Homeಮುಖಪುಟಕನ್ನಡ ಸತಿಗೆ, ಮರಾಠಾ ಪತಿ! - ಡಿ.ಎಸ್ ಚೌಗಲೆ

ಕನ್ನಡ ಸತಿಗೆ, ಮರಾಠಾ ಪತಿ! – ಡಿ.ಎಸ್ ಚೌಗಲೆ

ಕನ್ನಡ ಮತ್ತು ಮರಾಠಿಯ ಸಂಬಂಧಕ್ಕೆ ಶತಮಾನಗಳ ಇತಿಹಾಸವಿದೆ. ಕಲೆ, ಸಂಗೀತ, ವಿಚಾರಗಳನ್ನು ಹಂಚಿಕೊಂಡ ಎರಡು ಭಾಷಿಕ ಸಮುದಾಯಗಳು ಬಹುಕಾಲದವರೆಗೆ ಪರಸ್ಪರ ಪ್ರಭಾವಕ್ಕೆ ಒಳಗಾಗಿ ಬೆಳೆದಿರುವ ಬಗೆಯ ಒಂದು ಝಲಕ್‍ಅನ್ನು ಈ ಲೇಖನ ನೀಡುತ್ತದೆ

- Advertisement -
- Advertisement -

ಸುಮಾರು ಹನ್ನೊಂದು ಹನ್ನೆರಡನೆಯ ಶತಮಾನದಿಂದಲೇ ಕನ್ನಡ ಮತ್ತು ಮರಾಠಿ, ಅಷ್ಟೇ ಏಕೆ ಆಂಧ್ರದ ಜನರ ಸಮಾಜ, ಸಂಸ್ಕೃತಿಯೊಂದಿಗೆ ಕೊಡುಕೊಳ್ಳುವಿಕೆ ಇದೆ. ಭಾಷಾವಾರು ಪ್ರಾಂತ್ಯಗಳು ರಚನೆಯಾಗಿ 50 ವರ್ಷಗಳಾಗಿರಬಹುದು. ಆದರೆ ಈ ಸಂಬಂಧಗಳು- ಮಾನವೀಯವಾದ ಸಂಬಂಧಗಳು ಏನಿವೆ-ಕನ್ನಡಿಗರ ನಡುವೆ, ಮರಾಠಿಗರ ನಡುವೆ, ತೆಲುಗಿನವರ ನಡುವೆ- ಇವುಗಳಿಗೆ ಒಂದು ಏಳೆಂಟು ನೂರು ವರ್ಷಗಳ ಇತಿಹಾಸವಿದೆ. ಇದನ್ನು ಅಷ್ಟು ಸುಲಭವಾಗಿ ಒಡೆದುಹಾಕಲು ಆಗುವುದಿಲ್ಲ. ಯಾವುದೇ ರಾಜಕೀಯ ಶಕ್ತಿಗೂ ಇದು ಸಾಧ್ಯವಿಲ್ಲ.

ತುಕಾರಾಮ, ಮಹಾರಾಷ್ಟ್ರದ ಮರಾಠಿ ಜನರ ಮನೆಮಾತಾಗಿರುವ ಒಬ್ಬ ಬಂಡಾಯ ಕವಿ. ತುಕಾರಾಮನನ್ನು ವೈದಿಕರು ತಮ್ಮವನನ್ನಾಗಿ ಮಾಡಿಕೊಳ್ಳುವ ಹುನ್ನಾರ ಮಾಡುತ್ತಲೇ ಬಂದಿದ್ದಾರೆ. ಇಂಥ ಪ್ರಯತ್ನಗಳು ಎಲ್ಲ ಕಾಲಕ್ಕೂ ನಡೆದಿರುವಂತಹವೆ. ತುಕಾರಾಮ ಮೂಲತಃ ಜನಸಮುದಾಯವನ್ನು ಜಾಗರ ಮಾಡುವ ಕವಿ. ಅಭಂಗಕಾರ. ನಮಗೆ ಬಸವಣ್ಣ ಹೇಗೊ ಹಾಗೇಯೇ ಮರಾಠಿಗರ ತುಕಾರಾಮ, ಒಬ್ಬ ಸುಧಾರಕನಾಗಿ ಕೆಲಸ ಮಾಡಿದ್ದಾನೆ.

‘ಕನ್ನಡ ಸತಿಗೆ, ಮರಾಠಾ ಪತಿ’ (ಮರಾಠಾ ಎಂದರೆ ಮರಾಠಿ ಮಾತನಾಡುವ ಮರಾಠಾ ಸಮುದಾಯ), ಅವರಿಬ್ಬರ ಸಂಸಾರ ಹೇಗಿರುತ್ತದೆ ಎಂಬುದನ್ನು ಹೀಗೆ ಹೇಳುತ್ತಾನೆ;

ನೀಡೆನಗೆ ಸಜ್ಜನರ ಸಹವಾಸವನು
ಅವಳು ಕರೆದಳು `ಬಾ ಇಲ್ಲಿ’ ಎಂದು
ಅವನು ನೀಡಿದನು ಸವಟು ತಂದು
ತುಕಾರಾಮನೆಂಬ ಪರಸ್ಪರ ಭೇದವಿದ್ದಲ್ಲಿ
ಸುಖದ ಬದಲಿಗೆ ದುಃಖವೇ ಬೆಳೆಯುವುದಲ್ಲಿ.

ಗೋದಾವರಿ ನದಿ ತಟದವರೆಗಿತ್ತು ಕರುನಾಡು ವಿಸ್ತರಿಸಿಕೊಂಡಿತ್ತು. ಸಹಜವಾಗಿಯೇ ತುಕಾರಾಮ ಅವರಿಗೆ ಕನ್ನಡವೂ ಗೊತ್ತಿರಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

ಬಸವಣ್ಣನ ಕಾರ್ಯಕ್ಷೇತ್ರ ಸಹ ಮಂಗಳವೇಢೆ ತನಕ ಇತ್ತು. ಅವರ ವಚನಗಳಲ್ಲಿ `ಬತ್ತೀಸರಾಗ’ ಮತ್ತು ವಿಶೇಷ
ರೂಪದಲ್ಲಿ `ಛಪ್ಪನ್ನಐವತ್ತಾರು’ ದ್ವಿರುಕ್ತಿಯ ಮರಾಠಿ ಸಂಖ್ಯಾವಾಚಿ ಪದಗಳು ಬಳಕೆಯಾಗಿವೆ. ಅವು ಭಾಷೆಯ ಭ್ರಾತೃತ್ವವನ್ನೇ ಸಾರುತ್ತವೆ. ಛಪ್ಪನ್ ಅಂದರೇನೆ ಐವತ್ತಾರು!

ಮರಾಠಿ ಜನರ ಸಾಕ್ಷಿ ಪ್ರಜ್ಞೆಯಾಗಿದ್ದ ಜ್ಞಾನೇಶ್ವರನಿಗೆ ಕನ್ನಡ ಗೊತ್ತಿತ್ತು. ಜ್ಞಾನೇಶ್ವರಿಯ ಕನ್ನಡ ಅನುವಾದಗಳು ಬಂದವು. ಅವು ಮತ್ತು ಪಂಢರಾಪುರದ ವಿಠಲನ ವಾರಕರಿ ಸಂಪ್ರದಾಯವು ಭಾಷಿಕ ಬಂಧುತ್ವದ ಬಹುದೊಡ್ಡ ಕೊಂಡಿ ಆಗಿವೆ.

ಉತ್ತರ ಕರ್ನಾಟಕದ ಬಹುತೇಕ ಬ್ರಾಹ್ಮಣರು ಕನ್ನಡ ಮಾತಾಡಿದರೂ ಅವರೊಳಗೆ ಪುಣೆಯ ಪೇಶ್ವಾಯಿ ಪ್ರಭಾವದಿಂದ ಮರಾಠಿ ಪ್ರೀತಿ ಒಳಗೊಳಗೆ ಇದೆ. ರೊಟ್ಟಿಗೆ ಅವರು ಭಕ್ರಿ ಅನ್ನುವುದು. ಮರಾಠಿಯ ಭಾಕರಿ ಪದದ ಅಪಭ್ರಂಶ ರೂಪ. ಚಿತ್ಪಾವನ ಬ್ರಾಹ್ಮಣರು ಮರಾಠಿ ಮಾತಾಡುವರು. ಕೊಂಕಣಿ, ಸಾರಸ್ವತ ಬ್ರಾಹ್ಮಣರಲ್ಲಿ ಹಲವರು ಮರಾಠಿ ಭಾಷಿಕರಾಗಿದ್ದಾರೆ.

ಉತ್ತರ ಕರ್ನಾಟಕದ ಜಿಲ್ಲೆಗಳು ಕರ್ನಾಟಕ ಏಕೀಕರಣಕ್ಕಿಂತ ಮುಂಚೆ ಮುಂಬಯಿ ಪ್ರಾಂತ್ಯದಲ್ಲಿ ಇದ್ದವು ಹೀಗಾಗಿ ಸಹಜವಾಗಿ ಮರಾಠಿ ಪ್ರಭಾವವಿದೆ. ಅದೇ ರೀತಿ ಕಲಬುರಗಿ, ರಾಯಚೂರುಗಳಲ್ಲಿ ಉರ್ದು ಹಿಂದಿ ಪ್ರಭಾವ ಇದೆ. ಹಳೆಯ ಮೈಸೂರು ಭಾಗದವರು ಮೈಸೂರು ರಾಜರ ಆಡಳಿತಕ್ಕೊಳಪಟ್ಟಿದ್ದರೂ ಅಲ್ಲೂ ಬೆಂಗಳೂರಿನಂಥ ನಗರಗಳಲ್ಲಿ ತಮಿಳು ಪ್ರಭಾವವಿದೆಯಲ್ಲ, ಹಾಗೆ.

ಕುರ್ತಕೋಟಿ ಅವರ ಲೇಖನವೊಂದರ ಪ್ರಕಾರ, ಅಚ್ಚಕನ್ನಡ ನೆಲವಾದ ಧಾರವಾಡದಲ್ಲಿ 19ನೆಯ ಶತಮಾನದ ಮಧ್ಯಭಾಗದಲ್ಲಿ ಕನ್ನಡ ಶಾಲೆಗಳಿರಲಿಲ್ಲ. ಮರಾಠಿ ಶಾಲೆಗಳೇ ಇದ್ದವು ಎಂಬ ಉಲ್ಲೇಖವಿದೆ. ಕಾಲಾಂತರದಲ್ಲಿ ಡೆಪ್ಯುಟಿ ಚನ್ನಬಸಪ್ಪರವರು ಕನ್ನಡ ಶಾಲೆ ತೆರೆದರು ಎಂಬ ಮಾಹಿತಿ ಇದೆ. ಇಂದಿಗೂ ಉತ್ತರ ಕರ್ನಾಟಕದ ಗಡಿ ಭಾಗದ ಮಹಿಳೆಯರ ಉಡುಗೆತೊಡುಗೆಯಲ್ಲಿ ಪೇಶ್ವೆಗಳ ಜೀವನಶೈಲಿಯ ಪ್ರಭಾವ ಕಾಣಿಸುತ್ತದೆ.

ಮರಾಠಿಯೊಂದಿಗೆ ಬಾಂಧವ್ಯ ರಂಗಭೂಮಿ ಮತ್ತು ಸಂಗೀತದಲ್ಲಿ ಢಾಳಾಗಿ ಕಾಣಿಸುತ್ತದೆ. ಇವುಗಳ ನಡುವೆ ಒಂದು ಅನೂಹ್ಯ, ಅನನ್ಯವಾದ ಬೆಸುಗೆ ಇದೆ. ಅಷ್ಟೇ ಯಾಕೆ, ಕಲೆಗಳ ಪಟ್ಟುಗಳ ಕೊಡುಕೊಳುವಿಕೆಯೂ ಮಹತ್ವದ್ದು. 1843ರ ನವೆಂಬರ್ 5ರಂದು ಮರಾಠಿಯ ಮೊದಲ ನಾಟಕವು ಪ್ರಯೋಗ ಕಂಡಿತು. ಸಾಂಗಲಿಯ ಸಾಮಂತರಸ ಪಟವರ್ಧನರ ಪ್ರೋತ್ಸಾಹದಿಂದ ವಿಷ್ಣುದಾಸ ಭಾವೆ ಅವರು `ಸೀತಾ ಸ್ವಯಂವರ’ ರಚಿಸಿ ಪ್ರಯೋಗಿಸಿದರು. ಈ ನಾಟಕಕ್ಕೆ ಪ್ರೇರಣೆಯು ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಮೇಳದ ಯಕ್ಷಗಾನ. 1880ರ ಆಸುಪಾಸಿನಲ್ಲಿ `ಸಂಗೀತ ಸೌಭದ್ರ’, `ಸಂಗೀತ ಶಾಕುಂತಲ’ ನಾಟಕಗಳಿಗೆ ಬೆಳಗಾವಿ ಜಿಲ್ಲೆಯ `ಶ್ರೀಕೃಷ್ಣ ಪಾರಿಜಾತ’ದ ಸಂಗೀತದ ಅಳವಡಿಕೆಯಾಗಿತ್ತು. ಅದರ ಕರ್ತೃ ಅಣ್ಣಾಸಾಹೇಬ ಕಿರ್ಲೋಸ್ಕರರು. ಇವರು ಮರಾಠಿ ಸಂಗೀತ ನಾಟಕದ ಪಿತಾಮಹ. ಅವರು ಹುಟ್ಟಿದ್ದು ಕರ್ನಾಟಕದ ಗುರ್ಲಹೊಸೂರಲ್ಲಿ. ಹಿಂದೂಸ್ತಾನಿ ಸಂಗೀತದ ಮೇರು ಗಾಯಕರಾದ ಕುಮಾರ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ, ಭೀಮಸೇನ ಜೋಶಿ ಅವರನ್ನು ಮರಾಠಿ ಜನ ತಲೆ ಮೇಲೆ ಹೊತ್ತು ಮೆರೆಸಿದವರು. ಇಂಥ ಮಧುರ ಬಾಂಧವ್ಯ ನಮ್ಮಲ್ಲಿ ಹಾಸುಹೊಕ್ಕಾಗಿರುವಾಗ ಯಾವ ರಾಜಕೀಯ ಹುನ್ನಾರಗಳೂ ಕಳ್ಳುಬಳ್ಳಿಯ ಸಂಬಂಧವನ್ನು ಕೆಡಿಸಲಾರವು. ಈ ಚಿಂತನೆಯನ್ನು ಜನಮಾನಸದಲ್ಲಿ ಹೆಚ್ಚಾಗಿ ಬಿತ್ತಬೇಕಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕಿಡಿ, ಬೆಳಕು ನೀಡಬೇಕೇ ಹೊರತು ಬೆಂಕಿಯನ್ನಲ್ಲ. ಈ ನೆಲದ ಮೂಲವಾದ ಬಹುತ್ವವು ಬದುಕಿದರೆ ಮಾತ್ರ ಸಕಲರಿಗೂ ಲೇಸುಂಟು ಎಂಬುದನ್ನು ಭಾಷಾ ರಾಜಕಾರಣ ಮಾಡುವವರು ಅರಿಯಬೇಕು.

ಡಿ ಎಸ್ ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು.


ಇದನ್ನೂ ಓದಿ: ಯುದ್ಧವಿರೋಧಿ ಜನ ಪ್ರತಿರೋಧವನ್ನು ಸಂವೇದನೆಯಿಂದ ಅವಲೋಕಿಸುವ ಚಿತ್ರ – ‘ದ ಟ್ರಯಲ್ ಆಫ್ ದ ಶಿಕಾಗೊ 7’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...