Homeಮುಖಪುಟಕನ್ನಡ ಸತಿಗೆ, ಮರಾಠಾ ಪತಿ! - ಡಿ.ಎಸ್ ಚೌಗಲೆ

ಕನ್ನಡ ಸತಿಗೆ, ಮರಾಠಾ ಪತಿ! – ಡಿ.ಎಸ್ ಚೌಗಲೆ

ಕನ್ನಡ ಮತ್ತು ಮರಾಠಿಯ ಸಂಬಂಧಕ್ಕೆ ಶತಮಾನಗಳ ಇತಿಹಾಸವಿದೆ. ಕಲೆ, ಸಂಗೀತ, ವಿಚಾರಗಳನ್ನು ಹಂಚಿಕೊಂಡ ಎರಡು ಭಾಷಿಕ ಸಮುದಾಯಗಳು ಬಹುಕಾಲದವರೆಗೆ ಪರಸ್ಪರ ಪ್ರಭಾವಕ್ಕೆ ಒಳಗಾಗಿ ಬೆಳೆದಿರುವ ಬಗೆಯ ಒಂದು ಝಲಕ್‍ಅನ್ನು ಈ ಲೇಖನ ನೀಡುತ್ತದೆ

- Advertisement -
- Advertisement -

ಸುಮಾರು ಹನ್ನೊಂದು ಹನ್ನೆರಡನೆಯ ಶತಮಾನದಿಂದಲೇ ಕನ್ನಡ ಮತ್ತು ಮರಾಠಿ, ಅಷ್ಟೇ ಏಕೆ ಆಂಧ್ರದ ಜನರ ಸಮಾಜ, ಸಂಸ್ಕೃತಿಯೊಂದಿಗೆ ಕೊಡುಕೊಳ್ಳುವಿಕೆ ಇದೆ. ಭಾಷಾವಾರು ಪ್ರಾಂತ್ಯಗಳು ರಚನೆಯಾಗಿ 50 ವರ್ಷಗಳಾಗಿರಬಹುದು. ಆದರೆ ಈ ಸಂಬಂಧಗಳು- ಮಾನವೀಯವಾದ ಸಂಬಂಧಗಳು ಏನಿವೆ-ಕನ್ನಡಿಗರ ನಡುವೆ, ಮರಾಠಿಗರ ನಡುವೆ, ತೆಲುಗಿನವರ ನಡುವೆ- ಇವುಗಳಿಗೆ ಒಂದು ಏಳೆಂಟು ನೂರು ವರ್ಷಗಳ ಇತಿಹಾಸವಿದೆ. ಇದನ್ನು ಅಷ್ಟು ಸುಲಭವಾಗಿ ಒಡೆದುಹಾಕಲು ಆಗುವುದಿಲ್ಲ. ಯಾವುದೇ ರಾಜಕೀಯ ಶಕ್ತಿಗೂ ಇದು ಸಾಧ್ಯವಿಲ್ಲ.

ತುಕಾರಾಮ, ಮಹಾರಾಷ್ಟ್ರದ ಮರಾಠಿ ಜನರ ಮನೆಮಾತಾಗಿರುವ ಒಬ್ಬ ಬಂಡಾಯ ಕವಿ. ತುಕಾರಾಮನನ್ನು ವೈದಿಕರು ತಮ್ಮವನನ್ನಾಗಿ ಮಾಡಿಕೊಳ್ಳುವ ಹುನ್ನಾರ ಮಾಡುತ್ತಲೇ ಬಂದಿದ್ದಾರೆ. ಇಂಥ ಪ್ರಯತ್ನಗಳು ಎಲ್ಲ ಕಾಲಕ್ಕೂ ನಡೆದಿರುವಂತಹವೆ. ತುಕಾರಾಮ ಮೂಲತಃ ಜನಸಮುದಾಯವನ್ನು ಜಾಗರ ಮಾಡುವ ಕವಿ. ಅಭಂಗಕಾರ. ನಮಗೆ ಬಸವಣ್ಣ ಹೇಗೊ ಹಾಗೇಯೇ ಮರಾಠಿಗರ ತುಕಾರಾಮ, ಒಬ್ಬ ಸುಧಾರಕನಾಗಿ ಕೆಲಸ ಮಾಡಿದ್ದಾನೆ.

‘ಕನ್ನಡ ಸತಿಗೆ, ಮರಾಠಾ ಪತಿ’ (ಮರಾಠಾ ಎಂದರೆ ಮರಾಠಿ ಮಾತನಾಡುವ ಮರಾಠಾ ಸಮುದಾಯ), ಅವರಿಬ್ಬರ ಸಂಸಾರ ಹೇಗಿರುತ್ತದೆ ಎಂಬುದನ್ನು ಹೀಗೆ ಹೇಳುತ್ತಾನೆ;

ನೀಡೆನಗೆ ಸಜ್ಜನರ ಸಹವಾಸವನು
ಅವಳು ಕರೆದಳು `ಬಾ ಇಲ್ಲಿ’ ಎಂದು
ಅವನು ನೀಡಿದನು ಸವಟು ತಂದು
ತುಕಾರಾಮನೆಂಬ ಪರಸ್ಪರ ಭೇದವಿದ್ದಲ್ಲಿ
ಸುಖದ ಬದಲಿಗೆ ದುಃಖವೇ ಬೆಳೆಯುವುದಲ್ಲಿ.

ಗೋದಾವರಿ ನದಿ ತಟದವರೆಗಿತ್ತು ಕರುನಾಡು ವಿಸ್ತರಿಸಿಕೊಂಡಿತ್ತು. ಸಹಜವಾಗಿಯೇ ತುಕಾರಾಮ ಅವರಿಗೆ ಕನ್ನಡವೂ ಗೊತ್ತಿರಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

ಬಸವಣ್ಣನ ಕಾರ್ಯಕ್ಷೇತ್ರ ಸಹ ಮಂಗಳವೇಢೆ ತನಕ ಇತ್ತು. ಅವರ ವಚನಗಳಲ್ಲಿ `ಬತ್ತೀಸರಾಗ’ ಮತ್ತು ವಿಶೇಷ
ರೂಪದಲ್ಲಿ `ಛಪ್ಪನ್ನಐವತ್ತಾರು’ ದ್ವಿರುಕ್ತಿಯ ಮರಾಠಿ ಸಂಖ್ಯಾವಾಚಿ ಪದಗಳು ಬಳಕೆಯಾಗಿವೆ. ಅವು ಭಾಷೆಯ ಭ್ರಾತೃತ್ವವನ್ನೇ ಸಾರುತ್ತವೆ. ಛಪ್ಪನ್ ಅಂದರೇನೆ ಐವತ್ತಾರು!

ಮರಾಠಿ ಜನರ ಸಾಕ್ಷಿ ಪ್ರಜ್ಞೆಯಾಗಿದ್ದ ಜ್ಞಾನೇಶ್ವರನಿಗೆ ಕನ್ನಡ ಗೊತ್ತಿತ್ತು. ಜ್ಞಾನೇಶ್ವರಿಯ ಕನ್ನಡ ಅನುವಾದಗಳು ಬಂದವು. ಅವು ಮತ್ತು ಪಂಢರಾಪುರದ ವಿಠಲನ ವಾರಕರಿ ಸಂಪ್ರದಾಯವು ಭಾಷಿಕ ಬಂಧುತ್ವದ ಬಹುದೊಡ್ಡ ಕೊಂಡಿ ಆಗಿವೆ.

ಉತ್ತರ ಕರ್ನಾಟಕದ ಬಹುತೇಕ ಬ್ರಾಹ್ಮಣರು ಕನ್ನಡ ಮಾತಾಡಿದರೂ ಅವರೊಳಗೆ ಪುಣೆಯ ಪೇಶ್ವಾಯಿ ಪ್ರಭಾವದಿಂದ ಮರಾಠಿ ಪ್ರೀತಿ ಒಳಗೊಳಗೆ ಇದೆ. ರೊಟ್ಟಿಗೆ ಅವರು ಭಕ್ರಿ ಅನ್ನುವುದು. ಮರಾಠಿಯ ಭಾಕರಿ ಪದದ ಅಪಭ್ರಂಶ ರೂಪ. ಚಿತ್ಪಾವನ ಬ್ರಾಹ್ಮಣರು ಮರಾಠಿ ಮಾತಾಡುವರು. ಕೊಂಕಣಿ, ಸಾರಸ್ವತ ಬ್ರಾಹ್ಮಣರಲ್ಲಿ ಹಲವರು ಮರಾಠಿ ಭಾಷಿಕರಾಗಿದ್ದಾರೆ.

ಉತ್ತರ ಕರ್ನಾಟಕದ ಜಿಲ್ಲೆಗಳು ಕರ್ನಾಟಕ ಏಕೀಕರಣಕ್ಕಿಂತ ಮುಂಚೆ ಮುಂಬಯಿ ಪ್ರಾಂತ್ಯದಲ್ಲಿ ಇದ್ದವು ಹೀಗಾಗಿ ಸಹಜವಾಗಿ ಮರಾಠಿ ಪ್ರಭಾವವಿದೆ. ಅದೇ ರೀತಿ ಕಲಬುರಗಿ, ರಾಯಚೂರುಗಳಲ್ಲಿ ಉರ್ದು ಹಿಂದಿ ಪ್ರಭಾವ ಇದೆ. ಹಳೆಯ ಮೈಸೂರು ಭಾಗದವರು ಮೈಸೂರು ರಾಜರ ಆಡಳಿತಕ್ಕೊಳಪಟ್ಟಿದ್ದರೂ ಅಲ್ಲೂ ಬೆಂಗಳೂರಿನಂಥ ನಗರಗಳಲ್ಲಿ ತಮಿಳು ಪ್ರಭಾವವಿದೆಯಲ್ಲ, ಹಾಗೆ.

ಕುರ್ತಕೋಟಿ ಅವರ ಲೇಖನವೊಂದರ ಪ್ರಕಾರ, ಅಚ್ಚಕನ್ನಡ ನೆಲವಾದ ಧಾರವಾಡದಲ್ಲಿ 19ನೆಯ ಶತಮಾನದ ಮಧ್ಯಭಾಗದಲ್ಲಿ ಕನ್ನಡ ಶಾಲೆಗಳಿರಲಿಲ್ಲ. ಮರಾಠಿ ಶಾಲೆಗಳೇ ಇದ್ದವು ಎಂಬ ಉಲ್ಲೇಖವಿದೆ. ಕಾಲಾಂತರದಲ್ಲಿ ಡೆಪ್ಯುಟಿ ಚನ್ನಬಸಪ್ಪರವರು ಕನ್ನಡ ಶಾಲೆ ತೆರೆದರು ಎಂಬ ಮಾಹಿತಿ ಇದೆ. ಇಂದಿಗೂ ಉತ್ತರ ಕರ್ನಾಟಕದ ಗಡಿ ಭಾಗದ ಮಹಿಳೆಯರ ಉಡುಗೆತೊಡುಗೆಯಲ್ಲಿ ಪೇಶ್ವೆಗಳ ಜೀವನಶೈಲಿಯ ಪ್ರಭಾವ ಕಾಣಿಸುತ್ತದೆ.

ಮರಾಠಿಯೊಂದಿಗೆ ಬಾಂಧವ್ಯ ರಂಗಭೂಮಿ ಮತ್ತು ಸಂಗೀತದಲ್ಲಿ ಢಾಳಾಗಿ ಕಾಣಿಸುತ್ತದೆ. ಇವುಗಳ ನಡುವೆ ಒಂದು ಅನೂಹ್ಯ, ಅನನ್ಯವಾದ ಬೆಸುಗೆ ಇದೆ. ಅಷ್ಟೇ ಯಾಕೆ, ಕಲೆಗಳ ಪಟ್ಟುಗಳ ಕೊಡುಕೊಳುವಿಕೆಯೂ ಮಹತ್ವದ್ದು. 1843ರ ನವೆಂಬರ್ 5ರಂದು ಮರಾಠಿಯ ಮೊದಲ ನಾಟಕವು ಪ್ರಯೋಗ ಕಂಡಿತು. ಸಾಂಗಲಿಯ ಸಾಮಂತರಸ ಪಟವರ್ಧನರ ಪ್ರೋತ್ಸಾಹದಿಂದ ವಿಷ್ಣುದಾಸ ಭಾವೆ ಅವರು `ಸೀತಾ ಸ್ವಯಂವರ’ ರಚಿಸಿ ಪ್ರಯೋಗಿಸಿದರು. ಈ ನಾಟಕಕ್ಕೆ ಪ್ರೇರಣೆಯು ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಮೇಳದ ಯಕ್ಷಗಾನ. 1880ರ ಆಸುಪಾಸಿನಲ್ಲಿ `ಸಂಗೀತ ಸೌಭದ್ರ’, `ಸಂಗೀತ ಶಾಕುಂತಲ’ ನಾಟಕಗಳಿಗೆ ಬೆಳಗಾವಿ ಜಿಲ್ಲೆಯ `ಶ್ರೀಕೃಷ್ಣ ಪಾರಿಜಾತ’ದ ಸಂಗೀತದ ಅಳವಡಿಕೆಯಾಗಿತ್ತು. ಅದರ ಕರ್ತೃ ಅಣ್ಣಾಸಾಹೇಬ ಕಿರ್ಲೋಸ್ಕರರು. ಇವರು ಮರಾಠಿ ಸಂಗೀತ ನಾಟಕದ ಪಿತಾಮಹ. ಅವರು ಹುಟ್ಟಿದ್ದು ಕರ್ನಾಟಕದ ಗುರ್ಲಹೊಸೂರಲ್ಲಿ. ಹಿಂದೂಸ್ತಾನಿ ಸಂಗೀತದ ಮೇರು ಗಾಯಕರಾದ ಕುಮಾರ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ, ಭೀಮಸೇನ ಜೋಶಿ ಅವರನ್ನು ಮರಾಠಿ ಜನ ತಲೆ ಮೇಲೆ ಹೊತ್ತು ಮೆರೆಸಿದವರು. ಇಂಥ ಮಧುರ ಬಾಂಧವ್ಯ ನಮ್ಮಲ್ಲಿ ಹಾಸುಹೊಕ್ಕಾಗಿರುವಾಗ ಯಾವ ರಾಜಕೀಯ ಹುನ್ನಾರಗಳೂ ಕಳ್ಳುಬಳ್ಳಿಯ ಸಂಬಂಧವನ್ನು ಕೆಡಿಸಲಾರವು. ಈ ಚಿಂತನೆಯನ್ನು ಜನಮಾನಸದಲ್ಲಿ ಹೆಚ್ಚಾಗಿ ಬಿತ್ತಬೇಕಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕಿಡಿ, ಬೆಳಕು ನೀಡಬೇಕೇ ಹೊರತು ಬೆಂಕಿಯನ್ನಲ್ಲ. ಈ ನೆಲದ ಮೂಲವಾದ ಬಹುತ್ವವು ಬದುಕಿದರೆ ಮಾತ್ರ ಸಕಲರಿಗೂ ಲೇಸುಂಟು ಎಂಬುದನ್ನು ಭಾಷಾ ರಾಜಕಾರಣ ಮಾಡುವವರು ಅರಿಯಬೇಕು.

ಡಿ ಎಸ್ ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು.


ಇದನ್ನೂ ಓದಿ: ಯುದ್ಧವಿರೋಧಿ ಜನ ಪ್ರತಿರೋಧವನ್ನು ಸಂವೇದನೆಯಿಂದ ಅವಲೋಕಿಸುವ ಚಿತ್ರ – ‘ದ ಟ್ರಯಲ್ ಆಫ್ ದ ಶಿಕಾಗೊ 7’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...