Homeಕರ್ನಾಟಕಇದು ಕೆ.ಎಲ್.‌ ಅಶೋಕ್‌ರವರ ವೈಯಕ್ತಿಕ ಸಮಸ್ಯೆ ಅಲ್ಲ. ಸುಮ್ಮನಿದ್ದರೆ ನಾಳೆ ಎಲ್ಲರಿಗೂ ಹೀಗಾಗುವುದರಲ್ಲಿ ಸಂಶಯವಿಲ್ಲ.

ಇದು ಕೆ.ಎಲ್.‌ ಅಶೋಕ್‌ರವರ ವೈಯಕ್ತಿಕ ಸಮಸ್ಯೆ ಅಲ್ಲ. ಸುಮ್ಮನಿದ್ದರೆ ನಾಳೆ ಎಲ್ಲರಿಗೂ ಹೀಗಾಗುವುದರಲ್ಲಿ ಸಂಶಯವಿಲ್ಲ.

ಕೊಪ್ಪ ಪೊಲೀಸ್‌ ಠಾಣೆಯ ಪೇದೆ ರಮೇಶ್‌, ಈ ಹಿಂದೆ ಇನ್ನೂ ಕೆಲವರಿಗೆ ಇದೇ ರೀತಿ ಅವಮಾನಿಸಿರುವುದು ಬೆಳಕಿಗೆ ಬಂದಿದ್ದು, ಉಪನ್ಯಾಸಕರೊಬ್ಬರು ಮಾತಾಡಿರುವ ಆಡಿಯೋ ವೈರಲ್‌ ಆಗಿದೆ.

- Advertisement -
- Advertisement -

ಕೋಮು ಸೌಹಾರ್ದ ಚಳವಳಿಯ ಮುಂಚೂಣಿ ಸಂಘಟಕ ಕೆ.ಎಲ್. ಅಶೋಕ್‌ ಅವರಿಗೆ ಸಂಬಂಧಿಸಿದ ಒಂದು ಸುದ್ದಿ ಮೂರು ದಿನಗಳಿಂದ ಸದ್ದು ಮಾಡಿದೆ. ಅವರು ಕುಟುಂಬದ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಕ್ಕೆ ಹೋಗಿದ್ದಾಗ ನೋ ಪಾರ್ಕಿಂಗ್‌ ಜಾಗದಲ್ಲಿ ಕಾರನ್ನು ನಿಲ್ಲಿಸಿಕೊಂಡಿದ್ದ (ಪಾರ್ಕಿಂಗ್‌ ಮಾಡಿ ಹೋಗಿಬಿಟ್ಟಿರಲಿಲ್ಲ) ಕಾರಣಕ್ಕೆ ಅವರಿಗೆ ಕಿರುಕುಳ ಕೊಟ್ಟಿರುವ ಪ್ರಕರಣವದು. ಅವರ ವಯಸ್ಸಾದ ಅತ್ತೆ ಮತ್ತು ಪುಟ್ಟ ಮಗಳಿನ ಎದುರಿಗೆ ಘಟನೆ ನಡೆದಿದೆ.


ಅಶೋಕ್‌ ಅವರ ತಂದೆಯ ಕಾರಿನಲ್ಲಿ ಹೋಗಿದ್ದಾಗ ಈ ಘಟನೆ ನಡೆಯಿತೆಂದು ಕೇಳಿ ಆ ಕಾರಣಕ್ಕೂ ಆಶ್ಚರ್ಯವೆನಿಸಿತು. ಏಕೆಂದರೆ ಪೊಲೀಸ್‌ ಪೇದೆಗಳು ಸಾಮಾನ್ಯವಾಗಿ ಕಾರಿನಲ್ಲಿ ಕುಳಿತವರ ಮೇಲೆ – ಅದರಲ್ಲೂ ಕೊಪ್ಪದಂತಹ ಪುಟ್ಟ ಪಟ್ಟಣದಲ್ಲಿ – ಜೋರು ಮಾಡುವುದು ಕಡಿಮೆ. ನಮ್ಮ ಇಡೀ ಪೊಲೀಸ್‌ ವ್ಯವಸ್ಥೆಯು ಬಡವರನ್ನು ನಡೆಸಿಕೊಳ್ಳುವ ರೀತಿ ಬೇರೆ, ಜೋರಿದ್ದವರನ್ನು ನಡೆಸಿಕೊಳ್ಳುವ ರೀತಿ ಬೇರೆ. ಅಂದರೆ ಇಲ್ಲಿ ಉದ್ದೇಶಪೂರ್ವಕವಾದುದೇನೋ ನಡೆದಿದೆ ಎಂಬುದು ಸ್ಪಷ್ಟ.

ಇದನ್ನೂ ಓದಿ: ಕೆ.ಎಲ್‌.ಅಶೋಕ್‌ರನ್ನು ಅಕಾರಣವಾಗಿ ನಿಂದಿಸಿದ ಕೊಪ್ಪ ಪೊಲೀಸ್‌ 

ಈ ಕಾರಣದಿಂದ ಇದಕ್ಕೊಂದು ಮಹತ್ವ ಬಂದಿದೆ. ಅಶೋಕ್‌ ಅದೇ ಪ್ರದೇಶದ, ಸಾಕಷ್ಟು ಜನರಿಗೆ ಪರಿಚಿತವಾಗಿರುವ ವ್ಯಕ್ತಿ. ಅವರ ಮದುವೆ ಸಾಂಪ್ರದಾಯಿಕವಾದ ರೀತಿಯಲ್ಲಿ ನಡೆಯಲಿಲ್ಲವೆಂದು ಸ್ಥಳೀಯವಾಗಿ ಕೆಂಗಣ್ಣಿಗೆ ಗುರಿಯಾದದ್ದರಿಂದ ಹಿಡಿದು, ಕೋಮುವಾದಿಗಳ ವಿರುದ್ಧ ನಿರಂತರವಾಗಿ ದನಿಯೆತ್ತಿದ್ದವರೆಗೆ ಆ ಪ್ರದೇಶದಲ್ಲೂ ಕೆಲಸ ಮಾಡಿದವರು. ಪೊಲೀಸ್‌ ಇಲಾಖೆಯಲ್ಲಿ ತಳಮಟ್ಟದಲ್ಲಿರುವ ಹಲವರು ಕೋಮುವಾದಿ ಮನಸ್ಥಿತಿ ಬೆಳೆಸಿಕೊಂಡಿದ್ದರೆ ಆಶ್ಚರ್ಯವಲ್ಲವಾದರೂ, ಅದನ್ನು ಅವರು ಸಾರ್ವಜನಿಕವಾಗಿ ಒಂದಷ್ಟು ಪ್ರಸಿದ್ಧರಾಗಿರುವ ವ್ಯಕ್ತಿಗಳ ಮೇಲೆ ತೋರಿಸುವುದಿಲ್ಲ. ಆದರೆ ಕುಟುಂಬ ಸಮೇತ ಖಾಸಗಿ ಕೆಲಸಕ್ಕೆ ಹೋಗಿದ್ದ ಸಾರ್ವಜನಿಕ ವ್ಯಕ್ತಿಯೊಬ್ಬರನ್ನು ಕ್ಷುಲ್ಲಕ ಕಾರಣ ಹಿಡಿದು ಅವಮಾನಿಸುವುದು, ಟಾರ್ಗೆಟ್‌ ಮಾಡುವುದು, ಇನ್ನೂ ಮುಂದಕ್ಕೆ ಹೋಗಿ ಕೇಸನ್ನೂ ದಾಖಲಿಸುವುದನ್ನು ಮಾಡುವ ಅಧಿಕಾರ ತಮಗಿದೆ ಎಂದು ಪೊಲೀಸರು ಭಾವಿಸಿದರೆ ಅಲ್ಲಿಗೆ ಬೀದಿಗಳಲ್ಲಿ ಸರ್ಕಾರೀ ಹಿಟ್ಲರ್‌ಗಿರಿ ಜಾರಿಯಾದಂತೆಯೇ. ಮುಂದಿನ ದಿನಗಳಲ್ಲಿ ಆಡಳಿತ ಪಕ್ಷದ ವಿರುದ್ಧ ಮಾತಾಡುವವರು ಅಂಗಡಿಗೆ ಹೋದಾಗಲೂ ಇಂಥದ್ದು ನಡೆಯಬಹುದು ಎಂದಾಗಿಬಿಡುತ್ತದೆ.

ಬೆಳಕಿಗೆ ಬಂದ ಪೇದೆ ರಮೇಶ್‌ರ ಇನ್ನೊಂದು ಪ್ರಕರಣ

ನಿರ್ದಿಷ್ಟವಾಗಿ ಈ ಪ್ರಕರಣಕ್ಕೆ ಬರುವುದಾದರೆ ರಮೇಶ್‌ ಎನ್ನುವ ಕೊಪ್ಪ ಠಾಣೆಯ ಪೇದೆಗೆ ಜನಸಾಮಾನ್ಯರ ಮೇಲೆ ಹರಿಹಾಯುವ ಮನೋಭಾವವಿರುವುದು ಹೊಸದೇನಲ್ಲ ಎಂಬುದಕ್ಕೆ ಇನ್ನೊಂದು ಸಾಕ್ಷ್ಯ ದೊರಕಿದೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಉಪನ್ಯಾಸಕರೊಬ್ಬರ ಮೇಲೆ ಹರಿಹಾಯ್ದು ಅವಮಾನಿಸಿರುವ ಕುರಿತು ಅವರು ಒಂದು ಆಡಿಯೋವನ್ನು ಕಳಿಸಿದ್ದು, ಕೊಪ್ಪ ಭಾಗದಲ್ಲಿ ವೈರಲ್‌ ಆಗಿದೆ. ಇಂಟೆಲಿಜೆನ್ಸ್‌ ಇಲಾಖೆಯಲ್ಲಿ ಕೆಲಸ ಮಾಡುವವರಲ್ಲಿ ಎರಡು ರೀತಿಯವರು ಇರುತ್ತಾರೆ. ಒಂದು, ಸಾರ್ವಜನಿಕ ಜೀವನದಲ್ಲಿರುವ ಎಲ್ಲರ ಜೊತೆಗೂ ಚೆನ್ನಾಗಿದ್ದು, ಮಾಹಿತಿ ಸಂಗ್ರಹಿಸಿ ಇಲಾಖೆಗೆ ನೀಡುವುದು. ಎರಡು, ಜನಪರ ಹೋರಾಟಗಾರರನ್ನು ತರಲೆಗಳೆಂದು ಬಗೆದು ಅವರ ವಿರುದ್ಧ ವೈಯಕ್ತಿಕ ಜಿದ್ದನ್ನು ಸಾಧಿಸುವ ರೀತಿಯಲ್ಲಿ ನಿರಂತರ ಕಿರುಕುಳ ನೀಡುವುದು. ಬಹುಕಾಲ ಗುಪ್ತಚರ ಇಲಾಖೆಯ ಭಾಗವಾಗಿದ್ದ ಈ ರಮೇಶ್‌ ಎರಡನೇ ಬಗೆಯವರಾಗಿರುವುದು ಸ್ಪಷ್ಟವಾಗಿದೆ.

ಕೆ.ಎಲ್ ಅಶೋಕ್ ರವರನ್ನು ನಿಂದಿಸಿದ್ದ ಕೊಪ್ಪ ಪೊಲೀಸ್‌ ಠಾಣೆಯ ಪೇದೆ ರಮೇಶ್‌, ಈ ಹಿಂದೆ ಇನ್ನೂ ಕೆಲವರಿಗೆ ಇದೇ ರೀತಿ ಅವಮಾನಿಸಿರುವುದು ಬೆಳಕಿಗೆ ಬಂದಿದ್ದು, ಉಪನ್ಯಾಸಕರೊಬ್ಬರು ಮಾತಾಡಿರುವ ಆಡಿಯೋ ವೈರಲ್‌ ಇಲ್ಲಿದೆ ಕೇಳಿ.

Posted by Naanu Gauri on Thursday, September 10, 2020

ಪೊಲೀಸ್‌ ಇಲಾಖೆಯೇ ನೆರವು ಕೇಳಿ, ಎನ್ನೆಸ್ಸೆಸ್‌ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಕೆಲಸ ಮಾಡಿಸಿ ನಂತರ ಸದರಿ ಉಪನ್ಯಾಸಕರನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ಅದಕ್ಕೆ ಬೇರಾರಿಗಿಂತ ಇದೇ ಪೇದೆ ರಮೇಶ್‌ ಕಾರಣರಾಗಿದ್ದಾರೆ. ಅಂದರೆ ಪೊಲೀಸ್‌ ಇಲಾಖೆಯ ಕುರಿತು ಸಾರ್ವಜನಿಕ ವಲಯದಲ್ಲಿರುವ ಭಾವನೆಯನ್ನು ಪುಷ್ಟೀಕರಿಸುವ ರೀತಿಯಲ್ಲಿ ಅವರು ನಡೆದುಕೊಂಡಿದ್ದಾರೆ.

ಇಂತಹ ಪ್ರಕರಣ ತಡೆಯಲು ಏನು ಮಾಡಬೇಕು?

ಈ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳು ಮುಖ್ಯವಾಗುತ್ತವೆ. ಸಮಾಜದಲ್ಲಿನ ಕ್ರೌರ್ಯ, ಅಪರಾಧ ಹಾಗೂ ದೌರ್ಜನ್ಯಕಾರಿ ಮನೋಭಾವವು ಪುನರುತ್ಪತ್ತಿಯಾಗಬಾರದೆಂದರೆ, ಅದಕ್ಕೆ ತಕ್ಕುನಾದ ಸಮಾಜದ ನಿರ್ಮಾಣವಾಗಬೇಕು. ಆದರೆ, ಇವೆಲ್ಲವನ್ನೂ ತಡೆಯಲು ನಿಯೋಜಿತವಾಗಿರುವ ಪೊಲೀಸ್‌ ಇಲಾಖೆಯು ಕ್ರೌರ್ಯ ಹಾಗೂ ದೌರ್ಜನ್ಯಗಳನ್ನೇ ಬಳಸಿದರೆ, ದೀರ್ಘಕಾಲದಲ್ಲಿ ಇವನ್ನು ತಡೆಯುವುದು ಸಾಧ್ಯವೇ ಇಲ್ಲ. ಅದರಲ್ಲೂ ಇಂತಹ ದಬ್ಬಾಳಿಕೆಗೆ ಒಳಗಾಗುವುದು ಸಮಾಜದ ದುರ್ಬಲ ಸಮುದಾಯದ ಮೇಲೆಯೇ ಹೆಚ್ಚಾಗಿರುತ್ತದೆ. ಹಾಗಾಗಿ ಇದರ ಮೇಲೆ ಇಡೀ ಸಮಾಜ ಹಾಗೂ ನಿರ್ದಿಷ್ಟವಾಗಿ ಪೊಲೀಸ್‌ ಇಲಾಖೆಯು ಗಮನ ಹರಿಸುವ ಅಗತ್ಯವಿದೆ. ಅದರಲ್ಲೂ, ರಮೇಶ್‌ರಂತಹ ರೂಢಿಗತ ಅಪರಾಧಿ (Habitual offender)ಯ ಮೇಲೆ ಕ್ರಮ ತೆಗೆದುಕೊಳ್ಳುವ ಮೂಲಕ ಆರಂಭಿಸಬೇಕಿದೆ.

ಎರಡನೆಯದಾಗಿ, ಚುನಾವಣೆಯಲ್ಲಿ ಗೆದ್ದು ಬರುವ ಪಕ್ಷದ ಅಣತಿಗೆ ತಕ್ಕಂತೆ ಪೊಲೀಸರು ಸೈದ್ಧಾಂತಿಕ, ರಾಜಕೀಯ ವಿರೋಧಿಗಳನ್ನು ಮತ್ತು ಹೋರಾಟಗಾರರನ್ನು ಗುರಿ ಮಾಡುವುದನ್ನು ತಪ್ಪಿಸಬೇಕು. ಅದಕ್ಕಾಗಿ ಪೊಲೀಸರು ಪ್ರತಿಯೊಂದು ಪ್ರಕರಣವನ್ನು ನಿಭಾಯಿಸಬೇಕಾದ ರೀತಿಯ ಕುರಿತು ಕಟ್ಟುನಿಟ್ಟಾದ ಪ್ರೋಟೋಕಾಲ್‌ ಹಾಗೂ ನಿಯಮಾವಳಿಗಳನ್ನು ರೂಪಿಸಬೇಕು. ನಿರ್ದಿಷ್ಟವಾಗಿ ಈ ಪ್ರಕರಣದಲ್ಲಿ ಕೆ.ಎಲ್‌. ಅಶೋಕ್‌ ಅವರು ದೀರ್ಘಕಾಲದಿಂದ ಮಲೆನಾಡಿನಲ್ಲಿ ಬಲಪಂಥೀಯ ಸಂಘಟನೆಗಳು ಹಾಗೂ ಕೋಮುದ್ವೇಷದ ವಿರುದ್ಧ ಕೆಲಸ ಮಾಡುತ್ತಾ ಬಂದವರಾಗಿರುವುದರಿಂದ, ಆಡಳಿತಪಕ್ಷದ ಪ್ರಭಾವದ ವಾಸನೆ ಎದ್ದು ಹೊಡೆಯುತ್ತಿದೆ.

ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಈ ವಿಚಾರದಲ್ಲಿ ಪ್ರತಿಭಟನೆಗಳು ನಡೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಸಂಘಟನೆಗಳು ಹಾಗೂ ನಾಯಕರುಗಳು ಕೊಪ್ಪ ಚಲೋ ಕಾರ್ಯಕ್ರಮವನ್ನು ಸಂಘಟಿಸಲು ಯೋಜಿಸಿದ್ದಾರೆ. ಈ ಸಂದರ್ಭವನ್ನು ಪೊಲೀಸರು ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಳ್ಳದೇ, ತಮ್ಮ ಇಲಾಖೆಯಲ್ಲಿರುವ ʼಸಾಮಾಜಿಕ ಸಮಸ್ಯೆʼಯನ್ನು ಬಗೆಹರಿಸುವ ಅವಕಾಶವನ್ನಾಗಿ ತೆಗೆದುಕೊಂಡರೆ ಎಲ್ಲರೂ ಗೆದ್ದಂತೆ. ಇಲ್ಲದಿದ್ದರೆ ಒಂದೆಡೆ ಸಾಮಾಜಿಕ ಹೋರಾಟಗಾರರೊಬ್ಬರಿಗಾದ ಅವಮಾನವನ್ನು ಸಾಮಾಜಿಕ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಸಂಘಟನೆಗಳು ಮುಂದಕ್ಕೆ ತರುತ್ತವೆ; ಪೊಲೀಸ್‌ ಇಲಾಖೆಯು ಜಿದ್ದಿನಿಂದ ಸಮಸ್ಯೆಯನ್ನು ಹೆಚ್ಚು ಮಾಡಿಕೊಂಡೇ ಹೋಗುತ್ತಿರುತ್ತಾರೆ. ಹಾಗಾಗದಂತೆ ಇಲಾಖೆಯ ಉನ್ನತ ಅಧಿಕಾರಿಗಳು ನೋಡಿಕೊಳ್ಳಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...