Homeಅಂಕಣಗಳುಎಲೆಮರೆ-43: ಪರಿಸರ ಪ್ರಜ್ಞೆ, ಅತ್ಯಾಧುನಿಕ ತಾಂತ್ರಿಕತೆಯಿಂದ ದೇಶದ ಗಮನಸೆಳೆದ ಗೊಜನೂರು ಸರಕಾರಿ ಪ್ರೌಢಶಾಲೆ

ಎಲೆಮರೆ-43: ಪರಿಸರ ಪ್ರಜ್ಞೆ, ಅತ್ಯಾಧುನಿಕ ತಾಂತ್ರಿಕತೆಯಿಂದ ದೇಶದ ಗಮನಸೆಳೆದ ಗೊಜನೂರು ಸರಕಾರಿ ಪ್ರೌಢಶಾಲೆ

‘ಬೆಸ್ಟ ಇಕೋ-ಕ್ಲಬ್’ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಶಾಲೆಯೆಂಬ ಗರಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಸರಕಾರಿ ಪೌಢಶಾಲೆಗೆ ಇದೆ.

- Advertisement -
- Advertisement -

ಶಾಲಾ ಆವರಣವನ್ನು ’ಪರಿಸರ’ಮಯಗೊಳಿಸುವುದಲ್ಲದೆ, ನಿಸರ್ಗಪ್ರೇರಿತ ಕಲಿಕೆಯ ಕಾರಣಕ್ಕೆ ಈ ಪ್ರೌಢಶಾಲೆ ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲೂ `ರಾಷ್ಟ್ರಮಟ್ಟಕ್ಕೆ’ ಆರಿಸಲಾಗುತ್ತದೆ. 2019 ರ ಡಿಸೆಂಬರ್ 20 ರಂದು ಗುಜರಾತಿನ ಕೇವಡಿಯಾದಲ್ಲಿ ಕೇಂದ್ರ ಪರಿಸರ ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯವು ಆಯೋಜಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ದೇಶದ ಆರು ಪ್ರೌಢಶಾಲೆಗಳು ‘ಬೆಸ್ಟ ಇಕೋ-ಕ್ಲಬ್ ಪ್ರಶಸ್ತಿ’ಪಡೆಯುತ್ತವೆ.

ಅದರಲ್ಲಿ ಈ ಶಾಲೆಯೂ ಆಯ್ಕೆಯಾಗುತ್ತದೆ. ಇದರೊಂದಿಗೆ ಈ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಶಾಲೆಯೆಂಬ ಗರಿ ಮೂಡುತ್ತದೆ. ಅದುವೆ ಗದಗ ಜಿಲ್ಲೆ, ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಸರಕಾರಿ ಪೌಢಶಾಲೆ. ಈ ಹಂತಕ್ಕೆ ಶಾಲೆಯನ್ನು ರೂಪಿಸಲು ಕಳೆದ ಹತ್ತು ವರ್ಷದಿಂದ ತನ್ನನ್ನು ತಾನು ತೇದುಕೊಂಡ ಮುಖ್ಯ ಶಿಕ್ಷಕ ರವಿ ಬಸವಣ್ಣೆಪ್ಪ ಬೆಂಚಳ್ಳಿಯವರು.

ಮೂಲತಃ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ವಾಸನ ಗ್ರಾಮದ ರವಿ ಬಿ. ಬೆಂಚಳ್ಳಿಯವರು 2009-10 ರಲ್ಲಿ ಆಯ್ಕೆಯಾಗಿ ಸರಕಾರಿ ಪ್ರೌಢಶಾಲೆ ಗೊಜನೂರದಲ್ಲಿ ಮುಖ್ಯ ಶಿಕ್ಷಕರಾಗಿ ಬರುತ್ತಾರೆ. ಕಳೆದ ಹತ್ತು ವರ್ಷದಲ್ಲಿ ರವಿಯವರು ಗೊಜನೂರು ಹೈಸ್ಕೂಲಿನ ಚಹರೆಯನ್ನೆ ಬದಲಿಸಿದರು. ಈ ಶಾಲೆಯ ಪರಿಸರವನ್ನು ಪುಟ್ಟ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಂತೆ ಮೇಲ್ದರ್ಜೆಗೇರಿಸಿದರು. ಆರಂಭಕ್ಕೆ ಶಾಲೆಯನ್ನು ತಮ್ಮ ಗ್ರಾಮ ಪಂಚಾಯ್ತಿಯಲ್ಲಿ, ನಂತರ ತಾಲೂಕಿನಲ್ಲಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ ಕಡೆಯದಾಗಿ ದೇಶವೇ ಗಮನಿಸುವಂತೆ ರೂಪಿಸಿದರು.

ಈ ಪಯಣದಲ್ಲಿ ಅವರೊಂದಿಗೆ ಗ್ರಾಮದ ಪಾಲಕ-ಪೋಷಕರು, ಗಣ್ಯರು, ಜನಪ್ರತಿನಿಧಿಗಳು, ಸಹಶಿಕ್ಷಕರು, ಸಿಬ್ಬಂದಿಯವರು, ಸಮುದಾಯ ಹಾಗೂ ವಿದ್ಯಾರ್ಥಿಗಳು, ಇದೆಲ್ಲಕ್ಕೂ ಸಹಕರಿಸಿ ಪ್ರೋತ್ಸಾಹಿಸಿದ ಇಲಾಖೆ ಅಧಿಕಾರಿಗಳು ಜೊತೆಯಾದರು. ಇದೆಲ್ಲದರ ಕೂಡುಶಕ್ತಿಯ ಫಲವಾಗಿ ನಾನಾ ವಿಭಾಗಗಳಲ್ಲಿ ಈ ತನಕ ಗೊಜನೂರು ಪ್ರೌಢಶಾಲೆಗೆ ಎಂಟು ಪ್ರಶಸ್ತಿಗಳು, ಮುಖ್ಯ ಶಿಕ್ಷಕರಾದ ರವಿ ಅವರಿಗೆ ಹನ್ನೆರಡು ಪ್ರಶಸ್ತಿಗಳು, ಇತರೆ ಶಿಕ್ಷಕ ವರ್ಗಕ್ಕೆ ಏಳು ಪ್ರಶಸ್ತಿಗಳು ಲಬಿಸಿವೆ.

ಹಾಗಾದರೆ ಈ ಪ್ರೌಢಶಾಲೆ ರೂಪಿಸಿದ ಮಾದರಿ ಯಾವುದು?

ಮುಖ್ಯವಾಗಿ ಶಾಲೆಯ ಶೈಕ್ಷಣಿಕ ವಾತಾವರಣವನ್ನು ಸಮುದಾಯ ಸಹಭಾಗಿತ್ವದಲ್ಲಿ ಕ್ರಿಯಾಶೀಲಗೊಳಿಸಲಾಗಿದೆ. ಶಾಲಾ ಆವರಣದಲ್ಲಿ ಸಾವಯವ ಕೃಷಿ, ಮಳೆಕೊಯ್ಲು, ವನಮಹೋತ್ಸವ, ಸಾಮಾಜಿಕ ಜಾಗೃತಿ, ಗ್ರಾಮ-ಮರ-ಕೆರೆ ದತ್ತು ಪಡೆಯುವಿಕೆ ಹಾಗೂ ಸ್ವಚ್ಚತೆ, ಪ್ಲಾಸ್ಟಿಕ್ ರದ್ದು ಜಾಗೃತಿ, ಶಾಲಾ ಕೈತೋಟ, ನೀರು-ಶಕ್ತಿ ಉಳಿತಾಯ, ಕಸ ವಿಲೇವಾರಿ, ಶ್ರಮದಾನ ಆರೋಗ್ಯ ರಕ್ಷಣೆ, ಪರಿಸರ ಹಾಗೂ ಆರೋಗ್ಯದ ಕುರಿತು ದಿನಾಚರಣೆಗಳಲ್ಲಿ ಊರನ್ನು ಒಳಗೊಳ್ಳುವಿಕೆ, ನವೀನ ಸೃಜನಾತ್ಮಕ ಕಲಿಕಾ ಚಟುವಟುಕೆಗಳು ಹಾಗೂ ಗುಣಾತ್ಮಕ ಕಲಿಕಾ ವಾತಾವರಣ ಹೀಗೆ ಇಡೀ ಶಾಲೆಯನ್ನು ಒಂದು ನಿರಂತರ ಪ್ರಯೋಗಶಾಲೆಯನ್ನಾಗಿ ರೂಪಿಸಲಾಗಿದೆ.

ಶಾಲೆಯಲ್ಲಿ ಸಾವಯವ ಕೃಷಿ ಪದ್ಧತಿಯ ಎರೆಹುಳು ಗೊಬ್ಬರ ಘಟಕ, ಎರೆಜಲ, ಜೀವಾಮೃತ, ಜೀವಸಾರ ಘಟಕ, ಪಂಚಗವ್ಯ, ಪೈಪ್ ಕಾಂಪೋಸ್ಟ್ ಇತ್ಯಾದಿಗಳನ್ನು ನೆಲೆಗೊಳಿಸಲಾಗಿದೆ. ಶಾಲಾ ಅಂಗಳದಲ್ಲಿ ಅಂತರ್ಜಲ ಬಳಕೆ ಸಹಕಾರಿಗೆ ಇಂಗುಗುಂಡಿ, ನೀರಿನ ಸಂಗ್ರಹಕ್ಕೆ ಮಳೆನೀರು ಸಂಗ್ರಹ ತೊಟ್ಟಿ, ಶುದ್ಧ ಕುಡಿಯುವ ನೀರಿಗೆ ಮಳೆನೀರು ಕೊಯ್ಲು ನೀರಿನ ಪುನರ್ಬಳಕೆ ಮಾಡಿ ಸಸ್ಯಪಾಲನೆ ಮಾಡಲಾಗುತ್ತದೆ. ಶಕ್ತಿ ಹಾಗೂ ಇಂಧನ ಉಳಿತಾಯಕ್ಕಾಗಿ ಸೋಲಾರ್ ವ್ಯವಸ್ಥೆ, ಎಲ್.ಇ.ಡಿ. ಬಲ್ಬ್ ಬಳಕೆ ಮಾಡಲಾಗಿದೆ. ಜೈವಿಕ ಸಸ್ಯಗಳಾದ ಹೊಂಗೆ, ಸುಬಾಬುಲ್, ಬೇವು, ನೀಲಗಿರಿ ಇತ್ಯಾದಿ ಸಸ್ಯಗಳನ್ನು ಬೆಳೆಸಲಾಗಿದೆ.

ತಾಂತ್ರಿಕವಾಗಿ ಅತ್ಯುತ್ತಮ ಗುಣಮಟ್ಟದ ಸೌಲಭ್ಯವಿರುವ ‘ಗಣಕಯಂತ್ರ ಮಾಹಿತಿ ತಂತ್ರಜ್ಞಾನ ಕೊಠಡಿ’ಯನ್ನು ‘ರಾಜೀವಶೆಟ್ಟಿ ಚಾರಿಟೆಲ್ ಸೋಸೈಟಿ (ರಿ)’ ಬೆಂಗಳೂರು ಇವರ 5 ಲಕ್ಷ ದೇಣಿಗೆಯಿಂದ ಸ್ಥಾಪಿಸಲಾಗಿದೆ, ಹೀಗಾಗಿ ಮಕ್ಕಳಿಗೆ ‘ಗಣಕಯಂತ್ರ ಶಿಕ್ಷಣ’ ನೀಡಲಾಗುತ್ತಿದೆ. ಶಾಲೆಯ ಆಕರ್ಷಕ ತರಗತಿ ಕೋಣೆ, ಸಿ.ಸಿ ಕ್ಯಾಮರಾ ಹಾಗೂ ಧ್ವನಿವರ್ಧಕ, ಎಜ್ಯುಸ್ಯಾಟ್, ರೇಡಿಯೋ ಪಾಠ, ಸ್ಮಾರ್ಟ್ ಕ್ಲಾಸ್ ಹಾಗೂ ದೂರದರ್ಶನ, ಗ್ರೀನ್-ಬ್ಲ್ಯಾಕ್-ಪ್ಯಾನಲ್-ನೋಟಿಸ್ ಬೋರ್ಡ್, ಆಡಿಯೋ-ವಿಡಿಯೋ ವ್ಯವಸ್ಥೆ, ನವೀನ ಸಾಫ್ಟ್ವೇರ್ ಆಧಾರಿತ ಗುಣಾತ್ಮಕ ಶಿಕ್ಷಣವನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಎಲ್ಲಾ ಕಲಿಕಾ ಪ್ರಕ್ರಿಯೆಗಳನ್ನು ಮುಖ್ಯ ಶಿಕ್ಷಕರ ಕೊಠಡಿಯಿಂದಲೇ ವೀಕ್ಷಿಸಿ ಚರ್ಚಿಸಬಹುದಾಗಿದೆ. ಈ ಬಗೆಯ ತಾಂತ್ರಿಕತೆಯು ಯಾವುದೇ ಖಾಸಗಿ ಶಾಲೆಯನ್ನು ಮೀರಿಸುವಂತಿದೆ. ಹೀಗಾಗಿ ಸುತ್ತಮುತ್ತಲ ಹಳ್ಳಿಗಳ ಪೋಷಕರು ತಮ್ಮ ಮಕ್ಕಳನ್ನು ಗೊಜನೂರು ಪ್ರೌಢಶಾಲೆಗೆ ಸೇರಿಸಲು ಧಾವಿಸುತ್ತಾರೆ, ಶಾಲೆಯಲ್ಲಿ 277 ಮಕ್ಕಳ ತನಕ ದಾಖಲಾತಿಯಾಗಿದೆ. ಹೀಗಾಗಿ ಹೆಚ್ಚುವರಿ ದಾಖಲಾತಿಯನ್ನು ನಿಲ್ಲಿಸಿದ್ದೂ ಇದೆ.

2010 ರಿಂದ 2020 ರ ತನಕ ಪ್ರತಿ ವರ್ಷವೂ ಶಾಲಾ ಸಾಧನೆ, ಮಕ್ಕಳ ಮತ್ತು ಮೇಷ್ಟ್ರುಗಳ ಬರಹಗಳನ್ನೊಳಗೊಂಡ ವಾರ್ಷಿಕ ಸಂಚಿಕೆಗಳನ್ನು ರವಿ ಅವರು ಸಂಪಾದಿಸಿದ್ದಾರೆ. ಈತನಕ ಅಕ್ಷರ ದುಂದುಬಿ, ಶಿಖರ ಸಂಪದ, ಜ್ಞಾನ ಮಂಜರಿ, ಅಷ್ಟಾದಶ ದರ್ಪಣ, ಪಂಚವಟಿ, ಅಂಬರಮಣಿ, ಸಪ್ತಗಿರಿ ವೈಭವ, ಗಿರಿತೇಜ ಲಹರಿ, ನವ ನಿಕೇತನ, ದಶದೀಪ್ತಿ ದರ್ಶಿಕೆ ಎಂಬ ಹತ್ತು ಸ್ಮರಣ ಸಂಚಿಕೆಗಳನ್ನು ತರಲಾಗಿದೆ. ಈ ಸಂಚಿಕೆಗಳು ಶಾಲೆಯ ಎಲ್ಲಾ ಬಗೆಯ ಕ್ರಿಯಾಶೀಲ ಚಟುವಟಿಕೆಗಳ ದಾಖಲೆಗಳಾಗಿವೆ.

ಇಷ್ಟಾಗಿಯೂ ರವಿ ಅವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸೂಕ್ಷ್ಮವಾಗಿ ಧಾರ್ಮಿಕತೆಯ ಪ್ರಭಾವವಿದೆ. ಅಂಬೇಡ್ಕರ್, ಸಂವಿಧಾನ ಪ್ರಜಾಪ್ರಭುತ್ವದ ಆಶಯಗಳ ಕುರಿತ ವೈಚಾರಿಕ ಕಾರ್ಯಕ್ರಮಗಳು ನಡೆದದ್ದು ತುಂಬಾ ವಿರಳ. ಅಂತೆಯೇ ಶಾಲಾ ಆವರಣದ ವಿವೇಕಾನಂದ ಪ್ರತಿಮೆ, ಪಂಚವಟಿ, ಶಾಲಾ ಸಂಚಿಕೆಯ ಹೆಸರುಗಳು, ಸ್ವಾಮೀಜಿಗಳನ್ನು ಶಾಲೆಗೆ ಕರೆಸುವುದು ಇಂತದ್ದರಲ್ಲೆಲ್ಲಾ ಸನಾತನತೆ ಇಣುಕುತ್ತದೆ. ಇದು ಮುಂದೆ ಶಾಲೆಯ ಸಾಧನೆಯನ್ನು ಮಂಕಾಗಿಸಬಹುದು.

ಸಂವಿಧಾನ ಬದ್ಧ ಸಾರ್ವಜನಿಕ ಸಂಸ್ಥೆಯಾದ ಶಾಲೆಯೊಂದರಲ್ಲಿ ಯಾವುದೇ ಧರ್ಮದ ಛಾಯೆಗಳು ಢಾಳಾಗಿ ಕಾಣಿಸಕೂಡದು. ’ಭಾರತೀಯರಾದ ನಾವು’ ಎಂದು ಆರಂಭವಾಗುವ ಸಂವಿಧಾನದ ಪ್ರಸ್ತಾವನೆಗೆ ಪೂರಕವಾಗಿ ಶಾಲೆಯ ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸುವುದು ಶಿಕ್ಷಕರ ಆದ್ಯ ಕರ್ತವ್ಯ. ಈ ಬೆಳವಣಿಗೆ ಅಕಸ್ಮಾತ್ ನಡೆದಿದ್ದರೆ, ಮುಂದಿನ ದಿನಗಳಲ್ಲಿ ರವಿ ಬೆಂಚಳ್ಳಿಯವರು ಇದನ್ನು ಸರಿಪಡಿಸಿಕೊಳ್ಳುತ್ತಾರೆಂದು ಭಾವಿಸುವೆ.

ತನ್ನ ಬಿಡುವಿಲ್ಲದ ಕೆಲಸಗಳಿಗೆ ತನ್ನ ಸಂಗಾತಿ ಸುಮತಿಯವರ ನೆರವಿದೆ ಎಂದು ರವಿ ಹೇಳುತ್ತಾರೆ. ಮಕ್ಕಳಾದ ವೈಭವ್ ಮತ್ತು ವರ್ಷಿತ ಅವರರೊಂದಿಗೆ ಸದ್ಯಕ್ಕೆ ರವಿಯವರು ಲಕ್ಷ್ಮೇಶ್ವರದಲ್ಲಿ ನೆಲೆಸಿದ್ದಾರೆ. ಊರಿನವರ ಸಹಕಾರದೊಂದಿಗೆ ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಹೊಯ್ಯಲಿ, ಸರಕಾರಿ ಪ್ರೌಢಶಾಲೆಗಳಿಗೆ ಅತ್ಯುತ್ತಮ ಮಾದರಿಯನ್ನು ರೂಪಿಸಲಿ ಎಂದು ನಾನುಗೌರಿ.ಕಾಮ್ ಆಶಿಸುತ್ತದೆ.

ಗೊಜನೂರು ಪ್ರೌಢಶಾಲೆ ತನ್ನದೇ ಸ್ವಂತ ವೆಬ್ ಸೈಟ್ ಹೊಂದಿದೆ. ಆಸಕ್ತರು ಶಾಲೆಯನ್ನು ಈ www.ghsgojanur.com ಕೊಂಡಿಯಿಂದ ಸಂಪರ್ಕಿಸಬಹುದು. ಅಲ್ಲದೇ ಶಾಲೆಯ ಕಲಿಕಾ ಪ್ರಗತಿ, ಚಟುವಟಿಕೆ ಹಾಗೂ ಸಾಧನೆಗಳನ್ನು youtube ನ ghsgojanur ಚಾನಲ್ ಮೂಲಕ ವೀಕ್ಷೀಸಬಹುದು. ಸಂಪರ್ಕಕ್ಕೆ ಇಮೇಲ್‌ [email protected] ಸಂಪರ್ಕಿಸಬಹುದು.

-ಅರುಣ್ ಜೋಳದಕೂಡ್ಲಿಗಿ


ಓದಿ: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...