Homeಮುಖಪುಟ220 ರೂ ಇದ್ದ ಕೇಬಲ್ ಬಿಲ್ 400 ರೂ ದಾಟುತ್ತಿರುವುದೇಕೆ? ಇದರ ಲಾಭ ಯಾರಿಗೆ?

220 ರೂ ಇದ್ದ ಕೇಬಲ್ ಬಿಲ್ 400 ರೂ ದಾಟುತ್ತಿರುವುದೇಕೆ? ಇದರ ಲಾಭ ಯಾರಿಗೆ?

- Advertisement -
- Advertisement -

220 ರೂ ಇದ್ದ ಕೇಬಲ್ ಬಿಲ್ 400 ರೂ ದಾಟುತ್ತಿರುವುದೇಕೆ? ಇದರ ಲಾಭ ಯಾರಿಗೆ? ಹಿಂದಿರುವವರು ಯಾರು?

ಚಾನೆಲ್‍ಗಳು ಮಾತ್ರ ಅಂಬಾನಿಯದ್ದಲ್ಲ; ಕೇಬಲ್ ಸಹಾ ರಿಲೆಯನ್ಸ್‍ ದೇ. ಅಪಾಯಕಾರಿ ಬೆಳವಣಿಗೆಗೆ ನಾಂದಿ

ಮಂಡ್ಯದಲ್ಲಿ ಸುಮಲತಾ ನಾಮಪತ್ರ ಸಲ್ಲಿಸಿದ ದಿನ ಸ್ಥಳೀಯವಾಗಿ ಜೆಡಿಎಸ್‍ನ ಪ್ರಭಾವದಿಂದಾಗಿ ಕೇಬಲ್ ಟಿವಿ ಕೆಲಸ ಮಾಡದಂತೆ ಮಾಡಲಾಯಿತು ಎಂಬ ಒಂದು ಆರೋಪವಿದೆ. ಆದರೆ, ಮುಖೇಶ್ ಅಂಬಾನಿಯ ಬೆಂಬಲಕ್ಕೆ ನಿಂತಿರುವ ಬಿಜೆಪಿ ಪಕ್ಷದ ವಿರುದ್ಧ ಯಾವುದಾದರೂ ಚಾನೆಲ್ ಸುದ್ದಿ ಮಾಡಿದರೆ, ಆ ಚಾನೆಲ್ಲೇ ಬರದಂತೆ ನೋಡಿಕೊಳ್ಳುವ ಸಂಭವ ತೆರೆದುಕೊಂಡಿದೆ. ಅದು ಹೇಗೆಂಬುದನ್ನು ನೋಡೋಣ.

200 ರೂ. ಆಸುಪಾಸಿನಷ್ಟು ಖರ್ಚು ಮಾಡಿ ನೂರಾರು ಚಾನೆಲ್‍ಗಳನ್ನು ಪಡೆದುಕೊಳ್ಳುತ್ತಿದ್ದ ದಿನಗಳು ಈಗ ಇಲ್ಲ. ಕೆಲವು ಕಾಲದ ನಂತರ ಇದು ಯಾವ ಸ್ವರೂಪ ತೆಗೆದುಕೊಳ್ಳಲಿದೆ ಎಂಬುದನ್ನೂ ಹೇಳಲಾಗದು. ಹಿಂದೆಯೂ ಉಚಿತ ಚಾನೆಲ್‍ಗಳು ಮತ್ತು ಹಣ ಕೊಟ್ಟು ಕೊಳ್ಳಬೇಕಾದ ಚಾನೆಲ್‍ಗಳಿದ್ದವು. ಆದರೆ, ಅವೆಲ್ಲಾ ಸಾಮಾನ್ಯ ಗ್ರಾಹಕರ ಗಮನಕ್ಕೆ ಬರುತ್ತಿರಲಿಲ್ಲ. ಏಕೆಂದರೆ, ಕೇಬಲ್ ಮೂಲಕ ಸೇವೆ ಒದಗಿಸುತ್ತಿದ್ದ ಆಪರೇಟರ್‍ಗಳು ಅವನ್ನೆಲ್ಲಾ ಮಾಡಿ, ಇಂತಿಷ್ಟು ಹಣಕ್ಕೆ ಇಷ್ಟು ಚಾನೆಲ್ ಎಂಬ ಪ್ಯಾಕೇಜ್‍ನೊಂದಿಗೆ ಒದಗಿಸುತ್ತಿದ್ದರು.
ಆದರೆ, ಈಗೆರಡು ತಿಂಗಳ ಹಿಂದೆ ಕೆಲವು ಉಚಿತ ಚಾನೆಲ್‍ಗಳನ್ನು ಬಿಟ್ಟರೆ ತಮಗೆ ಬೇಕಾದ ಮನರಂಜನೆ ಅಥವಾ ಸುದ್ದಿ ಚಾನೆಲ್‍ಗಳಿಗೆ ಪ್ರತ್ಯೇಕವಾಗಿ ಇಂತಿಷ್ಟು ಶುಲ್ಕವೆಂದು ಪಾವತಿಸಬೇಕೆಂದು ಸೂಚಿಸಲಾಗಿತ್ತು. ಇದರಿಂದ ಬಹುತೇಕ ಎಲ್ಲಾ ಚಾನೆಲ್‍ಗಳನ್ನು ನೋಡುತ್ತಿದ್ದ ಗ್ರಾಹಕರಿಗೆ ಗೊಂದಲವುಂಟಾಯಿತು. ಪ್ರತೀ ಮನೆಯಲ್ಲೂ ಬೇರೆ ಬೇರೆ ಆಸಕ್ತಿಗಳ ಸದಸ್ಯರಿರುತ್ತಾರಾದ್ದರಿಂದ, ಎಲ್ಲರಿಗೂ ಬೇಕಾದ ಸೀಮಿತ ಚಾನೆಲ್‍ಗಳಿಗೂ ಹಿಂದಿಗಿಂತ 150 ರೂ ಹೆಚ್ಚು ಕೊಡಬೇಕು. ಇದು ಇನ್ನೂ ಹೆಚ್ಚಾಗಬಹುದೇ ಹೊರತು ಕಡಿಮೆಯಾಗದು. ಇನ್ನು ಸ್ವಲ್ಪ ಹೆಚ್ಚು ಚಾನೆಲ್‍ಗಳು ಬೇಕೆಂದರೆ, ದುಪ್ಪಟ್ಟು ಬೆಲೆ ನೀಡಬೇಕಾದಂತಹ ಪರಿಸ್ಥಿತಿ ಏಕೆ ತಲೆದೋರಿತು? ಇದರ ಲಾಭ ಯಾರಿಗೆ ಆಗಬಹುದು ಎಂಬುದನ್ನು ನೋಡೋಣ.

ಎಲ್ಲರಿಗೂ ತಿಳಿದಿರುವಂತೆ ಬಹಳ ಹಿಂದೆ ಮನೆ ಮನೆಗೆ ಕೇಬಲ್ ಎಳೆದು ವಿವಿಧ ಚಾನೆಲ್‍ಗಳಲ್ಲದೇ, ಕೇಬಲ್‍ನವರೇ ಸಿನೆಮಾ ಸಹಾ ತೋರಿಸುತ್ತಿದ್ದರು. ಈ ರೀತಿ ಕೇಬಲ್ ಜಾಲ ವಿಸ್ತರಿಸಲು ಬಹಳ ದೊಡ್ಡ ಪೈಪೋಟಿಯೇ ನಡೆದಿದೆ. ಕೇಬಲ್ ಮಾಫಿಯಾ ಎಂದೆಲ್ಲಾ ಅದನ್ನು ಕರೆಯಲಾಗುತ್ತಿತ್ತು. ಆದರೆ, ಕಂಬ, ಮರಗಳು, ಮನೆಯ ಮೇಲಿನ ಕೊಕ್ಕೆಗಳು ಎಲ್ಲಕ್ಕೂ ಸಿಕ್ಕಿಸಿ ಮನೆಯಿಂದ ಮನೆಗೆ ತೆಗೆದುಕೊಂಡು ಹೋಗಿ ಎಲ್ಲಾ ಕಡೆ ಈ ಮಾರುಕಟ್ಟೆ ಸೃಷ್ಟಿ ಮಾಡಿದ್ದರಲ್ಲಿ ಸಣ್ಣ ಆಪರೇಟರ್‍ಗಳ ಪಾಲು ದೊಡ್ಡದು. ನಂತರ ಅವು ‘ಮಾಫಿಯಾ’ಗಳ ಹಿಡಿತಕ್ಕೆ, ರಾಜಕಾರಣಿಗಳ ಹಿಡಿತಕ್ಕೆ ಹೋಯಿತು.

ಆ ನಂತರ ಸಿಟಿ ಕೇಬಲ್, ಹಾಥ್‍ವೇ ಮತ್ತು ಡೆನ್‍ಗಳೆಂಬ ಎಂಎಸ್‍ಓ (ಮಲ್ಟಿ ಸರ್ವೀಸ್ ಆಪರೇಟರ್)ಗಳು ತಲೆಯೆತ್ತಿದವು. ಇವು ಸ್ಥಳೀಯ ಅಗತ್ಯಗಳೂ ಇದ್ದುದರಿಂದ ಲೋಕಲ್ ಆಪರೇಟರ್‍ಗಳನ್ನೂ ಸಣ್ಣ ಪಾಲುದಾರರನ್ನಾಗಿ ಉಳಿಸಿಕೊಂಡು, ಬೃಹತ್ತಾಗಿ ಬೆಳೆದವು. ಶೇ.10ರಿಂದ ಶೇ.50ರವರೆಗೆ ತಮ್ಮ ಷೇರುಗಳನ್ನು ಉಳಿಸಿಕೊಂಡ ಲಕ್ಷಾಂತರ ಸಣ್ಣ ಆಪರೇಟರ್‍ಗಳು ಒಂದಲ್ಲಾ ಒಂದು ಎಂಎಸ್‍ಓ ಜೊತೆಗೆ ಸೇರಲೇಬೇಕಾಯಿತು.

ಅಂದ ಹಾಗೆ ಈ ಡೆನ್ ಯಾರದ್ದು?
ಸಮೀರ್ ಮಂಚಂಡ ಮತ್ತು ರಾಘವ್ ಬೆಹ್ಲ್ ಇಬ್ಬರೂ ಪಾಲುದಾರರಾಗಿದ್ದ ಕಾಲದಿಂದಲೂ ಡೆನ್ ಬೆಳೆಯುತ್ತಾ, ಹಿಂದಿ ರಾಜ್ಯಗಳಲ್ಲೆಲ್ಲಾ ವ್ಯಾಪಿಸಿತು. ಸಿಎನ್‍ಎನ್ ಐಬಿಎನ್ ಹುಟ್ಟಿ ಹಾಕಿದ್ದ ರಾಘವ್ ಬೆಹ್ಲ್ ನಂತರ ಅದನ್ನು ಅಂಬಾನಿಗೆ ಮಾರಿದರು. ಅದರ ಜೊತೆಗೆ ಕೇಬಲ್ ಜಾಲದ ತಮ್ಮ ಷೇರುಗಳನ್ನೂ. ಇನ್ನು ಮಂಚಂಡ, ರಿಪಬ್ಲಿಕ್ ಟಿವಿಯಲ್ಲೂ ಪಾಲುದಾರಿಕೆ ಹೊಂದಿದ್ದ. ಅರ್ನಬ್ ಗೋಸ್ವಾಮಿ ರಿಪಬ್ಲಿಕ್ ಶುರು ಮಾಡಿದಾಗ ಕೇಬಲ್ ಜಾಲವನ್ನೂ ಹಿಡಿತಕ್ಕೆ ತೆಗೆದುಕೊಳ್ಳುವ ಯೋಜನೆಯೊಂದಿಗೇ ಹೊರಟಿದ್ದು.

ಆದರೆ, ಈಗಿನ ಪರಿಸ್ಥಿತಿ ಬೇರೆಯೇ ಆಗಿದೆ. ಡೆನ್ ಮತ್ತು ಹಾಥ್‍ವೇ ಎರಡರ ಮೇಲೂ ಸಂಪೂರ್ಣ ಹಿಡಿತ ಸಾಧಿಸಿರುವುದು ಆರ್‍ಐಜಿ – ಅಂದರೆ ರಿಲೆಯನ್ಸ್ ಇಂಡಸ್ಟ್ರೀಸ್ ಗ್ರೂಪ್.
ಟಿವಿ – 18 ಕೊಂಡ ನಂತರ, ಈ ಟಿವಿ ಸಮೂಹದ ಬಹುತೇಕ ಚಾನೆಲ್‍ಗಳನ್ನು ಮುಖೇಶ್ ಅಂಬಾನಿ ಒಡೆತನದ ರಿಲೆಯನ್ಸ್ ಕಂಪೆನಿಯೇ ಕೊಂಡಿತ್ತು. ಇಷ್ಟಲ್ಲದೇ ನಷ್ಟದಲ್ಲಿರುವ ಝೀ ಟಿವಿ ಸಮೂಹವನ್ನು ಕೊಳ್ಳಲೂ ಸಹಾ ಅಂಬಾನಿ ಹಾಗೂ ಭಾರ್ತಿ ಮಿತ್ತಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಟಿವಿ ಚಾನೆಲ್ಲೂ ಅಂಬಾನಿಯದ್ದೇ, ಕೇಬಲ್ ನೆಟ್‍ವರ್ಕ್ ಸಹಾ ಅವರದ್ದೇ ಆದರೆ ಏನಾಗಬಹುದು?

ಮೋದಿ ಸರ್ಕಾರದ ತಪ್ಪುಗಳು/ಹಗರಣಗಳನ್ನು ಬಯಲಿಗೆಳೆಯುತ್ತಿದ್ದ ಎಬಿಪಿ ಚಾನೆಲ್‍ಅನ್ನು ಮಣಿಸಲು ಸರ್ಕಾರ ಏನು ಮಾಡಿತೆಂಬುದನ್ನು ನಾವು ನೋಡಿದ್ದೇವೆ. ಸರ್ಕಾರೀ ಜಾಹೀರಾತುಗಳನ್ನು ನಿಲ್ಲಿಸುವುದು, ಸಿಗ್ನಲ್ ಸಹಾ ಇಲ್ಲದಂತೆ ಮಾಡುವುದು ಇತ್ಯಾದಿಗಳ ಮೂಲಕ ಎಬಿಪಿ ನ್ಯೂಸ್ ಶರಣಾಗಿ ಬಿಜೆಪಿಯ ಮುಂದೆ ಮಂಡಿಯೂರಬೇಕಾಯಿತು. ಅದರ ಪ್ರಸಿದ್ಧ ಸಂಪಾದಕ ಪುಣ್ಯಪ್ರಸೂನ್ ವಾಜಪೇಯಿ ಅವರನ್ನು ಕಿತ್ತೊಗೆಯಬೇಕಾಯಿತು. ಕಿತ್ತೊಗೆದ ಮರುದಿನದಿಂದಲೇ ‘ಎಲ್ಲವೂ ಸರಿಹೋಯಿತು’.

ಹೀಗಿದ್ದ ಮೇಲೆ ಮುಂದೆ ಸರ್ಕಾರಗಳು ಅಂಬಾನಿಯ ಮುಂದೆ ಮಂಡಿಯೂರಬೇಕಾಗಬಹುದು. ಏಕೆಂದರೆ, ತಮ್ಮ ವಿರುದ್ಧ ಸುದ್ದಿ ಪ್ರಸರಣ ಮಾಡುವ ಇತರ ಮಾಧ್ಯಮಗಳ ಮೇಲೂ ಹಿಡಿತ ಹೊಂದುವ ಅಂಬಾನಿ, ಸರ್ಕಾರಕ್ಕೇ ಸವಾಲು ಹಾಕಬಹುದು. ಇವೆಲ್ಲದರ ಕುರಿತು ಟ್ರಾಯ್ 2008ರಲ್ಲೇ ಎಚ್ಚರಿಸಿತ್ತು. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಕೇಬಲ್ ನಿರ್ವಹಣೆಯಲ್ಲಿ ದೊಡ್ಡ ಕಾರ್ಪೋರೇಟ್ ಏಕಸ್ವಾಮ್ಯಕ್ಕೆ ದಾರಿ ಮಾಡಿಕೊಟ್ಟರೆ ಆಗುವ ದುಷ್ಟರಿಣಾಮಗಳು ಗಂಭೀರವಾಗಿರುತ್ತದೆ. ಜನರ ಮನೋಲೋಕವನ್ನು ಹಿಡಿದಿಡುವ, ನಿರ್ಬಂಧಿಸುವ ಕೆಲಸವನ್ನು ಈಗಾಗಲೇ ಮಾಡುತ್ತಿರುವ ದೃಶ್ಯ ಮಾಧ್ಯಮಗಳು ಈ ಚಾಲದ ಮಾಲೀಕರ ಹಿತಾಸಕ್ತಿಗೆ ತಕ್ಕಂತೆ ದುಡಿಯಲಾರಂಭಿಸುತ್ತದೆ.

ಏಕಸ್ವಾಮ್ಯ ಸಾಧಿಸಿದ ಮೇಲೆ ಜನರಿಗೆ ಉಚಿತವಾಗಿ ಚಾನೆಲ್ ನೀಡುವ ಅಗತ್ಯವಿಲ್ಲ. ಎಲ್ಲಕ್ಕೂ ಹಣ ನಿಗದಿ ಮಾಡಿ ಹೆಚ್ಚಿಸುತ್ತಾ ಹೋದರೆ ಸಾಕು. ಮನರಂಜನೆ ಮತ್ತು ಸುದ್ದಿಯೂ ಮಾರುವ ಸರಕಾಗಿರುವಾಗ ಇದೇನು ಮಹಾ ಅಲ್ಲವೇ? ಆ ಧೈರ್ಯದಿಂದಲೇ ಚುನಾವಣೆ 4-5 ತಿಂಗಳಿರುವಾಗಲೇ ಸರ್ಕಾರದ ಕುಮ್ಮಕ್ಕಿನೊಂದಿಗೆ ಕೇಬಲ್ ಚಾನೆಲ್‍ಗಳ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಲಾಯಿತು.
ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾದುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...