Homeಅಂಕಣಗಳುಎಲೆಮರೆ-43: ಪರಿಸರ ಪ್ರಜ್ಞೆ, ಅತ್ಯಾಧುನಿಕ ತಾಂತ್ರಿಕತೆಯಿಂದ ದೇಶದ ಗಮನಸೆಳೆದ ಗೊಜನೂರು ಸರಕಾರಿ ಪ್ರೌಢಶಾಲೆ

ಎಲೆಮರೆ-43: ಪರಿಸರ ಪ್ರಜ್ಞೆ, ಅತ್ಯಾಧುನಿಕ ತಾಂತ್ರಿಕತೆಯಿಂದ ದೇಶದ ಗಮನಸೆಳೆದ ಗೊಜನೂರು ಸರಕಾರಿ ಪ್ರೌಢಶಾಲೆ

‘ಬೆಸ್ಟ ಇಕೋ-ಕ್ಲಬ್’ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಶಾಲೆಯೆಂಬ ಗರಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಸರಕಾರಿ ಪೌಢಶಾಲೆಗೆ ಇದೆ.

- Advertisement -
- Advertisement -

ಶಾಲಾ ಆವರಣವನ್ನು ’ಪರಿಸರ’ಮಯಗೊಳಿಸುವುದಲ್ಲದೆ, ನಿಸರ್ಗಪ್ರೇರಿತ ಕಲಿಕೆಯ ಕಾರಣಕ್ಕೆ ಈ ಪ್ರೌಢಶಾಲೆ ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲೂ `ರಾಷ್ಟ್ರಮಟ್ಟಕ್ಕೆ’ ಆರಿಸಲಾಗುತ್ತದೆ. 2019 ರ ಡಿಸೆಂಬರ್ 20 ರಂದು ಗುಜರಾತಿನ ಕೇವಡಿಯಾದಲ್ಲಿ ಕೇಂದ್ರ ಪರಿಸರ ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯವು ಆಯೋಜಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ದೇಶದ ಆರು ಪ್ರೌಢಶಾಲೆಗಳು ‘ಬೆಸ್ಟ ಇಕೋ-ಕ್ಲಬ್ ಪ್ರಶಸ್ತಿ’ಪಡೆಯುತ್ತವೆ.

ಅದರಲ್ಲಿ ಈ ಶಾಲೆಯೂ ಆಯ್ಕೆಯಾಗುತ್ತದೆ. ಇದರೊಂದಿಗೆ ಈ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಶಾಲೆಯೆಂಬ ಗರಿ ಮೂಡುತ್ತದೆ. ಅದುವೆ ಗದಗ ಜಿಲ್ಲೆ, ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಸರಕಾರಿ ಪೌಢಶಾಲೆ. ಈ ಹಂತಕ್ಕೆ ಶಾಲೆಯನ್ನು ರೂಪಿಸಲು ಕಳೆದ ಹತ್ತು ವರ್ಷದಿಂದ ತನ್ನನ್ನು ತಾನು ತೇದುಕೊಂಡ ಮುಖ್ಯ ಶಿಕ್ಷಕ ರವಿ ಬಸವಣ್ಣೆಪ್ಪ ಬೆಂಚಳ್ಳಿಯವರು.

ಮೂಲತಃ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ವಾಸನ ಗ್ರಾಮದ ರವಿ ಬಿ. ಬೆಂಚಳ್ಳಿಯವರು 2009-10 ರಲ್ಲಿ ಆಯ್ಕೆಯಾಗಿ ಸರಕಾರಿ ಪ್ರೌಢಶಾಲೆ ಗೊಜನೂರದಲ್ಲಿ ಮುಖ್ಯ ಶಿಕ್ಷಕರಾಗಿ ಬರುತ್ತಾರೆ. ಕಳೆದ ಹತ್ತು ವರ್ಷದಲ್ಲಿ ರವಿಯವರು ಗೊಜನೂರು ಹೈಸ್ಕೂಲಿನ ಚಹರೆಯನ್ನೆ ಬದಲಿಸಿದರು. ಈ ಶಾಲೆಯ ಪರಿಸರವನ್ನು ಪುಟ್ಟ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಂತೆ ಮೇಲ್ದರ್ಜೆಗೇರಿಸಿದರು. ಆರಂಭಕ್ಕೆ ಶಾಲೆಯನ್ನು ತಮ್ಮ ಗ್ರಾಮ ಪಂಚಾಯ್ತಿಯಲ್ಲಿ, ನಂತರ ತಾಲೂಕಿನಲ್ಲಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ ಕಡೆಯದಾಗಿ ದೇಶವೇ ಗಮನಿಸುವಂತೆ ರೂಪಿಸಿದರು.

ಈ ಪಯಣದಲ್ಲಿ ಅವರೊಂದಿಗೆ ಗ್ರಾಮದ ಪಾಲಕ-ಪೋಷಕರು, ಗಣ್ಯರು, ಜನಪ್ರತಿನಿಧಿಗಳು, ಸಹಶಿಕ್ಷಕರು, ಸಿಬ್ಬಂದಿಯವರು, ಸಮುದಾಯ ಹಾಗೂ ವಿದ್ಯಾರ್ಥಿಗಳು, ಇದೆಲ್ಲಕ್ಕೂ ಸಹಕರಿಸಿ ಪ್ರೋತ್ಸಾಹಿಸಿದ ಇಲಾಖೆ ಅಧಿಕಾರಿಗಳು ಜೊತೆಯಾದರು. ಇದೆಲ್ಲದರ ಕೂಡುಶಕ್ತಿಯ ಫಲವಾಗಿ ನಾನಾ ವಿಭಾಗಗಳಲ್ಲಿ ಈ ತನಕ ಗೊಜನೂರು ಪ್ರೌಢಶಾಲೆಗೆ ಎಂಟು ಪ್ರಶಸ್ತಿಗಳು, ಮುಖ್ಯ ಶಿಕ್ಷಕರಾದ ರವಿ ಅವರಿಗೆ ಹನ್ನೆರಡು ಪ್ರಶಸ್ತಿಗಳು, ಇತರೆ ಶಿಕ್ಷಕ ವರ್ಗಕ್ಕೆ ಏಳು ಪ್ರಶಸ್ತಿಗಳು ಲಬಿಸಿವೆ.

ಹಾಗಾದರೆ ಈ ಪ್ರೌಢಶಾಲೆ ರೂಪಿಸಿದ ಮಾದರಿ ಯಾವುದು?

ಮುಖ್ಯವಾಗಿ ಶಾಲೆಯ ಶೈಕ್ಷಣಿಕ ವಾತಾವರಣವನ್ನು ಸಮುದಾಯ ಸಹಭಾಗಿತ್ವದಲ್ಲಿ ಕ್ರಿಯಾಶೀಲಗೊಳಿಸಲಾಗಿದೆ. ಶಾಲಾ ಆವರಣದಲ್ಲಿ ಸಾವಯವ ಕೃಷಿ, ಮಳೆಕೊಯ್ಲು, ವನಮಹೋತ್ಸವ, ಸಾಮಾಜಿಕ ಜಾಗೃತಿ, ಗ್ರಾಮ-ಮರ-ಕೆರೆ ದತ್ತು ಪಡೆಯುವಿಕೆ ಹಾಗೂ ಸ್ವಚ್ಚತೆ, ಪ್ಲಾಸ್ಟಿಕ್ ರದ್ದು ಜಾಗೃತಿ, ಶಾಲಾ ಕೈತೋಟ, ನೀರು-ಶಕ್ತಿ ಉಳಿತಾಯ, ಕಸ ವಿಲೇವಾರಿ, ಶ್ರಮದಾನ ಆರೋಗ್ಯ ರಕ್ಷಣೆ, ಪರಿಸರ ಹಾಗೂ ಆರೋಗ್ಯದ ಕುರಿತು ದಿನಾಚರಣೆಗಳಲ್ಲಿ ಊರನ್ನು ಒಳಗೊಳ್ಳುವಿಕೆ, ನವೀನ ಸೃಜನಾತ್ಮಕ ಕಲಿಕಾ ಚಟುವಟುಕೆಗಳು ಹಾಗೂ ಗುಣಾತ್ಮಕ ಕಲಿಕಾ ವಾತಾವರಣ ಹೀಗೆ ಇಡೀ ಶಾಲೆಯನ್ನು ಒಂದು ನಿರಂತರ ಪ್ರಯೋಗಶಾಲೆಯನ್ನಾಗಿ ರೂಪಿಸಲಾಗಿದೆ.

ಶಾಲೆಯಲ್ಲಿ ಸಾವಯವ ಕೃಷಿ ಪದ್ಧತಿಯ ಎರೆಹುಳು ಗೊಬ್ಬರ ಘಟಕ, ಎರೆಜಲ, ಜೀವಾಮೃತ, ಜೀವಸಾರ ಘಟಕ, ಪಂಚಗವ್ಯ, ಪೈಪ್ ಕಾಂಪೋಸ್ಟ್ ಇತ್ಯಾದಿಗಳನ್ನು ನೆಲೆಗೊಳಿಸಲಾಗಿದೆ. ಶಾಲಾ ಅಂಗಳದಲ್ಲಿ ಅಂತರ್ಜಲ ಬಳಕೆ ಸಹಕಾರಿಗೆ ಇಂಗುಗುಂಡಿ, ನೀರಿನ ಸಂಗ್ರಹಕ್ಕೆ ಮಳೆನೀರು ಸಂಗ್ರಹ ತೊಟ್ಟಿ, ಶುದ್ಧ ಕುಡಿಯುವ ನೀರಿಗೆ ಮಳೆನೀರು ಕೊಯ್ಲು ನೀರಿನ ಪುನರ್ಬಳಕೆ ಮಾಡಿ ಸಸ್ಯಪಾಲನೆ ಮಾಡಲಾಗುತ್ತದೆ. ಶಕ್ತಿ ಹಾಗೂ ಇಂಧನ ಉಳಿತಾಯಕ್ಕಾಗಿ ಸೋಲಾರ್ ವ್ಯವಸ್ಥೆ, ಎಲ್.ಇ.ಡಿ. ಬಲ್ಬ್ ಬಳಕೆ ಮಾಡಲಾಗಿದೆ. ಜೈವಿಕ ಸಸ್ಯಗಳಾದ ಹೊಂಗೆ, ಸುಬಾಬುಲ್, ಬೇವು, ನೀಲಗಿರಿ ಇತ್ಯಾದಿ ಸಸ್ಯಗಳನ್ನು ಬೆಳೆಸಲಾಗಿದೆ.

ತಾಂತ್ರಿಕವಾಗಿ ಅತ್ಯುತ್ತಮ ಗುಣಮಟ್ಟದ ಸೌಲಭ್ಯವಿರುವ ‘ಗಣಕಯಂತ್ರ ಮಾಹಿತಿ ತಂತ್ರಜ್ಞಾನ ಕೊಠಡಿ’ಯನ್ನು ‘ರಾಜೀವಶೆಟ್ಟಿ ಚಾರಿಟೆಲ್ ಸೋಸೈಟಿ (ರಿ)’ ಬೆಂಗಳೂರು ಇವರ 5 ಲಕ್ಷ ದೇಣಿಗೆಯಿಂದ ಸ್ಥಾಪಿಸಲಾಗಿದೆ, ಹೀಗಾಗಿ ಮಕ್ಕಳಿಗೆ ‘ಗಣಕಯಂತ್ರ ಶಿಕ್ಷಣ’ ನೀಡಲಾಗುತ್ತಿದೆ. ಶಾಲೆಯ ಆಕರ್ಷಕ ತರಗತಿ ಕೋಣೆ, ಸಿ.ಸಿ ಕ್ಯಾಮರಾ ಹಾಗೂ ಧ್ವನಿವರ್ಧಕ, ಎಜ್ಯುಸ್ಯಾಟ್, ರೇಡಿಯೋ ಪಾಠ, ಸ್ಮಾರ್ಟ್ ಕ್ಲಾಸ್ ಹಾಗೂ ದೂರದರ್ಶನ, ಗ್ರೀನ್-ಬ್ಲ್ಯಾಕ್-ಪ್ಯಾನಲ್-ನೋಟಿಸ್ ಬೋರ್ಡ್, ಆಡಿಯೋ-ವಿಡಿಯೋ ವ್ಯವಸ್ಥೆ, ನವೀನ ಸಾಫ್ಟ್ವೇರ್ ಆಧಾರಿತ ಗುಣಾತ್ಮಕ ಶಿಕ್ಷಣವನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಎಲ್ಲಾ ಕಲಿಕಾ ಪ್ರಕ್ರಿಯೆಗಳನ್ನು ಮುಖ್ಯ ಶಿಕ್ಷಕರ ಕೊಠಡಿಯಿಂದಲೇ ವೀಕ್ಷಿಸಿ ಚರ್ಚಿಸಬಹುದಾಗಿದೆ. ಈ ಬಗೆಯ ತಾಂತ್ರಿಕತೆಯು ಯಾವುದೇ ಖಾಸಗಿ ಶಾಲೆಯನ್ನು ಮೀರಿಸುವಂತಿದೆ. ಹೀಗಾಗಿ ಸುತ್ತಮುತ್ತಲ ಹಳ್ಳಿಗಳ ಪೋಷಕರು ತಮ್ಮ ಮಕ್ಕಳನ್ನು ಗೊಜನೂರು ಪ್ರೌಢಶಾಲೆಗೆ ಸೇರಿಸಲು ಧಾವಿಸುತ್ತಾರೆ, ಶಾಲೆಯಲ್ಲಿ 277 ಮಕ್ಕಳ ತನಕ ದಾಖಲಾತಿಯಾಗಿದೆ. ಹೀಗಾಗಿ ಹೆಚ್ಚುವರಿ ದಾಖಲಾತಿಯನ್ನು ನಿಲ್ಲಿಸಿದ್ದೂ ಇದೆ.

2010 ರಿಂದ 2020 ರ ತನಕ ಪ್ರತಿ ವರ್ಷವೂ ಶಾಲಾ ಸಾಧನೆ, ಮಕ್ಕಳ ಮತ್ತು ಮೇಷ್ಟ್ರುಗಳ ಬರಹಗಳನ್ನೊಳಗೊಂಡ ವಾರ್ಷಿಕ ಸಂಚಿಕೆಗಳನ್ನು ರವಿ ಅವರು ಸಂಪಾದಿಸಿದ್ದಾರೆ. ಈತನಕ ಅಕ್ಷರ ದುಂದುಬಿ, ಶಿಖರ ಸಂಪದ, ಜ್ಞಾನ ಮಂಜರಿ, ಅಷ್ಟಾದಶ ದರ್ಪಣ, ಪಂಚವಟಿ, ಅಂಬರಮಣಿ, ಸಪ್ತಗಿರಿ ವೈಭವ, ಗಿರಿತೇಜ ಲಹರಿ, ನವ ನಿಕೇತನ, ದಶದೀಪ್ತಿ ದರ್ಶಿಕೆ ಎಂಬ ಹತ್ತು ಸ್ಮರಣ ಸಂಚಿಕೆಗಳನ್ನು ತರಲಾಗಿದೆ. ಈ ಸಂಚಿಕೆಗಳು ಶಾಲೆಯ ಎಲ್ಲಾ ಬಗೆಯ ಕ್ರಿಯಾಶೀಲ ಚಟುವಟಿಕೆಗಳ ದಾಖಲೆಗಳಾಗಿವೆ.

ಇಷ್ಟಾಗಿಯೂ ರವಿ ಅವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸೂಕ್ಷ್ಮವಾಗಿ ಧಾರ್ಮಿಕತೆಯ ಪ್ರಭಾವವಿದೆ. ಅಂಬೇಡ್ಕರ್, ಸಂವಿಧಾನ ಪ್ರಜಾಪ್ರಭುತ್ವದ ಆಶಯಗಳ ಕುರಿತ ವೈಚಾರಿಕ ಕಾರ್ಯಕ್ರಮಗಳು ನಡೆದದ್ದು ತುಂಬಾ ವಿರಳ. ಅಂತೆಯೇ ಶಾಲಾ ಆವರಣದ ವಿವೇಕಾನಂದ ಪ್ರತಿಮೆ, ಪಂಚವಟಿ, ಶಾಲಾ ಸಂಚಿಕೆಯ ಹೆಸರುಗಳು, ಸ್ವಾಮೀಜಿಗಳನ್ನು ಶಾಲೆಗೆ ಕರೆಸುವುದು ಇಂತದ್ದರಲ್ಲೆಲ್ಲಾ ಸನಾತನತೆ ಇಣುಕುತ್ತದೆ. ಇದು ಮುಂದೆ ಶಾಲೆಯ ಸಾಧನೆಯನ್ನು ಮಂಕಾಗಿಸಬಹುದು.

ಸಂವಿಧಾನ ಬದ್ಧ ಸಾರ್ವಜನಿಕ ಸಂಸ್ಥೆಯಾದ ಶಾಲೆಯೊಂದರಲ್ಲಿ ಯಾವುದೇ ಧರ್ಮದ ಛಾಯೆಗಳು ಢಾಳಾಗಿ ಕಾಣಿಸಕೂಡದು. ’ಭಾರತೀಯರಾದ ನಾವು’ ಎಂದು ಆರಂಭವಾಗುವ ಸಂವಿಧಾನದ ಪ್ರಸ್ತಾವನೆಗೆ ಪೂರಕವಾಗಿ ಶಾಲೆಯ ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸುವುದು ಶಿಕ್ಷಕರ ಆದ್ಯ ಕರ್ತವ್ಯ. ಈ ಬೆಳವಣಿಗೆ ಅಕಸ್ಮಾತ್ ನಡೆದಿದ್ದರೆ, ಮುಂದಿನ ದಿನಗಳಲ್ಲಿ ರವಿ ಬೆಂಚಳ್ಳಿಯವರು ಇದನ್ನು ಸರಿಪಡಿಸಿಕೊಳ್ಳುತ್ತಾರೆಂದು ಭಾವಿಸುವೆ.

ತನ್ನ ಬಿಡುವಿಲ್ಲದ ಕೆಲಸಗಳಿಗೆ ತನ್ನ ಸಂಗಾತಿ ಸುಮತಿಯವರ ನೆರವಿದೆ ಎಂದು ರವಿ ಹೇಳುತ್ತಾರೆ. ಮಕ್ಕಳಾದ ವೈಭವ್ ಮತ್ತು ವರ್ಷಿತ ಅವರರೊಂದಿಗೆ ಸದ್ಯಕ್ಕೆ ರವಿಯವರು ಲಕ್ಷ್ಮೇಶ್ವರದಲ್ಲಿ ನೆಲೆಸಿದ್ದಾರೆ. ಊರಿನವರ ಸಹಕಾರದೊಂದಿಗೆ ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಹೊಯ್ಯಲಿ, ಸರಕಾರಿ ಪ್ರೌಢಶಾಲೆಗಳಿಗೆ ಅತ್ಯುತ್ತಮ ಮಾದರಿಯನ್ನು ರೂಪಿಸಲಿ ಎಂದು ನಾನುಗೌರಿ.ಕಾಮ್ ಆಶಿಸುತ್ತದೆ.

ಗೊಜನೂರು ಪ್ರೌಢಶಾಲೆ ತನ್ನದೇ ಸ್ವಂತ ವೆಬ್ ಸೈಟ್ ಹೊಂದಿದೆ. ಆಸಕ್ತರು ಶಾಲೆಯನ್ನು ಈ www.ghsgojanur.com ಕೊಂಡಿಯಿಂದ ಸಂಪರ್ಕಿಸಬಹುದು. ಅಲ್ಲದೇ ಶಾಲೆಯ ಕಲಿಕಾ ಪ್ರಗತಿ, ಚಟುವಟಿಕೆ ಹಾಗೂ ಸಾಧನೆಗಳನ್ನು youtube ನ ghsgojanur ಚಾನಲ್ ಮೂಲಕ ವೀಕ್ಷೀಸಬಹುದು. ಸಂಪರ್ಕಕ್ಕೆ ಇಮೇಲ್‌ [email protected] ಸಂಪರ್ಕಿಸಬಹುದು.

-ಅರುಣ್ ಜೋಳದಕೂಡ್ಲಿಗಿ


ಓದಿ: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...