Homeಮುಖಪುಟಕಾಲದ ಕನ್ನಡಿ.. ದೇಶದ ಪರಿಸ್ಥಿತಿಯ ಒಂದು ಗಂಭೀರ ಅವಲೋಕನ.

ಕಾಲದ ಕನ್ನಡಿ.. ದೇಶದ ಪರಿಸ್ಥಿತಿಯ ಒಂದು ಗಂಭೀರ ಅವಲೋಕನ.

- Advertisement -
- Advertisement -

| ಸುರೇಶ್ ಕಂಜರ್ಪಣೆ |

ಡಬ್ಲ್ಯೂ.ಬಿ. ಯೇಟ್ಸ್ ತನ್ನ ಸುವಿಖ್ಯಾತ ದಿ ಸೆಕೆಂಡ್ ಕಮಿಂಗ್ ಕವನದಲ್ಲಿ ಡೇಗೆಯೊಂದು ಕೇಂದ್ರವೊಂದರ ಸುತ್ತ ವೃತ್ತಾಕಾರವಾಗಿ ವಿಸ್ತರಿಸುತ್ತಾ ಹಾರುವ ಚಿತ್ರ ಕೊಡುತ್ತಾನೆ. ಡೇಗೆ ಒಂದು ಕೇಂದ್ರದ ಸುತ್ತ ಸುತ್ತುತ್ತಾ ವಿಸ್ತರಿಸುತ್ತಾ ಹಾರುತ್ತದೆ. ಆದರೆ ಯಾವುದೋ ಒಂದು ಕ್ಷಣ ವೃತ್ತದ ಹೊರ ಅಂಚಿನ ಬಿಂದುವನ್ನೇ ಕೇಂದ್ರವೆಂದು ಬಗೆದು, ಈಗ ಹೊಸ ಕೇಂದ್ರದ ಸುತ್ತ ತಿರುಗುತ್ತದೆ. ಅರ್ಥಾತ್ ಮೂಲ ಕೇಂದ್ರದಿಂದ ಬಲು ದೂರ ಸಾಗಿರುತ್ತದೆ. ಈ ಸುತ್ತುವ ಕ್ರಿಯೆಯಲ್ಲಿ ಅದು ಆಗಾಗ್ಗೆ ಹಳೇ ವೃತ್ತದ ಭಾಗವನ್ನು ದಾಟುವ ಕಾರಣ ಒಂದು ಗೊಂದಲ ಇರುತ್ತದೆ. ಕೇಂದ್ರಕ್ಕೆ ಹಿಡಿಯುವ ಶಕ್ತಿ ಇಲ್ಲ. ಅದರ ಗುರುತ್ವಾಕರ್ಷಣೆ ಶಕ್ತಿಯಿಂದ ವಸ್ತುಗಳು ಕಳಚಿ ಚೆಲ್ಲಾಪಿಲ್ಲಿ ಉದುರುತ್ತವೆ ಎಂದು ಯೇಟ್ಸ್ ವಿಷಾದದಲ್ಲಿ ಹೇಳುತ್ತಾನೆ . ಅಚಿಬೆ ತನ್ನ ಜಗತ್ಪ್ರಸಿದ್ಧ ಕಾಂದಂಬರಿಗೆ ಇದೇ ಹೆಸರು ಕೊಡುತ್ತಾನೆ. (“ಥಿಂಗ್ಸ್ ಫಾಲ್ ಅಪಾರ್ಟ್”).
ಭಾಜಪದಲ್ಲಿ ನಿರ್ಗಮಿಸಿದ ನಾಯಕರನ್ನು ಕಂಡಾಗ ಇದು ನೆನಪಾಯಿತು. ಅನಂತಕುಮಾರ್ ಮತ್ತು ಪರಿಕರ್ ಭೌತಿಕವಾಗಿ ನಿರ್ಗಮಿಸಿದರೆ, ಅನಾದಿ ಕಾಲದ ನಾಯಕರಾದ ಅದ್ವಾನಿ ಮತ್ತು ಮುರಳಿ ಮನೋಹರ ಜೋಡಿ ಸಾಂಕೇತಿಕವಾಗಿ ನಿರ್ಗಮಿಸಿದ್ದಾರೆ.
ಹಿರಿಯಬ್ಬರು, ಮತ್ತು ಅವರ ಶಿಷ್ಯರಿಬ್ಬರು ಭಾಜಪದ ಕಳಚಿದ ಕೊಂಡಿಯ ಸಂಕೇತವಾಗಿದ್ದಾರೆ. ಸಾಂವಿಧಾನಿಕ ಭಾಷೆ, ಶಿಷ್ಟಾಚಾರ, ತಮಗೊಂದು ಸೈದ್ಧಾಂತಿಕ ಭೂಮಿಕೆ ಇದೆ ಎಂಬಂಥಾ ವಾದ- ಇವೆಲ್ಲಾ ಇವರಲ್ಲಿತ್ತು. ಮುರಳಿಮನೋಹರ ಜೋಷಿ ಭೌತಶಾಸ್ತ್ರದ ಪ್ರಾಧ್ಯಾಪಕ. ಕಲಿತ ಶಾಸ್ತ್ರದ ವೈಜ್ಞಾನಿಕತೆ ಅಂತರ್ಗತವಾಗಲಿಲ್ಲ ಎಂಬುದರ ಪುರಾವೆಯಾಗಿ ಉಳಿದರು. ಕಾಕತಾಳೀಯವಾಗಿ ಪರಿಕರ್ ಕೂಡಾ ಐಐಟಿಯಲ್ಲಿ ಓದಿಯೂ ಹಿಂದುತ್ವವನ್ನು ಅಪ್ಪಿಕೊಂಡರು. ಆಧುನಿಕ ಸಮಾಜಶಾಸ್ತ್ರೀಯ ವಿವರಗಳು ಅವರೊಳಗೆ ಇಳಿಯಲಿಲ್ಲ. ಇದು ಕಾಕತಾಳೀಯ ಅಲ್ಲ. ಆದರೆ ನಮ್ಮ ಸಂವಿಧಾನದ ಆಶಯಗಳು ಎಷ್ಟು ಘನವಾಗಿತ್ತೆಂದರೆ ಇವರಿಗೆ ಅದನ್ನು ಗೌರವಿಸದೇ ಔಪಚಾರಿಕ ಮನ್ನಣೆ ಸಾಧ್ಯವಿಲ್ಲ ಎಂಬ ಪ್ರಜ್ಞೆ ಇತ್ತು.
ಈಗ ಹೊಸ ಕೇಂದ್ರದ ಸುತ್ತ ಡೇಗೆ ಸುತ್ತತೊಡಗಿದೆ. ಕೇಂದ್ರ ಹಳೆಯದೇ ಎಂದು ಅದು ನಂಬಿಸಲು ನೋಡುತ್ತಿದೆ.ಮೋದಿ ಮತ್ತು ಶಾ ಜೋಡಿ ಭಾಜಪವನ್ನು ದೇಶದ ಸಾಂವಿಧಾನಿಕ ನೈತಿಕ ಕೇಂದ್ರದ ಸೆಳವಿಂದ ಬಲು ದೂರ ಒಯ್ಯುತ್ತಿದ್ದಾರೆ. ವಿಸ್ತಾರಗೊಳ್ಳುವ ಭ್ರಮಾತ್ಮಕ ಚಲನೆಯಲ್ಲಿ ಇದಕ್ಕೆ ಹಿಡಿದಿಟ್ಟುಕೊಳ್ಳುವ ಗುರುತ್ವ ಕೇಂದ್ರವೂ ಇಲ್ಲದೇ, ಕ್ರಮೇಣ ಇದೊಂದು ಅರಾಜಕ ಬಿಡಿಭಾಗಗಳ ಮೂಟೆಯಾಗಬಲ್ಲುದು.
ಒಂದಷ್ಟು ಜನ ಮೋದಿ Generationನ ನಾಯಕರ ಮಾತು ಕೇಳಿದರೆ ಅವರ್ಯಾರಿಗೂ ಈ ದೇಶದ ವೈವಿಧ್ಯತೆ, ಸಮಸ್ಯೆಗಳ ಸಂಕೀರ್ಣತೆ, ಸಾಮಾಜಿಕ ಅಸಮತೋಲನದ ಬಗ್ಗೆ ಅರಿವಿದ್ದಂತೆ ಕಾಣುತ್ತಿಲ್ಲ. ಬಿಡಿಬಿಡಿಯಾಗಿ ಗೆದ್ದು ಅಧಿಕಾರ ಬಲಪಡಿಸುವ ವಾಂಛೆಯಿಂದಾಚೆ ಇವರ ದೃಷ್ಟಿ ಚಾಚಿದಂತೆ ಕಾಣುತ್ತಿಲ್ಲ.

ಕಾಂಗ್ರೆಸ್ಸಿನ ಕಥೆಯೂ ಇದೇ. ಆದರೆ ಅದು ಹೆಚ್ಚು ನಿರ್ವೀರ್ಯ ಚಲನೆಯಲ್ಲಿ ಸುತ್ತುತ್ತಿದೆ. ಅದರ ಮೂಲ ಕೇಂದ್ರವಾದ ಸೆಕ್ಯುಲರ್ – ಸಮಪಾಲಿನ ಸಮಾಜದ ಸುತ್ತ ಸುತ್ತುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಆದರೆ ಅದರ ಹೊಸ ಕೇಂದ್ರ ಮೂಲ ಕೇಂದ್ರದ ಅಂಚಿನ ಕ್ಷುಲ್ಲಕ ಬಿಂದು ಅಷ್ಟೇ.
ಈ ಕೇಂದ್ರದ ಸುತ್ತ ಅದು ಈಗಾಗಲೇ ಪಡಪೋಶಿಯಾದ ನುಡಿಕಟ್ಟು, ಹೇಳಿಕೆಗಳನ್ನು ಮುಂದಿಡುತ್ತಾ ಭಾಜಪಕ್ಕೆ ಪರ್ಯಾಯ ಎಂಬಂತೆ ನಟಿಸುತ್ತಿದೆ. ಭಾಜಪವನ್ನು ತಡವಿ ನಿಲ್ಲಿಸುವ ಶಕ್ತಿಯೇ ಅದಕ್ಕಿಲ್ಲ. ಅದಕ್ಕೆ ಕಾರಣ ಭಾಜಪ ಅಲ್ಲ.
ಕ್ರಿಯೆಯ ಮೂಲಕ ಶಕ್ತಿ ತುಂಬಿದರಷ್ಟೇ ತನ್ನ ನುಡಿಕಟ್ಟಗಳು, ವಾಕ್ಕುಗಳಿಗೆ ಪ್ರಭೆ ಎಂಬುದನ್ನು ಕಾಂಗ್ರೆಸ್ ಮರೆತಿದೆ. ಸ್ಥಳೀಯವಾಗಿ ಬಡ ಜಾತಿಗಳು, ಪ್ರದೇಶಗಳು ತನ್ನಿಂದ ಯಾಕೆ ದೂರವಾಗಿವೆ ಎಂಬುದು ಅದಕ್ಕೆ ಅರ್ಥವೇ ಆಗಿಲ್ಲ. ಬದಲಾದ ಕಾಲ ಸಂದರ್ಭದ ಹೊಸ ತಲೆಮಾರಿಗೆ ಹೊಸ ಮಾಹಿತಿ ಮೂಲಗಳಿಂದ ದೊರಕುವ ವಿವರಗಳು ಏನೆಂದು ಅದಕ್ಕೆ ಅರ್ಥವಾಗಿಲ್ಲ.
ಚುನಾವಣಾ ಗೆಲುವೊಂದೇ ಕಾಂಗ್ರೆಸ್ಸನ್ನೂ ಮಬ್ಬುಗೊಳಿಸಿದೆ. ಒಂದರೆ ಕ್ಷಣ ನಿಂತು, ಹೌದಲ್ಲಾ ಭ್ರಷ್ಟಾಚಾರದ ಬಗ್ಗೆ ಜನಕ್ಕೆ ಹೇವರಿಕೆ ಇದೆ ಎಂದು ಕಾಂಗ್ರೆಸ್ಸಿಗೆ ಅನ್ನಿಸಿದ್ದರೆ ಕಾರ್ತಿಯಂಥಾ ಕ್ಯಾರೆಕ್ಟರ್‍ಗೆ ಸೀಟು ಕೊಡುತ್ತಿರಲಿಲ್ಲ. ಮೋದಿಯ ಒರಟು ಶಕ್ತಿ ಪ್ರದರ್ಶನದ ವಿರುದ್ಧ ಮೊದಲು ದನಿ ಎತ್ತಿದ ಕನ್ನಯ್ಯನನ್ನು ದೂರ ಇಡುತ್ತಿರಲಿಲ್ಲ.

ಮಾಯಾ ಬಜಾರ್ ಸಿನೆಮಾದಲ್ಲಿ ಕನ್ನಡಿ ದೃಶ್ಯವೊಂದಿದೆ. ಮಾಯಾ ಕನ್ನಡಿ ಅದು. ಇಲ್ಲಿ ಇಣುಕಿದಾಗ ಕೃಷ್ಣನಿಗೆ ಶಕುನಿ ಕಾಣಿಸುತ್ತಾನೆ. ಅರ್ಥಾತ್, ಕೃಷ್ಣ ತಾನು ಜಗದೋದ್ಧಾರಕ ಎಂದುಕೊಂಡು ಕನ್ನಡಿ ನೋಡಿದರೆ ಕಾಣಿಸುವುದು ಷಡ್ಯಂತ್ರ ನಿಪುಣ ಶಕುನಿ. ಅಂದರೆ ಲೋಕೋದ್ಧಾರದ ಮಾರಲ್ ಫೈಬರ್ ಮಾಸಿ ಯುದ್ಧ ಕಾಲಕ್ಕೆ ಷಡ್ಯಂತ್ರದ ಬುದ್ಧಿಯಷ್ಟೇ ಉಳಿದಿರುವ ಕೃಷ್ಣ.
ಮತ್ತೆ ಮೋದಿಗೆ ಮರಳುವುದಾದರೆ, ತಾನೊಬ್ಬ ದೇಶೋದ್ಧಾರಕ ಎಂದು ಭಾವಿಸಿ ಮೋದಿ ಕನ್ನಡಿ ನೋಡಿದರೆ ಅಲ್ಲಿ ಕುಯುಕ್ತಿಯ ಷಡ್ಯಂತ್ರದ ದುಷ್ಟ ಮಾತ್ರಾ ಕಾಣಿಸುತ್ತಾನೆ.
ಕಾಂಗ್ರೆಸ್ಸಿಗೆ ಈ ದುಷ್ಟತನವೂ ಇಲ್ಲ. ಅದೀಗ ಹೊಟ್ಟೆ ಹೊರೆವ ಭೀತ ಹೆಜ್ಜೆಯ ಕತ್ತೆ ಕಿರುಬನಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...