Homeಕರ್ನಾಟಕತೇಜಸ್ವಿ ಸೂರ್ಯನನ್ನು ಸೋಲಿಸಲು ಬಿಜೆಪಿಯೊಳಗೆ ಅರ್ಧ ಪರಿವಾರ ಸಜ್ಜು

ತೇಜಸ್ವಿ ಸೂರ್ಯನನ್ನು ಸೋಲಿಸಲು ಬಿಜೆಪಿಯೊಳಗೆ ಅರ್ಧ ಪರಿವಾರ ಸಜ್ಜು

- Advertisement -
- Advertisement -

ಹೌದು, ಬಿಜೆಪಿ ಮತ್ತು ಸಂಘಪರಿವಾರದ ಒಳಗೆ ಇದೇನೂ ಗುಟ್ಟಿನ ವಿಷಯವಾಗುಳಿದಲ್ಲ. ಸೋಮಣ್ಣರ ಬಹಿರಂಗ ಅಸಮಾಧಾನ ಚಾನೆಲ್‍ಗಳಲ್ಲಿ ಸುದ್ದಿಯಾಗಿದೆ. ಆದರೆ, ಚಕ್ರವರ್ತಿ ಸೂಲಿಬೆಲೆ ಸ್ವತಃ ವಾಟ್ಸಾಪ್ ಸಂದೇಶ ಹರಿಬಿಟ್ಟಿರುವುದು ಮತ್ತು ಅವುಗಳ ಸ್ಕ್ರೀನ್‍ಷಾಟ್‍ಗಳೂ ಓಡಾಡುತ್ತಿರುವುದು ಇನ್ನೂ ಅವರ ವಲಯದೊಳಗೇ ಇದೆ. ಮೇ 23ರಂದು ತೇಜಸ್ವಿ ಹರಕೆಯ ಕುರಿಯಾದರೆ ಬಿಜೆಪಿ ಪರಿವಾರದೊಳಗಿನ ಆತನ ವಿರೋಧಿಗಳು ಸಂಪನ್ನರಾಗುವುದರಲ್ಲಿ ಸಂದೇಹವೇ ಇಲ್ಲ. ತೇಜಸ್ವಿನಿ ಅನಂತಕುಮಾರ್‍ರಿಗೆ ಟಿಕೆಟ್ ನಿರಾಕರಣೆಯಾಗಿದ್ದರಿಂದ, ಈಗಾಗಲೇ ಸೋಲಿನ ಸುಳಿಯಲ್ಲಿ ಸಿಕ್ಕಿಕೊಂಡಿರುವ ತೇಜಸ್ವಿ ಸೂರ್ಯನ ವಿರುದ್ಧ ಸಂಘಪರಿವಾರದ ಹುಡುಗರು ಮತ್ತು ಯುವ ಬ್ರಿಗೇಡ್ ಬಾಯ್ಸ್ ಸಹಾ ತೊಡೆತಟ್ಟಿದ್ದಾರೆ.

ಟಿಕೆಟ್ ಘೋಷಣೆಯಾದ ತಕ್ಷಣ ನಿದ್ದೆ ಬರ್ತಿಲ್ಲ, ನಂಗೆ ನಿದ್ದೆ ಬರ್ತಿಲ್ಲ ಎಂದು ಟ್ವೀಟ್ ಮಾಡಿದ್ದ ಎಳಸು ವ್ಯಕ್ತಿ ಈತ. ಅಲ್ಲಿಂದಾಚೆಗೆ ಟ್ವಿಟ್ಟರ್‍ನಲ್ಲಿ ಕೆಲವರು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರವಾಗಿ ತೇಜಸ್ವಿ ಸೂರ್ಯನಿಂದ ತಾನು ಮೋಸ ಹೋಗಿದ್ದಾಗಿ ಸೋಮ್ ದತ್ತ ಎಂಬ ಉದ್ಯಮಿ ಟ್ವೀಟ್ ಮಾಡಿದ್ದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ಆಕೆ ಹೇಳಿರುವ ಮತ್ತೊಂದು ಮಾತು ಈ ರೀತಿ ಮೋಸ ಹೋಗಿರುವುದರಲ್ಲಿ ತಾನು ಮೊದಲನೆಯವಳೂ ಅಲ್ಲ, ಕೊನೆಯವಳೂ ಅಲ್ಲ ಎಂದು. ಇದರ ಕುರಿತು ಹೊರಗಿನ ವಲಯಕ್ಕೆ ಹೆಚ್ಚು ಗೊತ್ತಿಲ್ಲದಿದ್ದರೂ, ಸಂಘಪರಿವಾರದ ವಾಟ್ಸಾಪ್ ಗುಂಪುಗಳಲ್ಲಿ ಹೆಚ್ಚಿನ ಸುದ್ದಿ ಹರಿದಾಡುತ್ತಿದೆ. ಪ್ರಮುಖವಾಗಿ ರಿಪಬ್ಲಿಕ್ ಟಿವಿಯ ಮತ್ತೊಂದು ಹುಡುಗಿಯ ಬಗ್ಗೆ ಸಹಾ ಸುದ್ದಿ ಓಡಾಡುತ್ತಿದೆ. ಅದರ ಸ್ಕ್ರೀನ್‍ಷಾಟ್‍ನಲ್ಲಿ ಹೆಸರು ಇತ್ಯಾದಿಗಳ ವಿವರವಿದೆಯಾದ್ದರಿಂದ ಇಲ್ಲಿ ಪ್ರಕಟಿಸುತ್ತಿಲ್ಲ.

ಅರಬ್ ಮುಸ್ಲಿಂ ಮಹಿಳೆಯರ ಲೈಂಗಿಕತೆಯ ಕುರಿತೆಲ್ಲಾ ಅಸಭ್ಯವಾಗಿ ಟ್ವೀಟ್ ಮಾಡಿದ್ದ ತೇಜಸ್ವಿಯ ಮನಸ್ಥಿತಿ ನೋಡಿದರೆ ಇಂತಹವು ಇನ್ನೂ ಹೆಚ್ಚಿರಬಹುದೆಂದು ಯಾರಿಗೂ ಗೊತ್ತಾಗುತ್ತದೆ. ಆತ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದಾಗಿನಿಂದ ಆತನ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್‍ಗಳ ಸುರಿಮಳೆಯಾಗಿದೆ. ಅಂಬೇಡ್ಕರ್ ಬಗ್ಗೆ ಹೇಳಿಕೆ, ಸಂವಿಧಾನ ಬದಲಿಸುವುದು, ಮಹಿಳೆಯರಿಗೆ ಮೀಸಲಾತಿ ನೀಡಬಾರದು ಎಂಬೆಲ್ಲಾ ವಿಷಯಗಳಲ್ಲಿ ಆತ ಹಿಂದೆ ಹೇಳಿದ್ದ ಮಾತು ವಿಡಿಯೋಗಳನ್ನೆಲ್ಲಾ ತಂದು ಸುರಿದು ಅಪಹಾಸ್ಯ ಮಾಡುತ್ತಿದ್ದಾರೆ. ಮಹಿಳೆಯರ ಕುರಿತ ಈತನ ಅಸಭ್ಯ ನಡವಳಿಕೆ ಹೇಸಿಗೆ ಹುಟ್ಟಿಸುವಂತಿದೆ. ಇನ್ನು ಮೋದಿ ಮೆಚ್ಚಿಸಲು ಕನ್ನಡ ವಿರೋಧಿ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ.

ಮಹತ್ವದ ವಿಷಯವೆಂದರೆ ಚಕ್ರವರ್ತಿ ಸೂಲಿಬೆಲೆಗೂ ತೇಜಸ್ವಿ ಸೂಯರ್ಂಗೂ ಮೊದಲಿಂದಲೂ ಮುಸುಕಿನ ಜಗಳ ಒಳಗೊಳಗೆ ಮೊದಲಿಂದಲೂ ಇತ್ತು. ತೇಜಸ್ವಿಗೆ ಟಿಕೆಟ್ ಘೋಷಣೆಯಾದ ದಿನ ನಿದ್ದೆ ಬಾರದೇ ಇದ್ದುದು ತೇಜಸ್ವಿಗಲ್ಲ, ಸೂಲಿಬೆಲೆಗೆ ಎಂಬುದು ಪರಿವಾರದ ಒಳಗಿನ ಮಾತು. ಇವರಿಬ್ಬರ ನಡುವೆ ಪರಸ್ಪರ ಅವಕಾಶ ಕಸಿಯುವುದು, ತಪ್ಪಿಸುವುದು ಹಿಂದಿನಿಂದಲೂ ನಡೆದೇ ಇತ್ತು. ಸುಳ್ಳುಗಳನ್ನು ಹರಡುವುದರಲ್ಲಿ, ಭಾಷಣಗಳನ್ನು ಮಾಡುವುದರಲ್ಲಿ, ವಯಸ್ಸಿನಲ್ಲಿ ಎಲ್ಲಾ ರೀತಿಯಲ್ಲಿಯೂ ಮೇಲಾಗಿದ್ದ ಸೂಲಿಬೆಲೆಗೆ ಟಿಕೆಟ್ ಸಿಗದೇ ತೇಜಸ್ವಿಗೆ ದಕ್ಕಿದ್ದು ಸೂಲಿಬೆಲೆಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ವಾಸ್ತವದಲ್ಲಿ ಒಂದು ವರ್ಷಕ್ಕೂ ಹಿಂದಿನಿಂದಲೇ ಚಕ್ರವರ್ತಿ ಸೂಲಿಬೆಲೆ ಫಾರ್ ಸಿಎಂ ಎಂಬ ಪೇಜ್‍ಗಳೆಲ್ಲಾ ಇದ್ದು, ಅಂತಹ ಮಹತ್ವಾಕಾಂಕ್ಷೆ ಆತನಿಗೂ ಅತಿಯಾಗಿಯೇ ಇದೆ. ಅದಕ್ಕೆ ಸೂಜಿ ಚುಚ್ಚಿದಂತಾಗಿದ್ದು, ಸೂಲಿಬೆಲೆ ತನ್ನ ಭಾಷಣಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಮಂಡ್ಯವನ್ನು ಉಲ್ಲೇಖಿಸುತ್ತಿದ್ದಾನೇ ಹೊರತು ಅಪ್ಪಿತಪ್ಪಿಯೂ ತೇಜಸ್ವಿ ಕುರಿತು ಒಂದೂ ಮಾತಾಡಿಲ್ಲ.

ತೇಜಸ್ವಿ ಪಕ್ಕಾ ಸಂಘದ ಉತ್ಪನ್ನ. ಸಂತೋಷ್ ಜಿ ಬಿಟ್ರೆ ಸೂರ್ಯನೆ ಟಿಪಿಕಲ್ ಸಂಘಿ ರಾಜಕಾರಣಿ. ತೇಜಸ್ವಿ ಸೂರ್ಯ ಪಿಯುಸಿ ದಿನಗಳಲ್ಲೇ ಎಂ ಎಲ್ ಎ – ಎಂ ಪಿ ಆಗ್ಬೇಕು ಅಂತ ಮಹತ್ವಾಕಾಂಕ್ಷೆ ಇಟ್ಕೊಂಡಿದ್ದ. ಅದಕ್ಕಾಗಿ ಸಂಘದ ಬೇರೆ ಹುಡುಗರನ್ನು ತುಳಿದು ಮೇಲೆ ಬರದಂತೆ ತಡೀತಿದ್ದ ಅನ್ನೋ ಆರೋಪವಿದೆ. ಸಂಘ ಪರಿವಾರದ ಸಿದ್ಧಾಂತಕ್ಕೆ ತಕ್ಕಂತೆ ಸುಳ್ಳೋ, ನಿಜವೋ ಅದನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುವುದರಲ್ಲಿ ಈತನಿಗಿದ್ದ ಸಾಮಥ್ರ್ಯದ ಆಧಾರದ ಮೇಲೆ ಬಿಜೆಪಿ ಸೋಶಿಯಲ್ ಮೀಡಿಯಾ ಜವಾಬ್ದಾರಿ ವಹಿಸಲಾಗಿತ್ತು. ಹಸಿ ಸುಳ್ಳುಗಳ ತಯಾರಿಕೆಯ ಆರೋಪದಲ್ಲಿ ಮಹೇಶ್ ವಿಕ್ರಮ ಹೆಗಡೆ ಜೈಲುಪಾಲಾದಾಗ ಆತನ ಪರವಾಗಿ ವಕೀಲಿಕೆ ಮಾಡಿದವನು ಇದೇ ತೇಜಸ್ವಿ ಸೂರ್ಯ.

ಈತನ ಮಾತು ಮಾತ್ರ ಸನಾತನ. ಜೀವನಶೈಲಿ ಮಾತ್ರ ಗಾಬರಿಯಾಗಬಹುದಾದಷ್ಟು ಆಧುನಿಕ. ವಿಲಾಸಿ, ಸ್ವೇಚ್ಛೆ. ಇವೆಲ್ಲಾ ಕಾರಣಗಳಿಂದ ಈತನನ್ನು ಕಂಡರೆ 50% ಬಿಜೆಪಿಗರಿಗೆ ಆಗಲ್ಲ. ಇನ್ನು 50% ಬಿಜೆಪಿಗರಿಗೆ ಅವನ್ಯಾರೆಂದೇ ಗೊತ್ತಿಲ್ಲ. ಬೆಂಗಳೂರಿನಲ್ಲಿ ಸರಿಯಾದ ಕಾರಣ ಸಿಗುವವರೆಗೂ ಪ್ರಚಾರ ಮಾಡುವುದಿಲ್ಲವೆಂದು ಈಗಾಗಲೇ ವಿ. ಸೋಮಣ್ಣ ಬಂಡಾಯವೆದ್ದಿದಾಗಿದೆ. ಆರ್.ಅಶೋಕ್‍ಗಂತೂ ಮುಂದೆ ಈತ ಗೆದ್ದರೆ ಈತನೆದುರು ತಾವು ಕೈ ಕಟ್ಟಿ ನಿಲ್ಲುವ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ತಯಾರಿಲ್ಲ. ಅದಕ್ಕಾಗಿ ಈ ಬಾರಿ ತೇಜಸ್ವಿ ಸೂರ್ಯನನ್ನು ಸೋಲಿಸಲು ಸೂಲಿಬೆಲೆ, ಸೋಮಣ್ಣ, ಅಶೋಕ್‍ಆದಿಯಾಗಿ ಎಲ್ಲರೂ ನಾ ಮುಂದು, ತಾ ಮುಂದು ಎಂದು ಪೈಪೋಟಿಗಿಳಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...