Homeಮುಖಪುಟಫೇಕುಗಳ ಕೈಯಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಎಂಬ ನಾಟಕ

ಫೇಕುಗಳ ಕೈಯಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಎಂಬ ನಾಟಕ

- Advertisement -
- Advertisement -

| ಮಲ್ಲಿ |
ಕಾಂಗ್ರೆಸ್ಸಿನ ನೂರಾರು ಫೇಸ್‍ಬುಕ್ ಖಾತೆ, ಪುಟಗಳನ್ನು, ಬಿಜೆಪಿಯ ಕೆಲವೇ ಕೆಲವು ಖಾತೆ, ಪುಟಗಳನ್ನು ಫೇಸ್‍ಬುಕ್ ರದ್ದು ಮಾಡಿದೆ. ಫೇಕ್ ನ್ಯೂಸ್ ತಡೆಯುವುದರ ಭಾಗವಾಗಿ ಚುನಾವಣಾ ಹೊತ್ತಲ್ಲಿ ಇಂತಹ ತೋರಿಕೆಯ ಕ್ರಮ ಅದಕ್ಕೆ ಅಗತ್ಯವಾಗಿತ್ತು. ವಿಚಿತ್ರ ಎಂದರೆ ಭಾರತದಲ್ಲಿ ಅದು ಫೇಕ್‍ನ್ಯೂಸ್ ಪತ್ತೆ ಹಚ್ಚುವ ಕ್ರಮೇ ವಿರೋಧಾಭಾಸದಿಂದ ಕೂಡಿದೆ!

ಕಳ್ಳ ಚೌಕಿದಾರನ ಕೈಗೆ ಕಾಯುವ ಕೆಲಸ ಕೊಟ್ಟಂತಾಗಿದೆ. ಫೇಕು ಸುದ್ದಿಗಳನ್ನು ತಡೆಯಲೆಂದು ಫೇಸ್‍ಬುಕ್ ನೇಮಿಸಿಕೊಂಡಿರುವ ಕಂಪನಿಗಳೇ ಫೇಕು ಹರಡುವುದರಲ್ಲಿ, ಅದೂ ಬಿಜೆಪಿಗೆ ಅನುಕೂಲವಾಗುವ ಫೇಕ್ ನ್ಯೂಸ್‍ಗಳನ್ನು ಹರಡುವುದರಲ್ಲಿ ನಿರತವಾಗಿವೆ.
ಇಂಡಿಯಾಟುಡೇ, ಜಾಗರಣ್ ಮೀಡಿಯಾ ಮತ್ತು ಮೊಬೈಲ್‍ನ್ಯೂಸ್-ಈ ಮೂರು ಕಂಪನಿಗಳ ಪೋರ್ಟಲ್‍ಗಳು ಫ್ಯಾಕ್ಟ್ ಚೆಕಿಂಗ್ ಮಾಡುತ್ತಿದ್ದು ಫೇಸ್‍ಬುಕ್ ಸಹಪಾಠಿಗಳಾಗಿವೆ. ಆದರೆ ಇವೇ ಸಂಸ್ಥೆಗಳು ನಡೆಸುವ ಚಾನೆಲ್, ದಿನಪತ್ರಿಕೆ ಮತ್ತು ವೆಬ್‍ಸೈಟ್‍ಗಳು ಫೇಕು ಸುದ್ದಿಗಳನ್ನು ಪ್ರಸಾರ ಮಾಡುತ್ತವೆ. ಅಂದರೆ ಕಳ್ಳನಿಗೆ ಕಾಯುವ ಕೆಲಸವನ್ನು ಫೇಸ್‍ಬುಕ್ ನೀಡಿದೆ.

‘ಫೇಸ್‍ಬುಕ್‍ನಲ್ಲಿ ಸುಳ್ಳುಸುದ್ದಿಗಳು ಪ್ರಸಾರವಾಗದಂತೆ ತಡೆಯಲು ನಾವು ಬದ್ಧರಾಗಿದ್ದೇವೆ. 2019ರ ಚುನಾವಣೆಯ ಸಂದರ್ಭದ ಹಿನ್ನೆಲೆಯಲ್ಲಿ ನಾವು ಇನ್ನಷ್ಟು ಕ್ರಮಗಳನ್ನು ರೂಪಿಸಿದ್ದು, ಸುಳ್ಳುಸುದ್ದಿಗಳಿಗೆ, ಪ್ರಪಗಂಡಾಗಳಿಗೆ ಕಡಿವಾಣ ಹಾಕಲಿದ್ದೇವೆ….’ -ಫೇಸ್‍ಬುಕ್ ಇಂಡಿಯಾದ ಹೆಡ್ ಮನೀಷ ತಂಡೂರಿ ಕಳೆದ ತಿಂಗಳು ಹೀಗೆ ಉದ್ಘರಿಸಿದ್ದರು. ಆದರೆ ಫೇಸ್‍ಬುಕ್ ಈ ವಿಷಯದಲ್ಲಿ ಗಂಭೀರತೆಯನ್ನು ಹೊಂದಿಲ್ಲ ಎಂಬುದು ಪದೇ ಪದೇ ಸಾಬೀತಾಗಿದೆ. ಹಿಂದೆ ಅದು ಬಿಜೆಪಿ ಪಕ್ಷಕ್ಕೆ ಸಾಕಷ್ಟು ಅನುಕುಲವಾಗುವಂತೆ ವರ್ತಿಸಿದ್ದನ್ನೂ ಗಮನಿಸಿದಾಗ ಅದರ ನಡಾವಳಿಯೇ ಸಂಶಯಾತ್ಮಕ ಎನಿಸುತ್ತದೆ.

ಭಾರತದ ಫೇಸ್‍ಬುಕ್ ಅಕೌಂಟುಗಳಲ್ಲಿ ಸುಳ್ಳು ಸುದ್ದಿ ಪತ್ತೆ ಹಚ್ಚಲು, ಆ ಮೂಲಕ ಅಂತಹ ಮೂಲಗಳನ್ನು ನಿರ್ಬಂಧಿಸಲು, ಫೇಸ್‍ಬುಕ್ ಕಳೆದ ತಿಂಗಳು ಮತ್ತೆ 3 ಫ್ಯಾಕ್ಟ್-ಚೆಕಿಂಗ್ ಪೋರ್ಟಲ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡಿತು. ಅದರಲ್ಲಿ ಮೂರು ಪೋರ್ಟಲ್ ಕಂಪನಿಗಳು ಸ್ವತ: ಸುಳ್ ಸುದ್ದಿಯ ವಕ್ತಾರರೇ ಆಗಿವೆ.

ಫೇಸ್‍ಬುಕ್ ನೇಮಿಸಿಕೊಂಡಿರುವ ಅಂತಹ ಮೂರು ಪ್ರಚಂಡ ಫೇಕುದಾರ್ (ಕಳ್ಳ ಚೌಕಿದಾರ್)ಗಳು ಪುಲ್ವಾಮಾ ಘಟನೆಯ ನಂತರ ವಿಪರೀತ ಸುಳ್ಳುಗಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹಬ್ಬಿಸಿವೆ. ಸತ್ಯ ಗೊತ್ತಾದ ಮೇಲೂ ಅವು ವಿಷಾದಿಸಿಲ್ಲ ಕೂಡ. ಅಂದರೆ, ಸುಳ್ಳು ಎಂದು ಗೊತ್ತಿದ್ದೂ ಅವು ಈ ಕೆಲಸ ಮಾಡಿವೆ.

ಫೇಸ್‍ಬುಕ್‍ನ ಕಾಟಾಚಾರದ ಕ್ರಮ
ತನ್ನ ಬ್ರ್ಯಾಂಡ್‍ನೇಮ್ ಉಳಿಸಿಕೊಳ್ಳಲು ಫ್ಯಾಕ್ಟ್ ಚೆಕಿಂಗ್ ಮಾಡುತ್ತೇವೆ ಎನ್ನುವ ಫೇಸ್‍ಬುಕ್ ನಿಜಕ್ಕೂ ಆ ವಿಷಯದಲ್ಲಿ ಪ್ರಾಮಾಣಿಕವಾಗಿಲ್ಲ. ಸುಳ್ಳೋ, ಸತ್ಯವೋ, ಅದಕ್ಕೆ ತನ್ನ ವ್ಯವಹಾರ ಕ್ಲಿಕ್ ಆಗಬೇಕಷ್ಟೇ.
ಹಿಂದೆ ಅಮೆರಿಕದಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಪೋರ್ಟಲ್ ಆಗಿದ್ದ ‘ಸ್ನೋಪ್ಸ್’ನ ಮ್ಯಾನೇಜಿಂಗ್ ಎಡಿಟರ್ ಬ್ರೂಕ್ ಬಿನ್‍ಸೋಸ್ಕಿ ಪ್ರಕಾರ, ‘ನಮ್ಮನ್ನು ಅವರು ‘ಕ್ರೈಸಿಸ್ ಪಿ.ಆರ್. ತರಹ ಬಳಸುತ್ತಾರೆ ಅಷ್ಟೇ… ತಾವು ಫೇಕ್ ನ್ಯೂಸ್ ತಡೆಯಲು ಕ್ರಮ ಕೈಗೊಂಡಿದ್ದೇವೆ ಎಂದು ನಂಬಿಸಲು ಫೇಸ್‍ಬುಕ್ ಈ ನಾಟಕ ಆಡುತ್ತದೆ. ನಿಜಕ್ಕೂ ಫೇಕ್ ತಡೆಯುವಲ್ಲಿ ಅದಕ್ಕೆ ಯಾವ ಆಸಕ್ತಿಯೂ ಇಲ್ಲ….”
(ಆಧಾರ: altnews.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...