Homeಕರ್ನಾಟಕತೇಜಸ್ವಿ ಸೂರ್ಯನನ್ನು ಸೋಲಿಸಲು ಬಿಜೆಪಿಯೊಳಗೆ ಅರ್ಧ ಪರಿವಾರ ಸಜ್ಜು

ತೇಜಸ್ವಿ ಸೂರ್ಯನನ್ನು ಸೋಲಿಸಲು ಬಿಜೆಪಿಯೊಳಗೆ ಅರ್ಧ ಪರಿವಾರ ಸಜ್ಜು

- Advertisement -
- Advertisement -

ಹೌದು, ಬಿಜೆಪಿ ಮತ್ತು ಸಂಘಪರಿವಾರದ ಒಳಗೆ ಇದೇನೂ ಗುಟ್ಟಿನ ವಿಷಯವಾಗುಳಿದಲ್ಲ. ಸೋಮಣ್ಣರ ಬಹಿರಂಗ ಅಸಮಾಧಾನ ಚಾನೆಲ್‍ಗಳಲ್ಲಿ ಸುದ್ದಿಯಾಗಿದೆ. ಆದರೆ, ಚಕ್ರವರ್ತಿ ಸೂಲಿಬೆಲೆ ಸ್ವತಃ ವಾಟ್ಸಾಪ್ ಸಂದೇಶ ಹರಿಬಿಟ್ಟಿರುವುದು ಮತ್ತು ಅವುಗಳ ಸ್ಕ್ರೀನ್‍ಷಾಟ್‍ಗಳೂ ಓಡಾಡುತ್ತಿರುವುದು ಇನ್ನೂ ಅವರ ವಲಯದೊಳಗೇ ಇದೆ. ಮೇ 23ರಂದು ತೇಜಸ್ವಿ ಹರಕೆಯ ಕುರಿಯಾದರೆ ಬಿಜೆಪಿ ಪರಿವಾರದೊಳಗಿನ ಆತನ ವಿರೋಧಿಗಳು ಸಂಪನ್ನರಾಗುವುದರಲ್ಲಿ ಸಂದೇಹವೇ ಇಲ್ಲ. ತೇಜಸ್ವಿನಿ ಅನಂತಕುಮಾರ್‍ರಿಗೆ ಟಿಕೆಟ್ ನಿರಾಕರಣೆಯಾಗಿದ್ದರಿಂದ, ಈಗಾಗಲೇ ಸೋಲಿನ ಸುಳಿಯಲ್ಲಿ ಸಿಕ್ಕಿಕೊಂಡಿರುವ ತೇಜಸ್ವಿ ಸೂರ್ಯನ ವಿರುದ್ಧ ಸಂಘಪರಿವಾರದ ಹುಡುಗರು ಮತ್ತು ಯುವ ಬ್ರಿಗೇಡ್ ಬಾಯ್ಸ್ ಸಹಾ ತೊಡೆತಟ್ಟಿದ್ದಾರೆ.

ಟಿಕೆಟ್ ಘೋಷಣೆಯಾದ ತಕ್ಷಣ ನಿದ್ದೆ ಬರ್ತಿಲ್ಲ, ನಂಗೆ ನಿದ್ದೆ ಬರ್ತಿಲ್ಲ ಎಂದು ಟ್ವೀಟ್ ಮಾಡಿದ್ದ ಎಳಸು ವ್ಯಕ್ತಿ ಈತ. ಅಲ್ಲಿಂದಾಚೆಗೆ ಟ್ವಿಟ್ಟರ್‍ನಲ್ಲಿ ಕೆಲವರು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರವಾಗಿ ತೇಜಸ್ವಿ ಸೂರ್ಯನಿಂದ ತಾನು ಮೋಸ ಹೋಗಿದ್ದಾಗಿ ಸೋಮ್ ದತ್ತ ಎಂಬ ಉದ್ಯಮಿ ಟ್ವೀಟ್ ಮಾಡಿದ್ದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ಆಕೆ ಹೇಳಿರುವ ಮತ್ತೊಂದು ಮಾತು ಈ ರೀತಿ ಮೋಸ ಹೋಗಿರುವುದರಲ್ಲಿ ತಾನು ಮೊದಲನೆಯವಳೂ ಅಲ್ಲ, ಕೊನೆಯವಳೂ ಅಲ್ಲ ಎಂದು. ಇದರ ಕುರಿತು ಹೊರಗಿನ ವಲಯಕ್ಕೆ ಹೆಚ್ಚು ಗೊತ್ತಿಲ್ಲದಿದ್ದರೂ, ಸಂಘಪರಿವಾರದ ವಾಟ್ಸಾಪ್ ಗುಂಪುಗಳಲ್ಲಿ ಹೆಚ್ಚಿನ ಸುದ್ದಿ ಹರಿದಾಡುತ್ತಿದೆ. ಪ್ರಮುಖವಾಗಿ ರಿಪಬ್ಲಿಕ್ ಟಿವಿಯ ಮತ್ತೊಂದು ಹುಡುಗಿಯ ಬಗ್ಗೆ ಸಹಾ ಸುದ್ದಿ ಓಡಾಡುತ್ತಿದೆ. ಅದರ ಸ್ಕ್ರೀನ್‍ಷಾಟ್‍ನಲ್ಲಿ ಹೆಸರು ಇತ್ಯಾದಿಗಳ ವಿವರವಿದೆಯಾದ್ದರಿಂದ ಇಲ್ಲಿ ಪ್ರಕಟಿಸುತ್ತಿಲ್ಲ.

ಅರಬ್ ಮುಸ್ಲಿಂ ಮಹಿಳೆಯರ ಲೈಂಗಿಕತೆಯ ಕುರಿತೆಲ್ಲಾ ಅಸಭ್ಯವಾಗಿ ಟ್ವೀಟ್ ಮಾಡಿದ್ದ ತೇಜಸ್ವಿಯ ಮನಸ್ಥಿತಿ ನೋಡಿದರೆ ಇಂತಹವು ಇನ್ನೂ ಹೆಚ್ಚಿರಬಹುದೆಂದು ಯಾರಿಗೂ ಗೊತ್ತಾಗುತ್ತದೆ. ಆತ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದಾಗಿನಿಂದ ಆತನ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್‍ಗಳ ಸುರಿಮಳೆಯಾಗಿದೆ. ಅಂಬೇಡ್ಕರ್ ಬಗ್ಗೆ ಹೇಳಿಕೆ, ಸಂವಿಧಾನ ಬದಲಿಸುವುದು, ಮಹಿಳೆಯರಿಗೆ ಮೀಸಲಾತಿ ನೀಡಬಾರದು ಎಂಬೆಲ್ಲಾ ವಿಷಯಗಳಲ್ಲಿ ಆತ ಹಿಂದೆ ಹೇಳಿದ್ದ ಮಾತು ವಿಡಿಯೋಗಳನ್ನೆಲ್ಲಾ ತಂದು ಸುರಿದು ಅಪಹಾಸ್ಯ ಮಾಡುತ್ತಿದ್ದಾರೆ. ಮಹಿಳೆಯರ ಕುರಿತ ಈತನ ಅಸಭ್ಯ ನಡವಳಿಕೆ ಹೇಸಿಗೆ ಹುಟ್ಟಿಸುವಂತಿದೆ. ಇನ್ನು ಮೋದಿ ಮೆಚ್ಚಿಸಲು ಕನ್ನಡ ವಿರೋಧಿ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ.

ಮಹತ್ವದ ವಿಷಯವೆಂದರೆ ಚಕ್ರವರ್ತಿ ಸೂಲಿಬೆಲೆಗೂ ತೇಜಸ್ವಿ ಸೂಯರ್ಂಗೂ ಮೊದಲಿಂದಲೂ ಮುಸುಕಿನ ಜಗಳ ಒಳಗೊಳಗೆ ಮೊದಲಿಂದಲೂ ಇತ್ತು. ತೇಜಸ್ವಿಗೆ ಟಿಕೆಟ್ ಘೋಷಣೆಯಾದ ದಿನ ನಿದ್ದೆ ಬಾರದೇ ಇದ್ದುದು ತೇಜಸ್ವಿಗಲ್ಲ, ಸೂಲಿಬೆಲೆಗೆ ಎಂಬುದು ಪರಿವಾರದ ಒಳಗಿನ ಮಾತು. ಇವರಿಬ್ಬರ ನಡುವೆ ಪರಸ್ಪರ ಅವಕಾಶ ಕಸಿಯುವುದು, ತಪ್ಪಿಸುವುದು ಹಿಂದಿನಿಂದಲೂ ನಡೆದೇ ಇತ್ತು. ಸುಳ್ಳುಗಳನ್ನು ಹರಡುವುದರಲ್ಲಿ, ಭಾಷಣಗಳನ್ನು ಮಾಡುವುದರಲ್ಲಿ, ವಯಸ್ಸಿನಲ್ಲಿ ಎಲ್ಲಾ ರೀತಿಯಲ್ಲಿಯೂ ಮೇಲಾಗಿದ್ದ ಸೂಲಿಬೆಲೆಗೆ ಟಿಕೆಟ್ ಸಿಗದೇ ತೇಜಸ್ವಿಗೆ ದಕ್ಕಿದ್ದು ಸೂಲಿಬೆಲೆಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ವಾಸ್ತವದಲ್ಲಿ ಒಂದು ವರ್ಷಕ್ಕೂ ಹಿಂದಿನಿಂದಲೇ ಚಕ್ರವರ್ತಿ ಸೂಲಿಬೆಲೆ ಫಾರ್ ಸಿಎಂ ಎಂಬ ಪೇಜ್‍ಗಳೆಲ್ಲಾ ಇದ್ದು, ಅಂತಹ ಮಹತ್ವಾಕಾಂಕ್ಷೆ ಆತನಿಗೂ ಅತಿಯಾಗಿಯೇ ಇದೆ. ಅದಕ್ಕೆ ಸೂಜಿ ಚುಚ್ಚಿದಂತಾಗಿದ್ದು, ಸೂಲಿಬೆಲೆ ತನ್ನ ಭಾಷಣಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಮಂಡ್ಯವನ್ನು ಉಲ್ಲೇಖಿಸುತ್ತಿದ್ದಾನೇ ಹೊರತು ಅಪ್ಪಿತಪ್ಪಿಯೂ ತೇಜಸ್ವಿ ಕುರಿತು ಒಂದೂ ಮಾತಾಡಿಲ್ಲ.

ತೇಜಸ್ವಿ ಪಕ್ಕಾ ಸಂಘದ ಉತ್ಪನ್ನ. ಸಂತೋಷ್ ಜಿ ಬಿಟ್ರೆ ಸೂರ್ಯನೆ ಟಿಪಿಕಲ್ ಸಂಘಿ ರಾಜಕಾರಣಿ. ತೇಜಸ್ವಿ ಸೂರ್ಯ ಪಿಯುಸಿ ದಿನಗಳಲ್ಲೇ ಎಂ ಎಲ್ ಎ – ಎಂ ಪಿ ಆಗ್ಬೇಕು ಅಂತ ಮಹತ್ವಾಕಾಂಕ್ಷೆ ಇಟ್ಕೊಂಡಿದ್ದ. ಅದಕ್ಕಾಗಿ ಸಂಘದ ಬೇರೆ ಹುಡುಗರನ್ನು ತುಳಿದು ಮೇಲೆ ಬರದಂತೆ ತಡೀತಿದ್ದ ಅನ್ನೋ ಆರೋಪವಿದೆ. ಸಂಘ ಪರಿವಾರದ ಸಿದ್ಧಾಂತಕ್ಕೆ ತಕ್ಕಂತೆ ಸುಳ್ಳೋ, ನಿಜವೋ ಅದನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುವುದರಲ್ಲಿ ಈತನಿಗಿದ್ದ ಸಾಮಥ್ರ್ಯದ ಆಧಾರದ ಮೇಲೆ ಬಿಜೆಪಿ ಸೋಶಿಯಲ್ ಮೀಡಿಯಾ ಜವಾಬ್ದಾರಿ ವಹಿಸಲಾಗಿತ್ತು. ಹಸಿ ಸುಳ್ಳುಗಳ ತಯಾರಿಕೆಯ ಆರೋಪದಲ್ಲಿ ಮಹೇಶ್ ವಿಕ್ರಮ ಹೆಗಡೆ ಜೈಲುಪಾಲಾದಾಗ ಆತನ ಪರವಾಗಿ ವಕೀಲಿಕೆ ಮಾಡಿದವನು ಇದೇ ತೇಜಸ್ವಿ ಸೂರ್ಯ.

ಈತನ ಮಾತು ಮಾತ್ರ ಸನಾತನ. ಜೀವನಶೈಲಿ ಮಾತ್ರ ಗಾಬರಿಯಾಗಬಹುದಾದಷ್ಟು ಆಧುನಿಕ. ವಿಲಾಸಿ, ಸ್ವೇಚ್ಛೆ. ಇವೆಲ್ಲಾ ಕಾರಣಗಳಿಂದ ಈತನನ್ನು ಕಂಡರೆ 50% ಬಿಜೆಪಿಗರಿಗೆ ಆಗಲ್ಲ. ಇನ್ನು 50% ಬಿಜೆಪಿಗರಿಗೆ ಅವನ್ಯಾರೆಂದೇ ಗೊತ್ತಿಲ್ಲ. ಬೆಂಗಳೂರಿನಲ್ಲಿ ಸರಿಯಾದ ಕಾರಣ ಸಿಗುವವರೆಗೂ ಪ್ರಚಾರ ಮಾಡುವುದಿಲ್ಲವೆಂದು ಈಗಾಗಲೇ ವಿ. ಸೋಮಣ್ಣ ಬಂಡಾಯವೆದ್ದಿದಾಗಿದೆ. ಆರ್.ಅಶೋಕ್‍ಗಂತೂ ಮುಂದೆ ಈತ ಗೆದ್ದರೆ ಈತನೆದುರು ತಾವು ಕೈ ಕಟ್ಟಿ ನಿಲ್ಲುವ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ತಯಾರಿಲ್ಲ. ಅದಕ್ಕಾಗಿ ಈ ಬಾರಿ ತೇಜಸ್ವಿ ಸೂರ್ಯನನ್ನು ಸೋಲಿಸಲು ಸೂಲಿಬೆಲೆ, ಸೋಮಣ್ಣ, ಅಶೋಕ್‍ಆದಿಯಾಗಿ ಎಲ್ಲರೂ ನಾ ಮುಂದು, ತಾ ಮುಂದು ಎಂದು ಪೈಪೋಟಿಗಿಳಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...