Homeಅಂಕಣಗಳುನೂರರ ನೋಟ: ಕಾಡುಗಳ್ಳರ ಅಟ್ಟಹಾಸ; ನಿಲ್ಲದ ಗಣಿಗಾರಿಕೆ; ಹೆಚ್ಚಿದ ವನ್ಯಜೀವ-ಮನುಷ್ಯ ಸಂಘರ್ಷ

ನೂರರ ನೋಟ: ಕಾಡುಗಳ್ಳರ ಅಟ್ಟಹಾಸ; ನಿಲ್ಲದ ಗಣಿಗಾರಿಕೆ; ಹೆಚ್ಚಿದ ವನ್ಯಜೀವ-ಮನುಷ್ಯ ಸಂಘರ್ಷ

- Advertisement -
- Advertisement -

ಕಾಡಿನಲ್ಲಿ ವಾಸ ಮಾಡುವ ಹುಲಿ, ಚಿರತೆ, ಆನೆ ಪದೇ ಪದೇ ಅರಣ್ಯದ ಹತ್ತಿರ ಇರುವ ಗ್ರಾಮಗಳಿಗೆ ಬರುತ್ತಿವೆ. ಆನೆ ಬೆಳೆ ನಾಶ ಮಾಡುತ್ತದೆ, ಜನರ ಮೇಲೆ ದಾಳಿ ಮಾಡಿ ಕೊಲ್ಲುತ್ತದೆ. ಹುಲಿ ಚಿರತೆಗಳು ನಾಯಿ, ಹಸು, ಕರು, ಕೋಳಿಗಳನ್ನು ತಿಂದು ಹಾಕುವುದಲ್ಲದೆ ಮನುಷ್ಯರ ಮೇಲೂ ಬಿದ್ದು ಹಾನಿ ಮಾಡುತ್ತಿವೆ. ಪ್ರತಿದಿನ ಈ ವನ್ಯಜೀವಿ ಮತ್ತು ಮನುಷ್ಯರ ಸಂಘರ್ಷದ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೂ ಸರ್ಕಾರವೇ ಆಗಲಿ, ಅರಣ್ಯ ಇಲಾಖೆಯಾಗಲಿ ಆತಂಕಗೊಳ್ಳುತ್ತಿಲ್ಲ. ಅದರ ಬಗೆಗೆ ಚರ್ಚೆಯೂ ಆಗುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಒಂದು ದಿನ ಅರಣ್ಯದ ಪ್ರಾಣಿಗಳೆಲ್ಲ ಗ್ರಾಮಗಳನ್ನು ಆವರಿಸಿಕೊಂಡು ಭಯ ಭೀತನಾದ ಮನುಷ್ಯ ತನ್ನ ರಕ್ಷಣೆಗಾಗಿ ಅರಣ್ಯ ಸೇರುವುದು ಅನಿವಾರ್ಯವಾಗುತ್ತದೆ.

ಹಿಂದೆ ಎಂದೋ ಒಂದೊಂದು ಸಾರಿ ಹಳ್ಳಿಗಳಿಗೆ ಬರುತ್ತಿದ್ದ ಕಾಡುಪ್ರಾಣಿಗಳು ಈಗ ಪದೇಪದೇ ಹೊರಟಹತ್ತಿವೆ. ಇದಕ್ಕೆ ಕಾರಣವೇನಿರಬಹುದು ಎಂದು ಜರೂರಾಗಿ ಯೋಚಿಸಬೇಕಾದ ಸಮಯ ಇದು.

ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿದೆ. ಕಾಡುಪ್ರಾಣಿಗಳಿಗೆ ಇದರಿಂದ ನೆಲಸಲು ಸ್ಥಳದ ಅಭಾವ ಕಾಣಿಸಿಕೊಳ್ಳುತ್ತಿರಬಹುದು. ಆಹಾರ ಮತ್ತು ನೀರಿನ ಅಭಾವ ಇದಕ್ಕೆ ಕಾರಣವಿರಬಹುದು. ಅರಣ್ಯ ನಾಶಕ್ಕೆ ಮುಖ್ಯ ಕಾರಣ ಹಲವು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಸರ್ಕಾರ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರುವುದು. ಪಶ್ಚಿಮಘಟ್ಟ ಮೊದಲುಗೊಂಡು ಎಲ್ಲೆಲ್ಲಿ ಬೆಟ್ಟದ ಸಾಲುಗಳಿವೆಯೋ ಅಲ್ಲೆಲ್ಲ ಸರ್ಕಾರದ ಒಪ್ಪಿಗೆ ಪಡೆದು ಅಥವಾ ಅಕ್ರಮವಾಗಿ ಕಲ್ಲುಗಣಿ ಕಾರ್ಯ ಅವ್ಯಾಹತವಾಗಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು, ಕಾಡಿನಲ್ಲಿ ಬೆಳೆದಿರುವ ಉತ್ಕೃಷ್ಟವಾದ ಮರಗಳನ್ನು ಕಳ್ಳತನದಿಂದ ಮತ್ತು ಅರಣ್ಯಾಧಿಕಾರಿಗಳ ನೆರವಿನಿಂದ ಕಡಿದು ದುಡ್ಡು ಮಾಡಿಕೊಳ್ಳುವ ಮರಗಳ್ಳರಿಂದ ಮತ್ತು ಅರಣ್ಯ ಮಧ್ಯದಲ್ಲಿ ಶ್ರೀಮಂತರ ಮೋಜಿಗಾಗಿ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡುವ ಧನಪಿಶಾಚಿಗಳಿಂದಾಗಿ ಅರಣ್ಯ ಭೂಮಿ ಕಿರಿದಾಗುತ್ತಿದೆ. ಒಟ್ಟು ಭೂಮಿಯ 1/3ಭಾಗ ಅರಣ್ಯ ಪ್ರದೇಶ ಇರಬೇಕೆಂದು ಇಂಗ್ಲಿಷರ ಕಾಲದಲ್ಲಿ ನಿಯಮ ಇತ್ತು. ಜನಸಂಖ್ಯೆ ಸ್ಫೋಟವಾದಂತೆ ಹಳ್ಳಿಯವರು ತಮ್ಮ ಹಳ್ಳಿಗಳ ವಿಸ್ತರಣೆಗಾಗಿ ಕಾಡನ್ನು ಕಬಳಿಸುತ್ತಾ ಬಂದರು. ನಗರಗಳ, ಪಟ್ಟಣಗಳ ಜನಸಂಖ್ಯೆ ಹೆಚ್ಚಿದಂತೆ ಮುನಿಸಿಪಾಲಿಟಿಗಳು, ಜಿಲ್ಲಾ ಬೋರ್ಡುಗಳು ಸರ್ಕಾರದ ಸಹಕಾರದೊಂದಿಗೆ ಅರಣ್ಯ ಭೂಮಿಯನ್ನೇ ಕಬಳಿಸುವ ಹವ್ಯಾಸಕ್ಕೆ ಬಿದ್ದವು. ಅರಣ್ಯ ಪ್ರದೇಶದಲ್ಲಿ ಕಾರ್ಖಾನೆಗಳನ್ನೂ ಸ್ಥಾಪಿಸಲಾಯಿತು.

ಬೆಂಗಳೂರಿನಂತಹ ಪಟ್ಟಣಗಳು ಬೆಳೆದಂತೆ ಪಟ್ಟಣದ ಸರಹದ್ದಿನಲ್ಲಿದ್ದ ಅರಣ್ಯಗಳ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತು. ಹೀಗಾಗಿ 33% ಇದ್ದ ಅರಣ್ಯ ಪ್ರದೇಶ ಈಗ ಶೇ,18ಕ್ಕೆ ಇಳಿದಿದೆ. ಕೆಲವು ವರ್ಷಗಳ ಹಿಂದೆ ಅರಣ್ಯಪ್ರದೇಶ ಶೇ,23ರಷ್ಟಿತ್ತು. ಆಗಲೇ ಎಚ್ಚೆತ್ತುಕೊಂಡು ಸರ್ಕಾರ ಅರಣ್ಯಪ್ರದೇಶವನ್ನು ವಿಸ್ತರಿಸುವಂತಹ ಕೆಲಸ ಆರಂಭಿಸಬೇಕಾಗಿತ್ತು. ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಅರಣ್ಯ ಈ ದುರವಸ್ಥೆ ಮುಟ್ಟಿದೆ. ಲೋಕಸಭೆಯ, ಶಾಸನಸಭೆಯ ಹಲವು ಸದಸ್ಯರು ಕಲ್ಲಿನ ವ್ಯಾಪಾರ, ಮ್ಯಾಂಗನೀಸ್, ಕಬ್ಬಿಣ ಮುಂತಾದ ಲೋಹಗಳ ವ್ಯಾಪಾರದಲ್ಲಿ ತೊಡಗಿಕೊಂಡು ಅರಣ್ಯ ಪ್ರದೇಶಗಳಲ್ಲಿ, ನದಿತಟಗಳ ಪ್ರದೇಶಗಳ ಆಸುಪಾಸಿನಲ್ಲೂ ಅಕ್ರಮ ಗಣಿಗಾರಿಕೆ ಮಾಡಲುತೊಡಗಿದರು.

ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಯ್ತು ದೇಶದ ಪರಿಸ್ಥಿತಿ. ’ಹರ ಕೊಲ್ಲಲು ಪರಕಾಯ್ವನೇ’ ಎಂಬ ದುಸ್ಥಿತಿಗೆ ನಾವು ತಲುಪಿದ್ದೇವೆ. ಜನಾರ್ದನ ರೆಡ್ಡಿ, ಶ್ರೀರಾಮುಲು, ಸಂತೋಷ್ ಲಾಡ್, ಆನಂದ್ ಸಿಂಗ್ ಮುಂತಾದವರು ಗಣಿಗಾರಿಕೆಯಲ್ಲಿ ತೊಡಗಿ ಅದಿರನ್ನು ದೋಚಿದ ಪ್ರಕರಣಗಳನ್ನು ಬಯಲಿಗೆಳೆದ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು, ಬಳ್ಳಾರಿಯನ್ನೇ ಈ ಖದೀಮರು ತಮ್ಮ ವಶವರ್ತಿ ಮಾಡಿಕೊಂಡಿದ್ದರಿಂದ ಅದನ್ನು ಈ ಖದೀಮರ ರಿಪಬ್ಲಿಕ್ ಎಂದು ಕರೆದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಹಿಂದೆ ಒಮ್ಮೆ ಜನಾದನ ರೆಡ್ಡಿಯವರ ಮೇಲೆ ಮುನಿಸಿಕೊಂಡು ಬಳ್ಳಾರಿಯ ಜಿಲ್ಲಾಧಿಕಾರಿಗಳು, ಗಣಿ ಅಧಿಕಾರಿಗಳು, ಎಸ್‌ಪಿ ಎಲ್ಲರನ್ನೂ ಏಕಕಾಲಕ್ಕೆ ವರ್ಗಾವಣೆ ಮಾಡಿದರು. ಈ ವಿಷಯ ತಿಳಿದ ಜನಾರ್ದನ ರೆಡ್ಡಿಯವರು ಯಡಿಯೂರಪ್ಪನವರಿಗೆ ಫೋನ್ ಮಾಡಿ ’ಈ ಕೂಡಲೇ ನೀವು ವರ್ಗ ಮಾಡಿರುವ ಅಧಿಕಾರಿಗಳನ್ನು ಬಳ್ಳಾರಿಗೆ ವಾಪಸ್ ಕಳುಹಿಸದಿದ್ದರೆ ನೀವು ಕುರ್ಚಿ ಬಿಟ್ಟು ಇಳಿಯಬೇಕಾದೀತು’ ಎಂದು ಬೆದರಿಕೆ ಹಾಕಿದರು. ಯಡಿಯೂರಪ್ಪನವರು ಮರು ಮಾತಾಡದೆ ಆ ಅಧಿಕಾರಿಗಳ ವರ್ಗಾವಣೆ ಆರ್ಡರನ್ನು ಹಿಂಪಡೆದರು. ಜನಾದನ ರೆಡ್ಡಿಯವರು ಈ ಬಳ್ಳಾರಿ ರಿಪಬ್ಲಿಕ್ಕಿನ ಅನಭಿಷಕ್ತ ಚಕ್ರವರ್ತಿ ಆಗಿದ್ದರು.

ಈ ಲೇಖನದ ಸಾರಾಂಶ ಇಷ್ಟೇ: ಅರಣ್ಯ ಭೂಮಿ ಕಿರಿದಾಗುತ್ತಿದೆ. ಹೀಗೆ ಮುಂದುವರೆದರೆ ಅರಣ್ಯದಲ್ಲಿರುವ ಪ್ರಾಣಿಗಳು ಆಹಾರ ಹುಡುಕಿಕೊಂಡು ಗ್ರಾಮಗಳಿಗೆ, ನಗರಗಳಿಗೆ ದಾಳಿ ಇಡುತ್ತವೆ. ಮಾನವ ರಕ್ತದ ರುಚಿ ನೋಡಿದ ಮೇಲೆ ಅವು ಆಡು, ಹಸುಗಳನ್ನು ತಿನ್ನುವುದು ಬಿಟ್ಟು ಮನುಷ್ಯನ ಮಾಂಸಕ್ಕೇ ಪಳಗಿಕೊಳ್ಳುತ್ತವೆ. ಆಗ ಯಾವ ಹಳ್ಳಿಯೂ, ಪಟ್ಟಣವೂ ಸುರಕ್ಷಿತವಾಗಿರುವುದಿಲ್ಲ. ಮನುಷ್ಯ ಊರು ಬಿಟ್ಟು ಕಾಡಿಗೆ ವಲಸೆ ಹೋಗುವುದೊಂದೇ ತನಗಿರುವ ಏಕೈಕ ಮಾರ್ಗ ಎಂದು ತೀರ್ಮಾನಿಸಿದರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ.

ಈ ಅನಾಹುತ ಸಂಭವಿಸುವ ಮೊದಲೇ ಸರ್ಕಾರ ಅರಣ್ಯವನ್ನು ಉಳಿಸುವ ಕಾರ್ಯ ಕೈಗೊಂಡೀತೆ?


ಇದನ್ನೂ ಓದಿ:  ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...