Homeಅಂಕಣಗಳುಥೂತ್ತೇರಿ | ಯಾಹೂಮಂಡ್ಯದ ಸ್ವಾಭಿಮಾನ ಅಂದ್ರೆ ಏನನ್ನಕಂಡಿದ್ದಿರಿ ಸಾ! - ಥೂತ್ತೇರಿ.

ಮಂಡ್ಯದ ಸ್ವಾಭಿಮಾನ ಅಂದ್ರೆ ಏನನ್ನಕಂಡಿದ್ದಿರಿ ಸಾ! – ಥೂತ್ತೇರಿ.

- Advertisement -
- Advertisement -

ಕುರುಕ್ಷೇತ್ರದ ವಿವರವನ್ನು ದೃತರಾಷ್ಟ್ರ ಸಂಜಯನಿಂದ ತಿಳಿದುಕೊಳ್ಳುತ್ತಿದ್ದಂತೆ, ನಾವು ಕೂಡ ಯಾಕೆ ಮಂಡ್ಯ ಜಿಲ್ಲೆಯ ವಾಟಿಸ್ಸೆ ಮಾತನಾಡಿಸಿ, ಅಖಾಡದ ವಿವರ ಪಡೆಯಬಾರದು ಎನ್ನಿಸಿದ ಕೂಡಲೇ, ಖುಷಿಯಾಯ್ತು. ವಾಟಿಸ್ಸೆಗೆ ಪೋನ್ ಮಾಡಲಾಗಿ ರಿಂಗಾಯ್ತು ರಿಂಗ್ ಟೋನ್….. ಹಾ ಯಣ್ಣೆ ನಿಮ್ದು ಊಟ ನಮ್ದು…..

‘ಹಲೋ ಯಾರು ಮಾತಾಡಿ ಪ್ಲೀಸ್’

“ವಾಟಿಸ್ಸೆ, ನಾನು ಯಾಹೂ”

“ಓಹೊಹೊ ಗುಡ್ಡಾಪ್ಟರ್‍ನೂನ್ ಸರ್”

“ಎಲ್ಲಿದ್ದೀ”

“ನಮ್ಮ ಕ್ಷೇತ್ರದಲ್ಲಿದ್ದೀನಿ ಸಾ”

“ಯಾಗಿದೆ ವಾತಾವರಣ”

“ತುಂಬ ಹೀಟಾಗಿದೆ ಸಾರ್, ಅದರಲ್ಲೂ ಕುಮಾರಣ್ಣನ ಇಂಜನ್ನು ತುಂಬಾ ಬಾಯ್ಲಾಗಿ ಹ್ವೊಗೆ ಬತ್ತಾ ಅದೆ”

“ಜೊತೆಲಿ ರಾಧಿಕಾ ಇದ್ರೆ ಕೂಲಾಗಿರತಿದ್ರಲ್ಲವಾ”

“ಅಂಗೇಳಕ್ಕೆ ಬರದಿಲ್ಲ ಸಾರ್. ಆಗ್ಲೆ ಇಂಜನ್ನ ಯರಡು ಸತಿ ಹೊರಾಯಲ್ಲಾಗಿರದ್ರಿಂದ, ಅವರ ಬಾಳಿಕೆ ಕಡಿಮೆ ಅಂತ ಅವರಪ್ಪ ದ್ಯಾವೇಗೌಡ ಹೇಳವ್ರೆ”

“ಅದ್ಕೆ ನಿಖಿಲ್ ನಿಲ್ಸಿದ್ದರಂತೆ”

“ಅವ್ಯಲ್ಲ ಸುಳ್ಳು ಸಾರ್, ದ್ಯಾವೇಗೌಡ್ರು ಸುಳ್ಳು ಹೇಳಿ ಹೇಳಿ ಅದ್ನೆ ನಿಜ ಅನ್ನಕಂಡು ಬುಡ್ತರೆ. ಅವುರಿಗೆ ಸುಳ್ಳಿಗೂ ಸತ್ಯಕ್ಕೂ ವ್ಯತ್ಯಾಸನೆ ಹೊಂಟ್ಯೋಗ್ಯದೆ”

“ಅಂಗಂತಿಯಾ”

“ಸಾರ್, ನಾನು ಯಾವ ಕಾಲದಿಂದ ದ್ಯಾವೇಗೌಡ್ರ ನೋಡಿದ್ದಿನಿ ಅವುರ ಭಾಷಣ ಕೇಳಿದ್ದೀನಿ. ಯಲ್ಲಾ ರಿಕಾಲ್ಡ್ ನನ್ನತ್ರ ಅವೆ ಸರ್”

“ಚುನಾವಣೆ ಬಗ್ಗೆ ಏನೇಳ್ತೀರಿ, ಸುಮಲತ ಗೆಲ್ತರ?”

“ಅವುರು ಗೆದ್ದಾಯ್ತು ಸಾರ್, ಇನ್ನೇನಿದ್ರು ಲೀಡ್ ಲೆಕ್ಕ ಹಾಕಬೇಕು”

“ಅದ್ಯಂಗೇಳ್ತಿ”

“ವೆರಿ ಸಿಂಪಲ್ಲು ಸಾರ್, ಈ ಕುಮಾರಸ್ವಾಮಿ ದ್ಯಾವೇಗೌಡ್ರು ಯಾವತ್ತು ನಿಖಿಲನ್ನು ತಂದು ಮಂಡ್ಯಕ್ಕೆ ನಿಲ್ಲಿಸಿದ್ರೊ ಅವತ್ತೇ ಸೋತ. ಯಾಕಂದ್ರೆ ಮಂಡ್ಯದಲ್ಲಿ ಗಂಡುಸ್ರಿಲವೆ ಅಂತ ಜನ ತಿರಿಗಿಬಿದ್ರು. ಆಗ ಗಂಡಸರ ಮಾನ ಉಳಸಕ್ಕೆ ಸುಮಲತ ನಿಂತ್ರು. ನಿಜಕ್ಕೂ ಮಂಡ್ಯದ ಮರಿಯಾದಿ ಉಳಿಸಿದ ಗೌಡ್ತಿ ಸಾರವುಳು”

“ಕಾಂಗ್ರೆಸ್ಸಿನೋರು  ಯಂಗವರೆ”?

“ಅವುರದ್ರಲ್ಯ ಅಂಡರ್ ಗ್ರೌಂಡ್ ವರ್ಕ್ ಸಾ”

“ಯಾಕೆ”

“ಯಾಕೆ ಅಂದ್ರೆ, ನಮ್ಮ ಜಿಲ್ಲೆಲಿ ಕಾಂಗ್ರೆಸ್ ಜೆಡಿಎಸ್ ಅಂದ್ರೆ ಮ್ಯಾಗಲ ಕೇರಿ ಕ್ಯಾಳಗಲ ಕೇರಿ ನಾಯಿಗಳಿದ್ದಂಗೆ. ಯಾವಾಗ್ಲೂ ಕಡದಾಡ್ತವೆ. ಯಲಕ್ಷನ್ ಬಂದಾಗ ಯಾರಿಗಾರ ಓಟಾಕಿ ಒಂದಾಗಿರಿನ ಅನ್ನದ ಇವತ್ತಿಗೂ ತಿಳಿಕಂಡಿಲ್ಲ. ಈಗೆ ಕುಮಾರಸ್ವಾಮಿ ಮಗನಿಗಾಗಿ ಒಂದಾದಾರೆ?

“ಅಂಗಾದ್ರೆ ಮೈತ್ರಿ ಧರ್ಮದ ಕತೆ ಏನೂ.”

“ಅದ ಮುರುದಾಕಿರೋನೆ ಕುಮಾರಸ್ವಾಮಿ.”

“ಅದ್ಯಂಗೇ.”

“ಯಂಗೇ ಅಂದ್ರೆ ಕೆಲವು ಕಾಂಗ್ರೆಸ್ಸಿಗರು ನನಿಗೆ ಬೇಕಿಲ್ಲ ಅಂತನೆ. ಅಂದ್ರೆ ಮೈತ್ರಿ ಧರ್ಮ ಮುರದೋರ್ಯಾರು ಹೇಳಿಸಾ.”

“ಕುಮಾರಣ್ಣಂದೆ ತಪ್ಪು  ಅಂತಿರಾ.”

“ಒಂದಲ್ಲಾ ಸಾ. ತಪ್ಪು ದಿನಾ ಮಾಡ್ತನೇ ಹೋಯ್ತಾ ಅವುನೆ.”

“ಒಂದ್ಯರಡೇಳು ನೋಡಣ.”

“ನಿಖಿಲ್ ಎಲ್ಲಿದ್ದಿಯಪ್ಪಾ ಅಂದಿದ್ದು ಮೊದಲ್ನೆ ತಪ್ಪು, ಅವತ್ತಿಂದ ಮಗನ್ನ ಮಂಡ್ಯದಲ್ಲಿ ನಾಟಿಹಾಕಿ ಬ್ಯಳಸಕ್ಕೆ ಮಾಡಿದ ಕ್ಯಲಸಗಳ್ಯಲ್ಲ. ಪ್ರಾಮಾಣಿಕವಾದವಲ್ಲ ಅಂತ, ಜನಕ್ಕೆ ಈಗ ಗೊತ್ತಾಯ್ತಾ ಅದೆ ಸಾ. ಇನ್ನ ಆ ದರ್ಶನನ್ನ ಯಾಕೆ ಬೈಬೇಕು ಸಾ. ಇವುನ ಮಗನೂ ಹೀರೋ ಅಲ್ಲವೆ.”

“ಮಗನ್ನ ಗೆಲ್ಲಸಬೇಕಲವೆ.”

“ಗೆಲ್ಲಿಸಬೇಕು ಅಂತ ಅನ್ನೋ ಮಾತುಗಳೇ, ಅವುನ್ನ ಸೋಲುಸ್ತಾ ಅವೆ ಸಾ. ನಾನಂತು ಹುಟ್ಟಿದ್ ತಾವಿಂದ ಮಂಡ್ಯ ಜಿಲ್ಲೆ ಹಿಂಗೆ ಎದ್ದು ನಿಂತಿದ್ದ ನೋಡ್ನಿಲ್ಲ ಸಾ.”

“ಬರಿ ಅಂಬಿ ಅಭಿಮಾನಿಗಳಬ್ಬರವಂತೆ.”

“ಅವುರಬ್ಬರ ಸರಿ, ಸುಮ್ಮನಿರೋರ ಅಬ್ಬರ ಕೇಳಿಸಿಗಂಡಿದ್ದೀರಾ. ಅದು ಸಾಧಾರಣವಾದದ್ದಲ್ಲ ಸಾರ್. ಇಂದ್ರಾಗಾಂಧಿ, ರಾಜೀವ್‍ಗಾಂಧಿ ಜ್ವತೆಲಿದ್ದಿನಿ ಅಂತ ಮಂಡ್ಯನೆ ಮರತಿದ್ದ ಯಸ್ಸೆಂ ಕೃಷ್ಣನ್ನ ಶಂಕರೇಗೌಡ್ರೆದ್ರಿಗೆ ತಗದು ಯಸ್ತರಲ್ಲ ಅಂಥದೊಂದು ಅಬ್ಬರ ವಳಗೇ ಗುರುಗುಡತಾ ಅದೆ.”

“ಅಮರಾವತಿ ಚಂದ್ರಶೇಖರ ಸುಮಲತಾರಿಗೆ ಕೈಕೊಟ್ಟನಂತೆ.”

“ವ್ಯವಾರಸ್ತರಂಗೇ ಅಲವ ಸಾ, ಅಂಬಿ ಇರಗಂಟ ಅವುನ್ನ ತಂಬಿ ಅನ್ನಕಂಡು ಬದುಕಿದ, ಅವುನ ಮಂತ್ರಿಗಿರಿಗೂ ಕ್ಯಟ್ಟ ಹೆಸರು ತಂದ, ಈಗಂಬಿ ಇಲ್ಲ, ಅದ್ಕೆ ಕುಮಾರಣ್ಣ ನತÀ್ರಕ್ಕೋಗಿ ಕುಯ್ಯಿಗುಡ್ತಾ ಅವುನೆ. ಈ ಶತಮಾನದ ದ್ರೋಹ ಅಂದ್ರೆ ಅವiರಾವತಿ ಚಂದ್ರಶೇಖರ ಅಂಬರೀಶ್ಗೆ ಕೈ ಕೊಟ್ಟಿದ್ದು, ಯಸ್ಸೆಂ ಕೃಷ್ಣ ಕಾಂಗ್ರೆಸ್‍ಗೆ ಕೈಕೊಟ್ಟಿದ್ದು ಸಾ.”

“ಕೃಷ್ಣ ಕಾಂಗ್ರೆಸ್ ಬುಡಕ್ಕೆ ಸರಿಯಾದ ಕಾರಣ ಕೊಟ್ಟವುರೆ.”

“ಏನಾರ ಕೊಡ್ಳಿ, ಇವತ್ತು ಅವುನ ತಲೆಮ್ಯಾಲೆ ಹಾಕ್ಯಂಡವುನಲ್ಲ ವಿಗ್ಗುಮ ಅವು ಕಾಂಗ್ರೆಸ್ಸಿಂದು ಸಾ. ಅವುನ ಮನೆ ಮಠ ಆಸ್ತಿ ಪಾಸ್ತಿ ಬಟ್ಟಿ ಬರಿ ಯಲ್ಲಾ ಕಾಂಗ್ರೆಸ್ಸಿಂದು, ಸಾಯಕಡೆ ಸತಿ ಅದೂ ಬಿಜೆಪಿ ಗೋದ ನೋಡಿ ಅದ್ಕೆ ಅವುನ ದ್ರೋಹ ಈ ಶತಮಾನದ ದ್ರೋಹ ಸಾ.”

“ಅವುರೊಬ್ಬರೆ ಏನೋಗಿಲ್ಲ, ಅಂಥಾ ಡಿ.ಬಿ.ಚಂದ್ರೇಗೌಡ ಹೋದ, ಶ್ರೀಕಂಠಯ್ಯ ಹೋದ ಗೊತ್ತಾ.”

“ಅವುರು ದ್ಯಾವೇಗೌಡನ ರಾಜಕಾರಣದಿಂದ ಬೇಸತ್ತು ಹೋದ್ರು ಸಾ. ಇವುಂದೇಳಿ ಕಾಂಗ್ರೆಸ್ಸು ಇವುನ್ನ ಪ್ರಧಾನಿ ಮಾಡಲಿಲ್ಲ ಅಷ್ಟೇ. ಇನ್ಯಲ್ಲ ಸ್ಥಾನಕೊಟ್ಟಿತ್ತು ಅಲ್ವೆ, ಹೋಗ್ಲಿ ಬುಡಿ ಸತ್ತೋರ ಬಗ್ಗೆ ಯಾಕೆ ಮಾತಾಡದು.”

“ವಾಟಿಸ್ಸೆ ನೀನು ಕಾಂಗ್ರೆಸ್ಸಾ.”

“ಇಲ್ಲ ಸಾರ್, ಈಗ ಇಂಡಿಪೆಂಡೆಂಟು.”

“ಹ್ಯಂಗೆ ನ್ಯಡಿದದೆ ಪ್ರಚಾರ.”

“ನೋಡಿ, ಇವತ್ತು ಕುಮಾರಸ್ವಾಮಿ ಊರಿಗ್ಯಲ್ಲ ಬಸ್ಸು ಕಳಿಸಿ ಜನ ತಂದು ಮಂಡ್ಯದಲ್ಲಿ ಸುರಕಂಡು ಸುಮಲತನಿಗಿಂತ ನಾವು ಸ್ಟ್ರಾಂಗು ಅಂತ ತೋರ್ಯವುನೇ. ತಲಿಗೆ ಐದು ನೂರ್‍ವರ್ಗೂ ಬಟವಾಡೆ ಆಗಿದೆ. ಯಲಕ್ಷನ್ ಟೀಮಿಗೆ ಓಟಿಗಿಷ್ಟು ಅಂತ ತೀರ್ಮಾನ ಮಾಡಿ ಕೋಡ್ತಾರಂತೆ, ಯಾಕಂದ್ರೆ ಮುಖ್ಯಮಂತ್ರಿ ಮಗ ಸೋಲಬಾರದಂತೆ. ಅವುರಿಗೆ ಕಾರ್ಯಕರ್ತರವುರೆ ಎಂಟು ಜನ ಯಮ್ಮೆಲ್ಲೆ ಪೈಕಿ ಮೂರು ಜನ ಮಂತ್ರಿಗಳವುರೆ, ಆದ್ರಿಂದ ಬಟಾವಾಡೆಗೆ ಯಾವ ತ್ವಂದ್ರೆನು ಇಲ್ಲ.”

“ಜನ ದುಡ್ಡೀಸಗಳಕ್ಕೆ ತಯಾರಾಗಿದಾರ.”

“ಮತ್ತೆ ಯಾರಪ್ಪನ ಮನೆ ದುಡ್ಡು ಸಾರ್, ಮಂಡ್ಯದ ಮಣ್ಣಿನ ಮಕ್ಕಳ ದುಡ್ಡು ಬುಡಕ್ಕಾಯ್ತದಾ.”

“ನೀವು.”

“ನಾನು ಈಸಗಂಡು ಓಟು ಮಾತ್ರ ಸುಮಲತಾರಿಗಾಕ್ತಿನಿ.”

“ಥೂತ್ತೇರಿ.”

–    ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...