Homeನ್ಯಾಯ ಪಥಡೇವಿಡ್ ಮ್ಯಾಮೆಟ್ ಮತ್ತು ಅವರ ಉಗ್ರವಾದಿ ಸಿನೆಮಾ ಸಿದ್ಧಾಂತ

ಡೇವಿಡ್ ಮ್ಯಾಮೆಟ್ ಮತ್ತು ಅವರ ಉಗ್ರವಾದಿ ಸಿನೆಮಾ ಸಿದ್ಧಾಂತ

- Advertisement -
- Advertisement -

ಸಿನಿಯಾನ:03

| ರಾಜಶೇಖರ್ ಅಕ್ಕಿ |

`ಮೊದಲ ಶಾಟ್ -ಒಬ್ಬ ಮಹಿಳೆ ಅಳುತ್ತ ಕುಳಿತಿದ್ದಾಳೆ, ಎರಡನೇ ಶಾಟ್- ನೇಣುಗಂಬದ ಪಕ್ಕ ನಿಂತಿರುವ ವ್ಯಕ್ತಿ ತನ್ನ ಗಡಿಯಾರ ನೋಡಿ, ಕ್ಯಾಮರಾ ಕಡೆ ನೋಡುತ್ತಾನೆ

ಪ್ರೇಕ್ಷಕರ ಮನದಲ್ಲಿ ಮೂಡುವುದು- ಓಹ್ ಈ ಮಹಿಳೆಯನ್ನು ಗಲ್ಲಿಗೇರಿಸುವ ಸಮಯ, ಅದಕ್ಕೇ ಅಳುತ್ತಿದ್ದಾಳೆ.

ಈಗ ಇನ್ನೊಂದು ಚಿತ್ರ; ಮೊದಲ ಶಾಟ್ – ಮಹಿಳೆ ಅಳುತ್ತ ಕುಳಿತಿದ್ದ ಅದೇ ಶಾಟ್; ಯಾವುದೇ ಬದಲಾವಣೆ ಇಲ್ಲ. ಎರಡನೇ ಶಾಟ್- ಒಬ್ಬ ನಾಲ್ಕೈದು ವರ್ಷದ ಮಗು ಬ್ಯಾಗ್ ಹಾಕಿಕೊಂಡು ಅಳುತ್ತ ಸ್ಕೂಲ್ ಬಸ್ ಹತ್ತುತ್ತಿದ್ದಾನೆ

ಪ್ರೇಕ್ಷಕರ ಮನದಲ್ಲಿ ಮೂಡುವುದು? ಹೇಳುವ ಅಗತ್ಯವಿಲ್ಲ’

ಡೇವಿಡ್ ಮ್ಯಾಮೆಟ್, ಸಿನೆಮಾ ನಿರ್ದೇಶನದ ಬಗ್ಗೆ ಮಾತನಾಡುತ್ತ.

ಇದನ್ನು ಜಕ್ಸ್ಟಾಪೊಸಿಷನ್ ಎನ್ನುತ್ತಾರೆ. ಇದು ಮೋಂಟಾಜ್ ಥಿಯರಿಯ ಒಂದು ಉದಾಹರಣೆ. ಇದನ್ನು ಮೊದಲ ಸಲ ಪ್ರತಿಪಾದಿಸಿದ್ದು ರಷಿಯಾದ ಚಿತ್ರನಿರ್ದೇಶಕ ಸರ್ಗೇಯ್ ಐಸಿನ್‍ಸ್ಟೇನ್. 1925 ರಲ್ಲಿ ಬಂದ ಬ್ಯಾಟಲ್‍ಶಿಪ್ ಪೊಟಮ್ಕಿನ್ ಎನ್ನುವ ಐತಿಹಾಸಿಕ ಸಿನೆಮಾ ನಿರ್ದೇಶಿಸಿದ್ದು ಇದೇ ಐಸಿನ್‍ಸ್ಟೇನ್.

ಐಸಿನ್‍ಸ್ಟೇನ್‍ನಿಂದ ಪ್ರಭಾವಿತರಾದ ಡೇವಿಡ್ ಮ್ಯಾಮೆಟ್ ಹುಟ್ಟಿದ್ದು 1947ರಲ್ಲಿ. ಶಿಕಾಗೋದಲ್ಲಿ ಹುಟ್ಟಿ ಬೆಳೆದ ಇವರು ಒಬ್ಬ ನಟನಾಗಿ ತನ್ನ ಕಲಾಜೀವನ ಶುರು ಮಾಡಿದರು, ಅದು ಸರಿಹೊಂದಲಿಲ್ಲ ಎಂದು ನಾಟಕಗಳ ನಿರ್ದೇಶನಕ್ಕಿಳಿದರು. ನಂತರ ನಾಟಕ ಬರೆಯೋಕ್ಕೆ ಶುರು ಮಾಡಿದರು. ಸೆಕ್ಷುವಲ್ ಪರ್ವರ್ಸಿಟಿ ಇನ್ ಷಿಕಾಗೋ, ಗ್ಲೆನ್‍ಗೆರಿ ಗ್ಲೆನ್ ರಾಸ್,  ಎ ಲೈಫ್ ಇನ ಥಿಯೇಟರ್ ಎನ್ನುವ ಅನೇಕ ಯಶಸ್ವೀ ನಾಟಕಗಳನ್ನು ಬರೆದರು. ಬರಹ ಮುಂದುವರೆಸುತ್ತ ಸಿನೆಮಾ ಬರೆಯಲು ಶುರು ಮಾಡಿದರು. ಸಿಡ್ನಿ ಲುಮೆಟ್‍ಯ ವರ್ಡಿಕ್ಟ್‍ನ ಚಿತ್ರಕಥೆಯನ್ನು ಬರೆದದ್ದು ಇವರೆ. ಅನೇಕ ಸಿನೆಮಾಗಳಿಗೆ ಬರೆದರೂ ಅದರ ಕ್ರೆಡಿಟ್ ತೆಗೆದುಕೊಳ್ಳಲಿಲ್ಲ. ಹಾಲಿವುಡ್‍ನ ಸ್ಕ್ರಿಪ್ಟ್ ಡಾಕ್ಟರ್ ಆಗಿಯೂ ಪ್ರಸಿದ್ಧರಾದವರು.  1989 ರಲ್ಲಿ ಶಾನ್ ಪೆನ್ ಮತ್ತು ರಾಬರ್ಟ್ ಡಿನೀರೊ ಅಭಿನಯದ ‘ವಿ ಆರ್ ನೋ ಏಂಜೆಲ್ಸ್’ ಎನ್ನುವ ಚಿತ್ರ ನೋಡಿದರೆ ಇವರ ಬರಹದಲ್ಲಿರುವ ನಿಷ್ಠುರತೆ ಎದ್ದು ಕಾಣುತ್ತದೆ.

ಮ್ಯಾಮೆಟ್ ಅವರು ತಮ್ಮ ಸಂಭಾಷಣೆಯ ಶೈಲಿಗಾಗಿಯೇ ವಿಖ್ಯಾತರಾದವರು.

‘ನೀವು ಸಂಭಾಷಣೆ ಚೆನ್ನಾಗಿ ಬರೆಯುತ್ತೀರಿ ಎಂತಿದ್ದರೆ, ಆ ಸಂಭಾಷಣೆಗಳನ್ನು ಸಿನೆಮಾದಲ್ಲಿ ಬಳಸದಿರುವುದೇ ಉತ್ತಮ.’ ಇದು ಸಂಭಾಷಣೆ ಬಗ್ಗೆ ಮ್ಯಾಮೆಟ್ ಹೇಳಿದ್ದು.  ಇಷ್ಟು ನಿಷ್ಠುರವಾಗಿ ಸಂಭಾಷಣೆ ಹೇಗೆ ಬರೆಯುತ್ತೀರಿ ಎಂದು ಕೇಳಿದಾಗ ‘‘ಆಗಿನ್ನೂ ನಮ್ಮ ಮನೆಗಳಲ್ಲಿ ಟಿವಿ ಬಂದಿರದ ಸಮಯ, ಸಂಜೆ ಮನೆಯ ಎಲ್ಲಾ ಸದಸ್ಯರು ಕುಳಿತುಕೊಂಡು ನಾವೆಷ್ಟು ದುಷ್ಟತನದ ಮಾತುಗಳನ್ನು ಆಡಬಹುದೋ ಎನ್ನುವ ಸಾಮಥ್ರ್ಯದ ಆಧಾರದ ಮೇಲೆ ನಮ್ಮನ್ನು ನಾವು ಶೋಚನೀಯ ಮಾಡಿಕೊಳ್ಳುತ್ತ ನಮ್ಮ ಸಮಯ ಕಳೆಯುತಿದ್ದೆವು. ‘ 

ಬರಹಕ್ಕಷ್ಟೇ ನಿಲ್ಲದೇ ಸಿನೆಮಾ ನಿರ್ದೇಶನಕ್ಕೂ ಲಗ್ಗೆ ಇಟ್ಟರು ಮ್ಯಾಮೆಟ್. ಹೌಸ್ ಆಫ್ ಗೇಮ್ಸ್ ಇವರ ನಿರ್ದೇಶನದ ಮೊದಲ ಚಿತ್ರ. ನಂತರ ಹೋಮಿಸೈಡ್, ಸ್ಪಾರ್ಟನ್, ಒಲಿಯಾನಾ, ಸ್ಪ್ಯಾನಿಷ್ ಪ್ರಿಸನರ್ ಇವರು ನಿದೇಶಿಸಿದ ಕೆಲವು ಚಿತ್ರಗಳು. ಇವುಗಳಲ್ಲಿ ಹೆಚ್ಚಿನ ಚಿತ್ರಗಳು ಬಾಕ್ಸಾಫೀಸಿನಲ್ಲಿ ಗೆಲ್ಲಲಿಲ್ಲ.

1991 ರಲ್ಲಿ ಮ್ಯಾಮೆಟ್  ಸಿನೆಮಾ ನಿರ್ದೇಶನದ ಬಗ್ಗೆ ‘ಆನ್ ಡಿರೆಕ್ಟಿಂಗ್ ಫಿಲ್ಮ್’ ಎನ್ನುವ ಪುಸ್ತಕ ಬರೆದರು. ನಮಗೆಲ್ಲಾ ಡೇವಿಡ್ ಮ್ಯಾಮೆಟ್ ಪರಿಚಯವಾಗಿದ್ದು ಈ ಪುಸ್ತಕದಿಂದಲೇ. ಸಿನೆಮಾ ನಿರ್ದೇಶನ ಕಲಿಯುವಾಗ ಓದಲೇಬೇಕಾದ ಪುಸ್ತಕಗಳಾದ ಟಾರ್ಕೋವಸ್ಕಿಯ ‘ಸ್ಕಲ್ಪ್ಟಿಂಗ್ ಇನ್ ಟೈಮ್’, ಸ್ಟೀವನ್ ಕಾಟ್ಜ್‍ನ ‘ಶಾಟ್ ಬೈ ಶಾಟ್’, ಆ್ಯಂಡ್ರಿ ವೈಯದಾ ಅವರ ‘ವೈಯದಾ ಆನ್ ಫಿಲ್ಮ್ಸ್’, ವಾಲ್ಟರ್ ಮರ್ಚ್‍ನ ‘ಇನ್ ದಿ ಬ್ಲಿಂಕ್ ಆಫ್ ಅ್ಯನ್ ಐ’ ಐಸಿನ್‍ಸ್ಟೇನ್ ನ ‘ಫಿಲ್ಮ್ ಸೆನ್ಸ್’ ಇವೆಲ್ಲವುಗಳಲ್ಲಿ ಡೇವಿಡ್ ಮ್ಯಾಮೆಟ್ ಅವರ ಪುಸ್ತಕ ಎಲ್ಲಕ್ಕಿಂತ ಅತಿರೇಕದ ನಿಲುವುಗಳನ್ನು ಹೊಂದಿದ ಪುಸ್ತಕ. ಇವರ ಪುಸ್ತಕದಲ್ಲಿರುವ ಥಿಯರಿ ಮತ್ತು ಇವರು ಪ್ರತಿಪಾದಿಸುವ ಥಿಯರಿಗಳನ್ನು ಅನುಷ್ಠಾನಗೊಳಿಸಿಕೊಳ್ಳಬೇಕೋ ಇಲ್ಲವೋ ಎನ್ನುವದನ್ನು ಚರ್ಚಿಸಬಹುದು ಆದರೆ ಇವರ ಥಿಯರಿಗಳನ್ನು ತಿಳಿದುಕೊಳ್ಳದೇ ಇರುವುದು ಒಬ್ಬ ನಿರ್ದೇಶಕನಿಗೆ ದೊಡ್ಡ ಲಾಸ್.

ಮುಂದೇನಾಗಬೇಕು ಎಂದು ತಿಳಿದುಕೊಳ್ಳಲು ಪ್ರೇಕ್ಷಕನನ್ನು ತುದಿಗಾಲಲ್ಲಿ ನಿಲ್ಲಿಸಬೇಕು, ಪ್ರತಿಯೊಂದು ಶಾಟ್ ಕೂಡ ಅದರ ಮುಂಚಿನ ಶಾಟ್‍ದಿಂದ ಕಥೆಯನ್ನು ಮುಂದುವರೆಸುವಂತಿರಬೇಕು, ಪ್ರೇಕ್ಷಕರಿಗೆ ಎಲ್ಲವನ್ನೂ ಹೇಳುವ ಅವಶ್ಯಕತೆ ಇಲ್ಲ,  ‘ಯಾವುದೇ ಸಿನೆಮಾದ ಮೊದಲ ಹತ್ತು ನಿಮಿಷಗಳನ್ನು ಕತ್ತರಿಸಿಬಿಡಿ, ಚೆನ್ನಾಗಾಗುತ್ತೆ.’ ‘ಸಿನೆಮಾ ಮಾಡುವುದು ಒಂದು ಜೋಕ್ ಇದ್ದಂತೆ, ಪ್ರೇಕ್ಷಕರು ಇನ್ನೇನೋ ನಿರೀಕ್ಸಿಸುತ್ತಿದ್ದಾಗ ಬೇರೇನೋ ಆಗುತ್ತೆ. ಹಾಗಿಲ್ಲದಿದ್ದರೆ ಏನಕ್ಕೆ ನೋಡಬೇಕು ನಿಮ್ಮ ಸಿನೆಮಾ?’

2003ರಲ್ಲಿ ಇರ್ಫಾನ್ ಮತ್ತು ನವಾಝುದ್ದಿನ್ ಸಿದ್ದಿಕಿ ಅಭಿನಯದ ‘ದಿ ಬೈಪಾಸ್’ ಎನ್ನುವ ಕಿರುಚಿತ್ರ ಬಿಡುಗಡೆಯಾಯಿತು. ಆ ಸಿನೆಮಾ ನೋಡಿದರೆ ಅದರ ನಿರ್ದೇಶಕ ಡೇವಿಡ್ ಮ್ಯಾಮೆಟ್‍ನಿಂದ ಎಷ್ಟು ಪ್ರಭಾವಿತರಾಗಿದ್ದಾರೆ ಎಂದು ಸುಲಭವಾಗಿ ತಿಳಿಯುತ್ತದೆ. ಆ ಚಿತ್ರಕ್ಕೆ ನೋಡುಗರಿಂದ, ವಿಮರ್ಶಕರಿಂದ ಮೆಚ್ಚುಗೆಯ ಸುರಿಮಳೆಯಾಯಿತು. ಅನೇಕ ಸಿನಿಹಬ್ಬಗಳಲ್ಲಿ ಪ್ರದರ್ಶಿತವಾಯಿತು. ಆಗತಾನೇ ಮ್ಯಾಮೆಟ್ ಅವರ ಪುಸ್ತಕ ಓದಿ ಪ್ರಭಾವಿತನಾಗಿದ್ದ ನನಗೆ ಆ ಚಿತ್ರ ನೋಡಿ ವಾಕರಿಗೆ ಬಂತು. ನಮಗೆಲ್ಲರಿಗೂ ಗೊತ್ತಿರುವಂತೆ ಸಿನೆಮಾ ಎನ್ನುವುದು ಕಥೆ ಹೇಳುವ ಒಂದು ಮಾಧ್ಯಮ. ದಿ ಬ್ಯಪಾಸ್ ಎನ್ನುವ ಚಿತ್ರದಲ್ಲಿ ಅದನ್ನು ಬಿಟ್ಟು ಆ ಮತಿಗೆಟ್ಟ ನಿರ್ದೇಶಕ ತನ್ನ ಕೌಶಲ್ಯವನ್ನು ಪ್ರದರ್ಶಿಸಲೆಂದೇ ಆ ಚಿತ್ರ ಮಾಡಿದ್ದು.

ಇಂತಹದ್ದೇ ದೌರ್ಬಲ್ಯವನ್ನು ಸ್ವತಃ ಮ್ಯಾಮೆಟ್ ಕೂಡ 2008ರಲ್ಲಿ ಬಂದ ತಮ್ಮ ‘ರೆಡ್‍ಬೆಲ್ಟ್’ ಮಿಕ್ಸಡ್ ಮಾರ್ಷಿಯಲ್ ಆರ್ಟ್‍ನ ಚಿತ್ರದಲ್ಲಿ ಪ್ರದರ್ಶಿಸಿದರು. ಅದು ಒಬ್ಬ ಮಾರ್ಷಿಯಲ್ ಆರ್ಟ್ ತರಬೇತುದಾರನ ಕಥೆ. ಅವನು ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುವುದು, ಅವನ ಹೆಂಡತಿ ಮಾಡಿಕೊಳ್ಳುವ ಸಾಲ, ಇವನ ಸಣ್ಣ ತಪ್ಪಿನಿಂದಾಗಿ ಒಬ್ಬ ಪೋಲೀಸ್ ಅಧಿಕಾರಿಯ ಆತ್ಮಹತ್ಯೆ, ಬಿಕ್ಕಟ್ಟಿನಿಂದ ಹೊರಬರುವ ಯಾವುದೇ ದಾರಿಕಾಣದಿದ್ದಾಗ ಇವನೇನು ಮಾಡುತ್ತಾನೆ ಎನ್ನವುದು ಚಿತ್ರದ ಸಾರಾಂಶ. ಚಿತ್ರ ಒಂದು ಕ್ಷಣವೂ ಬೋರ್ ಹೊಡೆಸುವುದಿಲ್ಲ, ಪ್ರತಯೊಂದು ಶಾಟ್‍ಗೆ ತನ್ನದೇ ಆದ ಉದ್ದೇಶವಿದ್ದು ಕಥೆಯನ್ನು ಯಶಸ್ವಿಯಾಗಿ ಮುಂದೊಯ್ಯುತ್ತದೆ.  ಚಿತ್ರಕಥೆ, ಅಭಿನಯ, ತಾಂತ್ರಿಕತೆ, ನಿರ್ದೇಶನ ಎಲ್ಲವೂ ಸರಿಯಾಗಿಯೇ ಇದ್ದರೂ ಮ್ಯಾಮೆಟ್ ಅವರು ತಮ್ಮ ಬರಹ ಮತ್ತು ನಿರ್ದೇಶನದ ತಮ್ಮದೇ ಸಿದ್ಧಾಂತಗಳಿಗೆ ಜೋತುಬೀಳುವುದರಿಂದ ಚಿತ್ರ ಸೋಲುತ್ತದೆ.

ಆದರೆ ಡೇವಿಡ್ ಮ್ಯಾಮೆಟ್ ಸಿನೆಮಾ ಇತಿಹಾಸದಲ್ಲಿ ಬಹುಮುಖ್ಯ ವ್ಯಕ್ತಿ.  ಸಂಭಾಷಣೆಗಳಲ್ಲಿ, ನಿರ್ದೇಶನದಲ್ಲಿ, ಚಿತ್ರಕಥೆಯಲ್ಲಿ ನಿಷ್ಠುರತೆಯನ್ನು ಕಲಿಸುತ್ತಿರುವ ಮ್ಯಾಮೆಟ್ ಇಂದಿಗೂ ಸಕ್ರಿಯವಾಗಿದ್ದಾರೆ. ವಿಶ್ವಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಒಳ್ಳೇ ಸಿನೆಮಾ ಮಾಡಲು ತಮ್ಮ ವಿಶಿಷ್ಟ್ ‘ಮ್ಯಾಮೆಟ್‍ಸ್ಪೀಕ್’ ನಿಂದ ಹುರಿದುಂಬಿಸುತ್ತಲೇ ಇದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...