Homeನ್ಯಾಯ ಪಥಡೇವಿಡ್ ಮ್ಯಾಮೆಟ್ ಮತ್ತು ಅವರ ಉಗ್ರವಾದಿ ಸಿನೆಮಾ ಸಿದ್ಧಾಂತ

ಡೇವಿಡ್ ಮ್ಯಾಮೆಟ್ ಮತ್ತು ಅವರ ಉಗ್ರವಾದಿ ಸಿನೆಮಾ ಸಿದ್ಧಾಂತ

- Advertisement -
- Advertisement -

ಸಿನಿಯಾನ:03

| ರಾಜಶೇಖರ್ ಅಕ್ಕಿ |

`ಮೊದಲ ಶಾಟ್ -ಒಬ್ಬ ಮಹಿಳೆ ಅಳುತ್ತ ಕುಳಿತಿದ್ದಾಳೆ, ಎರಡನೇ ಶಾಟ್- ನೇಣುಗಂಬದ ಪಕ್ಕ ನಿಂತಿರುವ ವ್ಯಕ್ತಿ ತನ್ನ ಗಡಿಯಾರ ನೋಡಿ, ಕ್ಯಾಮರಾ ಕಡೆ ನೋಡುತ್ತಾನೆ

ಪ್ರೇಕ್ಷಕರ ಮನದಲ್ಲಿ ಮೂಡುವುದು- ಓಹ್ ಈ ಮಹಿಳೆಯನ್ನು ಗಲ್ಲಿಗೇರಿಸುವ ಸಮಯ, ಅದಕ್ಕೇ ಅಳುತ್ತಿದ್ದಾಳೆ.

ಈಗ ಇನ್ನೊಂದು ಚಿತ್ರ; ಮೊದಲ ಶಾಟ್ – ಮಹಿಳೆ ಅಳುತ್ತ ಕುಳಿತಿದ್ದ ಅದೇ ಶಾಟ್; ಯಾವುದೇ ಬದಲಾವಣೆ ಇಲ್ಲ. ಎರಡನೇ ಶಾಟ್- ಒಬ್ಬ ನಾಲ್ಕೈದು ವರ್ಷದ ಮಗು ಬ್ಯಾಗ್ ಹಾಕಿಕೊಂಡು ಅಳುತ್ತ ಸ್ಕೂಲ್ ಬಸ್ ಹತ್ತುತ್ತಿದ್ದಾನೆ

ಪ್ರೇಕ್ಷಕರ ಮನದಲ್ಲಿ ಮೂಡುವುದು? ಹೇಳುವ ಅಗತ್ಯವಿಲ್ಲ’

ಡೇವಿಡ್ ಮ್ಯಾಮೆಟ್, ಸಿನೆಮಾ ನಿರ್ದೇಶನದ ಬಗ್ಗೆ ಮಾತನಾಡುತ್ತ.

ಇದನ್ನು ಜಕ್ಸ್ಟಾಪೊಸಿಷನ್ ಎನ್ನುತ್ತಾರೆ. ಇದು ಮೋಂಟಾಜ್ ಥಿಯರಿಯ ಒಂದು ಉದಾಹರಣೆ. ಇದನ್ನು ಮೊದಲ ಸಲ ಪ್ರತಿಪಾದಿಸಿದ್ದು ರಷಿಯಾದ ಚಿತ್ರನಿರ್ದೇಶಕ ಸರ್ಗೇಯ್ ಐಸಿನ್‍ಸ್ಟೇನ್. 1925 ರಲ್ಲಿ ಬಂದ ಬ್ಯಾಟಲ್‍ಶಿಪ್ ಪೊಟಮ್ಕಿನ್ ಎನ್ನುವ ಐತಿಹಾಸಿಕ ಸಿನೆಮಾ ನಿರ್ದೇಶಿಸಿದ್ದು ಇದೇ ಐಸಿನ್‍ಸ್ಟೇನ್.

ಐಸಿನ್‍ಸ್ಟೇನ್‍ನಿಂದ ಪ್ರಭಾವಿತರಾದ ಡೇವಿಡ್ ಮ್ಯಾಮೆಟ್ ಹುಟ್ಟಿದ್ದು 1947ರಲ್ಲಿ. ಶಿಕಾಗೋದಲ್ಲಿ ಹುಟ್ಟಿ ಬೆಳೆದ ಇವರು ಒಬ್ಬ ನಟನಾಗಿ ತನ್ನ ಕಲಾಜೀವನ ಶುರು ಮಾಡಿದರು, ಅದು ಸರಿಹೊಂದಲಿಲ್ಲ ಎಂದು ನಾಟಕಗಳ ನಿರ್ದೇಶನಕ್ಕಿಳಿದರು. ನಂತರ ನಾಟಕ ಬರೆಯೋಕ್ಕೆ ಶುರು ಮಾಡಿದರು. ಸೆಕ್ಷುವಲ್ ಪರ್ವರ್ಸಿಟಿ ಇನ್ ಷಿಕಾಗೋ, ಗ್ಲೆನ್‍ಗೆರಿ ಗ್ಲೆನ್ ರಾಸ್,  ಎ ಲೈಫ್ ಇನ ಥಿಯೇಟರ್ ಎನ್ನುವ ಅನೇಕ ಯಶಸ್ವೀ ನಾಟಕಗಳನ್ನು ಬರೆದರು. ಬರಹ ಮುಂದುವರೆಸುತ್ತ ಸಿನೆಮಾ ಬರೆಯಲು ಶುರು ಮಾಡಿದರು. ಸಿಡ್ನಿ ಲುಮೆಟ್‍ಯ ವರ್ಡಿಕ್ಟ್‍ನ ಚಿತ್ರಕಥೆಯನ್ನು ಬರೆದದ್ದು ಇವರೆ. ಅನೇಕ ಸಿನೆಮಾಗಳಿಗೆ ಬರೆದರೂ ಅದರ ಕ್ರೆಡಿಟ್ ತೆಗೆದುಕೊಳ್ಳಲಿಲ್ಲ. ಹಾಲಿವುಡ್‍ನ ಸ್ಕ್ರಿಪ್ಟ್ ಡಾಕ್ಟರ್ ಆಗಿಯೂ ಪ್ರಸಿದ್ಧರಾದವರು.  1989 ರಲ್ಲಿ ಶಾನ್ ಪೆನ್ ಮತ್ತು ರಾಬರ್ಟ್ ಡಿನೀರೊ ಅಭಿನಯದ ‘ವಿ ಆರ್ ನೋ ಏಂಜೆಲ್ಸ್’ ಎನ್ನುವ ಚಿತ್ರ ನೋಡಿದರೆ ಇವರ ಬರಹದಲ್ಲಿರುವ ನಿಷ್ಠುರತೆ ಎದ್ದು ಕಾಣುತ್ತದೆ.

ಮ್ಯಾಮೆಟ್ ಅವರು ತಮ್ಮ ಸಂಭಾಷಣೆಯ ಶೈಲಿಗಾಗಿಯೇ ವಿಖ್ಯಾತರಾದವರು.

‘ನೀವು ಸಂಭಾಷಣೆ ಚೆನ್ನಾಗಿ ಬರೆಯುತ್ತೀರಿ ಎಂತಿದ್ದರೆ, ಆ ಸಂಭಾಷಣೆಗಳನ್ನು ಸಿನೆಮಾದಲ್ಲಿ ಬಳಸದಿರುವುದೇ ಉತ್ತಮ.’ ಇದು ಸಂಭಾಷಣೆ ಬಗ್ಗೆ ಮ್ಯಾಮೆಟ್ ಹೇಳಿದ್ದು.  ಇಷ್ಟು ನಿಷ್ಠುರವಾಗಿ ಸಂಭಾಷಣೆ ಹೇಗೆ ಬರೆಯುತ್ತೀರಿ ಎಂದು ಕೇಳಿದಾಗ ‘‘ಆಗಿನ್ನೂ ನಮ್ಮ ಮನೆಗಳಲ್ಲಿ ಟಿವಿ ಬಂದಿರದ ಸಮಯ, ಸಂಜೆ ಮನೆಯ ಎಲ್ಲಾ ಸದಸ್ಯರು ಕುಳಿತುಕೊಂಡು ನಾವೆಷ್ಟು ದುಷ್ಟತನದ ಮಾತುಗಳನ್ನು ಆಡಬಹುದೋ ಎನ್ನುವ ಸಾಮಥ್ರ್ಯದ ಆಧಾರದ ಮೇಲೆ ನಮ್ಮನ್ನು ನಾವು ಶೋಚನೀಯ ಮಾಡಿಕೊಳ್ಳುತ್ತ ನಮ್ಮ ಸಮಯ ಕಳೆಯುತಿದ್ದೆವು. ‘ 

ಬರಹಕ್ಕಷ್ಟೇ ನಿಲ್ಲದೇ ಸಿನೆಮಾ ನಿರ್ದೇಶನಕ್ಕೂ ಲಗ್ಗೆ ಇಟ್ಟರು ಮ್ಯಾಮೆಟ್. ಹೌಸ್ ಆಫ್ ಗೇಮ್ಸ್ ಇವರ ನಿರ್ದೇಶನದ ಮೊದಲ ಚಿತ್ರ. ನಂತರ ಹೋಮಿಸೈಡ್, ಸ್ಪಾರ್ಟನ್, ಒಲಿಯಾನಾ, ಸ್ಪ್ಯಾನಿಷ್ ಪ್ರಿಸನರ್ ಇವರು ನಿದೇಶಿಸಿದ ಕೆಲವು ಚಿತ್ರಗಳು. ಇವುಗಳಲ್ಲಿ ಹೆಚ್ಚಿನ ಚಿತ್ರಗಳು ಬಾಕ್ಸಾಫೀಸಿನಲ್ಲಿ ಗೆಲ್ಲಲಿಲ್ಲ.

1991 ರಲ್ಲಿ ಮ್ಯಾಮೆಟ್  ಸಿನೆಮಾ ನಿರ್ದೇಶನದ ಬಗ್ಗೆ ‘ಆನ್ ಡಿರೆಕ್ಟಿಂಗ್ ಫಿಲ್ಮ್’ ಎನ್ನುವ ಪುಸ್ತಕ ಬರೆದರು. ನಮಗೆಲ್ಲಾ ಡೇವಿಡ್ ಮ್ಯಾಮೆಟ್ ಪರಿಚಯವಾಗಿದ್ದು ಈ ಪುಸ್ತಕದಿಂದಲೇ. ಸಿನೆಮಾ ನಿರ್ದೇಶನ ಕಲಿಯುವಾಗ ಓದಲೇಬೇಕಾದ ಪುಸ್ತಕಗಳಾದ ಟಾರ್ಕೋವಸ್ಕಿಯ ‘ಸ್ಕಲ್ಪ್ಟಿಂಗ್ ಇನ್ ಟೈಮ್’, ಸ್ಟೀವನ್ ಕಾಟ್ಜ್‍ನ ‘ಶಾಟ್ ಬೈ ಶಾಟ್’, ಆ್ಯಂಡ್ರಿ ವೈಯದಾ ಅವರ ‘ವೈಯದಾ ಆನ್ ಫಿಲ್ಮ್ಸ್’, ವಾಲ್ಟರ್ ಮರ್ಚ್‍ನ ‘ಇನ್ ದಿ ಬ್ಲಿಂಕ್ ಆಫ್ ಅ್ಯನ್ ಐ’ ಐಸಿನ್‍ಸ್ಟೇನ್ ನ ‘ಫಿಲ್ಮ್ ಸೆನ್ಸ್’ ಇವೆಲ್ಲವುಗಳಲ್ಲಿ ಡೇವಿಡ್ ಮ್ಯಾಮೆಟ್ ಅವರ ಪುಸ್ತಕ ಎಲ್ಲಕ್ಕಿಂತ ಅತಿರೇಕದ ನಿಲುವುಗಳನ್ನು ಹೊಂದಿದ ಪುಸ್ತಕ. ಇವರ ಪುಸ್ತಕದಲ್ಲಿರುವ ಥಿಯರಿ ಮತ್ತು ಇವರು ಪ್ರತಿಪಾದಿಸುವ ಥಿಯರಿಗಳನ್ನು ಅನುಷ್ಠಾನಗೊಳಿಸಿಕೊಳ್ಳಬೇಕೋ ಇಲ್ಲವೋ ಎನ್ನುವದನ್ನು ಚರ್ಚಿಸಬಹುದು ಆದರೆ ಇವರ ಥಿಯರಿಗಳನ್ನು ತಿಳಿದುಕೊಳ್ಳದೇ ಇರುವುದು ಒಬ್ಬ ನಿರ್ದೇಶಕನಿಗೆ ದೊಡ್ಡ ಲಾಸ್.

ಮುಂದೇನಾಗಬೇಕು ಎಂದು ತಿಳಿದುಕೊಳ್ಳಲು ಪ್ರೇಕ್ಷಕನನ್ನು ತುದಿಗಾಲಲ್ಲಿ ನಿಲ್ಲಿಸಬೇಕು, ಪ್ರತಿಯೊಂದು ಶಾಟ್ ಕೂಡ ಅದರ ಮುಂಚಿನ ಶಾಟ್‍ದಿಂದ ಕಥೆಯನ್ನು ಮುಂದುವರೆಸುವಂತಿರಬೇಕು, ಪ್ರೇಕ್ಷಕರಿಗೆ ಎಲ್ಲವನ್ನೂ ಹೇಳುವ ಅವಶ್ಯಕತೆ ಇಲ್ಲ,  ‘ಯಾವುದೇ ಸಿನೆಮಾದ ಮೊದಲ ಹತ್ತು ನಿಮಿಷಗಳನ್ನು ಕತ್ತರಿಸಿಬಿಡಿ, ಚೆನ್ನಾಗಾಗುತ್ತೆ.’ ‘ಸಿನೆಮಾ ಮಾಡುವುದು ಒಂದು ಜೋಕ್ ಇದ್ದಂತೆ, ಪ್ರೇಕ್ಷಕರು ಇನ್ನೇನೋ ನಿರೀಕ್ಸಿಸುತ್ತಿದ್ದಾಗ ಬೇರೇನೋ ಆಗುತ್ತೆ. ಹಾಗಿಲ್ಲದಿದ್ದರೆ ಏನಕ್ಕೆ ನೋಡಬೇಕು ನಿಮ್ಮ ಸಿನೆಮಾ?’

2003ರಲ್ಲಿ ಇರ್ಫಾನ್ ಮತ್ತು ನವಾಝುದ್ದಿನ್ ಸಿದ್ದಿಕಿ ಅಭಿನಯದ ‘ದಿ ಬೈಪಾಸ್’ ಎನ್ನುವ ಕಿರುಚಿತ್ರ ಬಿಡುಗಡೆಯಾಯಿತು. ಆ ಸಿನೆಮಾ ನೋಡಿದರೆ ಅದರ ನಿರ್ದೇಶಕ ಡೇವಿಡ್ ಮ್ಯಾಮೆಟ್‍ನಿಂದ ಎಷ್ಟು ಪ್ರಭಾವಿತರಾಗಿದ್ದಾರೆ ಎಂದು ಸುಲಭವಾಗಿ ತಿಳಿಯುತ್ತದೆ. ಆ ಚಿತ್ರಕ್ಕೆ ನೋಡುಗರಿಂದ, ವಿಮರ್ಶಕರಿಂದ ಮೆಚ್ಚುಗೆಯ ಸುರಿಮಳೆಯಾಯಿತು. ಅನೇಕ ಸಿನಿಹಬ್ಬಗಳಲ್ಲಿ ಪ್ರದರ್ಶಿತವಾಯಿತು. ಆಗತಾನೇ ಮ್ಯಾಮೆಟ್ ಅವರ ಪುಸ್ತಕ ಓದಿ ಪ್ರಭಾವಿತನಾಗಿದ್ದ ನನಗೆ ಆ ಚಿತ್ರ ನೋಡಿ ವಾಕರಿಗೆ ಬಂತು. ನಮಗೆಲ್ಲರಿಗೂ ಗೊತ್ತಿರುವಂತೆ ಸಿನೆಮಾ ಎನ್ನುವುದು ಕಥೆ ಹೇಳುವ ಒಂದು ಮಾಧ್ಯಮ. ದಿ ಬ್ಯಪಾಸ್ ಎನ್ನುವ ಚಿತ್ರದಲ್ಲಿ ಅದನ್ನು ಬಿಟ್ಟು ಆ ಮತಿಗೆಟ್ಟ ನಿರ್ದೇಶಕ ತನ್ನ ಕೌಶಲ್ಯವನ್ನು ಪ್ರದರ್ಶಿಸಲೆಂದೇ ಆ ಚಿತ್ರ ಮಾಡಿದ್ದು.

ಇಂತಹದ್ದೇ ದೌರ್ಬಲ್ಯವನ್ನು ಸ್ವತಃ ಮ್ಯಾಮೆಟ್ ಕೂಡ 2008ರಲ್ಲಿ ಬಂದ ತಮ್ಮ ‘ರೆಡ್‍ಬೆಲ್ಟ್’ ಮಿಕ್ಸಡ್ ಮಾರ್ಷಿಯಲ್ ಆರ್ಟ್‍ನ ಚಿತ್ರದಲ್ಲಿ ಪ್ರದರ್ಶಿಸಿದರು. ಅದು ಒಬ್ಬ ಮಾರ್ಷಿಯಲ್ ಆರ್ಟ್ ತರಬೇತುದಾರನ ಕಥೆ. ಅವನು ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುವುದು, ಅವನ ಹೆಂಡತಿ ಮಾಡಿಕೊಳ್ಳುವ ಸಾಲ, ಇವನ ಸಣ್ಣ ತಪ್ಪಿನಿಂದಾಗಿ ಒಬ್ಬ ಪೋಲೀಸ್ ಅಧಿಕಾರಿಯ ಆತ್ಮಹತ್ಯೆ, ಬಿಕ್ಕಟ್ಟಿನಿಂದ ಹೊರಬರುವ ಯಾವುದೇ ದಾರಿಕಾಣದಿದ್ದಾಗ ಇವನೇನು ಮಾಡುತ್ತಾನೆ ಎನ್ನವುದು ಚಿತ್ರದ ಸಾರಾಂಶ. ಚಿತ್ರ ಒಂದು ಕ್ಷಣವೂ ಬೋರ್ ಹೊಡೆಸುವುದಿಲ್ಲ, ಪ್ರತಯೊಂದು ಶಾಟ್‍ಗೆ ತನ್ನದೇ ಆದ ಉದ್ದೇಶವಿದ್ದು ಕಥೆಯನ್ನು ಯಶಸ್ವಿಯಾಗಿ ಮುಂದೊಯ್ಯುತ್ತದೆ.  ಚಿತ್ರಕಥೆ, ಅಭಿನಯ, ತಾಂತ್ರಿಕತೆ, ನಿರ್ದೇಶನ ಎಲ್ಲವೂ ಸರಿಯಾಗಿಯೇ ಇದ್ದರೂ ಮ್ಯಾಮೆಟ್ ಅವರು ತಮ್ಮ ಬರಹ ಮತ್ತು ನಿರ್ದೇಶನದ ತಮ್ಮದೇ ಸಿದ್ಧಾಂತಗಳಿಗೆ ಜೋತುಬೀಳುವುದರಿಂದ ಚಿತ್ರ ಸೋಲುತ್ತದೆ.

ಆದರೆ ಡೇವಿಡ್ ಮ್ಯಾಮೆಟ್ ಸಿನೆಮಾ ಇತಿಹಾಸದಲ್ಲಿ ಬಹುಮುಖ್ಯ ವ್ಯಕ್ತಿ.  ಸಂಭಾಷಣೆಗಳಲ್ಲಿ, ನಿರ್ದೇಶನದಲ್ಲಿ, ಚಿತ್ರಕಥೆಯಲ್ಲಿ ನಿಷ್ಠುರತೆಯನ್ನು ಕಲಿಸುತ್ತಿರುವ ಮ್ಯಾಮೆಟ್ ಇಂದಿಗೂ ಸಕ್ರಿಯವಾಗಿದ್ದಾರೆ. ವಿಶ್ವಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಒಳ್ಳೇ ಸಿನೆಮಾ ಮಾಡಲು ತಮ್ಮ ವಿಶಿಷ್ಟ್ ‘ಮ್ಯಾಮೆಟ್‍ಸ್ಪೀಕ್’ ನಿಂದ ಹುರಿದುಂಬಿಸುತ್ತಲೇ ಇದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...