Homeಅಂಕಣಗಳುಪುಟಕ್ಕಿಟ್ಟ ಪುಟಗಳು: ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?

ಪುಟಕ್ಕಿಟ್ಟ ಪುಟಗಳು: ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?

- Advertisement -
- Advertisement -

ಉಮರನ ಕವನಗಳೆಂದರವು ಇಹದ ಅಮಲು, ಪರದ ಅನುಭಾವ, ಪ್ರೀತಿಯ ಗಮಲು, ಕಾವ್ಯದ ಹುಚ್ಚು; ಪರ್ಶಿಯಾ ಭಾಷೆಯಲ್ಲಿನ ಈ ನಾಲ್ಕು ಸಾಲಿನ ಕವನಗಳನ್ನು ಎಡ್ವರ್ಡ್ ತಮ್ಮದಾಗಿಸಿಕೊಂಡು ಮಾಡಿರುವ ಅನುವಾದಗಳಲ್ಲೆಲ್ಲೂ ಪರಕೀಯತೆಯನ್ನು ಹೊಂದಿರುವಂತೆ ಕಾಣುವುದಿಲ್ಲ. ಆದರೆ ಪರ್ಶಿಯಾ ಭಾಷೆ ಗೊತ್ತಿದ್ದವರು ಅದನ್ನು ಹೇಳಬೇಕು. ಅಮಲು, ಗಮಲು ಮತ್ತು ಹುಚ್ಚಿನಲ್ಲಿರುವ ಯಾವನೊಬ್ಬ ತನ್ನೆದೆಯ ಗೂಡಿನಲ್ಲಿ ಬೆಚ್ಚಗಿರುವ ತಲೆಯನ್ನು ಕಳೆದುಕೊಂಡಿರುತ್ತಾನೋ, ಅವನಿಗೆ ಎಡ್ವರ್ಡ್‌ನ ಅನುವಾದವೋ, ಉಮರನ ಮೂಲವೋ ಎಂಬುದು ವಿಷಯವಲ್ಲ. ಆ ಹೊತ್ತಿನ ಅವನೆದೆಯ ಸೊತ್ತಾಗುತ್ತದೆ ಅಷ್ಟೇ.

ಮೌನವೇ ಸೊಲ್ಲಾಗಿರುವಂಗೆ ದಾರಿಯಿಲ್ಲದ ಬಯಲು, ಎಲ್ಲೆಯಿಲ್ಲದ ಮುಗಿಲು ಕಣ್ಣಿಗಾಗಲಿ, ಕಾಲಿಗಾಗಲಿ ತೊಡರದು. ನಾನೂ ಇಲ್ಲ, ನೀನೂ ಇಲ್ಲ. ಅದೂ ಇಲ್ಲ, ಇದೂ ಇಲ್ಲ. ಎಲ್ಲವೂ ಇದೆ, ಯಾವುದೂ ಇಲ್ಲ.

ಕೀಲಿಯಿಲ್ಲದ ಕದವನು ಕಂಡೆ
ಕಾಣಲಾರದಂತಹ ಪರದೆಯಿದೆ
ನಮ್ಮ ನಡುವೆ ಸಣ್ಣ ಮಾತು ಅಲ್ಪ ಕಾಲದೆ
ಇಲ್ಲವಾಯ್ತಾಗ ನಾನು ನೀನೆಂಬುದೆ

ಕುಡಿತವೆಂಬುದು ಇಹವ ಮರೆಯುವ ಒಂದು ನೆಪ. ಲೌಕಿಕದ ಲೆಕ್ಕ್ಕಾಚಾರಗಳೆಲ್ಲಾ ಭ್ರಷ್ಟವಾಗಿರುವವು ಅಲೌಕಿಕ ಮುಕ್ತ ಬಯಲಿನಲ್ಲಿ. ಕಾಲವೇ ಜೀವನ. ಜೀವನವೇ ಕಾಲ. ಏಕೆಂದರೆ ಅರಿವಿಲ್ಲದಂತೆ ಆಯ್ತೆಮ್ಮ ಜನನ, ಅರಿತಿಲ್ಲ ನಾವು ಎಂದು ಬರುವುದೋ ಮರಣ. ಅವಧಿ ಎಂಬುವುದುಂಟು ಹುಟ್ಟುಸಾವಿನ ನಡುವೆ. ಆ ಕಾಲವಲ್ಲವೇ ನಮ್ಮೆಲ್ಲಾ ಜೀವನ? ಕಾಲ ಮತ್ತು ಜೀವನ ಸಮಾನಾರ್ಥಕ ಪದಗಳು. ಒಂದಕ್ಕೆ, ಒಬ್ಬರಿಗೆ ಸಮಯವನ್ನು ಕೊಡುತ್ತೇವೆಂದರೆ ಜೀವನವನ್ನೇ ಕೊಡುತ್ತೇವೆಂದು ಅರ್ಥ. ಆ ಜೀವನವನ್ನು ಲೌಕಿಕವು ಬಂಧಿಸದಿರಲು ಇಹವನ್ನು ಮರೆಯುವ ಅಮಲು ಬೇಕು.

ಕೋಳಿ ಕೂಗುತ್ತಿದ್ದಂತೆ ಮದಿರಾಲಯದ ಮುಂದೆ
ನಿಂತಾತ ಕೂಗಿದ – ಕೂಡಲೆ ಬಾಗಿಲನು ತೆರೆ
ನಾವೆಷ್ಟು ಅಲ್ಪ ಕಾಲ ಇರುವುದೆಂದು ನಿನಗೆ ಗೊತ್ತಿಲ್ಲ
ಒಮ್ಮೆ ಇಲ್ಲಿಂದ ಹೊರಟರೆ ಬರದಿರಬಹುದು ಹಿಂದೆ.

ಆ ಸಿದ್ಧಾಂತ, ಈ ಸಾಧನೆ, ಅದೆಂತದ್ದೋ ಘನತೆ, ಇಂತಹದ್ದೊಂದು ಅಧಿಕಾರ; ಎಂದೆಲ್ಲಾ ಪರಿಪಾಟಲು ಪಡುವಾಗ ಉಮರ ಮೆಲ್ಲನೆ ಕಿವಿಯಲ್ಲಿ ಉಲಿಯುವನು.

ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?
ನಾವೂ ಕೂಡಾ ಮಣ್ಣಿಗಿಳಿದು ಬಿಡುವ ಮುನ್ನವೇ.
ಮಣ್ಣು ಮಣ್ಣಾಗುವಾಗ, ಮಣ್ಣ ಕೆಳಗುರುಳಿರುವಾಗ,
ಮದ್ಯವಿಲ್ಲ, ಹಾಡಿಲ್ಲ, ಹಾಡುವನಿಲ್ಲ, ಕೊನೆಯೂ ಇಲ್ಲ.

ಬದುಕೆಂಬುದೇ ಮಧುಪಾತ್ರೆ. ಅದನ್ನು ಸಿಹಿ ಎನ್ನುವುದೇ, ಕಹಿ ಎನ್ನುವುದೇ? ಅದು ರುಚಿಗಳನ್ನು ಮೀರಿರುವುದು. ಆದರೆ ಅರುಚಿಯ ರೋಗವಲ್ಲವದು. ಅಭಿರುಚಿಯ ರಸಿಕತೆಯದು.

ನೈಶಾಪುರದಲ್ಲಾಗಲಿ, ಬ್ಯಾಬಿಲೋನಲ್ಲಾಗಲಿ
ಬಟ್ಟಲೊಸರುತ್ತಿರುವುದು ಸಿಹಿಯಿಂದಾಗಲಿ, ಕಹಿಯಿಂದಾಗಲಿ
ಬದುಕ ಮಧುಪಾತ್ರೆ ಸೋರುತ್ತಿರುವುದು ಹನಿಹನಿಯಾಗಿ
ಬಾಳ ಬಿಟ್ಟು ಹನಿಯುತ್ತಲಿರುವುದು ಒಂದೊಂದಾಗಿ.

ಉಮರ ಇಸ್ಲಾಮಿನ ಕರ್ಮಠರಿಗೆ ತನ್ನ ಅನೇಕ ಕವನಗಳಲ್ಲಿ ಸೃಷ್ಟಿಯ ಸೌಂದರ್ಯದ ಪಾಠವನ್ನು ಮಾಡುವನು. ಸಂಪ್ರದಾಯ ಮತ್ತು ಆಚರಣೆಗಳಿಂದಾಗಿ ತಮ್ಮ ಬದುಕಿನ ಆದ್ರತೆಯನ್ನು ಬರಡಾಗಿಸಿಕೊಳ್ಳದಿರುವಂತೆ ಪ್ರೇರೇಪಿಸಲು ಯತ್ನಿಸುತ್ತಾನೆ. ಅದಾದರೂ ತನ್ನ ಕಡೆಯಿಂದ ಅವರಿಗಾಗಿ ಮಾಡುವಂತ ಪ್ರಯತ್ನವೇನಲ್ಲ. ಆದರೂ ಅವು ಸಾಂಪ್ರದಾಯಿಕ ವಿಚಾರಗಳ ಮತ್ತು ಸೂಫಿ ಸಿದ್ಧಾಂತಗಳ ನಡುವೆ ಚರ್ಚೆಯನ್ನು ತಂದಿಡುತ್ತವೆ.

ಒಟ್ಟಿನಲ್ಲಿ ಎಡ್ವರ್ಡ್ ತಮ್ಮ ಒಲವಿನಂತೆ ಲೌಕಿಕತೆಯಲ್ಲಿ ಅಲೌಕಿಕತೆಯನ್ನು ಸಾಕ್ಷಾತ್ಕರಿಸಿಕೊಳ್ಳುವ ಅಮಲಿನ ಪದ್ಯಗಳನ್ನು ಆಯ್ದುಕೊಂಡಿದ್ದಾರೆ. ಮುಕ್ತವಾಗಿ ಭಾವಾನುವಾದ ಮಾಡುವಂತೆ ಮಾಡದೇ ಪರ್ಶಿಯಾ ಮೂಲದ ಕೃತಿಯ ಲಯವನ್ನು ಇಂಗ್ಲಿಷಿನಲ್ಲಿ ಕಾಯ್ದಿಟ್ಟುಕೊಳ್ಳಲು ಯತ್ನಿಸಿದ್ದಾರೆ. ಸಾಮಾನ್ಯವಾಗಿ ಇದು ಕಷ್ಟದ ಕೆಲಸವೇ. ಆದರೆ ಮಾಡಿರುವ ಉತ್ತಮ ಮತ್ತು ಪ್ರಾಮಾಣಿಕ ಪ್ರಯತ್ನದಿಂದಾಗಿ ಉಮರ ಗಮಲನ್ನು ಕೆಡಿಸದಿರಲು ಸಾಧ್ಯವಾಗಿದೆ ಎನಿಸುತ್ತದೆ. ಕನ್ನಡದಲ್ಲಿ ಡಿ ವಿ ಗುಂಡಪ್ಪನವರು ಉಮರನ ಒಸಗೆ ಎಂದು ಅನುವಾದಿಸಿರುವುದೂ ಕೂಡಾ ಇದೇ ಎಡ್ವರ್ಡ್ ಫಿಟ್ಜ್ ಜೆರಾಲ್ಡನ ಅನುವಾದವನ್ನೇ.

ಆಡುವವನೆಸೆವಂತೆ ಬೀಳ್ವ ಚೆಂದಿಗದೇಕೆ
ಎಡಬಲಗಳೆಣಿಕೆ, ಸೋಲ್ ಗೆಲವುಗಳ ಗೋಜು
ನಿನ್ನಾರಿತ್ತಲೆಸೆದಿಹನೊ ಬಲ್ಲವನಾತ
ನೆಲ್ಲ ಬಲ್ಲವನವನು – ಬಲ್ಲನೆಲ್ಲವನು.

ಆತ್ಮ ಮತ್ತು ಪರಮಾತ್ಮನು ಒಂದಾಗುವಂತಹ ಅದ್ವೈತ ಸಿದ್ಧಾಂತ ಇಸ್ಲಾಮಿನ ಸಾಂಪ್ರದಾಯಿಕ ನಂಬುಗೆಯಲ್ಲಿ ಇಲ್ಲ. ಆದರೆ, ಸೂಫಿ ಪರಂಪರೆಯಲ್ಲಿ ಇಂತಹ ಅನುಭಾವಗಳಿಗೆ ಕೊರತೆ ಇಲ್ಲ. ಉಪನಿಷತ್ತಿನ, ಬೌದ್ಧ ಮತ್ತು ಕ್ರೈಸ್ತಧರ್ಮಗಳ ಪ್ರಭಾವಗಳನ್ನೆಲ್ಲಾ ತನ್ನದಾಗಿಸಿಕೊಂಡು ಇಸ್ಲಾಮಿನ ತಾತ್ವಿಕ ವಿಚಾರಗಳನ್ನು ಮಥಿಸಿ ನವನೀತವನ್ನು ತೆಗೆದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಉಮರನೂ ಅದನ್ನು ಮಾಡಿದ್ದಾನೆ.

ಉಮರನು ತಾನೇ ತನ್ನ ಚರಮ ಗೀತೆಯನ್ನು ಬರೆದುಕೊಂಡು ಇಹವನ್ನು ತ್ಯಜಿಸಿದನೆಂದು ಹೇಳುತ್ತಾರೆ.

ಓ ದೇವ ನೀನರಿವೆ ನಿನ್ನನಾರಸುತ್ತೆ
ಪಟ್ಟೆಲ್ಲ ಪಾಡುಗಳನಾದನಿತು ಪಟ್ಟೆನ್
ಎನಗೆ ಬಂದರಿವಿನಾ ಕೊರೆಯ ನೀಂ ಮರೆತುಬಿಡು
ನಾನರಸಿದವನೆಂದು ಕನಿಕರಿಸಿ ನೋಡು

ಈ ಸಾಲುಗಳು ಗುಂಡಪ್ಪರವರ ಅನುವಾದ. ಈ ಮೊದಲು ಮೇಲೆ ಮಾಡಿರುವವು ನನ್ನವು.

ಒಟ್ಟಿನಲ್ಲಿ ಜೀವನದ ರಹಸ್ಯ, ದರ್ಶನ, ಅನುಭವ, ರುಚಿಯ ಆಸ್ವಾದನೆಗಳ ಉಮನ ಒಸಗೆಯಲ್ಲಿ ದಕ್ಕುವುದು.
ಹೆಂಡದ ಅಂಗಡಿ ಎಂದರೆ ಜಿಜ್ಞಾಸುಗಳ ಗೋಷ್ಠಿ. ಬಟ್ಟಲೆಂದರೆ ಹೃದಯವೆಂದೂ, ಮದ್ಯವನ್ನು ಬಟ್ಟಲಿಗೆ ಹುಯ್ಯುವ ಸಾಕಿಯೆಂದರೆ ತತ್ವಾಭ್ಯಾಸಿ ಎಂದೂ, ಮದ್ಯವೆಂದರೆ ದೈವಿಕ ಆನಂದವೆಂದೂ ಉಮರನ ಚೌಪದಿಗಳಲ್ಲಿ ಸಂಕೇತಿಸುವರು. ಅವನ ಚೌಪದಿಗಳನ್ನು ವಿವರಿಸಲು ಹೋದರೆ ವಾಚ್ಯವಾಗುವುದು. ಸೂಚಿತ ಸಂಕೇತಗಳನ್ನು ತಾನೇ ಬಿಡಿಸಿಕೊಳ್ಳುತ್ತಾ ತಾನೇ ಸವಿಯುತ್ತಿದ್ದರೆ ಆನಂದದ ರಸವೊಸರುವುದು. ಇಷ್ಟು ಹೇಳಿದ್ದೂ ಅತಿಯೇ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...