Homeಮುಖಪುಟಟ್ರ್ಯಾಕ್ ರೆಕಾರ್ಡ್ ಹೇಳುವ ಸತ್ಯ : ರೈಲ್ವೆಯನ್ನೂ ಹಳಿ ತಪ್ಪಿಸಿದ ಮೋದಿ ಸರ್ಕಾರ!

ಟ್ರ್ಯಾಕ್ ರೆಕಾರ್ಡ್ ಹೇಳುವ ಸತ್ಯ : ರೈಲ್ವೆಯನ್ನೂ ಹಳಿ ತಪ್ಪಿಸಿದ ಮೋದಿ ಸರ್ಕಾರ!

- Advertisement -
- Advertisement -

-ಸಂಜಯ್ ಬಸು ಮತ್ತು ಉಜ್ವಲ್ ಚೌಧರಿ

ಕನ್ನಡಕ್ಕೆ: ಮಲ್ಲನಗೌಡರ್ ಪಿ.ಕೆ

ಒಂದು ಕಡೆ ಸಾರ್ವಜನಿಕ ತನಿಖಾ ಸಂಸ್ಥೆಗಳನ್ನು ಬಿಜೆಪಿಯ ಏಜೆಂಟರನ್ನಾಗಿ ಪರಿವರ್ತಿಸಿದ ಮೋದಿ ಸರ್ಕಾರ, ಇನ್ನೊಂದು ಕಡೆ ಸಾರ್ವಜನಿಕ ಸೇವೆ ನೀಡುವ ಸರ್ಕಾರಿ ಇಲಾಖೆ, ಸಂಸ್ಥೆಗಳನ್ನು ಹಳ್ಳ ಹಿಡಿಸುತ್ತ ಬಂದಿತು. ಅನಿಲ್ ಅಂಬಾನಿಗಾಗಿ ಎಚ್‍ಎಎಲ್ ಅನ್ನು, ಮುಖೇಶ್ ಅಂಬಾನಿಗಾಗಿ ಬಿಎಸ್‍ಎನ್‍ಎಲ್‍ನ್ನು ವಂಚಿಸಿದ ಮೋದಿ ಸರ್ಕಾರ ರೈಲ್ವೇ ಇಲಾಖೆಗೂ ಒಂದು ದುರ್ಗತಿ ಕಾಣಿಸಿಯೇ ಬಿಟ್ಟಿದೆ…..

ಭಾರತದ ಜೀವನಾಡಿ ಎಂದೇ ಹೆಸರು ಪಡೆದ ರೈಲ್ವೇ ವ್ಯವಸ್ಥೆಯನ್ನು ಈ ಐದು ವರ್ಷಗಳಲ್ಲಿ ಹಳಿ ತಪ್ಪಿಸಿದ ‘ಕೀರ್ತಿ’ಯನ್ನು ಮೋದಿ ಸರ್ಕಾರ ಹೊತ್ತುಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ದೊರೆತ ಮತ್ತು ಲೋಕಸಭೆಗೆ ಕೇಂದ್ರ ಸರ್ಕಾರವೇ ನೀಡಿದ ಮಾಹಿತಿಗಳೆರಡೂ ಇದನ್ನು ಪುಷ್ಟಿಕರಿಸುತ್ತಿವೆ.

ವರ್ಷದಲ್ಲಿ 8 ಬಿಲಿಯನ್ (8 ಶತಕೋಟಿ) ಪ್ರಯಾಣಿಕರನ್ನು ಸಾಗಿಸುವ ವಿಶ್ವದ ನಾಲ್ಕನೇ ದೊಡ್ಡ ನೆಟ್‍ವರ್ಕ್, ಚೀನಾದ ನಂತರ ಸಾಮರ್ಥಯದಲ್ಲಿ ಎರಡನೇ ಸ್ಥಾನ ಹೊಂದಿರುವ ಭಾರತೀಯ ರೈಲ್ವೇ ಇವತ್ತು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಈ ಸರ್ಕಾರ ಬಂದ ಮೊದಲ ವರ್ಷ 2014-15ರಲ್ಲೇ 135 ರೈಲು ಅಪಘಾತ ಸಂಭವಿಸಿದವು, ಅದು ಕ್ರಮೇಣ ಇಳಿಯುತ್ತ ಬಂದು 2017-18ರಲ್ಲಿ 78ಕ್ಕೆ ಇಳಿದಿತು. 2018ರ ನವೆಂಬರರನಲ್ಲಿ ಆರ್‍ಟಿಐ ಅಡಿ ಸಿಕ್ಕ ಮಾಹಿತಿಯಿದು. ಆದರೆ ಅಪಘತಗಳ ಸಂಖ್ಯೆ ಇಳಿಮುಖಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಸುರಕ್ಷತಾ ಕ್ರಮಗಳು ಕಾರಣವಲ್ಲ, ಅದಕ್ಕೆ ಇತರ ಹಲವು ಕಾರಣಗಳಿವೆ.

ಡಿಸೆಂಬರ್ 2018ರಲ್ಲಿ ಇಲಾಖೆ ನೀಡಿದ ಇನ್ನೊಂದು ಉತ್ತರದ ಪ್ರಕಾರ, 2014-15ರಲ್ಲಿ 3,591 ಟ್ರೇನುಗಳು ರದ್ದಾಗಿದ್ದರೆ, 2017-18ರಲ್ಲಿ 21,053 ಟ್ರೇನುಗಳು (ಏಳು ಪಟ್ಟು!) ರದ್ದಾಗಿದ್ದವು! ಟ್ರೇನುಗಳ ಓಡಾಟವೇ ಕುಸಿದ ಮೇಲೆ ಅಪಘಾತ ಸಂಖ್ಯೆ ಸಹಜವಾಗಿ ಕಡಿಮೆ ತಾನೇ? ರೈಲ್ವೇ ¸ಹಾಯಕ ಸಚಿವ ರಾಜೇನ ಗೋಹೆನ್ ಸಂಸತ್ತಿಗೆ ಕೊಟ್ಟ ವಿವರಗಳೂ ಇದನ್ನು ಪುಷ್ಟಿಕರಿಸಿವೆ. 2014-15ರಲ್ಲಿ 8.317 ಬಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದರೆ, 2016-17ರಲ್ಲಿ ಈ ಸಂಖ್ಯೆ 8.116 ಬಿಲಿಯನ್. 2017-18ರಲ್ಲಿ ಶೇ. 30ರಷ್ಟು ಟ್ರೇನುಗಳು ತಡಾವಾಗಿ ಚಲಿಸಿವೆ. ನಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬಂದಿದೆ.

ಮಾರ್ಗ ನವೀಕರಣ ಮತ್ತು ವಿದ್ಯುದೀಕರಣ
ಮಾರ್ಗ ನವೀಕರಣ ಮತ್ತು ವಿದ್ಯುದೀಕರಣದಲ್ಲೂ ಈ ಸರ್ಕಾರದ ಸಾಧನೆ ತೀರಾ ಕಳಪೆಯಾಗಿದೆ. ರೈಲ್ವೇ ಸುರಕ್ಷತೆಗೆ ಮಾರ್ಗ ನವೀಕರಣ ಅತ್ಯಂತ ಮುಖ್ಯವಾದ ಕ್ರಮ. ಫೆಬ್ರುವರಿ 2019ರಲ್ಲಿ ಆರ್‍ಟಿಐನಲ್ಲಿ ನೀಡಿದ ಮಾಹಿತಿ ಪ್ರಕಾರ, ಯುಪಿಎ ಸರ್ಕಾರ 2009-10ರಲ್ಲಿ ಮಾಡಿದ್ದ ಮಾರ್ಗ ನವೀಕರಣಗಳ ಸಂಖ್ಯೆಯನ್ನು 2017-18ರಲ್ಲಿ ಈ ಸರ್ಕಾರ ತಲುಪಿದೆ.

1 ಲಕ್ಷ 17 ಸಾವಿರ ಮಾರ್ಗ (ಟ್ರ್ಯಾಕ್)ವನ್ನು ರೈಲ್ವೆ ಹೊಂದಿದ್ದು, ಇದರಲ್ಲಿ ಬಹುಪಾಲು ಮಾರ್ಗಗಳು ತುಂಬ ಹಳೆಯವು ಇಲ್ಲವೇ ಓವರ್‍ಲೋಡ್‍ನಿಂದ ತತ್ತರಿಸುತ್ತಿರುವ ಸುವ ಮಾರ್ಗಗಳು. ಈ ಸರ್ಕಾರದ ಅವಧಿಯಲ್ಲಿ ಕೇವಲ 4 ಸಾವಿರ ಕಿ.ಮೀ (ಅಂದರೆ ಕೇವಲ ಶೇ. 3.57) ಮಾರ್ಗಗದ ನವೀಕರಣವಾಗಿದೆ! ಮೋದಿ ಸರ್ಕಾರದ ಮೊದಲ ಮೂರು ವರ್ಷಗಳಲ್ಲಿ ವಿದ್ಯುದೀಕರಣಪ್ರಕ್ರಿಯೆಯೇ ನಡೆಯಲಿಲ್ಲ. 2017-18ರಲ್ಲಿ ಕೇವಲ 4.087 ಕಿ.ಮೀ( 4 ಕಿಮೀ ಅನ್ನಿ) ಮಾರ್ಗದ ವಿದ್ಯುದೀಕರಣವಾಗಿದೆ!

ರೈಲ್ವೇಯನ್ನು ಸಶಕ್ತಗೊಳಿಸಲು ಹೊಸ ಹೊಸ ಲೈನ್‍ಗಳ ಸ್ಥಾಪನೆಯ ಅಗತ್ಯವಿದೆ. 2016-17ರಲ್ಲಿ 953 ಕಿಮೀ ಹೊಸ ಲೈನ್ ನಿರ್ಮಿಸಿದ ಮೋದಿ ಸರ್ಕಾರ, 2017-18ರಲ್ಲಿ ನಿರ್ಮಿಸಿದ್ದು ಕೇವಲ 409 ಕಿಮೀ!. ದಿನಕ್ಕೆ ಕೇವಲ 1.75 ಕೀಮೀ ಹೊಸ ಲೈನ್ ಮಾಡಿದ್ದನ್ನು ಸಾಧನೆ ಎನ್ನಲಾದೀತೆ?

ಫಂಡೂ ಇಲ್ಲ, ಬಾಂಡೂ ಇಲ್ಲ

ಆರಂಭಶೂರತ್ವ ತೋರಿದಂತೆ ಮಾಡಿದ ಸರ್ಕಾರ ರೈಲ್ವೆಗೆ ಅಗತ್ಯವಾದ ಬೃಹತ್ ಅನುದಾನ ಒದಗಿಸಲು ಎಲ್‍ಐಸಿಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಇದರ ಪ್ರಕಾರ ಎಲ್‍ಐಸಿ ಒಂದೂವರೆ ಲಕ್ಷ ಕೋಟಿ ರೂ ಒದಗಿಸಬೇಕಿತ್ತು. ಅಕ್ಟೋಬರ್ 25, 2015ರಂದು ಸಿಕ್ಕ ಮಾಹಿತಿ ಪ್ರಕಾರ, ಎಲ್‍ಐಸಿ ಮೊದಲ ಕಂತಾಗಿ 2 ಸಾವಿರ ಕೋಟಿ ನೀಡಿತ್ತು. ನಂತರ ಮಾರ್ಚ್ 26, 2018ರ ಮಾಹಿತಿ ಪ್ರಕಾರ, ನಂತರ ಅದು ಯಾವುದೇ ಫಂಡ್ ಬಿಡುಗಡೆ ಮಾಡಲೇ ಇಲ್ಲ. ಬಾಂಡ್‍ಗಳ ಮೂಲಕ ಎಲ್‍ಐಸಿ ನೆರವು ನೀಡಲಿದೆ ಎಂದು ಸರ್ಕಾರ ಹೇಳಿತು. ಹಾಗೇ ನೀಡಿದರೂ ಅದು 7 ಸಾವಿರ ದಾಟಲ್ಲ. ಒಂದೂವರೆ ಕೋಟಿ ಲಕ್ಷದಲ್ಲಿ ಉಳಿದ ಹಣ ಏಕೆ ಬರಲಿಲ್ಲ?

ಸರ್ಕಾರ ಹಲವು ಸ್ಟೇಷನ್‍ಗಳನ್ನು ನಿರ್ಮಿಸಲು ಖಾಸಗಿ-ಸಾರ್ವಜನಿಕ ಭಾಗವಹಿಸುವಿಕೆಯ (ಪಿಪಿಪಿ) ಮೊರೆ ಹೋಗಿತು. 13 ಸ್ಟೇಷನ್‍ಗಳ ಮರು ನಿರ್ಮಾಣದ ಘೋಷಣೆ ಮಾಡಲಾಗಿತು. ಇವತ್ತಿಗೂ ಒಂದೂ ಜಾರಿಗೆ ಬಂದಿಲ್ಲ!

ಮೋದಿಯ ವಿದೇಶಿ ನೆರವು!
ವಿದೇಶಗಳಿಗೆ ಹೋದಾಗ ಆ ದೇಶಗಳೊಂದಿಗೆ ರೈಲ್ವೇ ನವೀಕರಣ, ಅಭಿವೃದ್ಧಿಯ ಯೋಜನೆಗಳಿಗೆ ಮೋದಿ ಸಾಹೇಬರು ಸಹಿ ಹಾಕಿದ್ದಷ್ಟೇ ಬಂತು. ಯಾವವೂ ಅನುಷ್ಠಾನಕ್ಕೆ ಬgಲೇ ಇಲ್ಲ. ಏಪ್ರಿಲ್ 2015ರಲ್ಲಿ, ಫ್ರಾನ್ಸ್, ಮೇ 2015ರಲ್ಲಿ ಚೀನಾ ಮತ್ತು ಅಕ್ಟೋಬರ್ 2018ರಲ್ಲಿ ರಷ್ಯಾಗಳಿಗೆ ಭೇಟಿ ನೀಡಿದಾಗ ಮೋದಿ ರೈಲ್ವೇ ಅಭಿವೃದ್ಧಿಗೆ ಆ ದೇಶಗಳ ಜೊತೆಗೆ ಒಪ್ಪಂದ (ಒoU)ಗಳನ್ನು ಮಾಡಿಕೊಂಡು ಬಂದಿದ್ದರು. ಅವೆಲ್ಲ ಬರೀ ಶೋ ಆಗಿದ್ದವಷ್ಟೇ!
ಒಟ್ಟಿನಲ್ಲಿ ರೈಲ್ವೇ ವ್ಯವಸ್ಥೆಯನ್ನೇ ಹಳಿ ತಪ್ಪಿಸಿದ ಮೋದಿ ಸರ್ಕಾರ, ಕಾಲಕಾಲಕ್ಕೆ ಭಾರಿ ಸುಧಾರಣೆ ಎಂಬ ಹೆಡ್‍ಲೈನ್ಸ್ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುತ್ತ ಬಂದಿದೆ.
(ಕೃಪೆ: ಡೆಕ್ಕನ್ ಹೆರಾಲ್ಡ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...