Homeಎಲೆಮರೆಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

- Advertisement -
- Advertisement -

ತೆಲಂಗಾಣದಿಂದ 27 ಕಿಮೀ ದೂರದ ಸೇಡಂ ತಾಲೂಕಿನ ತೆಲುಗು ಭಾಷಿಕರೇ ಹೆಚ್ಚಿರುವ ಜಾಕನಪಲ್ಲಿ ಎಂಬ ಹಳ್ಳಿಯ ಹೈಸ್ಕೂಲ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತನ್ನೂರ ದೊಡ್ಡಾಟ ಶೈಲಿಯ `ಬಲಲಲ ಬಲಿಯೇ’ ನಾಟಕ ಪ್ರದರ್ಶಿಸಿ ತೃತೀಯ ಬಹುಮಾನ ಪಡೆಯುತ್ತಾರೆ. `ಮಣ್ಣು ರೈತನ ಕಣ್ಣು’ ಎನ್ನುವ ನಾಟಕವನ್ನು ಮೈಸೂರು ಜಿಲ್ಲೆ ಹೆಗ್ಗಡದೇವನ ಕೋಟೆ ತಾಲೂಕಿನ ಹೊಸಳ್ಳಿ ಗ್ರಾಮವನ್ನು ಒಳಗೊಂಡಂತೆ, ಹೆಗ್ಗೋಡು, ಬೆಂಗಳೂರು, ಬಿಜಾಪುರ, ಚಿತ್ರದುರ್ಗದಲ್ಲಿ ಅಭಿನಯಿಸಿ ಬೆರಗು ಮೂಡಿಸುತ್ತಾರೆ. ಹೀಗೆ ಕರ್ನಾಟಕದ ಅಂಚಿನ ಹಳ್ಳಿಯೊಂದರ ಮಕ್ಕಳು ರಾಜ್ಯದ ಇನ್ನೊಂದು ಅಂಚನ್ನು ತಲುಪಿ ನಾಟಕ ಪ್ರದರ್ಶನ ಮಾಡುವಂತೆ ಮಕ್ಕಳನ್ನು ರೂಪಿಸಿದವರು ರಂಗ ಶಿಕ್ಷಕ ಅಶೋಕ ತೋಟ್ನಳ್ಳಿ.

ಚಿತ್ತಾಪುರ ತಾಲೂಕಿನ ಗದ್ದಿಗೆ ಅಳ್ಳೊಳ್ಳಿ ಎನ್ನುವ ಗ್ರಾಮದ ಅಶೋಕ್ ಅವರು ಪದವಿ ನಂತರ ಶರಣಬಸವೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಎಂ.ಎ ಫೈನ್ ಆರ್ಟ್ಸ ಮುಗಿಸಿ,2006-07ರಲ್ಲಿ ನೀನಾಸಂನಲ್ಲಿ ನಾಟಕ ಡಿಪ್ಲೊಮಾ ಮಾಡುತ್ತಾರೆ. 2008ಅಕ್ಟೋಬರ್ 30ಕ್ಕೆ ನಾಟಕ ಶಿಕ್ಷಕರಾಗಿ ಜಾಕನಪಲ್ಲಿಯ ಪ್ರೌಢಶಾಲೆಗೆ ಬರುತ್ತಾರೆ.

ಜಡಗೊಂಡಿದ್ದ ಶಾಲೆಯನ್ನು ತನ್ನೊಳಗಿನ ಕ್ರಿಯಾಶೀಲ ‘ಕಲಾವಿದ’ನ ನೆರವಿಂದ ನಿಧಾನಕ್ಕೆ ಜೀವಂತಗೊಳಿಸಲು ಶುರುಮಾಡುತ್ತಾರೆ. ಶಾಲೆಯ ಕಡೆಗೆ ಊರಿನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. 2009 ರಲ್ಲಿ ‘ಹಮದ ಮೊಚಿ’ ನಾಟಕವನ್ನು ಒಳಗೊಂಡಂತೆ ಗಡಿನಾಡ ಸಮ್ಮೇಳನದಲ್ಲಿ ಮಕ್ಕಳಿಂದ ಮೂರು ನಾಟಕಗಳನ್ನು ಮಾಡಿಸಿ ಗಮನ ಸೆಳೆಯುತ್ತಾರೆ. ಆಗ ಶಾಲೆಯ ಚಟುವಟಿಕೆಯ ಜೊತೆ ಊರನ್ನು ಬೆಸೆಯಲು ೨೦೧೦ ರಲ್ಲಿ `ತಿಂಗಳ ಸಂಜೆ’ ಎನ್ನುವ ವೇದಿಕೆಯೊಂದನ್ನು ಹುಟ್ಟುಹಾಕುತ್ತಾರೆ. ಇದರ ಚಟುವಟಿಕೆಗಳಿಗೆ ಪೂರಕವಾಗಿ ಶಾಲೆಯಲ್ಲಿ `ನಾನು-ನನ್ನೂರು’ ಎನ್ನುವ ಮಕ್ಕಳ ವೇದಿಕೆಯನ್ನು ಶುರುಮಾಡುತ್ತಾರೆ. ತಿಂಗಳು ಪೂರ್ತಿ ಕಲಿತ ಮಕ್ಕಳ ನಾಟಕ, ಅಭಿನಯಗಳು ಈ ತಿಂಗಳ ಸಂಜೆಯಲ್ಲಿ ಪ್ರದರ್ಶನವಾಗುವಂತೆಯೂ, ಹಳ್ಳಿಯ ಜನರೆಲ್ಲರೂ ಈ ಸಂಜೆಯಲ್ಲಿ ತಮ್ಮದೇ ಮಕ್ಕಳ ಅಭಿನಯವನ್ನು ಸವಿಯುವಂತೆ ಮಾಡಲಾಗುತ್ತದೆ.

ನಂತರ ಊರಿನ ಹಿರಿಯರಲ್ಲಿರುವ ಜನಪದ ಕಲೆಯನ್ನು ಶಾಲೆಯ ಮಕ್ಕಳಲ್ಲಿ ಕಸಿ ಮಾಡುವ ಪ್ರಯತ್ನ ಶುರುಮಾಡುತ್ತಾರೆ. ಜಾಕನಪಲ್ಲಿಯಲ್ಲಿ ಮರೆವಿಗೆ ಸರಿದಿದ್ದ ದೊಡ್ಡಾಟಕ್ಕೆ ಜೀವ ತುಂಬುತ್ತಾರೆ. ಊರಲ್ಲಿನ ದೊಡ್ಡಾಟದ ಕಲಾವಿದರನ್ನು ಶಾಲೆಗೆ ಕರೆಸಿ ಮಕ್ಕಳಿಗೆ ತರಬೇತಿ ಕೊಡಿಸುತ್ತಾರೆ. ಅಜ್ಜ ಅಜ್ಜಿಯರ ಕರೆಸಿ ಜನಪದ ಕಥೆಗಳನ್ನು ಹೇಳಿಸುತ್ತಾರೆ. ಇದಕ್ಕೆ ಬೆಂಗಳೂರಿನ ಫೋಕ್ ಆರ್ಟ್ ಫೌಂಡೇಷನ್ ಕಲಿ-ಕಲಿಸು ಯೋಜನೆಯಡಿಯಲ್ಲಿ ಸಹಾಯ ಮಾಡುತ್ತದೆ. ಹೀಗೆ ನಿಧಾನಕ್ಕೆ ಶಾಲೆಗೆ ಸರಕಾರ ನೇಮಿಸಿದ ಶಿಕ್ಷಕರಲ್ಲದೆ ಊರಿನ ಹಿರಿಯ ಕಲಾವಿದರೂ ಶಿಕ್ಷಕರಾಗಿ ರೂಪಾಂತರ ಹೊಂದುತ್ತಾರೆ.

ಈಚಿನ `ಒಂದು ರಾತ್ರಿ’ ನಾಟಕವನ್ನು ಒಳಗೊಂಡಂತೆ ಮಕ್ಕಳಿಗಾಗಿ ಅಶೋಕ್ ಈ ತನಕ 28 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಶಾಲಾ ಪಠ್ಯಗಳಲ್ಲಿ ಕೆಲವನ್ನು ಆಶು ಅಭಿನಯವಾಗಿ ರೂಪಾಂತರಗೊಳಿಸುತ್ತಾರೆ. ಶಿಲ್ಪ ಮತ್ತು ಚಿತ್ರ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿ, ಸಾಂಜಿ ಕಲೆಯ ಕಾರ್ಯಾಗಾರ ನಡೆಸಿ ಮಕ್ಕಳಿಗೆ ಶಿಲ್ಪ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸುತ್ತಾರೆ. ಮಕ್ಕಳಿಂದ ಪತ್ರಿಕೆಗಳಲ್ಲಿ ಬಂದ ವ್ಯಂಗ್ಯಚಿತ್ರಗಳನ್ನು ಆಧರಿಸಿ ಕಥೆ ಬರೆಸುವ ಸ್ಪರ್ಧೆ ಏರ್ಪಡಿಸಿ, ವ್ಯಂಗ್ಯಚಿತ್ರ ಪ್ರದರ್ಶನ ಮಾಡಿಸಿದ್ದಾರೆ. ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶಾಲಾ ಮಕ್ಕಳಿಂದ ಮಣ್ಣೆತ್ತು ಮಾಡಿಸಿ, ಮಣ್ಣಿನ ಗಣೇಶನ ಮಾಡಿಸುವ ಸ್ಪರ್ಧೆಗಳಲ್ಲಿ ಮಕ್ಕಳನ್ನು ಕಲೆಯತ್ತ ಸೆಳೆದಿದ್ದಾರೆ.

‘ಗ್ರಾಮೀಣ ನಾಟಕೋತ್ಸವ’ ಏರ್ಪಡಿಸಿ ಹಳ್ಳಿಗಳಲ್ಲಿ ಮಕ್ಕಳ ನಾಟಕದ ಅಭಿರುಚಿ ಹೆಚ್ಚಿಸಿ, ಸ್ಥಳೀಯ ಸಾಹಿತಿಗಳಿಂದ ಕಥೆ, ಕವಿತಾ ವಾಚನ ಮಾಡಿಸಿ ಸಾಹಿತ್ಯದ ಅಭಿರುಚಿ ಮೂಡಿಸಿದ್ದಾರೆ. ಗಾಂಧಿ ಜಯಂತಿಯಲ್ಲಿ `ಕುಡಿಯೋದ ಬಿಡ್ರಿ, ಒಳ್ಳೇದಲ್ಲ’ ಎಂದು ಜಾಗೃತಿ ಮೂಡಿಸುತ್ತಲೇ, ವಿಶ್ವರಂಗಭೂಮಿ ದಿನ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ ಮಕ್ಕಳಿಂದ ನಾಟಕ ಆಡಿಸುತ್ತಾರೆ. `ಸರಕಾರಿ ಶಾಲೆಗಳೆ ನಮ್ಮ ಜೀವಾಳ’ ಎನ್ನುವ ಅಭಿಯಾನವನ್ನು ದೊಡ್ಡಾಟದ ವೇಷ ಧರಿಸಿ ಮಕ್ಕಳು ಸರಕಾರಿ ಶಾಲೆಯ ಮಹತ್ವವನ್ನು ಸಾರುತ್ತಾರೆ.

‘ಪ್ರತಿಭಾ ಕಾರಂಜಿಗೆಂದು ತಯಾರು ಮಾಡಿದ ನಾಟಕಗಳನ್ನು ಮಕ್ಕಳು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಭಿನಯಿಸುತ್ತಾರೆ. ಹೀಗೆ ಹಳ್ಳಿಗಳಲ್ಲಿ ಮಕ್ಕಳು ನಾಟಕ ಆಡಿದಾಗ, ನಾಟಕ ಮೆಚ್ಚಿ ಊರಿನವರು ಆಯರ್ ಮಾಡುತ್ತಾರೆ. ಹೀಗೆ ಆಯರ್ ಮಾಡಿದ ಹಣವನ್ನು ಸಂಗ್ರಹಿಸಿ, ಅದಕ್ಕೆ ನಾವು ಒಂದಷ್ಟು ಹಣ ಹಾಕಿ ಟ್ರಾವೆಲ್ ಖರ್ಚು ತೆಗೆದು, ಉಳಿದ ಹಣದಲ್ಲಿ ಮಕ್ಕಳಿಗೆ ಟ್ರಾವೆಲಿಂಗ್ ಬ್ಯಾಗ್ ತಂದು ಕೊಟ್ಟಿದೀವಿ. ಮೈಸೂರು ಬೆಂಗಳೂರಿಗೆ ಪ್ರತಿಭಾ ಕಾರಂಜಿಗೆ ಹೋದಾಗ ಅದರ ಖೂನ ಇರಲಿ ಅಂತ ಮಕ್ಕಳಿಗೆ ಸ್ಟಡಿ ಚೇರು, ಸ್ಟಡಿ ಲ್ಯಾಂಪು ತಂದಿದ್ದೀವಿ’ ಎನ್ನುತ್ತಾರೆ.

ಮುಂದುವರಿದು `ಮೇಕಪ್, ಲೈಟಿಂಗ್, ಸೌಂಡ್ ಸಿಸ್ಟಮ್ ಎಲ್ಲವನ್ನು ಮಕ್ಕಳೆ ಮಾಡುತ್ತಾರೆ. ನನ್ನ ಸಂಬಳದಲ್ಲಿ ಕೊಂಡ ಎರಡುವರೆ ಲಕ್ಷದ ಪ್ರಾಪರ್ಟಿ ಇದೆ. ತುಂಬಾ ಅಗತ್ಯವಾದ ರಂಗಪರಿಕರಗಳು ನಮ್ಮಲ್ಲಿವೆ. ನಮ್ಮ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ನಮ್ಮ ಹೈಸ್ಕೂಲ್ ಕಾರ್ಯಕ್ರಮಗಳಿಗೆ ಜೊತೆಯಾಗುತ್ತಾರೆ. ನಮ್ಮ ಕೈಲಿ ದುಡ್ಡು ಹಾಕಿ ಮಕ್ಕಳನ್ನು ಪ್ರತಿಭಾ ಕಾರಂಜಿಗೆ ದೂರ ದೂರ ಕರಕೊಂಡು ಹೋಗಿ ಎರಡು ವರ್ಷ ಆದ್ರೂನು ಟ್ರಾವೆಲ್ ಬಿಲ್ ಬರೋದಿಲ್ಲ, ಆದ್ರೂ ಉತ್ಸಾಹ ಕಳಕೊಳ್ಳಂಗಿಲ್ಲ’ ಎಂದು ಅಶೋಕ್ ತಮ್ಮ ಬಿಕ್ಕಟ್ಟನ್ನೂ ಹೇಳುತ್ತಾರೆ.

ಮಕ್ಕಳೊಂದಿಗೆ ಅಶೋಕ ತೋಟ್ನಳ್ಳಿಯವರು

ಅಶೋಕ ತೋಟ್ನಳ್ಳಿಯವರು ಕಲಾವಿದರೂ, ನಾಟಕಕಾರರೂ ಆದ ಕಾರಣ ತಮಗೆ ಲಭ್ಯವಿರುವ ವಸ್ತುಗಳನ್ನೆ ನಾಟಕದ ಪರಿಕರಗಳನ್ನಾಗಿ ಪರಿವರ್ತಿಸುತ್ತಾರೆ. ಊರಿನ ಜನಪದ ವಸ್ತುಗಳನ್ನು ಸೇರಿಸಿ, ಅವುಗಳನ್ನು ಬಣ್ಣದಿಂದ ಸಿಂಗರಿಸಿದ್ದಾರೆ. ಹಾಗಾಗಿ ಶಾಲೆಯೆ ಒಂದು ಆರ್ಟ್ಗ್ಯಾಲರಿಯಂತಿದೆ. ಹೀಗೆ ಒಬ್ಬ ರಂಗಭೂಮಿ ಶಿಕ್ಷಕ ತನ್ನೊಳಗಿನ ಕಲಾವಿದನನ್ನು ಕ್ರಿಯಾಶೀಲಗೊಳಿಸಿ ಇಡೀ ಊರನ್ನೇ ರಂಗಭೂಮಿಯನ್ನಾಗಿ ರೂಪಾಂತರಿಸಿದ ಶ್ರಮ ಮತ್ತು ಬದ್ಧತೆ ನಿಜಕ್ಕೂ ಮೆಚ್ಚುವಂಥದ್ದು. ಊರಿನ ಜನರು, ಮಕ್ಕಳ ಸಹಕಾರ ಮರೆಯುವಂತಿಲ್ಲ ಎನ್ನುವ ಅಶೋಕ ಅವರು ಮತ್ತಷ್ಟು ಮಾದರಿ ಕೆಲಸಗಳಲ್ಲಿ ತೊಡಗಿಕೊಳ್ಳಲೆಂದು ಪತ್ರಿಕೆ ಶುಭಕೋರುತ್ತದೆ.

ಅಶೋಕ ತೋಟ್ನಳ್ಳಿಯವರ ಯೂಟೂಬ್ ಚಾನಲ್‌ಗೆ ಇಲ್ಲಿ ಕ್ಲಿಕ್ ಮಾಡಿ

ಅವರ ಫೇಸ್‌ಬುಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ ‘ಸಂತೋಷ ಗುಡ್ಡಿಯಂಗಡಿ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...