Homeಮುಖಪುಟಕೆಂಪು ಕೋಟೆಯಲ್ಲಿ ಧ್ವಜ ಹಾರಾಟ - ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ...

ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ – ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ ಆಕ್ರೋಶ

ಸುವರ್ಣ ಚಾನಲ್‌ನ ಅಜಿತ್ ಹಣಮಕ್ಕನವರ್ ಕೆಂಪು ಕೋಟೆಯ ಮೇಲೆ ಹಾರುತ್ತಿರುವ ರಾಷ್ಟ್ರದ್ವಜ ಮರೆಮಾಚಿದ ದೃಶ್ಯವನ್ನು ತೋರಿಸುತ್ತ ಕೂಗಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತವಾಗಿದೆ.

- Advertisement -
- Advertisement -

ಕಳೆದ ಎರಡು ತಿಂಗಳಿನಿಂದ ಕೇಂದ್ರ ಸರ್ಕಾರದ ವಿರುದ್ದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಮಂಗಳವಾರ ಗಣರಾಜ್ಯೋತ್ಸವದಂದು ಟ್ರಾಕ್ಟರ್‌ ಪರೇಡ್ ನಡೆಸಿದ್ದಾರೆ. ಈ ಪರೇಡ್ ದೇಶದಾದ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆದಿತ್ತಾದರೂ, ದೆಹಲಿಯಲ್ಲಿ ಉದ್ದೇಶಿತ ರ್‍ಯಾಲಿಯ ಮಾರ್ಗವನ್ನು ಬಿಟ್ಟು ಬೇರೆಯೆ ಮಾರ್ಗದಲ್ಲಿ ಹೊರಟ ರೈತರ ಗುಂಪೊಂದು ಕೆಂಪು ಕೋಟೆಯ ಬಳಿ ತೆರಳಿತ್ತು. ಅಲ್ಲಿ ನೆರೆದ ರೈತರ ಗುಂಪು ಸಿಖ್ಖರ ನಿಶಾನೆ ಸಾಹಿಬ್ ಮತ್ತು ರೈತ ಧ್ವಜವನ್ನು ಹಾರಿಸಿದ್ದರು. ಆದರೆ ಈ ಧ್ವಜಗಳನ್ನು ಹಾರಿಸುವ ಹೊತ್ತಿಗೆ ರಾಷ್ಟ್ರ ಧ್ವಜ ಕೆಂಪು ಕೋಟೆಯ ಮುಖ್ಯಸ್ಥಳದಲ್ಲಿ ಎತ್ತರದಲ್ಲಿ ಹಾರಾಡತ್ತಿತ್ತು. ಅದನ್ನು ಯಾರೂ ಕೂಡಾ ಇಳಿಸಿರಲಿಲ್ಲ.

ಆದರೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಈ ಘಟನೆಯ ಬಗ್ಗೆ ಸುಳ್ಳು ಸುದ್ದಿ ಹರಡಿ ಅಪಪ್ರಚಾರ ಪ್ರಾರಂಭವಾಗುತ್ತಿದ್ದಂತೆ ಹಲವಾರು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ಇದರ ಬಗ್ಗೆ ಫ್ಯಾಕ್ಟ್‌‌ಚೆಕ್ ಮಾಡಿದೆ. ಅದರ ಹೊರತಾಗಿಯು ಬಿಜೆಪಿಯ ಶಾಸಕರು, ಸಚಿವರು, ಪ್ರತಿನಿಧಿಗಳು ಹಾಗೂ ಪರವಾಗಿರುವ ಹಲವು ಮಾಧ್ಯಮಗಳು ಸುಳ್ಳು ಹರಡುತ್ತಿದೆ. ಆದರೆ ಇದೀಗ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳೆದ್ದಿವೆ. ಹಲವಾರು ಜನರು ಅವರಿಗೆ ಧ್ವಜ ಸಂಹಿತೆಯ ಪಾಠ ಮಾಡಿದ್ದಾರೆ.

ಇದನ್ನೂ ಓದಿ: ಆಘಾತಕಾರಿ ಸುದ್ದಿ: ಕೆಂಪುಕೋಟೆಯ ಮುತ್ತಿಗೆ, ಸಿಖ್ ಧ್ವಜಾರೋಹಣಕ್ಕೆ ಕಾರಣ ಬಿಜೆಪಿ ಕಾರ್ಯಕರ್ತ ದೀಪ್ ಸಿಧು

ಪತ್ರಕರ್ತ ಟಿ.ಕೆ. ದಯಾನಂದ್, “The Flag Code of India 2002 ಕಾಯ್ದೆಯ part 2 / ಸೆಕ್ಷನ್ 2.2/ ಕಲಂ 8ರ ಕೆಳಗೆ ಖಾಸಗಿ ಸಂಘ-ಸಂಸ್ಥೆಗಳ, ಧಾರ್ಮಿಕ, ಇನ್ನಿತರೆ ನಿಷೇಧಿತವಲ್ಲದ ಬಾವುಟಗಳನ್ನು ರಾಷ್ಟ್ರಧ್ವಜದೊಡನೆ ಹಾರಿಸಬಹುದು. ಆ ಬಾವುಟಗಳು ರಾಷ್ಟ್ರಧ್ವಜಕ್ಕೆ ಸಮವಾಗಿರದೆ ರಾಷ್ಟ್ರಧ್ವಜಕ್ಕಿಂತ ಕೆಳಗಿನ ಮಟ್ಟದಲ್ಲಿರಬೇಕು ಎಂದು ಕೇಂದ್ರ ಸರ್ಕಾರದ 2002 ರ ಶಾಸನವೇ ಸ್ಪಷ್ಟಪಡಿಸುತ್ತದೆ” ಎಂದು ಹೇಳಿದ್ದಾರೆ.

“ಇದರ ಪ್ರಕಾರ ಸಿಖ್ಖರದ್ದಷ್ಟೇ ಯಾಕೆ, ನಿಷೇಧಿತವಲ್ಲದ ಯಾವ ಬಾವುಟವನ್ನಾದರೂ ರಾಷ್ಟ್ರಧ್ವಜದೆದುರು ಅದಕ್ಕಿಂತ ಕೆಳಗಿನ ಮಟ್ಟದಲ್ಲಿ ಹಾರಿಸಬಹುದು. ಇದರಿಂದ ಯಾವ ಕಾನೂನುಭಂಗವೂ ಉಂಟಾಗುವುದಿಲ್ಲ. ರೈತರಿಂದ ರಾಷ್ಟ್ರಧ್ವಜಕ್ಕೆ ಯಾವ ಅಪಮಾನವೂ ನಡೆದಿಲ್ಲ. ವರದಿ ಮಾಡುವ ಮೊದಲು ಅದಕ್ಕೆ ಸಂಬಂಧಿಸಿದ ಕಾಯ್ದೆ ಶಾಸನಗಳನ್ನು ಓದಿಕೊಂಡು ವರದಿ ಮಾಡುವುದು ಸೆನ್ಸಿಬಲ್ ಜರ್ನಲಿಸಂ” ಎಂದು ಹೇಳಿದ್ದಾರೆ.

“ಪತ್ರಿಕಾ ವರದಿಗಾರಿಕೆಯಲ್ಲಿ ರಾಷ್ಟ್ರಗೌರವ ಮತ್ತು ಕೋಮುಸೂಕ್ಷ್ಮ ವಿಷಯಗಳನ್ನು ವರದಿ ಮಾಡುವಾಗ ಅಮೂಲಾಗ್ರ ತಪಾಸಣೆ, ಸಾಕ್ಷಾಧಾರಗಳ ಸಮೇತ ವರದಿ ಮಾಡಬೇಕೆಂದು ನಾವು ಜರ್ನಲಿಸಂ ಕಾಲೇಜಿನಲ್ಲಿ ಕಲಿತಿದ್ದೆವು. ಈ ಎಚ್ಚರ ಮರೆತರೆ ಈ ಅಸಡ್ಡೆಯಿಂದ ಸಮಾಜದ ಮೇಲೆ ಘನಘೋರ ಪರಿಣಾಮಗಳಾಗುತ್ತವೆ” ಎಂದು ದಯಾನಂದ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಹಿಟ್ಲರ್ ಆಡಳಿತವನ್ನು ನಿಲ್ಲಿಸಿ, ಇಲ್ಲದಿದ್ದರೆ ಅನುಭವಿಸುತ್ತೀರಿ: ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಕೆ

ಹಿರಿಯ ಪತ್ರಕರ್ತ ದಿನೇಶ್‌ ಅಮಿನ್ ಮಟ್ಟು, “ದೇಶಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ನಂತರ ಆರ್‌ಎಸ್‌ಎಸ್, ನಾಗಪುರದ ಕೇಂದ್ರ ಕಚೇರಿಯಲ್ಲಿ ಮೊದಲ ಬಾರಿ ರಾಷ್ಟ್ರಧ್ವಜ ಆರೋಹಣ ಮಾಡಿರುವುದನ್ನು ಯಾರಾದರೂ ನೆನಪು ಮಾಡಿಕೊಡ್ರಪ್ಪಾ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ದಂಗೆ ಏಳಲು ಕರೆ ನೀಡಿದವರು, ಬಾಂಬು ಇಟ್ಟು ರೈಲ್ವೆ ಸ್ಟೇಷನ್ ಸ್ಪೋಟಿಸಲು ಕುಮ್ಮಕ್ಕು ನೀಡಿದವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಗೋಳಾಡುತ್ತಿರುವುದು ತಮಾಷೆಯಾಗಿದೆ” ಎಂದು ಹೇಳಿದ್ದಾರೆ.

ಅಲ್ಲದೆ ಸಚಿವ ಸುರೇಶ್ ಕುಮಾರ್‌ ಅವರು, “ದೆಹಲಿ ಪ್ರತಿಭಟನೆ ರೈತರದಲ್ಲ,
ಕೇವಲ ಆ ಕಾಯ್ದೆಗಳ ವಿರುದ್ಧವಲ್ಲ ಎಂದು ಇಂದು ಬಯಲಾಯಿತು” ಎಂದು ಬರೆದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿನ್ ಮಟ್ಟು, “ಪ್ರತಿಭಟನೆ ಕೇವಲ ಕಾಯ್ದೆ ವಿರುದ್ಧ ಮತ್ತು ರೈತರದ್ದು ಮಾತ್ರ ಎಂದು ಯಾರು ಹೇಳಿದ್ದು? ಇದು ಬಿಜೆಪಿ ಸರ್ಕಾರದ ವಿರುದ್ಧ ಬಂಡೆದ್ದ ಸರ್ವಜನರ ಪ್ರತಿಭಟನೆ ಅನುಮಾನವೇ ಬೇಡ” ಎಂದು ಹೇಳಿದ್ದಾರೆ.

ಹಿರಿಯ ಲೇಖಕ ಪುರುಷೋತ್ತಮ ಬಿಳಿಮಲೆಯವರು, “ಜೆಎನ್‌ಯುವಿಗೆ ನುಗ್ಗಿ ಮಕ್ಕಳ ಮೇಲೆ ಹಲ್ಲೆ ಮಾಡುವಾಗ, ‘ಗೋಲಿ ಮಾರೋ ಸಾಲೋಂಕೋ ‘ಎಂದು ಘೋಷಣೆ ಕೂಗಿದಾಗ, ಬಾಬ್ರಿ ಮಸೀದಿ ಉರುಳಿಸಿದಾಗ, ಮೌನವಾಗಿದ್ದವರು ಈಗ ರೈತರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಊಳಿಡುವುದು ಕರುಣಾಜನಕವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈತರನ್ನು ಭಯೋತ್ಪಾದಕರು ಎಂದ ಕೃಷಿ ಸಚಿವ ಬಿ. ಸಿ. ಪಾಟಿಲ್

ಕನ್ನಡ ಪರ ಹೋರಾಟಗಾರ ದಿನೇಶ್ ಕುಮಾರ್‌ ದಿನ್ನೂ ಅವರು, “ಭಕ್ತರ ಅಚ್ಚುಮೆಚ್ಚಿನ ಕೆನಡಿಯನ್ ನಟ ಅಕ್ಷಯ್ ಕುಮಾರ್ ಅಭಿನಯದ ‘ಕೇಸರಿ’ ಎಂಬ ಸಿನಿಮಾವೊಂದು ಬಂದಿದ್ದು ನೆನಪಿದೆಯಾ? ಈ ಸಿನಿಮಾದ ‘ತೇರೀ‌‌ ಮಿಟ್ಟೀ ಮೇ ಮಿಲ್ ಜಾವಾ’ ಎಂಬ ಜನಪ್ರಿಯ ಪಂಜಾಬಿ ಗೀತೆಯೊಂದನ್ನು ನೀವು ಕೇಳಿರಬಹುದು. ಇತ್ತೀಚಿನ ಅತಿ ಜನಪ್ರಿಯ ದೇಶಭಕ್ತ ಗೀತೆಯೆಂದು ಹೆಸರಾದ ಹಾಡು ಇದು. ಯೂ ಟ್ಯೂಬ್ ನಲ್ಲಿ ತೇರಿ ಮಿಟ್ಟೀ ಎಂದು ಸರ್ಚ್ ಮಾಡಿದರೆ ಈ ಹಾಡಿನ ಸಾವಿರಾರು ಕವರ್ ವರ್ಷನ್ ಗಳು ನಿಮಗೆ ಕಾಣಿಸುತ್ತವೆ. ಅಂದಹಾಗೆ ಸಿಖ್ ವೀರಸಾಹಸಿಯೊಬ್ಬನ‌ ಕಥೆಯ ಸಿನಿಮಾ ಇದು. ಅಕ್ಷಯ್ ಕುಮಾರ್ ಕೈಯಲ್ಲಿರುವುದು ನಿಶಾನ್ ಸಾಹಿಬ್ ಬಾವುಟವೇ! ಸಿನಿಮಾದಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿದ ಬಾವುಟ ಇದ್ದಕ್ಕಿದ್ದಂತೆ ದೇಶದ್ರೋಹಿ ಬಾವುಟವಾಗಿಹೋಯಿತು! ಹಿಪಾಕ್ರಸಿಗೆ ಒಂದು ಮಿತಿ ಬೇಡವೇ?” ಎಂದು ಕೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ವಲೀ ರಹ್ಮಾನ್, “ಗೋದಿ ಮೀಡಿಯಾಗಳು ಎಂದಿನಂತೆ ಸುಳ್ಳು ಹೇಳುತ್ತಿದೆ. ರೈತರು ಖಾಲಿಯಾಗಿದ್ದ ಕಂಬಕ್ಕೆ ಧ್ವಜಗಳನ್ನು ಏರಿಸಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ: ಹೆಚ್​.ಎಸ್​. ದೊರೆಸ್ವಾಮಿ

ಸಿದ್ದಯ್ಯ ಚಿಕ್ಕಮಾದೆಗೌಡ ಅವರು, “ಸುವರ್ಣ ಚಾನಲ್ ನ ಅಜಿತ್ ಹಣಮಕ್ಕನವರ್ ಕೆಂಪು ಕೋಟೆಯ ಮೇಲೆ ಹಾರುತ್ತಿರುವ ರಾಷ್ಟ್ರದ್ವಜ ಮರೆಮಾಚಿದ ದೃಶ್ಯ ತೋರಿಸುತ್ತ ಕೂಗಾಡುವುದ ಕಂಡು ಇವ ಬಾರೀ ವಂಚಕ ಎನಿಸಿತು” ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಖಲೀಫಾ ಬೆಳ್ತಂಗಡಿ ಅವರು , “ಈ ಬಾವುಟವನ್ನು ತಾನೆ ಈಗ ದೇಶ ದ್ರೋಹಿ ಬಾವುಟ ಎನ್ನುತ್ತಿರುವುದು. ಸರಿ, ಹಾಗಾದರೆ ಇದನ್ನು ಕಟ್ಟಿಕೊಂಡವರು ಯಾರು?” ಎಂದು ಪ್ರದಾನಿ ಮೋದಿ ತನ್ನ ತಲೆಗೆ ಸುತ್ತಿರುವ ನಿಶಾನ್ ಸಾಹಿಬ್ ಧ್ವಜದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

ಇದನ್ನೂ ಓದಿ: ಕಂಗನಾ ಭೇಟಿಗೆ ರಾಜ್ಯಪಾಲರಿಗೆ ಸಮಯವಿದೆ, ರೈತರ ಭೇಟಿಗಿಲ್ಲ: ಶರದ್ ಪವಾರ್ ಟೀಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಉತ್ತಮವಾದ ವರದಿ ಮಾಡುತ್ತಿದ್ದೀರಿ. ಧನ್ಯವಾದಗಳು…

    65 ದಿನ ನಮ್ಮ ರೈತರು ಶಾಂತಿಯುತವಾಗಿ ನಡೆಸಿದ ಹೋರಾಟ ಇಂದು ಯಾಕೆ ಹೀಗಯ್ತು ಅನ್ನೊದನ್ನು ಬಿ.ಜೆ.ಪಿ ಅವಲೋಕನ ಮಾಡಿಕೊಳ್ಳಲಿ ದೇಶಕ್ಕೆ ಅವಮಾನ ಆಯ್ತು ಎಂದು ಕಿರುಚಾಡುತ್ತಿರುವ ಭಕ್ತರೆ ನೂರಾರು ಜನ ರೈತರು ಸತ್ತರು ಹೋರಾಟದ ಸ್ಥಳಕ್ಕೆ ಹೋಗದಿರುವ ಮೋದಿಗೆ ಕೇಳಿ ಪ್ರಜಾಪ್ರಭುತ್ವ ದೇಶಕ್ಕೆ ಅವಮಾನ ಮಾಡ್ತಿಯ ನೀನು ಅಂತಾ………

  2. Hanumakkanavar, please see the truth, know the truth, and spread the truth. Be a good guy. Try to create heaven on earth or else you will also be part of hell.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...