Homeಮುಖಪುಟಚಿಲ್ಲರೆ ವ್ಯಾಪಾರದಲ್ಲಿ ಬಂಡವಾಳಿಗರ ಏಕಸ್ವಾಮ್ಯ: ಗ್ರಾಹಕರಿಗೆ ಬೆಲೆಏರಿಕೆಯ ಬಿಸಿ

ಚಿಲ್ಲರೆ ವ್ಯಾಪಾರದಲ್ಲಿ ಬಂಡವಾಳಿಗರ ಏಕಸ್ವಾಮ್ಯ: ಗ್ರಾಹಕರಿಗೆ ಬೆಲೆಏರಿಕೆಯ ಬಿಸಿ

ಇಡೀ ವಿಶಾಲ ಕರ್ನಾಟಕದ ಜನತೆ ನಿತ್ಯ ತೊಗರಿಬೇಳೆ ಉಪಯೋಗಿಸುತ್ತಿದ್ದರೂ ರೈತರಿಗೆ ಮಾತ್ರ ಅದು ಲಾಭ ತರುವ ಬೆಳೆಯಾಗಿಲ್ಲ. ಅಲ್ಲದೆ ವರ್ಷದಿಂದ ವರ್ಷಕ್ಕೆ ತೊಗರಿ ಬೇಸಾಯ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ.

- Advertisement -
- Advertisement -

ಇಷ್ಟರಲ್ಲಿಯೇ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಕಾರ್ಪೊರೇಟ್ ಚಿಲ್ಲರೆ ವ್ಯಾಪಾರಿ ಸಂಸ್ಥೆ ತುಮಕೂರಿನಲ್ಲಿ ತನ್ನ 28ನೇ ಮಳಿಗೆಯನ್ನು ತೆರೆಯಲಿದೆ. ಇದು ಭಾರತದಲ್ಲಿ ಆಳಕ್ಕೆ ಇಳಿಯುತ್ತಿರುವ ಜಾಗತೀಕರಣ. ಬೆಳೆಯುತ್ತಿದೆ ಎಂದು ಹೇಳಲಾಗುತ್ತಿರುವ ಭಾರತದ ಆರ್ಥಿಕತೆಯ ಪ್ರತಿಫಲನ. (ಭಾರತವನ್ನು ಒತ್ತಾಯ ಪೂರ್ವಕವಾಗಿ ಆರ್ಥಿಕತೆಯಾಗಿ ಪರಿವರ್ತಿಸಲಾಗುತ್ತಿದ್ದು, ಕುಸಿದಿದೆ ಎಂದು ಹೇಳಲಾಗುತ್ತಿರುವ ಇದು ತಾತ್ಕಾಲಿಕವಾದುದ್ದು. ಮುಂಬರುವ ದಿನಗಳಲ್ಲಿ ನಮ್ಮ ದೇಶವು ಕಾರ್ಪೋರೇಟ್ ಗಳಿಗೆ ಸುಸ್ಥಿರವಾದ ಮಾರುಕಟ್ಟೆಯಾಗಿ ಮಾರ್ಪಾಡಾಗಲಿದೆ)

ಇದು ಭಾರತದ ಭವಿಷ್ಯದ ಮಟ್ಟಿಗೆ ಬಹು ಗಂಭೀರವಾದ ಹಾಗೂ ಆತಂಕಪಡಬೇಕಾದ ಬೆಳವಣಿಗೆ. ಜನಸಾಮಾನ್ಯರ ನಿತ್ಯ ಬದುಕಿನ ಜೀವನಾವಶ್ಯಕ ಮತ್ತು ಆಹಾರಪದಾರ್ಥಗಳ ಚಿಲ್ಲರೆ ಮಾರಾಟ ಮಾಡುತ್ತಿರುವವರು ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಆಹಾರದ ಮೇಲೆ ಏಕಸ್ವಾಮ್ಯ ಸಾಧಿಸುತ್ತಿದ್ದಾರೆ. ಹೀಗೆ ಏಕಸ್ವಾಮ್ಯ ಸಾಧಿಸುತ್ತಾ ಬೆಳೆಯುವ ಈ ಕಾರ್ಪೊರೇಟ್ ಕಂಪನಿಗಳು ಮಾರುಕಟ್ಟೆಯಲ್ಲಿ ತಲ್ಲಣವನ್ನೇ ಉಂಟು ಮಾಡುತ್ತಾರೆ. ಹಣದುಬ್ಬರ ತರುತ್ತಾರೆ. ಆ ಮೂಲಕ ನಮಗೆಲ್ಲ ಬೆಲೆ ಏರಿಕೆಯ ಬಿಸಿಯನ್ನು ತಟ್ಟಿಸುತ್ತಾರೆ. ಇದಕ್ಕೆ ಇಂದಿನ ಸಮಾಜ ಸಾಕ್ಷಿಯಾಗಿದೆ. ಬೆಲೆ ಏರಿಕೆ ಎಂಬುದು ನಿತ್ಯ ನಿರಂತರವಾಗಿ ಕಾಣಬಹುದಾಗಿದೆ.

ಕರೋನಾ ಕಾರಣದಿಂದ ಇಡೀ ಆರ್ಥಿಕತೆಯೇ ಸ್ಥಗಿತಗೊಂಡಿರುವತಹ ಸಮಯದಲ್ಲಿಯು ನಿತ್ಯ ನಿರಂತರವಾಗಿರುವ ಬೆಲೆ ಏರಿಕೆಯು ಇವರು ತರಬಹುದಾದ ಹಣದುಬ್ಬರವನ್ನು ಸಾಕ್ಷೀಕರಿಸುತ್ತದೆ.
ಈ ಕಾರ್ಪೊರೇಟ್ ಚಿಲ್ಲರೆ ಮಾರಾಟ ಕಂಪನಿಗಳು ದೇಸಿಯ ಸ್ಥಳೀಯ ಚಿಲ್ಲರೆ ಮಾರಾಟಗಾರಂತಲ್ಲ. ಸ್ಥಳೀಯ ಮಾರಾಟಗಾರರು ತಮ್ಮತಮ್ಮಲ್ಲೇ ಪೈಪೋಟಿ ನಡೆಸಿಕೊಳ್ಳುತ್ತಾ ವಹಿವಾಟು ನಡೆಸುವವರಾಗಿದ್ದು ಸರ್ಕಾರಿ ಮಟ್ಟದಲ್ಲಿ ಇವರ ಹಸ್ತಕ್ಷೇಪ ಕ್ಷೀಣವಾಗಿರುತ್ತದೆ ಅವರ ಬಹುಪಾಲು ವಹಿವಾಟು ಸ್ಥಳೀಯ ಆರ್ಥಿಕತೆಯ ಉತ್ತೇಜಕವಾಗಿರುತ್ತದೆ.

Photo Courtesy: JustDial

ಆದರೆ ಕಾರ್ಪೊರೇಟ್ ಕಂಪನಿಗಳು ಹಾಗಲ್ಲ. ಸರ್ಕಾರಕ್ಕೆ ಇವರೇ ನಿರ್ದೇಶಕರಾಗಿರುತ್ತಾರೆ, ನೆರಳಾಗಿರುತ್ತಾರೆ. ಇಂತಹ ಹಿನ್ನೆಲೆಯುಳ್ಳ ಲಾಭಕೋರರು ಒಂದೆಡೆ ತಮ್ಮ ಮಾರಾಟ ಮಳಿಗೆಗಳನ್ನು ನಿರಂತರವಾಗಿ ತೆರೆಯತ್ತಿರುತ್ತಾರೆ. ಇದಕ್ಕಾಗಿ ರಾಜಕೀಯ ಲಾಬಿ ನಡೆಸುತ್ತಾರೆ. ತತ್ಪರಿಣಾಮ ಅಧಿಕಾರಿ ವರ್ಗದಿಂದ ಬೀದಿ ವ್ಯಾಪಾರಿಗಳಿಗೆ ಕಿರುಕುಳಗಳು ಹೆಚ್ಚುತ್ತವೆ. ಪ್ರಜಾಪ್ರಭುತ್ವ ಸೋಗಿನಲ್ಲಿರುವ ಸರ್ಕಾರಗಳಿಂದ ಉಸಿರುಕಟ್ಟಿಸುವ ಕಾನೂನು, ನೀತಿ ನಿಯಮಾವಳಿಗಳು ಜಾರಿಯಾಗುತ್ತದೆ. ಸಂಚಾರ ದಟ್ಟನೆಯ ನೆಪವೊಡ್ಡಿ ನಗರಪ್ರದೇಶದಿಂದ ಎಪಿಎಂಸಿ, ಆರ್‌ಎಂಸಿ ಯಾರ್ಡ್‌ಗಳನ್ನು ನಗರಗಳಿಂದ ಹೊರಕ್ಕೆ ಎತ್ತಂಗಡಿ ಮಾಡಲಾಗುತ್ತದೆ

ಇದೇ ರೀತಿಯಲ್ಲಿ ತುಮಕೂರಿನ ಆರ್‌ಎಂಸಿಯನ್ನು ನಗರದಿಂದ ಹೊರವಲಯಕ್ಕೆ ಸ್ಥಳಾಂತರಿಸಿದರೆ, ಬೆಂಗಳೂರಿನ ಯಶವಂತಪುರದ ಆರ್‌ಎಂಸಿ ಯಾರ್ಡನ್ನು ನಗರದಿಂದ ಬಹುದೂರಕ್ಕೆ ಯಾವುದೇ ಸವಲತ್ತು ಇರದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದರ ದೆಸೆಯಿಂದಾಗಿ ನಗರ ಪ್ರದೇಶದ ಹೂ ತರಕಾರಿ ಹಣ್ಣು ವ್ಯಾಪಾರಿಗಳ ಸಾಗಾಣಿಕೆ ವೆಚ್ಚ ಹೆಚ್ಚುತ್ತಿದ್ದು, ನಗರ ಪ್ರದೇಶದಲ್ಲಿ ಇಂದು ತರಕಾರಿಗಳ ಬೆಲೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಬೀದಿ ಬದಿ ವ್ಯಾಪಾರಿಗಳೆಡೆಗೆ ನಗರವಾಸಿಗಳು ಬೆನ್ನು ಮಾಡಿ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ, ರಿಲಯನ್ಸ್ ಫ್ರೆಶ್ ನತ್ತ ಮುಖ ಮಾಡುತ್ತಿದ್ದಾರೆ.

ಇಂತಹ ಸರ್ವ ರೀತಿಯ ಮಸಲತ್ತನೊಂದಿಗೆ ಮಾರುಕಟ್ಟೆ ವಿಸ್ತರಿಸುತ್ತಿರುವ ಈ ಕಂಪನಿಗಳು ಮುಂಬರುವ ದಿನಗಳಲ್ಲಿ ನಾವು ಉಣ್ಣುವ ಪ್ರತೀ ಅಗುಳು ಅನ್ನದ ಮೇಲೆಯೂ ಏಕಸ್ವಾಮ್ಯ ಸಾಧಿಸಲಿದ್ದಾರೆ. ನಮ್ಮ ರೈತರೇ ಬೆಳೆ ಬೆಳೆದರೂ ಮಾರುಕಟ್ಟೆಯ ಮೇಲೆ ಕಾರ್ಪೋರೇಟ್ ಗಳು ಸಾಧಿಸುತ್ತಿರುರುವುದರಿಂದ ಆ ಬೆಳೆಗಳ ಒಡೆಯರು ಕಾರ್ಪೋರೇಟ್ ಗಳೇ ಆಗುತ್ತಾರೆ. ಒಮ್ಮೆ ಇವರು ಏಕಸ್ವಾಮ್ಯ ಸಾಧಿಸಿದರೆಂದರೆ ಮುಗಿಯಿತು. ತಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳ ಬೆಲೆಯಲ್ಲಿ ಏರಿಳಿತ ಉಂಟುಮಾಡುತ್ತಾರೆ. ಇಡೀ ವಿಶ್ವಾದ್ಯಂತ ತಮ್ಮ ಜಾಲ ಹೊಂದಿರುವ ಇವರು ಯಾವ ದೇಶದಲ್ಲಿ ಯಾವ ವಸ್ತು ಯಾವ ಬೆಲೆಗೆ ದೊರೆಯುತ್ತದೆ ಎಂಬುದರ ಸ್ಪಷ್ಟ ಪರಿಜ್ಞಾನ ಹೊಂದಿದ್ದಾರೆ ಮತ್ತು ಅವುಗಳನ್ನು ಅಲ್ಲಿಂದ ಇಲ್ಲಿಗೆ ತಂದು ಮಾರಾಟ ಮಾಡುವುದರ ಮೂಲಕ ಸ್ಥಳೀಯವಾಗಿ ಅದರ ಸುತ್ತ ತಲೆ ತಲಾಂತರದಿಂದ ಎಣೆದುಕೊಂಡಿರಬಹುದಾದ ಆರ್ಥಿಕ ಸಂರಚನೆಯನ್ನು ತುಂಡರಿಸುತ್ತಾರೆ.

ಯಶವಂತಪುರ ಎಪಿಎಂಸಿ: Photo Courtesy: Bangalorean.com

ಮಾರುಕಟ್ಟೆಯ ಮೇಲೆ ಇವರ ಏಕಸ್ವಾಮ್ಯ ವಿಸ್ತರಿಸಿದಂತೆಲ್ಲ ಭಾರತೀಯ ಕೃಷಿ ಉತ್ಪನ್ನ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಲೇ ಸಾಗಿದೆ. 2000ನೇ ಇಸವಿಯಲ್ಲಿ ಶೇ. 85 ರಷ್ಟಿದ್ದ ಭಾರತದ ಕೃಷಿ ಉತ್ಪನ್ನ ಈಗ ಶೇ. 53ಕ್ಕೆ ಇಳಿಕೆ ಕಂಡಿದೆ. ಸದ್ಯ ಪ್ರತಿ ವರ್ಷ ಶೇ. 2.8 ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಭಾರತದ ಬೆಳೆಯುತ್ತಿರುವ ಆರ್ಥಿಕತೆಯ ಅಂತರಾಳವಿದು. ಕಾರ್ಪೋರೇಟ್ ಗಳ ಮಾರುಕಟ್ಟೆಯ ಮೇಲಿನ ಏಕಸ್ವಾಮ್ಯ ಇದೇ ರೀತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ಈ ಪರಿಮಾಣ ಇನ್ನೂ ಹೆಚ್ಚಾಗಲಿದೆ. ಇದರ ಒಂದು ಉದಾಹರಣೆಯಾಗಿ ತೊಗರಿಬೇಳೆಯ ವಿಚಾರವನ್ನೇ ತೆಗೆದುಕೊಳ್ಳಬಹುದು. ಇಡೀ ವಿಶಾಲ ಕರ್ನಾಟಕದ ಜನತೆ ನಿತ್ಯ ತೊಗರಿಬೇಳೆ ಉಪಯೋಗಿಸುತ್ತಿದ್ದರೂ ರೈತರಿಗೆ ಮಾತ್ರ ಅದು ಲಾಭ ತರುವ ಬೆಳೆಯಾಗಿಲ್ಲ. ಅಲ್ಲದೆ ವರ್ಷದಿಂದ ವರ್ಷಕ್ಕೆ ತೊಗರಿ ಬೇಸಾಯ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆ ಕಾರಣವಾಗಿರುವುದು ಯಾವುದೋ ದೂರದ ಕಡಿಮೆ ಬೆಲೆಗೆ ಸಿಗಬಹುದಾದ ದೇಶದಿಂದ ತೊಗರಿಬೇಳೆಯನ್ನು ಇಲ್ಲಿಗೆ ತಂದು ಸದ್ದಿಲ್ಲದೆ ಮಾರುವುದರ ಮೂಲಕ ನಮ್ಮದೇ ಮಾರುಕಟ್ಟೆ ನಮಗೆ ಇಲ್ಲದಂತೆ ಮಾಡುತ್ತಿರುವುದು.

ಕೃಷಿ ಪ್ರಧಾನವಾದ ಭಾರತದಲ್ಲಿನ ಎಲ್ಲ ರಾಷ್ಟ್ರೀಯತೆಗಳ, ಸಂಸ್ಕೃತಿಗಳ ಬೆನ್ನೆಲುಬು ಇಲ್ಲಿಯ ರೈತರು, ಇಲ್ಲಿಯ ಆರ್ಥಿಕತೆಯನ್ನವಲಂಬಿಸಿರುವ ಕುಶಲಕರ್ಮಿಗಳು ಸಣ್ಣ ಮತ್ತು ಬೀದಿ ವ್ಯಾಪಾರಿಗಳು. ಕಾರ್ಪೊರೇಟ್ ಗಳು ಹೊಂದುವ ಏಕಸ್ವಾಮ್ಯದಿಂದಾಗಿ ಇವರು ನೆಲೆ ಕಳೆದುಕೊಳ್ಳುವುದರೊಂದಿಗೆ ಎಲ್ಲಾ ಸ್ಥಳೀಯ, ಪುರಾತನ, ಸುಸ್ಥಿರ ಆರ್ಥಿಕತೆ ಸರ್ವನಾಶವಾಬಿಡುತ್ತದೆ. ಜೊತೆಗೆ ಭಾಷೆ, ರಾಷ್ಟ್ರೀಯತೆ ಸಂಸ್ಕೃತಿಯ ಅವಸಾನಕ್ಕೂ ಮುನ್ನುಡಿ ಬರೆಯುತ್ತದೆ.

ಇಂಥ ಕಂಪನಿಗಳಲ್ಲಿ ಪಡೆಯುವ ಒಂದೊಂದು ಗ್ರಾಹಕತ್ವ ನಮ್ಮ ರಾಷ್ಟ್ರೀಯತೆ ಭಾಷೆ-ಸಂಸ್ಕೃತಿಯ ಶವಪೆಟ್ಟಿಗೆಗೆ ಹೊಡೆಯುವ ಮೊಳೆ ಆಗಿರುತ್ತದೆ. ಜಾಗತೀಕರಣದ ಈ ಸಂದರ್ಭದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಸರಿಯಾಗಿ ಸಮಾಜ ಅರ್ಥಮಾಡಿಕೊಳ್ಳದಿದ್ದರೆ ಅದು ತನ್ನ ಅವನತಿಯನ್ನು ತಾನೇ ಮಾಡಿಕೊಳ್ಳುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲಕ್ಕಿಂತ ಆಳವಾಗಿ ಆರ್ಥಿಕತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿರುವುದು ಸಮಾಜದ ಆದ್ಯ ಕರ್ತವ್ಯವಾಗಿದೆ. ಆರ್ಥಿಕತೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಭಾಷೆ-ಸಂಸ್ಕೃತಿ ರಾಷ್ಟ್ರೀಯತೆಗಳನ್ನು ಕಾಪಾಡಿಕೊಳ್ಳುತ್ತೇವೆ ಎಂದು ನಡೆಯುವ ಯಾವುದೇ ಹೋರಾಟಗಳು, ಚಳುವಳಿಗಳು, ಆಂದೋಲನಗಳು ಗುರಿ ತಲುಪುವಲ್ಲಿ ವಿಫಲಗೊಳ್ಳುತ್ತವೆ. ನಮ್ಮ ಸಂಸ್ಕೃತಿ, ನಮ್ಮ ಅಸ್ಮಿತೆ ನಮ್ಮ ರಾಷ್ಟ್ರೀಯತೆ ಉಳಿಯಬೇಕು ಎಂದರೆ ಇಂತಹ ಕಾರ್ಪೊರೇಟ್ ಕಂಪನಿಗಳು ನಾಡಿನಿಂದ ಹೊರಹಾಕುವುದರತ್ತ ಗಮನ ಕೇಂದ್ರೀಕರಿಸಬೇಕಿದೆ. ಮುಂಬರುವ ದಿನಗಳಲ್ಲಿ ಈ ಕಂಪನಿ ಇನ್ನಿತರ ನಗರಗಳಲ್ಲಿ ಹೊಸ ಹೊಸ ಮಳಿಗೆಗಳನ್ನು ತೆರೆಯುವ ಯೋಚನೆಯಲ್ಲಿದೆ. ಅರ್ಥಾತ್ ಸ್ಥಳೀಯ ಆರ್ಥಿಕತೆಯ ಭಾಷೆ ಸಂಸ್ಕೃತಿ ಅಸ್ಮಿತೆ ಮೇಲೆ ದಾಳಿ ಇನ್ನಷ್ಟು ಹೆಚ್ಚಲಿದೆ. ಪ್ರಸ್ತುತ ಸಂದರ್ಭದಲ್ಲಿ ಭಾಷೆ-ಸಂಸ್ಕೃತಿ ರಾಷ್ಟ್ರೀಯತೆಗಳ ಅಸ್ಮಿತೆಯ ರಕ್ಷಣೆಗಾಗಿ ತನ್ನದೇ ಆದ ಒಂದು ಕಾರ್ಯಸೂಚಿಯನ್ನು ಹಾಕಿಕೊಳ್ಳಬೇಕಾದ ಅನಿವಾರ್ಯತೆ ಸಮಾಜದ ಮುಂದಿದೆ.

  • ಸೂರಜ್

ಇದನ್ನೂ ಓದಿ: ಮುಖ್ಯಮಂತ್ರಿಯನ್ನು ಕಂಡಕಂಡಲ್ಲಿ ಘೇರಾವ್ ಮಾಡಿ: ರೈತ-ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...