ’ ನೀಡಲಾಗುತ್ತಿದೆ. ಶಾಲೆಯ ಆಕರ್ಷಕ ತರಗತಿ ಕೋಣೆ, ಸಿ.ಸಿ ಕ್ಯಾಮರಾ ಹಾಗೂ ಧ್ವನಿವರ್ಧಕ, ಎಜ್ಯುಸ್ಯಾಟ್, ರೇಡಿಯೋ ಪಾಠ, ಸ್ಮಾರ್ಟ್ ಕ್ಲಾಸ್ ಹಾಗೂ ದೂರದರ್ಶನ, ಗ್ರೀನ್-ಬ್ಲ್ಯಾಕ್-ಪ್ಯಾನಲ್-ನೋಟಿಸ್ ಬೋರ್ಡ್, ಆಡಿಯೋ-ವಿಡಿಯೋ ವ್ಯವಸ್ಥೆ, ನವೀನ ಸಾಫ್ಟ್ವೇರ್ ಆಧಾರಿತ ಗುಣಾತ್ಮಕ ಶಿಕ್ಷಣವನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಎಲ್ಲಾ ಕಲಿಕಾ ಪ್ರಕ್ರಿಯೆಗಳನ್ನು ಮುಖ್ಯ ಶಿಕ್ಷಕರ ಕೊಠಡಿಯಿಂದಲೇ ವೀಕ್ಷಿಸಿ ಚರ್ಚಿಸಬಹುದಾಗಿದೆ. ಈ ಬಗೆಯ ತಾಂತ್ರಿಕತೆಯು ಯಾವುದೇ ಖಾಸಗಿ ಶಾಲೆಯನ್ನು ಮೀರಿಸುವಂತಿದೆ. ಹೀಗಾಗಿ ಸುತ್ತಮುತ್ತಲ ಹಳ್ಳಿಗಳ ಪೋಷಕರು ತಮ್ಮ ಮಕ್ಕಳನ್ನು ಗೊಜನೂರು ಪ್ರೌಢಶಾಲೆಗೆ ಸೇರಿಸಲು ಧಾವಿಸುತ್ತಾರೆ, ಶಾಲೆಯಲ್ಲಿ 277 ಮಕ್ಕಳ ತನಕ ದಾಖಲಾತಿಯಾಗಿದೆ. ಹೀಗಾಗಿ ಹೆಚ್ಚುವರಿ ದಾಖಲಾತಿಯನ್ನು ನಿಲ್ಲಿಸಿದ್ದೂ ಇದೆ.

2010 ರಿಂದ 2020 ರ ತನಕ ಪ್ರತಿ ವರ್ಷವೂ ಶಾಲಾ ಸಾಧನೆ, ಮಕ್ಕಳ ಮತ್ತು ಮೇಷ್ಟ್ರುಗಳ ಬರಹಗಳನ್ನೊಳಗೊಂಡ ವಾರ್ಷಿಕ ಸಂಚಿಕೆಗಳನ್ನು ರವಿ ಅವರು ಸಂಪಾದಿಸಿದ್ದಾರೆ. ಈತನಕ ಅಕ್ಷರ ದುಂದುಬಿ, ಶಿಖರ ಸಂಪದ, ಜ್ಞಾನ ಮಂಜರಿ, ಅಷ್ಟಾದಶ ದರ್ಪಣ, ಪಂಚವಟಿ, ಅಂಬರಮಣಿ, ಸಪ್ತಗಿರಿ ವೈಭವ, ಗಿರಿತೇಜ ಲಹರಿ, ನವ ನಿಕೇತನ, ದಶದೀಪ್ತಿ ದರ್ಶಿಕೆ ಎಂಬ ಹತ್ತು ಸ್ಮರಣ ಸಂಚಿಕೆಗಳನ್ನು ತರಲಾಗಿದೆ. ಈ ಸಂಚಿಕೆಗಳು ಶಾಲೆಯ ಎಲ್ಲಾ ಬಗೆಯ ಕ್ರಿಯಾಶೀಲ ಚಟುವಟಿಕೆಗಳ ದಾಖಲೆಗಳಾಗಿವೆ.

ಇಷ್ಟಾಗಿಯೂ ರವಿ ಅವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸೂಕ್ಷ್ಮವಾಗಿ ಧಾರ್ಮಿಕತೆಯ ಪ್ರಭಾವವಿದೆ. ಅಂಬೇಡ್ಕರ್, ಸಂವಿಧಾನ ಪ್ರಜಾಪ್ರಭುತ್ವದ ಆಶಯಗಳ ಕುರಿತ ವೈಚಾರಿಕ ಕಾರ್ಯಕ್ರಮಗಳು ನಡೆದದ್ದು ತುಂಬಾ ವಿರಳ. ಅಂತೆಯೇ ಶಾಲಾ ಆವರಣದ ವಿವೇಕಾನಂದ ಪ್ರತಿಮೆ, ಪಂಚವಟಿ, ಶಾಲಾ ಸಂಚಿಕೆಯ ಹೆಸರುಗಳು, ಸ್ವಾಮೀಜಿಗಳನ್ನು ಶಾಲೆಗೆ ಕರೆಸುವುದು ಇಂತದ್ದರಲ್ಲೆಲ್ಲಾ ಸನಾತನತೆ ಇಣುಕುತ್ತದೆ. ಇದು ಮುಂದೆ ಶಾಲೆಯ ಸಾಧನೆಯನ್ನು ಮಂಕಾಗಿಸಬಹುದು.

ಸಂವಿಧಾನ ಬದ್ಧ ಸಾರ್ವಜನಿಕ ಸಂಸ್ಥೆಯಾದ ಶಾಲೆಯೊಂದರಲ್ಲಿ ಯಾವುದೇ ಧರ್ಮದ ಛಾಯೆಗಳು ಢಾಳಾಗಿ ಕಾಣಿಸಕೂಡದು. ’ಭಾರತೀಯರಾದ ನಾವು’ ಎಂದು ಆರಂಭವಾಗುವ ಸಂವಿಧಾನದ ಪ್ರಸ್ತಾವನೆಗೆ ಪೂರಕವಾಗಿ ಶಾಲೆಯ ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸುವುದು ಶಿಕ್ಷಕರ ಆದ್ಯ ಕರ್ತವ್ಯ. ಈ ಬೆಳವಣಿಗೆ ಅಕಸ್ಮಾತ್ ನಡೆದಿದ್ದರೆ, ಮುಂದಿನ ದಿನಗಳಲ್ಲಿ ರವಿ ಬೆಂಚಳ್ಳಿಯವರು ಇದನ್ನು ಸರಿಪಡಿಸಿಕೊಳ್ಳುತ್ತಾರೆಂದು ಭಾವಿಸುವೆ.

ತನ್ನ ಬಿಡುವಿಲ್ಲದ ಕೆಲಸಗಳಿಗೆ ತನ್ನ ಸಂಗಾತಿ ಸುಮತಿಯವರ ನೆರವಿದೆ ಎಂದು ರವಿ ಹೇಳುತ್ತಾರೆ. ಮಕ್ಕಳಾದ ವೈಭವ್ ಮತ್ತು ವರ್ಷಿತ ಅವರರೊಂದಿಗೆ ಸದ್ಯಕ್ಕೆ ರವಿಯವರು ಲಕ್ಷ್ಮೇಶ್ವರದಲ್ಲಿ ನೆಲೆಸಿದ್ದಾರೆ. ಊರಿನವರ ಸಹಕಾರದೊಂದಿಗೆ ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಹೊಯ್ಯಲಿ, ಸರಕಾರಿ ಪ್ರೌಢಶಾಲೆಗಳಿಗೆ ಅತ್ಯುತ್ತಮ ಮಾದರಿಯನ್ನು ರೂಪಿಸಲಿ ಎಂದು ನಾನುಗೌರಿ.ಕಾಮ್ ಆಶಿಸುತ್ತದೆ.

ಗೊಜನೂರು ಪ್ರೌಢಶಾಲೆ ತನ್ನದೇ ಸ್ವಂತ ವೆಬ್ ಸೈಟ್ ಹೊಂದಿದೆ. ಆಸಕ್ತರು ಶಾಲೆಯನ್ನು ಈ www.ghsgojanur.com ಕೊಂಡಿಯಿಂದ ಸಂಪರ್ಕಿಸಬಹುದು. ಅಲ್ಲದೇ ಶಾಲೆಯ ಕಲಿಕಾ ಪ್ರಗತಿ, ಚಟುವಟಿಕೆ ಹಾಗೂ ಸಾಧನೆಗಳನ್ನು youtube ನ ghsgojanur ಚಾನಲ್ ಮೂಲಕ ವೀಕ್ಷೀಸಬಹುದು. ಸಂಪರ್ಕಕ್ಕೆ ಇಮೇಲ್‌ [email protected] ಸಂಪರ್ಕಿಸಬಹುದು.

-ಅರುಣ್ ಜೋಳದಕೂಡ್ಲಿಗಿ


ಓದಿ: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟಿಎಂಸಿ ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಶಾಕ್: 20 ಎಂಪಿಗಳಿಗೆ ನೋಟಿಸ್ ಜಾರಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು, ಎನ್‌ಸಿಪಿಐ (NCPI) ಎಂಬ ಅಷ್ಟಾಗಿ ಜನಪ್ರಿಯವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಒಕ್ಕೂಟವನ್ನು ಸೇರಿಕೊಂಡಿರುವ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಟಿಎಂಸಿ ಪ್ರಧಾನ...

ಹನೂರ್ ‘ಶೂಟೌಟ್’: ದಾಖಲೆಗಳನ್ನು ಬಿಡುಗಡೆ ಮಾಡಿದ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ: ಸಿಬಿಐ ತನಿಖೆಗೆ ಆಗ್ರಹ 

ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದ ಮೂವರ ಸಾವು ಮತ್ತು ಗುಂಡಿನ ಚಕಮಕಿ ಪ್ರಕರಣ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆಗಸ್ಟ್ 15ರಂದು ಹನೂರಿನ ಮರಿಯಮಂಗಲ ಬಿಟ್ ಅರಣ್ಯ...

ಬಿಜೆಪಿ MLC ರವಿಕುಮಾರ್‌ ವಿರುದ್ಧ ಜಾಮೀನು ರಹಿತ ವಾರಂಟ್‌

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ವಿರುದ್ಧ ಅವಹೇಳನಕಾರಿ ಹಾಗೂ ಕೋಮು ಪ್ರಚೋದಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ವಿಚಾರಣೆಗೆ ಹಾಜರಾಗದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಬೆಂಗಳೂರಿನ...

20 ಬಂಡಾಯ ಸಂಸದರ ಅನರ್ಹತೆಗೆ ಒತ್ತಾಯ: ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ

ತಮ್ಮ ಪಕ್ಷದಿಂದ ಪ್ರತ್ಯೇಕಗೊಂಡಿರುವ 20 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿ ತೃಣಮೂಲ ಕಾಂಗ್ರೆಸ್...

ದೆಹಲಿ, ಬಿಹಾರದಲ್ಲಿ ನೀಟ್ ಪ್ರತಿಭಟನಾಕಾರರ ಮೇಲೆ ಪೆಲೆಟ್, ಅಶ್ರುವಾಯು, ವಿದ್ಯುತ್ ಶಾಕ್ ಲಾಠಿ ಪ್ರಹಾರ ನಡೆದಿರುವುದು ಸತ್ಯ: ಅಮ್ನೆಸ್ಟಿ ವರದಿಯಲ್ಲಿ ಕಳವಳಕಾರಿ ವಿಷಯಗಳು ಬಹಿರಂಗ

ದೆಹಲಿ ಮತ್ತು ಬಿಹಾರದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ನೇತೃತ್ವದಲ್ಲಿ ನಡೆದ ನೀಟ್ (NEET) ಪರೀಕ್ಷಾ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಗಳ ಸಂದರ್ಭದಲ್ಲಿ ಭಾರತೀಯ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕಾನೂನುಬಾಹಿರ ಮತ್ತು ಅತಿಯಾದ ಬಲಪ್ರಯೋಗ ಮಾಡಿದ್ದಾರೆ...

ರಾಜ್ಯ ಚುನಾವಣಾ ಆಯೋಗದಿಂದ ಎಸ್‌ಐಆರ್ ಕರಡು ಪಟ್ಟಿ ಪ್ರಕಟ; ದಾವಣಗೆರೆಯಲ್ಲಿ ಅತಿ ಕಡಿಮೆ- ಬೆಂಗಳೂರು ನಗರದಲ್ಲಿ 9.46 ಲಕ್ಷ ಜನರಿಗೆ ನೋಟಿಸ್‌!

ರಾಜ್ಯ ಚುನಾವಣಾ ಆಯೋಗವು ಇಂದು ಎಸ್‌ಐಆರ್ ಕರಡು ಪಟ್ಟಿ ಪ್ರಕಟಿಸಿದ್ದು, 'ಲಾಜಿಕಲ್ ಡಿಸ್ಕ್ರಿಪೆನ್ಸಿ' ಹೆಸರಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಅತಿ ಕಡಿಮೆ, ಅಂದರೆ 7,088 ಜನರಿಗೆ ನೋಟಿಸ್‌ ನೀಡಲು ಸಿದ್ಧತೆ ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ...

ಮಹಾರಾಷ್ಟ್ರದ ಅಮರಾವತಿಯಲ್ಲಿ ದಾರುಣ ದುರಂತ: ಸರ್ಕಾರಿ ಆಸ್ಪತ್ರೆಯ ವೆಂಟಿಲೇಟರ್ ಸ್ಫೋಟಗೊಂಡು ಮೂವರು ನವಜಾತ ಶಿಶುಗಳ ಸಾವು

ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಸರ್ಕಾರಿ ಮಹಿಳಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ವೆಂಟಿಲೇಟರ್‌ನಲ್ಲಿ ಉಂಟಾದ ಸ್ಫೋಟದಿಂದಾಗಿ ಬೆಂಕಿ ಮತ್ತು ದಟ್ಟ...

‘ಮೋದಿ ಅವರ ‘ದಿಮಾಗಿ ನಕ್ಸಲ್’ ಹೇಳಿಕೆಯು ಮುಂಬರುವ ಯುವ ಭಿನ್ನಾಭಿಪ್ರಾಯದ ಅಲೆಯನ್ನು ‘ರಾಷ್ಟ್ರವಿರೋಧಿ’ ಎಂದು ಬಿಂಬಿಸುವ ಪ್ರಯತ್ನವಾಗಿದೆ’: ಆನಂದ್ ತೇಲ್ತುಂಬ್ಡೆ

ಜೆನ್ ಝೀ ಅಲೆಯ ಹೊಸ ರೀತಿಯ ಪ್ರತಿಭಟನೆಗೆ ಬೆಚ್ಚಿಬಿದ್ದಿರುವ ಪ್ರಧಾನಿ ಮೋದಿಯವರ 'ದಿಮಾಗಿ ನಕ್ಸಲ್' ಹೇಳಿಕೆಯ ಮುಖವಾಡವನ್ನು 'ದಿ ವೈರ್' ಲೇಖನದಲ್ಲಿ ಪ್ರಸಿದ್ಧ ಚಿಂತಕ ಡಾ. ಆನಂದ್ ತೇಲ್ತುಂಬ್ಡೆ ಬಿಚ್ಚಿಟ್ಟಿದ್ದಾರೆ. ಆಡಳಿತದ ವಿಫಲ...

SIR : ಮೂರು ದೇಶಗಳಿಗೆ ಭಾರತದ ರಾಯಭಾರಿಯಾಗಿದ್ದ ನವದೀಪ್ ಸೂರಿಗೆ ಪೌರತ್ವ ಸಾಬೀತುಪಡಿಸುವ ಸವಾಲು!

ಪಂಜಾಬ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪೌರತ್ವ ಸಾಬೀತುಪಡಿಸುವ ವಿಧಾನದ ಕುರಿತು ಮಾಜಿ ರಾಜತಾಂತ್ರಿಕ ನವದೀಪ್ ಸೂರಿ ಅವರು ಭಾನುವಾರ (ಆ.23) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ....

ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣ : 22 ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಹೋದರ

ಸೊಹ್ರಾಬುದ್ದೀನ್ ಶೇಖ್ ಮತ್ತು ಅವರ ಪತ್ನಿ ಕೌಸರ್ ಬಿ ಹಾಗೂ ಆಪ್ತ ತುಳಸಿರಾಮ್ ಪ್ರಜಾಪತಿ ಅವರ 2005ರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶದ 21 ಪೊಲೀಸರು ಸೇರಿದಂತೆ ಒಟ್ಟು...