Homeಅಂಕಣಗಳುಗೆದ್ದ ನಂತರವೇ ಗಡ್ಡಮೀಸೆ ಬೋಳಿಸೋದಾಗಿ ಟೋಫನ್‍ತಲೆ ಮೇಲೆ ಆಣೆ

ಗೆದ್ದ ನಂತರವೇ ಗಡ್ಡಮೀಸೆ ಬೋಳಿಸೋದಾಗಿ ಟೋಫನ್‍ತಲೆ ಮೇಲೆ ಆಣೆ

- Advertisement -
- Advertisement -

ಆಘಾತವಾಣಿ |

ನಮಸ್ಕಾರ, ಆಘಾತವಾಣಿಗೆ ಸ್ವಾಗತ, ಇದೀಗ ಮುಖ್ಯಾಂಶಗಳು. ಓದುತ್ತಿರೋರು ಅಟ್ಯಾಕ್ ಹನ್ಮಂತು

ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಳೆದ ಒಂದು ತಿಂಗಳಿನಿಂದ ಉರಿಬಿಸಿಲಿನಲ್ಲಿ ಓತ್ಲಾ ಹೊಡೆಯುತ್ತಿದ್ದ ‘ವಿಜೇಂದ್ರ ಸನ್ನಾಫ್ ಯಡ್ರಪ್ಪ’ನವರಿಗೆ ಚಾಮರಾಜಪೇಟೆಯ ‘ಹೇ ಶವ ಕೃಪ’ದ ವಯೋವೃದ್ಧರು ಟಿಕೆಟ್ ನಿರಾಕರಿಸಿದ್ದಾರೆ. ತನ್ನ ‘ಅಧಿಕೃತ’ ಮಗನಿಗೇ ಟಿಕೆಟ್ ಢಮಾರ್ ಅನ್ನಿಸಿದ ಈ ಬೆಳವಣಿಗೆಯಿಂದ ನೊಂದ ಯಡೂರಪ್ಪನವರು ಸೋಪಕ್ಕನ ಹಳೇ ಸೀರೆಯೊಂದನ್ನು ಎತ್ತಿಕೊಂಡು ಫ್ಯಾನಿಗೆಸೆದು ನೇಣು ಹಾಕಿಕೊಳ್ಳಲು ಇನ್ನೂ ಯತ್ನಿಸಿಲ್ಲ ಎಂಬ ಸಾಕಿಂಗ್ ನ್ಯೂಸ್ ಹೊರಬಿದ್ದಿದೆ.
< < < <
ಸಂವಿಧಾನ ಬದಲಿಸೋಕೇ ನಾವು ಅಲ್ಲಾಡಿಸಿಕೊಂಡು ಇಲ್ಲೀತನಕ ಬಂದಿದ್ದೇವೆ ಎಂದು ಮಿಯಾಂವ್ ಎಂದಿದ್ದ ಬಿಜೆಪಿಯ ‘ಅನಾಥಕುಮಾರ್ ಹೆಗಡೆ’ಯವರು ಇದ್ದಕ್ಕಿದ್ದಂತೆ ಮಂಗಮಾಯವಾಗಿ ಹೋಗಿದ್ದಾರೆ. ಮೊನ್ನೆ ತಾನೇ ಬಿಜೆಪಿ ನಾಯಕನ ಲಾರಿಯೊಂದು ತಮ್ಮ ಬೆಂಗಾವಲು ವಾಹನಕ್ಕೆ ಗುದ್ದಿದ್ದರಿಂದ ಆಮಶಂಕೆ ಬೇಧಿಯಾಗಿ ಸುಸ್ತಾಗಿದ್ದ ಅನಾಥಕುಮಾರ್.. ಹೋದಲ್ಲಿ ಬಂದಲ್ಲಿ ಕಯ ಕಯ ಎಂದು ನರಳಾಡುತ್ತ ಜನರಿಂದ ಕಪುಕ್ ತುಪುಕ್ ಎಂದು ಉಗಿಸಿಕೊಂಡು ಚರ್ಮದ ಅಲರ್ಜಿಯಿಂದಲೂ ಬಳಲುತ್ತಿದ್ದರು. ಜನರ ಉಗುಳಿನಿಂದ ಇನ್ಫೆಕ್ಷನ್ ಆಗಿರಬಹುದಾದ ಸಾಧ್ಯತೆಯಿದ್ದುದರಿಂದ ಇದಕ್ಕೆ ಚಿಕಿತ್ಸೆ ಪಡೆಯಲು ಅನಾಥಕುಮಾರ್, ನೈಜೀರಿಯಾ ದೇಶಕ್ಕೆ ಅಳುತ್ತ ನಡೆದುಕೊಂಡೇ ಹೋಗಿದ್ದಾರೆ ಎಂಬ ಗುಮಾನಿಗಳು ವ್ಯಕ್ತವಾಗಿವೆ.
< < < <
ಈಗಾಗಲೇ ತಮ್ಮ ಎರಡೂ ಕಾಲನ್ನು ಸ್ಮಶಾನದ ಗುಂಡಿಗೆ ಇಳಿಬಿಟ್ಟಿರುವ ಬೊಚ್ಚುಬಾಯಿ ತಾತ ‘ಅಸಾರಾಂ ಬಾಪು’ ಅವರು ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರದ ಕೇಸಿನಲ್ಲಿ ಕಳೆದ 5 ವರ್ಷಗಳಿಂದ ಜೈಲಿನಲ್ಲಿ ಶೌಚಾಲಯ ಸ್ವಚ್ಛ ಮಾಡುತ್ತ ಸಜೆಬಂಧಿಯಾಗಿದ್ದುದು ತಮಗೆಲ್ಲರಿಗೂ ತಿಳಿದಿದೆ. ಇದೀಗ ಈ ಅತ್ಯಾಚಾರದ ಕುರಿತಂತೆ ಕೋರ್ಟ್ ತೀರ್ಪು ಪ್ರಕಟವಾಗಿದ್ದು, ತಾತ ಅಸಾರಾಂ ಬಾಪು ತಪ್ಪಿತಸ್ಥ ಎಂದು ಸಾಬೀತಾಗಿದೆ. ಈ ಬಗ್ಗೆ ತೀರ್ಪು ಕೊಡುವಾಗ ರೊಚ್ಚಿಗೆದ್ದ ತೀರ್ಪುಗಾರರು.. ಈ ರೇಪಿಸ್ಟ್ ಮುದುಕನಿಗೆ ಸಾಯುವತನಕ ಪಕೋಡಮ್ಯಾನ್ ಫ್ರಾಡೇಂದ್ರನ ಎಲ್ಲ ಭಾಷಣಗಳನ್ನೂ ಕೇಳುವ ಮತ್ತು ನೋಡುವ ಭಯಾನಕ ಶಿಕ್ಷೆಯನ್ನು ಇನ್ನೂ ವಿಧಿಸಿಲ್ಲ ಎಂದು ವರದಿಯಾಗಿದೆ.
< < < <
ಈ ನಡುವೆ ಗುಜರಾತಿನ ತಮ್ಮ ಅಧಿಕೃತ ಹೆಂಡಿರು ಮಕ್ಕಳನ್ನು ಮರೆತು ಕರ್ನಾಟಕದ ತುಂಬೆಲ್ಲ ಅಂಡಲೆಯುತ್ತಿರುವ ಅಮಿತ್ ಬೋಡಪ್ಪನವರು ಬಿಜೆಪಿ ಪಾರ್ಟಿಗೂ ಮತ್ತು ಗಣಿರೆಡ್ಡಿಗೂ ಯಾವುದೇ ‘ವಿವಾಹೇತರ ಅಕ್ರಮ ಸಂಬಂಧ’ವಿಲ್ಲ ಎಂದು ಹೇಳಿದ್ದರು. ಆದರೂ ಸಹ ಬೋಡಪ್ಪನ ಮಾತಿಗೆ ಹಳೇಮೆಟ್ಟಿನಷ್ಟೂ ಬೆಲೆ ಕೊಡದ ಯಡೂರಪ್ಪನವರು ಗಣಿರೆಡ್ಡಿಯನ್ನು ಕಂಕುಳಲ್ಲಿ ಎತ್ತಿಕೊಂಡು ಕರ್ನಾಟಕದ ಮನೆಮನೆಯಲ್ಲಿ ಓಟಿನ ತಿರುಪೆ ಎತ್ತಲು ಮುಂದಾಗಿದ್ದಾರೆ. ಈ ಬಗ್ಗೆ ಸುದ್ದಿ ತಿಳಿದ ಅಮಿತ್ ಬೋಡಪ್ಪನವರು ಸಿಟ್ಟಿಗೆದ್ದು ಯಡೂರಪ್ಪನ ಮಗನ ಎಲೆಕ್ಷನ್ ಟಿಕೇಟಿಗೆ ಬಗನಿಗೂಟ ಹೆಟ್ಟಿದ್ದಾರೆಂದು ಬಲ್ಲ ಮೂಲಗಳಿಂದ ಇನ್ನೂ ತಿಳಿದು ಬಂದಿಲ್ಲ.
< < < <
ಇದೀಗ ಬಂದ ಸುದ್ದಿ. ಈ ಚುನಾವಣೆಯಲ್ಲಿ ಗೆದ್ದ ನಂತರವೇ ಗಡ್ಡಮೀಸೆ ಬೋಳಿಸುತ್ತೇನೆಂದು ಗಣಿರೆಡ್ಡಿಯ ಟೋಫನ್‍ತಲೆ ಮೇಲೆ ಆಣೆ ಮಡಗಿರುವ ‘ಸ್ತ್ರೀರಾಮುಲು’ ಇದ್ದಕ್ಕಿದ್ದಂತೆ ದೈವಭಕ್ತರಾಗಿದ್ದಾರೆ. ತಮ್ಮ ಮನೆಗೇ ಪೂಜಾರಿಗಳನ್ನು ಕರೆಸಿಕೊಂಡು ಗೋಪೂಜೆಯನ್ನು ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಹಸುವಿಗೆ ಅರಿಶಿಣ ಕುಂಕುಮ ಹಚ್ಚಲು ಹೇಳಿದ ಪೂಜಾರಿಯ ಮಾತು ಮುಗಿಯುವ ಮೊದಲೇ ಅರಿಶಿಣ ಕುಂಕುಮದ ಪಾತ್ರೆಯೆತ್ತಿಕೊಂಡ ಸ್ತ್ರೀರಾಮುಲು ಗೋಡೆಗೆ ಎನಾಮೆಲ್ ಪೇಂಟ್ ಬಳಿದಂತೆ ಹಸುವಿಗೆ ಬಳಿದಿದ್ದಾರೆ. ಪೂಜೆಯ ನಂತರ ಈ ಅನಿರೀಕ್ಷಿತ ಕುಂಕುಮದ ದಾಳಿಯಿಂದ ಬೆಚ್ಚಿಬಿದ್ದ ಹಸುವು ಸ್ತ್ರೀರಾಮುಲು ಮನೆಯಿದ್ದ ವಿರುದ್ಧ ದಿಕ್ಕಿಗೆ ಓಡಿಹೋಗಿದ್ದು ಇಷ್ಟೊತ್ತಿಗೆ ಬಹುಶಃ ರಾಜಸ್ಥಾನ ತಲುಪಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
< < < <
ಬಿಜೆಪಿ ಪಕ್ಷದ ಅನಧಿಕೃತ ಕಾನ್ಸ್‍ಟೇಬಲ್‍ಗಳಂತೆ ಕೋಮುಗಲಭೆಗಳು, ಬಂದ್, ಪ್ರತಿಭಟನೆಗಳಲ್ಲಿ ಗುಂಪುಗುಂಪಾಗಿ ಧುಮುಕಿ ಜೈಲುಪಾಲಾಗುತ್ತಿದ್ದ ‘ಪಿಲ್ಲವ ಸಮುದಾಯದ’ ವೀರಸೈನಿಕರಿಗೆ ಈ ಬಾರಿ ಬಿಜೆಪಿ ಪಂಗನಾಮ ಎಳೆದಿದೆ. ‘ಪಿಲ್ಲವ ಸಮುದಾಯದ’ ಯಾವೊಬ್ಬ ಗಂಡಸೂ ಮನೆಯಲ್ಲಿ ಇರಲು ಬಿಡದೆ, ಎಲ್ಲರನ್ನೂ ಸಾಮೂಹಿಕವಾಗಿ ಜೈಲಿಗೆ ಸೇರಿಸಿ ಗಿನ್ನೆಸ್ ದಾಖಲೆ ಬರೆಯಲು ಯತ್ನಿಸುತ್ತಿರುವ ಬಿಜೆಪಿಯ ಕೃಶಕಾಯ ಎದೆಯ ಮೇಲೆ ‘ಪಿಲ್ಲವರು’ ಕಾಲೆತ್ತಿ ಮಡಗಿದ್ದಾರೆ. ಯೂಸ್ ಮಾಡಿ ಬಿಸಾಕಲು ನಮ್ಮನ್ನೇನು ಕಾಂಡೋಮ್ ಎಂದುಕೊಂಡಿದ್ದೀರ ಎಂದು ರೊಚ್ಚಿಗೆದ್ದಿರುವ ‘ಪಿಲ್ಲವರ’ ಆಕ್ರೋಶದ ಹಿಂದೆ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದ ಬಿಜೆಪಿಯ ದೌಲತ್ತಿದೆ ಎಂಬುದು ತಿಳಿದುಬಂದಿದೆ.
< < < <
ಅತ್ತಾಗೂ ಇಲ್ಲ, ಇತ್ತಾಗೂ ಇಲ್ಲದ ಉಪರಾಷ್ಟ್ರಪತಿ ‘ಪೆಂಕಯ್ಯ ನಾಯ್ಡು’ ಅವರು ‘ಭಾರತದಲ್ಲಿ ಮಹಿಳೆಯರ ಮೇಲೆ ಗೌರವ ಕಡಿಮೆಯಾಗಲು ಬ್ರಿಟಿಷರೇ ಕಾರಣ’ ಎಂದು ಹೇಳಿದ್ದಾರೆ. ಬ್ರಿಟಿಷರು ಬರುವುದಕ್ಕೂ ಮೊದಲು ಭಾರತ ದೇಶದಲ್ಲಿ ವಿಧವೆಯರನ್ನು ಗಂಡನ ಚಿತೆಯೊಳಗೆ ತಳ್ಳಿ ಸುಟ್ಟುಹಾಕುವ ಅದ್ಭುತ ಸತಿಸಹಗಮನ ಪದ್ಧತಿ, ದೇವರ ಹೆಸರಿನಲ್ಲಿ ದಲಿತ ಮಹಿಳೆಯರನ್ನು ವೇಶ್ಯಾವಾಟಿಕೆಗೆ ನೂಕುತ್ತಿದ್ದ ದೇವದಾಸಿ ಪದ್ಧತಿಯಂತಹ ಅತ್ಯದ್ಭುತ ಪದ್ಧತಿಗಳಿದ್ದವು. ಬ್ರಿಟಿಷರು ಬಂದು ಇವೆಲ್ಲ ಅತ್ಯುತ್ತಮ ಪದ್ಧತಿಗಳನ್ನು ನಿಲ್ಲಿಸಿ ಮಹಿಳೆಯರಿಗೆ ಅಗೌರವ ಉಂಟು ಮಾಡಿದರೆಂದು ಪೆಂಕಯ್ಯನವರು ಇನ್ನೂ ಹೇಳಿಲ್ಲವೆಂದು ಬಲ್ಲ ಮೂಲಗಳು ಹೇಳಿವೆ.
< < < <
ನೋಟ್ ಬ್ಯಾನ್ ಮೂಲಕ ಲಕ್ಷಾಂತರ ಕೋಟಿ ಕಪ್ಪುಹಣವನ್ನು ಹೊರತೆಗೆಯಲು ಯತ್ನಿಸಿ ಅಂಡುಸುಟ್ಟ ಬೆಕ್ಕಿನಂತಾಗಿರುವ ಪಕೋಡೇಂದ್ರರ ಅಧ್ವಾನಗಳಿಗೆ ಇಂದಿಗೂ ಸಹ ಭಾರತದ ಎಟಿಎಂಗಳಲ್ಲಿ ಹಣವಿಲ್ಲದಂತಾಗಿದೆ. ಇದನ್ನು ಸರಿಪಡಿಸಲು ಎಟಿಎಂಗಳಲ್ಲಿ ಖೋಟಾನೋಟುಗಳನ್ನು ತುಂಬಿ ಜನರ ಹಣೆಗೆ ಪಂಗನಾಮ ಎಳೆಯುವ ಪ್ರಯತ್ನ ಉತ್ತರ ಭಾರತದಿಂದ ವರದಿಯಾಗಿದೆ. ಬರೇಲಿಯ ಎಟಿಎಂಗಳಲ್ಲಿ ಹಣ ಪಡೆಯಲು ಹೋದ ಜನರ ಕೈಗೆ ಖೋಟಾನೋಟುಗಳು ತುಪತುಪನೆ ಉದುರಿದ್ದು, ಜನರು ಪಕೋಡೇಂದ್ರನ ನೋಟ್‍ಬ್ಯಾನ್ ಸಾಹಸವೇ ಇವೆಲ್ಲ ಕಾಮಿಡಿಗಳಿಗೆ ಕಾರಣವೆಂದು ಪಕೋಡೇಂದ್ರನ ಮೇಲೆ ಮಾಟಮಂತ್ರ ಮಾಡಿಸಿಯಾದರೂ ಸರಿ ದೇಶದಿಂದ ಓಡಿಸಬೇಕೆಂದು ಕೇರಳದ ಮಾಂತ್ರಿಕರನ್ನು ಹುಡುಕುತ್ತಿದ್ದಾರೆ ಎಂಬ ಘನಘೋರ ಸತ್ಯ ಇನ್ನೂ ಬಯಲಾಗಿಲ್ಲ.
< < < <
ಇದೆಲ್ಲದರ ನಡುವೆ ಕುಖ್ಯಾತ ನಟ ‘ಸಾಯಿಗುಮಾರ್’ ಅವರಿಗೆ ಬಿಜೆಪಿ ಪಕ್ಷವು ಟಿಕೇಟನ್ನು ಕೊಟ್ಟಿದ್ದು, ಇದಕ್ಕೆ ಕಾರಣವೇನೆಂದು ಕೆದಕಿದಾಗ ಆಘಾತಕಾರಿ ವಿಷಯಗಳು ಹೊರಬಂದಿವೆ. ಟಿಕೇಟ್ ಕೇಳಲು ಕೈಯಲ್ಲಿ ಲಾಂಗ್ ಹಿಡಿದು ಸೀದ ‘ಹಾರೆಸ್ಸೆಸ್’ ಮುದುಕರ ಕೊಂಪೆಗೆ ನುಗ್ಗಿದ್ದ ಸಾಯಿಗುಮಾರ್ ಅವರು ಅಲ್ಲಿದ್ದ ಮಿಟುಕಲಾಡಿ ಮುದುಕರ ಸೊಂಟದ ಮೇಲೆ ಲಾಂಗ್ ಇಟ್ಟು, ಟಿಕೇಟ್ ಕೊಡ್ತೀರೋ, ಇಲ್ಲಾ ಸೊಂಟ ಕುಯ್ಯಲೋ ಎಂದು ಆವಾಜ್ ಹಾಕಿದ್ದರಂತೆ. ಐಟಂ ಉಳಿದರೆ ಸಾಕೆಂದು ಹಾರೆಸ್ಸೆಸ್ ಮುದುಕರು ಸಾಯಿಗುಮಾರ್‍ಗೆ ಟಿಕೇಟ್ ಕೊಟ್ಟು, ‘ವದಲೇರಾ ದೊಂಗ ನಾ ಕೊಡಕಾ’ ಎಂದು ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆಂದು ಇನ್ನೂ ತಿಳಿದುಬಂದಿಲ್ಲ.
< < < <
ಭಾರತೀಯ ಜನ ಪಕ್ಷದ ಒನ್ ಅಂಡ್ ಓನ್ಲಿ ಗಂಡಸಾಗಿರುವ ಸೋಪಕ್ಕನವರು ಈ ಸಲ ಟಿಕೇಟ್ ಸಿಗದೆ ಅಬ್ಬೇಪಾರಿಯಂತಾಗಿ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ‘ಯಾಕೆ ಸೋಪ, ಏನಾಯ್ತು ನಿಂಗೆ, ಯಾಕೆ ಹೀಗೆ ತಲೆಕೆದರಿಕೊಂಡು ಕುಂತಿದ್ದೀಯ’ ಎಂದು ಸಮಾಧಾನಪಡಿಸಲು ಹೋದ ಯಡ್ರಪ್ಪನವರ ತೊಡೆಗೆ ಸೋಪಕ್ಕನವರು ಬಲವಾಗಿ ಅಗಿದಿರುವ ಸಿಸಿಟಿವಿ ದೃಶ್ಯಗಳು ನಮಗೆ ಲಭ್ಯವಾಗಿವೆ. ಕನಿಷ್ಟ ಪಕ್ಷ 250 ಗ್ರಾಂನಷ್ಟು ಮಾಂಸವನ್ನು ಕಿತ್ತಿರುವ ಸೋಪಕ್ಕನವರು ನಂತರ ಯಡ್ರಪ್ಪನವರ ಕುತ್ತಿಗೆಗೆ ಬಾಯಿ ಹಾಕಲು ಯತ್ನಿಸಿದ್ದಾರೆ. ಆಗ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್‍ಗಳು ಸೋಪನ ಕಪ್ಪಾಳಕ್ಕೆ ಚಟೇರ್-ಪಟೇರ್ ಎಂದು ಬಡಿದು ಯಡ್ರಪ್ಪನವರ ಪ್ರಾಣವನ್ನು ಕಾಪಾಡಿದ್ದಾರೆಂದು ಇನ್ನೇನು ನಮಗೆ ಸುದ್ದಿ ಲಭಿಸಲಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮುಂದಿನ ವಾರ ಸಿಗೋಣ. ಟೇಕ್ ಕೇರ್ ಬೈ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...