Homeನಿಜವೋ ಸುಳ್ಳೋಬಿರಿಯಾನಿಯ ಸುಳ್ಳು ಕಥೆಗಳು

ಬಿರಿಯಾನಿಯ ಸುಳ್ಳು ಕಥೆಗಳು

- Advertisement -
- Advertisement -

ಎರಡು ಬಿರಿಯಾನಿ ಕಥೆಗಳು ಸುದ್ದಿಯಲ್ಲಿವೆ. ಅದರಲ್ಲಿ ಒಂದು ಕಥೆಯು ಮತ್ತೆ ಮತ್ತೆ ಕೇಳಿ ಬರುತ್ತಿದ್ದು, ಎರಡು ದಿನಗಳ ಹಿಂದೆ ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್‍ಷಾ ಮತ್ತು ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ ರ್ಯಾಲಿಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅದರ ಕುರಿತು ‘ದಿ ಕ್ವಿಂಟ್’ ವೆಬ್ ಪತ್ರಿಕೆಯು ವಿವರವಾದ ‘ಫ್ಯಾಕ್ಟ್ ಚೆಕ್’ ಮಾಡಿ ಸತ್ಯ ಸಂಗತಿ ತಿಳಿಸಿದ್ದಾರೆ. ಅದನ್ನು ಕೆಳಗೆ ನೀಡಲಾಗಿದೆ.

ಇನ್ನೊಂದು ಬಿರಿಯಾನಿ ಕಥೆ, ನರೇಂದ್ರ ಮೋದಿಯವರು ಆಹ್ವಾನವೇ ಇಲ್ಲದೇ ನವಾಜ್ ಷರೀಫ್ ಮನೆ ಮದುವೆಗೆ ಹೋಗಿ ಬಿರಿಯಾನಿ ತಿಂದರೆಂಬುದು. ಅದರ ಫ್ಯಾಕ್ಟ್ ಚೆಕ್ ನಾವು ಮಾಡಿದ್ದೇವೆ. ಅದನ್ನು ನಂತರ ತಿಳಿಸುತ್ತೇವೆ.

ಕ್ವಿಂಟ್‍ನ ವೆಬ್‍ಕೂಫ್‍ನಲ್ಲಿ ಬಂದದ್ದು.

ಷಾ ಮತ್ತು ಯೋಗಿ ಹೇಳುತ್ತಿರುವ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಲಾಯಿತು’ ಎಂಬುದು ಒಂದು ಸುಳ್ಳಿನ ಮೇಲೆ ಆಧರಿಸಿದ ಸುಳ್ಳು

ಮಾರ್ಚ್ 26ರಂದು ಉ.ಪ್ರದೇಶದ ಮೊರಾದಾಬಾದ್‍ನಲ್ಲಿ ಬಹಿರಂಗಸಭೆಯನ್ನುದ್ದೇಶಿಸಿ ಮಾತಾಡಿದ ಬಿಜೆಪಿಯ ಅಧ್ಯಕ್ಷ ಕಾಂಗ್ರೆಸ್ & ಇತರ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ಮಾಡುತ್ತಾ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಕಾಲ ಹೋಯಿತು, ಈಗೇನಿದ್ದರೂ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಮೋದಿಯ ಕಾಲ’ ಎಂದು ಗುಡುಗಿದರು.

ಇದರ ಮೂಲ ಎಲ್ಲಿದೆ?

ವಾಸ್ತವದಲ್ಲಿ ‘ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ’ ಕಥೆ ಶುರುವಾಗುವುದು ಆಗಸ್ಟ್ 2009ರಲ್ಲಿ. 26/11 ಮುಂಬೈ ದಾಳಿಯ ಪ್ರಮುಖ ಆರೋಪಿ ಅಜ್ಮಲ್ ಕಸಬ್‍ನ ವಿಚಾರಣೆ ನಡೆಯುತ್ತಿದ್ದಾಗ, ಪಿಟಿಐ ನ್ಯೂಸ್ ಏಜೆನ್ಸಿಯಿಂದ ಒಂದು ವರದಿ ಬಂದಿತು. ಆ ವರದಿಯನ್ನು ಇಂಡಿಯಾ ಟುಡೇ ಸೇರಿದಂತೆ ಹಲವರು ತಮ್ಮಲ್ಲೂ ಹಾಕಿಕೊಂಡರು. ಅದರಲ್ಲಿ ಕಸಬ್ ತನಗೆ ಮಟನ್ ಬಿರಿಯಾನಿ, ಬಾಸ್ಮತಿ ಅನ್ನ ಬೇಕೆಂದು ಕೇಳಿದನೆಂತಲೂ, ಅದನ್ನು ಪೂರೈಸಲಾಯಿತೆಂತಲೂ ಹೇಳಲಾಗಿತ್ತು. ಈ ಮಾತನ್ನು ಹೇಳಿದವರು, ಆ ಕೇಸಿನ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ. ಆ ವಿಚಾರಣೆಯ ನಂತರ ಆತ ತಪ್ಪಿತಸ್ಥೆನೆಂದು ಸಾಬೀತಾಯಿತು. ಮತ್ತು ಕೋರ್ಟ್ ಆದೇಶದಂತೆ ಗಲ್ಲಿಗೇರಿಸಲಾಯಿತು.

ಅಲ್ಲಿಂದ ಶುರುವಾಯಿತು ಬಿರಿಯಾನಿ ಕಥೆ

ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಿರಿಯಾನಿಯ ಕಥೆಯನ್ನು ಹಲವು ಸಾರಿ ಹೇಳಿದ್ದಾರೆ. ಮಾರ್ಚ್ 26ರಂದು ಗೋರಖ್‍ಪುರದಲ್ಲಿ ಇನ್ನು ಹೇಳಿದ್ದಾರೆ, ಸಹ್ರಾನ್‍ಪುರದಲ್ಲಿ ಮಾರ್ಚ್ 24ರಂದು ನಡೆದ ರ್ಯಾಲಿಯಲ್ಲೂ ಇದೇ ಮಾತನ್ನು ಹೇಳಿದ್ದಾರೆ. ‘ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಿತ್ತು, ಮೋದಿ ಸರ್ಕಾರ ಬುಲೆಟ್, ಬಾಂಬುಗಳನ್ನು ತಿನ್ನಿಸಿದೆ’.

ನವೆಂಬರ್ 2018ರಲ್ಲೂ ರಾಜಸ್ತಾನದ ಮಕ್ರಾನಾದಲ್ಲಿ ನಡೆದ ಸಭೆಯಲ್ಲೂ ಇದೇ ಮಾತನ್ನು ಹೇಳಿದ್ದಾರೆ. ಆಗಸ್ಟ್ 2012ರಲ್ಲಿ ಬಿಜೆಪಿ ನಾಯಕ ಮುಕ್ತಾರ್ ನಕ್ವಿ ಸಹಾ ಇದೇ ಮಾತನ್ನು ಹೇಳಿ, ‘ಬಿರಿಯಾನಿ ತಿನ್ನಿಸಿದ್ದು ಸಾಕು, ಬೇಗನೇ ಗಲ್ಲಿಗೇರಿಸಬೇಕು’ ಎಂದಿದ್ದರು.

ವಾಸ್ತವವೇನು?

ಮಾರ್ಚ್ 2015ರಲ್ಲಿ ಉಜ್ವಲ್ ನಿಕಮ್ ಅವರು ವರದಿಗಾರರಿಗೆ (ಟೈಮ್ಸ್ ಆಫ್ ಇಂಡಿಯಾದಲ್ಲಿ ವಿವರವಾಗಿ ಪ್ರಕಟಗೊಂಡಿದೆ) ಹೇಳಿದ ಮಾತು ಏನಿತ್ತು ನೋಡೋಣ. ‘ಕಸಬ್‍ನ ಪರವಾಗಿ ಒಂದು ಭಾವನಾತ್ಮಕ ಅಲೆ ಏಳುತ್ತಿದೆಯೆಂದು ನನಗೆ ಅನ್ನಿಸಿತು. ರಕ್ಷಾಬಂಧನದ ದಿನ ಆತನ ಕಣ್ಣುಗಳಲ್ಲಿ ನೀರಿತ್ತು ಎಂದೆಲ್ಲಾ ಪತ್ರಕರ್ತರು ಬರೆಯುತ್ತಿದ್ದರು. ಆಗ ನಾನು ಆತ ಬಿರಿಯಾನಿ ಕೇಳಿದನೆಂದೂ, ಅದನ್ನು ಒದಗಿಸಲಾಗಿದೆಯೆಂದೂ ಒಂದು ಸುಳ್ಳನ್ನು ಹರಿಯಬಿಟ್ಟೆ. ಅವತ್ತು ಅದರ ಅಗತ್ಯವಿತ್ತೆಂದು ನನಗನ್ನಿಸಿತು’

ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ‘ಅವರಿಗೆ ಬಿರಿಯಾನಿಯೇಕೆ ಉಣ್ಣಿಸಬೇಕು?’ ಎಂಬ ಟೈಟಲ್ ಜೊತೆಗೆ ಬಂದ ವರದಿಯು ಸಾರ್ವಜನಿಕ ವಲಯದಲ್ಲಿ ಸಿಟ್ಟೆಬ್ಬಿಸುತ್ತು. ಉಜ್ವಲ್ ನಿಕಂರ ಈ ಹೇಳಿಕೆಯ ಕುರಿತು ಮಹಾರಾಷ್ಟ್ರ ಸರ್ಕಾರವು ಸ್ಪಷ್ಟೀಕರಣ ಕೇಳಿತ್ತೆಂದು ಹೇಳಲಾಗುತ್ತಿದೆ. ಇದೊಂದು ಸುಳ್ಳು ಕಥೆಯಾಗಿತ್ತು.

ಇನ್ನು ಎರಡನೇ ಸುಳ್ಳು ಬಿರಿಯಾನಿ ಕಥೆ.

ಪ್ರಧಾನಿ ನರೇಂದ್ರ ಮೋದಿಯವರು ಇದ್ದಕ್ಕಿದ್ದಂತೆ ನವಾಜ್ ಷರೀಫ್‍ರ ಹುಟ್ಟು ಹಬ್ಬದ ದಿನ ಲಾಹೋರಿನ ಅವರ ಮನೆಗೆ ಭೇಟಿ ಕೊಟ್ಟಾಗ ಬಿರಿಯಾನಿ ತಿಂದುಬಂದರೆಂಬುದು. ಇದೂ ಸುಳ್ಳು. ನರೇಂದ್ರ ಮೋದಿಯವರು ಸಸ್ಯಾಹಾರಿಯಾಗಿದ್ದು, ಅವರು ಬಿರಿಯಾನಿ ತಿಂದಿಲ್ಲ. ಅಂದು ನವಾಜ್ ಷರೀಫ್‍ರ ಮನೆಯಲ್ಲಿ ಮೋದಿಯವರಿಗೆ ಅವರ ಇಷ್ಟದ ಸಾಗ್, ದಾಲ್ ಅನ್ನು ಬಡಿಸಲಾಗಿತ್ತು. ಷರೀಫ್‍ರ ಮನೆಗೆ ಅಂದು ಮೋದಿಯವರ ಜೊತೆಗೆ ಬಂದಿದ್ದ 11 ಜನರಿಗೆ ಅಲ್ಲಿ ಈ ತಿನಿಸನ್ನು ಶುದ್ಧ ತುಪ್ಪದಿಂದ ಮಾಡಿ ಬಡಿಸಲಾಯಿತೆಂದು ಅವರ ಮನೆ ಜಾತಿ-ಉಮ್ರ್‍ನ ಮೂಲಗಳು ಹೇಳಿದ್ದನ್ನು ಪಿಟಿಐ ವರದಿ ಮಾಡಿತ್ತು.

https://food.ndtv.com/food-drinks/pm-modis-favourite-dish-served-at-pakistani-pm-nawaz-sharifs-home-1259189http://

ಮೋದಿಯವರು ನವಾಜ್ ಷರೀಫ್‍ರ ಮನೆಗೆ ಹೋಗಿದ್ದು ನಿಜ, ಅಲ್ಲಿ ಅವರಿಗಿಷ್ಟವಾದ ತಿಂಡಿಯನ್ನು ಮಾಡುವಷ್ಟು ಪೂರ್ವನಿರ್ಧಾರಿತವಾಗಿ ಆ ಭೇಟಿ ಇದ್ದಿತ್ತು. ಆದರೆ ಬಿರಿಯಾನಿ ತಿನ್ನಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...