Homeಅಂಕಣಗಳುಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..

ಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..

- Advertisement -
- Advertisement -

ಇತ್ತೀಚೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ’ಮರಕೊಗಾವಾತೊ ಬ್ಯಾರಿಙ’ (ಮರೆಯಲಾಗದ ಬ್ಯಾರಿಗಳು) ಎಂಬ ಗ್ರಂಥವನ್ನು ಹೊರತರುವ ನಿಟ್ಟಿನಲ್ಲಿ ಗತಿಸಿದ ಬ್ಯಾರಿ ಸಾಧಕರ ಕುರಿತಾದ ಬರಹಗಳನ್ನು ಆಹ್ವಾನಿಸಿತ್ತು. ಅಗಲಿದ ಮಹನೀಯರ ಪೈಕಿ ಬ್ಯಾರಿ ಮಹಿಳಾ ಸಾಧಕಿಯರನ್ನು ಗುರುತಿಸುವುದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಕಾರಣ ಅಂದು ಬ್ಯಾರಿ ಮಹಿಳೆಯರ ಪ್ರತಿಭೆ ನಾಲ್ಕು ಗೋಡೆಗಳ ಮಧ್ಯೆ ಬಚ್ಚಿಟ್ಟುಕೊಂಡು ಉರಿವ ಒಲೆಯ ಮುಂದೆ ಉರಿದು ಬೂದಿಯಾಗುತ್ತಿತ್ತು.

ಪಟ್ಟಿಗೆ ಪಟ್ಟಿ ಬೆಳೆಯುತ್ತಾ ಹೋದ ಬ್ಯಾರಿ ಪುರುಷರ ಮಧ್ಯೆ ಬೆರಳೆಣಿಕೆಯ ಬ್ಯಾರಿ ಮಹಿಳೆಯರ ಹೆಸರು ಮಾತ್ರ ಸೇರಿಕೊಂಡಿತ್ತು. ಅದರಲ್ಲಿದ್ದವರು ನಾಟಿ ವೈದ್ಯೆ ಮತ್ತು ಸೂಲಗಿತ್ತಿಯರು ಮಾತ್ರ. ಎಲ್ಲಾದರೂ ಅಪರೂಪದ ಮಹಿಳಾ ಸಾಧಕಿಯರು ಸಿಗಬಹುದೇ ಎಂದು ಹಿರಿಯ ಬ್ಯಾರಿ ಸ್ತ್ರೀಯೊಬ್ಬರನ್ನು ಭೇಟಿಯಾಗಿ ಕೆದಕಿದೆ. ಹೌದೌದು, ಕಟ್ಟಿಗೆ ಒಲೆಯನ್ನು ಶ್ರಮ ಪಟ್ಟು ಉರಿಸಿ, ತುಂಬು ಕುಟುಂಬಕ್ಕೆ ಅನ್ನ ಬೇಯಿಸಿ ಹಾಕುವುದು, ಹೊಲ ಗದ್ದೆಗಳಲ್ಲಿ ದುಡಿಯುವುದು, ಮನೆಗೆಲಸ, ಮಕ್ಕಳು ಇವೇ ನಮ್ಮ ಜಗತ್ತಾಗಿತ್ತು. ಇನ್ನು ಮನೆ ಹಿರಿಯರ ಮುಂದೆ ನಮ್ಮ ಮಾತಿಗೆಲ್ಲಿ ಬೆಲೆಯಿತ್ತು. ಮಹಿಳೆಯರೆಂದರೆ ಮುಸುರೆ ತಿಕ್ಕಲು, ಚಾಕರಿ ಮಾಡಲಿಕ್ಕಿರುವವರೆಂಬ ಭಾವನೆ ಅವರಿಗಿತ್ತು. ಎರಡಕ್ಷರ ಕಲಿಯಬೇಕೆಂಬ ಆಸೆ ಮನಸ್ಸಿನಲ್ಲಿದ್ರೂ ಆಡುವ ವಯಸ್ಸಿನಲ್ಲಿ ನನ್ನಪ್ಪ ಆಡು ಮೇಯಿಸಲು ಕಳಿಸಿದ್ದರು. ಅವರಿಗೂ ವಿದ್ಯೆಯಿರಲಿಲ್ಲ.

ಹೆಣ್ಮಕ್ಕಳು ಶಾಲೆ ಕಲಿಯುವುದು ನಮ್ಮ ಧರ್ಮಕ್ಕೆ ವಿರುದ್ಧವಾದುದು ಎಂಬ ವಾದ ಅವರದಾಗಿತ್ತು. ಓಟಿನ ದಿನ ಮಾತ್ರ ನಾನು ಶಾಲೆಯ ಮೆಟ್ಟಿಲು ಹತ್ತುತ್ತಿದ್ದುದು ಎಂದು ಜೋರಾಗಿ ನಗುತ್ತಾ, ನಿನಗೆ ಸೂಲಗಿತ್ತಿಯರು, ನಾಟಿ ವೈದ್ಯೆಯರು ಬಿಟ್ಟರೆ ಬೇರೆ ಯಾರೂ ಸಿಗಲಿಕ್ಕಿಲ್ಲ ಮಗಾ ಎಂದರು. ಬ್ಯಾರಿ ಮುಸ್ಲಿಮ್ ಹೆಣ್ಮಕ್ಕಳ ಈಗಿನ ಶೈಕ್ಷಣಿಕ ಪ್ರಗತಿಯನ್ನೂ, ಸಾಧನೆಗಳನ್ನೂ ಗಮನಿಸುವಾಗ ಹೆಣ್ಮಕ್ಕಳ ಶಿಕ್ಷಣದ ಮಹತ್ವವನ್ನು ಬ್ಯಾರಿ ಸಮುದಾಯವು ತಡವಾಗಿಯಾದರೂ ಅರ್ಥೈಸಿಕೊಂಡಿತು ಎನ್ನುವುದೇ ಸಮಾಧಾನದ ಸಂಗತಿ.

ಬ್ಯಾರಿ ಗಂಡುಮಕ್ಕಳೇ ಶಾಲೆಯ ಹೊಸ್ತಿಲು ತುಳಿಯದಿದ್ದ ಕಾಲದಲ್ಲಿ ಮನೆಯೊಳಗೆ ಯಾವುದೇ ಸ್ಥಾನಮಾನ ದಕ್ಕದ ಹೆಣ್ಮಕ್ಕಳು ಮನೆಯಿಂದ ಹೊರಗಿಳಿದು ಶಿಕ್ಷಣ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಹೆಣ್ಮಕ್ಕಳು ಮನೆಯಿಂದ ಹೊರಗಿಳಿದರೆ ಹಾಳಾಗುತ್ತಾರೆ, ಕುಟುಂಬದ ಮಾನ ಮರ್ಯಾದೆ ಹೋಗುತ್ತದೆ ಎಂಬ ಭಯವೂ, ಅಜ್ಞಾನವೂ ಹಿರಿಯರಲ್ಲಿತ್ತು.

ಧಾರ್ಮಿಕ ಶಿಕ್ಷಣ ನೀಡಲು ಇಸ್ಲಾಮೀ ವಿದ್ವಾಂಸರು ಕೇರಳದಿಂದ ಮಂಗಳೂರಿಗೆ ಬರುತ್ತಿದ್ದುದರಿಂದ ಧಾರ್ಮಿಕವಾಗಿ ಕರ್ನಾಟಕದ ಇತರ ಭಾಗಗಳಿಗಿಂತ ಬ್ಯಾರಿ ಮುಸ್ಲಿಮರು ಮಲಬಾರ್‌ಗೆ ಹೆಚ್ಚು ನಿಕಟರಾಗಿದ್ದರು.

ಮಲಬಾರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್ ಉಲಮಾಗಳು ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದರು. ಗಾಂಧೀಜಿಯವರು ಬ್ರಿಟಿಷರನ್ನು ಬಹಿಷ್ಕರಿಸುವ ಸಲುವಾಗಿ ಉಪ್ಪಿನ ಸತ್ಯಾಗ್ರಹವನ್ನು ಕೈಗೊಂಡಂತೆ, ಖಾದಿಯನ್ನು ಉತ್ತೇಜಿಸಿದಂತೆ ಈ ಉಲಮಾಗಳೂ ಬ್ರಿಟಿಷರನ್ನು ಭಾರತದಿಂದ ಓಡಿಸುವ ಸಲುವಾಗಿ ಅವರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಫತ್ವಾ ಹೊರಡಿಸಿದರು. ಇದು ಯಾವ ಮಟ್ಟಕ್ಕೆ ತಲುಪಿತೆಂದರೆ ಉಲಮಾಗಳನ್ನು ಅನುಸರಿಸುವವರೆಲ್ಲರೂ ಇಂಗ್ಲಿಷ್ ಭಾಷೆ ಹಾಗೂ ಅವರ ಶಿಕ್ಷಣ ನೀತಿಯನ್ನು ವಿರೋಧಿಸಿದರು.

ಬ್ಯಾರಿ ಮುಸ್ಲಿಮರು ಅಕ್ಷರ ವಂಚಿತರಾಗಲು ಇದೂ ಒಂದು ಕಾರಣವೆನ್ನಬಹುದು.

ಯಾವಾಗ ಇಲ್ಲಿನ ಮುಸ್ಲಿಮರಲ್ಲಿ ಗಲ್ಫ್ ಉದ್ಯೋಗಿಗಳ ಸಂಖ್ಯೆ ಏರತೊಡಗಿತೋ ಆಗ ಹೆಣ್ಮಕ್ಕಳಿಗೂ ನಾಲ್ಕಕ್ಷರ ತಿಳಿದಿರಬೇಕು ಎಂಬ ಪ್ರಜ್ಞೆ ಮನೆ ಹಿರಿಯರಲ್ಲಿ ಮೂಡತೊಡಗಿತು. ದೂರದೂರಿನ ಗಂಡನಿಗೆ ಪತ್ರ ಬರೆಯಲೋ, ಓದಲೋ ಅಂಚೆ ಪೇದೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ಬ್ಯಾರಿ ಸಮುದಾಯವು ಮಹಿಳೆಯರಿಗೂ ಅಲ್ಪ ಸ್ವಲ್ಪ ಶಿಕ್ಷಣ ನೀಡಲು ಮುಂದೆ ಬಂತು. ಆದಾಗ್ಯೂ ಬೀಡಿಯ ಸೂಪು ಮಡಿಲಿಗೇರಿಸುವುದನ್ನು ತಪ್ಪಿಸಲು ಆ ದಿನಗಳಲ್ಲಿ ಮಹಿಳೆಯರಿಂದ ಸಾಧ್ಯವಾಗಲೇ ಇಲ್ಲ. ತಮಾಷೆಯ ವಿಚಾರವೇನೆಂದರೆ, ಮನೆ ಹಿರಿಯರು ವೈದ್ಯರು ಬರೆದುಕೊಟ್ಟ ಔಷಧಿ ಚೀಟಿಯನ್ನು ಮನೆ ಹೆಣ್ಮಕ್ಕಳಿಗೆ ತೋರಿಸಿ ಏನು ಮದ್ದು ಬರೆದಿರುವರೆಂದು ಓದಿ ಹೇಳಲು ಹೇಳುತ್ತಿದ್ದರಂತೆ. ಗೊತ್ತಿಲ್ಲವೆಂದರೆ ಮತ್ತೆ ಶಾಲೆಗೆ ಹೋಗಿ ಕಲಿತದ್ದಾದರೂ ಏನು ಎಂದು ಗದರಿಸುತ್ತಿದ್ದರಂತೆ. ಕೆಲವೊಂದು ವೈದ್ಯರು ಬರೆದ ಚೀಟಿಯನ್ನು ವಿದ್ಯಾವಂತರಿಂದಲೇ ಓದಲಾಗುವುದಿಲ್ಲ, ಇನ್ನು ಎರಡನೇ ತರಗತಿ ಹೆಚ್ಚೆಂದರೆ ಐದನೇ ತರಗತಿಯವರೆಗೆ ಓದಿದ ಅವರೆಲ್ಲಿ ಓದಬೇಕು!

ಹೀಗೆ ಒಮ್ಮೆ ತೆರೆದ ಅವಕಾಶದ ಬಾಗಿಲನ್ನು ಬ್ಯಾರಿ ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡರು. ಹಂತಹಂತವಾಗಿ ಪ್ರಗತಿ ಸಾಧಿಸಿದ ಶಿಕ್ಷಣವು ಏಳನೇ ತರಗತಿಯವರೆಗೆ ಬಂದು ನಿಂತಿತು. ಆ ಹೊತ್ತಿಗಾಗಲೇ ಬ್ಯಾರಿ ತಾಯಂದಿರು ನಮ್ಮ ಮಕ್ಕಳು ನಮ್ಮಂತಾಗಬಾರದು, ಅವರು ಶಿಕ್ಷಣದಿಂದ ವಂಚಿತರಾಗಬಾರದು. ಹೆಣ್ಮಕ್ಕಳು ಅಡುಗೆ ಕೋಣೆಯೊಳಗೆ ಬಂಧಿಯಾಗಬಾರದು ಎಂಬ ಗಟ್ಟಿ ನಿರ್ಧಾರ ತಾಳಿದ್ದರು.

1989ರಲ್ಲಿ ಸಮುದಾಯದ ಶೈಕ್ಷಣಿಕ ಅಭ್ಯುದಯಕ್ಕಾಗಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ’ಜಮಿಯ್ಯತುಲ್ ಫಲಾಹ್’ ಸಂಸ್ಥೆಯು ಸಮುದಾಯದ ಮನವೊಲಿಸಿ ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿತು. ಸುಮಾರು ಹತ್ತು ವರ್ಷಗಳ ಬಳಿಕ ಅದರ ಫಲ ದೊರಕತೊಡಗಿತು. 2005ರಲ್ಲಿ ಸ್ಥಾಪನೆಗೊಂಡ ಟಿ.ಆರ್.ಎಫ್ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಯಲ್ಲಿ ಕುಳಿತು ಬೀಡಿಕಟ್ಟುತ್ತಿದ್ದ ಹೆಣ್ಮಕ್ಕಳಲ್ಲಿ ಮತ್ತೆ ಹೊಸ ಕನಸನ್ನು ಬಿತ್ತಿ ಅವರಿಗೆ ನೇರ ಎಸ್‌ಎಸ್‌ಎಲ್‌ಸಿ/ ಪಿಯುಸಿ ತರಬೇತಿಯನ್ನು ನೀಡುವ ಸಲುವಾಗಿ ಮರಳಿ ಬಾ ಶಾಲೆಗೆ ಯೋಜನೆಯನ್ನು ಹಾಕಿ ಯಶಸ್ವಿಯಾಯಿತು.

ಉತ್ತಮ ಗುಣಮಟ್ಟದ ಶಿಕ್ಷಣವು ಹೆತ್ತವರು ತನ್ನ ಮಕ್ಕಳಿಗೆ ಕೊಡುವ ಅತ್ಯಮೂಲ್ಯ ಉಡುಗೊರೆಯಾಗಿದೆ ಎಂದಿದ್ದಾರೆ ಪ್ರವಾದಿ ಮುಹಮ್ಮದ್(ಸ.ಅ). ಕುರ್‌ಆನ್ ಅವತೀರ್ಣಗೊಂಡಾಗ ಬಂದ ಮೊದಲ ಪದವೇ ’ಇಖ್‌ರಅ’ (ಓದು) ಎಂಬುದಾಗಿದೆ. ಈ ವಚನದ ಅರ್ಥವನ್ನು ಸರಿಯಾಗಿ ಗ್ರಹಿಸಿ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಒಂದೊಮ್ಮೆ ಸೋತಿದ್ದ ಉಲಮಾ ವರ್ಗವೇ ಇಂದು ಮಹಿಳೆಯರಿಗಾಗಿ ಸಾಲು ಸಾಲಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯ ದೀವಟಿಗೆ ಹಿಡಿದಿದೆ.

ಯಾವಾಗ ಬ್ಯಾರಿ ಹುಡುಗಿಯರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ಉತ್ತುಂಗಕ್ಕೇರತೊಡಗಿದರೋ ಅದು ಮೇಲ್ಜಾತಿಯವರ ಕಣ್ಣಿಗೆ ಕುಕ್ಕತೊಡಗಿತು. ಸುಮಾರು ಹದಿನೆಂಟು ವರ್ಷಗಳ ಹಿಂದೆ ವಾರ್ತಾಭಾರತಿ ಪತ್ರಿಕೆಯ ರಂಗ ಪ್ರವೇಶ ಎಲೆಮರೆಯ ಪ್ರತಿಭಾನ್ವಿತ ಬ್ಯಾರಿ ಹೆಣ್ಮಕ್ಕಳನ್ನು, ರ್‍ಯಾಂಕ್ ವಿಜೇತರನ್ನು ಮುಖ್ಯವಾಹಿನಿಗೆ ಪರಿಚಯಿಸಿತು. ರ್‍ಯಾಂಕುಗಳೆಂದರೆ ಮೇಲ್ಜಾತಿಯ ಸ್ವತ್ತೆಂಬ ನಂಬಿಕೆಯನ್ನು ಬ್ಯಾರಿ ಹುಡುಗಿಯರು ಹುಸಿಗೊಳಿಸಿದರು. ತಮಗೆ ಪ್ರತಿಸ್ಪರ್ಧಿಗಳು ಹುಟ್ಟಿದ್ದನ್ನು ಕಂಡು ಅವರಿಗೆ ಸಹಿಸಲಾಗಲೇ ಇಲ್ಲ. ನಾನು ಪ್ರಾಥಮಿಕ ತರಗತಿಯಲ್ಲಿ ಕಲಿಯುತ್ತಿದ್ದಾಗ ನನಗೊಬ್ಬಳು ಬ್ರಾಹ್ಮಣ ಗೆಳತಿಯಿದ್ದಳು. ಪ್ರತೀ ಬಾರಿ ಪರೀಕ್ಷೆಯಲ್ಲಿ ಅವಳಿಗಿಂತ ಒಂದೆರಡು ಅಂಕಗಳ ಅಂತರದಲ್ಲಿ ನಾನು ತರಗತಿಗೆ ಮೊದಲಿಗಳಾಗುತ್ತಿದ್ದೆ. ಇದನ್ನು ಸಹಿಸದ ಬ್ರಾಹ್ಮಣ ಶಿಕ್ಷಕಿಯೊಬ್ಬರು ನಂತರದ ದಿನಗಳಲ್ಲಿ ಅವಳಿಗೆ ಪರೀಕ್ಷೆಯಲ್ಲಿ ಉತ್ತರಗಳನ್ನು ಹೇಳಿಕೊಟ್ಟು ತರಗತಿಗೆ ಮೊದಲಿಗಳನ್ನಾಗಿ ಮಾಡಿದ ಘಟನೆ ನನ್ನ ಮನಸ್ಸಿನಿಂದ ಮಾಸುವುದೇ ಇಲ್ಲ. ಇದು ನನ್ನ ವೈಯಕ್ತಿಕ ಅನುಭವ.

ಅಲ್ಲಿಯವರೆಗೆ ನಿಮ್ಮ ಹೆಣ್ಮಕ್ಕಳೇಕೆ ಶಾಲೆ ಕಲಿಯುತ್ತಿಲ್ಲ ಎಂದು ಕೇಳುತ್ತಿದ್ದವರಿಗೆ, ಆಧುನಿಕ ಶಿಕ್ಷಣ ರಂಗದಲ್ಲಿ ಆಕೆ ತನ್ನ ಹೆಜ್ಜೆ ಗುರುತು ಮೂಡಿಸತೊಡಗಿದಾಗ ಸ್ಕಾರ್ಫ್, ಬುರ್ಖಾ ಕಣ್ಣು ಕುಕ್ಕತೊಡಗಿತು. ಆ ಮೂಲಕ ಅವಳ ಮನೋಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವೂ ನಡೆಯಿತು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಅವಳಿಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಛಾಪು ಮೂಡಿಸತೊಡಗಿದ್ದಾಳೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ ಶೇ.50ರಷ್ಟು ಮಂದಿ ತಮ್ಮ ಹೆಣ್ಮಕ್ಕಳನ್ನು ಕಾಲೇಜುಗಳಿಗೆ ಕಳಿಸುವ ಉದ್ದೇಶ ಮದುವೆಗೆ ಉತ್ತಮ ಸಂಬಂಧ ಕೂಡಿ ಬರಲಿ ಎಂದಾಗಿದೆ. ಸಂಬಂಧ ಕೂಡಿಬರುವ ತನಕ ಹೆಣ್ಮಕ್ಕಳು ಕಲಿಯಲಿ ಎನ್ನುವವರೂ ಇದ್ದಾರೆ. ಈ ಕಾರಣದಿಂದಾಗಿ ಪರೀಕ್ಷೆ ಬರೆಯುವ ಮುನ್ನ ಅರ್ಧಕ್ಕೇ ಶಿಕ್ಷಣವನ್ನು ಮೊಟಕುಗೊಳಿಸಿ ವೈವಾಹಿಕ ಜೀವನಕ್ಕೆ ಕಾಲಿಡುವ ಹೆಣ್ಮಕ್ಕಳೂ ಇದ್ದಾರೆ. ಶಿಕ್ಷಣ ಪಡೆಯುವುದರ ಉದ್ದೇಶ ಇದೊಂದೇ ಆಗಿರಬಾರದು. ಕಲಿತು ಉದ್ಯೋಗ ಗಿಟ್ಟಿಸಿಕೊಂಡ ಹೆಣ್ಣು, ಮದುವೆಯ ನಂತರ ಕೆಲಸ ಬಿಟ್ಟರೆ ಅವಳನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡು ಹೆಣ್ಮಕ್ಕಳು ಎಷ್ಟು ಕಲಿತರೂ ಅಷ್ಟೇ, ಕೊನೆಗೂ ಒಲೆಯ ಮುಂದೆ ನಿಲ್ಲಲೇಬೇಕು ಎಂಬ ನಿಲುವು ತಾಳಿಬಿಡುತ್ತಾರೆ. ಹೊರಗಡೆ ದುಡಿಯುವುದು ಆಕೆಯ ಆಯ್ಕೆಯೇ ಹೊರತು ಅದು ಕಡ್ಡಾಯವೇನಲ್ಲ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ.

ಈ ನಿಟ್ಟಿನಲ್ಲಿ ನಮ್ಮೊಳಗೆ ಇನ್ನಷ್ಟು ಬದಲಾವಣೆಯ ಅಗತ್ಯವಿದೆ.


ಇದನ್ನೂ ಓದಿ: ಎಲೆಮರೆಯಿಂದ: ತಳ ಮಟ್ಟದ ಆರ್ಥಿಕ ಸ್ವಾವಲಂಬನೆ ಮತ್ತು ಮಂಗಳೂರಿನ ಟಿ.ಆರ್.ಎಫ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...