Homeಅಂಕಣಗಳುಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ

ಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ

- Advertisement -
- Advertisement -

ಗೌರಿ ಅವರಿಗೆ ಲಂಕೇಶ್ ಬರೆದಿದ್ದ ನಾಲ್ಕು ಪತ್ರಗಳು

1) 19-10-1993
ಪ್ರೀತಿಯ ಗೌರು,

ನಿನ್ನ ಪತ್ರ. Sorry. ಕಳೆದ ಮೂರು ದಿನಗಳಿಂದ ಉತ್ತರ ಬರೆಯಲು ಸಮಯ ಸಿಕ್ಕಿರಲಿಲ್ಲ.

ಆ ಯುರೋಪ್‍ನ ದೇಶಗಳು ಎಷ್ಟು ಸಜ್ಜಾಗಿ ವ್ಯವಸ್ಥಿತವಾಗಿವೆ ಎಂಬುದು ನನಗೆ ಗೊತ್ತು. ಆದರೆ ನಮ್ಮಂಥವರಿಗೆ ಅವರ ಪಿತ್ರಾರ್ಜಿತ ಕಲಾವಸ್ತುಗಳು ಉಸಿರುಗಟ್ಟಿಸುವಂತೆ ಇರುತ್ತವೆ. ಹಾಗೆಯೇ ಅವುಗಳಲ್ಲಿ ಅವರಿಗಿರುವ ಉತ್ಸಾಹ ಹಾಸ್ಯಾಸ್ಪದವಾಗಿ ಕಾಣುತ್ತದೆ,

ಆದರೆ ಪ್ಯಾರಿಸ್‍ನಂತಹ ನಗರ (ಈಗ ಅಲ್ಲಿಂದ ಜಗತ್‍ಪ್ರಖ್ಯಾತ ಮೇಧಾವಿಗಳು ಸಂಪೂರ್ಣವಾಗಿ ಮಾಯವಾಗಿದ್ದಾರೆ ಎಂದೆನಿಸುತ್ತದೆ) ನಿನಗೆ “Moveable Feast” (ಇದು ಏರ್ನೆಸ್ಟ್ ಹೆಮಿಂಗ್ವೆನ ಪುಸ್ತಕದ ಟೈಟಲ್ – ಗೌರಿ ಲಂಕೇಶ್) ಆಗುವುದು ಯಾವಾಗ ಅಂದರೆ, ನೀನು ಅದರ ಲಯವನ್ನು ಗ್ರಹಿಸಿದಾಗ; ಗೆಳೆಯರೊಂದಿಗೆ ಆ ನಗರವನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ; ಇವೆಲ್ಲ ಅನೇಕ ದಿನ ನೀನು ಅಲ್ಲಿ ತಂಗಿದಾಗ ಮಾತ್ರ ಸಾಧ್ಯವಾಗುತ್ತದೆ.

ನೀನು ನಿನ್ನ ಕೋರ್ಸ್‍ನ್ನು ಇಷ್ಟಪಡುತ್ತಿರುವೆ ಎಂದು ನಂಬಿದ್ದೇನೆ. ಸಮಯವಾದಾಗ ಪ್ಯಾರಿಸ್‍ನಿಂದ ಹೊರಗೆ ಹೋಗಿ ಆ ದೇಶದ ಗ್ರಾಮ ಪ್ರದೇಶಗಳನ್ನು ನೋಡು.

ಈ ದೇಶ ಇದ್ದಹಾಗೇ ಇದೆ; ಹಲವು ದುರಂತಗಳನ್ನು ಹೊರತುಪಡಿಸಿದರೆ. ಭೂಕಂಪ, ಕಾಂಗ್ರೆಸ್ ಪಕ್ಷದ ದುರಾಡಳಿತ… ಎಲ್ಲವೂ ಅಸಹ್ಯಕರವಾಗಿವೆ.

ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಸೌಖ್ಯ,

ನಿನ್ನ ಪ್ರೀತಿಯ
ಅಪ್ಪ

2) 2-11-1993
ಪ್ರೀತಿಯ ಗೌರು,

ಹತ್ತು ದಿನಗಳ ಹಿಂದೆ ನಾನು ಬರೆದ ಪತ್ರ ತಲುಪಿದೆ ಎಂದು ನಂಬಿರುವೆ. ಇಲ್ಲಿಂದ ಯಾರೂ ಪತ್ರ ಬರೆದಿಲ್ಲ ಎಂದು ನಿನಗೆ ಬೇಸರವಾಗಿದೆ ಎಂದು ಕೇಳಿದೆ. ಒಂದನ್ನು ನನಪಿನಲಿಟ್ಟುಕೋ. ಜನರು ಮೂಲಭೂತವಾಗಿ ಸ್ವಾರ್ಥಿಗಳಾಗಿರುತ್ತಾರೆ, ಯಾರಿಂದಲೂ ಯಾವುದನ್ನೂ ನಿರೀಕ್ಷಿಸುವುದು ತಪ್ಪು. ನೀನು ಇದನ್ನು ಅರಿತರೆ ಜೀವನದಲ್ಲಿ ಹೊರೆ ಕಡಿಮೆಯಾದಂತಾಗುತ್ತದೆ. ಸಾಕು ಈ ಉಪದೇಶಗಳು!

ಹೇಗಿದ್ದೀ? ಇಷ್ಟೋತ್ತಿಗಾಗಲೇ ನಿನಗೆ ಪ್ಯಾರಿಸ್ ಇಷ್ಟವಾಗಿರಬೇಕು. ಇಲ್ಲಿ ಮೊನ್ನೆಯವರೆಗೂ ಮಳೆ ಬರುತ್ತಿತ್ತು. ಆದರೆ ಈ ದಿನ ಸುಂದರವಾಗಿದೆ, bright, cool & thrilling! ಸದ್ಯದಲ್ಲೇ ಚಳಿಗಾಲ ಬರಲಿದೆ. ಈ ಬಾರಿಯ ದಸರಾ ಮತ್ತು ಗಣೇಶ ಹಬ್ಬಗಳು ತುಂಬಾ ಗದ್ದಲಮಯವಾಗಿದ್ದವು. ಈ ಗದ್ದಲಗಳ ನಡುವೆಯೇ 1970ರಲ್ಲಿ ಪ್ರಥಮವಾಗಿ ಪ್ರಕಟವಾಗಿದ್ದ ನನ್ನ “ಅಕ್ಷರ ಹೊಸಕಾವ್ಯ”ದ ಮರುಮುದ್ರಿಕೆಯನ್ನು ಹೊರತಂದೆವು.

ನಿನ್ನ ಪ್ರೀತಿಯ
ಅಪ್ಪ

3) 7-4-1994
ಪ್ರೀತಿಯ ಗೌರು,

ಇದೇ ಕೊನೆಯ ಕಾಗದ – ನೀನು ಪ್ಯಾರಿಸ್‍ನಿಂದ ಭಾರತಕ್ಕೆ ಹಿಂದಿರುಗುವ ಮುನ್ನ ಅನ್ನಿಸುತ್ತದೆ. ನೀನು ಟರ್ಕಿ ದೇಶದ ಜನರ ಬಗ್ಗೆ ಬರೆದದ್ದು ಕುತೂಹಲಕಾರಿಯಾಗಿತ್ತು. ಅವರು ಯುರೋಪಿಯನ್ ದೇಶದವರಿಗಿಂತ Courteous ಎಂದು ಬರೆದಿದ್ದೀ. ಆದರೆ ನ್ಯೂಸ್‍ವೀಕ್‍ನಲ್ಲಿ ಇತ್ತೀಚಿಗೆ ಮುಸ್ಲಿಂ ಮೂಲಭೂತವಾದಿಗಳು ಅಲ್ಜೀರಿಯ ಮತ್ತು ಈಜಿಪ್ಟ್ ದೇಶಗಳಲ್ಲಿಯಂತೆ ಟರ್ಕಿಯಲ್ಲಿಯೂ ತಮ್ಮ ಕಿತಾಪತಿ ಶುರು ಮಾಡಿದ್ದಾರೆ ಎಂದು ವರದಿಯಾಗಿತ್ತು. ಅದೊಂದು ದೊಡ್ಡ ದುರಂತ. ಯಾಕೆಂದರೆ, ಕಮಲ್ ಅತಾರುಕ್‍ನ ದೊಡ್ಡ ಸಾಧನೆ ಏನೆಂದರೆ, ಆತ ಟರ್ಕಿ ದೇಶವನ್ನು ಜಾತ್ಯತೀತ ರಾಜ್ಯವನ್ನಾಗಿಸಿದ್ದ. ಆದ್ದರಿಂದಲೇ ಟರ್ಕಿ ಯುರೋಪಿಗೆ ಹತ್ತಿರವಾಗಿತ್ತು.

ಈಗ ಫ್ರಾನ್ಸ್‌ನಲ್ಲಿ ವಸಂತ ಋತುಗಾಲ… ಪಶ್ಚಿಮ ಯುರೋಪ್ ದೇಶಗಳು ಈ ಸುಂದರವಾದ ಋತುಗಾಲಕ್ಕಾಗಿಯೇ ಹೇಳಿ ಮಾಡಿಸಿದಂತಿರಬೇಕು! ಅದರಲ್ಲಿಯೂ ಮೇ ತಿಂಗಳಂತೂ ಅತ್ಯಂತ ಆನಂದದಾಯಕವಾಗಿರುತ್ತದೆ ಎಂದು ಕೇಳಿದ್ದೇನೆ.

ನೀನು ಹಿಂದಿರುಗುವಾಗ ಮರೆಯದೇ ಒಂದೆರಡು ಸ್ಕಾಚ್ ಬಾಟಲ್‍ಗಳನ್ನು ತೆಗೆದುಕೊಂಡು ಬಾ. ತುಂಬಾ ದುಬಾರಿಯಾದದ್ದೇನೂ ಬೇಡ.

ನಿಜ, ನನಗೆ ಸಣ್ಣ ಸ್ಟ್ರೋಕ್ ಆಗಿತ್ತು. ಆದರೆ ಈಗ ಪರವಾಗಿಲ್ಲ.. ಡಾಲರ್‌ನಷ್ಟೇ ಸ್ಥಿರವಾಗಿದ್ದೇನೆ. (ಆದರೆ ಡಾಲರ್ ಮಾತ್ರ ಕುಸಿಯುತ್ತಿದೆಯಂತೆ!)

ಪುಸ್ತಕಗಳ ಬಗ್ಗೆ ಕೇಳಿದ್ದೀ. ಆದಷ್ಟು ಪುಸ್ತಕಗಳನ್ನು ತಗೊಂಡು ಬಾ. ಐಯೊನೆಸ್ಕೊ ತೀರಿಹೋದದ್ದು ಕೇಳಿ ಬೇಸರವಾಯಿತು. ಅವನು lovely fellow. ಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ. (ಅದರ ಹೆಸರು ಸದ್ಯಕ್ಕೆ ನನಗೆ ಬರುತ್ತಿಲ್ಲ).

ನಿನ್ನ ಪ್ರೀತಿಯ
ಅಪ್ಪ

4) 29-4-1994
ಪ್ರೀತಿಯ ಗೌರು,

ಇಂಗ್ಲೆಂಡ್‍ಗೆ ಮತ್ತೆ ಹೋದಾಗ ಒಂದು ಒಳ್ಳೆಯ ಅಂಗಡಿಗೆ ಹೋಗಿ ಜಾರ್ಜ್||| ಬಗ್ಗೆ ಪ್ರಕಟವಾಗಿರುವ ನಾಟಕದ ಪುಸ್ತಕವನ್ನು ಮರೆಯದೇ ತಗೊಂಡು ಬಾ. ಜಾರ್ಜ್||| ಎಂಬ ರಾಜನಿಗೆ ಅಮೆರಿಕಾದ ಸ್ವಾತಂತ್ರ್ಯ ಯುದ್ಧ ನಡೆಯುತ್ತಿರುವಾಗ ಹುಚ್ಚು ಹಿಡಿದಿತ್ತು. ಅವನು ಒಳ್ಳೆಯವನಾಗಿದ್ದರೂ ಅವನ ಸುತ್ತಲೂ ಇದ್ದ ಜನ ಅವನಿಗೆ ಹುಚ್ಚು ಹಿಡಿಸಿದ್ದರು! ಅವನ ಕಥೆ ಒಂದು ಒಳ್ಳೆಯ ನಾಟಕವಾಗಿ ಮೂಡಿಬಂದಿದೆಯಂತೆ. (ಆ ನಾಟಕದ ಪ್ರದರ್ಶನ ಈಗ ಇಂಗ್ಲೆಂಡ್‍ನಲ್ಲಿ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಬಹುಶಃ ನಾನು ಅಮೆರಿಕಾದಲ್ಲಿನ ಪ್ರದರ್ಶನದ ಬಗ್ಗೆ ವಿಮರ್ಶೆ ಓದಿರಬೇಕು) ಆ ನಾಟಕದ ಪುಸ್ತಕ ಸಿಕ್ಕರೆ ಮರೆಯದೇ ತಗೊಂಡು ಬಾ.

ನಾನೀಗ ಆರಾಮವಾಗಿದ್ದೇನೆ. rest, meditation ಮತ್ತು will powerಗಳಿಂದಾಗಿ!

ನೀ ಹೇಗಿದ್ದೀ? ಫ್ರಾನ್ಸ್ ಹೇಗಿದೆ? ನೀನು ನಿನ್ನ ಗೆಳೆಯರೊಂದಿಗೆ ಇರುವ ಹಲವು ಫೋಟೋಗಳನ್ನು ನೋಡಿದೆ. ನೀನು ಚೆನ್ನಾಗಿ ಕಾಣಿಸುತ್ತೀ..

ಚಿದು ಕಾಗದ ಬರೆದಿದ್ದ ಬೇರೆ ದೇಶಗಳಿಗೆ ಒಮ್ಮೆ ಪ್ರಯಾಣ ಮಾಡಿ ಎಂದು ಸೂಚಿಸಿದ್ದ. ಆದರೆ ನನಗೆ ಪ್ರಯಾಣ ಮಾಡುವಷ್ಟು ಆರೋಗ್ಯ ಇಲ್ಲ. ಹಾಗೆಯೇ ಈ ಟೂರಿಸ್ಟ್ ಜಾಗಗಳನ್ನು ಕಂಡರೆ ನನಗೆ ಆಸಹ್ಯ!

ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಮಳೆಯಾಗಿಲ್ಲ. ಬಹಳ ಸೆಖೆ. ಸಾಮಾನ್ಯವಾಗಿ ಏಪ್ರಿಲ್ ಕೊನೆಯ ಭಾಗದಲ್ಲಿ ಬೆಂಗಳೂರಿನಲ್ಲಿ ಮಳೆಯಾಗುತ್ತದೆ, ಅದಾದ ನಂತರ ಬೆಂಗಳೂರು ಟರ್ಫ್ ಕ್ಲಬ್‍ನವರು ರೇಸ್‍ಗಳಿಗೆ ತಮ್ಮ ಟ್ರ್ಯಾಕ್‍ಗಳನ್ನು ಸಿದ್ಧಪಡಿಸುತ್ತಾರೆ. ಈ ಬಾರಿ ಅದು doubtful.

ನಿನ್ನ ಪ್ರೀತಿಯ
ಅಪ್ಪ


ಇದನ್ನೂ ಓದಿ: ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...