Homeಮುಖಪುಟಕೆಂಪು ಕೋಟೆಯಲ್ಲಿ ಧ್ವಜ ಹಾರಾಟ - ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ...

ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ – ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ ಆಕ್ರೋಶ

ಸುವರ್ಣ ಚಾನಲ್‌ನ ಅಜಿತ್ ಹಣಮಕ್ಕನವರ್ ಕೆಂಪು ಕೋಟೆಯ ಮೇಲೆ ಹಾರುತ್ತಿರುವ ರಾಷ್ಟ್ರದ್ವಜ ಮರೆಮಾಚಿದ ದೃಶ್ಯವನ್ನು ತೋರಿಸುತ್ತ ಕೂಗಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತವಾಗಿದೆ.

- Advertisement -
- Advertisement -

ಕಳೆದ ಎರಡು ತಿಂಗಳಿನಿಂದ ಕೇಂದ್ರ ಸರ್ಕಾರದ ವಿರುದ್ದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಮಂಗಳವಾರ ಗಣರಾಜ್ಯೋತ್ಸವದಂದು ಟ್ರಾಕ್ಟರ್‌ ಪರೇಡ್ ನಡೆಸಿದ್ದಾರೆ. ಈ ಪರೇಡ್ ದೇಶದಾದ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆದಿತ್ತಾದರೂ, ದೆಹಲಿಯಲ್ಲಿ ಉದ್ದೇಶಿತ ರ್‍ಯಾಲಿಯ ಮಾರ್ಗವನ್ನು ಬಿಟ್ಟು ಬೇರೆಯೆ ಮಾರ್ಗದಲ್ಲಿ ಹೊರಟ ರೈತರ ಗುಂಪೊಂದು ಕೆಂಪು ಕೋಟೆಯ ಬಳಿ ತೆರಳಿತ್ತು. ಅಲ್ಲಿ ನೆರೆದ ರೈತರ ಗುಂಪು ಸಿಖ್ಖರ ನಿಶಾನೆ ಸಾಹಿಬ್ ಮತ್ತು ರೈತ ಧ್ವಜವನ್ನು ಹಾರಿಸಿದ್ದರು. ಆದರೆ ಈ ಧ್ವಜಗಳನ್ನು ಹಾರಿಸುವ ಹೊತ್ತಿಗೆ ರಾಷ್ಟ್ರ ಧ್ವಜ ಕೆಂಪು ಕೋಟೆಯ ಮುಖ್ಯಸ್ಥಳದಲ್ಲಿ ಎತ್ತರದಲ್ಲಿ ಹಾರಾಡತ್ತಿತ್ತು. ಅದನ್ನು ಯಾರೂ ಕೂಡಾ ಇಳಿಸಿರಲಿಲ್ಲ.

ಆದರೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಈ ಘಟನೆಯ ಬಗ್ಗೆ ಸುಳ್ಳು ಸುದ್ದಿ ಹರಡಿ ಅಪಪ್ರಚಾರ ಪ್ರಾರಂಭವಾಗುತ್ತಿದ್ದಂತೆ ಹಲವಾರು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ಇದರ ಬಗ್ಗೆ ಫ್ಯಾಕ್ಟ್‌‌ಚೆಕ್ ಮಾಡಿದೆ. ಅದರ ಹೊರತಾಗಿಯು ಬಿಜೆಪಿಯ ಶಾಸಕರು, ಸಚಿವರು, ಪ್ರತಿನಿಧಿಗಳು ಹಾಗೂ ಪರವಾಗಿರುವ ಹಲವು ಮಾಧ್ಯಮಗಳು ಸುಳ್ಳು ಹರಡುತ್ತಿದೆ. ಆದರೆ ಇದೀಗ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳೆದ್ದಿವೆ. ಹಲವಾರು ಜನರು ಅವರಿಗೆ ಧ್ವಜ ಸಂಹಿತೆಯ ಪಾಠ ಮಾಡಿದ್ದಾರೆ.

ಇದನ್ನೂ ಓದಿ: ಆಘಾತಕಾರಿ ಸುದ್ದಿ: ಕೆಂಪುಕೋಟೆಯ ಮುತ್ತಿಗೆ, ಸಿಖ್ ಧ್ವಜಾರೋಹಣಕ್ಕೆ ಕಾರಣ ಬಿಜೆಪಿ ಕಾರ್ಯಕರ್ತ ದೀಪ್ ಸಿಧು

ಪತ್ರಕರ್ತ ಟಿ.ಕೆ. ದಯಾನಂದ್, “The Flag Code of India 2002 ಕಾಯ್ದೆಯ part 2 / ಸೆಕ್ಷನ್ 2.2/ ಕಲಂ 8ರ ಕೆಳಗೆ ಖಾಸಗಿ ಸಂಘ-ಸಂಸ್ಥೆಗಳ, ಧಾರ್ಮಿಕ, ಇನ್ನಿತರೆ ನಿಷೇಧಿತವಲ್ಲದ ಬಾವುಟಗಳನ್ನು ರಾಷ್ಟ್ರಧ್ವಜದೊಡನೆ ಹಾರಿಸಬಹುದು. ಆ ಬಾವುಟಗಳು ರಾಷ್ಟ್ರಧ್ವಜಕ್ಕೆ ಸಮವಾಗಿರದೆ ರಾಷ್ಟ್ರಧ್ವಜಕ್ಕಿಂತ ಕೆಳಗಿನ ಮಟ್ಟದಲ್ಲಿರಬೇಕು ಎಂದು ಕೇಂದ್ರ ಸರ್ಕಾರದ 2002 ರ ಶಾಸನವೇ ಸ್ಪಷ್ಟಪಡಿಸುತ್ತದೆ” ಎಂದು ಹೇಳಿದ್ದಾರೆ.

“ಇದರ ಪ್ರಕಾರ ಸಿಖ್ಖರದ್ದಷ್ಟೇ ಯಾಕೆ, ನಿಷೇಧಿತವಲ್ಲದ ಯಾವ ಬಾವುಟವನ್ನಾದರೂ ರಾಷ್ಟ್ರಧ್ವಜದೆದುರು ಅದಕ್ಕಿಂತ ಕೆಳಗಿನ ಮಟ್ಟದಲ್ಲಿ ಹಾರಿಸಬಹುದು. ಇದರಿಂದ ಯಾವ ಕಾನೂನುಭಂಗವೂ ಉಂಟಾಗುವುದಿಲ್ಲ. ರೈತರಿಂದ ರಾಷ್ಟ್ರಧ್ವಜಕ್ಕೆ ಯಾವ ಅಪಮಾನವೂ ನಡೆದಿಲ್ಲ. ವರದಿ ಮಾಡುವ ಮೊದಲು ಅದಕ್ಕೆ ಸಂಬಂಧಿಸಿದ ಕಾಯ್ದೆ ಶಾಸನಗಳನ್ನು ಓದಿಕೊಂಡು ವರದಿ ಮಾಡುವುದು ಸೆನ್ಸಿಬಲ್ ಜರ್ನಲಿಸಂ” ಎಂದು ಹೇಳಿದ್ದಾರೆ.

“ಪತ್ರಿಕಾ ವರದಿಗಾರಿಕೆಯಲ್ಲಿ ರಾಷ್ಟ್ರಗೌರವ ಮತ್ತು ಕೋಮುಸೂಕ್ಷ್ಮ ವಿಷಯಗಳನ್ನು ವರದಿ ಮಾಡುವಾಗ ಅಮೂಲಾಗ್ರ ತಪಾಸಣೆ, ಸಾಕ್ಷಾಧಾರಗಳ ಸಮೇತ ವರದಿ ಮಾಡಬೇಕೆಂದು ನಾವು ಜರ್ನಲಿಸಂ ಕಾಲೇಜಿನಲ್ಲಿ ಕಲಿತಿದ್ದೆವು. ಈ ಎಚ್ಚರ ಮರೆತರೆ ಈ ಅಸಡ್ಡೆಯಿಂದ ಸಮಾಜದ ಮೇಲೆ ಘನಘೋರ ಪರಿಣಾಮಗಳಾಗುತ್ತವೆ” ಎಂದು ದಯಾನಂದ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಹಿಟ್ಲರ್ ಆಡಳಿತವನ್ನು ನಿಲ್ಲಿಸಿ, ಇಲ್ಲದಿದ್ದರೆ ಅನುಭವಿಸುತ್ತೀರಿ: ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಕೆ

ಹಿರಿಯ ಪತ್ರಕರ್ತ ದಿನೇಶ್‌ ಅಮಿನ್ ಮಟ್ಟು, “ದೇಶಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ನಂತರ ಆರ್‌ಎಸ್‌ಎಸ್, ನಾಗಪುರದ ಕೇಂದ್ರ ಕಚೇರಿಯಲ್ಲಿ ಮೊದಲ ಬಾರಿ ರಾಷ್ಟ್ರಧ್ವಜ ಆರೋಹಣ ಮಾಡಿರುವುದನ್ನು ಯಾರಾದರೂ ನೆನಪು ಮಾಡಿಕೊಡ್ರಪ್ಪಾ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ದಂಗೆ ಏಳಲು ಕರೆ ನೀಡಿದವರು, ಬಾಂಬು ಇಟ್ಟು ರೈಲ್ವೆ ಸ್ಟೇಷನ್ ಸ್ಪೋಟಿಸಲು ಕುಮ್ಮಕ್ಕು ನೀಡಿದವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಗೋಳಾಡುತ್ತಿರುವುದು ತಮಾಷೆಯಾಗಿದೆ” ಎಂದು ಹೇಳಿದ್ದಾರೆ.

ಅಲ್ಲದೆ ಸಚಿವ ಸುರೇಶ್ ಕುಮಾರ್‌ ಅವರು, “ದೆಹಲಿ ಪ್ರತಿಭಟನೆ ರೈತರದಲ್ಲ,
ಕೇವಲ ಆ ಕಾಯ್ದೆಗಳ ವಿರುದ್ಧವಲ್ಲ ಎಂದು ಇಂದು ಬಯಲಾಯಿತು” ಎಂದು ಬರೆದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿನ್ ಮಟ್ಟು, “ಪ್ರತಿಭಟನೆ ಕೇವಲ ಕಾಯ್ದೆ ವಿರುದ್ಧ ಮತ್ತು ರೈತರದ್ದು ಮಾತ್ರ ಎಂದು ಯಾರು ಹೇಳಿದ್ದು? ಇದು ಬಿಜೆಪಿ ಸರ್ಕಾರದ ವಿರುದ್ಧ ಬಂಡೆದ್ದ ಸರ್ವಜನರ ಪ್ರತಿಭಟನೆ ಅನುಮಾನವೇ ಬೇಡ” ಎಂದು ಹೇಳಿದ್ದಾರೆ.

ಹಿರಿಯ ಲೇಖಕ ಪುರುಷೋತ್ತಮ ಬಿಳಿಮಲೆಯವರು, “ಜೆಎನ್‌ಯುವಿಗೆ ನುಗ್ಗಿ ಮಕ್ಕಳ ಮೇಲೆ ಹಲ್ಲೆ ಮಾಡುವಾಗ, ‘ಗೋಲಿ ಮಾರೋ ಸಾಲೋಂಕೋ ‘ಎಂದು ಘೋಷಣೆ ಕೂಗಿದಾಗ, ಬಾಬ್ರಿ ಮಸೀದಿ ಉರುಳಿಸಿದಾಗ, ಮೌನವಾಗಿದ್ದವರು ಈಗ ರೈತರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಊಳಿಡುವುದು ಕರುಣಾಜನಕವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈತರನ್ನು ಭಯೋತ್ಪಾದಕರು ಎಂದ ಕೃಷಿ ಸಚಿವ ಬಿ. ಸಿ. ಪಾಟಿಲ್

ಕನ್ನಡ ಪರ ಹೋರಾಟಗಾರ ದಿನೇಶ್ ಕುಮಾರ್‌ ದಿನ್ನೂ ಅವರು, “ಭಕ್ತರ ಅಚ್ಚುಮೆಚ್ಚಿನ ಕೆನಡಿಯನ್ ನಟ ಅಕ್ಷಯ್ ಕುಮಾರ್ ಅಭಿನಯದ ‘ಕೇಸರಿ’ ಎಂಬ ಸಿನಿಮಾವೊಂದು ಬಂದಿದ್ದು ನೆನಪಿದೆಯಾ? ಈ ಸಿನಿಮಾದ ‘ತೇರೀ‌‌ ಮಿಟ್ಟೀ ಮೇ ಮಿಲ್ ಜಾವಾ’ ಎಂಬ ಜನಪ್ರಿಯ ಪಂಜಾಬಿ ಗೀತೆಯೊಂದನ್ನು ನೀವು ಕೇಳಿರಬಹುದು. ಇತ್ತೀಚಿನ ಅತಿ ಜನಪ್ರಿಯ ದೇಶಭಕ್ತ ಗೀತೆಯೆಂದು ಹೆಸರಾದ ಹಾಡು ಇದು. ಯೂ ಟ್ಯೂಬ್ ನಲ್ಲಿ ತೇರಿ ಮಿಟ್ಟೀ ಎಂದು ಸರ್ಚ್ ಮಾಡಿದರೆ ಈ ಹಾಡಿನ ಸಾವಿರಾರು ಕವರ್ ವರ್ಷನ್ ಗಳು ನಿಮಗೆ ಕಾಣಿಸುತ್ತವೆ. ಅಂದಹಾಗೆ ಸಿಖ್ ವೀರಸಾಹಸಿಯೊಬ್ಬನ‌ ಕಥೆಯ ಸಿನಿಮಾ ಇದು. ಅಕ್ಷಯ್ ಕುಮಾರ್ ಕೈಯಲ್ಲಿರುವುದು ನಿಶಾನ್ ಸಾಹಿಬ್ ಬಾವುಟವೇ! ಸಿನಿಮಾದಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿದ ಬಾವುಟ ಇದ್ದಕ್ಕಿದ್ದಂತೆ ದೇಶದ್ರೋಹಿ ಬಾವುಟವಾಗಿಹೋಯಿತು! ಹಿಪಾಕ್ರಸಿಗೆ ಒಂದು ಮಿತಿ ಬೇಡವೇ?” ಎಂದು ಕೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ವಲೀ ರಹ್ಮಾನ್, “ಗೋದಿ ಮೀಡಿಯಾಗಳು ಎಂದಿನಂತೆ ಸುಳ್ಳು ಹೇಳುತ್ತಿದೆ. ರೈತರು ಖಾಲಿಯಾಗಿದ್ದ ಕಂಬಕ್ಕೆ ಧ್ವಜಗಳನ್ನು ಏರಿಸಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ: ಹೆಚ್​.ಎಸ್​. ದೊರೆಸ್ವಾಮಿ

ಸಿದ್ದಯ್ಯ ಚಿಕ್ಕಮಾದೆಗೌಡ ಅವರು, “ಸುವರ್ಣ ಚಾನಲ್ ನ ಅಜಿತ್ ಹಣಮಕ್ಕನವರ್ ಕೆಂಪು ಕೋಟೆಯ ಮೇಲೆ ಹಾರುತ್ತಿರುವ ರಾಷ್ಟ್ರದ್ವಜ ಮರೆಮಾಚಿದ ದೃಶ್ಯ ತೋರಿಸುತ್ತ ಕೂಗಾಡುವುದ ಕಂಡು ಇವ ಬಾರೀ ವಂಚಕ ಎನಿಸಿತು” ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಖಲೀಫಾ ಬೆಳ್ತಂಗಡಿ ಅವರು , “ಈ ಬಾವುಟವನ್ನು ತಾನೆ ಈಗ ದೇಶ ದ್ರೋಹಿ ಬಾವುಟ ಎನ್ನುತ್ತಿರುವುದು. ಸರಿ, ಹಾಗಾದರೆ ಇದನ್ನು ಕಟ್ಟಿಕೊಂಡವರು ಯಾರು?” ಎಂದು ಪ್ರದಾನಿ ಮೋದಿ ತನ್ನ ತಲೆಗೆ ಸುತ್ತಿರುವ ನಿಶಾನ್ ಸಾಹಿಬ್ ಧ್ವಜದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

ಇದನ್ನೂ ಓದಿ: ಕಂಗನಾ ಭೇಟಿಗೆ ರಾಜ್ಯಪಾಲರಿಗೆ ಸಮಯವಿದೆ, ರೈತರ ಭೇಟಿಗಿಲ್ಲ: ಶರದ್ ಪವಾರ್ ಟೀಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಉತ್ತಮವಾದ ವರದಿ ಮಾಡುತ್ತಿದ್ದೀರಿ. ಧನ್ಯವಾದಗಳು…

    65 ದಿನ ನಮ್ಮ ರೈತರು ಶಾಂತಿಯುತವಾಗಿ ನಡೆಸಿದ ಹೋರಾಟ ಇಂದು ಯಾಕೆ ಹೀಗಯ್ತು ಅನ್ನೊದನ್ನು ಬಿ.ಜೆ.ಪಿ ಅವಲೋಕನ ಮಾಡಿಕೊಳ್ಳಲಿ ದೇಶಕ್ಕೆ ಅವಮಾನ ಆಯ್ತು ಎಂದು ಕಿರುಚಾಡುತ್ತಿರುವ ಭಕ್ತರೆ ನೂರಾರು ಜನ ರೈತರು ಸತ್ತರು ಹೋರಾಟದ ಸ್ಥಳಕ್ಕೆ ಹೋಗದಿರುವ ಮೋದಿಗೆ ಕೇಳಿ ಪ್ರಜಾಪ್ರಭುತ್ವ ದೇಶಕ್ಕೆ ಅವಮಾನ ಮಾಡ್ತಿಯ ನೀನು ಅಂತಾ………

  2. Hanumakkanavar, please see the truth, know the truth, and spread the truth. Be a good guy. Try to create heaven on earth or else you will also be part of hell.

LEAVE A REPLY

Please enter your comment!
Please enter your name here

- Advertisment -

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾದ ಎಸ್‌ಐಆರ್ ವಿರೋಧಿ ಜಾಥಾ; ಜನಪರ ಸಂಘಟನೆಗಳ ಬೆಂಬಲ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ನಡೆಯುತ್ತಿರುವ ರಾಜ್ಯ ಮಟ್ಟದ ಜಾಥಾ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಜಾಥಾದ ಮೂರನೇ ದಿನವಾದ ಇಂದು ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದಿಂದ ಆರಂಭವಾದ...

SIR ಮೂಲಕ ಕೇಂದ್ರ ಸರ್ಕಾರ ಪ್ರಜಾತಂತ್ರ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದೆ: ಮಾಜಿ ಸಚಿವ ಬಿ.ಬಿ.ಲಿಂಗಯ್ಯ ಆಕ್ರೋಶ

ಕೇಂದ್ರದ ಬಿಜೆಪಿ ಸರ್ಕಾರವು ‘SIR’ ಜಾರಿಯ ಮೂಲಕ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲು ಸಂಚು ರೂಪಿಸಿದೆ ಎಂದು ಮಾಜಿ ಸಚಿವ ಬಿ.ಬಿ. ಲಿಂಗಯ್ಯ ತೀವ್ರ ಆಕ್ರೋಶ...

ಖ್ಯಾತ ಪತ್ರಕರ್ತ ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

ಕನ್ನಡ ಪತ್ರಿಕೋದ್ಯಮದ ಧ್ರುವತಾರೆ, ದಿವಂಗತ ಪಿ. ಲಂಕೇಶ್ ಅವರ ಧರ್ಮಪತ್ನಿ ಹಾಗೂ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿಯಾದ ಇಂದಿರಾ ಲಂಕೇಶ್ (84) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...