Homeಅಂಕಣಗಳುಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ

ಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ

- Advertisement -
- Advertisement -

ಗೌರಿ ಅವರಿಗೆ ಲಂಕೇಶ್ ಬರೆದಿದ್ದ ನಾಲ್ಕು ಪತ್ರಗಳು

1) 19-10-1993
ಪ್ರೀತಿಯ ಗೌರು,

ನಿನ್ನ ಪತ್ರ. Sorry. ಕಳೆದ ಮೂರು ದಿನಗಳಿಂದ ಉತ್ತರ ಬರೆಯಲು ಸಮಯ ಸಿಕ್ಕಿರಲಿಲ್ಲ.

ಆ ಯುರೋಪ್‍ನ ದೇಶಗಳು ಎಷ್ಟು ಸಜ್ಜಾಗಿ ವ್ಯವಸ್ಥಿತವಾಗಿವೆ ಎಂಬುದು ನನಗೆ ಗೊತ್ತು. ಆದರೆ ನಮ್ಮಂಥವರಿಗೆ ಅವರ ಪಿತ್ರಾರ್ಜಿತ ಕಲಾವಸ್ತುಗಳು ಉಸಿರುಗಟ್ಟಿಸುವಂತೆ ಇರುತ್ತವೆ. ಹಾಗೆಯೇ ಅವುಗಳಲ್ಲಿ ಅವರಿಗಿರುವ ಉತ್ಸಾಹ ಹಾಸ್ಯಾಸ್ಪದವಾಗಿ ಕಾಣುತ್ತದೆ,

ಆದರೆ ಪ್ಯಾರಿಸ್‍ನಂತಹ ನಗರ (ಈಗ ಅಲ್ಲಿಂದ ಜಗತ್‍ಪ್ರಖ್ಯಾತ ಮೇಧಾವಿಗಳು ಸಂಪೂರ್ಣವಾಗಿ ಮಾಯವಾಗಿದ್ದಾರೆ ಎಂದೆನಿಸುತ್ತದೆ) ನಿನಗೆ “Moveable Feast” (ಇದು ಏರ್ನೆಸ್ಟ್ ಹೆಮಿಂಗ್ವೆನ ಪುಸ್ತಕದ ಟೈಟಲ್ – ಗೌರಿ ಲಂಕೇಶ್) ಆಗುವುದು ಯಾವಾಗ ಅಂದರೆ, ನೀನು ಅದರ ಲಯವನ್ನು ಗ್ರಹಿಸಿದಾಗ; ಗೆಳೆಯರೊಂದಿಗೆ ಆ ನಗರವನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ; ಇವೆಲ್ಲ ಅನೇಕ ದಿನ ನೀನು ಅಲ್ಲಿ ತಂಗಿದಾಗ ಮಾತ್ರ ಸಾಧ್ಯವಾಗುತ್ತದೆ.

ನೀನು ನಿನ್ನ ಕೋರ್ಸ್‍ನ್ನು ಇಷ್ಟಪಡುತ್ತಿರುವೆ ಎಂದು ನಂಬಿದ್ದೇನೆ. ಸಮಯವಾದಾಗ ಪ್ಯಾರಿಸ್‍ನಿಂದ ಹೊರಗೆ ಹೋಗಿ ಆ ದೇಶದ ಗ್ರಾಮ ಪ್ರದೇಶಗಳನ್ನು ನೋಡು.

ಈ ದೇಶ ಇದ್ದಹಾಗೇ ಇದೆ; ಹಲವು ದುರಂತಗಳನ್ನು ಹೊರತುಪಡಿಸಿದರೆ. ಭೂಕಂಪ, ಕಾಂಗ್ರೆಸ್ ಪಕ್ಷದ ದುರಾಡಳಿತ… ಎಲ್ಲವೂ ಅಸಹ್ಯಕರವಾಗಿವೆ.

ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಸೌಖ್ಯ,

ನಿನ್ನ ಪ್ರೀತಿಯ
ಅಪ್ಪ

2) 2-11-1993
ಪ್ರೀತಿಯ ಗೌರು,

ಹತ್ತು ದಿನಗಳ ಹಿಂದೆ ನಾನು ಬರೆದ ಪತ್ರ ತಲುಪಿದೆ ಎಂದು ನಂಬಿರುವೆ. ಇಲ್ಲಿಂದ ಯಾರೂ ಪತ್ರ ಬರೆದಿಲ್ಲ ಎಂದು ನಿನಗೆ ಬೇಸರವಾಗಿದೆ ಎಂದು ಕೇಳಿದೆ. ಒಂದನ್ನು ನನಪಿನಲಿಟ್ಟುಕೋ. ಜನರು ಮೂಲಭೂತವಾಗಿ ಸ್ವಾರ್ಥಿಗಳಾಗಿರುತ್ತಾರೆ, ಯಾರಿಂದಲೂ ಯಾವುದನ್ನೂ ನಿರೀಕ್ಷಿಸುವುದು ತಪ್ಪು. ನೀನು ಇದನ್ನು ಅರಿತರೆ ಜೀವನದಲ್ಲಿ ಹೊರೆ ಕಡಿಮೆಯಾದಂತಾಗುತ್ತದೆ. ಸಾಕು ಈ ಉಪದೇಶಗಳು!

ಹೇಗಿದ್ದೀ? ಇಷ್ಟೋತ್ತಿಗಾಗಲೇ ನಿನಗೆ ಪ್ಯಾರಿಸ್ ಇಷ್ಟವಾಗಿರಬೇಕು. ಇಲ್ಲಿ ಮೊನ್ನೆಯವರೆಗೂ ಮಳೆ ಬರುತ್ತಿತ್ತು. ಆದರೆ ಈ ದಿನ ಸುಂದರವಾಗಿದೆ, bright, cool & thrilling! ಸದ್ಯದಲ್ಲೇ ಚಳಿಗಾಲ ಬರಲಿದೆ. ಈ ಬಾರಿಯ ದಸರಾ ಮತ್ತು ಗಣೇಶ ಹಬ್ಬಗಳು ತುಂಬಾ ಗದ್ದಲಮಯವಾಗಿದ್ದವು. ಈ ಗದ್ದಲಗಳ ನಡುವೆಯೇ 1970ರಲ್ಲಿ ಪ್ರಥಮವಾಗಿ ಪ್ರಕಟವಾಗಿದ್ದ ನನ್ನ “ಅಕ್ಷರ ಹೊಸಕಾವ್ಯ”ದ ಮರುಮುದ್ರಿಕೆಯನ್ನು ಹೊರತಂದೆವು.

ನಿನ್ನ ಪ್ರೀತಿಯ
ಅಪ್ಪ

3) 7-4-1994
ಪ್ರೀತಿಯ ಗೌರು,

ಇದೇ ಕೊನೆಯ ಕಾಗದ – ನೀನು ಪ್ಯಾರಿಸ್‍ನಿಂದ ಭಾರತಕ್ಕೆ ಹಿಂದಿರುಗುವ ಮುನ್ನ ಅನ್ನಿಸುತ್ತದೆ. ನೀನು ಟರ್ಕಿ ದೇಶದ ಜನರ ಬಗ್ಗೆ ಬರೆದದ್ದು ಕುತೂಹಲಕಾರಿಯಾಗಿತ್ತು. ಅವರು ಯುರೋಪಿಯನ್ ದೇಶದವರಿಗಿಂತ Courteous ಎಂದು ಬರೆದಿದ್ದೀ. ಆದರೆ ನ್ಯೂಸ್‍ವೀಕ್‍ನಲ್ಲಿ ಇತ್ತೀಚಿಗೆ ಮುಸ್ಲಿಂ ಮೂಲಭೂತವಾದಿಗಳು ಅಲ್ಜೀರಿಯ ಮತ್ತು ಈಜಿಪ್ಟ್ ದೇಶಗಳಲ್ಲಿಯಂತೆ ಟರ್ಕಿಯಲ್ಲಿಯೂ ತಮ್ಮ ಕಿತಾಪತಿ ಶುರು ಮಾಡಿದ್ದಾರೆ ಎಂದು ವರದಿಯಾಗಿತ್ತು. ಅದೊಂದು ದೊಡ್ಡ ದುರಂತ. ಯಾಕೆಂದರೆ, ಕಮಲ್ ಅತಾರುಕ್‍ನ ದೊಡ್ಡ ಸಾಧನೆ ಏನೆಂದರೆ, ಆತ ಟರ್ಕಿ ದೇಶವನ್ನು ಜಾತ್ಯತೀತ ರಾಜ್ಯವನ್ನಾಗಿಸಿದ್ದ. ಆದ್ದರಿಂದಲೇ ಟರ್ಕಿ ಯುರೋಪಿಗೆ ಹತ್ತಿರವಾಗಿತ್ತು.

ಈಗ ಫ್ರಾನ್ಸ್‌ನಲ್ಲಿ ವಸಂತ ಋತುಗಾಲ… ಪಶ್ಚಿಮ ಯುರೋಪ್ ದೇಶಗಳು ಈ ಸುಂದರವಾದ ಋತುಗಾಲಕ್ಕಾಗಿಯೇ ಹೇಳಿ ಮಾಡಿಸಿದಂತಿರಬೇಕು! ಅದರಲ್ಲಿಯೂ ಮೇ ತಿಂಗಳಂತೂ ಅತ್ಯಂತ ಆನಂದದಾಯಕವಾಗಿರುತ್ತದೆ ಎಂದು ಕೇಳಿದ್ದೇನೆ.

ನೀನು ಹಿಂದಿರುಗುವಾಗ ಮರೆಯದೇ ಒಂದೆರಡು ಸ್ಕಾಚ್ ಬಾಟಲ್‍ಗಳನ್ನು ತೆಗೆದುಕೊಂಡು ಬಾ. ತುಂಬಾ ದುಬಾರಿಯಾದದ್ದೇನೂ ಬೇಡ.

ನಿಜ, ನನಗೆ ಸಣ್ಣ ಸ್ಟ್ರೋಕ್ ಆಗಿತ್ತು. ಆದರೆ ಈಗ ಪರವಾಗಿಲ್ಲ.. ಡಾಲರ್‌ನಷ್ಟೇ ಸ್ಥಿರವಾಗಿದ್ದೇನೆ. (ಆದರೆ ಡಾಲರ್ ಮಾತ್ರ ಕುಸಿಯುತ್ತಿದೆಯಂತೆ!)

ಪುಸ್ತಕಗಳ ಬಗ್ಗೆ ಕೇಳಿದ್ದೀ. ಆದಷ್ಟು ಪುಸ್ತಕಗಳನ್ನು ತಗೊಂಡು ಬಾ. ಐಯೊನೆಸ್ಕೊ ತೀರಿಹೋದದ್ದು ಕೇಳಿ ಬೇಸರವಾಯಿತು. ಅವನು lovely fellow. ಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ. (ಅದರ ಹೆಸರು ಸದ್ಯಕ್ಕೆ ನನಗೆ ಬರುತ್ತಿಲ್ಲ).

ನಿನ್ನ ಪ್ರೀತಿಯ
ಅಪ್ಪ

4) 29-4-1994
ಪ್ರೀತಿಯ ಗೌರು,

ಇಂಗ್ಲೆಂಡ್‍ಗೆ ಮತ್ತೆ ಹೋದಾಗ ಒಂದು ಒಳ್ಳೆಯ ಅಂಗಡಿಗೆ ಹೋಗಿ ಜಾರ್ಜ್||| ಬಗ್ಗೆ ಪ್ರಕಟವಾಗಿರುವ ನಾಟಕದ ಪುಸ್ತಕವನ್ನು ಮರೆಯದೇ ತಗೊಂಡು ಬಾ. ಜಾರ್ಜ್||| ಎಂಬ ರಾಜನಿಗೆ ಅಮೆರಿಕಾದ ಸ್ವಾತಂತ್ರ್ಯ ಯುದ್ಧ ನಡೆಯುತ್ತಿರುವಾಗ ಹುಚ್ಚು ಹಿಡಿದಿತ್ತು. ಅವನು ಒಳ್ಳೆಯವನಾಗಿದ್ದರೂ ಅವನ ಸುತ್ತಲೂ ಇದ್ದ ಜನ ಅವನಿಗೆ ಹುಚ್ಚು ಹಿಡಿಸಿದ್ದರು! ಅವನ ಕಥೆ ಒಂದು ಒಳ್ಳೆಯ ನಾಟಕವಾಗಿ ಮೂಡಿಬಂದಿದೆಯಂತೆ. (ಆ ನಾಟಕದ ಪ್ರದರ್ಶನ ಈಗ ಇಂಗ್ಲೆಂಡ್‍ನಲ್ಲಿ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಬಹುಶಃ ನಾನು ಅಮೆರಿಕಾದಲ್ಲಿನ ಪ್ರದರ್ಶನದ ಬಗ್ಗೆ ವಿಮರ್ಶೆ ಓದಿರಬೇಕು) ಆ ನಾಟಕದ ಪುಸ್ತಕ ಸಿಕ್ಕರೆ ಮರೆಯದೇ ತಗೊಂಡು ಬಾ.

ನಾನೀಗ ಆರಾಮವಾಗಿದ್ದೇನೆ. rest, meditation ಮತ್ತು will powerಗಳಿಂದಾಗಿ!

ನೀ ಹೇಗಿದ್ದೀ? ಫ್ರಾನ್ಸ್ ಹೇಗಿದೆ? ನೀನು ನಿನ್ನ ಗೆಳೆಯರೊಂದಿಗೆ ಇರುವ ಹಲವು ಫೋಟೋಗಳನ್ನು ನೋಡಿದೆ. ನೀನು ಚೆನ್ನಾಗಿ ಕಾಣಿಸುತ್ತೀ..

ಚಿದು ಕಾಗದ ಬರೆದಿದ್ದ ಬೇರೆ ದೇಶಗಳಿಗೆ ಒಮ್ಮೆ ಪ್ರಯಾಣ ಮಾಡಿ ಎಂದು ಸೂಚಿಸಿದ್ದ. ಆದರೆ ನನಗೆ ಪ್ರಯಾಣ ಮಾಡುವಷ್ಟು ಆರೋಗ್ಯ ಇಲ್ಲ. ಹಾಗೆಯೇ ಈ ಟೂರಿಸ್ಟ್ ಜಾಗಗಳನ್ನು ಕಂಡರೆ ನನಗೆ ಆಸಹ್ಯ!

ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಮಳೆಯಾಗಿಲ್ಲ. ಬಹಳ ಸೆಖೆ. ಸಾಮಾನ್ಯವಾಗಿ ಏಪ್ರಿಲ್ ಕೊನೆಯ ಭಾಗದಲ್ಲಿ ಬೆಂಗಳೂರಿನಲ್ಲಿ ಮಳೆಯಾಗುತ್ತದೆ, ಅದಾದ ನಂತರ ಬೆಂಗಳೂರು ಟರ್ಫ್ ಕ್ಲಬ್‍ನವರು ರೇಸ್‍ಗಳಿಗೆ ತಮ್ಮ ಟ್ರ್ಯಾಕ್‍ಗಳನ್ನು ಸಿದ್ಧಪಡಿಸುತ್ತಾರೆ. ಈ ಬಾರಿ ಅದು doubtful.

ನಿನ್ನ ಪ್ರೀತಿಯ
ಅಪ್ಪ


ಇದನ್ನೂ ಓದಿ: ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...