Homeಮುಖಪುಟಕಾಯ್ದೆ ವಿರೋಧಿ ಮೋದಿ ಸರ್ಕಾರದ ಕಾಯ್ದೆ ತಿದ್ದುಪಡಿಗಳು!

ಕಾಯ್ದೆ ವಿರೋಧಿ ಮೋದಿ ಸರ್ಕಾರದ ಕಾಯ್ದೆ ತಿದ್ದುಪಡಿಗಳು!

ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಇಂತಹ ಕಾನೂನುಗಳು ಅಪಥ್ಯವೆನಿಸಲು ಅವರ ಹಿತಾಸಕ್ತಿ, ಅವರು ಪ್ರತಿನಿಧಿಸುವ ಸಮುದಾಯ/ವರ್ಗಗಳ ಹಿತಾಸಕ್ತಿಯೇ ಕಾರಣವಾಗಿದ್ದವು.

- Advertisement -
- Advertisement -

ಪ್ರಧಾನಿಯಾಗಿ 4 ತಿಂಗಳ ನಂತರ ಸೆಪ್ಟೆಂಬರ್ 29, 2014ರಂದು ನರೇಂದ್ರ ಮೋದಿಯವರು ಅಮೆರಿಕದ ನ್ಯೂಯಾರ್ಕಿನ ಮ್ಯಾಡಿಸನ್ ಸ್ಕೇರ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದು ಅವರು ‘ಹಿಂದಿನ ಸರ್ಕಾರವು ಹೊಸ ಹೊಸ ಕಾನೂನನ್ನು ತರುವುದರಲ್ಲಿ ಸಂತೋಷ ಕಾಣುತ್ತಿತ್ತು. ನಾನು ಪ್ರತಿದಿನವೂ ಒಂದೊಂದು ಅಪ್ರಸ್ತುತ ಕಾನೂನನ್ನು ತೆಗೆದುಹಾಕಲಿದ್ದೇನೆ’ ಎಂದು ಘೋಷಿಸಿದ್ದರು. ಅದೇ ವೇಗದಲ್ಲಿ ಹೊರಟಿದ್ದರೆ ಈ ಹೊತ್ತಿಗೆ ದೇಶದಲ್ಲಿ ಒಂದು ಕಾನೂನೂ ಇರಬಾರದಿತ್ತು. ಆದರೆ ಕಾನೂನುಗಳಿವೆ ಮಾತ್ರವಲ್ಲಾ, ಅಂತಹ ಹಲವಾರು ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ಕಾನೂನುಗಳನ್ನು ಅಪ್‍ಡೇಟ್ ಮಾಡಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳಬಹುದಾದರೂ, ಕಾನೂನುಗಳನ್ನು ತೆಗೆಯಲಾಗಿಲ್ಲ.

ಇಡೀ ಬೆಳವಣಿಗೆಯನ್ನು ಗಮನಿಸಿದರೆ ಬಿಜೆಪಿ ಪ್ರತಿಪಾದಿಸುವ ಚಿಂತನೆಯ ಮೂಲ ಅರ್ಥವಾಗುತ್ತದೆ. ರೂಲ್ ಆಫ್ ಲಾ ಎಂಬೊಂದು ಮಾತಿದೆ. ಅಂದರೆ ಯಾರು ಆಳುತ್ತಿರುವರೋ ಅವರು ಹೇಳಿದಂತೆ ದೇಶ ನಡೆಯುವುದಿಲ್ಲ, ಹಾಗೆ ಮಾಡಿದರೆ ಅದು ರಾಜಪ್ರಭುತ್ವವಾಗಿಬಿಡುತ್ತದೆ; ಬದಲಿಗೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನೀತಿಯ ಕುರಿತಾಗಿ ಹೇಳಲ್ಪಡುವ ಮಾತು ಅದು. ಆದರೆ, ಪ್ರಜಾಪ್ರಭುತ್ವವು ವಿಸ್ತರಣೆಯಾದಂತೆಲ್ಲಾ ಅಷ್ಟೇ ಕಾನೂನುಗಳೂ ಸಾಲವು ಎಂದಾಯಿತು. ಶೋಷಿತರ ಪರವಾಗಿ, ಅವರ ಹಕ್ಕುಗಳನ್ನು ಕಾಪಾಡುವ ಕೆಲವು ಕಾನೂನುಗಳ ಅಗತ್ಯ ಕಾಣಿಸಿಕೊಂಡಿತು. ದೌರ್ಜನ್ಯಗಳನ್ನು ತಡೆಯಲು ‘ಎಲ್ಲರೂ ಸಮಾನರು’ ಎಂದಷ್ಟೇ ಹೇಳಿದರೆ ಸಾಲದು; ಏಕೆಂದರೆ ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂದಾಕ್ಷಣ ದೌರ್ಜನ್ಯಕ್ಕೊಳಗಾಗುವವರು, ದುಡಿಯುವ ಕಾರ್ಮಿಕರು ಆ ಕಾನೂನಿನಡಿಯಲ್ಲಿ ಪ್ರಬಲರ ಎದುರು ಗೆಲ್ಲುವುದು ಸುಲಭವಲ್ಲ. ಹೀಗಾಗಿಯೇ ಮಹಿಳೆಯರ, ದಲಿತರ, ಕಾರ್ಮಿಕರ ಹಾಗೂ ಭೂಮಿ ನಂಬಿ ಬದುಕುತ್ತಿದ್ದ ರೈತರ ಪರವಾದ ಕೆಲವು ಕಾನೂನುಗಳು ಬಂದವು.

Photo Courtesy: BankExamToday

ಮೋದಿಯವರು ಉಲ್ಲೇಖಿಸಿದ ‘ಅವರ ಹಿಂದಿನ ಸರ್ಕಾರಗಳು’ ತಂದ ಮಾಹಿತಿ ಹಕ್ಕಿನ ಕಾಯ್ದೆ, ಅರಣ್ಯ ಕಾಯ್ದೆ, ಭೂ ಸ್ವಾಧೀನ ನಡೆದಾಗ ಪರಿಹಾರ ನೀಡುವ ಕಾಯ್ದೆಯಂತಹ ಹಲವು ಕಾಯ್ದೆಗಳು ವಾಸ್ತವದಲ್ಲಿ ಈ ರೀತಿ ಶೋಷಿತರ ಪರವಾಗಿ ಬಂದಂಥವು. ಅದೇ ರೀತಿಯಾಗಿ ಪರಿಸರ ಸಂಬಂಧಿ ಕಾನೂನುಗಳು ಸಹಾ ಕಟ್ಟುನಿಟ್ಟಾದ ರೂಪದಲ್ಲಿ ಬಂದವು. ಇವೆಲ್ಲವೂ ಸಹಾ ದಮನಿತ ಅಥವಾ ಆಸಕ್ತ ಜನಸಾಮಾನ್ಯರ ಹೋರಾಟಗಳ ಕಾರಣದಿಂದ ಸರ್ಕಾರಗಳು ಜಾರಿಗೆ ತರಲೇಬೇಕಾಗಿ ಬಂದಿತ್ತು ಎಂಬುದನ್ನೂ ಮರೆಯಲಾಗದು.

ಆದರೆ, ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಇಂತಹ ಕಾನೂನುಗಳು ಅಪಥ್ಯವೆನಿಸಲು ಅವರ ಹಿತಾಸಕ್ತಿ, ಅವರು ಪ್ರತಿನಿಧಿಸುವ ಸಮುದಾಯ/ವರ್ಗಗಳ ಹಿತಾಸಕ್ತಿಯೇ ಕಾರಣವಾಗಿದ್ದವು. ಹಾಗಾಗಿ ಅವರು ದಿನಕ್ಕೊಂದು ಕಾನೂನು ಕಿತ್ತುಹಾಕುವ ಮಾತನ್ನಾಡಿದ್ದರು. ಆ ಕಾನೂನುಗಳನ್ನು ತೆಗೆದುಬಿಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಮತ್ತು ಕಾನೂನು ತಜ್ಞರು ಅವರಿಗೆ ಹೇಳಿರಬೇಕು. ಹಾಗಾಗಿ ಅವನ್ನು ಮೂಲಆಶಯಗಳಿಗೆ ವಿರುದ್ಧವಾಗಿ ತಿರುಚಲು ಅವರು ಆದೇಶ ಕೊಟ್ಟಂತಿದೆ. ಕಾರ್ಮಿಕರ ಹಕ್ಕುಗಳನ್ನು ಎತ್ತಿಹಿಡಿಯುವ ಕಾನೂನುಗಳು ಮೊದಲು ಅವರ ಕಣ್ಣಿಗೆ ಬಿದ್ದಿದ್ದವು. ಅವುಗಳನ್ನು ಬದಲಿಸಲು ಶುರು ಮಾಡಿ ಮೊದಲ ಅವಧಿಯಲ್ಲಿ ಹಿಂಜರಿಯಬೇಕಾಗಿ ಬಂದಿತ್ತು. ಅದಕ್ಕಿಂತ ಮೊದಲು ಭೂಸ್ವಾಧೀನ ಮಾಡಿಕೊಂಡಾಗ ನ್ಯಾಯಯುತ ಪರಿಹಾರ ಕಲ್ಪಿಸಬೇಕೆನ್ನುವ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತರಲು ಹೊರಟಿದ್ದರು. ಅದನ್ನು ದೇಶಾದ್ಯಂತ ನಡೆದ ಪ್ರತಿಭಟನೆಗಳು ಹಿಮ್ಮೆಟ್ಟಿಸಿದ್ದವು..

Photo Courtesy: The Indian Express

ಇದೀಗ ಎರಡನೆಯ ಬಾರಿಗೆ ಗೆದ್ದು ಬಂದ ನಂತರ, ಸರಣಿ ಕಾನೂನು ತಿದ್ದುಪಡಿಗಳಿಗೆ ಮುಂದಾಗಿದ್ದಾರೆ. ಅದಕ್ಕಾಗಿ ಅವರು ಬಳಸಿಕೊಂಡಿದ್ದು ಕೊರೊನಾ ಸಂದರ್ಭದ ನಿರ್ಬಂಧಗಳನ್ನು. ಆಗ ಯಾರೂ ದನಿಯೆತ್ತದ ಸನ್ನಿವೇಶವಿರುತ್ತದೆ; ಪ್ರತಿಭಟನೆಗಳಿಗೂ ಅವಕಾಶವಿರುವುದಿಲ್ಲ, ಹಾಗಾಗಿ ಜನರ ವಿರುದ್ಧವಾಗಿ ತಿದ್ದುಪಡಿಗಳನ್ನು ಹೊರಟರು. ಅದೇ ಸಂದರ್ಭದಲ್ಲಿ ಕೊರೊನಾ ನಿರ್ಬಂಧಗಳಿಂದ ಶಾಸನಸಭೆಗಳೂ ನಡೆಯುತ್ತಿರಲಿಲ್ಲವಾದ್ದರಿಂದ ಸುಗ್ರೀವಾಜ್ಞೆಯ ಮೂಲಕ ಅದನ್ನು ಸಾಧಿಸಿದರು. ಇದೀಗ ಮತ್ತೆ ಸಂಸತ್ತು ಮತ್ತು ವಿಧಾನಮಂಡಲಗಳು ಅಧಿವೇಶನಗೊಳ್ಳುತ್ತಿವೆಯಾದ್ದರಿಂದ ಎಲ್ಲೆಡೆ ಅವುಗಳಿಗೆ ವಿರೋಧ ಬರುವುದು ಖಚಿತವಾಗಿದೆ. ಬಿಜೆಪಿಯ ಮಿತ್ರ ಪಕ್ಷ ಅಕಾಲಿದಳದ ಸಚಿವೆ ರೈತ ವಿರೋಧಿ ತಿದ್ದುಪಡಿಗಳನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಲ್ಲದೇ ಇಡೀ ಅಕಾಲಿ ದಳವೆ ಎನ್‌ಡಿಎಯಿಂದ ಹೊರಬಂದಿದೆ. ಅಂದರೆ ಪಂಜಾಬಿನ ರೈತ ಹೋರಾಟದ ಬಿಸಿ ಅವರಿಗೆ ತಟ್ಟುತ್ತಿದೆ ಎಂದಾಯಿತು.

ಹೀಗಿದ್ದೂ ರಾಜ್ಯ ಸರ್ಕಾರವು ಒಕ್ಕೂಟ ಸರ್ಕಾರದ ಅಣತಿಯ ಮೇರೆಗೆ ಕಾನೂನುಗಳ ಬದಲಾವಣೆಗೆ ಶುರು ಹಚ್ಚಿಕೊಂಡಿದೆ. ಇದನ್ನು ವಿರೋಧಿಸಿ ರಾಜ್ಯದ ರೈತ, ದಲಿತ, ಕಾರ್ಮಿಕರ ಸಂಘಟನೆಗಳು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಪ್ರಜ್ಞಾವಂತರು ಅವರುಗಳ ಬೆನ್ನಿಗೆ ನಿಲ್ಲಬೇಕಿದೆ.


ಇದನ್ನೂ ಒದಿ: ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...