Homeಅಂಕಣಗಳುಎಲೆಮರೆ-43: ಪರಿಸರ ಪ್ರಜ್ಞೆ, ಅತ್ಯಾಧುನಿಕ ತಾಂತ್ರಿಕತೆಯಿಂದ ದೇಶದ ಗಮನಸೆಳೆದ ಗೊಜನೂರು ಸರಕಾರಿ ಪ್ರೌಢಶಾಲೆ

ಎಲೆಮರೆ-43: ಪರಿಸರ ಪ್ರಜ್ಞೆ, ಅತ್ಯಾಧುನಿಕ ತಾಂತ್ರಿಕತೆಯಿಂದ ದೇಶದ ಗಮನಸೆಳೆದ ಗೊಜನೂರು ಸರಕಾರಿ ಪ್ರೌಢಶಾಲೆ

‘ಬೆಸ್ಟ ಇಕೋ-ಕ್ಲಬ್’ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಶಾಲೆಯೆಂಬ ಗರಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಸರಕಾರಿ ಪೌಢಶಾಲೆಗೆ ಇದೆ.

- Advertisement -
- Advertisement -

ಶಾಲಾ ಆವರಣವನ್ನು ’ಪರಿಸರ’ಮಯಗೊಳಿಸುವುದಲ್ಲದೆ, ನಿಸರ್ಗಪ್ರೇರಿತ ಕಲಿಕೆಯ ಕಾರಣಕ್ಕೆ ಈ ಪ್ರೌಢಶಾಲೆ ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲೂ `ರಾಷ್ಟ್ರಮಟ್ಟಕ್ಕೆ’ ಆರಿಸಲಾಗುತ್ತದೆ. 2019 ರ ಡಿಸೆಂಬರ್ 20 ರಂದು ಗುಜರಾತಿನ ಕೇವಡಿಯಾದಲ್ಲಿ ಕೇಂದ್ರ ಪರಿಸರ ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯವು ಆಯೋಜಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ದೇಶದ ಆರು ಪ್ರೌಢಶಾಲೆಗಳು ‘ಬೆಸ್ಟ ಇಕೋ-ಕ್ಲಬ್ ಪ್ರಶಸ್ತಿ’ಪಡೆಯುತ್ತವೆ.

ಅದರಲ್ಲಿ ಈ ಶಾಲೆಯೂ ಆಯ್ಕೆಯಾಗುತ್ತದೆ. ಇದರೊಂದಿಗೆ ಈ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಶಾಲೆಯೆಂಬ ಗರಿ ಮೂಡುತ್ತದೆ. ಅದುವೆ ಗದಗ ಜಿಲ್ಲೆ, ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಸರಕಾರಿ ಪೌಢಶಾಲೆ. ಈ ಹಂತಕ್ಕೆ ಶಾಲೆಯನ್ನು ರೂಪಿಸಲು ಕಳೆದ ಹತ್ತು ವರ್ಷದಿಂದ ತನ್ನನ್ನು ತಾನು ತೇದುಕೊಂಡ ಮುಖ್ಯ ಶಿಕ್ಷಕ ರವಿ ಬಸವಣ್ಣೆಪ್ಪ ಬೆಂಚಳ್ಳಿಯವರು.

ಮೂಲತಃ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ವಾಸನ ಗ್ರಾಮದ ರವಿ ಬಿ. ಬೆಂಚಳ್ಳಿಯವರು 2009-10 ರಲ್ಲಿ ಆಯ್ಕೆಯಾಗಿ ಸರಕಾರಿ ಪ್ರೌಢಶಾಲೆ ಗೊಜನೂರದಲ್ಲಿ ಮುಖ್ಯ ಶಿಕ್ಷಕರಾಗಿ ಬರುತ್ತಾರೆ. ಕಳೆದ ಹತ್ತು ವರ್ಷದಲ್ಲಿ ರವಿಯವರು ಗೊಜನೂರು ಹೈಸ್ಕೂಲಿನ ಚಹರೆಯನ್ನೆ ಬದಲಿಸಿದರು. ಈ ಶಾಲೆಯ ಪರಿಸರವನ್ನು ಪುಟ್ಟ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಂತೆ ಮೇಲ್ದರ್ಜೆಗೇರಿಸಿದರು. ಆರಂಭಕ್ಕೆ ಶಾಲೆಯನ್ನು ತಮ್ಮ ಗ್ರಾಮ ಪಂಚಾಯ್ತಿಯಲ್ಲಿ, ನಂತರ ತಾಲೂಕಿನಲ್ಲಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ ಕಡೆಯದಾಗಿ ದೇಶವೇ ಗಮನಿಸುವಂತೆ ರೂಪಿಸಿದರು.

ಈ ಪಯಣದಲ್ಲಿ ಅವರೊಂದಿಗೆ ಗ್ರಾಮದ ಪಾಲಕ-ಪೋಷಕರು, ಗಣ್ಯರು, ಜನಪ್ರತಿನಿಧಿಗಳು, ಸಹಶಿಕ್ಷಕರು, ಸಿಬ್ಬಂದಿಯವರು, ಸಮುದಾಯ ಹಾಗೂ ವಿದ್ಯಾರ್ಥಿಗಳು, ಇದೆಲ್ಲಕ್ಕೂ ಸಹಕರಿಸಿ ಪ್ರೋತ್ಸಾಹಿಸಿದ ಇಲಾಖೆ ಅಧಿಕಾರಿಗಳು ಜೊತೆಯಾದರು. ಇದೆಲ್ಲದರ ಕೂಡುಶಕ್ತಿಯ ಫಲವಾಗಿ ನಾನಾ ವಿಭಾಗಗಳಲ್ಲಿ ಈ ತನಕ ಗೊಜನೂರು ಪ್ರೌಢಶಾಲೆಗೆ ಎಂಟು ಪ್ರಶಸ್ತಿಗಳು, ಮುಖ್ಯ ಶಿಕ್ಷಕರಾದ ರವಿ ಅವರಿಗೆ ಹನ್ನೆರಡು ಪ್ರಶಸ್ತಿಗಳು, ಇತರೆ ಶಿಕ್ಷಕ ವರ್ಗಕ್ಕೆ ಏಳು ಪ್ರಶಸ್ತಿಗಳು ಲಬಿಸಿವೆ.

ಹಾಗಾದರೆ ಈ ಪ್ರೌಢಶಾಲೆ ರೂಪಿಸಿದ ಮಾದರಿ ಯಾವುದು?

ಮುಖ್ಯವಾಗಿ ಶಾಲೆಯ ಶೈಕ್ಷಣಿಕ ವಾತಾವರಣವನ್ನು ಸಮುದಾಯ ಸಹಭಾಗಿತ್ವದಲ್ಲಿ ಕ್ರಿಯಾಶೀಲಗೊಳಿಸಲಾಗಿದೆ. ಶಾಲಾ ಆವರಣದಲ್ಲಿ ಸಾವಯವ ಕೃಷಿ, ಮಳೆಕೊಯ್ಲು, ವನಮಹೋತ್ಸವ, ಸಾಮಾಜಿಕ ಜಾಗೃತಿ, ಗ್ರಾಮ-ಮರ-ಕೆರೆ ದತ್ತು ಪಡೆಯುವಿಕೆ ಹಾಗೂ ಸ್ವಚ್ಚತೆ, ಪ್ಲಾಸ್ಟಿಕ್ ರದ್ದು ಜಾಗೃತಿ, ಶಾಲಾ ಕೈತೋಟ, ನೀರು-ಶಕ್ತಿ ಉಳಿತಾಯ, ಕಸ ವಿಲೇವಾರಿ, ಶ್ರಮದಾನ ಆರೋಗ್ಯ ರಕ್ಷಣೆ, ಪರಿಸರ ಹಾಗೂ ಆರೋಗ್ಯದ ಕುರಿತು ದಿನಾಚರಣೆಗಳಲ್ಲಿ ಊರನ್ನು ಒಳಗೊಳ್ಳುವಿಕೆ, ನವೀನ ಸೃಜನಾತ್ಮಕ ಕಲಿಕಾ ಚಟುವಟುಕೆಗಳು ಹಾಗೂ ಗುಣಾತ್ಮಕ ಕಲಿಕಾ ವಾತಾವರಣ ಹೀಗೆ ಇಡೀ ಶಾಲೆಯನ್ನು ಒಂದು ನಿರಂತರ ಪ್ರಯೋಗಶಾಲೆಯನ್ನಾಗಿ ರೂಪಿಸಲಾಗಿದೆ.

ಶಾಲೆಯಲ್ಲಿ ಸಾವಯವ ಕೃಷಿ ಪದ್ಧತಿಯ ಎರೆಹುಳು ಗೊಬ್ಬರ ಘಟಕ, ಎರೆಜಲ, ಜೀವಾಮೃತ, ಜೀವಸಾರ ಘಟಕ, ಪಂಚಗವ್ಯ, ಪೈಪ್ ಕಾಂಪೋಸ್ಟ್ ಇತ್ಯಾದಿಗಳನ್ನು ನೆಲೆಗೊಳಿಸಲಾಗಿದೆ. ಶಾಲಾ ಅಂಗಳದಲ್ಲಿ ಅಂತರ್ಜಲ ಬಳಕೆ ಸಹಕಾರಿಗೆ ಇಂಗುಗುಂಡಿ, ನೀರಿನ ಸಂಗ್ರಹಕ್ಕೆ ಮಳೆನೀರು ಸಂಗ್ರಹ ತೊಟ್ಟಿ, ಶುದ್ಧ ಕುಡಿಯುವ ನೀರಿಗೆ ಮಳೆನೀರು ಕೊಯ್ಲು ನೀರಿನ ಪುನರ್ಬಳಕೆ ಮಾಡಿ ಸಸ್ಯಪಾಲನೆ ಮಾಡಲಾಗುತ್ತದೆ. ಶಕ್ತಿ ಹಾಗೂ ಇಂಧನ ಉಳಿತಾಯಕ್ಕಾಗಿ ಸೋಲಾರ್ ವ್ಯವಸ್ಥೆ, ಎಲ್.ಇ.ಡಿ. ಬಲ್ಬ್ ಬಳಕೆ ಮಾಡಲಾಗಿದೆ. ಜೈವಿಕ ಸಸ್ಯಗಳಾದ ಹೊಂಗೆ, ಸುಬಾಬುಲ್, ಬೇವು, ನೀಲಗಿರಿ ಇತ್ಯಾದಿ ಸಸ್ಯಗಳನ್ನು ಬೆಳೆಸಲಾಗಿದೆ.

ತಾಂತ್ರಿಕವಾಗಿ ಅತ್ಯುತ್ತಮ ಗುಣಮಟ್ಟದ ಸೌಲಭ್ಯವಿರುವ ‘ಗಣಕಯಂತ್ರ ಮಾಹಿತಿ ತಂತ್ರಜ್ಞಾನ ಕೊಠಡಿ’ಯನ್ನು ‘ರಾಜೀವಶೆಟ್ಟಿ ಚಾರಿಟೆಲ್ ಸೋಸೈಟಿ (ರಿ)’ ಬೆಂಗಳೂರು ಇವರ 5 ಲಕ್ಷ ದೇಣಿಗೆಯಿಂದ ಸ್ಥಾಪಿಸಲಾಗಿದೆ, ಹೀಗಾಗಿ ಮಕ್ಕಳಿಗೆ ‘ಗಣಕಯಂತ್ರ ಶಿಕ್ಷಣ’ ನೀಡಲಾಗುತ್ತಿದೆ. ಶಾಲೆಯ ಆಕರ್ಷಕ ತರಗತಿ ಕೋಣೆ, ಸಿ.ಸಿ ಕ್ಯಾಮರಾ ಹಾಗೂ ಧ್ವನಿವರ್ಧಕ, ಎಜ್ಯುಸ್ಯಾಟ್, ರೇಡಿಯೋ ಪಾಠ, ಸ್ಮಾರ್ಟ್ ಕ್ಲಾಸ್ ಹಾಗೂ ದೂರದರ್ಶನ, ಗ್ರೀನ್-ಬ್ಲ್ಯಾಕ್-ಪ್ಯಾನಲ್-ನೋಟಿಸ್ ಬೋರ್ಡ್, ಆಡಿಯೋ-ವಿಡಿಯೋ ವ್ಯವಸ್ಥೆ, ನವೀನ ಸಾಫ್ಟ್ವೇರ್ ಆಧಾರಿತ ಗುಣಾತ್ಮಕ ಶಿಕ್ಷಣವನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಎಲ್ಲಾ ಕಲಿಕಾ ಪ್ರಕ್ರಿಯೆಗಳನ್ನು ಮುಖ್ಯ ಶಿಕ್ಷಕರ ಕೊಠಡಿಯಿಂದಲೇ ವೀಕ್ಷಿಸಿ ಚರ್ಚಿಸಬಹುದಾಗಿದೆ. ಈ ಬಗೆಯ ತಾಂತ್ರಿಕತೆಯು ಯಾವುದೇ ಖಾಸಗಿ ಶಾಲೆಯನ್ನು ಮೀರಿಸುವಂತಿದೆ. ಹೀಗಾಗಿ ಸುತ್ತಮುತ್ತಲ ಹಳ್ಳಿಗಳ ಪೋಷಕರು ತಮ್ಮ ಮಕ್ಕಳನ್ನು ಗೊಜನೂರು ಪ್ರೌಢಶಾಲೆಗೆ ಸೇರಿಸಲು ಧಾವಿಸುತ್ತಾರೆ, ಶಾಲೆಯಲ್ಲಿ 277 ಮಕ್ಕಳ ತನಕ ದಾಖಲಾತಿಯಾಗಿದೆ. ಹೀಗಾಗಿ ಹೆಚ್ಚುವರಿ ದಾಖಲಾತಿಯನ್ನು ನಿಲ್ಲಿಸಿದ್ದೂ ಇದೆ.

2010 ರಿಂದ 2020 ರ ತನಕ ಪ್ರತಿ ವರ್ಷವೂ ಶಾಲಾ ಸಾಧನೆ, ಮಕ್ಕಳ ಮತ್ತು ಮೇಷ್ಟ್ರುಗಳ ಬರಹಗಳನ್ನೊಳಗೊಂಡ ವಾರ್ಷಿಕ ಸಂಚಿಕೆಗಳನ್ನು ರವಿ ಅವರು ಸಂಪಾದಿಸಿದ್ದಾರೆ. ಈತನಕ ಅಕ್ಷರ ದುಂದುಬಿ, ಶಿಖರ ಸಂಪದ, ಜ್ಞಾನ ಮಂಜರಿ, ಅಷ್ಟಾದಶ ದರ್ಪಣ, ಪಂಚವಟಿ, ಅಂಬರಮಣಿ, ಸಪ್ತಗಿರಿ ವೈಭವ, ಗಿರಿತೇಜ ಲಹರಿ, ನವ ನಿಕೇತನ, ದಶದೀಪ್ತಿ ದರ್ಶಿಕೆ ಎಂಬ ಹತ್ತು ಸ್ಮರಣ ಸಂಚಿಕೆಗಳನ್ನು ತರಲಾಗಿದೆ. ಈ ಸಂಚಿಕೆಗಳು ಶಾಲೆಯ ಎಲ್ಲಾ ಬಗೆಯ ಕ್ರಿಯಾಶೀಲ ಚಟುವಟಿಕೆಗಳ ದಾಖಲೆಗಳಾಗಿವೆ.

ಇಷ್ಟಾಗಿಯೂ ರವಿ ಅವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸೂಕ್ಷ್ಮವಾಗಿ ಧಾರ್ಮಿಕತೆಯ ಪ್ರಭಾವವಿದೆ. ಅಂಬೇಡ್ಕರ್, ಸಂವಿಧಾನ ಪ್ರಜಾಪ್ರಭುತ್ವದ ಆಶಯಗಳ ಕುರಿತ ವೈಚಾರಿಕ ಕಾರ್ಯಕ್ರಮಗಳು ನಡೆದದ್ದು ತುಂಬಾ ವಿರಳ. ಅಂತೆಯೇ ಶಾಲಾ ಆವರಣದ ವಿವೇಕಾನಂದ ಪ್ರತಿಮೆ, ಪಂಚವಟಿ, ಶಾಲಾ ಸಂಚಿಕೆಯ ಹೆಸರುಗಳು, ಸ್ವಾಮೀಜಿಗಳನ್ನು ಶಾಲೆಗೆ ಕರೆಸುವುದು ಇಂತದ್ದರಲ್ಲೆಲ್ಲಾ ಸನಾತನತೆ ಇಣುಕುತ್ತದೆ. ಇದು ಮುಂದೆ ಶಾಲೆಯ ಸಾಧನೆಯನ್ನು ಮಂಕಾಗಿಸಬಹುದು.

ಸಂವಿಧಾನ ಬದ್ಧ ಸಾರ್ವಜನಿಕ ಸಂಸ್ಥೆಯಾದ ಶಾಲೆಯೊಂದರಲ್ಲಿ ಯಾವುದೇ ಧರ್ಮದ ಛಾಯೆಗಳು ಢಾಳಾಗಿ ಕಾಣಿಸಕೂಡದು. ’ಭಾರತೀಯರಾದ ನಾವು’ ಎಂದು ಆರಂಭವಾಗುವ ಸಂವಿಧಾನದ ಪ್ರಸ್ತಾವನೆಗೆ ಪೂರಕವಾಗಿ ಶಾಲೆಯ ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸುವುದು ಶಿಕ್ಷಕರ ಆದ್ಯ ಕರ್ತವ್ಯ. ಈ ಬೆಳವಣಿಗೆ ಅಕಸ್ಮಾತ್ ನಡೆದಿದ್ದರೆ, ಮುಂದಿನ ದಿನಗಳಲ್ಲಿ ರವಿ ಬೆಂಚಳ್ಳಿಯವರು ಇದನ್ನು ಸರಿಪಡಿಸಿಕೊಳ್ಳುತ್ತಾರೆಂದು ಭಾವಿಸುವೆ.

ತನ್ನ ಬಿಡುವಿಲ್ಲದ ಕೆಲಸಗಳಿಗೆ ತನ್ನ ಸಂಗಾತಿ ಸುಮತಿಯವರ ನೆರವಿದೆ ಎಂದು ರವಿ ಹೇಳುತ್ತಾರೆ. ಮಕ್ಕಳಾದ ವೈಭವ್ ಮತ್ತು ವರ್ಷಿತ ಅವರರೊಂದಿಗೆ ಸದ್ಯಕ್ಕೆ ರವಿಯವರು ಲಕ್ಷ್ಮೇಶ್ವರದಲ್ಲಿ ನೆಲೆಸಿದ್ದಾರೆ. ಊರಿನವರ ಸಹಕಾರದೊಂದಿಗೆ ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಹೊಯ್ಯಲಿ, ಸರಕಾರಿ ಪ್ರೌಢಶಾಲೆಗಳಿಗೆ ಅತ್ಯುತ್ತಮ ಮಾದರಿಯನ್ನು ರೂಪಿಸಲಿ ಎಂದು ನಾನುಗೌರಿ.ಕಾಮ್ ಆಶಿಸುತ್ತದೆ.

ಗೊಜನೂರು ಪ್ರೌಢಶಾಲೆ ತನ್ನದೇ ಸ್ವಂತ ವೆಬ್ ಸೈಟ್ ಹೊಂದಿದೆ. ಆಸಕ್ತರು ಶಾಲೆಯನ್ನು ಈ www.ghsgojanur.com ಕೊಂಡಿಯಿಂದ ಸಂಪರ್ಕಿಸಬಹುದು. ಅಲ್ಲದೇ ಶಾಲೆಯ ಕಲಿಕಾ ಪ್ರಗತಿ, ಚಟುವಟಿಕೆ ಹಾಗೂ ಸಾಧನೆಗಳನ್ನು youtube ನ ghsgojanur ಚಾನಲ್ ಮೂಲಕ ವೀಕ್ಷೀಸಬಹುದು. ಸಂಪರ್ಕಕ್ಕೆ ಇಮೇಲ್‌ [email protected] ಸಂಪರ್ಕಿಸಬಹುದು.

-ಅರುಣ್ ಜೋಳದಕೂಡ್ಲಿಗಿ


ಓದಿ: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೇರಿಕಾದಲ್ಲಿ ಅದಾನಿ ಮತ್ತು ಆಪ್ತರ ಮೇಲಿನ ಕ್ರಿಮಿನಲ್ ಕೇಸ್ ರದ್ದು: ‘ರಾಜಿ ಮಾಡಿಕೊಂಡ ಪ್ರಧಾನಿ ಭಾರತದ ಹಿತಾಸಕ್ತಿ ಮಾರಾಟ ಮಾಡಿದ್ದಾರೆ’ ಎಂದ ರಾಹುಲ್ ಗಾಂಧಿ 

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ಶಾಶ್ವತವಾಗಿ ವಜಾಗೊಳಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್...

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್...

‘ಆಹಾರ ಸುರಕ್ಷತೆ – ಔಷಧ ಆಡಳಿತ ಇಲಾಖೆ’ಯಿಂದ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ; ಹೊಸ ಮಾರ್ಗಸೂಚಿ ಪ್ರಕಟ

ರಾಜ್ಯದ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳು ಪಾಲಿಸಬೇಕಾದ 'ಆಹಾರ ಸುರಕ್ಷತಾ ಮತ್ತು ನೈರ್ಮಲ್ಯ ನಿಯಮಗಳ'ನ್ನು 'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧ ಆಡಳಿತ ಇಲಾಖೆ' ಆಯುಕ್ತರು ಪ್ರಕಟಿಸಿದ್ದಾರೆ. ಕಳೆದ ಮೂರ್ನಾಲ್ಕು...

ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟ 1 ವರ್ಷ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಇತರ ಅಪಾಯಕಾರಿ ಉತ್ಪನ್ನಗಳ ಮೇಲೆ ಸಂಪೂರ್ಣ...

ಲೋಕಸಭೆ ಬಲ 543 ರಲ್ಲೇ ಶಾಶ್ವತವಾಗಿ ಮುಂದುವರಿಸಲು ಕೇಂದ್ರಕ್ಕೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಸಿ. ಜೋಸೆಫ್ ವಿಜಯ್ ನಿರ್ಣಯ ಮಂಡನೆ

ಚೆನ್ನೈ: ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು ಪ್ರಸ್ತುತ ಇರುವ 543 ರಲ್ಲೇ ಶಾಶ್ವತವಾಗಿ ಕಾಯ್ದುಕೊಳ್ಳಬೇಕು ಮತ್ತು ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸಬಾರದು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಸಿ....

ಯುಪಿಯಲ್ಲಿ ಅಮಾನವೀಯ ಘಟನೆ: ಮೊಬೈಲ್ ಕದ್ದ ಆರೋಪ ಹೊರಿಸಿ ಒಬಿಸಿ ಯುವಕನ ತಲೆ ಬೋಳಿಸಿ ಮೆರವಣಿಗೆ; ಮೇಲ್ಜಾತಿಯ ತಂದೆ-ಮಗನ ಬಂಧನ

ಉನ್ನಾವೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ದಲಿತ ಸಮುದಾಯಗಳ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾರ್ವಜನಿಕ ಅವಮಾನದಂತಹ ಅಮಾನವೀಯ ಕೃತ್ಯಗಳು, ಈಗ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆಯೂ...

SIR 3ನೇ ಹಂತ: 12 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ 1.58 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಹಂತದಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಸುಮಾರು 1.58 ಕೋಟಿ ಹೆಸರುಗಳನ್ನು ಅಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ 3ನೇ ಹಂತದ ವ್ಯಾಪ್ತಿಗೆ ಒಳಪಡುವ 16 ರಾಜ್ಯಗಳಲ್ಲಿ...

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...