Homeರಾಜಕೀಯವಿಷಪೂರಿತ ತೀರ್ಪು

ವಿಷಪೂರಿತ ತೀರ್ಪು

- Advertisement -
- Advertisement -

1984 ರಲ್ಲಿ ಡಿಸೆಂಬರ್ 2-3  ರ ರಾತ್ರಿ ಯೂನಿಯನ್ ಕಾರ್ಬೈಡ್ ಎಂಬ ಕಂಪನಿ ಭೋಪಾಲಿನ 3000 ಕ್ಕೂ ಹೆಚ್ಚು ಮಂದಿಗೆ ಮಿಥೈಲ್ ಐಸೋಸಯನೇಟ್ ಎಂಬ ವಿಷ ಅನಿಲವನ್ನು ಕುಡಿಸಿ ಕೊಂದು ಹಾಕಿತ್ತು. ಅದಾಗಿ 26 ವರ್ಷಗಳ ನಂತರ ನಮ್ಮ ಸರ್ಕಾರಗಳ ಇಬ್ಬಂದಿತನ, ರಾಜಕೀಯ ಪಕ್ಷಗಳ ಬೇಜವಾಬ್ದಾರಿತನ ಮತ್ತು ಸುಪ್ರೀಂಕೋರ್ಟಿನ ಅಸೂಕ್ಷ್ಮತೆಯಿಂದಾಗಿ ಮೊನ್ನೆ ಭೋಪಾಲಿನ ನ್ಯಾಯಾಲಯವೊಂದು ಅದೇ ಮಾರಣಹೋಮದಲ್ಲಿ ಬದುಕುಳಿದರೂ ನರಕ ಸದೃಶ ಜೀವನವನ್ನು ಸಾಗಿಸುತ್ತಿರುವವರಿಗೆ ನ್ಯಾಯ ನೀಡಿ, ಅಪರಾಧಿಗಳಿಗೆ ಶಿಕ್ಷೆಯನ್ನು ನೀಡುವ ಬದಲಾಗಿ ಕೊಲೆಗಡುಕರಿಗೆ ಎರಡು ವರ್ಷಗಳ ಸಜೆಯನ್ನು ಮಾತ್ರ ಘೋಷಿಸುವ ಮೂಲಕ ಸಂತ್ರಸ್ತರು ನ್ಯಾಯ ವ್ಯವಸ್ಥೆಯಲ್ಲಿ ಇಟ್ಟಿದ್ದ ಭರವಸೆಯನ್ನು ಮತ್ತೊಮ್ಮೆ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದೆ.

ನಮ್ಮ ದೇಶದಲ್ಲಿ ಸಾವಿನಲ್ಲೂ ಹೇಗೆ ವರ್ಗಭೇದ ಮಾಡಲಾಗುತ್ತದೆಂಬುದಕ್ಕೆ ಒಂದು ಉದಾಹರಣೆ ನೋಡಿ. ಇತ್ತೀಚೆಗೆ ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 156 ಜನ ಸಾವಿಗೀಡಾದರು. ಅವರೆಲ್ಲರೂ ಮಧ್ಯಮ ವರ್ಗ ಅಥವಾ ಮೇಲುವರ್ಗದವರಾಗಿದ್ದರು. ಆ ದುರಂತದಲ್ಲಿ ಮಡಿದ 150 ಹತಭಾಗ್ಯರಿಗೆ ಸರ್ಕಾರ ಕೇವಲ ಇಪ್ಪತ್ತೇ ದಿನಗಳಲ್ಲಿ ಸುಮಾರು ಒಂಭತ್ತು ಕೋಟಿ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ನೀಡಿತು.
ಮಂಗಳೂರಿನ ವಿಮಾನ ದುರಂತದಲ್ಲಿ ಮಡಿದವರಷ್ಟೇ ಹತಭಾಗ್ಯರು ಭೋಪಾಲ್ ಅನಿಲ ದುರಂತದಲ್ಲಿ ಮಡಿದ ಸಾವಿರಾರು ಜನ. ಆದರೆ ಆ ದುರಂತದಲ್ಲಿ ಸತ್ತವರಲ್ಲಿ ಬಹಳಷ್ಟು ಜನ ಬಡವರು, ಕೂಲಿ ಕಾರ್ಮಿಕರು, ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಕೆಲ ವರ್ಗದವರು. ಹಾಗೆಯೇ ಆ ದುರಂತದಲ್ಲಿ ಸಂತ್ರಸ್ತರಾದ ಐದೂವರೆ ಲಕ್ಷ ಜನರೂ ಕಡುಬಡವರು. ಈ ಜನ ಮಾತ್ರ ಪರಿಹಾರಕ್ಕಾಗಿ 26 ವರ್ಷಗಳ ಕಾಲ ಕಾಯಬೇಕಾಯಿತು. ಆಗಲೂ ಅವರಿಗೆ ದೊರಕಿದ ಹಣವೆಷ್ಟು? ತಲಾ 15,000 ರೂಪಾಯಿಗಳು ಮಾತ್ರ. ಅಂದರೆ ಆ ದುರಂತ ಸಂಭವಿಸಿ ಅವರ ಬದುಕೇ ನುಚ್ಚುನೂರಾಗಿದ್ದರೂ ಅಂದಿನಿಂದ ಇಂದಿನತನಕ ಅವರು ಅನುಭವಿಸಿದ ಯಾತನೆಗೆ ನೀಡಿದ ಪರಿಹಾರ: ಪ್ರತಿದಿನಕ್ಕೆ ಕೇವಲ ಒಂದೂವರೆ ರೂಪಾಯಿಗಳು!

ಭಾರತದಲ್ಲೇ ಬಡ ಭಾರತೀಯರ ಜೀವಕ್ಕೆ ಬೆಲೆ ಇಲ್ಲದಿದ್ದರೆ, ಇನ್ನು ಅಮೆರಿಕಾದಂತಹ ದೇಶಗಳಿಗೆ ಎಲ್ಲಾ ಭಾರತೀಯರ ಜೀವಕ್ಕೆ ಕಿಂಚಿತ್ತೂ ಬೆಲೆ ಇಲ್ಲ. 1984 ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದಿಂದಾಗಿ 8000 ಜನ ಸತ್ತು, 5,25,000 ಜನ ಬಾಧಿತರಾಗಿದ್ದಕ್ಕೆ ಕೊನೆಗೂ ಯೂನಿಯನ್ ಕಾರ್ಬೈಡ್ ಕಂಪನಿ ಪರಿಹಾರವಾಗಿ ಕೊಟ್ಟಿದ್ದು 450 ಮಿಲಿಯನ್ ಡಾಲರ್- ಅಂದರೆ 1,500 ಕೋಟಿ ರೂಪಾಯಿಗಳನ್ನು ಮಾತ್ರ (ಇದೇ ದಿನವೊಂದಕ್ಕೆ 1.50 ರೂಪಾಯಿ ಲೆಕ್ಕವಾಗಿದ್ದು). ಈ ಪರಿಹಾರ ಹಣವನ್ನು 1989 ರಲ್ಲಿ ಸಮುದ್ರದಲ್ಲಿ ಸಂಭವಿಸಿದ ಎಕ್ಸಾನ್ ಮೊಬಿಲ್ ತೈಲ ಸೋರಿಕೆ ಪ್ರಕರಣದೊಂದಿಗೆ ಹೋಲಿಸಿ ನೋಡಿ. ಭೋಪಾಲ್ ಅನಿಲ ದುರಂತವು ಪ್ರಪಂಚದಲ್ಲೇ ಅತಿದೊಡ್ಡ ಔದ್ಯಮಿಕ ದುರಂತವಾಗಿದ್ದರೆ, ಎಕ್ಸಾನ್ ಮೊಬಿಲ್ ದುರಂತವನ್ನು ಪರಿಸರದ ಮೇಲೆ ಆದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿದೆ. ಆಗ ಅಮೆರಿಕದ ನ್ಯಾಯಾಲಯವು ಎಕ್ಸಾನ್ ಕಂಪನಿ ವಿರುದ್ಧ ಒಟ್ಟು 795 ಬಿಲಿಯನ್ ಡಾಲರ್‍ಗಳಷ್ಟು ದಂಡವನ್ನು ವಿಧಿಸಿತ್ತು! ಅಂದರೆ ಭಾರತದ ಸಂತ್ರಸ್ತರಿಗೆ ಯೂನಿಯನ್ ಕಾರ್ಬೈಡ್ ನೀಡಿದ್ದಕ್ಕಿಂತ 345 ಮಿಲಿಯನ್ ಡಾಲರ್‍ಗಳಷ್ಟು ಹೆಚ್ಚಿಗೆ!!
ಭೋಪಾಲ್‍ನಲ್ಲಿ ಮಡಿದ ಭಾರತೀಯರಿಗೂ ಅಮೆರಿಕದ ಮಾಲೀಕತ್ವದ ಯೂನಿಯನ್  ಕಾರ್ಬೈಡ್ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂಬಂತಲೇ ವರ್ತಿಸಿಕೊಂಡು ಬಂದಿರುವ ಈ ಕಂಪನಿಯು ತಾನು ಎಸಗಿದ ಕೊಲೆಗಳಿಂದ ಬಚಾವಾಗಲೂ ಮಾಡಿದ ಷಡ್ಯಂತ್ರಗಳು ಒಂದೆರಡಲ್ಲ. ಅವುಗಳಲ್ಲಿ ಪ್ರಮುಖವಾದದ್ದು 2000 ರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯನ್ನೇ ಡೌ ಎಂಬ ಮತ್ತೊಂದು ಕಂಪನಿಗೆ ಮಾರಿದ್ದು. ಇದನ್ನು ಡೌ ಕಂಪನಿಯು ಕೊಂಡಿದ್ದೇ ಯೂನಿಯನ್ ಕಾರ್ಬೈಡ್‍ನ ಯಾವ ಹೊಣೆಗಾರಿಕೆಗೂ ತಾನು ಜವಾಬ್ದಾರನಲ್ಲ ಎಂಬ ಷರತ್ತಿನ ಮೇಲೆ.

ಇಂತಹ  ಡೌ ಕಂಪನಿಯು ಇವತ್ತು-ಅಂದರೆ ಭೋಪಾಲ್ ದುರಂತ ಸಂಭವಿಸಿದ 26 ವರ್ಷಗಳ ನಂತರ- ಭೋಪಾಲ್ ಕಾರ್ಖಾನೆಯ ಆವರಣದಲ್ಲಿ ಇನ್ನೂ ಉಳಿದಿರುವ ವಿಷಕಾರಕ ವಸ್ತುಗಳನ್ನು ತೆಗೆಯಬೇಕೆಂದೂ, ಆ ಮೂಲಕ ಇವತ್ತಿಗೂ ಆ ಕಾರ್ಖಾನೆಯ ಸುತ್ತಲಿನ ಗಾಳಿ ಮತ್ತು ನೀರು ಕಲುಷಿತವಾಗುತ್ತಿರುವುದನ್ನು ತಡೆಯಬೇಕೆಂದೂ ಭೋಪಾಲ್ ಜನ ಒತ್ತಾಯಿಸುತ್ತಿದ್ದಾರೆ. ಆದರೆ ಆ ಕಾರ್ಖಾನೆಯ ಆವರಣವನ್ನು ಸ್ವಚ್ಛಗೊಳಿಸಲು ಕನಿಷ್ಠ 50 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಡೌನಂತಹ ಬಹುರಾಷ್ಟ್ರೀಯ ಕಂಪನಿಗೆ 50 ಕೋಟಿ ರೂಪಾಯಿಗಳು ಜುಜುಬಿ ಮೊತ್ತ. ಆದರೆ ಅಷ್ಟನ್ನೂ ವೆಚ್ಚ ಮಾಡಿ, ಅಲ್ಲಿನ ಜನರ ಬದುಕನ್ನು ಒಂದಿಷ್ಟು ಸುಧಾರಿಸಲೂ ಡೌ ಸಿದ್ಧವಿಲ್ಲ.
ಡೌ ಕಂಪನಿಗೆ ಭಾರತೀಯರಾಗಲಿ, ಭೋಪಾಲಿಗರಾಗಲೀ ಮುಖ್ಯವಲ್ಲವಾದ್ದರಿಂದ ಅದು ಈ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಹಠ ಹಿಡಿದಿದೆ. ಡೌ ಕಂಪನಿಯ ಈ ಹಠಮಾರಿ ಧೋರಣೆಗೆ ಕುಮ್ಮಕ್ಕು ನೀಡುತ್ತಿರುವುದು ಭಾರತೀಯ ಉದ್ಯಮಿಗಳು. ಅದರಲ್ಲೂ ಪ್ರಮುಖವಾಗಿ ತಾನು ಅಪ್ಪಟ ಭಾರತೀಯ, ಭಾರತದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕಂಪನಿ ಎಂದೇ ಬಿಂಬಿಸಿಕೊಳ್ಳುವ ಟಾಟಾ ಕಂಪನಿ ಡೌ ಕಂಪನಿಯ ಪರವಾಗಿ ವಾದಿಸುತ್ತಿದೆ.  ವಿದೇಶಿ ಕಂಪನಿಗಳ ಮೇಲೆ ಇಂತಹ `ದುಂದು’ ವೆಚ್ಚಗಳನ್ನು ಹೇರಿದರೆ ಭಾರತಕ್ಕೆ ವಿದೇಶಿ ಬಂಡವಾಳ ಬರುವುದು ಕಷ್ಟ ಎಂದು ಟಾಟಾ ಕಂಪನಿ ಭಾರತ ಸರ್ಕಾರದ ಮೇಲೆ ಒತ್ತಡ ತಂದಿದೆ. ಹೇಗೂ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಮಂತ್ರಿ ಪಿ. ಚಿದಂಬರಂ ಅವರಿಗೂ ಭಾರತೀಯರ ಸುರಕ್ಷತೆಗಿಂತ ವಿದೇಶಿ ಬಂಡವಾಳವೇ ಮುಖ್ಯವಾಗಿರುವುದರಿಂದ ಅವರೂ ಟಾಟಾ-ಡೌ ಕಂಪನಿಗಳ ಒತ್ತಡಕ್ಕೆ ಮನಸೋತಿದ್ದಾರೆ!

ಅಂದಹಾಗೆ ಇದೇ ಡೌ ಕಂಪನಿಯ ಜೊತೆಗೆ ಟಾಟಾ ಕಂಪನಿಯು ಪಶ್ಚಿಮ ಬಂಗಾಳದಲ್ಲಿ ಒಂದು ರಸಾಯನಿಕ ಘಟಕವನ್ನು ಸ್ಥಾಪಿಸುತ್ತಿದೆ!! ಭಾರತೀಯರಿಗೆ ಎಷ್ಟು ನಷ್ಟವಾದರೇನು? ತಮಗೆ ಹೆಚ್ಚು ಲಾಭ ಬಂದರೆ ಸಾಕು ಎಂಬ ಧೋರಣೆ ಟಾಟಾ ಮತ್ತು ಡೌ ಎಂಬ ರಣಹದ್ದು ಕಂಪನಿಗಳದ್ದು.

ಮೊನ್ನಿನ ತೀರ್ಪು ಹೊರಬಿದ್ದ ನಂತರ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ತರಾಟೆಗೆ ತೆಗೆದುಕೊಳ್ಳುತ್ತಿದೆ. ಆದರೆ ಇದೇ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಭೋಪಾಲ್ ಸಂತ್ರಸ್ತರಿಗೆ ಯಾವ ಸಹಾಯವನ್ನೂ ಮಾಡಲಿಲ್ಲ. ಅಷ್ಟೇ ಅಲ್ಲ, ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ  ಪರಮ ಚೆಡ್ಡಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಡೌ ಕಂಪನಿಯ ಮುಖ್ಯಸ್ಥನನ್ನು ಗಣರಾಜ್ಯೋತ್ಸವದ ಸಮಾರಂಭಕ್ಕೆ ಆಹ್ವಾನಿಸಿತ್ತು! ಮಾತ್ರವಲ್ಲ, ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದೂ ಅಮೆರಿಕಕ್ಕೆ ಓಡಿಹೋಗಿದ್ದ ಯೂನಿಯನ್ ಕಾರ್ಬೈಡ್‍ನ ಮುಖ್ಯಸ್ಥ ವಾರೆನ್ ಆಂಡರ್ಸನ್ ಅನ್ನು ಭಾರತಕ್ಕೆ ಒಪ್ಪಿಸಬೇಕೆಂದು ಒಮ್ಮೆಯೂ ಬಿಜೆಪಿ ಸರ್ಕಾರ ಅಮೆರಿಕವನ್ನು ಕೇಳಿಕೊಂಡಿರಲಿಲ್ಲ!

ಇದೆಲ್ಲದರಿಂದ ಹಲವು ವಿಚಾರಗಳು ಸ್ಪಷ್ಟವಾಗುತ್ತವೆ. ಅವುಗಳೇನೆಂದರೆ ಯಾವ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಅವುಗಳಿಗೆ ಅಮೆರಿಕದೊಂದಿಗೆ ಗಳಸ್ಯ-ಕಂಠಸ್ಯ ಸಂಬಂಧ ಮತ್ತು ವಿದೇಶಿ ಬಂಡವಾಳ ಹರಿದುಬರುವುದು ಮುಖ್ಯವೇ ಹೊರತು ಇಲ್ಲಿನ ಜನರ ಬದುಕಾಗಲಿ, ಅವರಿಗೆ ರಕ್ಷಣೆ ನೀಡಬೇಕೆಂಬುದಾಗಲಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂಬುದಾಗಲಿ ಮುಖ್ಯವೇ ಇಲ್ಲ.

 

ಚೆರ್ನೊಬಲ್ ಅಣುಸ್ಥಾವರ ಸೋರಿಕೆಗಿಂತಲೂ, ಅಮೆರಿಕದ ಥ್ರೀ ಮೈಲ್ಸ್ ಐಲೆಂಡಿನಲ್ಲಿ ಸಂಭವಿಸಿದ ಅಣು ದುರಂತಕ್ಕಿಂತಲೂ ಭೀಕರ ಮತ್ತು ಬರ್ಬರವಾಗಿದ್ದ ಭೋಪಾಲ್ ಅನಿಲ ದುರಂತ ಮತ್ತೆ ಎಂದೂ ಸಂಭವಿಸದಿರಲಿ ಎಂಬುದು ಎಲ್ಲಾ ಪ್ರಜ್ಞಾವಂತರ ಅಭಿಪ್ರಾಯವಾಗಿದೆ. ಆದರೆ ಪ್ರಜ್ಞೆ ಎಂಬುದು ನಮ್ಮ ಸರ್ಕಾರಕ್ಕಾಗಲಿ, ರಾಜಕೀಯ ಪಕ್ಷಗಳ ನಾಯಕರಿಗಾಗಲಿ ಇಲ್ಲ. ಆದ್ದರಿಂದಲೇ ಬರುವ ದಿನಗಳಲ್ಲಿ ಭೋಪಾಲ್ ದುರಂತಕ್ಕಿಂತಲೂ ದೊಡ್ಡ ಪ್ರಮಾಣದ ದುರಂತಗಳಿಗೆ ದಾರಿ ಮಾಡಿಕೊಡುವಂತಹ; ಭೋಪಾಲ್‍ಗೆ ಸಂಬಂಧಿಸಿದಂತೆ ಆದ `ಅನ್ಯಾಯ’ದ ತೀರ್ಪುಗಳೂ ಮತ್ತೆ ಪುನರಾವರ್ತನೆ ಆಗುವಂತಹ ಪರಿಸ್ಥಿತಿಯನ್ನು ನಿರ್ಮಿಸಲು ಸರ್ಕಾರ ಹೊರಟಿದೆ. ಅದಕ್ಕೆ ಎಡಪಕ್ಷಗಳ ಹೊರತಾಗಿ ಇತರೆ ಪಕ್ಷಗಳೂ ಬೆಂಬಲ ನೀಡುತ್ತಿವೆ. ಅದೇ `ಅiviಟ ಐiಚಿbiಟiಣಥಿ oಜಿ ಓuಛಿಟeಚಿಡಿ ಆಚಿmಚಿges ಃiಟಟ’ ಎಂಬ ಮಸೂದೆ.

ಈ ಮಸೂದೆ ಜಾರಿಗೆ ಬಂದರೆ ಭಾರತದ ವಿದ್ಯುತ್ ಕೊರತೆಯನ್ನು ನೀಗಿಸುವ ನೆಪದಲ್ಲಿ ದೇಶದ ವಿವಿಧ ಕಡೆ ಅಮೆರಿಕದ ಕಂಪನಿಗಳು ಸ್ಥಾಪಿಸಲಿರುವ ಅಣುಸ್ಥಾವರಗಳಲ್ಲಿ ಅವಘಢ ಸಂಭವಿಸಿದರೆ ಆ ಸ್ಥಾವರವನ್ನು ನಿರ್ಮಿಸಿದ ಅಥವಾ ಅವುಗಳಿಗೆ ಯುರೇನಿಯಂ ಅನ್ನು ಸರಬರಾಜು ಮಾಡಿದ ಕಂಪನಿಗಳು ಜವಾಬ್ದಾರಿಯಾಗುವುದಿಲ್ಲ. ಮಾತ್ರವಲ್ಲ, ಆ ಕಂಪನಿಗಳ ವಿರುದ್ಧ ಯಾವ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡುವಂತಿಲ್ಲ! ಅವಘಡದಲ್ಲಿ ಅದೆಷ್ಟೇ ಜನ ಸತ್ತರೂ, ಅದೆಷ್ಟೇ ಪರಿಸರ ಹಾನಿಯಾದರೂ, ಹೆಚ್ಚೆಂದರೆ ಆ ಕಂಪನಿಗಳ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ಹೂಡಿ ಅವರಿಗೆ ಶಿಕ್ಷೆಯಾಗುವಂತೆ ಕೇಳುವ ಬದಲಾಗಿ ಒಂದಿಷ್ಟು ಪರಿಹಾರ ಕೊಡಿ ಎಂದಷ್ಟೇ ಕೇಳಬಹುದು.

 

ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಯಾವುದೆಂದರೆ ಅಣಸ್ಥಾವರ ಉತ್ಪಾದಿಸುವ ವಿದ್ಯುತ್ ಅನ್ನು ಭಾರತ ಸರ್ಕಾರದ `ಅಣು ವಿದ್ಯುತ್ ನಿಗಮ’ ಕೊಂಡುಕೊಳ್ಳುವುದರಿಂದ ಅಂತಹ ಪರಿಹಾರವನ್ನು ನೀಡುವ ಜವಾಬ್ದಾರಿ ಕೂಡ ಈ ನಿಗಮದ್ದೇ ಆಗಿರುತ್ತದೆಯೇ ಹೊರತು ಆ ಸ್ಥಾವರವನ್ನು ಸ್ಥಾಪಿಸಿದ ಅಮೆರಿಕದ ಕಂಪನಿಯ ಜವಾಬ್ದಾರಿ ಆಗಿರುವುದಿಲ್ಲ.

ಭೋಪಾಲ್ ಅನಿಲ ದುರಂತಕ್ಕೆ ಯೂನಿಯನ್ ಕಾರ್ಬೈಡ್ ಕೊನೆಗೂ ಕೊಟ್ಟಿದ್ದು 1500 ಕೋಟಿ ರೂಪಾಯಿಗಳು ಎಂಬುದನ್ನು ಮತ್ತೊಮ್ಮೆ ನೆನಪಿಸಿ ಈ ಹೊಸ ಮಸೂದೆಯಲ್ಲಿನ ಇನ್ನೊಂದು ಪ್ರಮುಖ ಅಂಶದತ್ತ ಗಮನ ಹರಿಸಬಹುದು. ಈ ಮಸೂದೆಯ ಪ್ರಕಾರ ಯಾವುದೇ ಅಣುಸ್ಥಾವರದಲ್ಲಿ ಅವಘಡ ಸಂಭವಿಸಿದರೆ ಅದರ ಅಮೆರಿಕ ಕಂಪನಿಯು ಹೆಚ್ಚೆಂದರೆ ಜುಜುಬಿ 300 ಕೋಟಿ ರೂಪಾಯಿಗಳನ್ನು ಕೊಟ್ಟರೆ ಸಾಕು. ಇನ್ನುಳಿದ 2300 ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರವೇ ಭರಿಸುತ್ತದೆ. ಇದರರ್ಥ: ಜನರ ಮಾರಣಹೋಮಕ್ಕೆ ಕಾರಣ ಅಮೆರಿಕದ ಕಂಪನಿಯಾದರೂ ಶಿಕ್ಷೆಗೆ ಗುರಿಯಾಗುವುದು ತೆರಿಗೆ ಕಟ್ಟುವ ಭಾರತದ ಬಡ ಪ್ರಜೆಗಳು!

 

ಅಮೆರಿಕದ ಬಂಡವಾಳಶಾಹಿಗಳ ಫುಟ್‍ರಗ್ ಆಗಿರುವ ಭಾರತದಲ್ಲಿ ಭೋಪಾಲ್ ಅನಿಲ ದುರಂತ ಸಂಭವಿಸಿ ಸಾವಿರಾರು ಜನ ಸಾಯುತ್ತಾರೆ. ಆದರೂ ವಾರೆನ್ ಆಂಡರ್ಸನ್ ತರಹದ ಕೊಲೆಗಡುಕರು ಆರಾಮಾಗಿರುತ್ತಾರೆ;  ಇತರೆ ಸಿಬ್ಬಂದಿಗಳಿಗೆ ಎರಡು ವರ್ಷ ಸಜೆ ಮಾತ್ರ ಸಿಕ್ಕು ಅವರೂ ಜಾಮೀನಿನ ಮೇಲೆ ಬಿಡುಗಡೆಗೊಳ್ಳುತ್ತಾರೆ. ಏಕೆಂದರೆ ಅಭಿವೃದ್ಧಿಯ ಹೆಸರಲ್ಲಿ ಭಾರತ ಸರ್ಕಾರಕ್ಕೆ ಇವರ ಬಂಡವಾಳ ಬೇಕಾಗಿದೆ.

ಹಾಗೆಯೇ,  ಸುಪ್ರೀಂ ಕೋರ್ಟ್ ಕೂಡ ನಮ್ಮ ದೇಶಕ್ಕೆ ವಿದೇಶಿ ಬಂಡವಾಳ ಹರಿದು ಬರಬೇಕೆಂದರೆ, ನರ್ಮದಾ ಡ್ಯಾಮಿನ ಎತ್ತರವನ್ನು ಹೆಚ್ಚಿಸಬೇಕೆಂದೂ, ಆ ಡ್ಯಾಮ್ ಯೋಜನೆಯಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾದರೂ ಅವರಿಗೆ ಪುನರ್ ವಸತಿ ಕಲ್ಪಿಸಿದರೆ ಸಾಕೆಂದೂ ಹೇಳುತ್ತದೆ.

ಅದೇ ನೀತಿ ಈಗಲೂ ಮುಂದುವರೆದಿದೆ. ಭಾರತ ಅಭಿವೃದ್ಧಿ ಹೊಂದಬೇಕೆಂದರೆ ದಂಡಕಾರಣ್ಯದ ಕಾಡುಗಳಲ್ಲಿ, ಗುಡ್ಡಗಳಲ್ಲಿ ಇರುವ ಅಮೂಲ್ಯ ಅದಿರನ್ನು ಹೊರತೆಗೆದು ವೇದಾಂತ, ಎಸ್ಸಾರ್, ಟಾಟಾದಂತಹ ಕಂಪನಿಗಳಿಗೆ ನೀಡಬೇಕಿದೆ. ಆ ಕಾರ್ಯಾಚರಣೆಗೆ ಅಡ್ಡಿ ಬರುವ ಆದಿವಾಸಿಗಳನ್ನು ಕಾಡುಗಳಿಂದ ಒದ್ದೋಡಿಸಬೇಕಿದೆ, ಇಲ್ಲವೆಂದರೆ ನಾವೇ ನಮ್ಮವರನ್ನು ಕೊಂದು ಹಾಕಬೇಕಿದೆ….

 

ಭಾರತ ಸರ್ಕಾರಕ್ಕೆ, ಇಲ್ಲಿನ ರಾಜಕೀಯ  ಪಕ್ಷಗಳಿಗೆ ಎಲ್ಲಿಯತನಕ ಭಾರತದ ಪ್ರಜೆಗಳು ಮುಖ್ಯವಾಗುವುದಿಲ್ಲವೋ ಅಲ್ಲಿಯತನಕ ಭೋಪಾಲ್ ಅನಿಲ ದುರಂತಗಳು ಮತ್ತೆ ಮತ್ತೆ ಸಂಭವಿಸುತ್ತಲೇ ಇರುತ್ತವೆ…..

ಇದೆಲ್ಲದಕ್ಕೆ ಪರಿಹಾರವೆಂದರೆ ನಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ  ಮೂಲಭೂತವಾದ ಬದಲಾವಣೆಗಳನ್ನು ತರುವುದು.

ಆದರೆ ಒಂದು ದೊಡ್ಡ ಕ್ರಾಂತಿ ಇಲ್ಲದೆ ಆ ಮೂಲಭೂತ ಬದಲಾವಣೆಗಳು ಸಾಧ್ಯವಿಲ್ಲ, ಅಲ್ಲವೇ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...