Homeಮುಖಪುಟಶ್ರದ್ಧಾಂಜಲಿ; ಹಾಸ್ಯಪ್ರಜ್ಞೆಯ ಗೆಳೆಯ ಮತ್ತು ವೃತ್ತಿಪರ ಪತ್ರಕರ್ತ ನಚ್ಚಿ

ಶ್ರದ್ಧಾಂಜಲಿ; ಹಾಸ್ಯಪ್ರಜ್ಞೆಯ ಗೆಳೆಯ ಮತ್ತು ವೃತ್ತಿಪರ ಪತ್ರಕರ್ತ ನಚ್ಚಿ

- Advertisement -
- Advertisement -

ಆಪ್ತ ವಲಯದಲ್ಲಿ ನಚ್ಚಿ ಎಂದೇ ಕರೆಸಿಕೊಳ್ಳುತ್ತಿದ್ದ ಪತ್ರಕರ್ತ ಎಂ.ಎನ್. ಚಕ್ರವರ್ತಿ ಅನೇಕ ಬಣ್ಣಗಳಿಂದ ಕೂಡಿದ ಮತ್ತು ಮಲ್ಲೇಶ್ವರದಲ್ಲಿ ಎಲ್ಲ ಕಡೆಗೂ ಹರಡಿಕೊಂಡು ಬೆಳಗುತ್ತಿದ್ದ ಬೃಹತ್ತಾದ ಕಾಮನ ಬಿಲ್ಲು. ನಾನು ಬೆಂಗಳೂರಿಗೆ ಬಂದು ನನ್ನ ಪಿ.ಯು.ಸಿ. ತರಗತಿಗೆ ದಾಖಲಾದಾಗ, ನಾನು ವಾಸವಿದ್ದ ನಮ್ಮಣ್ಣನ ಮನೆಯ ರಸ್ತೆಯಲ್ಲಿಯೇ ನಚ್ಚಿಯ ಮನೆಯೂ ಇದ್ದದ್ದು. ಮೊದಲ ಭೇಟಿಯಲ್ಲಿಯೇ ನಮ್ಮಿಬ್ಬರ ಸ್ನೇಹದ ಸಂಕೋಲೆಗೆ ಪುಷ್ಟಿಕೊಟ್ಟಿದ್ದು ಇಬ್ಬರಲ್ಲಿಯೂ ಇದ್ದ ಮತ್ತು ಹೊಂದಿಕೊಳ್ಳುತ್ತಿದ್ದ ಒಂದೇ ತರಂಗಾಂತರದ ಹಾಸ್ಯ ಪ್ರಜ್ಞೆ. ನನ್ನ ಹಳ್ಳಿಯ ಅನುಭವಗಳನ್ನ ವಿವರಿಸುವಾಗ ಪಟ್ಟಣದಲ್ಲೇ ಬೆಳೆದ ನಚ್ಚಿ ವಿಸ್ಮಯಗೊಳ್ಳುತ್ತಿದ್ದ. ಇದೇ ಕಾರಣಕ್ಕೆ ಆಗತಾನೆ ನನಗೆ ಪರಿಚಯವಾಗುತ್ತಿದ್ದ ನನ್ನ ಸ್ನೇಹಿತರ ಬಳಗ ನನಗೆ ’ಗೌಡ’ ಎಂಬ ನಾಮಕರಣವನ್ನ ಮಾಡಿದ್ದರು.

ಸಂಜೆಯಾದರೆ ಈ ಬಳಗವೆಲ್ಲಾ ನಚ್ಚಿಯ ಮನೆಯ ಮುಂದಿದ್ದ ಖಾಲಿ ಸೈಟಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆವು. ನಚ್ಚಿಯಲ್ಲಿ ಆಗತಾನೆ ಮೊಳಕೆಯೊಡೆದ ಸಾಹಿತ್ಯಾಭಿಮಾನ ನನ್ನಲ್ಲೂ ಅದು ಅಂಕುರವಾಗುವಂತೆ ಮಾಡಿತು. ಮಲ್ಲೇಶ್ವರದ ಗುಪ್ತ ಲೈಬ್ರರಿಗೆ ಪ್ರತಿ ದಿನವೂ ನಮ್ಮ ಭೇಟಿ ಇರುತ್ತಲೇ ಇತ್ತು. ಆಗ ನಾವು ಓದುತ್ತಿದ್ದದ್ದು ನರಸಿಂಹಯ್ಯನವರ ಪುರುಷೋತ್ತಮನ ಸಾಹಸ, ಪೆರ್ರಿಮೇಸನ್ ಮುಂತಾದ ಪತ್ತೇದಾರಿ ಕಾದಂಬರಿಗಳು ಮತ್ತು ಆಸ್ಟರಿಕ್ಸ್ ಕಾಮಿಕ್ಸ್‌ಗಳು ಇತ್ಯಾದಿ. ಈ ಸಮಯದಲ್ಲಿ ನಚ್ಚಿಗೆ ವಿಶೇಷವಾದ ಆಸಕ್ತಿ ಮೂಡಿದ್ದು ಪತ್ರಿಕೋದ್ಯಮದ ಮೇಲೆ. ನಮ್ಮ ಪದವೀಧರ ಪರೀಕ್ಷೆ ಮುಗಿದ ಮೇಲೆ ನಚ್ಚಿ ಮೂರು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯ ಬರಹಗಾರ ಆಗಿದ್ದರು.

ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಮುಖ್ಯ ವರದಿಗಾರರಾಗಿ ನಿವೃತ್ತಿ ಹೊಂದಿದರು. ಈಗಿನ ದೂರದರ್ಶನದ ಮಹಾನಿರ್ದೇಶಕ ಸೂರ್ಯಪ್ರಕಾಶ್ ಅವರ ಒಡನಾಡಿಯಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡಿದ್ದರು.

ಪತ್ರಿಕೋದ್ಯಮದ ಜೊತೆಜೊತೆಗೇ, ನಚ್ಚಿ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಪ್ರಕಾಶ್ ಬೆಳವಾಡಿ ನಿರ್ದೇಶಿಸಿದ್ದ ಗರ್ವ ಧಾರಾವಾಹಿಯ ಸಂಭಾಷಣೆಯನ್ನು ಕೂಡ ಬರೆದಿದ್ದರು. ಇಂತಹ ಅನೇಕ ಘಟನೆಗಳು ನನ್ನ ನೆನಪಿನಲ್ಲಿ ಹಾದುಹೋಗುತ್ತಿವೆ.

ಅಂದು ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಟಿ.ಜೆ.ಎಸ್ ಜಾರ್ಜ್ ಅವರು ಬರೆದ ಎಂ.ಎಸ್. ಸುಬ್ಬಲಕ್ಷ್ಮಿಯವರ ಜೀವನ ಚರಿತ್ರೆಯ ಬಿಡುಗಡೆ. ಅದೇ ಸಂದರ್ಭದಲ್ಲಿ ಸುಧಾ ರಘುನಾಥನ್ ಅವರ ಸಂಗೀತ. ನಾನೂ ಅಲ್ಲಿಗೆ ಹೋಗಿದ್ದೆ. ನಚ್ಚಿಯ ಪತ್ರಿಕೋದ್ಯಮದಲ್ಲಿನ ಆಸಕ್ತಿ ಅವನನ್ನು ಅಲ್ಲಿಗೆ ಕರೆತಂದಿತ್ತು. ನನ್ನ ಸಂಗೀತದ ಆಸಕ್ತಿ ನಾನು ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿದ್ದು. ಅಂದು ಜಾರ್ಜ್ ಅವರ ಹಸ್ತಾಕ್ಷರವನ್ನು ಎರಡೂ ಪುಸ್ತಕಗಳಿಗೆ ಇಬ್ಬರೂ ಹಾಕಿಸಿಕೊಂಡು ಕೊಂಡೆವು.

ಭಾಷಣದ ಕಾರ್ಯಕ್ರಮ ಮುಗಿದಮೇಲೆ ಇಡೀ ಮೂರು ಗಂಟೆಗಳ ಕಾಲ ನಚ್ಚಿ ನನ್ನ
ಜತೆಯಲ್ಲಿಯೇ ಕುಳಿತಿದ್ದ. ವಿಶೇಷವೆಂದರೆ ನನಗೂ ತಿಳಿಯದಿದ್ದ ಕೆಲವು ರಾಗಗಳ ಬಗ್ಗೆ ನನಗೆ ಹೇಳುತ್ತಿದ್ದ. ಅವನ ವೈವಿಧ್ಯಮಯ ಆಸಕ್ತಿಯ ಬಗ್ಗೆ ಹೇಳಬೇಕಾದ ಉದಾಹರಣೆಯಲ್ಲಿ ಇದೂ ಒಂದು.

ಇನ್ನೊಂದು ಘಟನೆ ಈಗ ನೆನಪಿಗೆ ಬರುತ್ತಿದೆ. ಒಮ್ಮೆ ’ಫ್ರೀಡಂ ಅಟ್ ಮಿಡ್ ನೈಟ್’ ಪುಸ್ತಕ ಬರೆದ ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲ್ಯಾಪಿಯರ್ ಬೆಂಗಳೂರಿಗೆ ಬಂದಿದ್ದರು. ಆ ಪುಸ್ತಕವನ್ನ ಗಂಗಾರಾಮ್ ಬುಕ್‌ಹೌಸ್‌ನಲ್ಲಿ ಕೊಂಡು ಅವರ ಹಸ್ತಾಕ್ಷರವನ್ನ ಹಾಕಿಸಿಕೊಳ್ಳಲು ಅವರು ಉಳಿದುಕೊಂಡಿದ್ದ ಅಶೋಕ ಹೊಟೇಲಿಗೆ ಇಬ್ಬರೂ ನಡೆದುಕೊಂಡು ಹೋದೆವು. ಆದರೆ ಅವರು ನಮ್ಮನ್ನು ಭೇಟಿಮಾಡಲು ನಿರಾಕರಿಸಿದರು. ಅವರು ಆಚೆ ಬರುವವರೆಗೂ ನಾವು ರಿಸೆಪ್ಷನ್ ಬಳಿಯೇ ಕುಳಿತಿದ್ದೆವು. ಅವರು ಹೊರಬಂದಾಗ ನಮಗೆ ತಿಳಿಸಬೇಕೆಂದು ರಿಸೆಪ್ಷನಿಸ್ಟ್ ಅನ್ನು ಕೇಳಿಕೊಂಡಿದ್ದೆವು. ಅವರಿಬ್ಬರೂ ಆಚೆ ಬಂದಾಗ ರಿಸೆಪ್ಷನಿಸ್ಟ್ ನಮಗೆ ಸಂಜ್ಞೆ ಮಾಡಿದ. ತಕ್ಷಣ ಓಡಿ ಹೋಗಿ ಅವರ ಹಸ್ತಾಕ್ಷರವನ್ನ ಪಡೆದವು.

ಇನ್ನೂ ಒಂದು ಘಟನೆ ನೆನಪಿಗೆ ಬರುತ್ತಿದೆ. ಮಲ್ಲೇಶ್ವರದಲ್ಲಿ ಒಬ್ಬ ಉಭಯಕರ್ ಎನ್ನುವ ಎಣ್ಣೆ ಪಾರ್ಟಿ ಗೆಳೆಯ ಇದ್ದ. ನಮ್ಮಿಬ್ಬರಿಗೂ ಸ್ನೇಹಿತ. ಬೆಳಿಗ್ಗೆ ಶುರುಮಾಡಿದರೆ ರಾತ್ರಿ ಬಾರ್ ಮುಚ್ಚುವವರೆಗೂ ಕುಡಿಯುತ್ತಲೇ ಇರುತ್ತಿದ್ದ. ಅದೇ ಕಾರಣಕ್ಕೆ ಲಿವರ್ ಕೆಟ್ಟು ಹೋಗಿ ಅಸು ನೀಗಿದ್ದು ದುರಂತದ ಮತ್ತು ದುಃಖದ ಸಂಗತಿಯಾಗಿತ್ತು. ಅವನ ತಿಥಿಗೆ ಇಬ್ಬರೂ ಹೋಗಿದ್ದೆವು. ಅವನ ತಂದೆ ಪಿಂಡ ತಂದಿಟ್ಟಾಗ ಒಂದು ಕಾಗೆಯೂ ಬರಲಿಲ್ಲ. ನಚ್ಚಿಗೆ ಏನೋ ಹೊಳೆದಂತಾಯಿತು. ಅಂದು ಅಕ್ಟೋಬರ್ ಎರಡು. ಎಲ್ಲಾ ಹೆಂಡದ ಅಂಗಡಿಗಳೂ ಬಂದ್. ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಕಾಡಿ ಬೇಡಿ ನಚ್ಚಿ ಒಂದು ಕ್ವಾರ್ಟರ್ ತಂದು ಪಿಂಡ ಇಟ್ಟ ದೊನ್ನೆಯ ಒಳಗೆ ಸುರಿದ. ತಕ್ಷಣ ಅನೇಕ ಕಾಗೆಗಳು ಬಂದು ಮುತ್ತಿಕೊಂಡವು. ದುಃಖದ ಸನ್ನಿವೇಶದಲ್ಲಿಯೂ ನಚ್ಚಿಯ ಸಮಯ ಮತ್ತು ಹಾಸ್ಯಪ್ರಜ್ಞೆ ನಮ್ಮೆಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.

ಕೆಲವು ವರ್ಷಗಳಿಂದ ಕಣ್ಣಿನಲ್ಲಿ ಡಯಾಬೆಟಿಕ್ ರೆಟಿನೊಪತಿಯಿಂದ ಬಳಲುತ್ತಿದ್ದ ನಚ್ಚಿ ದೃಷ್ಟಿಹೀನರಾಗಿದ್ದರು. ಹಲವು ಬಾರಿ ಅವರ ಮನೆಗೆ ಭೇಟಿ ನೀಡಿದಾಗ ಏನೇನೋ ಓದಿ ಹೇಳುವಂತೆ ನನಗೆ ಹೇಳುತ್ತಿದ್ದ.

ನಚ್ಚಿ ಮಾರ್ಚ್ 1, 2021 ರಂದು ಈ ಇಹ ಲೋಕವನ್ನ ತ್ಯಜಿಸಿದ್ದು, ಆತನ ಪ್ರೀತಿಪಾತ್ರರೆಲ್ಲರಲ್ಲೂ ಅತೀವವಾದ ದುಃಖ ಮಡುವುಗಟ್ಟಿದೆ.

ಶ್ರೀನಾಥ್ ಕೆ
ನಟ ಮತ್ತು ಲೇಖಕ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶ್ರೀನಾಥ್ ಇತ್ತೀಚೆಗೆ ಫ್ಯೋದೊರ್ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...