Homeಮುಖಪುಟಟ್ರ್ಯಾಕ್ ರೆಕಾರ್ಡ್ ಹೇಳುವ ಸತ್ಯ : ರೈಲ್ವೆಯನ್ನೂ ಹಳಿ ತಪ್ಪಿಸಿದ ಮೋದಿ ಸರ್ಕಾರ!

ಟ್ರ್ಯಾಕ್ ರೆಕಾರ್ಡ್ ಹೇಳುವ ಸತ್ಯ : ರೈಲ್ವೆಯನ್ನೂ ಹಳಿ ತಪ್ಪಿಸಿದ ಮೋದಿ ಸರ್ಕಾರ!

- Advertisement -
- Advertisement -

-ಸಂಜಯ್ ಬಸು ಮತ್ತು ಉಜ್ವಲ್ ಚೌಧರಿ

ಕನ್ನಡಕ್ಕೆ: ಮಲ್ಲನಗೌಡರ್ ಪಿ.ಕೆ

ಒಂದು ಕಡೆ ಸಾರ್ವಜನಿಕ ತನಿಖಾ ಸಂಸ್ಥೆಗಳನ್ನು ಬಿಜೆಪಿಯ ಏಜೆಂಟರನ್ನಾಗಿ ಪರಿವರ್ತಿಸಿದ ಮೋದಿ ಸರ್ಕಾರ, ಇನ್ನೊಂದು ಕಡೆ ಸಾರ್ವಜನಿಕ ಸೇವೆ ನೀಡುವ ಸರ್ಕಾರಿ ಇಲಾಖೆ, ಸಂಸ್ಥೆಗಳನ್ನು ಹಳ್ಳ ಹಿಡಿಸುತ್ತ ಬಂದಿತು. ಅನಿಲ್ ಅಂಬಾನಿಗಾಗಿ ಎಚ್‍ಎಎಲ್ ಅನ್ನು, ಮುಖೇಶ್ ಅಂಬಾನಿಗಾಗಿ ಬಿಎಸ್‍ಎನ್‍ಎಲ್‍ನ್ನು ವಂಚಿಸಿದ ಮೋದಿ ಸರ್ಕಾರ ರೈಲ್ವೇ ಇಲಾಖೆಗೂ ಒಂದು ದುರ್ಗತಿ ಕಾಣಿಸಿಯೇ ಬಿಟ್ಟಿದೆ…..

ಭಾರತದ ಜೀವನಾಡಿ ಎಂದೇ ಹೆಸರು ಪಡೆದ ರೈಲ್ವೇ ವ್ಯವಸ್ಥೆಯನ್ನು ಈ ಐದು ವರ್ಷಗಳಲ್ಲಿ ಹಳಿ ತಪ್ಪಿಸಿದ ‘ಕೀರ್ತಿ’ಯನ್ನು ಮೋದಿ ಸರ್ಕಾರ ಹೊತ್ತುಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ದೊರೆತ ಮತ್ತು ಲೋಕಸಭೆಗೆ ಕೇಂದ್ರ ಸರ್ಕಾರವೇ ನೀಡಿದ ಮಾಹಿತಿಗಳೆರಡೂ ಇದನ್ನು ಪುಷ್ಟಿಕರಿಸುತ್ತಿವೆ.

ವರ್ಷದಲ್ಲಿ 8 ಬಿಲಿಯನ್ (8 ಶತಕೋಟಿ) ಪ್ರಯಾಣಿಕರನ್ನು ಸಾಗಿಸುವ ವಿಶ್ವದ ನಾಲ್ಕನೇ ದೊಡ್ಡ ನೆಟ್‍ವರ್ಕ್, ಚೀನಾದ ನಂತರ ಸಾಮರ್ಥಯದಲ್ಲಿ ಎರಡನೇ ಸ್ಥಾನ ಹೊಂದಿರುವ ಭಾರತೀಯ ರೈಲ್ವೇ ಇವತ್ತು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಈ ಸರ್ಕಾರ ಬಂದ ಮೊದಲ ವರ್ಷ 2014-15ರಲ್ಲೇ 135 ರೈಲು ಅಪಘಾತ ಸಂಭವಿಸಿದವು, ಅದು ಕ್ರಮೇಣ ಇಳಿಯುತ್ತ ಬಂದು 2017-18ರಲ್ಲಿ 78ಕ್ಕೆ ಇಳಿದಿತು. 2018ರ ನವೆಂಬರರನಲ್ಲಿ ಆರ್‍ಟಿಐ ಅಡಿ ಸಿಕ್ಕ ಮಾಹಿತಿಯಿದು. ಆದರೆ ಅಪಘತಗಳ ಸಂಖ್ಯೆ ಇಳಿಮುಖಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಸುರಕ್ಷತಾ ಕ್ರಮಗಳು ಕಾರಣವಲ್ಲ, ಅದಕ್ಕೆ ಇತರ ಹಲವು ಕಾರಣಗಳಿವೆ.

ಡಿಸೆಂಬರ್ 2018ರಲ್ಲಿ ಇಲಾಖೆ ನೀಡಿದ ಇನ್ನೊಂದು ಉತ್ತರದ ಪ್ರಕಾರ, 2014-15ರಲ್ಲಿ 3,591 ಟ್ರೇನುಗಳು ರದ್ದಾಗಿದ್ದರೆ, 2017-18ರಲ್ಲಿ 21,053 ಟ್ರೇನುಗಳು (ಏಳು ಪಟ್ಟು!) ರದ್ದಾಗಿದ್ದವು! ಟ್ರೇನುಗಳ ಓಡಾಟವೇ ಕುಸಿದ ಮೇಲೆ ಅಪಘಾತ ಸಂಖ್ಯೆ ಸಹಜವಾಗಿ ಕಡಿಮೆ ತಾನೇ? ರೈಲ್ವೇ ¸ಹಾಯಕ ಸಚಿವ ರಾಜೇನ ಗೋಹೆನ್ ಸಂಸತ್ತಿಗೆ ಕೊಟ್ಟ ವಿವರಗಳೂ ಇದನ್ನು ಪುಷ್ಟಿಕರಿಸಿವೆ. 2014-15ರಲ್ಲಿ 8.317 ಬಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದರೆ, 2016-17ರಲ್ಲಿ ಈ ಸಂಖ್ಯೆ 8.116 ಬಿಲಿಯನ್. 2017-18ರಲ್ಲಿ ಶೇ. 30ರಷ್ಟು ಟ್ರೇನುಗಳು ತಡಾವಾಗಿ ಚಲಿಸಿವೆ. ನಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬಂದಿದೆ.

ಮಾರ್ಗ ನವೀಕರಣ ಮತ್ತು ವಿದ್ಯುದೀಕರಣ
ಮಾರ್ಗ ನವೀಕರಣ ಮತ್ತು ವಿದ್ಯುದೀಕರಣದಲ್ಲೂ ಈ ಸರ್ಕಾರದ ಸಾಧನೆ ತೀರಾ ಕಳಪೆಯಾಗಿದೆ. ರೈಲ್ವೇ ಸುರಕ್ಷತೆಗೆ ಮಾರ್ಗ ನವೀಕರಣ ಅತ್ಯಂತ ಮುಖ್ಯವಾದ ಕ್ರಮ. ಫೆಬ್ರುವರಿ 2019ರಲ್ಲಿ ಆರ್‍ಟಿಐನಲ್ಲಿ ನೀಡಿದ ಮಾಹಿತಿ ಪ್ರಕಾರ, ಯುಪಿಎ ಸರ್ಕಾರ 2009-10ರಲ್ಲಿ ಮಾಡಿದ್ದ ಮಾರ್ಗ ನವೀಕರಣಗಳ ಸಂಖ್ಯೆಯನ್ನು 2017-18ರಲ್ಲಿ ಈ ಸರ್ಕಾರ ತಲುಪಿದೆ.

1 ಲಕ್ಷ 17 ಸಾವಿರ ಮಾರ್ಗ (ಟ್ರ್ಯಾಕ್)ವನ್ನು ರೈಲ್ವೆ ಹೊಂದಿದ್ದು, ಇದರಲ್ಲಿ ಬಹುಪಾಲು ಮಾರ್ಗಗಳು ತುಂಬ ಹಳೆಯವು ಇಲ್ಲವೇ ಓವರ್‍ಲೋಡ್‍ನಿಂದ ತತ್ತರಿಸುತ್ತಿರುವ ಸುವ ಮಾರ್ಗಗಳು. ಈ ಸರ್ಕಾರದ ಅವಧಿಯಲ್ಲಿ ಕೇವಲ 4 ಸಾವಿರ ಕಿ.ಮೀ (ಅಂದರೆ ಕೇವಲ ಶೇ. 3.57) ಮಾರ್ಗಗದ ನವೀಕರಣವಾಗಿದೆ! ಮೋದಿ ಸರ್ಕಾರದ ಮೊದಲ ಮೂರು ವರ್ಷಗಳಲ್ಲಿ ವಿದ್ಯುದೀಕರಣಪ್ರಕ್ರಿಯೆಯೇ ನಡೆಯಲಿಲ್ಲ. 2017-18ರಲ್ಲಿ ಕೇವಲ 4.087 ಕಿ.ಮೀ( 4 ಕಿಮೀ ಅನ್ನಿ) ಮಾರ್ಗದ ವಿದ್ಯುದೀಕರಣವಾಗಿದೆ!

ರೈಲ್ವೇಯನ್ನು ಸಶಕ್ತಗೊಳಿಸಲು ಹೊಸ ಹೊಸ ಲೈನ್‍ಗಳ ಸ್ಥಾಪನೆಯ ಅಗತ್ಯವಿದೆ. 2016-17ರಲ್ಲಿ 953 ಕಿಮೀ ಹೊಸ ಲೈನ್ ನಿರ್ಮಿಸಿದ ಮೋದಿ ಸರ್ಕಾರ, 2017-18ರಲ್ಲಿ ನಿರ್ಮಿಸಿದ್ದು ಕೇವಲ 409 ಕಿಮೀ!. ದಿನಕ್ಕೆ ಕೇವಲ 1.75 ಕೀಮೀ ಹೊಸ ಲೈನ್ ಮಾಡಿದ್ದನ್ನು ಸಾಧನೆ ಎನ್ನಲಾದೀತೆ?

ಫಂಡೂ ಇಲ್ಲ, ಬಾಂಡೂ ಇಲ್ಲ

ಆರಂಭಶೂರತ್ವ ತೋರಿದಂತೆ ಮಾಡಿದ ಸರ್ಕಾರ ರೈಲ್ವೆಗೆ ಅಗತ್ಯವಾದ ಬೃಹತ್ ಅನುದಾನ ಒದಗಿಸಲು ಎಲ್‍ಐಸಿಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಇದರ ಪ್ರಕಾರ ಎಲ್‍ಐಸಿ ಒಂದೂವರೆ ಲಕ್ಷ ಕೋಟಿ ರೂ ಒದಗಿಸಬೇಕಿತ್ತು. ಅಕ್ಟೋಬರ್ 25, 2015ರಂದು ಸಿಕ್ಕ ಮಾಹಿತಿ ಪ್ರಕಾರ, ಎಲ್‍ಐಸಿ ಮೊದಲ ಕಂತಾಗಿ 2 ಸಾವಿರ ಕೋಟಿ ನೀಡಿತ್ತು. ನಂತರ ಮಾರ್ಚ್ 26, 2018ರ ಮಾಹಿತಿ ಪ್ರಕಾರ, ನಂತರ ಅದು ಯಾವುದೇ ಫಂಡ್ ಬಿಡುಗಡೆ ಮಾಡಲೇ ಇಲ್ಲ. ಬಾಂಡ್‍ಗಳ ಮೂಲಕ ಎಲ್‍ಐಸಿ ನೆರವು ನೀಡಲಿದೆ ಎಂದು ಸರ್ಕಾರ ಹೇಳಿತು. ಹಾಗೇ ನೀಡಿದರೂ ಅದು 7 ಸಾವಿರ ದಾಟಲ್ಲ. ಒಂದೂವರೆ ಕೋಟಿ ಲಕ್ಷದಲ್ಲಿ ಉಳಿದ ಹಣ ಏಕೆ ಬರಲಿಲ್ಲ?

ಸರ್ಕಾರ ಹಲವು ಸ್ಟೇಷನ್‍ಗಳನ್ನು ನಿರ್ಮಿಸಲು ಖಾಸಗಿ-ಸಾರ್ವಜನಿಕ ಭಾಗವಹಿಸುವಿಕೆಯ (ಪಿಪಿಪಿ) ಮೊರೆ ಹೋಗಿತು. 13 ಸ್ಟೇಷನ್‍ಗಳ ಮರು ನಿರ್ಮಾಣದ ಘೋಷಣೆ ಮಾಡಲಾಗಿತು. ಇವತ್ತಿಗೂ ಒಂದೂ ಜಾರಿಗೆ ಬಂದಿಲ್ಲ!

ಮೋದಿಯ ವಿದೇಶಿ ನೆರವು!
ವಿದೇಶಗಳಿಗೆ ಹೋದಾಗ ಆ ದೇಶಗಳೊಂದಿಗೆ ರೈಲ್ವೇ ನವೀಕರಣ, ಅಭಿವೃದ್ಧಿಯ ಯೋಜನೆಗಳಿಗೆ ಮೋದಿ ಸಾಹೇಬರು ಸಹಿ ಹಾಕಿದ್ದಷ್ಟೇ ಬಂತು. ಯಾವವೂ ಅನುಷ್ಠಾನಕ್ಕೆ ಬgಲೇ ಇಲ್ಲ. ಏಪ್ರಿಲ್ 2015ರಲ್ಲಿ, ಫ್ರಾನ್ಸ್, ಮೇ 2015ರಲ್ಲಿ ಚೀನಾ ಮತ್ತು ಅಕ್ಟೋಬರ್ 2018ರಲ್ಲಿ ರಷ್ಯಾಗಳಿಗೆ ಭೇಟಿ ನೀಡಿದಾಗ ಮೋದಿ ರೈಲ್ವೇ ಅಭಿವೃದ್ಧಿಗೆ ಆ ದೇಶಗಳ ಜೊತೆಗೆ ಒಪ್ಪಂದ (ಒoU)ಗಳನ್ನು ಮಾಡಿಕೊಂಡು ಬಂದಿದ್ದರು. ಅವೆಲ್ಲ ಬರೀ ಶೋ ಆಗಿದ್ದವಷ್ಟೇ!
ಒಟ್ಟಿನಲ್ಲಿ ರೈಲ್ವೇ ವ್ಯವಸ್ಥೆಯನ್ನೇ ಹಳಿ ತಪ್ಪಿಸಿದ ಮೋದಿ ಸರ್ಕಾರ, ಕಾಲಕಾಲಕ್ಕೆ ಭಾರಿ ಸುಧಾರಣೆ ಎಂಬ ಹೆಡ್‍ಲೈನ್ಸ್ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುತ್ತ ಬಂದಿದೆ.
(ಕೃಪೆ: ಡೆಕ್ಕನ್ ಹೆರಾಲ್ಡ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...