Homeಅಂಕಣಗಳುಪುಟಕ್ಕಿಟ್ಟ ಪುಟಗಳು: ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?

ಪುಟಕ್ಕಿಟ್ಟ ಪುಟಗಳು: ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?

- Advertisement -
- Advertisement -

ಉಮರನ ಕವನಗಳೆಂದರವು ಇಹದ ಅಮಲು, ಪರದ ಅನುಭಾವ, ಪ್ರೀತಿಯ ಗಮಲು, ಕಾವ್ಯದ ಹುಚ್ಚು; ಪರ್ಶಿಯಾ ಭಾಷೆಯಲ್ಲಿನ ಈ ನಾಲ್ಕು ಸಾಲಿನ ಕವನಗಳನ್ನು ಎಡ್ವರ್ಡ್ ತಮ್ಮದಾಗಿಸಿಕೊಂಡು ಮಾಡಿರುವ ಅನುವಾದಗಳಲ್ಲೆಲ್ಲೂ ಪರಕೀಯತೆಯನ್ನು ಹೊಂದಿರುವಂತೆ ಕಾಣುವುದಿಲ್ಲ. ಆದರೆ ಪರ್ಶಿಯಾ ಭಾಷೆ ಗೊತ್ತಿದ್ದವರು ಅದನ್ನು ಹೇಳಬೇಕು. ಅಮಲು, ಗಮಲು ಮತ್ತು ಹುಚ್ಚಿನಲ್ಲಿರುವ ಯಾವನೊಬ್ಬ ತನ್ನೆದೆಯ ಗೂಡಿನಲ್ಲಿ ಬೆಚ್ಚಗಿರುವ ತಲೆಯನ್ನು ಕಳೆದುಕೊಂಡಿರುತ್ತಾನೋ, ಅವನಿಗೆ ಎಡ್ವರ್ಡ್‌ನ ಅನುವಾದವೋ, ಉಮರನ ಮೂಲವೋ ಎಂಬುದು ವಿಷಯವಲ್ಲ. ಆ ಹೊತ್ತಿನ ಅವನೆದೆಯ ಸೊತ್ತಾಗುತ್ತದೆ ಅಷ್ಟೇ.

ಮೌನವೇ ಸೊಲ್ಲಾಗಿರುವಂಗೆ ದಾರಿಯಿಲ್ಲದ ಬಯಲು, ಎಲ್ಲೆಯಿಲ್ಲದ ಮುಗಿಲು ಕಣ್ಣಿಗಾಗಲಿ, ಕಾಲಿಗಾಗಲಿ ತೊಡರದು. ನಾನೂ ಇಲ್ಲ, ನೀನೂ ಇಲ್ಲ. ಅದೂ ಇಲ್ಲ, ಇದೂ ಇಲ್ಲ. ಎಲ್ಲವೂ ಇದೆ, ಯಾವುದೂ ಇಲ್ಲ.

ಕೀಲಿಯಿಲ್ಲದ ಕದವನು ಕಂಡೆ
ಕಾಣಲಾರದಂತಹ ಪರದೆಯಿದೆ
ನಮ್ಮ ನಡುವೆ ಸಣ್ಣ ಮಾತು ಅಲ್ಪ ಕಾಲದೆ
ಇಲ್ಲವಾಯ್ತಾಗ ನಾನು ನೀನೆಂಬುದೆ

ಕುಡಿತವೆಂಬುದು ಇಹವ ಮರೆಯುವ ಒಂದು ನೆಪ. ಲೌಕಿಕದ ಲೆಕ್ಕ್ಕಾಚಾರಗಳೆಲ್ಲಾ ಭ್ರಷ್ಟವಾಗಿರುವವು ಅಲೌಕಿಕ ಮುಕ್ತ ಬಯಲಿನಲ್ಲಿ. ಕಾಲವೇ ಜೀವನ. ಜೀವನವೇ ಕಾಲ. ಏಕೆಂದರೆ ಅರಿವಿಲ್ಲದಂತೆ ಆಯ್ತೆಮ್ಮ ಜನನ, ಅರಿತಿಲ್ಲ ನಾವು ಎಂದು ಬರುವುದೋ ಮರಣ. ಅವಧಿ ಎಂಬುವುದುಂಟು ಹುಟ್ಟುಸಾವಿನ ನಡುವೆ. ಆ ಕಾಲವಲ್ಲವೇ ನಮ್ಮೆಲ್ಲಾ ಜೀವನ? ಕಾಲ ಮತ್ತು ಜೀವನ ಸಮಾನಾರ್ಥಕ ಪದಗಳು. ಒಂದಕ್ಕೆ, ಒಬ್ಬರಿಗೆ ಸಮಯವನ್ನು ಕೊಡುತ್ತೇವೆಂದರೆ ಜೀವನವನ್ನೇ ಕೊಡುತ್ತೇವೆಂದು ಅರ್ಥ. ಆ ಜೀವನವನ್ನು ಲೌಕಿಕವು ಬಂಧಿಸದಿರಲು ಇಹವನ್ನು ಮರೆಯುವ ಅಮಲು ಬೇಕು.

ಕೋಳಿ ಕೂಗುತ್ತಿದ್ದಂತೆ ಮದಿರಾಲಯದ ಮುಂದೆ
ನಿಂತಾತ ಕೂಗಿದ – ಕೂಡಲೆ ಬಾಗಿಲನು ತೆರೆ
ನಾವೆಷ್ಟು ಅಲ್ಪ ಕಾಲ ಇರುವುದೆಂದು ನಿನಗೆ ಗೊತ್ತಿಲ್ಲ
ಒಮ್ಮೆ ಇಲ್ಲಿಂದ ಹೊರಟರೆ ಬರದಿರಬಹುದು ಹಿಂದೆ.

ಆ ಸಿದ್ಧಾಂತ, ಈ ಸಾಧನೆ, ಅದೆಂತದ್ದೋ ಘನತೆ, ಇಂತಹದ್ದೊಂದು ಅಧಿಕಾರ; ಎಂದೆಲ್ಲಾ ಪರಿಪಾಟಲು ಪಡುವಾಗ ಉಮರ ಮೆಲ್ಲನೆ ಕಿವಿಯಲ್ಲಿ ಉಲಿಯುವನು.

ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?
ನಾವೂ ಕೂಡಾ ಮಣ್ಣಿಗಿಳಿದು ಬಿಡುವ ಮುನ್ನವೇ.
ಮಣ್ಣು ಮಣ್ಣಾಗುವಾಗ, ಮಣ್ಣ ಕೆಳಗುರುಳಿರುವಾಗ,
ಮದ್ಯವಿಲ್ಲ, ಹಾಡಿಲ್ಲ, ಹಾಡುವನಿಲ್ಲ, ಕೊನೆಯೂ ಇಲ್ಲ.

ಬದುಕೆಂಬುದೇ ಮಧುಪಾತ್ರೆ. ಅದನ್ನು ಸಿಹಿ ಎನ್ನುವುದೇ, ಕಹಿ ಎನ್ನುವುದೇ? ಅದು ರುಚಿಗಳನ್ನು ಮೀರಿರುವುದು. ಆದರೆ ಅರುಚಿಯ ರೋಗವಲ್ಲವದು. ಅಭಿರುಚಿಯ ರಸಿಕತೆಯದು.

ನೈಶಾಪುರದಲ್ಲಾಗಲಿ, ಬ್ಯಾಬಿಲೋನಲ್ಲಾಗಲಿ
ಬಟ್ಟಲೊಸರುತ್ತಿರುವುದು ಸಿಹಿಯಿಂದಾಗಲಿ, ಕಹಿಯಿಂದಾಗಲಿ
ಬದುಕ ಮಧುಪಾತ್ರೆ ಸೋರುತ್ತಿರುವುದು ಹನಿಹನಿಯಾಗಿ
ಬಾಳ ಬಿಟ್ಟು ಹನಿಯುತ್ತಲಿರುವುದು ಒಂದೊಂದಾಗಿ.

ಉಮರ ಇಸ್ಲಾಮಿನ ಕರ್ಮಠರಿಗೆ ತನ್ನ ಅನೇಕ ಕವನಗಳಲ್ಲಿ ಸೃಷ್ಟಿಯ ಸೌಂದರ್ಯದ ಪಾಠವನ್ನು ಮಾಡುವನು. ಸಂಪ್ರದಾಯ ಮತ್ತು ಆಚರಣೆಗಳಿಂದಾಗಿ ತಮ್ಮ ಬದುಕಿನ ಆದ್ರತೆಯನ್ನು ಬರಡಾಗಿಸಿಕೊಳ್ಳದಿರುವಂತೆ ಪ್ರೇರೇಪಿಸಲು ಯತ್ನಿಸುತ್ತಾನೆ. ಅದಾದರೂ ತನ್ನ ಕಡೆಯಿಂದ ಅವರಿಗಾಗಿ ಮಾಡುವಂತ ಪ್ರಯತ್ನವೇನಲ್ಲ. ಆದರೂ ಅವು ಸಾಂಪ್ರದಾಯಿಕ ವಿಚಾರಗಳ ಮತ್ತು ಸೂಫಿ ಸಿದ್ಧಾಂತಗಳ ನಡುವೆ ಚರ್ಚೆಯನ್ನು ತಂದಿಡುತ್ತವೆ.

ಒಟ್ಟಿನಲ್ಲಿ ಎಡ್ವರ್ಡ್ ತಮ್ಮ ಒಲವಿನಂತೆ ಲೌಕಿಕತೆಯಲ್ಲಿ ಅಲೌಕಿಕತೆಯನ್ನು ಸಾಕ್ಷಾತ್ಕರಿಸಿಕೊಳ್ಳುವ ಅಮಲಿನ ಪದ್ಯಗಳನ್ನು ಆಯ್ದುಕೊಂಡಿದ್ದಾರೆ. ಮುಕ್ತವಾಗಿ ಭಾವಾನುವಾದ ಮಾಡುವಂತೆ ಮಾಡದೇ ಪರ್ಶಿಯಾ ಮೂಲದ ಕೃತಿಯ ಲಯವನ್ನು ಇಂಗ್ಲಿಷಿನಲ್ಲಿ ಕಾಯ್ದಿಟ್ಟುಕೊಳ್ಳಲು ಯತ್ನಿಸಿದ್ದಾರೆ. ಸಾಮಾನ್ಯವಾಗಿ ಇದು ಕಷ್ಟದ ಕೆಲಸವೇ. ಆದರೆ ಮಾಡಿರುವ ಉತ್ತಮ ಮತ್ತು ಪ್ರಾಮಾಣಿಕ ಪ್ರಯತ್ನದಿಂದಾಗಿ ಉಮರ ಗಮಲನ್ನು ಕೆಡಿಸದಿರಲು ಸಾಧ್ಯವಾಗಿದೆ ಎನಿಸುತ್ತದೆ. ಕನ್ನಡದಲ್ಲಿ ಡಿ ವಿ ಗುಂಡಪ್ಪನವರು ಉಮರನ ಒಸಗೆ ಎಂದು ಅನುವಾದಿಸಿರುವುದೂ ಕೂಡಾ ಇದೇ ಎಡ್ವರ್ಡ್ ಫಿಟ್ಜ್ ಜೆರಾಲ್ಡನ ಅನುವಾದವನ್ನೇ.

ಆಡುವವನೆಸೆವಂತೆ ಬೀಳ್ವ ಚೆಂದಿಗದೇಕೆ
ಎಡಬಲಗಳೆಣಿಕೆ, ಸೋಲ್ ಗೆಲವುಗಳ ಗೋಜು
ನಿನ್ನಾರಿತ್ತಲೆಸೆದಿಹನೊ ಬಲ್ಲವನಾತ
ನೆಲ್ಲ ಬಲ್ಲವನವನು – ಬಲ್ಲನೆಲ್ಲವನು.

ಆತ್ಮ ಮತ್ತು ಪರಮಾತ್ಮನು ಒಂದಾಗುವಂತಹ ಅದ್ವೈತ ಸಿದ್ಧಾಂತ ಇಸ್ಲಾಮಿನ ಸಾಂಪ್ರದಾಯಿಕ ನಂಬುಗೆಯಲ್ಲಿ ಇಲ್ಲ. ಆದರೆ, ಸೂಫಿ ಪರಂಪರೆಯಲ್ಲಿ ಇಂತಹ ಅನುಭಾವಗಳಿಗೆ ಕೊರತೆ ಇಲ್ಲ. ಉಪನಿಷತ್ತಿನ, ಬೌದ್ಧ ಮತ್ತು ಕ್ರೈಸ್ತಧರ್ಮಗಳ ಪ್ರಭಾವಗಳನ್ನೆಲ್ಲಾ ತನ್ನದಾಗಿಸಿಕೊಂಡು ಇಸ್ಲಾಮಿನ ತಾತ್ವಿಕ ವಿಚಾರಗಳನ್ನು ಮಥಿಸಿ ನವನೀತವನ್ನು ತೆಗೆದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಉಮರನೂ ಅದನ್ನು ಮಾಡಿದ್ದಾನೆ.

ಉಮರನು ತಾನೇ ತನ್ನ ಚರಮ ಗೀತೆಯನ್ನು ಬರೆದುಕೊಂಡು ಇಹವನ್ನು ತ್ಯಜಿಸಿದನೆಂದು ಹೇಳುತ್ತಾರೆ.

ಓ ದೇವ ನೀನರಿವೆ ನಿನ್ನನಾರಸುತ್ತೆ
ಪಟ್ಟೆಲ್ಲ ಪಾಡುಗಳನಾದನಿತು ಪಟ್ಟೆನ್
ಎನಗೆ ಬಂದರಿವಿನಾ ಕೊರೆಯ ನೀಂ ಮರೆತುಬಿಡು
ನಾನರಸಿದವನೆಂದು ಕನಿಕರಿಸಿ ನೋಡು

ಈ ಸಾಲುಗಳು ಗುಂಡಪ್ಪರವರ ಅನುವಾದ. ಈ ಮೊದಲು ಮೇಲೆ ಮಾಡಿರುವವು ನನ್ನವು.

ಒಟ್ಟಿನಲ್ಲಿ ಜೀವನದ ರಹಸ್ಯ, ದರ್ಶನ, ಅನುಭವ, ರುಚಿಯ ಆಸ್ವಾದನೆಗಳ ಉಮನ ಒಸಗೆಯಲ್ಲಿ ದಕ್ಕುವುದು.
ಹೆಂಡದ ಅಂಗಡಿ ಎಂದರೆ ಜಿಜ್ಞಾಸುಗಳ ಗೋಷ್ಠಿ. ಬಟ್ಟಲೆಂದರೆ ಹೃದಯವೆಂದೂ, ಮದ್ಯವನ್ನು ಬಟ್ಟಲಿಗೆ ಹುಯ್ಯುವ ಸಾಕಿಯೆಂದರೆ ತತ್ವಾಭ್ಯಾಸಿ ಎಂದೂ, ಮದ್ಯವೆಂದರೆ ದೈವಿಕ ಆನಂದವೆಂದೂ ಉಮರನ ಚೌಪದಿಗಳಲ್ಲಿ ಸಂಕೇತಿಸುವರು. ಅವನ ಚೌಪದಿಗಳನ್ನು ವಿವರಿಸಲು ಹೋದರೆ ವಾಚ್ಯವಾಗುವುದು. ಸೂಚಿತ ಸಂಕೇತಗಳನ್ನು ತಾನೇ ಬಿಡಿಸಿಕೊಳ್ಳುತ್ತಾ ತಾನೇ ಸವಿಯುತ್ತಿದ್ದರೆ ಆನಂದದ ರಸವೊಸರುವುದು. ಇಷ್ಟು ಹೇಳಿದ್ದೂ ಅತಿಯೇ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...