Homeಮುಖಪುಟಫೇಕುಗಳ ಕೈಯಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಎಂಬ ನಾಟಕ

ಫೇಕುಗಳ ಕೈಯಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಎಂಬ ನಾಟಕ

- Advertisement -
- Advertisement -

| ಮಲ್ಲಿ |
ಕಾಂಗ್ರೆಸ್ಸಿನ ನೂರಾರು ಫೇಸ್‍ಬುಕ್ ಖಾತೆ, ಪುಟಗಳನ್ನು, ಬಿಜೆಪಿಯ ಕೆಲವೇ ಕೆಲವು ಖಾತೆ, ಪುಟಗಳನ್ನು ಫೇಸ್‍ಬುಕ್ ರದ್ದು ಮಾಡಿದೆ. ಫೇಕ್ ನ್ಯೂಸ್ ತಡೆಯುವುದರ ಭಾಗವಾಗಿ ಚುನಾವಣಾ ಹೊತ್ತಲ್ಲಿ ಇಂತಹ ತೋರಿಕೆಯ ಕ್ರಮ ಅದಕ್ಕೆ ಅಗತ್ಯವಾಗಿತ್ತು. ವಿಚಿತ್ರ ಎಂದರೆ ಭಾರತದಲ್ಲಿ ಅದು ಫೇಕ್‍ನ್ಯೂಸ್ ಪತ್ತೆ ಹಚ್ಚುವ ಕ್ರಮೇ ವಿರೋಧಾಭಾಸದಿಂದ ಕೂಡಿದೆ!

ಕಳ್ಳ ಚೌಕಿದಾರನ ಕೈಗೆ ಕಾಯುವ ಕೆಲಸ ಕೊಟ್ಟಂತಾಗಿದೆ. ಫೇಕು ಸುದ್ದಿಗಳನ್ನು ತಡೆಯಲೆಂದು ಫೇಸ್‍ಬುಕ್ ನೇಮಿಸಿಕೊಂಡಿರುವ ಕಂಪನಿಗಳೇ ಫೇಕು ಹರಡುವುದರಲ್ಲಿ, ಅದೂ ಬಿಜೆಪಿಗೆ ಅನುಕೂಲವಾಗುವ ಫೇಕ್ ನ್ಯೂಸ್‍ಗಳನ್ನು ಹರಡುವುದರಲ್ಲಿ ನಿರತವಾಗಿವೆ.
ಇಂಡಿಯಾಟುಡೇ, ಜಾಗರಣ್ ಮೀಡಿಯಾ ಮತ್ತು ಮೊಬೈಲ್‍ನ್ಯೂಸ್-ಈ ಮೂರು ಕಂಪನಿಗಳ ಪೋರ್ಟಲ್‍ಗಳು ಫ್ಯಾಕ್ಟ್ ಚೆಕಿಂಗ್ ಮಾಡುತ್ತಿದ್ದು ಫೇಸ್‍ಬುಕ್ ಸಹಪಾಠಿಗಳಾಗಿವೆ. ಆದರೆ ಇವೇ ಸಂಸ್ಥೆಗಳು ನಡೆಸುವ ಚಾನೆಲ್, ದಿನಪತ್ರಿಕೆ ಮತ್ತು ವೆಬ್‍ಸೈಟ್‍ಗಳು ಫೇಕು ಸುದ್ದಿಗಳನ್ನು ಪ್ರಸಾರ ಮಾಡುತ್ತವೆ. ಅಂದರೆ ಕಳ್ಳನಿಗೆ ಕಾಯುವ ಕೆಲಸವನ್ನು ಫೇಸ್‍ಬುಕ್ ನೀಡಿದೆ.

‘ಫೇಸ್‍ಬುಕ್‍ನಲ್ಲಿ ಸುಳ್ಳುಸುದ್ದಿಗಳು ಪ್ರಸಾರವಾಗದಂತೆ ತಡೆಯಲು ನಾವು ಬದ್ಧರಾಗಿದ್ದೇವೆ. 2019ರ ಚುನಾವಣೆಯ ಸಂದರ್ಭದ ಹಿನ್ನೆಲೆಯಲ್ಲಿ ನಾವು ಇನ್ನಷ್ಟು ಕ್ರಮಗಳನ್ನು ರೂಪಿಸಿದ್ದು, ಸುಳ್ಳುಸುದ್ದಿಗಳಿಗೆ, ಪ್ರಪಗಂಡಾಗಳಿಗೆ ಕಡಿವಾಣ ಹಾಕಲಿದ್ದೇವೆ….’ -ಫೇಸ್‍ಬುಕ್ ಇಂಡಿಯಾದ ಹೆಡ್ ಮನೀಷ ತಂಡೂರಿ ಕಳೆದ ತಿಂಗಳು ಹೀಗೆ ಉದ್ಘರಿಸಿದ್ದರು. ಆದರೆ ಫೇಸ್‍ಬುಕ್ ಈ ವಿಷಯದಲ್ಲಿ ಗಂಭೀರತೆಯನ್ನು ಹೊಂದಿಲ್ಲ ಎಂಬುದು ಪದೇ ಪದೇ ಸಾಬೀತಾಗಿದೆ. ಹಿಂದೆ ಅದು ಬಿಜೆಪಿ ಪಕ್ಷಕ್ಕೆ ಸಾಕಷ್ಟು ಅನುಕುಲವಾಗುವಂತೆ ವರ್ತಿಸಿದ್ದನ್ನೂ ಗಮನಿಸಿದಾಗ ಅದರ ನಡಾವಳಿಯೇ ಸಂಶಯಾತ್ಮಕ ಎನಿಸುತ್ತದೆ.

ಭಾರತದ ಫೇಸ್‍ಬುಕ್ ಅಕೌಂಟುಗಳಲ್ಲಿ ಸುಳ್ಳು ಸುದ್ದಿ ಪತ್ತೆ ಹಚ್ಚಲು, ಆ ಮೂಲಕ ಅಂತಹ ಮೂಲಗಳನ್ನು ನಿರ್ಬಂಧಿಸಲು, ಫೇಸ್‍ಬುಕ್ ಕಳೆದ ತಿಂಗಳು ಮತ್ತೆ 3 ಫ್ಯಾಕ್ಟ್-ಚೆಕಿಂಗ್ ಪೋರ್ಟಲ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡಿತು. ಅದರಲ್ಲಿ ಮೂರು ಪೋರ್ಟಲ್ ಕಂಪನಿಗಳು ಸ್ವತ: ಸುಳ್ ಸುದ್ದಿಯ ವಕ್ತಾರರೇ ಆಗಿವೆ.

ಫೇಸ್‍ಬುಕ್ ನೇಮಿಸಿಕೊಂಡಿರುವ ಅಂತಹ ಮೂರು ಪ್ರಚಂಡ ಫೇಕುದಾರ್ (ಕಳ್ಳ ಚೌಕಿದಾರ್)ಗಳು ಪುಲ್ವಾಮಾ ಘಟನೆಯ ನಂತರ ವಿಪರೀತ ಸುಳ್ಳುಗಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹಬ್ಬಿಸಿವೆ. ಸತ್ಯ ಗೊತ್ತಾದ ಮೇಲೂ ಅವು ವಿಷಾದಿಸಿಲ್ಲ ಕೂಡ. ಅಂದರೆ, ಸುಳ್ಳು ಎಂದು ಗೊತ್ತಿದ್ದೂ ಅವು ಈ ಕೆಲಸ ಮಾಡಿವೆ.

ಫೇಸ್‍ಬುಕ್‍ನ ಕಾಟಾಚಾರದ ಕ್ರಮ
ತನ್ನ ಬ್ರ್ಯಾಂಡ್‍ನೇಮ್ ಉಳಿಸಿಕೊಳ್ಳಲು ಫ್ಯಾಕ್ಟ್ ಚೆಕಿಂಗ್ ಮಾಡುತ್ತೇವೆ ಎನ್ನುವ ಫೇಸ್‍ಬುಕ್ ನಿಜಕ್ಕೂ ಆ ವಿಷಯದಲ್ಲಿ ಪ್ರಾಮಾಣಿಕವಾಗಿಲ್ಲ. ಸುಳ್ಳೋ, ಸತ್ಯವೋ, ಅದಕ್ಕೆ ತನ್ನ ವ್ಯವಹಾರ ಕ್ಲಿಕ್ ಆಗಬೇಕಷ್ಟೇ.
ಹಿಂದೆ ಅಮೆರಿಕದಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಪೋರ್ಟಲ್ ಆಗಿದ್ದ ‘ಸ್ನೋಪ್ಸ್’ನ ಮ್ಯಾನೇಜಿಂಗ್ ಎಡಿಟರ್ ಬ್ರೂಕ್ ಬಿನ್‍ಸೋಸ್ಕಿ ಪ್ರಕಾರ, ‘ನಮ್ಮನ್ನು ಅವರು ‘ಕ್ರೈಸಿಸ್ ಪಿ.ಆರ್. ತರಹ ಬಳಸುತ್ತಾರೆ ಅಷ್ಟೇ… ತಾವು ಫೇಕ್ ನ್ಯೂಸ್ ತಡೆಯಲು ಕ್ರಮ ಕೈಗೊಂಡಿದ್ದೇವೆ ಎಂದು ನಂಬಿಸಲು ಫೇಸ್‍ಬುಕ್ ಈ ನಾಟಕ ಆಡುತ್ತದೆ. ನಿಜಕ್ಕೂ ಫೇಕ್ ತಡೆಯುವಲ್ಲಿ ಅದಕ್ಕೆ ಯಾವ ಆಸಕ್ತಿಯೂ ಇಲ್ಲ….”
(ಆಧಾರ: altnews.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...