Homeಚಳವಳಿಒಳಮೀಸಲಾತಿ ಕೇಳುವವರೂ... ನೈತಿಕತೆಯೂ.... : ರಘೋತ್ತಮ ಹೊ.ಬ

ಒಳಮೀಸಲಾತಿ ಕೇಳುವವರೂ… ನೈತಿಕತೆಯೂ…. : ರಘೋತ್ತಮ ಹೊ.ಬ

ದಲಿತರ ಮೇಲೆ ದೌರ್ಜನ್ಯ ನಡೆದಾಗ, ದಬ್ಬಾಳಿಕೆ ನಡೆದಾಗ ದೀರ್ಘ ಮೌನಕ್ಕೆ ಶರಣಾಗುವ ಬಲಪಂಥೀಯ ಸಂಘಟನೆಗಳು ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಸಭೆ ಸೇರುತ್ತವೆ, ಚರ್ಚೆ ನಡೆಸುತ್ತವೆ ಅಂದರೆ ಇದರ ಹಿಂದಿರುವ ಹುನ್ನಾರ?

- Advertisement -
- Advertisement -

ಸುಪ್ರೀಂ ಕೋರ್ಟಿನ ಈಚಿನ ತೀರ್ಪಿನ ನಂತರ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟಜಾತಿಗಳೊಳಗಿನ ಒಳಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ರಚನೆಯಾಗಿದ್ದ ಸದಾಶಿವ ಆಯೋಗ ಪರಿಶಿಷ್ಟರಲ್ಲಿ ಬರುವ ಮಾದಿಗ ಮತ್ತು ಸಮಾನಾಂತರ ಜಾತಿಗಳಿಗೆ ಶೇ.6, ಹೊಲೆಯ ಮತ್ತು ಅದರ ತತ್ಸಮಾನ ಜಾತಿಗಳಿಗೆ ಶೇ.5, ಸ್ಪೃಶ್ಯ ಗುಂಪಿಗೆ ಶೇ.3 ಮತ್ತು ಇತರೆ ಪರಿಶಿಷ್ಟ ಸಮುದಾಯಗಳಿಗೆ ಶೇ.1 ಎಂದು ಮೀಸಲಾತಿಯನ್ನು ಹಂಚಿ 2012ರಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಪ್ರಸ್ತಾಪಿಸಿತ್ತು. ಖಂಡಿತ, ಸಾಮಾಜಿಕ ನ್ಯಾಯದ ಪರ ನಿಲ್ಲುವ ಯಾರೂ ಕೂಡ ಈ ವರದಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ವರದಿ ಅಕ್ಷರಶಃ ಒಪ್ಪತಕ್ಕದ್ದಾಗಿದೆ. ಆದರೆ ಯಾವುದೇ ಒಂದು ವರದಿ ಅದು ಅದೆಷ್ಟು ಪರಿಪೂರ್ಣ, ಅದೆಷ್ಟು ನ್ಯಾಯಬದ್ಧ, ಹಾಗೆಯೇ ಅದರ ಸುತ್ತ ಹುಟ್ಟಿಕೊಳ್ಳುವ ಅನೇಕ ಪ್ರಶ್ನೆಗಳು… ಖಂಡಿತ, ಸದಾಶಿವ ಆಯೋಗದ ಈ ವರದಿಯ ಸುತ್ತಲೂ ಅಂತಹದ್ದೇ ಒಂದಷ್ಟು ಪ್ರಶ್ನೆಗಳು, ವಿಚಾರಗಳು ಹುಟ್ಟಿಕೊಂಡೇ ತೀರುತ್ತವೆ.

ಉದಾಹರಣೆಗೆ ಮಾದಿಗ ಮತ್ತು ಸಂಬಂಧಿತ ಜಾತಿಗಳ ಗುಂಪಿನ ಜನಸಂಖ್ಯೆ ಶೇ.33.4 ಮತ್ತು ಹೊಲೆಯ ಮತ್ತು ಸಂಬಂಧಿತ ಜಾತಿಗಳ ಗುಂಪಿನ ಸಂಖ್ಯೆ ಶೇ.32 ಎಂದು ಆಯೋಗ ಹೇಳಿದೆ. ಅಂದರೆ ಇವೆರಡು ಸಮುದಾಯಗಳ ಜನಸಂಖ್ಯೆ ವ್ಯತ್ಯಾಸ ಶೇಕಡ 1 ಅಷ್ಟೇ. ವಿಚಾರವೆಂದರೆ ಹೆಚ್ಚುಕಮ್ಮಿ ಸಮ ಸಂಖ್ಯೆಯ ಜನಸಂಖ್ಯೆ ಹೊಂದಿರುವ ಈ ಸಮುದಾಯಗಳಿಗೆ ಶೇ.15ರ ಮೀಸಲಾತಿಯನ್ನು ಆಯೋಗ ಜನಸಂಖ್ಯೆಯನುಸಾರ ಸಮನಾಗಿ ಹಂಚಬೇಕಿತ್ತು. ಆದರೆ ಈ ನೀತಿಯಿಂದ ದೂರ ಸರಿದಿರುವ ಆಯೋಗ ಒಂದು ಗುಂಪಿಗೆ ಶೇ.6 ಮತ್ತು ಮತ್ತೊಂದು ಗುಂಪಿಗೆ ಶೇ.5 ಎಂದು ಮೀಸಲಾತಿ ಹಂಚಿ ಕೈತೊಳೆದುಕೊಂಡಿದೆ. ಹಾಗೆಯೇ 96 ಲಕ್ಷ ಜನರ ಸಮೀಕ್ಷೆ ನಡೆಸಿರುವ ಆಯೋಗ ಒಂದೆಡೆ ಯಾವ ಗುಂಪಿನಲ್ಲೂ ಗುರುತಿಸಿಕೊಳ್ಳದ 6 ಲಕ್ಷ ಪರಿಶಿಷ್ಟಜಾತಿ ಜನರಿದ್ದಾರೆ ಎಂದು ಹೇಳಿದೆ. ಆಶ್ಚರ್ಯವೆಂದರೆ ಈ ಆರು ಲಕ್ಷ ಜನರಿಗೆ ಯಾವುದೇ ಪ್ರಮಾಣದ ಮೀಸಲಾತಿ ನಿಗದಿಪಡಿಸಲು ಆಯೋಗ ಹೋಗಿಲ್ಲ! ಹಾಗಿದ್ದರೆ ಈ ಜನ ಪರಿಶಿಷ್ಟ ಜಾತಿಯ ಮೀಸಲಾತಿಯ ಅಡಿಯ ವ್ಯಾಪ್ತಿಯಲ್ಲಿ ಬರುವುದಿಲ್ಲವೇ? ಆಯೋಗ ಉತ್ತರಿಸದೆ ಬಿಟ್ಟಿರುವ ಪ್ರಶ್ನೆ ಇದು. ಇನ್ನು ಆಯೋಗ ತನ್ನ ವರದಿಯಲ್ಲಿ ತಲೆಮಾರುಗಳಿಗೆ ಮೀಸಲಾತಿ ಕೊನೆಗೊಳ್ಳಬೇಕಾದ ವಿಚಾರ ಪ್ರಸ್ತಾಪಿಸಿದೆ. ಕೆನೆ ಪದರದ ಅಂಶವನ್ನು ಕೂಡ ಆಯೋಗ ಪ್ರಸ್ತಾಪಿಸಿದೆ. ಖಂಡಿತ ಇವೆರಡು ಅಂಶಗಳನ್ನು ಪರಿಶಿಷ್ಟರು ಒಪ್ಪಲಿಕ್ಕೆ ಸಾಧ್ಯವೇ ಇಲ್ಲ.

ಅಂದಹಾಗೆ ಒಳಮೀಸಲಾತಿಯ ಹೋರಾಟದ ಹಿನ್ನೆಲೆಯಲ್ಲಿ ಇನ್ನೊಂದು
ಸೈದ್ದಾಂತಿಕ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದೆಂದರೆ ಈಚೆಗೆ ಕೆಲವರು ಅದರಲ್ಲೂ ಒಳಮೀಸಲಾತಿಯ ಪ್ರಬಲ ಪ್ರತಿಪಾದಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಒಂದು ಮಾತೆಂದರೆ “ಒಳಮೀಸಲಾತಿ ವಿರೋಧಿಗಳು ಅಂಬೇಡ್ಕರ್ ವಿರೋಧಿಗಳಾಗುತ್ತಾರೆ” ಎಂದು‌. ಆದರೆ ವಾಸ್ತವದ ವಿಚಾರವೆಂದರೆ ಒಳಮೀಸಲಾತಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವವರು, ಈ ಸಂಬಂಧ ಹೋರಾಡುತ್ತಿರುವವರು ಬಹುತೇಕರು ತಮ್ಮ ಮನೆ, ಬೀದಿ, ಆಚರಣೆಗಳಲ್ಲಿ ಅಂಬೇಡ್ಕರ್ ಫೋಟೋ ಇಟ್ಟುಕೊಳ್ಳಲು ಹೋಗುವುದಿಲ್ಲ ಅಥವಾ ಇಟ್ಟುಕೊಳ್ಳುವುದಿಲ್ಲ. ಪ್ರಶ್ನೆಯೇನೆಂದರೆ ಇಂತಹವರಿಗೆ ಸಾಮಾಜಿಕ ನ್ಯಾಯದ ಸಮರ್ಥ ಪ್ರತಿಪಾದನೆಯಾದ ಒಳಮೀಸಲಾತಿಯನ್ನು ಕೇಳುವ ನೈತಿಕತೆಯಾದರೂ ಏನಿದೆ? ಎಂಬುದು.

ವಾಸ್ತವವಾಗಿ ಬಾಬಾಸಾಹೇಬ್ ಅಂಬೇಡ್ಕರರ ಜೊತೆ ಅವರ ಆಪ್ತ ಸಹಾಯಕರಾಗಿ ಇದ್ದವರು ಚಮ್ಮಾರ ಸಮುದಾಯದ ನಾನಕ್ ಚಂದ್ ರತ್ತುರವರು. ಅವರ ಇಂಗ್ಲೀಷ್ ಬರಹಗಳನ್ನು ಸಂಪುಟ ರೂಪದಲ್ಲಿ ತಂದವರು ಅವರ ಜೊತೆ ಸದಾ ಇರುತ್ತಿದ್ದ ಭಂಗಿ ಅಥವಾ ಪೌರಕಾರ್ಮಿಕ ಸಮುದಾಯದ ಭಗವಾನ್ ದಾಸ್ ರವರು. ಇನ್ನು ಅಂಬೇಡ್ಕರರಿಗೆ ಒಂದು ರೀತಿಯಲ್ಲಿ ರಕ್ಷಣೆಯ ರೀತಿ ಇದ್ದದ್ದು ಕರ್ನಾಟಕದ ಮೂಲದವರಾದ ಸಮಗಾರ ಸಮುದಾಯದ ಶ್ರೀ ಶಂಕರಾನಂದ ಶಾಸ್ತ್ರಿಯವರು. ಅಂದರೆ ದೇಶದ ಸಮಸ್ತ ಅಸ್ಪೃಶ್ಯ ಸಮುದಾಯಗಳು ಉಪಜಾತಿ ಭೇದವಿಲ್ಲದೆ ಅಂಬೇಡ್ಕರರ ಜೊತೆ ಇದ್ದರು. ಸ್ವತಃ ಅಂಬೇಡ್ಕರ್ ಅವರು ಕೂಡ ಈ ಬಗ್ಗೆ 1939 ಜುಲೈ 2ರಂದು ಮುಂಬೈನಲ್ಲಿ ಮಾತನಾಡುತ್ತಾ “ನಾನು ಪರಿಶಿಷ್ಟಜಾತಿಯ ಇಡೀ ಸಮುದಾಯದ ಪರ ಕೆಲಸ ಮಾಡಿದ್ದೇನೆಯೇ ಹೊರತು ಯಾವುದೇ ಒಂದು ಪಂಗಡ ಅಥವಾ ಉಪಜಾತಿ ಪರ ಅಲ್ಲ” ಎಂದಿದ್ದಾರೆ. ಹೀಗಿರುವಾಗ ವಿಶೇಷವಾಗಿ ಕರ್ನಾಟಕದಲ್ಲಿ ಅಂಬೇಡ್ಕರ್ ಜಯಂತಿ ಬಂದರೆ ಯಾವುದೋ ಒಂದು ಜಾತಿ ಅಥವಾ ಜಾತಿಯ ಸಂಘಟನೆಗಳು ಅಂಬೇಡ್ಕರ್ ಜಯಂತಿ ಆಚರಿಸುತ್ತವೆ! ಉಳಿದ ಜಾತಿಗಳು ಮೀಸಲಾತಿಯ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬರುತ್ತಿದ್ದರೂ, ತಕ್ಕಮಟ್ಟಿಗಾದರು ಉಪಯೋಗ ಪಡೆಯುತ್ತಿದ್ದರೂ ಕೃತಜ್ಞತೆಗೂ ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲ ಅಥವಾ ಅವರು ಫೋಟೋ ಮತ್ತೊಂದು ಮಗದೊಂದು ಇಡುವುದಿಲ್ಲ. ದುರಂತವೆಂದರೆ ಅದೇ ಅಂಬೇಡ್ಕರ್ ಗಳಿಸಿಕೊಟ್ಟ ಮೀಸಲಾತಿಯ ಹಂಚಿಕೆಯ ವಿಚಾರ ಬಂದಾಗ ನಾಮುಂದು ತಾಮುಂದು! ಖಂಡಿತ, ಒಳಮೀಸಲಾತಿ ಹಂಚಿಕೆಯ ಚರ್ಚೆಯ ಈ ಸಂದರ್ಭದಲ್ಲಿ ಪ್ರಸ್ತಾಪಿಸಲೇಬೇಕಾದ ನೋವಿನ ವಿಷಯವಿದು.

ಮತ್ತೊಂದು ಆಶ್ಚರ್ಯದ ಹಾಗೂ ಆತಂಕದ ವಿಚಾರವೆಂದರೆ ಒಳಮೀಸಲಾತಿಯ ಈ ವಿಚಾರದಲ್ಲಿ ಬಲಪಂಥೀಯ ಸಂಘಟನೆಗಳು ಸಕ್ರಿಯವಾಗಿರುವುದು. ಅಂದರೆ ಯಾವ ದಲಿತರ ಮೇಲೆ ದೌರ್ಜನ್ಯ ನಡೆದಾಗ, ದಬ್ಬಾಳಿಕೆ ನಡೆದಾಗ ದೀರ್ಘ ಮೌನಕ್ಕೆ ಶರಣಾಗುತ್ತವೆಯೋ ಅಂತಹ ಬಲಪಂಥೀಯ ಸಂಘಟನೆಗಳು ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಸಭೆ ಸೇರುತ್ತವೆ, ಚರ್ಚೆ ನಡೆಸುತ್ತವೆ. ಪ್ರಶ್ನೆಯೆಂದರೆ ಇದರ ಹಿಂದಿರುವ ಹುನ್ನಾರ? ದಲಿತರನ್ನು ಪರಸ್ಪರ ಎತ್ತಿಕಟ್ಟುವ ತಂತ್ರವೇ?

ಒಳಮೀಸಲಾತಿ ಜಾರಿಯಾಗಲೇಬೇಕು. ಆದರೆ ಅದರ ಸುತ್ತ ಹುಟ್ಟಿಕೊಳ್ಳುವ ಅಥವಾ ಅವಿತಿರುವ ಒಂದಷ್ಟು ಇಂತಹ ವಿಚಾರಗಳು ಚರ್ಚೆಗೆ ಬರಬೇಕು. ಆ ಮೂಲಕ ನೊಂದ ಎಲ್ಲಾ ಜನಗಳು ಈಗಲಾದರೂ ತಮ್ಮ ಒಳಮರ್ಮವನ್ನು ಹೊರಜಗತ್ತಿಗೆ ಎಸೆದು ಬಾಬಾಸಾಹೇಬ್ ಅಂಬೇಡ್ಕರ್ ರನ್ನು ತಮ್ಮ ಒಳ ಮನೆಗೆ ಬರಮಾಡಿಕೊಂಡು ಒಳಮೀಸಲಾತಿಯನ್ನು ನಗುನಗುತ್ತಾ ಹಂಚಿಕೊಳ್ಳಬೇಕು. ಸಮಸಮಾಜದ ಹಾದಿಯಲ್ಲಿ ಪರಸ್ಪರ ಒಂದಾಗಿ ಹೆಜ್ಜೆ ಇಡಬೇಕು ಎಂಬುದೇ ಕಳಕಳಿ.

ರಘೋತ್ತಮ ಹೊ.ಬ

(ಹೊಸ ತಲೆಮಾರಿನ ಪ್ರಖರ ಚಿಂತಕರಲ್ಲಿ ರಘೋತ್ತಮ ಸಹಾ ಒಬ್ಬರು. ಬಹುಜನ ಚಳವಳಿಯ ಭಾಗವಾಗಿ ಗಟ್ಟಿದನಿಯಲ್ಲಿ ವಿಚಾರ ಮಂಡಿಸುತ್ತಾ ಗಮನ ಸೆಳೆದ ಅವರು, ಅಂಬೇಡ್ಕರ್‍ರನ್ನು ಆಳವಾಗಿ ಓದಿಕೊಂಡಿದ್ದು ತಮ್ಮ ನಿಷ್ಠುರ ಅನಿಸಿಕೆಗಳನ್ನು ಹೇಳಲು ಹಿಂಜರಿಯದ ವ್ಯಕ್ತಿತ್ವವುಳ್ಳವರು.)


ಇದನ್ನೂ ಓದಿ: ಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಇಂತಹ ಅರ್ದಸತ್ಯದ ಲೇಖನಗಳನ್ನು ನಾನು ನಾನುಗೌರಿ ಹೆಸರಿನ ಪತ್ರಿಕೆಯಲ್ಲಿ ನಿರೀಕ್ಷಿಸಿರಲಿಲ್ಲ
    ಗೌರಿ ಯಾವತ್ತೂ ಅರ್ಧ ಸತ್ಯಗಳ ಪರವಾಗಿರಲಿಲ್ಲ

    • ಒಳಮೀಸಲಾತಿ ಕುರಿತು ಇದುವರೆಗೂ 20 ಕ್ಕೂ ಹೆಚ್ಚು ಲೇಖಕರು ಬರೆದಿದ್ದಾರೆ. ಇದು ಅವರ ವಯಕ್ತಿಕ ಅಭಿಪ್ರಾಯ.. ಚರ್ಚೆ, ವಾದ, ಸಂವಾದಕ್ಕೆ ಮುಕ್ತ ಅವಕಾಶವಿದೆ. ನೀವು ಬರೆಯಿರಿ

  2. ಲೇಖನದ ಒಳಮರ್ಮ ಮೇಲ್ನೋಟಕ್ಕೆ ಅಷ್ಟುಸುಲಭಕ್ಕೆ ಸಾಮಾನ್ಯರಿಗೆ ಅರ್ಥವಾಗಲ್ಲ….
    ಆದರೆ ನಾನೂಗೌರಿ ಪತ್ರಿಕೆಯ ಬುದ್ವಂತರಿಗೆ ಅರ್ಥವಾಗಲಿಲ್ಲವೇ…. ಅಥವಾ ….!!?

  3. ಸಾರ್ ನೀವು ಪೂರ್ವಗ್ರಹ ಪೀಡಿತರಾಗಿ ಮಾತಡಿದ್ದಿರಿ ಅನ್ಸುತ್ತೆ ಯಾಕಂದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲೂ ಮಾದಿಗರು ಮೊದಲು ನೆನೆಸುವುದು ಅಂಬೇಡ್ಕರ್ ಅವರನ್ನೇ ನಿಮಗೆ ಸಂದೆಹಗಳಿದ್ದರೆ ನಮ್ಮ ಜಿಲ್ಲೆಯಲ್ಲಿ ಬಂದು ನೋಡಿ ಅಂಬೇಡ್ಕರ್ ಅಭಿಮಾನಿಗಳು ಅಲ್ಲದವರು ಯಾರಾದ್ರು ಇದ್ದರೆ ಅದು ಸ್ಪೃಶ್ಯ ಪರಿಶಿಷ್ಟರು ವಿನಃ ಹೊಲೇಮಾದಿಗರಲ್ಲ.. ನಮ್ಮ ಜಿಲ್ಲೆಯ ಪ್ರತಿ ಊರೂ ಪ್ರತಿ ತಾಲೂಕಿನಲ್ಲೂ ಅಂಬೇಡ್ಕರ್ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ ಸಮುದಾಯ ಒಂದಿದ್ದರೆ ಅದು ಮಾದಿಗರು ಎಂದು ಹೇಳಬಲ್ಲೆ, ಅಷ್ಟಕ್ಕೂ ಹೊಲೆ ಮಾದಿಗರು ಒಂದಾಗಿ ಒಳಮೀಸಲಾತಿ ಪ್ರಯೋಜನ ಪಡೆಯಬೇಕೆ ವಿನಃ ನಮ್ಮ ಕಿತ್ತಾಟ ದಿಂದ ಮೂರನೇಯವರು ಹಾಗೂ ಕೆಲವು ರಾಜಕೀಯ ಪಕ್ಷಗಳಿಗೆ ಲಾಭವಾಗಬಾರದು
    ಜೈ ಭೀಮ್..

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...