Homeಅಂಕಣಗಳುಗೆದ್ದ ನಂತರವೇ ಗಡ್ಡಮೀಸೆ ಬೋಳಿಸೋದಾಗಿ ಟೋಫನ್‍ತಲೆ ಮೇಲೆ ಆಣೆ

ಗೆದ್ದ ನಂತರವೇ ಗಡ್ಡಮೀಸೆ ಬೋಳಿಸೋದಾಗಿ ಟೋಫನ್‍ತಲೆ ಮೇಲೆ ಆಣೆ

- Advertisement -
- Advertisement -

ಆಘಾತವಾಣಿ |

ನಮಸ್ಕಾರ, ಆಘಾತವಾಣಿಗೆ ಸ್ವಾಗತ, ಇದೀಗ ಮುಖ್ಯಾಂಶಗಳು. ಓದುತ್ತಿರೋರು ಅಟ್ಯಾಕ್ ಹನ್ಮಂತು

ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಳೆದ ಒಂದು ತಿಂಗಳಿನಿಂದ ಉರಿಬಿಸಿಲಿನಲ್ಲಿ ಓತ್ಲಾ ಹೊಡೆಯುತ್ತಿದ್ದ ‘ವಿಜೇಂದ್ರ ಸನ್ನಾಫ್ ಯಡ್ರಪ್ಪ’ನವರಿಗೆ ಚಾಮರಾಜಪೇಟೆಯ ‘ಹೇ ಶವ ಕೃಪ’ದ ವಯೋವೃದ್ಧರು ಟಿಕೆಟ್ ನಿರಾಕರಿಸಿದ್ದಾರೆ. ತನ್ನ ‘ಅಧಿಕೃತ’ ಮಗನಿಗೇ ಟಿಕೆಟ್ ಢಮಾರ್ ಅನ್ನಿಸಿದ ಈ ಬೆಳವಣಿಗೆಯಿಂದ ನೊಂದ ಯಡೂರಪ್ಪನವರು ಸೋಪಕ್ಕನ ಹಳೇ ಸೀರೆಯೊಂದನ್ನು ಎತ್ತಿಕೊಂಡು ಫ್ಯಾನಿಗೆಸೆದು ನೇಣು ಹಾಕಿಕೊಳ್ಳಲು ಇನ್ನೂ ಯತ್ನಿಸಿಲ್ಲ ಎಂಬ ಸಾಕಿಂಗ್ ನ್ಯೂಸ್ ಹೊರಬಿದ್ದಿದೆ.
< < < <
ಸಂವಿಧಾನ ಬದಲಿಸೋಕೇ ನಾವು ಅಲ್ಲಾಡಿಸಿಕೊಂಡು ಇಲ್ಲೀತನಕ ಬಂದಿದ್ದೇವೆ ಎಂದು ಮಿಯಾಂವ್ ಎಂದಿದ್ದ ಬಿಜೆಪಿಯ ‘ಅನಾಥಕುಮಾರ್ ಹೆಗಡೆ’ಯವರು ಇದ್ದಕ್ಕಿದ್ದಂತೆ ಮಂಗಮಾಯವಾಗಿ ಹೋಗಿದ್ದಾರೆ. ಮೊನ್ನೆ ತಾನೇ ಬಿಜೆಪಿ ನಾಯಕನ ಲಾರಿಯೊಂದು ತಮ್ಮ ಬೆಂಗಾವಲು ವಾಹನಕ್ಕೆ ಗುದ್ದಿದ್ದರಿಂದ ಆಮಶಂಕೆ ಬೇಧಿಯಾಗಿ ಸುಸ್ತಾಗಿದ್ದ ಅನಾಥಕುಮಾರ್.. ಹೋದಲ್ಲಿ ಬಂದಲ್ಲಿ ಕಯ ಕಯ ಎಂದು ನರಳಾಡುತ್ತ ಜನರಿಂದ ಕಪುಕ್ ತುಪುಕ್ ಎಂದು ಉಗಿಸಿಕೊಂಡು ಚರ್ಮದ ಅಲರ್ಜಿಯಿಂದಲೂ ಬಳಲುತ್ತಿದ್ದರು. ಜನರ ಉಗುಳಿನಿಂದ ಇನ್ಫೆಕ್ಷನ್ ಆಗಿರಬಹುದಾದ ಸಾಧ್ಯತೆಯಿದ್ದುದರಿಂದ ಇದಕ್ಕೆ ಚಿಕಿತ್ಸೆ ಪಡೆಯಲು ಅನಾಥಕುಮಾರ್, ನೈಜೀರಿಯಾ ದೇಶಕ್ಕೆ ಅಳುತ್ತ ನಡೆದುಕೊಂಡೇ ಹೋಗಿದ್ದಾರೆ ಎಂಬ ಗುಮಾನಿಗಳು ವ್ಯಕ್ತವಾಗಿವೆ.
< < < <
ಈಗಾಗಲೇ ತಮ್ಮ ಎರಡೂ ಕಾಲನ್ನು ಸ್ಮಶಾನದ ಗುಂಡಿಗೆ ಇಳಿಬಿಟ್ಟಿರುವ ಬೊಚ್ಚುಬಾಯಿ ತಾತ ‘ಅಸಾರಾಂ ಬಾಪು’ ಅವರು ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರದ ಕೇಸಿನಲ್ಲಿ ಕಳೆದ 5 ವರ್ಷಗಳಿಂದ ಜೈಲಿನಲ್ಲಿ ಶೌಚಾಲಯ ಸ್ವಚ್ಛ ಮಾಡುತ್ತ ಸಜೆಬಂಧಿಯಾಗಿದ್ದುದು ತಮಗೆಲ್ಲರಿಗೂ ತಿಳಿದಿದೆ. ಇದೀಗ ಈ ಅತ್ಯಾಚಾರದ ಕುರಿತಂತೆ ಕೋರ್ಟ್ ತೀರ್ಪು ಪ್ರಕಟವಾಗಿದ್ದು, ತಾತ ಅಸಾರಾಂ ಬಾಪು ತಪ್ಪಿತಸ್ಥ ಎಂದು ಸಾಬೀತಾಗಿದೆ. ಈ ಬಗ್ಗೆ ತೀರ್ಪು ಕೊಡುವಾಗ ರೊಚ್ಚಿಗೆದ್ದ ತೀರ್ಪುಗಾರರು.. ಈ ರೇಪಿಸ್ಟ್ ಮುದುಕನಿಗೆ ಸಾಯುವತನಕ ಪಕೋಡಮ್ಯಾನ್ ಫ್ರಾಡೇಂದ್ರನ ಎಲ್ಲ ಭಾಷಣಗಳನ್ನೂ ಕೇಳುವ ಮತ್ತು ನೋಡುವ ಭಯಾನಕ ಶಿಕ್ಷೆಯನ್ನು ಇನ್ನೂ ವಿಧಿಸಿಲ್ಲ ಎಂದು ವರದಿಯಾಗಿದೆ.
< < < <
ಈ ನಡುವೆ ಗುಜರಾತಿನ ತಮ್ಮ ಅಧಿಕೃತ ಹೆಂಡಿರು ಮಕ್ಕಳನ್ನು ಮರೆತು ಕರ್ನಾಟಕದ ತುಂಬೆಲ್ಲ ಅಂಡಲೆಯುತ್ತಿರುವ ಅಮಿತ್ ಬೋಡಪ್ಪನವರು ಬಿಜೆಪಿ ಪಾರ್ಟಿಗೂ ಮತ್ತು ಗಣಿರೆಡ್ಡಿಗೂ ಯಾವುದೇ ‘ವಿವಾಹೇತರ ಅಕ್ರಮ ಸಂಬಂಧ’ವಿಲ್ಲ ಎಂದು ಹೇಳಿದ್ದರು. ಆದರೂ ಸಹ ಬೋಡಪ್ಪನ ಮಾತಿಗೆ ಹಳೇಮೆಟ್ಟಿನಷ್ಟೂ ಬೆಲೆ ಕೊಡದ ಯಡೂರಪ್ಪನವರು ಗಣಿರೆಡ್ಡಿಯನ್ನು ಕಂಕುಳಲ್ಲಿ ಎತ್ತಿಕೊಂಡು ಕರ್ನಾಟಕದ ಮನೆಮನೆಯಲ್ಲಿ ಓಟಿನ ತಿರುಪೆ ಎತ್ತಲು ಮುಂದಾಗಿದ್ದಾರೆ. ಈ ಬಗ್ಗೆ ಸುದ್ದಿ ತಿಳಿದ ಅಮಿತ್ ಬೋಡಪ್ಪನವರು ಸಿಟ್ಟಿಗೆದ್ದು ಯಡೂರಪ್ಪನ ಮಗನ ಎಲೆಕ್ಷನ್ ಟಿಕೇಟಿಗೆ ಬಗನಿಗೂಟ ಹೆಟ್ಟಿದ್ದಾರೆಂದು ಬಲ್ಲ ಮೂಲಗಳಿಂದ ಇನ್ನೂ ತಿಳಿದು ಬಂದಿಲ್ಲ.
< < < <
ಇದೀಗ ಬಂದ ಸುದ್ದಿ. ಈ ಚುನಾವಣೆಯಲ್ಲಿ ಗೆದ್ದ ನಂತರವೇ ಗಡ್ಡಮೀಸೆ ಬೋಳಿಸುತ್ತೇನೆಂದು ಗಣಿರೆಡ್ಡಿಯ ಟೋಫನ್‍ತಲೆ ಮೇಲೆ ಆಣೆ ಮಡಗಿರುವ ‘ಸ್ತ್ರೀರಾಮುಲು’ ಇದ್ದಕ್ಕಿದ್ದಂತೆ ದೈವಭಕ್ತರಾಗಿದ್ದಾರೆ. ತಮ್ಮ ಮನೆಗೇ ಪೂಜಾರಿಗಳನ್ನು ಕರೆಸಿಕೊಂಡು ಗೋಪೂಜೆಯನ್ನು ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಹಸುವಿಗೆ ಅರಿಶಿಣ ಕುಂಕುಮ ಹಚ್ಚಲು ಹೇಳಿದ ಪೂಜಾರಿಯ ಮಾತು ಮುಗಿಯುವ ಮೊದಲೇ ಅರಿಶಿಣ ಕುಂಕುಮದ ಪಾತ್ರೆಯೆತ್ತಿಕೊಂಡ ಸ್ತ್ರೀರಾಮುಲು ಗೋಡೆಗೆ ಎನಾಮೆಲ್ ಪೇಂಟ್ ಬಳಿದಂತೆ ಹಸುವಿಗೆ ಬಳಿದಿದ್ದಾರೆ. ಪೂಜೆಯ ನಂತರ ಈ ಅನಿರೀಕ್ಷಿತ ಕುಂಕುಮದ ದಾಳಿಯಿಂದ ಬೆಚ್ಚಿಬಿದ್ದ ಹಸುವು ಸ್ತ್ರೀರಾಮುಲು ಮನೆಯಿದ್ದ ವಿರುದ್ಧ ದಿಕ್ಕಿಗೆ ಓಡಿಹೋಗಿದ್ದು ಇಷ್ಟೊತ್ತಿಗೆ ಬಹುಶಃ ರಾಜಸ್ಥಾನ ತಲುಪಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
< < < <
ಬಿಜೆಪಿ ಪಕ್ಷದ ಅನಧಿಕೃತ ಕಾನ್ಸ್‍ಟೇಬಲ್‍ಗಳಂತೆ ಕೋಮುಗಲಭೆಗಳು, ಬಂದ್, ಪ್ರತಿಭಟನೆಗಳಲ್ಲಿ ಗುಂಪುಗುಂಪಾಗಿ ಧುಮುಕಿ ಜೈಲುಪಾಲಾಗುತ್ತಿದ್ದ ‘ಪಿಲ್ಲವ ಸಮುದಾಯದ’ ವೀರಸೈನಿಕರಿಗೆ ಈ ಬಾರಿ ಬಿಜೆಪಿ ಪಂಗನಾಮ ಎಳೆದಿದೆ. ‘ಪಿಲ್ಲವ ಸಮುದಾಯದ’ ಯಾವೊಬ್ಬ ಗಂಡಸೂ ಮನೆಯಲ್ಲಿ ಇರಲು ಬಿಡದೆ, ಎಲ್ಲರನ್ನೂ ಸಾಮೂಹಿಕವಾಗಿ ಜೈಲಿಗೆ ಸೇರಿಸಿ ಗಿನ್ನೆಸ್ ದಾಖಲೆ ಬರೆಯಲು ಯತ್ನಿಸುತ್ತಿರುವ ಬಿಜೆಪಿಯ ಕೃಶಕಾಯ ಎದೆಯ ಮೇಲೆ ‘ಪಿಲ್ಲವರು’ ಕಾಲೆತ್ತಿ ಮಡಗಿದ್ದಾರೆ. ಯೂಸ್ ಮಾಡಿ ಬಿಸಾಕಲು ನಮ್ಮನ್ನೇನು ಕಾಂಡೋಮ್ ಎಂದುಕೊಂಡಿದ್ದೀರ ಎಂದು ರೊಚ್ಚಿಗೆದ್ದಿರುವ ‘ಪಿಲ್ಲವರ’ ಆಕ್ರೋಶದ ಹಿಂದೆ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದ ಬಿಜೆಪಿಯ ದೌಲತ್ತಿದೆ ಎಂಬುದು ತಿಳಿದುಬಂದಿದೆ.
< < < <
ಅತ್ತಾಗೂ ಇಲ್ಲ, ಇತ್ತಾಗೂ ಇಲ್ಲದ ಉಪರಾಷ್ಟ್ರಪತಿ ‘ಪೆಂಕಯ್ಯ ನಾಯ್ಡು’ ಅವರು ‘ಭಾರತದಲ್ಲಿ ಮಹಿಳೆಯರ ಮೇಲೆ ಗೌರವ ಕಡಿಮೆಯಾಗಲು ಬ್ರಿಟಿಷರೇ ಕಾರಣ’ ಎಂದು ಹೇಳಿದ್ದಾರೆ. ಬ್ರಿಟಿಷರು ಬರುವುದಕ್ಕೂ ಮೊದಲು ಭಾರತ ದೇಶದಲ್ಲಿ ವಿಧವೆಯರನ್ನು ಗಂಡನ ಚಿತೆಯೊಳಗೆ ತಳ್ಳಿ ಸುಟ್ಟುಹಾಕುವ ಅದ್ಭುತ ಸತಿಸಹಗಮನ ಪದ್ಧತಿ, ದೇವರ ಹೆಸರಿನಲ್ಲಿ ದಲಿತ ಮಹಿಳೆಯರನ್ನು ವೇಶ್ಯಾವಾಟಿಕೆಗೆ ನೂಕುತ್ತಿದ್ದ ದೇವದಾಸಿ ಪದ್ಧತಿಯಂತಹ ಅತ್ಯದ್ಭುತ ಪದ್ಧತಿಗಳಿದ್ದವು. ಬ್ರಿಟಿಷರು ಬಂದು ಇವೆಲ್ಲ ಅತ್ಯುತ್ತಮ ಪದ್ಧತಿಗಳನ್ನು ನಿಲ್ಲಿಸಿ ಮಹಿಳೆಯರಿಗೆ ಅಗೌರವ ಉಂಟು ಮಾಡಿದರೆಂದು ಪೆಂಕಯ್ಯನವರು ಇನ್ನೂ ಹೇಳಿಲ್ಲವೆಂದು ಬಲ್ಲ ಮೂಲಗಳು ಹೇಳಿವೆ.
< < < <
ನೋಟ್ ಬ್ಯಾನ್ ಮೂಲಕ ಲಕ್ಷಾಂತರ ಕೋಟಿ ಕಪ್ಪುಹಣವನ್ನು ಹೊರತೆಗೆಯಲು ಯತ್ನಿಸಿ ಅಂಡುಸುಟ್ಟ ಬೆಕ್ಕಿನಂತಾಗಿರುವ ಪಕೋಡೇಂದ್ರರ ಅಧ್ವಾನಗಳಿಗೆ ಇಂದಿಗೂ ಸಹ ಭಾರತದ ಎಟಿಎಂಗಳಲ್ಲಿ ಹಣವಿಲ್ಲದಂತಾಗಿದೆ. ಇದನ್ನು ಸರಿಪಡಿಸಲು ಎಟಿಎಂಗಳಲ್ಲಿ ಖೋಟಾನೋಟುಗಳನ್ನು ತುಂಬಿ ಜನರ ಹಣೆಗೆ ಪಂಗನಾಮ ಎಳೆಯುವ ಪ್ರಯತ್ನ ಉತ್ತರ ಭಾರತದಿಂದ ವರದಿಯಾಗಿದೆ. ಬರೇಲಿಯ ಎಟಿಎಂಗಳಲ್ಲಿ ಹಣ ಪಡೆಯಲು ಹೋದ ಜನರ ಕೈಗೆ ಖೋಟಾನೋಟುಗಳು ತುಪತುಪನೆ ಉದುರಿದ್ದು, ಜನರು ಪಕೋಡೇಂದ್ರನ ನೋಟ್‍ಬ್ಯಾನ್ ಸಾಹಸವೇ ಇವೆಲ್ಲ ಕಾಮಿಡಿಗಳಿಗೆ ಕಾರಣವೆಂದು ಪಕೋಡೇಂದ್ರನ ಮೇಲೆ ಮಾಟಮಂತ್ರ ಮಾಡಿಸಿಯಾದರೂ ಸರಿ ದೇಶದಿಂದ ಓಡಿಸಬೇಕೆಂದು ಕೇರಳದ ಮಾಂತ್ರಿಕರನ್ನು ಹುಡುಕುತ್ತಿದ್ದಾರೆ ಎಂಬ ಘನಘೋರ ಸತ್ಯ ಇನ್ನೂ ಬಯಲಾಗಿಲ್ಲ.
< < < <
ಇದೆಲ್ಲದರ ನಡುವೆ ಕುಖ್ಯಾತ ನಟ ‘ಸಾಯಿಗುಮಾರ್’ ಅವರಿಗೆ ಬಿಜೆಪಿ ಪಕ್ಷವು ಟಿಕೇಟನ್ನು ಕೊಟ್ಟಿದ್ದು, ಇದಕ್ಕೆ ಕಾರಣವೇನೆಂದು ಕೆದಕಿದಾಗ ಆಘಾತಕಾರಿ ವಿಷಯಗಳು ಹೊರಬಂದಿವೆ. ಟಿಕೇಟ್ ಕೇಳಲು ಕೈಯಲ್ಲಿ ಲಾಂಗ್ ಹಿಡಿದು ಸೀದ ‘ಹಾರೆಸ್ಸೆಸ್’ ಮುದುಕರ ಕೊಂಪೆಗೆ ನುಗ್ಗಿದ್ದ ಸಾಯಿಗುಮಾರ್ ಅವರು ಅಲ್ಲಿದ್ದ ಮಿಟುಕಲಾಡಿ ಮುದುಕರ ಸೊಂಟದ ಮೇಲೆ ಲಾಂಗ್ ಇಟ್ಟು, ಟಿಕೇಟ್ ಕೊಡ್ತೀರೋ, ಇಲ್ಲಾ ಸೊಂಟ ಕುಯ್ಯಲೋ ಎಂದು ಆವಾಜ್ ಹಾಕಿದ್ದರಂತೆ. ಐಟಂ ಉಳಿದರೆ ಸಾಕೆಂದು ಹಾರೆಸ್ಸೆಸ್ ಮುದುಕರು ಸಾಯಿಗುಮಾರ್‍ಗೆ ಟಿಕೇಟ್ ಕೊಟ್ಟು, ‘ವದಲೇರಾ ದೊಂಗ ನಾ ಕೊಡಕಾ’ ಎಂದು ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆಂದು ಇನ್ನೂ ತಿಳಿದುಬಂದಿಲ್ಲ.
< < < <
ಭಾರತೀಯ ಜನ ಪಕ್ಷದ ಒನ್ ಅಂಡ್ ಓನ್ಲಿ ಗಂಡಸಾಗಿರುವ ಸೋಪಕ್ಕನವರು ಈ ಸಲ ಟಿಕೇಟ್ ಸಿಗದೆ ಅಬ್ಬೇಪಾರಿಯಂತಾಗಿ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ‘ಯಾಕೆ ಸೋಪ, ಏನಾಯ್ತು ನಿಂಗೆ, ಯಾಕೆ ಹೀಗೆ ತಲೆಕೆದರಿಕೊಂಡು ಕುಂತಿದ್ದೀಯ’ ಎಂದು ಸಮಾಧಾನಪಡಿಸಲು ಹೋದ ಯಡ್ರಪ್ಪನವರ ತೊಡೆಗೆ ಸೋಪಕ್ಕನವರು ಬಲವಾಗಿ ಅಗಿದಿರುವ ಸಿಸಿಟಿವಿ ದೃಶ್ಯಗಳು ನಮಗೆ ಲಭ್ಯವಾಗಿವೆ. ಕನಿಷ್ಟ ಪಕ್ಷ 250 ಗ್ರಾಂನಷ್ಟು ಮಾಂಸವನ್ನು ಕಿತ್ತಿರುವ ಸೋಪಕ್ಕನವರು ನಂತರ ಯಡ್ರಪ್ಪನವರ ಕುತ್ತಿಗೆಗೆ ಬಾಯಿ ಹಾಕಲು ಯತ್ನಿಸಿದ್ದಾರೆ. ಆಗ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್‍ಗಳು ಸೋಪನ ಕಪ್ಪಾಳಕ್ಕೆ ಚಟೇರ್-ಪಟೇರ್ ಎಂದು ಬಡಿದು ಯಡ್ರಪ್ಪನವರ ಪ್ರಾಣವನ್ನು ಕಾಪಾಡಿದ್ದಾರೆಂದು ಇನ್ನೇನು ನಮಗೆ ಸುದ್ದಿ ಲಭಿಸಲಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮುಂದಿನ ವಾರ ಸಿಗೋಣ. ಟೇಕ್ ಕೇರ್ ಬೈ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...