Homeಮುಖಪುಟಮೋದಿ ವಿರುದ್ಧ ವಾರಣಾಸಿಯಲ್ಲೇ ಕಣಕ್ಕಿಳಿಯುತ್ತಾರಾ ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ ಜೋಷಿ?

ಮೋದಿ ವಿರುದ್ಧ ವಾರಣಾಸಿಯಲ್ಲೇ ಕಣಕ್ಕಿಳಿಯುತ್ತಾರಾ ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ ಜೋಷಿ?

- Advertisement -
- Advertisement -

ಟೈಟಲ್ ನೋಡಿ ಆಶ್ಚರ್ಯವೆನಿಸಬಹುದಾದ ಈ ಸುದ್ದಿ ಈಗ ಕೇವಲ ತೆರೆಮರೆಯಲ್ಲಿ ಉಳಿದಿಲ್ಲ. ಅದಾಗಲೇ ದೇಶದ ಪ್ರಮುಖ ಸುದ್ದಿ ಚಾನೆಲ್‍ನ ವೆಬ್‍ಸೈಟ್‍ನಲ್ಲಿ ಬಂದಾಗಿದೆ.

ನಿನ್ನೆಯಷ್ಟೇ ಬಿಜೆಪಿ ಭೀಷ್ಮ ಎನ್ನುವ ವಿಶೇಷಣದ ಅಡ್ವಾಣಿಯವರು ತಮ್ಮ ಬ್ಲಾಗ್‍ನಲ್ಲಿ ‘ನಮ್ಮನ್ನು ರಾಜಕೀಯವಾಗಿ ವಿರೋಧಿಸುವವರು ದೇಶದ್ರೋಹಿಗಳಾಗುವುದಿಲ್ಲ, ನಮ್ಮ ಶತ್ರುಗಳೂ ಅಲ್ಲ, ಕೇವಲ ರಾಜಕೀಯ ಎದುರಾಳಿಗಳಷ್ಟೇ. ನಮ್ಮ ಭಾರತದ ಪ್ರಜಾಪ್ರಭುತ್ವ ನೆಲೆ ನಿಂತಿರುವುದೇ ಬಹುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ. ಈ ಪ್ರಜಾಪ್ರಭುತ್ವವೇ ಯಾವತ್ತೂ ಬಿಜೆಪಿ ಪಕ್ಷದ ಹೆಗ್ಗುರುತು” ಎಂದು ಬರೆದಿದ್ದರು. ಪ್ರಸ್ತುತ ಬಿಜೆಪಿಯ ಹಿರಿಯ ನಾಯಕರು ಮುಖ್ಯವಾಗಿ ಮೋದಿಯವರು, ತಮ್ಮ ರಾಜಕೀಯ ವಿರೋಧಿಗಳ, ನಿರ್ದಿಷ್ಟವಾಗಿ ಕಾಂಗ್ರೆಸ್ ನಾಯಕರ ದೇಶಪ್ರೇಮವನ್ನು ಪ್ರಶ್ನಿಸುತ್ತಾ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಹಾಗೂ ಪಕ್ಷದೊಳಗೆ ಮೋದಿ-ಶಾ ಜೋಡಿ ಸರ್ವಾಧಿಕಾರಿಗಳಾಗಿ ಬೆಳೆದಿರುವ ಸನ್ನಿವೇಶದಲ್ಲಿ ಅಡ್ವಾಣಿಯವರ ಈ ಹೇಳಿಕೆ ಮೋದಿಯವರಿಗೆ ಕೊಟ್ಟ ಟಾಂಗ್ ಎಂತಲೇ ವಿಶ್ಲೇಷಣೆಗೆ ಒಳಪಡುತ್ತಿದೆ. ಮೋದಿ-ಅಮಿತ್ ಶಾ ಜೋಡಿ ತಮ್ಮನ್ನು ಮೂಲೆಗುಂಪು ಮಾಡಿದ್ದಕ್ಕೆ ಪ್ರತಿಯಾಗಿ ಈ ಹಿರಿಯ ನಾಯಕ ಚುನಾವಣೆಯ ಸಮಯದಲ್ಲಿ ಹೀಗೆ ಬರೆದಿರುವುದರಲ್ಲಿ ಹೆಚ್ಚೇನು ಅನುಮಾನವಿಲ್ಲ. ಇದು ಸಮರೋತ್ಸಾಹದಲ್ಲಿರುವ ಗುಜರಾತಿ ಜೋಡಿಗೆ ಭರ್ಜರಿ ಹಿನ್ನಡೆಯನ್ನೇ ಉಂಟು ಮಾಡುತ್ತಿದೆ.

ಅಡ್ವಾಣಿಯವರ ರೆಬೆಲ್ ಇಶ್ಯೂ ತಣ್ಣಗಾಗುವ ಮೊದಲೇ ಈಗ ಮತ್ತೊಬ್ಬ ಹಿರಿಯ ನಾಯಕ ಮುರುಳಿ ಮನೋಹರ್ ಜೋಷಿಯವರಿಂದಲೂ ಬಿಜೆಪಿಗೆ ಆಘಾತಕರವಾದ ಸುದ್ದಿ ಹೊರಬಿದ್ದಿದೆ. ಮೋದಿ-ಶಾ ಬಿಜೆಪಿಯೊಳಗೆ ಮುಂಚೂಣಿಗೆ ಬಂದ ಕ್ಷಣದಿಂದಲೂ ಪ್ರತಿರೋಧ ತೋರುತ್ತಲೇ ಬಂದಿದ್ದ ಮತ್ತು ಆ ಕಾರಣಕ್ಕೆ ಹೀನಾಯವಾಗಿ ಮೂಲೆ ಗುಂಪಾಗಿಸಲ್ಪಟ್ಟ ಜೋಷಿಯವರು ಇದೀಗ ಮೋದಿ ವಿರುದ್ಧ ವಾರಣಾಸಿಯಲ್ಲಿ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ ಎಂಬ ಸುದ್ದಿ ಬರೆದಿರುವುದು ಪ್ರಸಿದ್ಧ ಪತ್ರಕರ್ತೆ ಸ್ವಾತಿ ಚತುರ್ವೇದಿ. ಈಗಾಗಲೇ ಕಾಂಗ್ರೆಸ್‍ನ ಹಿರಿಯ ನಾಯಕರು ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮಾತ್ರವಲ್ಲದೆ, ಇತರೆ ಪಕ್ಷಗಳ ನಾಯಕರೂ ಜೋಷಿಯವರನ್ನು ಸಂಪರ್ಕಿಸಿದ್ದು ಅವರು ವಾರಣಾಸಿಯಿಂದ ಸ್ಪರ್ಧಿಸಲು ಇಚ್ಛಿಸಿದರೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಬೆಂಬಲ ಸೂಚಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಾಯಕರಲ್ಲಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಹೆಸರೂ ಕೇಳಿಬರುತ್ತಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಎಸ್‍ಪಿ ಮೈತ್ರಿ ಮಾಡಿಕೊಂಡಿರುವುದರಿಂದ ಜೋಷಿಗೆ ಮಾಯಾವತಿಯವರ ಬೆಂಬಲವೂ ಸಿಕ್ಕಂತಾಗುತ್ತದೆ.

ಜೋಷಿಯವರು ಈ ಮಾತುಕತೆಗೆ ಪೂರಕವಾಗಿ ಸ್ಪಂದಿಸಿದ್ದಾರಾದರೂ, ಮೊದಲಿಗೆ ವಾರಾಣಾಸಿಗಿಂತ ಬೇರೆಡೆ ಸ್ಪರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ವಾರಾಣಾಸಿ, ಈ ಮೊದಲು ಮುರುಳಿ ಮನೋಹರ್ ಜೋಷಿ ಸಂಸದನಾಗಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಆದರೆ 2014ರಲ್ಲಿ ಮೋದಿಯವರು ವಾರಾಣಾಸಿಯಿಂದ ಸ್ಪರ್ಧಿಸಲು ನಿರ್ಧರಿಸಿದಾಗ ಜೋಷಿಯವರಿಗೆ ಕಾನ್ಪುರ ಕ್ಷೇತ್ರದ ಟಿಕೆಟ್ ನೀಡಲಾಗಿತ್ತು. ಆಗಲೇ ತನ್ನ ಕ್ಷೇತ್ರವನ್ನು ಮೋದಿಯವರಿಗೆ ಬಿಟ್ಟುಕೊಡಲು ಸಣ್ಣಗೆ ಪ್ರತಿರೋಧ ಒಡ್ಡಿದ್ದ ಅವರು ಆರೆಸೆಸ್ ನಾಯಕರ ಮಧ್ಯಸ್ಥಿಕೆಯಿಂದ ಬಿಟ್ಟುಕೊಟ್ಟಿದ್ದರು. ಆದರೆ ಈ ಬಾರಿ ಟಿಕೆಟ್ ನೀಡುವಾಗ ಬಿಜೆಪಿ ಪಕ್ಷವು ಎಲ್.ಕೆ.ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಷಿಯವರಿಗೆ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಅಡ್ವಾಣಿಯವರು ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರವನ್ನು ಸ್ವತಃ ಅಮಿತ್ ಶಾ ತಮ್ಮ ಬಳಿಯೇ ಉಳಿಸಿಕೊಂಡರೆ, ಮುರುಳಿ ಮನೋಹರ್ ಜೋಷಿಯವರು ಹಾಲಿ ಸಂಸದರಾಗಿರುವ ಕಾನ್ಪುರದಿಂದ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಮಂತ್ರಿ ಸತ್ಯದೇವ್ ಪಚೌರಿಯನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

1992ರಲ್ಲಿ ಮೋದಿ ಮತ್ತು ಜೋಶಿಯವರು

ವಾಜಪೇಯಿಯವರ ಜೊತೆಗೂಡಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅಡ್ವಾಣಿ ಮತ್ತು ಜೋಷಿ ಇಬ್ಬರೂ ಮಹತ್ವದ ಪಾತ್ರ ನಿಭಾಯಿಸಿದಂತವರು. 1977ರಲ್ಲಿ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಾಗ ಜನಸಂಘದಿಂದ ಸಚಿವರಾಗುವ ಅರ್ಹತೆಯಲ್ಲಿ ಇದ್ದವರು ವಾಜಪೇಯಿ ಮತ್ತು ಅಡ್ವಾಣಿ. ಜೋಷಿಯವರನ್ನು ಆಗ ಜನತಾ ಪಕ್ಷದ ಸಂಸದೀಯ ಪಕ್ಷದ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಇನ್ನು ಬಿಜೆಪಿ ದೇಶದಲ್ಲಿ ಬಲವಾಗಿ ಬೇರೂರಲು ಕಾರಣವಾದದ್ದು ಅಡ್ವಾಣಿಯವರ ಕುಖ್ಯಾತ ರಥಯಾತ್ರೆ ಮತ್ತು ಅವರದೇ ನೇತೃತ್ವದಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣಗಳು. ಜೋಷಿ ಇವರಿಬ್ಬರ ನಂತರದ ಮೂರನೇ ಸ್ಥಾನದಲ್ಲಿದ್ದ ನಾಯಕ. ವಾಜಪೇಯಿಯವರ ಹದಿಮೂರು ದಿವಸದ ಸರ್ಕಾರದಲ್ಲಿ ಗೃಹಮಂತ್ರಿಯಾಗುವಷ್ಟು, ಆನಂತರದ ಎನ್‍ಡಿಎ ಸರ್ಕಾರದಲ್ಲಿ ಮಾನವ ಸಂಪನ್ಮೂಲದಂತಹ ಪ್ರಭಾವಿ ಖಾತೆಯ ಸಚಿವರಾಗುವಷ್ಟು ಜೋಷಿ ಬಿಜೆಪಿಯೊಳಗೆ ವರ್ಚಸ್ಸು ಹೊಂದಿದ್ದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

ಅಂತವರನ್ನು ಮೋದಿ-ಶಾ ಜೋಡಿ ಇತ್ತೀಚಿನ ದಿನಗಳಲ್ಲಿ ನಡೆಸಿಕೊಂಡ ರೀತಿ ಮಾತ್ರ ತುಂಬಾ ಅವಮಾನಕರದ್ದಾಗಿತ್ತು. ಅದರ ವಿರುದ್ಧ ಅಡ್ವಾಣಿಯವರು ಒಂದಷ್ಟು ಮಟ್ಟಿಗಿನ ಸಹನೆ ತೋರಿದರಾದರು ಮುರುಳಿ ಮನೋಹರ್ ಜೋಷಿ ಪ್ರತಿಯಾಡುತ್ತಲೇ ಬಂದಿದ್ದರು. 2014ರ ಚುನಾವಣೆ ಸಂದರ್ಭದಲ್ಲೇ ಇಡೀ ದೇಶಾದ್ಯಂತ ಮೋದಿ ಅಲೆ ಇದೆ ಎಂಬ ವಾದ ಎನ್ನುತ್ತಿದ್ದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ “ದೇಶದಲ್ಲಿ ಮೋದಿ ಅಲೆ ಇಲ್ಲ, ಇರೋದು ಬಿಜೆಪಿ ಅಲೆ. ಮೋದಿ ಕೇವಲ ಪಕ್ಷದ ಪ್ರಧಾನಿ ಅಭ್ಯರ್ಥಿ ಅಷ್ಟೆ” ಎಂದು ನೇರವಾಗಿ ಹೇಳಿದ್ದ ಜೋಷಿಯವರು, ಅಷ್ಟರಲ್ಲಾಗಲೇ ಬಿಜೆಪಿಯಿಂದ ಟಿಕೆಟ್ (ಬಾರ್ಮರ್ ಕ್ಷೇತ್ರ) ನಿರಾಕರಿಸಲ್ಪಟ್ಟಿದ್ದ ಮತ್ತೊಬ್ಬ ಹಿರಿಯ ನಾಯಕ ಜಸ್ವಂತ್ ಸಿಂಗ್‍ರ ಕುರಿತು “ಅವರಿಗೆ ಟಿಕೆಟ್ ನೀಡಬಾರದೆನ್ನುವುದು ಪಕ್ಷದೊಳಗೆ ಚರ್ಚೆಯೇ ಆಗಿರಲಿಲ್ಲ” ಎನ್ನುವ ಮೂಲಕ ಅದು ಮೋದಿ-ಶಾ ಜೋಡಿಯ ಏಕಪಕ್ಷೀಯ ನಿರ್ಧಾರ ಎಂದು ಟೀಕಿಸಿದ್ದರು. ಅಲ್ಲದೇ 2018ರಲ್ಲಿ `ಪವರ್ ಪೊಲಿಟಿಕ್ಸ್’ ಎಂಬ ನಿಯತಕಾಲಿಕೆಯಲ್ಲಿ ‘ರಾಜಧರ್ಮ’ ತಲೆಬರಹದಲ್ಲಿ ಲೇಖನವೊಂದನ್ನು ಬರೆದಿದ್ದ ಜೋಷಿ, ಇಡೀ ಲೇಖನವನ್ನು ಮೋದಿ-ಶಾ ಸರ್ವಾಧಿಕಾರವನ್ನು ಟೀಕಿಸಲು ದುಡಿಸಿಕೊಂಡಿದ್ದರು. ‘ವಾಲ್ಮೀಕಿಯ ಪ್ರಕಾರ ರಾಜನಾದವನು ಸರ್ವಾಧಿಕಾರಿಯಾಗಿರಬಾರದು. ರಾಜನಾದವನು ಆಡಳಿತವನ್ನು ನಡೆಸಲು ಮಂತ್ರಿಗಳ, ವಿದ್ವಾಂಸರ, ಸೇನಾ ಅಧಿಕಾರಿಗಳ ಸಲಹೆ ಕೇಳುತ್ತಿದ್ದುದನ್ನು ರಾಮಾಯಣದಲ್ಲಿ ನಾವು ಕಾಣಬಹುದು’ ಎಂಬ ಒಂದು ಸಾಲೇ ಇಡೀ ಲೇಖನಕ್ಕೆ ಹಿಡಿದ ಕನ್ನಡಿಯಂತಿದೆ. ಜೋಷಿಯವರ ವ್ಯಕ್ತಿತ್ವ ಹೀಗಿದ್ದುದರಿಂದಲೇ ಆರೆಸ್ಸೆಸ್ ನಾಯಕರು ಮೋದಿ-ಷಾ ಜೋಡಿಗೆ, ಜೋಷಿಯವರ ವಿಚಾರದಲ್ಲಿ ಎಚ್ಚರಿಸಿದ್ದರಂತೆ.

ಇದೀಗ ಸಿಡಿದೆದ್ದಿರುವ ಜೋಷಿಯವರನ್ನು ಆರೆಸ್ಸೆಸ್ ತಣ್ಣಗೆ ಮಾಡುತ್ತದಾ ಅಥವಾ ಮೋದಿಯ ವಿರುದ್ಧ ತಮ್ಮ ಸ್ವಂತ ಕ್ಷೇತ್ರ ವಾರಣಾಸಿಯಿಂದ ಸ್ಪರ್ಧೆ ಮಾಡಲು ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...