Homeಮುಖಪುಟಕೆಂಪು ಕೋಟೆಯಲ್ಲಿ ಧ್ವಜ ಹಾರಾಟ - ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ...

ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ – ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ ಆಕ್ರೋಶ

ಸುವರ್ಣ ಚಾನಲ್‌ನ ಅಜಿತ್ ಹಣಮಕ್ಕನವರ್ ಕೆಂಪು ಕೋಟೆಯ ಮೇಲೆ ಹಾರುತ್ತಿರುವ ರಾಷ್ಟ್ರದ್ವಜ ಮರೆಮಾಚಿದ ದೃಶ್ಯವನ್ನು ತೋರಿಸುತ್ತ ಕೂಗಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತವಾಗಿದೆ.

- Advertisement -
- Advertisement -

ಕಳೆದ ಎರಡು ತಿಂಗಳಿನಿಂದ ಕೇಂದ್ರ ಸರ್ಕಾರದ ವಿರುದ್ದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಮಂಗಳವಾರ ಗಣರಾಜ್ಯೋತ್ಸವದಂದು ಟ್ರಾಕ್ಟರ್‌ ಪರೇಡ್ ನಡೆಸಿದ್ದಾರೆ. ಈ ಪರೇಡ್ ದೇಶದಾದ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆದಿತ್ತಾದರೂ, ದೆಹಲಿಯಲ್ಲಿ ಉದ್ದೇಶಿತ ರ್‍ಯಾಲಿಯ ಮಾರ್ಗವನ್ನು ಬಿಟ್ಟು ಬೇರೆಯೆ ಮಾರ್ಗದಲ್ಲಿ ಹೊರಟ ರೈತರ ಗುಂಪೊಂದು ಕೆಂಪು ಕೋಟೆಯ ಬಳಿ ತೆರಳಿತ್ತು. ಅಲ್ಲಿ ನೆರೆದ ರೈತರ ಗುಂಪು ಸಿಖ್ಖರ ನಿಶಾನೆ ಸಾಹಿಬ್ ಮತ್ತು ರೈತ ಧ್ವಜವನ್ನು ಹಾರಿಸಿದ್ದರು. ಆದರೆ ಈ ಧ್ವಜಗಳನ್ನು ಹಾರಿಸುವ ಹೊತ್ತಿಗೆ ರಾಷ್ಟ್ರ ಧ್ವಜ ಕೆಂಪು ಕೋಟೆಯ ಮುಖ್ಯಸ್ಥಳದಲ್ಲಿ ಎತ್ತರದಲ್ಲಿ ಹಾರಾಡತ್ತಿತ್ತು. ಅದನ್ನು ಯಾರೂ ಕೂಡಾ ಇಳಿಸಿರಲಿಲ್ಲ.

ಆದರೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಈ ಘಟನೆಯ ಬಗ್ಗೆ ಸುಳ್ಳು ಸುದ್ದಿ ಹರಡಿ ಅಪಪ್ರಚಾರ ಪ್ರಾರಂಭವಾಗುತ್ತಿದ್ದಂತೆ ಹಲವಾರು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ಇದರ ಬಗ್ಗೆ ಫ್ಯಾಕ್ಟ್‌‌ಚೆಕ್ ಮಾಡಿದೆ. ಅದರ ಹೊರತಾಗಿಯು ಬಿಜೆಪಿಯ ಶಾಸಕರು, ಸಚಿವರು, ಪ್ರತಿನಿಧಿಗಳು ಹಾಗೂ ಪರವಾಗಿರುವ ಹಲವು ಮಾಧ್ಯಮಗಳು ಸುಳ್ಳು ಹರಡುತ್ತಿದೆ. ಆದರೆ ಇದೀಗ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳೆದ್ದಿವೆ. ಹಲವಾರು ಜನರು ಅವರಿಗೆ ಧ್ವಜ ಸಂಹಿತೆಯ ಪಾಠ ಮಾಡಿದ್ದಾರೆ.

ಇದನ್ನೂ ಓದಿ: ಆಘಾತಕಾರಿ ಸುದ್ದಿ: ಕೆಂಪುಕೋಟೆಯ ಮುತ್ತಿಗೆ, ಸಿಖ್ ಧ್ವಜಾರೋಹಣಕ್ಕೆ ಕಾರಣ ಬಿಜೆಪಿ ಕಾರ್ಯಕರ್ತ ದೀಪ್ ಸಿಧು

ಪತ್ರಕರ್ತ ಟಿ.ಕೆ. ದಯಾನಂದ್, “The Flag Code of India 2002 ಕಾಯ್ದೆಯ part 2 / ಸೆಕ್ಷನ್ 2.2/ ಕಲಂ 8ರ ಕೆಳಗೆ ಖಾಸಗಿ ಸಂಘ-ಸಂಸ್ಥೆಗಳ, ಧಾರ್ಮಿಕ, ಇನ್ನಿತರೆ ನಿಷೇಧಿತವಲ್ಲದ ಬಾವುಟಗಳನ್ನು ರಾಷ್ಟ್ರಧ್ವಜದೊಡನೆ ಹಾರಿಸಬಹುದು. ಆ ಬಾವುಟಗಳು ರಾಷ್ಟ್ರಧ್ವಜಕ್ಕೆ ಸಮವಾಗಿರದೆ ರಾಷ್ಟ್ರಧ್ವಜಕ್ಕಿಂತ ಕೆಳಗಿನ ಮಟ್ಟದಲ್ಲಿರಬೇಕು ಎಂದು ಕೇಂದ್ರ ಸರ್ಕಾರದ 2002 ರ ಶಾಸನವೇ ಸ್ಪಷ್ಟಪಡಿಸುತ್ತದೆ” ಎಂದು ಹೇಳಿದ್ದಾರೆ.

“ಇದರ ಪ್ರಕಾರ ಸಿಖ್ಖರದ್ದಷ್ಟೇ ಯಾಕೆ, ನಿಷೇಧಿತವಲ್ಲದ ಯಾವ ಬಾವುಟವನ್ನಾದರೂ ರಾಷ್ಟ್ರಧ್ವಜದೆದುರು ಅದಕ್ಕಿಂತ ಕೆಳಗಿನ ಮಟ್ಟದಲ್ಲಿ ಹಾರಿಸಬಹುದು. ಇದರಿಂದ ಯಾವ ಕಾನೂನುಭಂಗವೂ ಉಂಟಾಗುವುದಿಲ್ಲ. ರೈತರಿಂದ ರಾಷ್ಟ್ರಧ್ವಜಕ್ಕೆ ಯಾವ ಅಪಮಾನವೂ ನಡೆದಿಲ್ಲ. ವರದಿ ಮಾಡುವ ಮೊದಲು ಅದಕ್ಕೆ ಸಂಬಂಧಿಸಿದ ಕಾಯ್ದೆ ಶಾಸನಗಳನ್ನು ಓದಿಕೊಂಡು ವರದಿ ಮಾಡುವುದು ಸೆನ್ಸಿಬಲ್ ಜರ್ನಲಿಸಂ” ಎಂದು ಹೇಳಿದ್ದಾರೆ.

“ಪತ್ರಿಕಾ ವರದಿಗಾರಿಕೆಯಲ್ಲಿ ರಾಷ್ಟ್ರಗೌರವ ಮತ್ತು ಕೋಮುಸೂಕ್ಷ್ಮ ವಿಷಯಗಳನ್ನು ವರದಿ ಮಾಡುವಾಗ ಅಮೂಲಾಗ್ರ ತಪಾಸಣೆ, ಸಾಕ್ಷಾಧಾರಗಳ ಸಮೇತ ವರದಿ ಮಾಡಬೇಕೆಂದು ನಾವು ಜರ್ನಲಿಸಂ ಕಾಲೇಜಿನಲ್ಲಿ ಕಲಿತಿದ್ದೆವು. ಈ ಎಚ್ಚರ ಮರೆತರೆ ಈ ಅಸಡ್ಡೆಯಿಂದ ಸಮಾಜದ ಮೇಲೆ ಘನಘೋರ ಪರಿಣಾಮಗಳಾಗುತ್ತವೆ” ಎಂದು ದಯಾನಂದ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಹಿಟ್ಲರ್ ಆಡಳಿತವನ್ನು ನಿಲ್ಲಿಸಿ, ಇಲ್ಲದಿದ್ದರೆ ಅನುಭವಿಸುತ್ತೀರಿ: ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಕೆ

ಹಿರಿಯ ಪತ್ರಕರ್ತ ದಿನೇಶ್‌ ಅಮಿನ್ ಮಟ್ಟು, “ದೇಶಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ನಂತರ ಆರ್‌ಎಸ್‌ಎಸ್, ನಾಗಪುರದ ಕೇಂದ್ರ ಕಚೇರಿಯಲ್ಲಿ ಮೊದಲ ಬಾರಿ ರಾಷ್ಟ್ರಧ್ವಜ ಆರೋಹಣ ಮಾಡಿರುವುದನ್ನು ಯಾರಾದರೂ ನೆನಪು ಮಾಡಿಕೊಡ್ರಪ್ಪಾ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ದಂಗೆ ಏಳಲು ಕರೆ ನೀಡಿದವರು, ಬಾಂಬು ಇಟ್ಟು ರೈಲ್ವೆ ಸ್ಟೇಷನ್ ಸ್ಪೋಟಿಸಲು ಕುಮ್ಮಕ್ಕು ನೀಡಿದವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಗೋಳಾಡುತ್ತಿರುವುದು ತಮಾಷೆಯಾಗಿದೆ” ಎಂದು ಹೇಳಿದ್ದಾರೆ.

ಅಲ್ಲದೆ ಸಚಿವ ಸುರೇಶ್ ಕುಮಾರ್‌ ಅವರು, “ದೆಹಲಿ ಪ್ರತಿಭಟನೆ ರೈತರದಲ್ಲ,
ಕೇವಲ ಆ ಕಾಯ್ದೆಗಳ ವಿರುದ್ಧವಲ್ಲ ಎಂದು ಇಂದು ಬಯಲಾಯಿತು” ಎಂದು ಬರೆದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿನ್ ಮಟ್ಟು, “ಪ್ರತಿಭಟನೆ ಕೇವಲ ಕಾಯ್ದೆ ವಿರುದ್ಧ ಮತ್ತು ರೈತರದ್ದು ಮಾತ್ರ ಎಂದು ಯಾರು ಹೇಳಿದ್ದು? ಇದು ಬಿಜೆಪಿ ಸರ್ಕಾರದ ವಿರುದ್ಧ ಬಂಡೆದ್ದ ಸರ್ವಜನರ ಪ್ರತಿಭಟನೆ ಅನುಮಾನವೇ ಬೇಡ” ಎಂದು ಹೇಳಿದ್ದಾರೆ.

ಹಿರಿಯ ಲೇಖಕ ಪುರುಷೋತ್ತಮ ಬಿಳಿಮಲೆಯವರು, “ಜೆಎನ್‌ಯುವಿಗೆ ನುಗ್ಗಿ ಮಕ್ಕಳ ಮೇಲೆ ಹಲ್ಲೆ ಮಾಡುವಾಗ, ‘ಗೋಲಿ ಮಾರೋ ಸಾಲೋಂಕೋ ‘ಎಂದು ಘೋಷಣೆ ಕೂಗಿದಾಗ, ಬಾಬ್ರಿ ಮಸೀದಿ ಉರುಳಿಸಿದಾಗ, ಮೌನವಾಗಿದ್ದವರು ಈಗ ರೈತರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಊಳಿಡುವುದು ಕರುಣಾಜನಕವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈತರನ್ನು ಭಯೋತ್ಪಾದಕರು ಎಂದ ಕೃಷಿ ಸಚಿವ ಬಿ. ಸಿ. ಪಾಟಿಲ್

ಕನ್ನಡ ಪರ ಹೋರಾಟಗಾರ ದಿನೇಶ್ ಕುಮಾರ್‌ ದಿನ್ನೂ ಅವರು, “ಭಕ್ತರ ಅಚ್ಚುಮೆಚ್ಚಿನ ಕೆನಡಿಯನ್ ನಟ ಅಕ್ಷಯ್ ಕುಮಾರ್ ಅಭಿನಯದ ‘ಕೇಸರಿ’ ಎಂಬ ಸಿನಿಮಾವೊಂದು ಬಂದಿದ್ದು ನೆನಪಿದೆಯಾ? ಈ ಸಿನಿಮಾದ ‘ತೇರೀ‌‌ ಮಿಟ್ಟೀ ಮೇ ಮಿಲ್ ಜಾವಾ’ ಎಂಬ ಜನಪ್ರಿಯ ಪಂಜಾಬಿ ಗೀತೆಯೊಂದನ್ನು ನೀವು ಕೇಳಿರಬಹುದು. ಇತ್ತೀಚಿನ ಅತಿ ಜನಪ್ರಿಯ ದೇಶಭಕ್ತ ಗೀತೆಯೆಂದು ಹೆಸರಾದ ಹಾಡು ಇದು. ಯೂ ಟ್ಯೂಬ್ ನಲ್ಲಿ ತೇರಿ ಮಿಟ್ಟೀ ಎಂದು ಸರ್ಚ್ ಮಾಡಿದರೆ ಈ ಹಾಡಿನ ಸಾವಿರಾರು ಕವರ್ ವರ್ಷನ್ ಗಳು ನಿಮಗೆ ಕಾಣಿಸುತ್ತವೆ. ಅಂದಹಾಗೆ ಸಿಖ್ ವೀರಸಾಹಸಿಯೊಬ್ಬನ‌ ಕಥೆಯ ಸಿನಿಮಾ ಇದು. ಅಕ್ಷಯ್ ಕುಮಾರ್ ಕೈಯಲ್ಲಿರುವುದು ನಿಶಾನ್ ಸಾಹಿಬ್ ಬಾವುಟವೇ! ಸಿನಿಮಾದಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿದ ಬಾವುಟ ಇದ್ದಕ್ಕಿದ್ದಂತೆ ದೇಶದ್ರೋಹಿ ಬಾವುಟವಾಗಿಹೋಯಿತು! ಹಿಪಾಕ್ರಸಿಗೆ ಒಂದು ಮಿತಿ ಬೇಡವೇ?” ಎಂದು ಕೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ವಲೀ ರಹ್ಮಾನ್, “ಗೋದಿ ಮೀಡಿಯಾಗಳು ಎಂದಿನಂತೆ ಸುಳ್ಳು ಹೇಳುತ್ತಿದೆ. ರೈತರು ಖಾಲಿಯಾಗಿದ್ದ ಕಂಬಕ್ಕೆ ಧ್ವಜಗಳನ್ನು ಏರಿಸಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ: ಹೆಚ್​.ಎಸ್​. ದೊರೆಸ್ವಾಮಿ

ಸಿದ್ದಯ್ಯ ಚಿಕ್ಕಮಾದೆಗೌಡ ಅವರು, “ಸುವರ್ಣ ಚಾನಲ್ ನ ಅಜಿತ್ ಹಣಮಕ್ಕನವರ್ ಕೆಂಪು ಕೋಟೆಯ ಮೇಲೆ ಹಾರುತ್ತಿರುವ ರಾಷ್ಟ್ರದ್ವಜ ಮರೆಮಾಚಿದ ದೃಶ್ಯ ತೋರಿಸುತ್ತ ಕೂಗಾಡುವುದ ಕಂಡು ಇವ ಬಾರೀ ವಂಚಕ ಎನಿಸಿತು” ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಖಲೀಫಾ ಬೆಳ್ತಂಗಡಿ ಅವರು , “ಈ ಬಾವುಟವನ್ನು ತಾನೆ ಈಗ ದೇಶ ದ್ರೋಹಿ ಬಾವುಟ ಎನ್ನುತ್ತಿರುವುದು. ಸರಿ, ಹಾಗಾದರೆ ಇದನ್ನು ಕಟ್ಟಿಕೊಂಡವರು ಯಾರು?” ಎಂದು ಪ್ರದಾನಿ ಮೋದಿ ತನ್ನ ತಲೆಗೆ ಸುತ್ತಿರುವ ನಿಶಾನ್ ಸಾಹಿಬ್ ಧ್ವಜದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

ಇದನ್ನೂ ಓದಿ: ಕಂಗನಾ ಭೇಟಿಗೆ ರಾಜ್ಯಪಾಲರಿಗೆ ಸಮಯವಿದೆ, ರೈತರ ಭೇಟಿಗಿಲ್ಲ: ಶರದ್ ಪವಾರ್ ಟೀಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಉತ್ತಮವಾದ ವರದಿ ಮಾಡುತ್ತಿದ್ದೀರಿ. ಧನ್ಯವಾದಗಳು…

    65 ದಿನ ನಮ್ಮ ರೈತರು ಶಾಂತಿಯುತವಾಗಿ ನಡೆಸಿದ ಹೋರಾಟ ಇಂದು ಯಾಕೆ ಹೀಗಯ್ತು ಅನ್ನೊದನ್ನು ಬಿ.ಜೆ.ಪಿ ಅವಲೋಕನ ಮಾಡಿಕೊಳ್ಳಲಿ ದೇಶಕ್ಕೆ ಅವಮಾನ ಆಯ್ತು ಎಂದು ಕಿರುಚಾಡುತ್ತಿರುವ ಭಕ್ತರೆ ನೂರಾರು ಜನ ರೈತರು ಸತ್ತರು ಹೋರಾಟದ ಸ್ಥಳಕ್ಕೆ ಹೋಗದಿರುವ ಮೋದಿಗೆ ಕೇಳಿ ಪ್ರಜಾಪ್ರಭುತ್ವ ದೇಶಕ್ಕೆ ಅವಮಾನ ಮಾಡ್ತಿಯ ನೀನು ಅಂತಾ………

  2. Hanumakkanavar, please see the truth, know the truth, and spread the truth. Be a good guy. Try to create heaven on earth or else you will also be part of hell.

LEAVE A REPLY

Please enter your comment!
Please enter your name here

- Advertisment -

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುಣಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...

ತೆಲಂಗಾಣ| ಕೆಸಿಆರ್‌ ಮನೆ ಮುಂದೆ ದಲಿತ ಮುಖಂಡರಿಂದ ಪ್ರತಿಭಟನೆ; ಬಿಆರ್‌ಎಸ್‌ ಕಾರ್ಯಕರ್ತರಿಂದ ನೀರು-ಅರಿಶಿನ ಬಳಸಿ ರಸ್ತೆ ಶುದ್ಧೀಕರಣ

ತೆಲಂಗಾಣದ ಸಿದ್ಧಾಪೇಟೆ ಜಿಲ್ಲೆಯ ಎರ್ರವಳ್ಳಿಯಲ್ಲಿರುವ ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರ ಫಾರ್ಮ್ ಹೌಸ್ ಬಳಿ ದಲಿತ ಮುಖಂಡರು ಮತ್ತು ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ನಂತರ, ಬಿಆರ್‌ಎಸ್ ನಾಯಕರು ನಡೆಸಿದ...

ಉದ್ಯಮಿಗಳಾದ ನಂದನ್ ನಿಲೇಕಣಿ- ನಿಖಿಲ್ ಕಾಮತ್, ನಟ ಶಿವರಾಜ್‌ಕುಮಾರ್ ಅವರಿಗೂ ಎಸ್‌ಐಆರ್ ನೋಟಿಸ್‌

ಇನ್ಫೋಸಿಸ್ ಸಹ-ಸಂಸ್ಥಾಪಕ, ಕೇಂದ್ರ ಸರ್ಕಾರದ 'ಪರೀಕ್ಷಾ ಸುಧಾರಣಾ ಉನ್ನತ ಮಟ್ಟದ ಕಾರ್ಯಪಡೆ' ಮುಕ್ಯಸ್ಥ ನಂದನ್ ನಿಲೇಕಣಿ ಹಾಗೂ ಅವರ ಇಡೀ ಕುಟುಂಬವು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಚುನಾವಣಾ...

ರಾಷ್ಟ್ರೀಯ ಮಹಿಳಾ ಆಯೋಗದ ಕಾರ್ಯಾಗಾರದಲ್ಲಿ ಬರೀ ಹಿಂದಿ ಮಾತು : ಆಕ್ಷೇಪ ವ್ಯಕ್ತಪಡಿಸಿ ಹೊರನಡೆದ ಕೇರಳದ ಶಾಸಕರು

ರಾಷ್ಟ್ರೀಯ ಮಹಿಳಾ ಆಯೋಗ (NCW) ಮಂಗಳವಾರ (ಸೆ.8) ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ, ಬಹುಪಾಲು ಸೆಷನ್‌ಗಳನ್ನು ಹಿಂದಿ ಭಾಷೆಯಲ್ಲೇ ನಡೆಸಲಾಗುತ್ತಿದೆ ಮತ್ತು ಹಿಂದಿ ಮಾತನಾಡದ ರಾಜ್ಯಗಳ ಭಾಗವಹಿಸುವಿಕೆಗೆ ಕರಾರುವಕ್ಕಾಗಿ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಆರೋಪಿಸಿ,...

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...