Homeಎಲೆಮರೆಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

- Advertisement -
- Advertisement -

ತೆಲಂಗಾಣದಿಂದ 27 ಕಿಮೀ ದೂರದ ಸೇಡಂ ತಾಲೂಕಿನ ತೆಲುಗು ಭಾಷಿಕರೇ ಹೆಚ್ಚಿರುವ ಜಾಕನಪಲ್ಲಿ ಎಂಬ ಹಳ್ಳಿಯ ಹೈಸ್ಕೂಲ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತನ್ನೂರ ದೊಡ್ಡಾಟ ಶೈಲಿಯ `ಬಲಲಲ ಬಲಿಯೇ’ ನಾಟಕ ಪ್ರದರ್ಶಿಸಿ ತೃತೀಯ ಬಹುಮಾನ ಪಡೆಯುತ್ತಾರೆ. `ಮಣ್ಣು ರೈತನ ಕಣ್ಣು’ ಎನ್ನುವ ನಾಟಕವನ್ನು ಮೈಸೂರು ಜಿಲ್ಲೆ ಹೆಗ್ಗಡದೇವನ ಕೋಟೆ ತಾಲೂಕಿನ ಹೊಸಳ್ಳಿ ಗ್ರಾಮವನ್ನು ಒಳಗೊಂಡಂತೆ, ಹೆಗ್ಗೋಡು, ಬೆಂಗಳೂರು, ಬಿಜಾಪುರ, ಚಿತ್ರದುರ್ಗದಲ್ಲಿ ಅಭಿನಯಿಸಿ ಬೆರಗು ಮೂಡಿಸುತ್ತಾರೆ. ಹೀಗೆ ಕರ್ನಾಟಕದ ಅಂಚಿನ ಹಳ್ಳಿಯೊಂದರ ಮಕ್ಕಳು ರಾಜ್ಯದ ಇನ್ನೊಂದು ಅಂಚನ್ನು ತಲುಪಿ ನಾಟಕ ಪ್ರದರ್ಶನ ಮಾಡುವಂತೆ ಮಕ್ಕಳನ್ನು ರೂಪಿಸಿದವರು ರಂಗ ಶಿಕ್ಷಕ ಅಶೋಕ ತೋಟ್ನಳ್ಳಿ.

ಚಿತ್ತಾಪುರ ತಾಲೂಕಿನ ಗದ್ದಿಗೆ ಅಳ್ಳೊಳ್ಳಿ ಎನ್ನುವ ಗ್ರಾಮದ ಅಶೋಕ್ ಅವರು ಪದವಿ ನಂತರ ಶರಣಬಸವೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಎಂ.ಎ ಫೈನ್ ಆರ್ಟ್ಸ ಮುಗಿಸಿ,2006-07ರಲ್ಲಿ ನೀನಾಸಂನಲ್ಲಿ ನಾಟಕ ಡಿಪ್ಲೊಮಾ ಮಾಡುತ್ತಾರೆ. 2008ಅಕ್ಟೋಬರ್ 30ಕ್ಕೆ ನಾಟಕ ಶಿಕ್ಷಕರಾಗಿ ಜಾಕನಪಲ್ಲಿಯ ಪ್ರೌಢಶಾಲೆಗೆ ಬರುತ್ತಾರೆ.

ಜಡಗೊಂಡಿದ್ದ ಶಾಲೆಯನ್ನು ತನ್ನೊಳಗಿನ ಕ್ರಿಯಾಶೀಲ ‘ಕಲಾವಿದ’ನ ನೆರವಿಂದ ನಿಧಾನಕ್ಕೆ ಜೀವಂತಗೊಳಿಸಲು ಶುರುಮಾಡುತ್ತಾರೆ. ಶಾಲೆಯ ಕಡೆಗೆ ಊರಿನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. 2009 ರಲ್ಲಿ ‘ಹಮದ ಮೊಚಿ’ ನಾಟಕವನ್ನು ಒಳಗೊಂಡಂತೆ ಗಡಿನಾಡ ಸಮ್ಮೇಳನದಲ್ಲಿ ಮಕ್ಕಳಿಂದ ಮೂರು ನಾಟಕಗಳನ್ನು ಮಾಡಿಸಿ ಗಮನ ಸೆಳೆಯುತ್ತಾರೆ. ಆಗ ಶಾಲೆಯ ಚಟುವಟಿಕೆಯ ಜೊತೆ ಊರನ್ನು ಬೆಸೆಯಲು ೨೦೧೦ ರಲ್ಲಿ `ತಿಂಗಳ ಸಂಜೆ’ ಎನ್ನುವ ವೇದಿಕೆಯೊಂದನ್ನು ಹುಟ್ಟುಹಾಕುತ್ತಾರೆ. ಇದರ ಚಟುವಟಿಕೆಗಳಿಗೆ ಪೂರಕವಾಗಿ ಶಾಲೆಯಲ್ಲಿ `ನಾನು-ನನ್ನೂರು’ ಎನ್ನುವ ಮಕ್ಕಳ ವೇದಿಕೆಯನ್ನು ಶುರುಮಾಡುತ್ತಾರೆ. ತಿಂಗಳು ಪೂರ್ತಿ ಕಲಿತ ಮಕ್ಕಳ ನಾಟಕ, ಅಭಿನಯಗಳು ಈ ತಿಂಗಳ ಸಂಜೆಯಲ್ಲಿ ಪ್ರದರ್ಶನವಾಗುವಂತೆಯೂ, ಹಳ್ಳಿಯ ಜನರೆಲ್ಲರೂ ಈ ಸಂಜೆಯಲ್ಲಿ ತಮ್ಮದೇ ಮಕ್ಕಳ ಅಭಿನಯವನ್ನು ಸವಿಯುವಂತೆ ಮಾಡಲಾಗುತ್ತದೆ.

ನಂತರ ಊರಿನ ಹಿರಿಯರಲ್ಲಿರುವ ಜನಪದ ಕಲೆಯನ್ನು ಶಾಲೆಯ ಮಕ್ಕಳಲ್ಲಿ ಕಸಿ ಮಾಡುವ ಪ್ರಯತ್ನ ಶುರುಮಾಡುತ್ತಾರೆ. ಜಾಕನಪಲ್ಲಿಯಲ್ಲಿ ಮರೆವಿಗೆ ಸರಿದಿದ್ದ ದೊಡ್ಡಾಟಕ್ಕೆ ಜೀವ ತುಂಬುತ್ತಾರೆ. ಊರಲ್ಲಿನ ದೊಡ್ಡಾಟದ ಕಲಾವಿದರನ್ನು ಶಾಲೆಗೆ ಕರೆಸಿ ಮಕ್ಕಳಿಗೆ ತರಬೇತಿ ಕೊಡಿಸುತ್ತಾರೆ. ಅಜ್ಜ ಅಜ್ಜಿಯರ ಕರೆಸಿ ಜನಪದ ಕಥೆಗಳನ್ನು ಹೇಳಿಸುತ್ತಾರೆ. ಇದಕ್ಕೆ ಬೆಂಗಳೂರಿನ ಫೋಕ್ ಆರ್ಟ್ ಫೌಂಡೇಷನ್ ಕಲಿ-ಕಲಿಸು ಯೋಜನೆಯಡಿಯಲ್ಲಿ ಸಹಾಯ ಮಾಡುತ್ತದೆ. ಹೀಗೆ ನಿಧಾನಕ್ಕೆ ಶಾಲೆಗೆ ಸರಕಾರ ನೇಮಿಸಿದ ಶಿಕ್ಷಕರಲ್ಲದೆ ಊರಿನ ಹಿರಿಯ ಕಲಾವಿದರೂ ಶಿಕ್ಷಕರಾಗಿ ರೂಪಾಂತರ ಹೊಂದುತ್ತಾರೆ.

ಈಚಿನ `ಒಂದು ರಾತ್ರಿ’ ನಾಟಕವನ್ನು ಒಳಗೊಂಡಂತೆ ಮಕ್ಕಳಿಗಾಗಿ ಅಶೋಕ್ ಈ ತನಕ 28 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಶಾಲಾ ಪಠ್ಯಗಳಲ್ಲಿ ಕೆಲವನ್ನು ಆಶು ಅಭಿನಯವಾಗಿ ರೂಪಾಂತರಗೊಳಿಸುತ್ತಾರೆ. ಶಿಲ್ಪ ಮತ್ತು ಚಿತ್ರ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿ, ಸಾಂಜಿ ಕಲೆಯ ಕಾರ್ಯಾಗಾರ ನಡೆಸಿ ಮಕ್ಕಳಿಗೆ ಶಿಲ್ಪ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸುತ್ತಾರೆ. ಮಕ್ಕಳಿಂದ ಪತ್ರಿಕೆಗಳಲ್ಲಿ ಬಂದ ವ್ಯಂಗ್ಯಚಿತ್ರಗಳನ್ನು ಆಧರಿಸಿ ಕಥೆ ಬರೆಸುವ ಸ್ಪರ್ಧೆ ಏರ್ಪಡಿಸಿ, ವ್ಯಂಗ್ಯಚಿತ್ರ ಪ್ರದರ್ಶನ ಮಾಡಿಸಿದ್ದಾರೆ. ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶಾಲಾ ಮಕ್ಕಳಿಂದ ಮಣ್ಣೆತ್ತು ಮಾಡಿಸಿ, ಮಣ್ಣಿನ ಗಣೇಶನ ಮಾಡಿಸುವ ಸ್ಪರ್ಧೆಗಳಲ್ಲಿ ಮಕ್ಕಳನ್ನು ಕಲೆಯತ್ತ ಸೆಳೆದಿದ್ದಾರೆ.

‘ಗ್ರಾಮೀಣ ನಾಟಕೋತ್ಸವ’ ಏರ್ಪಡಿಸಿ ಹಳ್ಳಿಗಳಲ್ಲಿ ಮಕ್ಕಳ ನಾಟಕದ ಅಭಿರುಚಿ ಹೆಚ್ಚಿಸಿ, ಸ್ಥಳೀಯ ಸಾಹಿತಿಗಳಿಂದ ಕಥೆ, ಕವಿತಾ ವಾಚನ ಮಾಡಿಸಿ ಸಾಹಿತ್ಯದ ಅಭಿರುಚಿ ಮೂಡಿಸಿದ್ದಾರೆ. ಗಾಂಧಿ ಜಯಂತಿಯಲ್ಲಿ `ಕುಡಿಯೋದ ಬಿಡ್ರಿ, ಒಳ್ಳೇದಲ್ಲ’ ಎಂದು ಜಾಗೃತಿ ಮೂಡಿಸುತ್ತಲೇ, ವಿಶ್ವರಂಗಭೂಮಿ ದಿನ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ ಮಕ್ಕಳಿಂದ ನಾಟಕ ಆಡಿಸುತ್ತಾರೆ. `ಸರಕಾರಿ ಶಾಲೆಗಳೆ ನಮ್ಮ ಜೀವಾಳ’ ಎನ್ನುವ ಅಭಿಯಾನವನ್ನು ದೊಡ್ಡಾಟದ ವೇಷ ಧರಿಸಿ ಮಕ್ಕಳು ಸರಕಾರಿ ಶಾಲೆಯ ಮಹತ್ವವನ್ನು ಸಾರುತ್ತಾರೆ.

‘ಪ್ರತಿಭಾ ಕಾರಂಜಿಗೆಂದು ತಯಾರು ಮಾಡಿದ ನಾಟಕಗಳನ್ನು ಮಕ್ಕಳು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಭಿನಯಿಸುತ್ತಾರೆ. ಹೀಗೆ ಹಳ್ಳಿಗಳಲ್ಲಿ ಮಕ್ಕಳು ನಾಟಕ ಆಡಿದಾಗ, ನಾಟಕ ಮೆಚ್ಚಿ ಊರಿನವರು ಆಯರ್ ಮಾಡುತ್ತಾರೆ. ಹೀಗೆ ಆಯರ್ ಮಾಡಿದ ಹಣವನ್ನು ಸಂಗ್ರಹಿಸಿ, ಅದಕ್ಕೆ ನಾವು ಒಂದಷ್ಟು ಹಣ ಹಾಕಿ ಟ್ರಾವೆಲ್ ಖರ್ಚು ತೆಗೆದು, ಉಳಿದ ಹಣದಲ್ಲಿ ಮಕ್ಕಳಿಗೆ ಟ್ರಾವೆಲಿಂಗ್ ಬ್ಯಾಗ್ ತಂದು ಕೊಟ್ಟಿದೀವಿ. ಮೈಸೂರು ಬೆಂಗಳೂರಿಗೆ ಪ್ರತಿಭಾ ಕಾರಂಜಿಗೆ ಹೋದಾಗ ಅದರ ಖೂನ ಇರಲಿ ಅಂತ ಮಕ್ಕಳಿಗೆ ಸ್ಟಡಿ ಚೇರು, ಸ್ಟಡಿ ಲ್ಯಾಂಪು ತಂದಿದ್ದೀವಿ’ ಎನ್ನುತ್ತಾರೆ.

ಮುಂದುವರಿದು `ಮೇಕಪ್, ಲೈಟಿಂಗ್, ಸೌಂಡ್ ಸಿಸ್ಟಮ್ ಎಲ್ಲವನ್ನು ಮಕ್ಕಳೆ ಮಾಡುತ್ತಾರೆ. ನನ್ನ ಸಂಬಳದಲ್ಲಿ ಕೊಂಡ ಎರಡುವರೆ ಲಕ್ಷದ ಪ್ರಾಪರ್ಟಿ ಇದೆ. ತುಂಬಾ ಅಗತ್ಯವಾದ ರಂಗಪರಿಕರಗಳು ನಮ್ಮಲ್ಲಿವೆ. ನಮ್ಮ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ನಮ್ಮ ಹೈಸ್ಕೂಲ್ ಕಾರ್ಯಕ್ರಮಗಳಿಗೆ ಜೊತೆಯಾಗುತ್ತಾರೆ. ನಮ್ಮ ಕೈಲಿ ದುಡ್ಡು ಹಾಕಿ ಮಕ್ಕಳನ್ನು ಪ್ರತಿಭಾ ಕಾರಂಜಿಗೆ ದೂರ ದೂರ ಕರಕೊಂಡು ಹೋಗಿ ಎರಡು ವರ್ಷ ಆದ್ರೂನು ಟ್ರಾವೆಲ್ ಬಿಲ್ ಬರೋದಿಲ್ಲ, ಆದ್ರೂ ಉತ್ಸಾಹ ಕಳಕೊಳ್ಳಂಗಿಲ್ಲ’ ಎಂದು ಅಶೋಕ್ ತಮ್ಮ ಬಿಕ್ಕಟ್ಟನ್ನೂ ಹೇಳುತ್ತಾರೆ.

ಮಕ್ಕಳೊಂದಿಗೆ ಅಶೋಕ ತೋಟ್ನಳ್ಳಿಯವರು

ಅಶೋಕ ತೋಟ್ನಳ್ಳಿಯವರು ಕಲಾವಿದರೂ, ನಾಟಕಕಾರರೂ ಆದ ಕಾರಣ ತಮಗೆ ಲಭ್ಯವಿರುವ ವಸ್ತುಗಳನ್ನೆ ನಾಟಕದ ಪರಿಕರಗಳನ್ನಾಗಿ ಪರಿವರ್ತಿಸುತ್ತಾರೆ. ಊರಿನ ಜನಪದ ವಸ್ತುಗಳನ್ನು ಸೇರಿಸಿ, ಅವುಗಳನ್ನು ಬಣ್ಣದಿಂದ ಸಿಂಗರಿಸಿದ್ದಾರೆ. ಹಾಗಾಗಿ ಶಾಲೆಯೆ ಒಂದು ಆರ್ಟ್ಗ್ಯಾಲರಿಯಂತಿದೆ. ಹೀಗೆ ಒಬ್ಬ ರಂಗಭೂಮಿ ಶಿಕ್ಷಕ ತನ್ನೊಳಗಿನ ಕಲಾವಿದನನ್ನು ಕ್ರಿಯಾಶೀಲಗೊಳಿಸಿ ಇಡೀ ಊರನ್ನೇ ರಂಗಭೂಮಿಯನ್ನಾಗಿ ರೂಪಾಂತರಿಸಿದ ಶ್ರಮ ಮತ್ತು ಬದ್ಧತೆ ನಿಜಕ್ಕೂ ಮೆಚ್ಚುವಂಥದ್ದು. ಊರಿನ ಜನರು, ಮಕ್ಕಳ ಸಹಕಾರ ಮರೆಯುವಂತಿಲ್ಲ ಎನ್ನುವ ಅಶೋಕ ಅವರು ಮತ್ತಷ್ಟು ಮಾದರಿ ಕೆಲಸಗಳಲ್ಲಿ ತೊಡಗಿಕೊಳ್ಳಲೆಂದು ಪತ್ರಿಕೆ ಶುಭಕೋರುತ್ತದೆ.

ಅಶೋಕ ತೋಟ್ನಳ್ಳಿಯವರ ಯೂಟೂಬ್ ಚಾನಲ್‌ಗೆ ಇಲ್ಲಿ ಕ್ಲಿಕ್ ಮಾಡಿ

ಅವರ ಫೇಸ್‌ಬುಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ ‘ಸಂತೋಷ ಗುಡ್ಡಿಯಂಗಡಿ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...