Homeಮುಖಪುಟಶ್ರದ್ಧಾಂಜಲಿ; ಹಾಸ್ಯಪ್ರಜ್ಞೆಯ ಗೆಳೆಯ ಮತ್ತು ವೃತ್ತಿಪರ ಪತ್ರಕರ್ತ ನಚ್ಚಿ

ಶ್ರದ್ಧಾಂಜಲಿ; ಹಾಸ್ಯಪ್ರಜ್ಞೆಯ ಗೆಳೆಯ ಮತ್ತು ವೃತ್ತಿಪರ ಪತ್ರಕರ್ತ ನಚ್ಚಿ

- Advertisement -
- Advertisement -

ಆಪ್ತ ವಲಯದಲ್ಲಿ ನಚ್ಚಿ ಎಂದೇ ಕರೆಸಿಕೊಳ್ಳುತ್ತಿದ್ದ ಪತ್ರಕರ್ತ ಎಂ.ಎನ್. ಚಕ್ರವರ್ತಿ ಅನೇಕ ಬಣ್ಣಗಳಿಂದ ಕೂಡಿದ ಮತ್ತು ಮಲ್ಲೇಶ್ವರದಲ್ಲಿ ಎಲ್ಲ ಕಡೆಗೂ ಹರಡಿಕೊಂಡು ಬೆಳಗುತ್ತಿದ್ದ ಬೃಹತ್ತಾದ ಕಾಮನ ಬಿಲ್ಲು. ನಾನು ಬೆಂಗಳೂರಿಗೆ ಬಂದು ನನ್ನ ಪಿ.ಯು.ಸಿ. ತರಗತಿಗೆ ದಾಖಲಾದಾಗ, ನಾನು ವಾಸವಿದ್ದ ನಮ್ಮಣ್ಣನ ಮನೆಯ ರಸ್ತೆಯಲ್ಲಿಯೇ ನಚ್ಚಿಯ ಮನೆಯೂ ಇದ್ದದ್ದು. ಮೊದಲ ಭೇಟಿಯಲ್ಲಿಯೇ ನಮ್ಮಿಬ್ಬರ ಸ್ನೇಹದ ಸಂಕೋಲೆಗೆ ಪುಷ್ಟಿಕೊಟ್ಟಿದ್ದು ಇಬ್ಬರಲ್ಲಿಯೂ ಇದ್ದ ಮತ್ತು ಹೊಂದಿಕೊಳ್ಳುತ್ತಿದ್ದ ಒಂದೇ ತರಂಗಾಂತರದ ಹಾಸ್ಯ ಪ್ರಜ್ಞೆ. ನನ್ನ ಹಳ್ಳಿಯ ಅನುಭವಗಳನ್ನ ವಿವರಿಸುವಾಗ ಪಟ್ಟಣದಲ್ಲೇ ಬೆಳೆದ ನಚ್ಚಿ ವಿಸ್ಮಯಗೊಳ್ಳುತ್ತಿದ್ದ. ಇದೇ ಕಾರಣಕ್ಕೆ ಆಗತಾನೆ ನನಗೆ ಪರಿಚಯವಾಗುತ್ತಿದ್ದ ನನ್ನ ಸ್ನೇಹಿತರ ಬಳಗ ನನಗೆ ’ಗೌಡ’ ಎಂಬ ನಾಮಕರಣವನ್ನ ಮಾಡಿದ್ದರು.

ಸಂಜೆಯಾದರೆ ಈ ಬಳಗವೆಲ್ಲಾ ನಚ್ಚಿಯ ಮನೆಯ ಮುಂದಿದ್ದ ಖಾಲಿ ಸೈಟಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆವು. ನಚ್ಚಿಯಲ್ಲಿ ಆಗತಾನೆ ಮೊಳಕೆಯೊಡೆದ ಸಾಹಿತ್ಯಾಭಿಮಾನ ನನ್ನಲ್ಲೂ ಅದು ಅಂಕುರವಾಗುವಂತೆ ಮಾಡಿತು. ಮಲ್ಲೇಶ್ವರದ ಗುಪ್ತ ಲೈಬ್ರರಿಗೆ ಪ್ರತಿ ದಿನವೂ ನಮ್ಮ ಭೇಟಿ ಇರುತ್ತಲೇ ಇತ್ತು. ಆಗ ನಾವು ಓದುತ್ತಿದ್ದದ್ದು ನರಸಿಂಹಯ್ಯನವರ ಪುರುಷೋತ್ತಮನ ಸಾಹಸ, ಪೆರ್ರಿಮೇಸನ್ ಮುಂತಾದ ಪತ್ತೇದಾರಿ ಕಾದಂಬರಿಗಳು ಮತ್ತು ಆಸ್ಟರಿಕ್ಸ್ ಕಾಮಿಕ್ಸ್‌ಗಳು ಇತ್ಯಾದಿ. ಈ ಸಮಯದಲ್ಲಿ ನಚ್ಚಿಗೆ ವಿಶೇಷವಾದ ಆಸಕ್ತಿ ಮೂಡಿದ್ದು ಪತ್ರಿಕೋದ್ಯಮದ ಮೇಲೆ. ನಮ್ಮ ಪದವೀಧರ ಪರೀಕ್ಷೆ ಮುಗಿದ ಮೇಲೆ ನಚ್ಚಿ ಮೂರು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯ ಬರಹಗಾರ ಆಗಿದ್ದರು.

ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಮುಖ್ಯ ವರದಿಗಾರರಾಗಿ ನಿವೃತ್ತಿ ಹೊಂದಿದರು. ಈಗಿನ ದೂರದರ್ಶನದ ಮಹಾನಿರ್ದೇಶಕ ಸೂರ್ಯಪ್ರಕಾಶ್ ಅವರ ಒಡನಾಡಿಯಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡಿದ್ದರು.

ಪತ್ರಿಕೋದ್ಯಮದ ಜೊತೆಜೊತೆಗೇ, ನಚ್ಚಿ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಪ್ರಕಾಶ್ ಬೆಳವಾಡಿ ನಿರ್ದೇಶಿಸಿದ್ದ ಗರ್ವ ಧಾರಾವಾಹಿಯ ಸಂಭಾಷಣೆಯನ್ನು ಕೂಡ ಬರೆದಿದ್ದರು. ಇಂತಹ ಅನೇಕ ಘಟನೆಗಳು ನನ್ನ ನೆನಪಿನಲ್ಲಿ ಹಾದುಹೋಗುತ್ತಿವೆ.

ಅಂದು ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಟಿ.ಜೆ.ಎಸ್ ಜಾರ್ಜ್ ಅವರು ಬರೆದ ಎಂ.ಎಸ್. ಸುಬ್ಬಲಕ್ಷ್ಮಿಯವರ ಜೀವನ ಚರಿತ್ರೆಯ ಬಿಡುಗಡೆ. ಅದೇ ಸಂದರ್ಭದಲ್ಲಿ ಸುಧಾ ರಘುನಾಥನ್ ಅವರ ಸಂಗೀತ. ನಾನೂ ಅಲ್ಲಿಗೆ ಹೋಗಿದ್ದೆ. ನಚ್ಚಿಯ ಪತ್ರಿಕೋದ್ಯಮದಲ್ಲಿನ ಆಸಕ್ತಿ ಅವನನ್ನು ಅಲ್ಲಿಗೆ ಕರೆತಂದಿತ್ತು. ನನ್ನ ಸಂಗೀತದ ಆಸಕ್ತಿ ನಾನು ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿದ್ದು. ಅಂದು ಜಾರ್ಜ್ ಅವರ ಹಸ್ತಾಕ್ಷರವನ್ನು ಎರಡೂ ಪುಸ್ತಕಗಳಿಗೆ ಇಬ್ಬರೂ ಹಾಕಿಸಿಕೊಂಡು ಕೊಂಡೆವು.

ಭಾಷಣದ ಕಾರ್ಯಕ್ರಮ ಮುಗಿದಮೇಲೆ ಇಡೀ ಮೂರು ಗಂಟೆಗಳ ಕಾಲ ನಚ್ಚಿ ನನ್ನ
ಜತೆಯಲ್ಲಿಯೇ ಕುಳಿತಿದ್ದ. ವಿಶೇಷವೆಂದರೆ ನನಗೂ ತಿಳಿಯದಿದ್ದ ಕೆಲವು ರಾಗಗಳ ಬಗ್ಗೆ ನನಗೆ ಹೇಳುತ್ತಿದ್ದ. ಅವನ ವೈವಿಧ್ಯಮಯ ಆಸಕ್ತಿಯ ಬಗ್ಗೆ ಹೇಳಬೇಕಾದ ಉದಾಹರಣೆಯಲ್ಲಿ ಇದೂ ಒಂದು.

ಇನ್ನೊಂದು ಘಟನೆ ಈಗ ನೆನಪಿಗೆ ಬರುತ್ತಿದೆ. ಒಮ್ಮೆ ’ಫ್ರೀಡಂ ಅಟ್ ಮಿಡ್ ನೈಟ್’ ಪುಸ್ತಕ ಬರೆದ ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲ್ಯಾಪಿಯರ್ ಬೆಂಗಳೂರಿಗೆ ಬಂದಿದ್ದರು. ಆ ಪುಸ್ತಕವನ್ನ ಗಂಗಾರಾಮ್ ಬುಕ್‌ಹೌಸ್‌ನಲ್ಲಿ ಕೊಂಡು ಅವರ ಹಸ್ತಾಕ್ಷರವನ್ನ ಹಾಕಿಸಿಕೊಳ್ಳಲು ಅವರು ಉಳಿದುಕೊಂಡಿದ್ದ ಅಶೋಕ ಹೊಟೇಲಿಗೆ ಇಬ್ಬರೂ ನಡೆದುಕೊಂಡು ಹೋದೆವು. ಆದರೆ ಅವರು ನಮ್ಮನ್ನು ಭೇಟಿಮಾಡಲು ನಿರಾಕರಿಸಿದರು. ಅವರು ಆಚೆ ಬರುವವರೆಗೂ ನಾವು ರಿಸೆಪ್ಷನ್ ಬಳಿಯೇ ಕುಳಿತಿದ್ದೆವು. ಅವರು ಹೊರಬಂದಾಗ ನಮಗೆ ತಿಳಿಸಬೇಕೆಂದು ರಿಸೆಪ್ಷನಿಸ್ಟ್ ಅನ್ನು ಕೇಳಿಕೊಂಡಿದ್ದೆವು. ಅವರಿಬ್ಬರೂ ಆಚೆ ಬಂದಾಗ ರಿಸೆಪ್ಷನಿಸ್ಟ್ ನಮಗೆ ಸಂಜ್ಞೆ ಮಾಡಿದ. ತಕ್ಷಣ ಓಡಿ ಹೋಗಿ ಅವರ ಹಸ್ತಾಕ್ಷರವನ್ನ ಪಡೆದವು.

ಇನ್ನೂ ಒಂದು ಘಟನೆ ನೆನಪಿಗೆ ಬರುತ್ತಿದೆ. ಮಲ್ಲೇಶ್ವರದಲ್ಲಿ ಒಬ್ಬ ಉಭಯಕರ್ ಎನ್ನುವ ಎಣ್ಣೆ ಪಾರ್ಟಿ ಗೆಳೆಯ ಇದ್ದ. ನಮ್ಮಿಬ್ಬರಿಗೂ ಸ್ನೇಹಿತ. ಬೆಳಿಗ್ಗೆ ಶುರುಮಾಡಿದರೆ ರಾತ್ರಿ ಬಾರ್ ಮುಚ್ಚುವವರೆಗೂ ಕುಡಿಯುತ್ತಲೇ ಇರುತ್ತಿದ್ದ. ಅದೇ ಕಾರಣಕ್ಕೆ ಲಿವರ್ ಕೆಟ್ಟು ಹೋಗಿ ಅಸು ನೀಗಿದ್ದು ದುರಂತದ ಮತ್ತು ದುಃಖದ ಸಂಗತಿಯಾಗಿತ್ತು. ಅವನ ತಿಥಿಗೆ ಇಬ್ಬರೂ ಹೋಗಿದ್ದೆವು. ಅವನ ತಂದೆ ಪಿಂಡ ತಂದಿಟ್ಟಾಗ ಒಂದು ಕಾಗೆಯೂ ಬರಲಿಲ್ಲ. ನಚ್ಚಿಗೆ ಏನೋ ಹೊಳೆದಂತಾಯಿತು. ಅಂದು ಅಕ್ಟೋಬರ್ ಎರಡು. ಎಲ್ಲಾ ಹೆಂಡದ ಅಂಗಡಿಗಳೂ ಬಂದ್. ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಕಾಡಿ ಬೇಡಿ ನಚ್ಚಿ ಒಂದು ಕ್ವಾರ್ಟರ್ ತಂದು ಪಿಂಡ ಇಟ್ಟ ದೊನ್ನೆಯ ಒಳಗೆ ಸುರಿದ. ತಕ್ಷಣ ಅನೇಕ ಕಾಗೆಗಳು ಬಂದು ಮುತ್ತಿಕೊಂಡವು. ದುಃಖದ ಸನ್ನಿವೇಶದಲ್ಲಿಯೂ ನಚ್ಚಿಯ ಸಮಯ ಮತ್ತು ಹಾಸ್ಯಪ್ರಜ್ಞೆ ನಮ್ಮೆಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.

ಕೆಲವು ವರ್ಷಗಳಿಂದ ಕಣ್ಣಿನಲ್ಲಿ ಡಯಾಬೆಟಿಕ್ ರೆಟಿನೊಪತಿಯಿಂದ ಬಳಲುತ್ತಿದ್ದ ನಚ್ಚಿ ದೃಷ್ಟಿಹೀನರಾಗಿದ್ದರು. ಹಲವು ಬಾರಿ ಅವರ ಮನೆಗೆ ಭೇಟಿ ನೀಡಿದಾಗ ಏನೇನೋ ಓದಿ ಹೇಳುವಂತೆ ನನಗೆ ಹೇಳುತ್ತಿದ್ದ.

ನಚ್ಚಿ ಮಾರ್ಚ್ 1, 2021 ರಂದು ಈ ಇಹ ಲೋಕವನ್ನ ತ್ಯಜಿಸಿದ್ದು, ಆತನ ಪ್ರೀತಿಪಾತ್ರರೆಲ್ಲರಲ್ಲೂ ಅತೀವವಾದ ದುಃಖ ಮಡುವುಗಟ್ಟಿದೆ.

ಶ್ರೀನಾಥ್ ಕೆ
ನಟ ಮತ್ತು ಲೇಖಕ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶ್ರೀನಾಥ್ ಇತ್ತೀಚೆಗೆ ಫ್ಯೋದೊರ್ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...