Homeಮುಖಪುಟಕಾಲದ ಕನ್ನಡಿ.. ದೇಶದ ಪರಿಸ್ಥಿತಿಯ ಒಂದು ಗಂಭೀರ ಅವಲೋಕನ.

ಕಾಲದ ಕನ್ನಡಿ.. ದೇಶದ ಪರಿಸ್ಥಿತಿಯ ಒಂದು ಗಂಭೀರ ಅವಲೋಕನ.

- Advertisement -
- Advertisement -

| ಸುರೇಶ್ ಕಂಜರ್ಪಣೆ |

ಡಬ್ಲ್ಯೂ.ಬಿ. ಯೇಟ್ಸ್ ತನ್ನ ಸುವಿಖ್ಯಾತ ದಿ ಸೆಕೆಂಡ್ ಕಮಿಂಗ್ ಕವನದಲ್ಲಿ ಡೇಗೆಯೊಂದು ಕೇಂದ್ರವೊಂದರ ಸುತ್ತ ವೃತ್ತಾಕಾರವಾಗಿ ವಿಸ್ತರಿಸುತ್ತಾ ಹಾರುವ ಚಿತ್ರ ಕೊಡುತ್ತಾನೆ. ಡೇಗೆ ಒಂದು ಕೇಂದ್ರದ ಸುತ್ತ ಸುತ್ತುತ್ತಾ ವಿಸ್ತರಿಸುತ್ತಾ ಹಾರುತ್ತದೆ. ಆದರೆ ಯಾವುದೋ ಒಂದು ಕ್ಷಣ ವೃತ್ತದ ಹೊರ ಅಂಚಿನ ಬಿಂದುವನ್ನೇ ಕೇಂದ್ರವೆಂದು ಬಗೆದು, ಈಗ ಹೊಸ ಕೇಂದ್ರದ ಸುತ್ತ ತಿರುಗುತ್ತದೆ. ಅರ್ಥಾತ್ ಮೂಲ ಕೇಂದ್ರದಿಂದ ಬಲು ದೂರ ಸಾಗಿರುತ್ತದೆ. ಈ ಸುತ್ತುವ ಕ್ರಿಯೆಯಲ್ಲಿ ಅದು ಆಗಾಗ್ಗೆ ಹಳೇ ವೃತ್ತದ ಭಾಗವನ್ನು ದಾಟುವ ಕಾರಣ ಒಂದು ಗೊಂದಲ ಇರುತ್ತದೆ. ಕೇಂದ್ರಕ್ಕೆ ಹಿಡಿಯುವ ಶಕ್ತಿ ಇಲ್ಲ. ಅದರ ಗುರುತ್ವಾಕರ್ಷಣೆ ಶಕ್ತಿಯಿಂದ ವಸ್ತುಗಳು ಕಳಚಿ ಚೆಲ್ಲಾಪಿಲ್ಲಿ ಉದುರುತ್ತವೆ ಎಂದು ಯೇಟ್ಸ್ ವಿಷಾದದಲ್ಲಿ ಹೇಳುತ್ತಾನೆ . ಅಚಿಬೆ ತನ್ನ ಜಗತ್ಪ್ರಸಿದ್ಧ ಕಾಂದಂಬರಿಗೆ ಇದೇ ಹೆಸರು ಕೊಡುತ್ತಾನೆ. (“ಥಿಂಗ್ಸ್ ಫಾಲ್ ಅಪಾರ್ಟ್”).
ಭಾಜಪದಲ್ಲಿ ನಿರ್ಗಮಿಸಿದ ನಾಯಕರನ್ನು ಕಂಡಾಗ ಇದು ನೆನಪಾಯಿತು. ಅನಂತಕುಮಾರ್ ಮತ್ತು ಪರಿಕರ್ ಭೌತಿಕವಾಗಿ ನಿರ್ಗಮಿಸಿದರೆ, ಅನಾದಿ ಕಾಲದ ನಾಯಕರಾದ ಅದ್ವಾನಿ ಮತ್ತು ಮುರಳಿ ಮನೋಹರ ಜೋಡಿ ಸಾಂಕೇತಿಕವಾಗಿ ನಿರ್ಗಮಿಸಿದ್ದಾರೆ.
ಹಿರಿಯಬ್ಬರು, ಮತ್ತು ಅವರ ಶಿಷ್ಯರಿಬ್ಬರು ಭಾಜಪದ ಕಳಚಿದ ಕೊಂಡಿಯ ಸಂಕೇತವಾಗಿದ್ದಾರೆ. ಸಾಂವಿಧಾನಿಕ ಭಾಷೆ, ಶಿಷ್ಟಾಚಾರ, ತಮಗೊಂದು ಸೈದ್ಧಾಂತಿಕ ಭೂಮಿಕೆ ಇದೆ ಎಂಬಂಥಾ ವಾದ- ಇವೆಲ್ಲಾ ಇವರಲ್ಲಿತ್ತು. ಮುರಳಿಮನೋಹರ ಜೋಷಿ ಭೌತಶಾಸ್ತ್ರದ ಪ್ರಾಧ್ಯಾಪಕ. ಕಲಿತ ಶಾಸ್ತ್ರದ ವೈಜ್ಞಾನಿಕತೆ ಅಂತರ್ಗತವಾಗಲಿಲ್ಲ ಎಂಬುದರ ಪುರಾವೆಯಾಗಿ ಉಳಿದರು. ಕಾಕತಾಳೀಯವಾಗಿ ಪರಿಕರ್ ಕೂಡಾ ಐಐಟಿಯಲ್ಲಿ ಓದಿಯೂ ಹಿಂದುತ್ವವನ್ನು ಅಪ್ಪಿಕೊಂಡರು. ಆಧುನಿಕ ಸಮಾಜಶಾಸ್ತ್ರೀಯ ವಿವರಗಳು ಅವರೊಳಗೆ ಇಳಿಯಲಿಲ್ಲ. ಇದು ಕಾಕತಾಳೀಯ ಅಲ್ಲ. ಆದರೆ ನಮ್ಮ ಸಂವಿಧಾನದ ಆಶಯಗಳು ಎಷ್ಟು ಘನವಾಗಿತ್ತೆಂದರೆ ಇವರಿಗೆ ಅದನ್ನು ಗೌರವಿಸದೇ ಔಪಚಾರಿಕ ಮನ್ನಣೆ ಸಾಧ್ಯವಿಲ್ಲ ಎಂಬ ಪ್ರಜ್ಞೆ ಇತ್ತು.
ಈಗ ಹೊಸ ಕೇಂದ್ರದ ಸುತ್ತ ಡೇಗೆ ಸುತ್ತತೊಡಗಿದೆ. ಕೇಂದ್ರ ಹಳೆಯದೇ ಎಂದು ಅದು ನಂಬಿಸಲು ನೋಡುತ್ತಿದೆ.ಮೋದಿ ಮತ್ತು ಶಾ ಜೋಡಿ ಭಾಜಪವನ್ನು ದೇಶದ ಸಾಂವಿಧಾನಿಕ ನೈತಿಕ ಕೇಂದ್ರದ ಸೆಳವಿಂದ ಬಲು ದೂರ ಒಯ್ಯುತ್ತಿದ್ದಾರೆ. ವಿಸ್ತಾರಗೊಳ್ಳುವ ಭ್ರಮಾತ್ಮಕ ಚಲನೆಯಲ್ಲಿ ಇದಕ್ಕೆ ಹಿಡಿದಿಟ್ಟುಕೊಳ್ಳುವ ಗುರುತ್ವ ಕೇಂದ್ರವೂ ಇಲ್ಲದೇ, ಕ್ರಮೇಣ ಇದೊಂದು ಅರಾಜಕ ಬಿಡಿಭಾಗಗಳ ಮೂಟೆಯಾಗಬಲ್ಲುದು.
ಒಂದಷ್ಟು ಜನ ಮೋದಿ Generationನ ನಾಯಕರ ಮಾತು ಕೇಳಿದರೆ ಅವರ್ಯಾರಿಗೂ ಈ ದೇಶದ ವೈವಿಧ್ಯತೆ, ಸಮಸ್ಯೆಗಳ ಸಂಕೀರ್ಣತೆ, ಸಾಮಾಜಿಕ ಅಸಮತೋಲನದ ಬಗ್ಗೆ ಅರಿವಿದ್ದಂತೆ ಕಾಣುತ್ತಿಲ್ಲ. ಬಿಡಿಬಿಡಿಯಾಗಿ ಗೆದ್ದು ಅಧಿಕಾರ ಬಲಪಡಿಸುವ ವಾಂಛೆಯಿಂದಾಚೆ ಇವರ ದೃಷ್ಟಿ ಚಾಚಿದಂತೆ ಕಾಣುತ್ತಿಲ್ಲ.

ಕಾಂಗ್ರೆಸ್ಸಿನ ಕಥೆಯೂ ಇದೇ. ಆದರೆ ಅದು ಹೆಚ್ಚು ನಿರ್ವೀರ್ಯ ಚಲನೆಯಲ್ಲಿ ಸುತ್ತುತ್ತಿದೆ. ಅದರ ಮೂಲ ಕೇಂದ್ರವಾದ ಸೆಕ್ಯುಲರ್ – ಸಮಪಾಲಿನ ಸಮಾಜದ ಸುತ್ತ ಸುತ್ತುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಆದರೆ ಅದರ ಹೊಸ ಕೇಂದ್ರ ಮೂಲ ಕೇಂದ್ರದ ಅಂಚಿನ ಕ್ಷುಲ್ಲಕ ಬಿಂದು ಅಷ್ಟೇ.
ಈ ಕೇಂದ್ರದ ಸುತ್ತ ಅದು ಈಗಾಗಲೇ ಪಡಪೋಶಿಯಾದ ನುಡಿಕಟ್ಟು, ಹೇಳಿಕೆಗಳನ್ನು ಮುಂದಿಡುತ್ತಾ ಭಾಜಪಕ್ಕೆ ಪರ್ಯಾಯ ಎಂಬಂತೆ ನಟಿಸುತ್ತಿದೆ. ಭಾಜಪವನ್ನು ತಡವಿ ನಿಲ್ಲಿಸುವ ಶಕ್ತಿಯೇ ಅದಕ್ಕಿಲ್ಲ. ಅದಕ್ಕೆ ಕಾರಣ ಭಾಜಪ ಅಲ್ಲ.
ಕ್ರಿಯೆಯ ಮೂಲಕ ಶಕ್ತಿ ತುಂಬಿದರಷ್ಟೇ ತನ್ನ ನುಡಿಕಟ್ಟಗಳು, ವಾಕ್ಕುಗಳಿಗೆ ಪ್ರಭೆ ಎಂಬುದನ್ನು ಕಾಂಗ್ರೆಸ್ ಮರೆತಿದೆ. ಸ್ಥಳೀಯವಾಗಿ ಬಡ ಜಾತಿಗಳು, ಪ್ರದೇಶಗಳು ತನ್ನಿಂದ ಯಾಕೆ ದೂರವಾಗಿವೆ ಎಂಬುದು ಅದಕ್ಕೆ ಅರ್ಥವೇ ಆಗಿಲ್ಲ. ಬದಲಾದ ಕಾಲ ಸಂದರ್ಭದ ಹೊಸ ತಲೆಮಾರಿಗೆ ಹೊಸ ಮಾಹಿತಿ ಮೂಲಗಳಿಂದ ದೊರಕುವ ವಿವರಗಳು ಏನೆಂದು ಅದಕ್ಕೆ ಅರ್ಥವಾಗಿಲ್ಲ.
ಚುನಾವಣಾ ಗೆಲುವೊಂದೇ ಕಾಂಗ್ರೆಸ್ಸನ್ನೂ ಮಬ್ಬುಗೊಳಿಸಿದೆ. ಒಂದರೆ ಕ್ಷಣ ನಿಂತು, ಹೌದಲ್ಲಾ ಭ್ರಷ್ಟಾಚಾರದ ಬಗ್ಗೆ ಜನಕ್ಕೆ ಹೇವರಿಕೆ ಇದೆ ಎಂದು ಕಾಂಗ್ರೆಸ್ಸಿಗೆ ಅನ್ನಿಸಿದ್ದರೆ ಕಾರ್ತಿಯಂಥಾ ಕ್ಯಾರೆಕ್ಟರ್‍ಗೆ ಸೀಟು ಕೊಡುತ್ತಿರಲಿಲ್ಲ. ಮೋದಿಯ ಒರಟು ಶಕ್ತಿ ಪ್ರದರ್ಶನದ ವಿರುದ್ಧ ಮೊದಲು ದನಿ ಎತ್ತಿದ ಕನ್ನಯ್ಯನನ್ನು ದೂರ ಇಡುತ್ತಿರಲಿಲ್ಲ.

ಮಾಯಾ ಬಜಾರ್ ಸಿನೆಮಾದಲ್ಲಿ ಕನ್ನಡಿ ದೃಶ್ಯವೊಂದಿದೆ. ಮಾಯಾ ಕನ್ನಡಿ ಅದು. ಇಲ್ಲಿ ಇಣುಕಿದಾಗ ಕೃಷ್ಣನಿಗೆ ಶಕುನಿ ಕಾಣಿಸುತ್ತಾನೆ. ಅರ್ಥಾತ್, ಕೃಷ್ಣ ತಾನು ಜಗದೋದ್ಧಾರಕ ಎಂದುಕೊಂಡು ಕನ್ನಡಿ ನೋಡಿದರೆ ಕಾಣಿಸುವುದು ಷಡ್ಯಂತ್ರ ನಿಪುಣ ಶಕುನಿ. ಅಂದರೆ ಲೋಕೋದ್ಧಾರದ ಮಾರಲ್ ಫೈಬರ್ ಮಾಸಿ ಯುದ್ಧ ಕಾಲಕ್ಕೆ ಷಡ್ಯಂತ್ರದ ಬುದ್ಧಿಯಷ್ಟೇ ಉಳಿದಿರುವ ಕೃಷ್ಣ.
ಮತ್ತೆ ಮೋದಿಗೆ ಮರಳುವುದಾದರೆ, ತಾನೊಬ್ಬ ದೇಶೋದ್ಧಾರಕ ಎಂದು ಭಾವಿಸಿ ಮೋದಿ ಕನ್ನಡಿ ನೋಡಿದರೆ ಅಲ್ಲಿ ಕುಯುಕ್ತಿಯ ಷಡ್ಯಂತ್ರದ ದುಷ್ಟ ಮಾತ್ರಾ ಕಾಣಿಸುತ್ತಾನೆ.
ಕಾಂಗ್ರೆಸ್ಸಿಗೆ ಈ ದುಷ್ಟತನವೂ ಇಲ್ಲ. ಅದೀಗ ಹೊಟ್ಟೆ ಹೊರೆವ ಭೀತ ಹೆಜ್ಜೆಯ ಕತ್ತೆ ಕಿರುಬನಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...