Homeಮುಖಪುಟಖಬರ್ ಲಹರಿಯಾ: ದಲಿತ ಹೆಣ್ಣು ಮಕ್ಕಳ ಯಶಸ್ವಿ ಪತ್ರಿಕೋದ್ಯಮ

ಖಬರ್ ಲಹರಿಯಾ: ದಲಿತ ಹೆಣ್ಣು ಮಕ್ಕಳ ಯಶಸ್ವಿ ಪತ್ರಿಕೋದ್ಯಮ

ಇವತ್ತು ‘ಖಬರ್ ಲಹರಿಯಾ’ ಅಲ್ಲಿನ ಓದುಗರ ಹೃದಯದ ಪತ್ರಿಕೆಯಾಗಲು ಮುಖ್ಯ ಕಾರಣ, ಜನರಾಡುವ ಭಾಷೆಗಳಲ್ಲಿ ಇದು ಪ್ರಕಟವಾಗುವುದು.

- Advertisement -
- Advertisement -

ಡಾ. ಸ್ವಾತಿ ಶುಕ್ಲ

ಕನ್ನಡಕ್ಕೆ : ಮಲ್ಲನಗೌಡರ್ ಪಿ.ಕೆ

ನಟರಂತೆ ಹಾವಭಾವ ಪ್ರದರ್ಶಿಸುತ್ತ ದಿನವೀಡೀ ಅರಚಾಡುವ ಟಿವಿ ನಿರೂಪಕರಿಂದ ತಲೆ ಚಿಟ್ಟು ಹಿಡಿದಿದೆಯಾ? ಮತ್ತದೇ ಮೋದಿ ವರ್ಸಸ್ ರಾಹುಲ್ ಎಂಬ ಎರಡೇ ಆಯ್ಕೆಗಳ ಮೂರ್ಖತನವೂ ನಿಮಗೆ ಬೋರ್ ಹೊಡೆಸಿದೆಯಾ? ಹಾಗಾದರೆ ನೀವು ಪರ್ಯಾಯ ಮಾಧ್ಯಮದತ್ತ ಮುಖ ಮಾಡಲೇಬೇಕಾದ ಸಮಯವಿದು.

ಯಾವ ಬಂಡವಾಳಶಾಹಿಯ ಹಂಗಿಲ್ಲದೇ ಜನರೇ ಹಲವು ಪತ್ರಿಕೆಗಳನ್ನು ತರುವ ಮೂಲಕ ತಳ ಸಮುದಾಯಗಳಲ್ಲಿ ಎಚ್ಚರ ಮೂಡಿಸುವ ಯತ್ನಗಳು ದೇಶದ ಅಲ್ಲಲ್ಲಿ ನಡೆದಿವೆ. ಅಂತಹ ಒಂದು ಅಮೋಘ ಸಾಹಸವೇ ‘ಖಬರ್ ಲಹರಿಯಾ’… ಅಂದರೆ ಸುದ್ದಿಯ ಅಲೆಗಳು.. ‘ಖಬರ್ ಲಹರಿಯಾ’ ಎಂಬ ಈ ವಾರಪತ್ರಿಕೆಗೆ ಹಲವು ವೈಶಿಷ್ಟ್ಯಗಳು ಮತ್ತು ತನ್ನದೇ ಆದ ಅನನ್ಯತೆಯಿದೆ. ಮಹಿಳೆಯರಿಂದ ನಡೆಸಲ್ಪಡುವ ಸ್ವತಂತ್ರ, ಗ್ರಾಮೀಣ ವಿಷಯಾಧಾರಿತ ಮೊದಲ ಭಾರತೀಯ ವಾರಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಯದ್ದು.

ಗ್ರಾಮೀಣ ಮಹಿಳೆಯರೇ ಸೇರಿಕೊಂಡು ಇಂತಹ ಪ್ರಯೋಗ ಮಾಡಿ ಉತ್ತರ ಭಾರತದ ಗ್ರಾಮಗಳಲ್ಲಿ ಯಶಸ್ವಿಯಾಗಿದ್ದು ಇದೇ ಮೊದಲು. ಮಹಿಳೆಯರೇ ಬರೆಯುತ್ತಾರೆ, ಎಡಿಟ್ ಮಾಡುತ್ತಾರೆ, ಫೋಟೊಗ್ರಫಿ ಕೂಡ ಅವರದೇ. ವಿಷಯ ಆಯ್ಕೆಯನ್ನು ಅವರೇ ಮಾಡುತ್ತಾರೆ ಮಾತ್ರವಲ್ಲ ಮಾರ್ಕೆಟಿಂಗ್ ಕೂಡ ಮಹಿಳೆಯರೆ ನಿಭಾಯಿಸುತ್ತಾರೆ. ಅಂದಂತೆ, ಈ ಮಹಿಳೆಯರ ಪೈಕಿ ಬಹುಪಾಲು ಜನ ದಲಿತ, ಆದಿವಾಸಿ ಮತ್ತು ಮುಸ್ಲಿಮ ಸಮುದಾಯಗಳಿಗೆ ಸೇರಿದವರು. ಈ ಸಮುದಾಯಗಳಿಂದಲೇ ಮಹಿಳೆಯರನ್ನು ಆಯ್ಕೆ ಮಾಡಿ, ಅವರಿಗೆ ವರದಿಗಾರಿಕೆ, ಫೋಟೊಗ್ರಫಿ, ವಿಡಿಯೋ ಮಾಡುವುದರ ಕುರಿತು ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ.

ಪತ್ರಿಕೆಗಳೇ ಇಲ್ಲದ ಗ್ರಾಮಗಳಿಗೆ ‘ಖಬರ್ ಲಹರಿಯಾ’ ಸುದ್ದಿಯ ಅಲೆಗಳನ್ನು, ಅದೂ ಬದುಕಿನ ಕುರಿತಾದ, ಮಹಿಳೆಯ ಬದುಕಿನ ಕುರಿತಾದ ವಿಷಯಗಳನ್ನು ತರುತ್ತಿದೆ. ಮೊದಲು ಇದು ಉತ್ತರಪ್ರದೇಶದ ಬುಂದೇಲ್‍ಖಂಡದಲ್ಲಿ ಶುರುವಾಗಿತು. ಲೈಂಗಿಕ ಹಕ್ಕುಗಳ ಕುರಿತು ಕೆಲಸ ಮಾಡುವ ದೆಹಲಿ ಮೂಲದ ‘ನಿರಂತರ್’ ಎಂಬ ಸಂಘಟನೆಯ ಆಸಕ್ತಿಯಿಂದ 2002ರಲ್ಲಿ ಈ ಪ್ರಯೋಗ ಅರಳಿತು. ಆಗ ಈ ಪತ್ರಿಕೆಯ ಹೆಸರು ‘ಮಹಿಳಾ ಢಾಕಿಯಾ’ (ಮಹಿಳಾ ಅಂಚೆಪೇದೆ).

ಇವತ್ತು ‘ಖಬರ್ ಲಹರಿಯಾ’ ಅಲ್ಲಿನ ಓದುಗರ ಹೃದಯದ ಪತ್ರಿಕೆಯಾಗಲು ಮುಖ್ಯ ಕಾರಣ, ಜನರಾಡುವ ಭಾಷೆಗಳಲ್ಲಿ ಇದು ಪ್ರಕಟವಾಗುವುದು. ಮೊದಲು ಬುಂದೇಲಿ ಭಾಷೆಯಲ್ಲಿ ಬಂದ ಪತ್ರಿಕೆ ಈಗ ತಳ ಸಮುದಾಯಗಳ ಐದು ಭಾಷೆಗಳಿಗೆ (ಬಜ್ಜಿಕಾ, ಅವಧಿ, ಹಿಂದೂಸ್ತಾನಿ, ಭೋಜಪುರಿ) ವಿಸ್ತರಣೆಗೊಂಡಿದೆ. ಗ್ರಾಮೀಣ ಮಹಿಳೆಯರಿಗಾಗಿಯೇ ಈ ಪತ್ರಿಕೆ ಬರುತ್ತಿದ್ದು, ಬಹಳಷ್ಟು ಕಡೆ, ಅನಕ್ಷರಸ್ಥರು ಇರುವಲ್ಲಿ ಪತ್ರಿಕೆ ವರದಿಗಾರೇ ಜನರ ಎದುರು ಪತ್ರಿಕೆಯನ್ನು ಓದಿ ವಿವರಿಸುತ್ತಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರಗಳಲ್ಲಿ 80 ಸಾವಿರ ಓದುಗರನ್ನು ಹೊಂದಿರುವ ಈ ಪತ್ರಿಕೆ ಎರಡು ವರ್ಷಗಳ ಹಿಂದೆ ತನ್ನ ಡಿಜಿಟಲ್ ಆವೃತ್ತಿಯನ್ನು ಹೊರ ತಂದು, ನಗರವಾಸಿಗಳನ್ನೂ ತಲುಪುತ್ತಿದೆ. ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ತಿಂಗಳಿಗೆ 50 ಲಕ್ಷ ಜನರನ್ನು ಇದು ತಲುಪುತ್ತಿದೆ.

ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ 13 ಜಿಲ್ಲೆಗಳಲ್ಲಿ 30 ವರದಿಗಾರು ಮತ್ತು ಸ್ಟಿಂಜರ್‌ಗಳನ್ನು ಹೊಂದಿರುವ ಲಹರಿಯಾ, ಗ್ರಾಮೀಣ ಸಮಸ್ಯೆಗಳು, ದುಡಿಯುವ ಜನರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುತ್ತ ಬಂದಿದೆ. ಜನಪ್ರತಿನಿಧಿಗಳು ಕುಡಿಯುವ ನೀರು, ಶೌಚಾಲಯ ವವ್ಯಸ್ಥೆ ಮಾಡಿದ್ದಾರೋ ಇಲ್ಲವೋ ಎಂಬ ಕುರಿತಾಗಿ ರಿಯಾಲಿಟಿ ಚೆಕ್ ವರದಿಗಳನ್ನು ಬರೆದು ಜನರಲ್ಲಿ ಅರಿವು ತುಂಬಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ವಿಶೇಷ ಪುರವಣಿಯನ್ನೂ ತರಲಾಗುತ್ತಿದೆ. 2018ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ‘ಯೋಗಿ ಟ್ರ್ಯಾಕರ್’ ಎಂಬ ಅಂಕಣವನ್ನೇ ಆರಂಭಿಸಲಾಗಿತು. ಗ್ರಾಮೀಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಬೆಳಕಿಗೆ ತರಲು ‘ಮೀಟೂ’ ಚಳವಳಿಯನ್ನು ಕೂಡ ಈ ಪತ್ರಿಕೆ ನಡೆಸುತ್ತಿದೆ.

ಖಬರ್ ಲಹರಿಯಾದ ಅನನ್ಯ ಸಾಧನೆಯನ್ನು ಮೆಚ್ಚಿ ಯುನೆಸ್ಕೊ ಪ್ರಶಸ್ತಿಯನ್ನು ನೀಡಿದೆ. ಜರ್ಮನಿಯ ಚಾನೆಲ್ಲೊಂದು ಕೂಡ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಗೌರವ, ಪ್ರಶಸ್ತಿ ಪಡೆದು ಮುನ್ನುಗುತ್ತಿರುವ ‘ಖಬರ್ ಲಹರಿಯಾ’ ಪ್ರಜಾಪ್ರಭುತ್ವದ ಬೆಳಕು, ಹೊಸತನದ ಅಲೆ…. ಜೊತೆಗೆ ಕನ್ನಡದ ಸ್ವತಂತ್ರ ಮಾಧ್ಯಮಗಳಿಗೆ ಮಾದರಿ.


ಇದನ್ನೂ ಓದಿ; ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...