Homeಕರ್ನಾಟಕಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು

ಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು

- Advertisement -
- Advertisement -

ನೂರರ ನೋಟ- 40

| ಎಚ್.ಎಸ್ ದೊರೆಸ್ವಾಮಿ |

ಹಿಂದುತ್ವ ಪ್ರತಿಪಾದಕ ಉತ್ತರ ಪ್ರದೇಶದ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲೆಯ ತಲೆಕೆಟ್ಟ ಹಿಂದುತ್ವ ಪ್ರತಿಪಾದಕರು ಗೋವಿನ ಹೆಸರಲ್ಲಿ ಮತೀಯ ದ್ವೇಷ ಸಾಧಿಸುವುದಕ್ಕಾಗಿ ಆಗಾಗ ಕೋಮುದಂಗೆ ಮಾಡಿಸುತ್ತಾರೆ; ಕೊಲೆ ಆಗುವಂತೆ ಮಾಡುತ್ತಾರೆ. ‘ಧರ್ಮವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಧರ್ಮೋರಕ್ಷತಿ ರಕ್ಷಿತಃ ಧರ್ಮವನ್ನು ರಕ್ಷಿಸುವವರನ್ನು ಧರ್ಮ ಕಾಪಾಡುತ್ತದೆ. ಆದ್ದರಿಂದ ಧರ್ಮವನ್ನು ರಕ್ಷಿಸಲು ಹೋರಾಡಬೇಕು. ಧರ್ಮಕ್ಕೆ ಹೋರಾಡದಿದ್ದರೆ ನಮ್ಮ ಸಮಾಜ ಎಲ್ಲಿ ಉಳಿಯುತ್ತದೆ’ ಎಂದು ಹಿಂದೂ ಮತಾಂಧರು, ಮುಸ್ಲಿಂ ಮತಾಂಧರು ವಾದಿಸುತ್ತಾರೆ.

ಈ ಧರ್ಮಾಂಧರಿಗೆ ಧರ್ಮ ರಕ್ಷಣೆ ತಮ್ಮ ಕರ್ತವ್ಯ ಎಂದು ಅನಿಸಿದಾಗ ಗೂಂಡಾಗಳನ್ನು ಸಾಕಿಕೊಳ್ಳುತ್ತಾರೆ. ಈ ಪಡೆ ಶಾಂತಿಕಾಲದಲ್ಲಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುವುದರಲ್ಲಿ ತೊಡಗುತ್ತಾರೆ ಮತ್ತು ಹೋರಾಡುವ ಸಂದರ್ಭ ಬಂದಾಗ ತಮ್ಮ ನಿಲುವನ್ನು ಒಪ್ಪದ ಜನರ ಮೇಲೆ ಬಿದ್ದು ಅವರನ್ನು ಕೊಲೆಮಾಡುವರು. ಹಣಕ್ಕಾಗಿ ಕೊಲೆಮಾಡಲು ಸುಪಾರಿ ಸ್ವೀಕರಿಸುವವರಿಗೂ ಈ ಮತಾಂಧರು ಸಾಕಿಕೊಂಡಿರುವ ಗೂಂಡಾಗಳಿಗೂ ಏನು ವ್ಯತ್ಯಾಸ? ಧರ್ಮಕ್ಕೂ ಈ ಗೂಂಡಾಗಳಿಗೂ ಯಾವ ನಂಟು? ಗೂಂಡಾಗಳಿಗೊಂದು ಧರ್ಮವಿದೆಯೇ? ಸಿದ್ಧಾಂತವಿದೆಯೇ? ಹಿಂದುತ್ವ ಪ್ರತಿಪಾದಕರು ತಾವೇ ಗೂಂಡಾಗಳಾಗಿರುವುದರಿಂದ ಸಂದರ್ಭ ಸಿಕ್ಕರೆ ಇವರು ಸಮಸ್ತ ಅಧಿಕಾರವನ್ನು ಕರವಶ ಮಾಡಿಕೊಂಡು ವಿಜೃಂಭಿಸುವರು. ತಾತ್ಪರ್ಯವಿಷ್ಟೇ. ಯಾರು ಧರ್ಮ ರಕ್ಷಣೆಗಾಗಿ ಗೂಂಡಾಗಳನ್ನು ಬೆಳೆಸುವರೋ-ಬಳಸುವರೋ ಅವರು ಧರ್ಮವನ್ನು ಹೇಗೆ ಪ್ರತಿಪಾದಿಸುತ್ತಾರೆ?

ಭೀಮನ ಗದೆಯಾಗಲೀ, ಅರ್ಜುನನ ಗಾಂಡೀವವಾಗಲೀ ಧರ್ಮವನ್ನು ರಕ್ಷಿಸುವ ಸಾಧನವಾಗಲಾರದು. ಧರ್ಮದಿಂದ ನಡೆದುಕೊಂಡಿದ್ದರಿಂದ ಅವರು ಹೊತ್ತಿದ್ದ ಅಯುಧಗಳಿಗೆ ಕೀರ್ತಿ ಬಂತು. ಹಾಗಿಲ್ಲವಾದರೆ ಭೀಮ ಅರ್ಜುನರು ಕೊಲೆಗಡುಕರು ಅನ್ನಿಸಿಕೊಳ್ಳುತ್ತಿದ್ದರು.

ಹಿಂದುತ್ವ ಪ್ರತಿಪಾದಕರು ಯಾರ ಕೈಯಲ್ಲಿ ಗದೆ ಇದೆಯೋ ಅವರಿಗೇ ಜಯ ಎಂದು ಭಾವಿಸುತ್ತಾರೆ. ಧರ್ಮ ಅವರಿಗೆ ಒಂದು ಕೋಣವಿದ್ದಂತೆ. ಯಾರು ಅಪಮಾರ್ಗದಲ್ಲಿ ಗೆಲ್ಲುವರೋ ಅವರು ಧರ್ಮಿಷ್ಟರು, ಅವರದು ಕೋಣ. ಧರ್ಮದ ರಕ್ಷಣೆ ಎಂದರೆ ಧರ್ಮಿಷ್ಟರಾಗಿ ನಡೆದುಕೊಳ್ಳುವುದು.

ಹಿಂದೂ ಮತಾಂಧರು, ಮುಸ್ಲಿಮ್ ಮತಾಂಧರು, ಕ್ರಿಶ್ಚಿಯನ್ ಮತಾಂಧರು ಧರ್ಮ ಎಂದರೆ, ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಧರ್ಮ ಎಂದು ಅರ್ಥೈಸುತ್ತಾರೆ. ಇವೆಲ್ಲ ಹೊಡೆದಾಡುವ ಧರ್ಮಗಳು. ಬಡಿದಾಡುವ ಧರ್ಮಗಳು ಧರ್ಮವೇ ಅಲ್ಲ. ಯಾವ ಧರ್ಮವು ಪರಸ್ಪರ ಹೊಡೆದಾಡಲು ಹೇಳಿಲ್ಲ. ಶಾಂತಿಯನ್ನು ಬೋಧಿಸುತ್ತದೆ. ಆದರೆ ಈ ಧರ್ಮಾಂಧರು ಧರ್ಮವನ್ನು ಬಳಸಿಕೊಂಡು ಕೋಮು ಸಂಘರ್ಷದ ಕೆಲಸವನ್ನೇ ಮಾಡುತ್ತಾರೆ. ಕ್ರಿಶ್ಚಿಯನ್ ಜನಾಂಗದವರು ಮಾಡಿರುವಷ್ಟು ಯುದ್ಧವನ್ನು ಬೇರಾವ ಜನಾಂಗವೂ ಮಾಡಿಲ್ಲ.

ಎಲ್ಲಾ ಮತಗಳ ಹೊಂದಾಣಿಕೆಯೇ ಧರ್ಮ. ಪರಸ್ಪರ ಬಡಿದಾಡುವ ಧರ್ಮ ಧರ್ಮವೇ ಅಲ್ಲ. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಮುಂತಾದ ಎಲ್ಲಾ ಧರ್ಮಗಳ ಅನುಯಾಯಿಗಳು ‘ಧರ್ಮ’ ಪದವನ್ನು ತಮ್ಮ ವಾದಕ್ಕೆ ಅನುಗುಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಸತ್ಯಂವದ, ಧರ್ಮಂಚರ ಎಂದು ನಮ್ಮ ಉಪನಿಷತ್ತು ಹೇಳುತ್ತದೆ. ಸತ್ಯವನ್ನು ನುಡಿ ಧರ್ಮವನ್ನು ಆಚರಣೆ ಮಾಡು ಎಂದು ಇದರ ಅರ್ಥ. ‘ಧರ್ಮ’ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಅದು ವಿಶ್ವ ಧರ್ಮವನ್ನು ಪ್ರತಿಪಾದಿಸುತ್ತದೆ. ಎಲ್ಲಾ ಧರ್ಮಗಳೂ ಅಂಗೀಕರಿಸಬೇಕಾದ ಧರ್ಮ ಅದು, ವಿಶ್ವಧರ್ಮ. ಯಾರನ್ನೂ ದ್ವೇಷಿಸಲು ಹೇಳುವುದಿಲ್ಲ. ಯಾವ ಧರ್ಮವನ್ನೂ ಅದು ಅಲ್ಲಗಳೆಯುವುದಿಲ್ಲ. ಧರ್ಮದ ಹೆಸರಿನಲ್ಲಿ ಇತರ ಧರ್ಮಗಳ ಮೇಲೆ ದಾಳಿಮಾಡಲು ದ್ವೇಷ ಬುದ್ಧಿಯಿಂದ ನಡೆದುಕೊಳ್ಳಲು ಹೇಳುವುದಿಲ್ಲ. ಶ್ರೀರಾಮಕೃಷ್ಣ ಪರಮಹಂಸರು ವಿಶ್ವ ಧರ್ಮ ಪರಿಪಾಲಕರು. ಎಲ್ಲಾ ಮತಗಳಲ್ಲಿರುವ ಉತ್ತಮ ವಿಚಾರಗಳನ್ನು ಹಿಂದೂ ಧರ್ಮ ಅಳವಡಿಸಿಕೊಳ್ಳಬೇಕೆಂದು ಅವರು ಬಯಸಿ, ಸರ್ವಧರ್ಮ ಸಮನ್ವಯದ ಮಾತನಾಡಿದ್ದರು. ಇತರ ಮತಗಳ ಸಂಸ್ಥಾಪಕರು ಪ್ರತಿಪಾದಿಸಿದ ಉತ್ತಮ ಅಂಶಗಳನ್ನು ಹಿಂದೂ ಧರ್ಮಕ್ಕೆ ಜೋಡಿಸಿದರು. ಹಿಂದೂ ಧರ್ಮದಲ್ಲಿ ಪ್ರತಿಪಾದಿಸದಿರುವ ಅನೇಕ ಒಳ್ಳೆಯ ಅಂಶಗಳು ಇತರ ಧರ್ಮಗಳಲ್ಲಿರುವುದನ್ನು ಅರಿತು ಅವನ್ನು ಹಿಂದೂ ಧರ್ಮಕ್ಕೆ ಅಳವಡಿಸಲು ಮುಂದಾದರು. ಪೂಜ್ಯ ವಿನೋಬಾ ಭಾವೆಯವರು ಬೈಬಲ್ ಕುರಾನ್‍ಗಳಲ್ಲಿರುವ ಮೌಲಿಕ ತತ್ವಗಳನ್ನು ಆಯ್ದು ಕಲೆ ಹಾಕಿ ‘ಎಸೆನ್ಸ್ ಆಫ್ ಇಸ್ಲಾಂ, ಎಸೆನ್ಸ್ ಆಫ್ ಕ್ರಿಶ್ಚಿಯಾನಿಟಿ’ ಶೀರ್ಷಿಕೆಯು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮತ ಧರ್ಮಗಳ ಹೊಂದಾಣಿಕೆಯ ಕೆಲಸ ಇದು.

ಹಿಂದೂ ಮತಾಂಧ ಸಂಸ್ಥೆಗಳವರು ಈ ಲೋಕ ಕಲ್ಯಾಣದ ಕೆಲಸ ಮಾಡುವ ಬದಲು, ಮತಧರ್ಮಗಳನ್ನು ಒಡೆಯುವ, ಆ ಮೂಲಕ ಮುಗ್ಧ ಹಿಂದೂಗಳ ಭಾವನೆಗಳನ್ನು ಕೆರಳಿಸಿ ಅನ್ಯ ಧರ್ಮೀಯರನ್ನು ಶತ್ರುಗಳಂತೆ ಕಾಣಲು ಕೈ ಜೋಡಿಸುತ್ತಾರೆ. ಕೃಷ್ಣ ಗೋಕುಲಕ್ಕೆ ಬೆಂಕಿ ಬಿದ್ದಾಗ ಗೋವರ್ಧನ ಪರ್ವತವನ್ನು ಮೇಲೆತ್ತಿ ಅದರ ತಳಗೆ ಗೋಕುಲದವರನ್ನೆಲ್ಲಾ ಇಟ್ಟು ಕಾಪಾಡಿದನಂತೆ. ಆದರೆ ಹಿಂದೂತ್ವ ಪ್ರತಿಪಾದಕರು ಸಮಾಜಕ್ಕೆ ಸಂದರ್ಭ ಒದಗಿದಾಗಲೆಲ್ಲ ಬೆಂಕಿ ಹಾಕುವ ತಯಾರಿಯಲ್ಲಿರುವವರೇ!

ಎಲ್ಲಾ ಮತ ಧರ್ಮಗಳಲ್ಲಿ ಕೆಲವು ಲೋಪ ದೋಷಗಳು ಇದ್ದೇ ಇವೆ. ಹಿಂದೂ ಧರ್ಮ ಇದಕ್ಕೆ ಹೊರತಲ್ಲ. ಹಿಂದೂ ಧರ್ಮದಲ್ಲಿ ಜಾತೀಯತೆ, ಶ್ರೇಣೀಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಹೆಣ್ಣಿನ ಬಗೆಗೆ ತಾರತಮ್ಯ, ಹೀಗೆ ಹತ್ತಾರು ಲೋಪದೋಷಗಳಿವೆ.

ಅದರ ಜೊತೆಗೆ ಹಿಂದೂ ಮತಾಂಧತೆ, ಅನ್ಯ ಧರ್ಮೀಯರ ವಿಚಾರದಲ್ಲಿ ಕ್ರೌರ್ಯ, ಅಸಹನೆ, ವೈಚಾರಿಕ ಭಿನ್ನಾಭಿಪ್ರಾಯ ಉಳ್ಳವರನ್ನು, ಹಿಂದುತ್ವ ಪ್ರತಿಪಾದಕರನ್ನು ಪ್ರಶ್ನಿಸುವವರನ್ನು ವ್ಯವಸ್ಥಿತವಾಗಿ ಕೊಲೆ ಮಾಡುವುದು, ಸೆರೆಮನೆಗೆ ದೂಡುವುದು, ಖಟ್ಲೆಗಳನ್ನು ಹಾಕುವುದು ಅವ್ಯಾಹತವಾಗಿ ನಡೆದಿದೆ. ಇಷ್ಟೆಲ್ಲಾ ಅನಾಹುತ ಹಿಂದುತ್ವ ಪ್ರತಿಪಾದಕರಿಂದ ಮೇಲಿಂದ ಮೇಲೆ ನಡೆಯುತ್ತಿದ್ದರೂ, ಪ್ರಧಾನಿ ಮೋದಿಯವರು ಒಂದು ಸಾರಿಯೂ ಈ ಕುರಿತು ಪ್ರಸ್ತಾಪಿಸಿದ್ದೇ ಇಲ್ಲ. ಇಷ್ಟೇ ಅಲ್ಲ, ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅವರೂ ಅಮಿತ್ ಷಾರವರು ಕೂಡಿಕೊಂಡು ವ್ಯವಸ್ಥಿತವಾಗಿ ಮುಸ್ಲಿಮರ ಸಾಲ್ಗೊಲೆ ಮಾಡಿಸಿದ್ದೂ ಜಗಜ್ಜಾಹೀರಾಗಿದೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಈ ಎಲ್ಲ ಪಿಡುಗುಗಳಿಂದ ಹಿಂದೂ ಮತವನ್ನು ಪಾರು ಮಾಡಲೇಬೇಕಾದ್ದು ಮತದಾರರ ಆದ್ಯ ಕರ್ತವ್ಯವಾಗಿದೆ. ಆಸ್ಟ್ರೇಲಿಯಾ ಪ್ರಜೆಯೊಬ್ಬ ನ್ಯೂಜಿಲೆಂಡಿನಲ್ಲಿ ನೌಕರಿ ಮಾಡುತ್ತಿದ್ದು, ಕಳೆದ ಶುಕ್ರವಾರ 2 ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 50 ಮುಸ್ಲಿಂ ಮುಗ್ಧರನ್ನು ಬಂದೂಕಿನಿಂದ ಹೊಡೆದು ಕೊಂದಿದ್ದಾನೆ. ಅವನು ಇವರನ್ನು ಏಕೆ ಕೊಂದನೆಂಬುದಕ್ಕೆ, ಬಿಳಿಯರಿಗೆ ಮಾತ್ರ ಈ ದೇಶ ಇರುವುದು ಎಂದು ಹೇಳಿದ್ದಾನೆ.

ಭಾರತದಲ್ಲಿ ಆರ್‍ಎಸ್‍ಎಸ್, ಬಿಜೆಪಿ, ಮೋದಿ ಹೇಳುವುದೂ ಇದನ್ನೇ. ಭಾರತ ಹಿಂದೂಗಳ ರಾಷ್ಟ್ರ, ಇಲ್ಲಿ ಬೇರೆಯವರಿಗೆ ಇರಲು ಅವಕಾಶವಿಲ್ಲ, ಇದ್ದರೂ ಅವರು 2ನೇ ದರ್ಜೆಯ ಪ್ರಜೆಗಳಾಗಿ ಇರಬೇಕು.

ಈ ವಿಚಿತ್ರ ನಿಲುವಿನ ಕೊಲೆಗಡುಕ ಜನ ಅಲ್ಲೊಬ್ಬರು ಇಲ್ಲೊಬ್ಬರು ಇದ್ದರೆ, ಭಾರತದಲ್ಲಿ ಇಂತಹ ತಲೆ ಕೆಟ್ಟವರ ಸಂಘಟನೆಗಳೇ ಇವೆ. ರಾಜಕೀಯದಲ್ಲಿ ವಿಷ ಸೇರಿಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....