Homeಅಂಕಣಗಳುಎಲೆಮರೆಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ 'ಸಂತೋಷ ಗುಡ್ಡಿಯಂಗಡಿ’

ಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ ‘ಸಂತೋಷ ಗುಡ್ಡಿಯಂಗಡಿ’

ಶಾಲಾ ಶಿಕ್ಷಣದಲ್ಲಿ ರಂಗಭೂಮಿ ಕಸಿ ಮಾಡುತ್ತಿರುವ ಸಂತೋಷ್ ಗುಡ್ಡಿಯಂಗಡಿಯವರ ಕುರಿತು ಒಂದಿಷ್ಟು...

- Advertisement -
- Advertisement -

ಎಲೆಮರೆ-5

-ಅರುಣ್ ಜೋಳದಕೂಡ್ಲಿಗಿ.

ಶಿವಾಜಿಯ ಆಡಳಿತವಿದ್ದಾಗ ಆತನ ಸೈನ್ಯದಲ್ಲಿದ್ದ ಒಂದು ಗುಂಪು ಆತನ  ಸಾವಿನ ನಂತರ ಸಾಗರದ ಕಡೆಗೆ ವಲಸೆ ಬರುತ್ತಾರೆ. ಇಲ್ಲಿ ಹವ್ಯಕರ ಮನೆಗಳಲ್ಲಿ ಕೆಲವು ಕಾಲ ಜೀತ ಮಾಡಿಕೊಂಡಿದ್ದು, ಕಾಲಾನಂತರ ಶಿವನ ಭಕ್ತರಾಗಿದ್ದ ಇವರು ಕರಾವಳಿಯ ಕೋಟೇಶ್ವರಕ್ಕೆ ಬಂದು ಅಲ್ಲಿನ ಕೆರೆಗೆ ತಾವು ಕಟ್ಟಿದ್ದ ಲಿಂಗವನ್ನು ಎಸೆದು ಮೀನು ತಿನ್ನಲು ಶುರುಮಾಡಿದ ಪುಟ್ಟ ಸಮುದಾಯವೆ ‘ಕೂಸಾಳ’. ಜೀತ ಮಾಡುವವರನ್ನು ಒಡೆಯರು ಮನೆಯ ಮಕ್ಕಳೆಂದು ಪ್ರೀತಿಯಿಂದ ಕರೆಯುತ್ತಾರೆಂದು ನಂಬಿಸಿರುವ ‘ಕೂಸಾಳು’ ಪದವೇ ಸಮುದಾಯಕ್ಕೂ ಬಂದಿರಬಹುದು. ಉಡುಪಿ, ಕಾರ್ಕಳ, ಕುಂದಾಪುರ ಮುಂತಾದ ಕಡೆಗಳಲ್ಲಿ ನೆಲೆಸಿದ ಕೂಸಾಳುಗಳು ದಲಿತ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದು, ಇದೀಗ ತಮ್ಮನ್ನು ಆದಿ ದ್ರಾವಿಡ ಎಂದು ಕರೆದುಕೊಳ್ಳುತ್ತಾರೆ.

ಈ ಕೂಸಾಳು ಸಮುದಾಯ ‘ಕೀಳು’ ಎನ್ನುವ ಭೂತವನ್ನು ಆರಾಧಿಸುತ್ತಾರೆ. ಮರದ ಬಳಿ ಇಟ್ಟಿರುವ ಕಲ್ಲೇ ದೈವ, ಈ ದೈವದ ಹೆಸರೇ ಕೀಳು. ಹೀಗೆ ತಮ್ಮದೇ ಆದ ಪುಟ್ಟ ದೈವದ ಮನೆಗಳನ್ನು ಕಟ್ಟಿಕೊಂಡು ಪೂಜೆ ಮಾಡುತ್ತ ತಮ್ಮ ಗುರುತನ್ನು ಕಾಪಿಟ್ಟುಕೊಂಡ ಪುಟ್ಟದಾದ ಕೂಸಾಳು ಸಮುದಾಯದ ಒಳಗಿಂದ ಅಕ್ಷರದ ಬೆಳಕಿನಲ್ಲಿ ನಡೆದುಕೊಂಡು ಬಂದವರು ಸಂತೋಷ್ ಗುಡ್ಡಿಯಂಗಡಿ.

“ಮಂತ್ರವಾದಿಯಾದ ತಾತ ಸಾಗರ – ಶಿವಮೊಗ್ಗದ ಕಡೆಯ ಘಟ್ಟಕ್ಕೆ ಹೋಗುವಾಗ ಕೊಲ್ಲೂರು ಕಾಡಲ್ಲಿ ರಾತ್ರಿಯಾಗುತ್ತದೆ. ಆಗ ಮಂತ್ರಶಕ್ತಿಯಿಂದ ಎರಡು ಹುಲಿಗಳನ್ನು ವಶಮಾಡಿಕೊಂಡು ತನ್ನ ಕಾಲು ಮತ್ತು ತಲೆಯ ಬಳಿ ಕಾವಲಿಗಿರಿಸಿ ಅಜ್ಜ ಮಲಗುತ್ತಾನೆ. ದಾರಿಹೋಕ ಬ್ರಿಟೀಷ್ ಅಧಿಕಾರಿ ಅಜ್ಜನನ್ನು ನೋಡುತ್ತಾನೆ. ಈ ಮನುಷ್ಯ ಅಸಾಮಾನ್ಯ, ಇಂತವರು ನಮ್ಮ ವಿರುದ್ಧ ತಿರುಗಿಬಿದ್ದರೆ ಕಷ್ಟವೆಂದು ಆ ಮಂತ್ರವಾದಿಯನ್ನು ಏಳು ಗುಂಡಿಟ್ಟು ಕೊಂದರಂತೆ. ಅಜ್ಜಿಯ ಮೇಲೆ ಭೂತ ಬಂದು ಮೈಮೇಲೆ ಅಳಕೊಂಡು ಈ ಕತೆಯನ್ನು ಹೇಳುತ್ತಿದ್ದರು” ಎನ್ನುತ್ತ ತನ್ನ ಮುತ್ತಾತನ ಕತೆ ಹೇಳುವ ಸಂತೋಷ ತನ್ನ ಸಮುದಾಯದ ಕಥನಗಳನ್ನು ಒಡಲೊಳಗಿಟ್ಟುಕೊಂಡ ಯುವಕ.

ನಂದನ್ ನೀಲೆಕಣಿ ಅವರ ಶಿರಸಿಯ ಕಡೆ ತೋಟದಲ್ಲಿ ಜೀತ ಮಾಡುತ್ತಿದ್ದ ತಂದೆತಾಯಿಯ ಮಗನಾದ ಸಂತೋಷ್, ಪಿಯುಸಿ ಫೇಲಾಗಿ ಮನೆಯಲ್ಲಿ ಸುಳ್ಳು ಹೇಳಿ, 4 ವರ್ಷ ಗಾರೆ ಕೆಲಸ ಮಾಡುತ್ತಾನೆ. ಹಿಮಕರ ಎನ್ನುವವರ ಸಂಪರ್ಕ ಸಿಕ್ಕು ‘ನಮ್ಮ ಭೂಮಿ’ ಸಂಸ್ಥೆಯ ಬೀದಿನಾಟಕಕ್ಕೆ ಸಂತೋಷ್ ಅವರನ್ನು ಪರಿಚಯಿಸುತ್ತಾರೆ. ನಂತರ ಮುರಾರಿ ಬಲ್ಲಾಳ್ ಎನ್ನುವವರು ನೀನಾಸಂಗೆ ದಾರಿ ತೋರುತ್ತಾರೆ. ನೀನಾಸಂ ತಿರುಗಾಟದಲ್ಲಿ ಮೂರು ವರ್ಷ ಓಡಾಟ ಮಾಡಿ, ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ಒಂದು ವರ್ಷ ಮೇಷ್ಟ್ರಾಗಿ ಕೆಲಸ ಮಾಡುತ್ತಾರೆ. ಅದೇ ಹೊತ್ತಿಗೆ 2009 ರಲ್ಲಿ ಸರಕಾರಿ ಪ್ರೌಢಶಾಲೆಯ ನಾಟಕದ ಮೇಷ್ಟ್ರಾಗಿ ಕೆಲಸಕ್ಕೆ ಸೇರುತ್ತಾರೆ. ಇದೀಗ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಒಂದು ದಶಕ ಪೂರೈಸಿದ್ದಾರೆ.

ಶಾಲೆಗಳಲ್ಲಿ ರಂಗಶಿಕ್ಷಣಕ್ಕೆ ಇಂತದ್ದೇ ಮಾದರಿಯಿಲ್ಲ. ಆಯಾ ಶಾಲೆಯಲ್ಲಿ ಆಯ್ಕೆಯಾದ ರಂಗಶಿಕ್ಷಕರು ತಮ್ಮ ಕ್ರಿಯಾಶೀಲತೆ, ಹೊಸತನದಿಂದ ತಾವೇ ಮಾದರಿಗಳನ್ನು ರೂಪಿಸಬೇಕು. ಒಂದು ದಶಕದಲ್ಲಿ ಸಂಶೋಷ್ ಅವರು ರಂಗ ಶಿಕ್ಷಕರಾಗಿ ನಡೆಸಿದ ಪ್ರಯೋಗಗಳು ನಿಜಕ್ಕೂ ಅತ್ಯುತ್ತಮ ರಂಗಶಿಕ್ಷಣದ ಮಾದರಿಗಳಾಗಿವೆ. ಇಡೀ ಶಾಲೆಯನ್ನೇ ಒಂದು ರಂಗಮಂದಿರವನ್ನಾಗಿಸಿ, ಮಕ್ಕಳನ್ನು ರಂಗಭೂಮಿಯ ಕಣ್ಣೋಟದಿಂದ ಲೋಕವನ್ನು ನೋಡುವ ಮಾದರಿ ರೂಪಿಸಿದ್ದಾರೆ. ಈ ಪ್ರಯೋಗದಲ್ಲಿ ಮಕ್ಕಳಿಂದ ಈತನಕ 25 ನಾಟಕಗಳನ್ನು ಮಾಡಿಸಿದ್ದಾರೆ. ಸಂತೋಷ್ ಅವರು ‘ಸನಿಮಾತ್ಮೆ’ ಮತ್ತು ‘ಗಾಯ’ ಎನ್ನುವ ನಾಟಕಗಳನ್ನು ಬರೆದಿದ್ದಾರೆ. ಮಕ್ಕಳಿಗಾಗಿಯೇ ‘ಹುಲಿಯಜ್ಜ’, ‘ತಿಕ್ಕಲು ರಾಜ ತಿರಬೋಕಿ ರಾಜ್ಯ’, ‘ಭೂಮಿಗೆ ಜ್ವರ ಬಂದಿದೆ’, ‘ಜಟ್ರೋಫ ಎಂಬ ವರ’, ‘ಮಾಯದ ಡಬ್ಬಿ’, ‘ಪ್ಲಾಸ್ಟಿಕ್ ರಾಕ್ಷಸ’, ‘ಕಾಮನಬಿಲ್ಲಿನ ಸೈನಿಕರು’, ‘ಕಪ್ಪು ವಜ್ರ’ ನಾಟಕಗಳನ್ನು ಮಾಡಿಸಿದ್ದಾರೆ.

ಹೆಮ್ಮರಗಾಲ ಶಾಲೆಯಲ್ಲಿದ್ದಾಗ ಶಾಲಾ ಮಕ್ಕಳ ಬರಹಗಳನ್ನೊಳಗೊಂಡ “ಹೆಮ್ಮರ” ಕೈಬರಹದ ಮಾಸಿಕವನ್ನು ಸಂತೋಷ್‌ರವರು ಬಹಳ ವರ್ಷ ಪ್ರಕಟಿಸಿದ್ದಾರೆ. ಅದು ಮಕ್ಕಳ ವಿಶೇಷ ಪ್ರತಿಭೆಯನ್ನು ಅನಾವರಣಗೊಳಿಸಲು, ಮಕ್ಕಳಲ್ಲಿ ಓದಲು, ಬರೆಯಲು ದೊಡ್ಡ ಸ್ಫೂರ್ತಿಯನ್ನು ನೀಡಿತ್ತು.

ಸ್ವೀಡನ್‌ನ 16 ವರ್ಷದ ಶಾಲಾ ಬಾಲಕಿ ಗ್ರೇಟಾ ಥನ್ಬರ್ಗ್ ಹವಾಮಾನ ವೈಪರೀತ್ಯ ಕಂಡು 2018 ರಲ್ಲಿ ‘ಸ್ಕೂಲ್ ಸ್ಟ್ರೈಕ್ ಫಾರ್ ಕ್ಲೈಮೆಟ್/ ಪ್ರೈಡೇಸ್ ಫಾರ್ ಫ್ಯೂಚರ್’ ಅಭಿಯಾನ ಆರಂಭಿಸಿದಳು. ಸೆಪ್ಟಂಬರ್ 23 ರಂದು ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ‘ನಿಮಗೆಷ್ಟು ಧೈರ್ಯ’? ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಬಾಲ್ಯ, ಕನಸುಗಳನ್ನು ಚೂರಾಗಿಸಿದ್ದೀರಿ ಎಂದು ಜಾಗತಿಕ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಳು. ಗ್ರೇಟಾ ಪ್ರಭಾವದಿಂದ ಸಂತೋಷ್ ತಮ್ಮ ಶಾಲೆಯ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಿ ‘ನಾಳೆಗಳು ನಮ್ಮದು’ ಎನ್ನುವ ಧ್ಯೇಯವಾಕ್ಯದೊಂದಿಗೆ ‘ನಿಮ್ಮ ಕಸ ನಿಮಗೆ’ ಎಂಬ ಅಭಿಯಾನವನ್ನು ಆರಂಭಿಸಿದರು. ಉತ್ಪಾದಕ ಕಂಪನಿಗಳಿಗೇ ಅವರ ಪ್ಲಾಸ್ಟಿಕ್ ಕಸವನ್ನು ಪೋಸ್ಟ್ ಮಾಡುವ ವಿಶಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಹೆಗ್ಗಡನಳ್ಳಿ ಮಕ್ಕಳು ರಾಜ್ಯವ್ಯಾಪಿ ಗಮನ ಸೆಳೆಯುತ್ತಿದ್ದಾರೆ. ಇದು ಇಡೀ ದೇಶಕ್ಕೆ ಮಾದರಿಯಾಗಿದೆ.

ಸಂತೋಷ್ ಒಳ್ಳೆಯ ಕಥೆಗಾರ ಕೂಡ. ಅವರ ‘ಕೊರಬಾಡು’ ಕಥಾಸಂಕಲನ ಭಿನ್ನ ಪ್ರಯೋಗ. ಅಷ್ಟು ಚರ್ಚೆಗೆ ಬಾರದ ಈ ಸಂಕಲನದಲ್ಲಿ ದೇವನೂರು ಮಾದರಿಯ ಕಥನ ಶೈಲಿಯನ್ನು ಅನುಕರಿಸುತ್ತಲೇ ಅದನ್ನು ಮೀರಲು ಪ್ರಯತ್ನಿಸಲಾಗಿದೆ. ಬಹುಶಃ ದೇವನೂರೋತ್ತರ ನಂಜನಗೂಡಿನ ಜನರ ನುಡಿಗಟ್ಟನ್ನು ಸಂತೋಷ್ ಅವರ ಕತೆಗಳಲ್ಲಿ ಕಾಣಬಹುದು. ಕಥನ ಶೈಲಿಯಲ್ಲಿಯೂ ದೇವನೂರರ ಮಾದರಿಯನ್ನು ಹೊಸದಾಗಿ ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಸಂತೋಷ್ ನಾಟಕದ ಹಿನ್ನೆಲೆಯವರಾದ ಕಾರಣ ಈ ಕತೆಗಳಲ್ಲಿನ ನಾಟಕೀಯ ಗುಣ ವಿಶಿಷ್ಟವಾಗಿ ಮೂಡಿಬಂದಿದೆ. ಹೊಸ ತಲೆಮಾರಿನ ಬರಹಗಾರರು ಓದಲೇಬೇಕಾದ ಕಥಾ ಸಂಕಲನವಿದು. ಹೀಗೆ ಸಂತೋಷ್ ತನ್ನದೇ ಲೋಕದಲ್ಲಿ ನಡೆಸುತ್ತಿರುವ ಕ್ರಿಯಾಶೀಲ ಚಟುವಟಿಕೆಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನಮ್ಮೂರ ಸಂತೋಷ್ ಗುಡ್ಡಿಯಂಗಡಿಯವರ ಕುರಿತು ಹೆಮ್ಮೆಯೆನಿಸುತ್ತದೆ. ಲೇಖನಕ್ಕಾಗಿ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...