Homeಅಂಕಣಗಳುಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..

ಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..

- Advertisement -
- Advertisement -

ಇತ್ತೀಚೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ’ಮರಕೊಗಾವಾತೊ ಬ್ಯಾರಿಙ’ (ಮರೆಯಲಾಗದ ಬ್ಯಾರಿಗಳು) ಎಂಬ ಗ್ರಂಥವನ್ನು ಹೊರತರುವ ನಿಟ್ಟಿನಲ್ಲಿ ಗತಿಸಿದ ಬ್ಯಾರಿ ಸಾಧಕರ ಕುರಿತಾದ ಬರಹಗಳನ್ನು ಆಹ್ವಾನಿಸಿತ್ತು. ಅಗಲಿದ ಮಹನೀಯರ ಪೈಕಿ ಬ್ಯಾರಿ ಮಹಿಳಾ ಸಾಧಕಿಯರನ್ನು ಗುರುತಿಸುವುದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಕಾರಣ ಅಂದು ಬ್ಯಾರಿ ಮಹಿಳೆಯರ ಪ್ರತಿಭೆ ನಾಲ್ಕು ಗೋಡೆಗಳ ಮಧ್ಯೆ ಬಚ್ಚಿಟ್ಟುಕೊಂಡು ಉರಿವ ಒಲೆಯ ಮುಂದೆ ಉರಿದು ಬೂದಿಯಾಗುತ್ತಿತ್ತು.

ಪಟ್ಟಿಗೆ ಪಟ್ಟಿ ಬೆಳೆಯುತ್ತಾ ಹೋದ ಬ್ಯಾರಿ ಪುರುಷರ ಮಧ್ಯೆ ಬೆರಳೆಣಿಕೆಯ ಬ್ಯಾರಿ ಮಹಿಳೆಯರ ಹೆಸರು ಮಾತ್ರ ಸೇರಿಕೊಂಡಿತ್ತು. ಅದರಲ್ಲಿದ್ದವರು ನಾಟಿ ವೈದ್ಯೆ ಮತ್ತು ಸೂಲಗಿತ್ತಿಯರು ಮಾತ್ರ. ಎಲ್ಲಾದರೂ ಅಪರೂಪದ ಮಹಿಳಾ ಸಾಧಕಿಯರು ಸಿಗಬಹುದೇ ಎಂದು ಹಿರಿಯ ಬ್ಯಾರಿ ಸ್ತ್ರೀಯೊಬ್ಬರನ್ನು ಭೇಟಿಯಾಗಿ ಕೆದಕಿದೆ. ಹೌದೌದು, ಕಟ್ಟಿಗೆ ಒಲೆಯನ್ನು ಶ್ರಮ ಪಟ್ಟು ಉರಿಸಿ, ತುಂಬು ಕುಟುಂಬಕ್ಕೆ ಅನ್ನ ಬೇಯಿಸಿ ಹಾಕುವುದು, ಹೊಲ ಗದ್ದೆಗಳಲ್ಲಿ ದುಡಿಯುವುದು, ಮನೆಗೆಲಸ, ಮಕ್ಕಳು ಇವೇ ನಮ್ಮ ಜಗತ್ತಾಗಿತ್ತು. ಇನ್ನು ಮನೆ ಹಿರಿಯರ ಮುಂದೆ ನಮ್ಮ ಮಾತಿಗೆಲ್ಲಿ ಬೆಲೆಯಿತ್ತು. ಮಹಿಳೆಯರೆಂದರೆ ಮುಸುರೆ ತಿಕ್ಕಲು, ಚಾಕರಿ ಮಾಡಲಿಕ್ಕಿರುವವರೆಂಬ ಭಾವನೆ ಅವರಿಗಿತ್ತು. ಎರಡಕ್ಷರ ಕಲಿಯಬೇಕೆಂಬ ಆಸೆ ಮನಸ್ಸಿನಲ್ಲಿದ್ರೂ ಆಡುವ ವಯಸ್ಸಿನಲ್ಲಿ ನನ್ನಪ್ಪ ಆಡು ಮೇಯಿಸಲು ಕಳಿಸಿದ್ದರು. ಅವರಿಗೂ ವಿದ್ಯೆಯಿರಲಿಲ್ಲ.

ಹೆಣ್ಮಕ್ಕಳು ಶಾಲೆ ಕಲಿಯುವುದು ನಮ್ಮ ಧರ್ಮಕ್ಕೆ ವಿರುದ್ಧವಾದುದು ಎಂಬ ವಾದ ಅವರದಾಗಿತ್ತು. ಓಟಿನ ದಿನ ಮಾತ್ರ ನಾನು ಶಾಲೆಯ ಮೆಟ್ಟಿಲು ಹತ್ತುತ್ತಿದ್ದುದು ಎಂದು ಜೋರಾಗಿ ನಗುತ್ತಾ, ನಿನಗೆ ಸೂಲಗಿತ್ತಿಯರು, ನಾಟಿ ವೈದ್ಯೆಯರು ಬಿಟ್ಟರೆ ಬೇರೆ ಯಾರೂ ಸಿಗಲಿಕ್ಕಿಲ್ಲ ಮಗಾ ಎಂದರು. ಬ್ಯಾರಿ ಮುಸ್ಲಿಮ್ ಹೆಣ್ಮಕ್ಕಳ ಈಗಿನ ಶೈಕ್ಷಣಿಕ ಪ್ರಗತಿಯನ್ನೂ, ಸಾಧನೆಗಳನ್ನೂ ಗಮನಿಸುವಾಗ ಹೆಣ್ಮಕ್ಕಳ ಶಿಕ್ಷಣದ ಮಹತ್ವವನ್ನು ಬ್ಯಾರಿ ಸಮುದಾಯವು ತಡವಾಗಿಯಾದರೂ ಅರ್ಥೈಸಿಕೊಂಡಿತು ಎನ್ನುವುದೇ ಸಮಾಧಾನದ ಸಂಗತಿ.

ಬ್ಯಾರಿ ಗಂಡುಮಕ್ಕಳೇ ಶಾಲೆಯ ಹೊಸ್ತಿಲು ತುಳಿಯದಿದ್ದ ಕಾಲದಲ್ಲಿ ಮನೆಯೊಳಗೆ ಯಾವುದೇ ಸ್ಥಾನಮಾನ ದಕ್ಕದ ಹೆಣ್ಮಕ್ಕಳು ಮನೆಯಿಂದ ಹೊರಗಿಳಿದು ಶಿಕ್ಷಣ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಹೆಣ್ಮಕ್ಕಳು ಮನೆಯಿಂದ ಹೊರಗಿಳಿದರೆ ಹಾಳಾಗುತ್ತಾರೆ, ಕುಟುಂಬದ ಮಾನ ಮರ್ಯಾದೆ ಹೋಗುತ್ತದೆ ಎಂಬ ಭಯವೂ, ಅಜ್ಞಾನವೂ ಹಿರಿಯರಲ್ಲಿತ್ತು.

ಧಾರ್ಮಿಕ ಶಿಕ್ಷಣ ನೀಡಲು ಇಸ್ಲಾಮೀ ವಿದ್ವಾಂಸರು ಕೇರಳದಿಂದ ಮಂಗಳೂರಿಗೆ ಬರುತ್ತಿದ್ದುದರಿಂದ ಧಾರ್ಮಿಕವಾಗಿ ಕರ್ನಾಟಕದ ಇತರ ಭಾಗಗಳಿಗಿಂತ ಬ್ಯಾರಿ ಮುಸ್ಲಿಮರು ಮಲಬಾರ್‌ಗೆ ಹೆಚ್ಚು ನಿಕಟರಾಗಿದ್ದರು.

ಮಲಬಾರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್ ಉಲಮಾಗಳು ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದರು. ಗಾಂಧೀಜಿಯವರು ಬ್ರಿಟಿಷರನ್ನು ಬಹಿಷ್ಕರಿಸುವ ಸಲುವಾಗಿ ಉಪ್ಪಿನ ಸತ್ಯಾಗ್ರಹವನ್ನು ಕೈಗೊಂಡಂತೆ, ಖಾದಿಯನ್ನು ಉತ್ತೇಜಿಸಿದಂತೆ ಈ ಉಲಮಾಗಳೂ ಬ್ರಿಟಿಷರನ್ನು ಭಾರತದಿಂದ ಓಡಿಸುವ ಸಲುವಾಗಿ ಅವರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಫತ್ವಾ ಹೊರಡಿಸಿದರು. ಇದು ಯಾವ ಮಟ್ಟಕ್ಕೆ ತಲುಪಿತೆಂದರೆ ಉಲಮಾಗಳನ್ನು ಅನುಸರಿಸುವವರೆಲ್ಲರೂ ಇಂಗ್ಲಿಷ್ ಭಾಷೆ ಹಾಗೂ ಅವರ ಶಿಕ್ಷಣ ನೀತಿಯನ್ನು ವಿರೋಧಿಸಿದರು.

ಬ್ಯಾರಿ ಮುಸ್ಲಿಮರು ಅಕ್ಷರ ವಂಚಿತರಾಗಲು ಇದೂ ಒಂದು ಕಾರಣವೆನ್ನಬಹುದು.

ಯಾವಾಗ ಇಲ್ಲಿನ ಮುಸ್ಲಿಮರಲ್ಲಿ ಗಲ್ಫ್ ಉದ್ಯೋಗಿಗಳ ಸಂಖ್ಯೆ ಏರತೊಡಗಿತೋ ಆಗ ಹೆಣ್ಮಕ್ಕಳಿಗೂ ನಾಲ್ಕಕ್ಷರ ತಿಳಿದಿರಬೇಕು ಎಂಬ ಪ್ರಜ್ಞೆ ಮನೆ ಹಿರಿಯರಲ್ಲಿ ಮೂಡತೊಡಗಿತು. ದೂರದೂರಿನ ಗಂಡನಿಗೆ ಪತ್ರ ಬರೆಯಲೋ, ಓದಲೋ ಅಂಚೆ ಪೇದೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ಬ್ಯಾರಿ ಸಮುದಾಯವು ಮಹಿಳೆಯರಿಗೂ ಅಲ್ಪ ಸ್ವಲ್ಪ ಶಿಕ್ಷಣ ನೀಡಲು ಮುಂದೆ ಬಂತು. ಆದಾಗ್ಯೂ ಬೀಡಿಯ ಸೂಪು ಮಡಿಲಿಗೇರಿಸುವುದನ್ನು ತಪ್ಪಿಸಲು ಆ ದಿನಗಳಲ್ಲಿ ಮಹಿಳೆಯರಿಂದ ಸಾಧ್ಯವಾಗಲೇ ಇಲ್ಲ. ತಮಾಷೆಯ ವಿಚಾರವೇನೆಂದರೆ, ಮನೆ ಹಿರಿಯರು ವೈದ್ಯರು ಬರೆದುಕೊಟ್ಟ ಔಷಧಿ ಚೀಟಿಯನ್ನು ಮನೆ ಹೆಣ್ಮಕ್ಕಳಿಗೆ ತೋರಿಸಿ ಏನು ಮದ್ದು ಬರೆದಿರುವರೆಂದು ಓದಿ ಹೇಳಲು ಹೇಳುತ್ತಿದ್ದರಂತೆ. ಗೊತ್ತಿಲ್ಲವೆಂದರೆ ಮತ್ತೆ ಶಾಲೆಗೆ ಹೋಗಿ ಕಲಿತದ್ದಾದರೂ ಏನು ಎಂದು ಗದರಿಸುತ್ತಿದ್ದರಂತೆ. ಕೆಲವೊಂದು ವೈದ್ಯರು ಬರೆದ ಚೀಟಿಯನ್ನು ವಿದ್ಯಾವಂತರಿಂದಲೇ ಓದಲಾಗುವುದಿಲ್ಲ, ಇನ್ನು ಎರಡನೇ ತರಗತಿ ಹೆಚ್ಚೆಂದರೆ ಐದನೇ ತರಗತಿಯವರೆಗೆ ಓದಿದ ಅವರೆಲ್ಲಿ ಓದಬೇಕು!

ಹೀಗೆ ಒಮ್ಮೆ ತೆರೆದ ಅವಕಾಶದ ಬಾಗಿಲನ್ನು ಬ್ಯಾರಿ ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡರು. ಹಂತಹಂತವಾಗಿ ಪ್ರಗತಿ ಸಾಧಿಸಿದ ಶಿಕ್ಷಣವು ಏಳನೇ ತರಗತಿಯವರೆಗೆ ಬಂದು ನಿಂತಿತು. ಆ ಹೊತ್ತಿಗಾಗಲೇ ಬ್ಯಾರಿ ತಾಯಂದಿರು ನಮ್ಮ ಮಕ್ಕಳು ನಮ್ಮಂತಾಗಬಾರದು, ಅವರು ಶಿಕ್ಷಣದಿಂದ ವಂಚಿತರಾಗಬಾರದು. ಹೆಣ್ಮಕ್ಕಳು ಅಡುಗೆ ಕೋಣೆಯೊಳಗೆ ಬಂಧಿಯಾಗಬಾರದು ಎಂಬ ಗಟ್ಟಿ ನಿರ್ಧಾರ ತಾಳಿದ್ದರು.

1989ರಲ್ಲಿ ಸಮುದಾಯದ ಶೈಕ್ಷಣಿಕ ಅಭ್ಯುದಯಕ್ಕಾಗಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ’ಜಮಿಯ್ಯತುಲ್ ಫಲಾಹ್’ ಸಂಸ್ಥೆಯು ಸಮುದಾಯದ ಮನವೊಲಿಸಿ ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿತು. ಸುಮಾರು ಹತ್ತು ವರ್ಷಗಳ ಬಳಿಕ ಅದರ ಫಲ ದೊರಕತೊಡಗಿತು. 2005ರಲ್ಲಿ ಸ್ಥಾಪನೆಗೊಂಡ ಟಿ.ಆರ್.ಎಫ್ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಯಲ್ಲಿ ಕುಳಿತು ಬೀಡಿಕಟ್ಟುತ್ತಿದ್ದ ಹೆಣ್ಮಕ್ಕಳಲ್ಲಿ ಮತ್ತೆ ಹೊಸ ಕನಸನ್ನು ಬಿತ್ತಿ ಅವರಿಗೆ ನೇರ ಎಸ್‌ಎಸ್‌ಎಲ್‌ಸಿ/ ಪಿಯುಸಿ ತರಬೇತಿಯನ್ನು ನೀಡುವ ಸಲುವಾಗಿ ಮರಳಿ ಬಾ ಶಾಲೆಗೆ ಯೋಜನೆಯನ್ನು ಹಾಕಿ ಯಶಸ್ವಿಯಾಯಿತು.

ಉತ್ತಮ ಗುಣಮಟ್ಟದ ಶಿಕ್ಷಣವು ಹೆತ್ತವರು ತನ್ನ ಮಕ್ಕಳಿಗೆ ಕೊಡುವ ಅತ್ಯಮೂಲ್ಯ ಉಡುಗೊರೆಯಾಗಿದೆ ಎಂದಿದ್ದಾರೆ ಪ್ರವಾದಿ ಮುಹಮ್ಮದ್(ಸ.ಅ). ಕುರ್‌ಆನ್ ಅವತೀರ್ಣಗೊಂಡಾಗ ಬಂದ ಮೊದಲ ಪದವೇ ’ಇಖ್‌ರಅ’ (ಓದು) ಎಂಬುದಾಗಿದೆ. ಈ ವಚನದ ಅರ್ಥವನ್ನು ಸರಿಯಾಗಿ ಗ್ರಹಿಸಿ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಒಂದೊಮ್ಮೆ ಸೋತಿದ್ದ ಉಲಮಾ ವರ್ಗವೇ ಇಂದು ಮಹಿಳೆಯರಿಗಾಗಿ ಸಾಲು ಸಾಲಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯ ದೀವಟಿಗೆ ಹಿಡಿದಿದೆ.

ಯಾವಾಗ ಬ್ಯಾರಿ ಹುಡುಗಿಯರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ಉತ್ತುಂಗಕ್ಕೇರತೊಡಗಿದರೋ ಅದು ಮೇಲ್ಜಾತಿಯವರ ಕಣ್ಣಿಗೆ ಕುಕ್ಕತೊಡಗಿತು. ಸುಮಾರು ಹದಿನೆಂಟು ವರ್ಷಗಳ ಹಿಂದೆ ವಾರ್ತಾಭಾರತಿ ಪತ್ರಿಕೆಯ ರಂಗ ಪ್ರವೇಶ ಎಲೆಮರೆಯ ಪ್ರತಿಭಾನ್ವಿತ ಬ್ಯಾರಿ ಹೆಣ್ಮಕ್ಕಳನ್ನು, ರ್‍ಯಾಂಕ್ ವಿಜೇತರನ್ನು ಮುಖ್ಯವಾಹಿನಿಗೆ ಪರಿಚಯಿಸಿತು. ರ್‍ಯಾಂಕುಗಳೆಂದರೆ ಮೇಲ್ಜಾತಿಯ ಸ್ವತ್ತೆಂಬ ನಂಬಿಕೆಯನ್ನು ಬ್ಯಾರಿ ಹುಡುಗಿಯರು ಹುಸಿಗೊಳಿಸಿದರು. ತಮಗೆ ಪ್ರತಿಸ್ಪರ್ಧಿಗಳು ಹುಟ್ಟಿದ್ದನ್ನು ಕಂಡು ಅವರಿಗೆ ಸಹಿಸಲಾಗಲೇ ಇಲ್ಲ. ನಾನು ಪ್ರಾಥಮಿಕ ತರಗತಿಯಲ್ಲಿ ಕಲಿಯುತ್ತಿದ್ದಾಗ ನನಗೊಬ್ಬಳು ಬ್ರಾಹ್ಮಣ ಗೆಳತಿಯಿದ್ದಳು. ಪ್ರತೀ ಬಾರಿ ಪರೀಕ್ಷೆಯಲ್ಲಿ ಅವಳಿಗಿಂತ ಒಂದೆರಡು ಅಂಕಗಳ ಅಂತರದಲ್ಲಿ ನಾನು ತರಗತಿಗೆ ಮೊದಲಿಗಳಾಗುತ್ತಿದ್ದೆ. ಇದನ್ನು ಸಹಿಸದ ಬ್ರಾಹ್ಮಣ ಶಿಕ್ಷಕಿಯೊಬ್ಬರು ನಂತರದ ದಿನಗಳಲ್ಲಿ ಅವಳಿಗೆ ಪರೀಕ್ಷೆಯಲ್ಲಿ ಉತ್ತರಗಳನ್ನು ಹೇಳಿಕೊಟ್ಟು ತರಗತಿಗೆ ಮೊದಲಿಗಳನ್ನಾಗಿ ಮಾಡಿದ ಘಟನೆ ನನ್ನ ಮನಸ್ಸಿನಿಂದ ಮಾಸುವುದೇ ಇಲ್ಲ. ಇದು ನನ್ನ ವೈಯಕ್ತಿಕ ಅನುಭವ.

ಅಲ್ಲಿಯವರೆಗೆ ನಿಮ್ಮ ಹೆಣ್ಮಕ್ಕಳೇಕೆ ಶಾಲೆ ಕಲಿಯುತ್ತಿಲ್ಲ ಎಂದು ಕೇಳುತ್ತಿದ್ದವರಿಗೆ, ಆಧುನಿಕ ಶಿಕ್ಷಣ ರಂಗದಲ್ಲಿ ಆಕೆ ತನ್ನ ಹೆಜ್ಜೆ ಗುರುತು ಮೂಡಿಸತೊಡಗಿದಾಗ ಸ್ಕಾರ್ಫ್, ಬುರ್ಖಾ ಕಣ್ಣು ಕುಕ್ಕತೊಡಗಿತು. ಆ ಮೂಲಕ ಅವಳ ಮನೋಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವೂ ನಡೆಯಿತು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಅವಳಿಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಛಾಪು ಮೂಡಿಸತೊಡಗಿದ್ದಾಳೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ ಶೇ.50ರಷ್ಟು ಮಂದಿ ತಮ್ಮ ಹೆಣ್ಮಕ್ಕಳನ್ನು ಕಾಲೇಜುಗಳಿಗೆ ಕಳಿಸುವ ಉದ್ದೇಶ ಮದುವೆಗೆ ಉತ್ತಮ ಸಂಬಂಧ ಕೂಡಿ ಬರಲಿ ಎಂದಾಗಿದೆ. ಸಂಬಂಧ ಕೂಡಿಬರುವ ತನಕ ಹೆಣ್ಮಕ್ಕಳು ಕಲಿಯಲಿ ಎನ್ನುವವರೂ ಇದ್ದಾರೆ. ಈ ಕಾರಣದಿಂದಾಗಿ ಪರೀಕ್ಷೆ ಬರೆಯುವ ಮುನ್ನ ಅರ್ಧಕ್ಕೇ ಶಿಕ್ಷಣವನ್ನು ಮೊಟಕುಗೊಳಿಸಿ ವೈವಾಹಿಕ ಜೀವನಕ್ಕೆ ಕಾಲಿಡುವ ಹೆಣ್ಮಕ್ಕಳೂ ಇದ್ದಾರೆ. ಶಿಕ್ಷಣ ಪಡೆಯುವುದರ ಉದ್ದೇಶ ಇದೊಂದೇ ಆಗಿರಬಾರದು. ಕಲಿತು ಉದ್ಯೋಗ ಗಿಟ್ಟಿಸಿಕೊಂಡ ಹೆಣ್ಣು, ಮದುವೆಯ ನಂತರ ಕೆಲಸ ಬಿಟ್ಟರೆ ಅವಳನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡು ಹೆಣ್ಮಕ್ಕಳು ಎಷ್ಟು ಕಲಿತರೂ ಅಷ್ಟೇ, ಕೊನೆಗೂ ಒಲೆಯ ಮುಂದೆ ನಿಲ್ಲಲೇಬೇಕು ಎಂಬ ನಿಲುವು ತಾಳಿಬಿಡುತ್ತಾರೆ. ಹೊರಗಡೆ ದುಡಿಯುವುದು ಆಕೆಯ ಆಯ್ಕೆಯೇ ಹೊರತು ಅದು ಕಡ್ಡಾಯವೇನಲ್ಲ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ.

ಈ ನಿಟ್ಟಿನಲ್ಲಿ ನಮ್ಮೊಳಗೆ ಇನ್ನಷ್ಟು ಬದಲಾವಣೆಯ ಅಗತ್ಯವಿದೆ.


ಇದನ್ನೂ ಓದಿ: ಎಲೆಮರೆಯಿಂದ: ತಳ ಮಟ್ಟದ ಆರ್ಥಿಕ ಸ್ವಾವಲಂಬನೆ ಮತ್ತು ಮಂಗಳೂರಿನ ಟಿ.ಆರ್.ಎಫ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...