Homeಮುಖಪುಟಫೇಕುಗಳ ಕೈಯಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಎಂಬ ನಾಟಕ

ಫೇಕುಗಳ ಕೈಯಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಎಂಬ ನಾಟಕ

- Advertisement -
- Advertisement -

| ಮಲ್ಲಿ |
ಕಾಂಗ್ರೆಸ್ಸಿನ ನೂರಾರು ಫೇಸ್‍ಬುಕ್ ಖಾತೆ, ಪುಟಗಳನ್ನು, ಬಿಜೆಪಿಯ ಕೆಲವೇ ಕೆಲವು ಖಾತೆ, ಪುಟಗಳನ್ನು ಫೇಸ್‍ಬುಕ್ ರದ್ದು ಮಾಡಿದೆ. ಫೇಕ್ ನ್ಯೂಸ್ ತಡೆಯುವುದರ ಭಾಗವಾಗಿ ಚುನಾವಣಾ ಹೊತ್ತಲ್ಲಿ ಇಂತಹ ತೋರಿಕೆಯ ಕ್ರಮ ಅದಕ್ಕೆ ಅಗತ್ಯವಾಗಿತ್ತು. ವಿಚಿತ್ರ ಎಂದರೆ ಭಾರತದಲ್ಲಿ ಅದು ಫೇಕ್‍ನ್ಯೂಸ್ ಪತ್ತೆ ಹಚ್ಚುವ ಕ್ರಮೇ ವಿರೋಧಾಭಾಸದಿಂದ ಕೂಡಿದೆ!

ಕಳ್ಳ ಚೌಕಿದಾರನ ಕೈಗೆ ಕಾಯುವ ಕೆಲಸ ಕೊಟ್ಟಂತಾಗಿದೆ. ಫೇಕು ಸುದ್ದಿಗಳನ್ನು ತಡೆಯಲೆಂದು ಫೇಸ್‍ಬುಕ್ ನೇಮಿಸಿಕೊಂಡಿರುವ ಕಂಪನಿಗಳೇ ಫೇಕು ಹರಡುವುದರಲ್ಲಿ, ಅದೂ ಬಿಜೆಪಿಗೆ ಅನುಕೂಲವಾಗುವ ಫೇಕ್ ನ್ಯೂಸ್‍ಗಳನ್ನು ಹರಡುವುದರಲ್ಲಿ ನಿರತವಾಗಿವೆ.
ಇಂಡಿಯಾಟುಡೇ, ಜಾಗರಣ್ ಮೀಡಿಯಾ ಮತ್ತು ಮೊಬೈಲ್‍ನ್ಯೂಸ್-ಈ ಮೂರು ಕಂಪನಿಗಳ ಪೋರ್ಟಲ್‍ಗಳು ಫ್ಯಾಕ್ಟ್ ಚೆಕಿಂಗ್ ಮಾಡುತ್ತಿದ್ದು ಫೇಸ್‍ಬುಕ್ ಸಹಪಾಠಿಗಳಾಗಿವೆ. ಆದರೆ ಇವೇ ಸಂಸ್ಥೆಗಳು ನಡೆಸುವ ಚಾನೆಲ್, ದಿನಪತ್ರಿಕೆ ಮತ್ತು ವೆಬ್‍ಸೈಟ್‍ಗಳು ಫೇಕು ಸುದ್ದಿಗಳನ್ನು ಪ್ರಸಾರ ಮಾಡುತ್ತವೆ. ಅಂದರೆ ಕಳ್ಳನಿಗೆ ಕಾಯುವ ಕೆಲಸವನ್ನು ಫೇಸ್‍ಬುಕ್ ನೀಡಿದೆ.

‘ಫೇಸ್‍ಬುಕ್‍ನಲ್ಲಿ ಸುಳ್ಳುಸುದ್ದಿಗಳು ಪ್ರಸಾರವಾಗದಂತೆ ತಡೆಯಲು ನಾವು ಬದ್ಧರಾಗಿದ್ದೇವೆ. 2019ರ ಚುನಾವಣೆಯ ಸಂದರ್ಭದ ಹಿನ್ನೆಲೆಯಲ್ಲಿ ನಾವು ಇನ್ನಷ್ಟು ಕ್ರಮಗಳನ್ನು ರೂಪಿಸಿದ್ದು, ಸುಳ್ಳುಸುದ್ದಿಗಳಿಗೆ, ಪ್ರಪಗಂಡಾಗಳಿಗೆ ಕಡಿವಾಣ ಹಾಕಲಿದ್ದೇವೆ….’ -ಫೇಸ್‍ಬುಕ್ ಇಂಡಿಯಾದ ಹೆಡ್ ಮನೀಷ ತಂಡೂರಿ ಕಳೆದ ತಿಂಗಳು ಹೀಗೆ ಉದ್ಘರಿಸಿದ್ದರು. ಆದರೆ ಫೇಸ್‍ಬುಕ್ ಈ ವಿಷಯದಲ್ಲಿ ಗಂಭೀರತೆಯನ್ನು ಹೊಂದಿಲ್ಲ ಎಂಬುದು ಪದೇ ಪದೇ ಸಾಬೀತಾಗಿದೆ. ಹಿಂದೆ ಅದು ಬಿಜೆಪಿ ಪಕ್ಷಕ್ಕೆ ಸಾಕಷ್ಟು ಅನುಕುಲವಾಗುವಂತೆ ವರ್ತಿಸಿದ್ದನ್ನೂ ಗಮನಿಸಿದಾಗ ಅದರ ನಡಾವಳಿಯೇ ಸಂಶಯಾತ್ಮಕ ಎನಿಸುತ್ತದೆ.

ಭಾರತದ ಫೇಸ್‍ಬುಕ್ ಅಕೌಂಟುಗಳಲ್ಲಿ ಸುಳ್ಳು ಸುದ್ದಿ ಪತ್ತೆ ಹಚ್ಚಲು, ಆ ಮೂಲಕ ಅಂತಹ ಮೂಲಗಳನ್ನು ನಿರ್ಬಂಧಿಸಲು, ಫೇಸ್‍ಬುಕ್ ಕಳೆದ ತಿಂಗಳು ಮತ್ತೆ 3 ಫ್ಯಾಕ್ಟ್-ಚೆಕಿಂಗ್ ಪೋರ್ಟಲ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡಿತು. ಅದರಲ್ಲಿ ಮೂರು ಪೋರ್ಟಲ್ ಕಂಪನಿಗಳು ಸ್ವತ: ಸುಳ್ ಸುದ್ದಿಯ ವಕ್ತಾರರೇ ಆಗಿವೆ.

ಫೇಸ್‍ಬುಕ್ ನೇಮಿಸಿಕೊಂಡಿರುವ ಅಂತಹ ಮೂರು ಪ್ರಚಂಡ ಫೇಕುದಾರ್ (ಕಳ್ಳ ಚೌಕಿದಾರ್)ಗಳು ಪುಲ್ವಾಮಾ ಘಟನೆಯ ನಂತರ ವಿಪರೀತ ಸುಳ್ಳುಗಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹಬ್ಬಿಸಿವೆ. ಸತ್ಯ ಗೊತ್ತಾದ ಮೇಲೂ ಅವು ವಿಷಾದಿಸಿಲ್ಲ ಕೂಡ. ಅಂದರೆ, ಸುಳ್ಳು ಎಂದು ಗೊತ್ತಿದ್ದೂ ಅವು ಈ ಕೆಲಸ ಮಾಡಿವೆ.

ಫೇಸ್‍ಬುಕ್‍ನ ಕಾಟಾಚಾರದ ಕ್ರಮ
ತನ್ನ ಬ್ರ್ಯಾಂಡ್‍ನೇಮ್ ಉಳಿಸಿಕೊಳ್ಳಲು ಫ್ಯಾಕ್ಟ್ ಚೆಕಿಂಗ್ ಮಾಡುತ್ತೇವೆ ಎನ್ನುವ ಫೇಸ್‍ಬುಕ್ ನಿಜಕ್ಕೂ ಆ ವಿಷಯದಲ್ಲಿ ಪ್ರಾಮಾಣಿಕವಾಗಿಲ್ಲ. ಸುಳ್ಳೋ, ಸತ್ಯವೋ, ಅದಕ್ಕೆ ತನ್ನ ವ್ಯವಹಾರ ಕ್ಲಿಕ್ ಆಗಬೇಕಷ್ಟೇ.
ಹಿಂದೆ ಅಮೆರಿಕದಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಪೋರ್ಟಲ್ ಆಗಿದ್ದ ‘ಸ್ನೋಪ್ಸ್’ನ ಮ್ಯಾನೇಜಿಂಗ್ ಎಡಿಟರ್ ಬ್ರೂಕ್ ಬಿನ್‍ಸೋಸ್ಕಿ ಪ್ರಕಾರ, ‘ನಮ್ಮನ್ನು ಅವರು ‘ಕ್ರೈಸಿಸ್ ಪಿ.ಆರ್. ತರಹ ಬಳಸುತ್ತಾರೆ ಅಷ್ಟೇ… ತಾವು ಫೇಕ್ ನ್ಯೂಸ್ ತಡೆಯಲು ಕ್ರಮ ಕೈಗೊಂಡಿದ್ದೇವೆ ಎಂದು ನಂಬಿಸಲು ಫೇಸ್‍ಬುಕ್ ಈ ನಾಟಕ ಆಡುತ್ತದೆ. ನಿಜಕ್ಕೂ ಫೇಕ್ ತಡೆಯುವಲ್ಲಿ ಅದಕ್ಕೆ ಯಾವ ಆಸಕ್ತಿಯೂ ಇಲ್ಲ….”
(ಆಧಾರ: altnews.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...