Homeಮುಖಪುಟಭೋಪಾಲ್ ಅನಿಲ ದುರಂತಕ್ಕೆ 36 ವರ್ಷ: ಇನ್ನೂ ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತರು

ಭೋಪಾಲ್ ಅನಿಲ ದುರಂತಕ್ಕೆ 36 ವರ್ಷ: ಇನ್ನೂ ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತರು

ಸರ್ಕಾರಗಳ ಹೊಣೆಗೇಡಿತನದಿಂದಾಗಿ ಸಾವಿರಾರು ಜನರ ಸಾವಿಗೆ ಕಾರಣವಾದ ವ್ಯಕ್ತಿ ವಾರೆನ್ ಆಂಡರ್ಸನ್‌ಗೆ ಶಿಕ್ಷೆಯಾಗಲಿಲ್ಲ. ಆತ ತುಂಬು ಜೀವನ ನಡೆಸಿ 2014ರಲ್ಲಿ ತನ್ನ 92ನೇ ವಯಸ್ಸಿನಲ್ಲಿ ನಿಧನನಾದ.

- Advertisement -
- Advertisement -

1984ರ ಡಿಸೆಂಬರ್ 2-3  ರ ರಾತ್ರಿ ಯೂನಿಯನ್ ಕಾರ್ಬೈಡ್ ಎಂಬ ಕಂಪನಿ ಭೋಪಾಲಿನ 3000 ಕ್ಕೂ ಹೆಚ್ಚು ಮಂದಿಗೆ ಮಿಥೈಲ್ ಐಸೋಸಯನೇಟ್ ಎಂಬ ವಿಷ ಅನಿಲ ಕುಡಿಸಿ ಕೊಂದು ಹಾಕಿತ್ತು ಎಂದು ಸರ್ಕಾರದ ವರದಿಗಳು ಹೇಳುತ್ತವೆ. ಆದರೆ ಈ ಅನಿಲ ದುರಂತದಲ್ಲಿ ಮಡಿದ ಮತ್ತು ಬದುಕುಳಿದ ಜನರ ಪರವಾಗಿ ಹೋರಾಡುತ್ತಿರುವ ಸಂಘಟನೆಗಳು ಈ ದುರಂತದಿಂದಾಗಿ 25,000 ಜನ ಸಾವನಪ್ಪಿದ್ದಾರೆ ಎಂದು ವಾದಿಸುತ್ತಿದೆ. ಇಷ್ಟೆಲ್ಲದರ ನಡುವೆ ಪ್ರಪಂಚದ ಅತಿ ದೊಡ್ಡ ಔಧ್ಯಮಿಕ ದುರಂತದ ಈ ದುರ್ಘಟನೆ ನಡೆದು 36 ವರ್ಷ ಕಳೆದರೂ ಸಂತ್ರಸ್ತರಿಗೆ ನ್ಯಾಯವೆಂಬುದು ಮರೀಚಿಕೆಯಾಗಿದೆ.

1984 ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದಿಂದಾಗಿ 8000 ಜನ ಸತ್ತು, 5,25,000 ಜನ ಬಾಧಿತರಾಗಿದ್ದಕ್ಕೆ ಕೊನೆಗೂ ಯೂನಿಯನ್ ಕಾರ್ಬೈಡ್ ಕಂಪನಿ ಪರಿಹಾರವಾಗಿ ಕೊಟ್ಟಿದ್ದು 450 ಮಿಲಿಯನ್ ಡಾಲರ್ – ಅಂದರೆ 1,500 ಕೋಟಿ ರೂಪಾಯಿಗಳನ್ನು ಮಾತ್ರ. ಅಲ್ಲದೆ ಭೋಪಾಲ್‍ನಲ್ಲಿ ಮಡಿದ ಭಾರತೀಯರಿಗೂ ಅಮೆರಿಕದ ಮಾಲೀಕತ್ವದ ಯೂನಿಯನ್ ಕಾರ್ಬೈಡ್ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂಬಂತಲೇ ವರ್ತಿಸಿಕೊಂಡು ಬಂದಿರುವ ಈ ಕಂಪನಿಯು ತಾನು ಎಸಗಿದ ಕೊಲೆಗಳಿಂದ ಬಚಾವಾಗಲೂ ಮಾಡಿದ ಷಡ್ಯಂತ್ರಗಳು ಒಂದೆರಡಲ್ಲ. ಅವುಗಳಲ್ಲಿ ಪ್ರಮುಖವಾದದ್ದು 2000 ರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯನ್ನೇ ಡೌ ಎಂಬ ಮತ್ತೊಂದು ಕಂಪನಿಗೆ ಮಾರಿದ್ದು. ಇದನ್ನು ಡೌ ಕಂಪನಿಯು ಕೊಂಡಿದ್ದೇ ಯೂನಿಯನ್ ಕಾರ್ಬೈಡ್‍ನ ಯಾವ ಹೊಣೆಗಾರಿಕೆಗೂ ತಾನು ಜವಾಬ್ದಾರನಲ್ಲ ಎಂಬ ಷರತ್ತಿನ ಮೇಲೆ.

ಹತ್ತು ವರ್ಷಗಳ ಹಿಂದೆ 2010ರಲ್ಲಿ ಭೋಪಾಲ್ ಕೋರ್ಟ್ ತೀರ್ಪು ನೀಡಿತು. ಸಾವಿರಾರು ಜನರ ಸಾವಿಗೆ. ಲಕ್ಷಾಂತರ ಜನರ ನೋವಿಗೆ ನ್ಯಾಯವಾಗಿ ಅಪರಾಧಿಗಲಿಗೆ ಕೋರ್ಟ್ ಕೊಟ್ಟ ಶಿಕ್ಷೆ ಕೇವಲ 2 ವರ್ಷದ ಸಜೆ! ಆ ದುರಂತದಲ್ಲಿ ಸತ್ತವರಲ್ಲಿ ಬಹಳಷ್ಟು ಜನ ಬಡವರು, ಕೂಲಿ ಕಾರ್ಮಿಕರು, ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಕೆಲ ವರ್ಗದವರು. ಹಾಗೆಯೇ ಆ ದುರಂತದಲ್ಲಿ ಸಂತ್ರಸ್ತರಾದ ಐದೂವರೆ ಲಕ್ಷ ಜನರೂ ಕಡುಬಡವರು. ಈ ಜನ ಮಾತ್ರ ಪರಿಹಾರಕ್ಕಾಗಿ 26 ವರ್ಷಗಳ ಕಾಲ ಕಾಯಬೇಕಾಯಿತು. ಆಗಲೂ ಅವರಿಗೆ ದೊರಕಿದ ಹಣವೆಷ್ಟು? ತಲಾ 15,000 ರೂಪಾಯಿಗಳು ಮಾತ್ರ. ಅಂದರೆ ಆ ದುರಂತ ಸಂಭವಿಸಿ ಅವರ ಬದುಕೇ ನುಚ್ಚುನೂರಾಗಿದ್ದರೂ ಅಂದಿನಿಂದ ಇಂದಿನತನಕ ಅವರು ಅನುಭವಿಸಿದ ಯಾತನೆಗೆ ನೀಡಿದ ಪರಿಹಾರ: ಪ್ರತಿದಿನಕ್ಕೆ ಕೇವಲ ಒಂದೂವರೆ ರೂಪಾಯಿಗಳು!

ಇನ್ನು ಭೋಪಾಲ್ ಅನಿಲ ದುರಂತ ಸಂಭವಿಸಿದ ಸಂದರ್ಭದಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯ ಸಿಇಓ ಆಗಿದ್ದವನು ವಾರೆನ್ ಆಂಡರ್ಸನ್. ಇಂತಹ ದೊಡ್ಡ ದುರಂತ ಸಂಭವಿಸಿ ಸಾವಿರಾರು ಜನ ಸಾಯುತ್ತಿದ್ದರೂ ಆತ ಅಮೆರಿಕಾಕ್ಕೆ ಪರಾರಿಯಾಗಲು ಆಗಿನ ಕಾಂಗ್ರೆಸ್ ಸರ್ಕಾರ ಸಹಾಯ ಮಾಡಿದೆ ಎಂಬ ಆರೋಪವಿದೆ. ಅಲ್ಲದೇ ಈ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ದೇಶದ ಬಡಜನರ ಬದಲು ಕಂಪನಿಯೊಂದಿಗೆ ಶಾಮೀಲಾಗಿತ್ತು ಎಂದು ಹೋರಾಟಗಾರರು ದೂರಿದ್ದರು. ಸಂತ್ರಸ್ತರಿಗೆ ನ್ಯಾಯ ವಿಳಂಬವಾಗಲು ಕಾಂಗ್ರೆಸ್ ಸರ್ಕಾರವೇ ಕಾರಣವಾಗಿತ್ತು.

ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ತರಾಟೆಗೆ ತೆಗೆದುಕೊಳ್ಳುತ್ತಿದೆ. ಆದರೆ ಇದೇ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಭೋಪಾಲ್ ಸಂತ್ರಸ್ತರಿಗೆ ಯಾವ ಸಹಾಯವನ್ನೂ ಮಾಡಲಿಲ್ಲ. ಅಷ್ಟೇ ಅಲ್ಲ, ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ ವಾಜಪೇಯಿ ಪ್ರಧಾನಿ ಆಗಿದ್ದಾಗ ಡೌ ಕಂಪನಿಯ ಮುಖ್ಯಸ್ಥನನ್ನು ಗಣರಾಜ್ಯೋತ್ಸವದ ಸಮಾರಂಭಕ್ಕೆ ಆಹ್ವಾನಿಸಿತ್ತು! ಮಾತ್ರವಲ್ಲ, ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದೂ ಅಮೆರಿಕಕ್ಕೆ ಓಡಿಹೋಗಿದ್ದ ಯೂನಿಯನ್ ಕಾರ್ಬೈಡ್‍ನ ಮುಖ್ಯಸ್ಥ ವಾರೆನ್ ಆಂಡರ್ಸನ್ ಅನ್ನು ಭಾರತಕ್ಕೆ ಒಪ್ಪಿಸಬೇಕೆಂದು ಒಮ್ಮೆಯೂ ಬಿಜೆಪಿ ಸರ್ಕಾರ ಅಮೆರಿಕವನ್ನು ಕೇಳಿಕೊಂಡಿರಲಿಲ್ಲ!

ಈ ರೀತಿಯಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ದುಷ್ಟತನ, ಹೊಣೆಗೇಡಿತನದಿಂದಾಗಿ ಸಾವಿರಾರು ಜನರ ಸಾವಿಗೆ ಕಾರಣವಾದ ವ್ಯಕ್ತಿ ಯೂನಿಯನ್ ಕಾರ್ಬೈಡ್ ಕಂಪನಿಯ ಸಿಇಓ ವಾರೆನ್ ಆಂಡರ್ಸನ್ ತುಂಬು ಜೀವನ ನಡೆಸಿ 2014ರಲ್ಲಿ ತನ್ನ 92ನೇ ವಯಸ್ಸಿನಲ್ಲಿ ನಿಧನನಾದನೇ ಹೊರತು ಶಿಕ್ಷೆಯಿಂದಲ್ಲ! ಶಿಕ್ಷೆ ಇರಲಿ ಆತ ಭಾರತೀಯ ಕೋರ್ಟುಗಳು ವಿಚಾರಣೆಗೂ ಹಾಜರಾಗಲಿಲ್ಲ ಎಂದರೆ ನಂಬಲೇಬೇಕು.

ಅನಿಲ ದುರಂತದ ಸಂತ್ರಸ್ತರ ಪರವಾಗಿ ಇಂದಿರಾ ಜೈಸಿಂಗ್, ಅನಿಲ್ ಸದ್ಗೋಪಾಲ್ ಸೇರಿದಂತೆ ಸಾವಿರಾರು ಜನ ಸುಧೀರ್ಘ ಹೋರಾಟ ನಡೆಸಿದ್ದಾರೆ. ಇಂದು ಸಂತ್ರಸ್ತರಿಗೆ ಅಷ್ಟೋ ಇಷ್ಟೊ ಪರಿಹಾರ ಸಿಗಲು ದೇಶದ ಲಕ್ಷಾಂತರ ಜನ ಬೀದಿಗಿಳಿದಿ ಹೋರಾಟ ಮಾಡಬೇಕಾದ ದುಸ್ಥಿತಿ ನಮ್ಮ ದೇಶದ್ದು. ಆದರು ಇಂದಿಗೂ ಎಲ್ಲರಿಗೂ ನ್ಯಾಯ ಮತ್ತು ಪರಿಹಾರ ಸಿಕ್ಕಿಲ್ಲ. 36 ವರ್ಷ ಕಳೆದರೂ ಇಂದಿಗೂ ಹಲವು ಸಂಘಟನೆಗಳು ದನಿಯೆತ್ತುತ್ತಲೇ ಇವೆ.

ಅನಿಲ ದುರಂತದಿಂದ ಬದುಕುಳಿದವರಿಗೆ ದೀರ್ಘಾವಧಿಯ ಗಾಯಗಳು ಮತ್ತು ರೋಗಗಳು ಬಾಧಿಸುತ್ತಿವೆ. ಇಂದಿನ ಕೋವಿಡ್ ಸಾಂಕ್ರಾಮಿಕವು ಅವರನ್ನು ಇನ್ನಷ್ಟು ತೊಂದರೆಗೀಡುಮಾಡಿದೆ. ಆರೋಗ್ಯ ಇಲಾಖೆಯ ಅಧಿಕೃತ ದಾಖಲೆಯ ಪ್ರಕಾರ ಭೋಪಾಲ್ ಜಿಲ್ಲೆಯ ಅನಿಲ ಪೀಡಿತ ಜನಸಂಖ್ಯೆಯಲ್ಲಿ ಕೋವಿಡ್ -19 ಸಾವಿನ ಪ್ರಮಾಣ 6.5 ಪಟ್ಟು ಹೆಚ್ಚಾಗಿದೆ ಎಂದು ಭೋಪಾಲ್ ಗ್ಯಾಸ್ ಪೀಡಿತ ಮಹಿಳಾ ಪುರುಷ ಸಂಘರ್ಷ ಮೋರ್ಚಾದ ಅಧ್ಯಕ್ಷ ನವಾಬ್ ಖಾನ್ ಹೇಳಿದ್ದಾರೆ.

ವಿಷಕಾರಿ ಪ್ರಕರಣದ ಪರಿಣಾಮಗಳನ್ನು ತಗ್ಗಿಸಲು ಸರ್ಕಾರಗಳು ಇಂದಿಗೂ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಸಂತ್ರಸ್ತರ ಪರವಾಗಿ ಹೋರಾಡುತ್ತಿರುವ ಭೋಪಾಲ್ ಗ್ಯಾಸ್ ಪೀಡಿತ ಸಂಘರ್ಷ ಸಹಯೋಗ್ ಸಮಿತಿ ಎಂಬ ಮತ್ತೊಂದು ಸಂಘಟನೆಯ ಸಂಚಾಲಕಿ ಸಾಧನಾ ಕಾರ್ನಿಕ್ ಹೇಳುತ್ತಾರೆ.

“ಸ್ಥಾವರದಿಂದ ಸೋರಿಕೆಯಾದ ಅನಿಲವು ನಗರದ ವಿಶಾಲ ಪ್ರದೇಶದ ಜನರ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಕಡೆಯಿಂದ ಯಾವುದೇ ಪ್ರಾಮಾಣಿಕ ಪ್ರಯತ್ನಗಳಾಗುತ್ತಿಲ್ಲ. ಸಂತ್ರಸ್ತರಿಗಾಗಿ ನಿರ್ಮಾಣವಾದ ಭೋಪಾಲ್ ಸ್ಮಾರಕ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ಬಿಎಮ್‌ಹೆಚ್‌ಆರ್‌ಸಿ)ವು ಅಸ್ತವ್ಯಸ್ತವಾಗಿದೆ. ಅಲ್ಲಿನ ಸೌಲಭ್ಯಗಳನ್ನು ಸುಧಾರಿಸಲು ಯಾರೂ ಮುಂದಾಗುತ್ತಿಲ್ಲ” ಎಂದು ಅವರು ದೂರಿದ್ದಾರೆ.

ಇನ್ನು ಮಧ್ಯಪ್ರದೇಶ ಸರ್ಕಾರವು “ಭೋಪಾಲ್ ಅನಿಲ ದುರಂತದ ಪರಿಹಾರ ಮತ್ತು ಪುನರ್ವಸತಿ ಖಾತೆ”ಯನ್ನು ಆರಂಭಿಸಿದೆ. ಅದರ ಸಚಿವ ವಿಶ್ವಸ್ ಸಾರಂಗ್ “ಪರಿಹಾರದ ವಿಷಯವು ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇದೆ. ಆದ್ದರಿಂದ, ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ದುರಂತದಿಂದ ಬದುಕುಳಿದವರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ರಾಜ್ಯದ ನಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಒಂದು ಆಸ್ಪತ್ರೆಯನ್ನು ಅವರಿಗಾಗಿ ಮೀಸಲಿಟ್ಟಿದ್ದೇವೆ” ಎನ್ನುತ್ತಾರೆ. ಇಂತಹ ಅಸೂಕ್ಷ್ಮ ವ್ಯಕ್ತಿಗಳು ಇರುವವರೆಗೂ ಸಂತ್ರಸ್ತರು ನ್ಯಾಯಕ್ಕಾಗಿ ಕಾಯುತ್ತಲೇ ಇರಬೇಕಿದೆ. justice delayed is justice denied ಎಂಬ ಆಂಗ್ಲಗಾದೆಯನ್ನು ಈ ದುರಂತ ನಿಜ ಮಾಡಿದೆ.


ಇದನ್ನೂ ಓದಿ: ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಪರಿಹಾರದಲ್ಲಿಯೂ ತಾರತಮ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...