Homeಕರ್ನಾಟಕಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು

ಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು

- Advertisement -
- Advertisement -

ನೂರರ ನೋಟ- 40

| ಎಚ್.ಎಸ್ ದೊರೆಸ್ವಾಮಿ |

ಹಿಂದುತ್ವ ಪ್ರತಿಪಾದಕ ಉತ್ತರ ಪ್ರದೇಶದ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲೆಯ ತಲೆಕೆಟ್ಟ ಹಿಂದುತ್ವ ಪ್ರತಿಪಾದಕರು ಗೋವಿನ ಹೆಸರಲ್ಲಿ ಮತೀಯ ದ್ವೇಷ ಸಾಧಿಸುವುದಕ್ಕಾಗಿ ಆಗಾಗ ಕೋಮುದಂಗೆ ಮಾಡಿಸುತ್ತಾರೆ; ಕೊಲೆ ಆಗುವಂತೆ ಮಾಡುತ್ತಾರೆ. ‘ಧರ್ಮವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಧರ್ಮೋರಕ್ಷತಿ ರಕ್ಷಿತಃ ಧರ್ಮವನ್ನು ರಕ್ಷಿಸುವವರನ್ನು ಧರ್ಮ ಕಾಪಾಡುತ್ತದೆ. ಆದ್ದರಿಂದ ಧರ್ಮವನ್ನು ರಕ್ಷಿಸಲು ಹೋರಾಡಬೇಕು. ಧರ್ಮಕ್ಕೆ ಹೋರಾಡದಿದ್ದರೆ ನಮ್ಮ ಸಮಾಜ ಎಲ್ಲಿ ಉಳಿಯುತ್ತದೆ’ ಎಂದು ಹಿಂದೂ ಮತಾಂಧರು, ಮುಸ್ಲಿಂ ಮತಾಂಧರು ವಾದಿಸುತ್ತಾರೆ.

ಈ ಧರ್ಮಾಂಧರಿಗೆ ಧರ್ಮ ರಕ್ಷಣೆ ತಮ್ಮ ಕರ್ತವ್ಯ ಎಂದು ಅನಿಸಿದಾಗ ಗೂಂಡಾಗಳನ್ನು ಸಾಕಿಕೊಳ್ಳುತ್ತಾರೆ. ಈ ಪಡೆ ಶಾಂತಿಕಾಲದಲ್ಲಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುವುದರಲ್ಲಿ ತೊಡಗುತ್ತಾರೆ ಮತ್ತು ಹೋರಾಡುವ ಸಂದರ್ಭ ಬಂದಾಗ ತಮ್ಮ ನಿಲುವನ್ನು ಒಪ್ಪದ ಜನರ ಮೇಲೆ ಬಿದ್ದು ಅವರನ್ನು ಕೊಲೆಮಾಡುವರು. ಹಣಕ್ಕಾಗಿ ಕೊಲೆಮಾಡಲು ಸುಪಾರಿ ಸ್ವೀಕರಿಸುವವರಿಗೂ ಈ ಮತಾಂಧರು ಸಾಕಿಕೊಂಡಿರುವ ಗೂಂಡಾಗಳಿಗೂ ಏನು ವ್ಯತ್ಯಾಸ? ಧರ್ಮಕ್ಕೂ ಈ ಗೂಂಡಾಗಳಿಗೂ ಯಾವ ನಂಟು? ಗೂಂಡಾಗಳಿಗೊಂದು ಧರ್ಮವಿದೆಯೇ? ಸಿದ್ಧಾಂತವಿದೆಯೇ? ಹಿಂದುತ್ವ ಪ್ರತಿಪಾದಕರು ತಾವೇ ಗೂಂಡಾಗಳಾಗಿರುವುದರಿಂದ ಸಂದರ್ಭ ಸಿಕ್ಕರೆ ಇವರು ಸಮಸ್ತ ಅಧಿಕಾರವನ್ನು ಕರವಶ ಮಾಡಿಕೊಂಡು ವಿಜೃಂಭಿಸುವರು. ತಾತ್ಪರ್ಯವಿಷ್ಟೇ. ಯಾರು ಧರ್ಮ ರಕ್ಷಣೆಗಾಗಿ ಗೂಂಡಾಗಳನ್ನು ಬೆಳೆಸುವರೋ-ಬಳಸುವರೋ ಅವರು ಧರ್ಮವನ್ನು ಹೇಗೆ ಪ್ರತಿಪಾದಿಸುತ್ತಾರೆ?

ಭೀಮನ ಗದೆಯಾಗಲೀ, ಅರ್ಜುನನ ಗಾಂಡೀವವಾಗಲೀ ಧರ್ಮವನ್ನು ರಕ್ಷಿಸುವ ಸಾಧನವಾಗಲಾರದು. ಧರ್ಮದಿಂದ ನಡೆದುಕೊಂಡಿದ್ದರಿಂದ ಅವರು ಹೊತ್ತಿದ್ದ ಅಯುಧಗಳಿಗೆ ಕೀರ್ತಿ ಬಂತು. ಹಾಗಿಲ್ಲವಾದರೆ ಭೀಮ ಅರ್ಜುನರು ಕೊಲೆಗಡುಕರು ಅನ್ನಿಸಿಕೊಳ್ಳುತ್ತಿದ್ದರು.

ಹಿಂದುತ್ವ ಪ್ರತಿಪಾದಕರು ಯಾರ ಕೈಯಲ್ಲಿ ಗದೆ ಇದೆಯೋ ಅವರಿಗೇ ಜಯ ಎಂದು ಭಾವಿಸುತ್ತಾರೆ. ಧರ್ಮ ಅವರಿಗೆ ಒಂದು ಕೋಣವಿದ್ದಂತೆ. ಯಾರು ಅಪಮಾರ್ಗದಲ್ಲಿ ಗೆಲ್ಲುವರೋ ಅವರು ಧರ್ಮಿಷ್ಟರು, ಅವರದು ಕೋಣ. ಧರ್ಮದ ರಕ್ಷಣೆ ಎಂದರೆ ಧರ್ಮಿಷ್ಟರಾಗಿ ನಡೆದುಕೊಳ್ಳುವುದು.

ಹಿಂದೂ ಮತಾಂಧರು, ಮುಸ್ಲಿಮ್ ಮತಾಂಧರು, ಕ್ರಿಶ್ಚಿಯನ್ ಮತಾಂಧರು ಧರ್ಮ ಎಂದರೆ, ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಧರ್ಮ ಎಂದು ಅರ್ಥೈಸುತ್ತಾರೆ. ಇವೆಲ್ಲ ಹೊಡೆದಾಡುವ ಧರ್ಮಗಳು. ಬಡಿದಾಡುವ ಧರ್ಮಗಳು ಧರ್ಮವೇ ಅಲ್ಲ. ಯಾವ ಧರ್ಮವು ಪರಸ್ಪರ ಹೊಡೆದಾಡಲು ಹೇಳಿಲ್ಲ. ಶಾಂತಿಯನ್ನು ಬೋಧಿಸುತ್ತದೆ. ಆದರೆ ಈ ಧರ್ಮಾಂಧರು ಧರ್ಮವನ್ನು ಬಳಸಿಕೊಂಡು ಕೋಮು ಸಂಘರ್ಷದ ಕೆಲಸವನ್ನೇ ಮಾಡುತ್ತಾರೆ. ಕ್ರಿಶ್ಚಿಯನ್ ಜನಾಂಗದವರು ಮಾಡಿರುವಷ್ಟು ಯುದ್ಧವನ್ನು ಬೇರಾವ ಜನಾಂಗವೂ ಮಾಡಿಲ್ಲ.

ಎಲ್ಲಾ ಮತಗಳ ಹೊಂದಾಣಿಕೆಯೇ ಧರ್ಮ. ಪರಸ್ಪರ ಬಡಿದಾಡುವ ಧರ್ಮ ಧರ್ಮವೇ ಅಲ್ಲ. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಮುಂತಾದ ಎಲ್ಲಾ ಧರ್ಮಗಳ ಅನುಯಾಯಿಗಳು ‘ಧರ್ಮ’ ಪದವನ್ನು ತಮ್ಮ ವಾದಕ್ಕೆ ಅನುಗುಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಸತ್ಯಂವದ, ಧರ್ಮಂಚರ ಎಂದು ನಮ್ಮ ಉಪನಿಷತ್ತು ಹೇಳುತ್ತದೆ. ಸತ್ಯವನ್ನು ನುಡಿ ಧರ್ಮವನ್ನು ಆಚರಣೆ ಮಾಡು ಎಂದು ಇದರ ಅರ್ಥ. ‘ಧರ್ಮ’ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಅದು ವಿಶ್ವ ಧರ್ಮವನ್ನು ಪ್ರತಿಪಾದಿಸುತ್ತದೆ. ಎಲ್ಲಾ ಧರ್ಮಗಳೂ ಅಂಗೀಕರಿಸಬೇಕಾದ ಧರ್ಮ ಅದು, ವಿಶ್ವಧರ್ಮ. ಯಾರನ್ನೂ ದ್ವೇಷಿಸಲು ಹೇಳುವುದಿಲ್ಲ. ಯಾವ ಧರ್ಮವನ್ನೂ ಅದು ಅಲ್ಲಗಳೆಯುವುದಿಲ್ಲ. ಧರ್ಮದ ಹೆಸರಿನಲ್ಲಿ ಇತರ ಧರ್ಮಗಳ ಮೇಲೆ ದಾಳಿಮಾಡಲು ದ್ವೇಷ ಬುದ್ಧಿಯಿಂದ ನಡೆದುಕೊಳ್ಳಲು ಹೇಳುವುದಿಲ್ಲ. ಶ್ರೀರಾಮಕೃಷ್ಣ ಪರಮಹಂಸರು ವಿಶ್ವ ಧರ್ಮ ಪರಿಪಾಲಕರು. ಎಲ್ಲಾ ಮತಗಳಲ್ಲಿರುವ ಉತ್ತಮ ವಿಚಾರಗಳನ್ನು ಹಿಂದೂ ಧರ್ಮ ಅಳವಡಿಸಿಕೊಳ್ಳಬೇಕೆಂದು ಅವರು ಬಯಸಿ, ಸರ್ವಧರ್ಮ ಸಮನ್ವಯದ ಮಾತನಾಡಿದ್ದರು. ಇತರ ಮತಗಳ ಸಂಸ್ಥಾಪಕರು ಪ್ರತಿಪಾದಿಸಿದ ಉತ್ತಮ ಅಂಶಗಳನ್ನು ಹಿಂದೂ ಧರ್ಮಕ್ಕೆ ಜೋಡಿಸಿದರು. ಹಿಂದೂ ಧರ್ಮದಲ್ಲಿ ಪ್ರತಿಪಾದಿಸದಿರುವ ಅನೇಕ ಒಳ್ಳೆಯ ಅಂಶಗಳು ಇತರ ಧರ್ಮಗಳಲ್ಲಿರುವುದನ್ನು ಅರಿತು ಅವನ್ನು ಹಿಂದೂ ಧರ್ಮಕ್ಕೆ ಅಳವಡಿಸಲು ಮುಂದಾದರು. ಪೂಜ್ಯ ವಿನೋಬಾ ಭಾವೆಯವರು ಬೈಬಲ್ ಕುರಾನ್‍ಗಳಲ್ಲಿರುವ ಮೌಲಿಕ ತತ್ವಗಳನ್ನು ಆಯ್ದು ಕಲೆ ಹಾಕಿ ‘ಎಸೆನ್ಸ್ ಆಫ್ ಇಸ್ಲಾಂ, ಎಸೆನ್ಸ್ ಆಫ್ ಕ್ರಿಶ್ಚಿಯಾನಿಟಿ’ ಶೀರ್ಷಿಕೆಯು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮತ ಧರ್ಮಗಳ ಹೊಂದಾಣಿಕೆಯ ಕೆಲಸ ಇದು.

ಹಿಂದೂ ಮತಾಂಧ ಸಂಸ್ಥೆಗಳವರು ಈ ಲೋಕ ಕಲ್ಯಾಣದ ಕೆಲಸ ಮಾಡುವ ಬದಲು, ಮತಧರ್ಮಗಳನ್ನು ಒಡೆಯುವ, ಆ ಮೂಲಕ ಮುಗ್ಧ ಹಿಂದೂಗಳ ಭಾವನೆಗಳನ್ನು ಕೆರಳಿಸಿ ಅನ್ಯ ಧರ್ಮೀಯರನ್ನು ಶತ್ರುಗಳಂತೆ ಕಾಣಲು ಕೈ ಜೋಡಿಸುತ್ತಾರೆ. ಕೃಷ್ಣ ಗೋಕುಲಕ್ಕೆ ಬೆಂಕಿ ಬಿದ್ದಾಗ ಗೋವರ್ಧನ ಪರ್ವತವನ್ನು ಮೇಲೆತ್ತಿ ಅದರ ತಳಗೆ ಗೋಕುಲದವರನ್ನೆಲ್ಲಾ ಇಟ್ಟು ಕಾಪಾಡಿದನಂತೆ. ಆದರೆ ಹಿಂದೂತ್ವ ಪ್ರತಿಪಾದಕರು ಸಮಾಜಕ್ಕೆ ಸಂದರ್ಭ ಒದಗಿದಾಗಲೆಲ್ಲ ಬೆಂಕಿ ಹಾಕುವ ತಯಾರಿಯಲ್ಲಿರುವವರೇ!

ಎಲ್ಲಾ ಮತ ಧರ್ಮಗಳಲ್ಲಿ ಕೆಲವು ಲೋಪ ದೋಷಗಳು ಇದ್ದೇ ಇವೆ. ಹಿಂದೂ ಧರ್ಮ ಇದಕ್ಕೆ ಹೊರತಲ್ಲ. ಹಿಂದೂ ಧರ್ಮದಲ್ಲಿ ಜಾತೀಯತೆ, ಶ್ರೇಣೀಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಹೆಣ್ಣಿನ ಬಗೆಗೆ ತಾರತಮ್ಯ, ಹೀಗೆ ಹತ್ತಾರು ಲೋಪದೋಷಗಳಿವೆ.

ಅದರ ಜೊತೆಗೆ ಹಿಂದೂ ಮತಾಂಧತೆ, ಅನ್ಯ ಧರ್ಮೀಯರ ವಿಚಾರದಲ್ಲಿ ಕ್ರೌರ್ಯ, ಅಸಹನೆ, ವೈಚಾರಿಕ ಭಿನ್ನಾಭಿಪ್ರಾಯ ಉಳ್ಳವರನ್ನು, ಹಿಂದುತ್ವ ಪ್ರತಿಪಾದಕರನ್ನು ಪ್ರಶ್ನಿಸುವವರನ್ನು ವ್ಯವಸ್ಥಿತವಾಗಿ ಕೊಲೆ ಮಾಡುವುದು, ಸೆರೆಮನೆಗೆ ದೂಡುವುದು, ಖಟ್ಲೆಗಳನ್ನು ಹಾಕುವುದು ಅವ್ಯಾಹತವಾಗಿ ನಡೆದಿದೆ. ಇಷ್ಟೆಲ್ಲಾ ಅನಾಹುತ ಹಿಂದುತ್ವ ಪ್ರತಿಪಾದಕರಿಂದ ಮೇಲಿಂದ ಮೇಲೆ ನಡೆಯುತ್ತಿದ್ದರೂ, ಪ್ರಧಾನಿ ಮೋದಿಯವರು ಒಂದು ಸಾರಿಯೂ ಈ ಕುರಿತು ಪ್ರಸ್ತಾಪಿಸಿದ್ದೇ ಇಲ್ಲ. ಇಷ್ಟೇ ಅಲ್ಲ, ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅವರೂ ಅಮಿತ್ ಷಾರವರು ಕೂಡಿಕೊಂಡು ವ್ಯವಸ್ಥಿತವಾಗಿ ಮುಸ್ಲಿಮರ ಸಾಲ್ಗೊಲೆ ಮಾಡಿಸಿದ್ದೂ ಜಗಜ್ಜಾಹೀರಾಗಿದೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಈ ಎಲ್ಲ ಪಿಡುಗುಗಳಿಂದ ಹಿಂದೂ ಮತವನ್ನು ಪಾರು ಮಾಡಲೇಬೇಕಾದ್ದು ಮತದಾರರ ಆದ್ಯ ಕರ್ತವ್ಯವಾಗಿದೆ. ಆಸ್ಟ್ರೇಲಿಯಾ ಪ್ರಜೆಯೊಬ್ಬ ನ್ಯೂಜಿಲೆಂಡಿನಲ್ಲಿ ನೌಕರಿ ಮಾಡುತ್ತಿದ್ದು, ಕಳೆದ ಶುಕ್ರವಾರ 2 ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 50 ಮುಸ್ಲಿಂ ಮುಗ್ಧರನ್ನು ಬಂದೂಕಿನಿಂದ ಹೊಡೆದು ಕೊಂದಿದ್ದಾನೆ. ಅವನು ಇವರನ್ನು ಏಕೆ ಕೊಂದನೆಂಬುದಕ್ಕೆ, ಬಿಳಿಯರಿಗೆ ಮಾತ್ರ ಈ ದೇಶ ಇರುವುದು ಎಂದು ಹೇಳಿದ್ದಾನೆ.

ಭಾರತದಲ್ಲಿ ಆರ್‍ಎಸ್‍ಎಸ್, ಬಿಜೆಪಿ, ಮೋದಿ ಹೇಳುವುದೂ ಇದನ್ನೇ. ಭಾರತ ಹಿಂದೂಗಳ ರಾಷ್ಟ್ರ, ಇಲ್ಲಿ ಬೇರೆಯವರಿಗೆ ಇರಲು ಅವಕಾಶವಿಲ್ಲ, ಇದ್ದರೂ ಅವರು 2ನೇ ದರ್ಜೆಯ ಪ್ರಜೆಗಳಾಗಿ ಇರಬೇಕು.

ಈ ವಿಚಿತ್ರ ನಿಲುವಿನ ಕೊಲೆಗಡುಕ ಜನ ಅಲ್ಲೊಬ್ಬರು ಇಲ್ಲೊಬ್ಬರು ಇದ್ದರೆ, ಭಾರತದಲ್ಲಿ ಇಂತಹ ತಲೆ ಕೆಟ್ಟವರ ಸಂಘಟನೆಗಳೇ ಇವೆ. ರಾಜಕೀಯದಲ್ಲಿ ವಿಷ ಸೇರಿಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...