Homeಅಂಕಣಗಳುಎಲೆಮರೆಯಿಂದ: ತಳ ಮಟ್ಟದ ಆರ್ಥಿಕ ಸ್ವಾವಲಂಬನೆ ಮತ್ತು ಮಂಗಳೂರಿನ ಟಿ.ಆರ್.ಎಫ್

ಎಲೆಮರೆಯಿಂದ: ತಳ ಮಟ್ಟದ ಆರ್ಥಿಕ ಸ್ವಾವಲಂಬನೆ ಮತ್ತು ಮಂಗಳೂರಿನ ಟಿ.ಆರ್.ಎಫ್

- Advertisement -
- Advertisement -

ಕೊಣಾಜೆಯ ಮಂಗಳೂರು ವಿ.ವಿ.ಯ ಲೇಡೀಸ್ ಹಾಸ್ಟೆಲಿನ ಮುಂಭಾಗದ ಚುರುಮುರಿ ಕಾಕನ ಪುಟ್ಟ ತಳ್ಳುಗಾಡಿಯಲ್ಲಿ ಚುರುಮುರಿ ಸವಿಯದೇ ನಮ್ಮ ವಾರಾಂತ್ಯದ ತಿರುಗಾಟ ಪರಿಪೂರ್ಣವಾಗುವುದೇ ಇಲ್ಲ. ಕಾಕನ ಚುರುಮುರಿಗೆ ಅದೇನು ರುಚಿಯೋ! ಯಾರೊಂದಿಗೂ ಹೆಚ್ಚು ಮಾತನಾಡದೇ ತಮ್ಮ ಪಾಡಿಗೆ ತಿಂದು, ಕೂಡಲೇ ಜಾಗ ಖಾಲಿ ಮಾಡುವ ಟೆಕ್ಕಿಗಳು, ಯುನಿವರ್ಸಿಟಿ ಅಧ್ಯಾಪಕರು, ಪಟ್ಟಾಂಗ ಹೊಡೆಯುತ್ತಾ ತಿನ್ನುವ ಪಡ್ಡೆ ಹುಡುಗರು, ಬಯಲ ಕಲ್ಲು ಬೆಂಚಲ್ಲಿ ಕೂತು ತಿನ್ನಲು ಸಂಕೋಚಪಟ್ಟು ಕಾರೊಳಗೇ ಕೂತು ತಿನ್ನುವ ಮಹಿಳೆಯರು, ಒಂದೇ ಪ್ಲೇಟಿಗೆ ಕೈಹಾಕಿ ಹಂಚಿ ತಿನ್ನುವ ವಿದ್ಯಾರ್ಥಿನಿಯರು-ಮಕ್ಕಳು, ಅಲ್ಲಲ್ಲಿ ನಿಲ್ಲಿಸಿರುವ ಕಾರ್, ಬೈಕುಗಳು ಹೀಗೆ ಸಂಜೆಯಾಗುತ್ತಲೇ ಕಾಕನ ತಳ್ಳುಗಾಡಿಗೆ ಕಳೆ ಬಂದು ಬಿಡುತ್ತದೆ. ಸಂಜೆ ನಾಲ್ಕಕ್ಕೆ ಆರಂಭವಾಗುವ ವ್ಯಾಪಾರ ರಾತ್ರಿ ಹತ್ತಕ್ಕೆಲ್ಲಾ ಮುಗಿದು ಮನೆಯತ್ತ ಹೊರಡುವಾಗ ಒಂದೊಳ್ಳೆಯ ಮೊತ್ತ ಜೇಬಿಗಿಳಿಸುತ್ತಾರೆ. ಬ್ಯಾರಿಗಳದ್ದು ಅವರ ಹೆಸರಿನ ಅರ್ಥಕ್ಕೆ ತಕ್ಕಂತೆ ಯಾವುದೇ ವ್ಯಾಪಾರದಲ್ಲಾದರೂ ಎತ್ತಿದ ಕೈಯಾದರೂ ಆ ಕಾಕನಿಗೆ ಬದುಕು ಕಟ್ಟಿಕೊಳ್ಳಲು ಉಚಿತವಾಗಿ ತಳ್ಳುಗಾಡಿಯೊಂದನ್ನು ನೀಡಿದ್ದು ಮಂಗಳೂರಿನ ಬ್ಯಾರಿ ಮುಸ್ಲಿಮರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ ’ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್’.

ಒಂದು ಕಾಲದಲ್ಲಿ ಅಡಿಕೆ ಮಂಡಿಯೊಂದರಲ್ಲಿ ಕೂಲಿಯಾಗಿ ದುಡಿಯುತ್ತಿದ್ದ ಕಾಕನನ್ನು ತಳ್ಳುಗಾಡಿ ಸ್ವಾವಲಂಬಿಯಾಗಿಸಿತು. ತಳ್ಳುಗಾಡಿಯ ದುಡಿಮೆಯಿಂದಲೇ ಹೆಣ್ಣುಮಕ್ಕಳಿಗೆಲ್ಲಾ ಒಳ್ಳೆಯ ಶಿಕ್ಷಣ ನೀಡಿದರು, ಮದುವೆ ಮಾಡಿ ಕೊಟ್ಟರು. ಈ ಕಾಕ ಒಂದು ಉದಾಹರಣೆಯಷ್ಟೇ. ಟಿ.ಆರ್.ಎಫ್‌ನ ಮರುಪಾವತಿ ಬಯಸದ ಮೈಕ್ರೋ ಫೈನಾನ್ಸ್‌ನಿಂದಾಗಿ ಇಂದು ನಮ್ಮ ದ.ಕ ಜಿಲ್ಲೆಯಲ್ಲಿ ಇಂತಹ ತಳ್ಳು ಗಾಡಿಗಳಿಂದಲೇ ಬದುಕು ಕಟ್ಟಿಕೊಂಡ ಹತ್ತಾರು ಬ್ಯಾರಿ ಕಾಕಗಳಿದ್ದಾರೆ.

PC: trfmanglore

ಆಯೋಗವು ದೇಶದ ಮುಸಲ್ಮಾನರ ಸ್ಥಿತಿಗತಿಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಿಂತಲೂ ಶೋಚನೀಯವಾಗಿದೆ ಎಂದು ವರದಿ ಸಲ್ಲಿಸಿತು. ಯು.ಪಿ.ಎ ಸರಕಾರವು ವರದಿ ಸಿದ್ಧಪಡಿಸಿತೇ ಹೊರತು ಪರಿಸ್ಥಿತಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಯಾವುದೇ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಿಲ್ಲ. ಈ ವರದಿಯೇ 2005ರಲ್ಲಿ ಮಂಗಳೂರಿನಲ್ಲಿ ಬ್ಯಾರಿ ಉದ್ಯಮಿ ಅಬ್ದುರ್ ರವೂಫ್ ಪುತ್ತಿಗೆಯವರ ನೇತೃತ್ವದಲ್ಲಿ ಟಿ.ಆರ್.ಎಫ್ ಎಂಬ ಸರಕಾರೇತರ ಸಾಮಾಜಿಕ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು.

ಹೆಸರೇ ಸೂಚಿಸುವಂತೆ ಟಿ.ಆರ್.ಎಫ್. ಎಲೆಮರೆಯಲ್ಲಿದ್ದ ಪ್ರತಿಭೆಗಳನ್ನು ಗುರುತಿಸಿ, ಮಾರ್ಗದರ್ಶನ ನೀಡಿ ಗುರಿ ತಲುಪಿಸುವ ಧ್ಯೇಯವಿಟ್ಟುಕೊಂಡಿದ್ದರೂ ತನ್ನ ಸೇವೆಯನ್ನು ಅಷ್ಟಕ್ಕೇ ಸೀಮಿತಗೊಳಿಸದೆ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದತ್ತವೂ ಮುಂದಡಿಯಿಟ್ಟಿತು. ಶಿಕ್ಷಣ, ಸ್ವ ಉದ್ಯೋಗ, ಆರೋಗ್ಯ ಜಾಗೃತಿ, ಕೌನ್ಸೆಲಿಂಗ್, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ ಇತ್ಯಾದಿ ಕ್ಷೇತ್ರಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿತು.

ಸ್ವಂತ ಕೈಗಳಲ್ಲಿ ದುಡಿಯುವ ಆಹಾರಕ್ಕಿಂತ ಶ್ರೇಷ್ಠ ಆಹಾರವಿಲ್ಲ ಎನ್ನುತ್ತದೆ ಇಸ್ಲಾಂ. ಒಂದಿಷ್ಟು ಹಣವಿತ್ತೋ, ಒಂದೆರಡು ಹೊತ್ತಿನ ಅನ್ನ ಕೊಟ್ಟೋ ಬಡತನ ನೀಗಿಸಲಾಗದು. ಆರ್ಥಿಕ ಸ್ವಾವಲಂಬನೆಯಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. ಅದಕ್ಕಿರುವ ಏಕೈಕ ಮಾರ್ಗವೆಂದರೆ ದುಡಿಮೆ. ದುಡಿಯುವ ಕೈಗಳಿಗೆ ದುಡಿಮೆಯ ಹತ್ತಾರು ದಾರಿ ತೋರಿ ಸಣ್ಣ ಮಟ್ಟದ ಬಂಡವಾಳವನ್ನು ಶ್ರಮಜೀವಿಗಳಿಗೆ ಟಿ.ಆರ್.ಎಫ್ ಒದಗಿಸಿತು.

ಹಿಂದೆ ದ.ಕ.ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮೀನು ವ್ಯಾಪಾರಿಗಳು ಸುಡು ಬಿಸಿಲಿಗೂ, ಜಡಿಮಳೆಗೂ ಮೀನಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು ಹತ್ತಾರು ಮೈಲು ನಡೆದು ವ್ಯಾಪಾರ ಮಾಡುತ್ತಿದ್ದರು. ಆರ್ಥಿಕವಾಗಿ ತಕ್ಕ ಮಟ್ಟಿಗೆ ಸದೃಢರಾದವರು ಕ್ರಮೇಣ, ಮೋಟಾರು ಬೈಕ್, ಟೆಂಪೋಗಳಲ್ಲಿ ಮೀನು ವ್ಯಾಪಾರಕ್ಕಿಳಿದರು. ಅಂತವರ ಪ್ರಾಬಲ್ಯದ ಮುಂದೆ ತಲೆಹೊರೆ ವ್ಯಾಪಾರಿಗಳು ಸೊರಗಿದರು. ಅವರಷ್ಟಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ತಲೆ ಹೊರೆ ವ್ಯಾಪಾರಿಗಳು ಸದೃಢವಾಗಬೇಕೆಂದರೆ ಆಯಾಸವಿಲ್ಲದೇ ಹೆಚ್ಚೆಚ್ಚು ಗ್ರಾಹಕರನ್ನು ತಲುಪಬೇಕು. ಅದಕ್ಕಾಗಿ ತಲೆಹೊರೆ ವ್ಯಾಪಾರಿಗಳಿಗೆ ಟಿ.ಆರ್.ಎಫ್. ಉಚಿತವಾಗಿ ಸೈಕಲ್‌ಗಳನ್ನು ನೀಡಿ ಪ್ರೋತ್ಸಾಹಿಸಿತು.

ಅಭಿವೃದ್ಧಿ ಹೊಂದಿದ ಜಿಲ್ಲೆ ಎಂದು ಕರೆಯಲ್ಪಡುವ ದಕ್ಷಿಣ ಕನ್ನಡದ ಅತಿದೊಡ್ಡ ಸಮುದಾಯವಾದ ಬ್ಯಾರಿಗಳಲ್ಲಿನ ಶ್ರೀಮಂತಿಕೆಯಷ್ಟೇ ಹೊರಜಗತ್ತಿಗೆ ಕಾಣುತ್ತದೆ. ಇಲ್ಲೂ ಹಸಿವಿದೆ, ಬಡತನವಿದೆ, ಮೂಲಸೌಕರ್ಯಗಳನ್ನು ಹೊಂದಿರದ ಅದೆಷ್ಟೋ ಕುಟುಂಬಗಳಿವೆ. ತಳ್ಳುಗಾಡಿಯಿಟ್ಟುಕೊಂಡೋ, ಬೀದಿ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡೋ, ತಲೆ ಹೊರೆ ವ್ಯಾಪಾರ ಮಾಡಿಕೊಂಡೋ ದಿನದೂಡುವ ವರ್ಗದ್ದು ಕಾಲಿಗೆಳೆದರೆ ತಲೆಗಿಲ್ಲ, ತಲೆಗೆಳೆದರೆ ಕಾಲಿಗಿಲ್ಲದ ಪರಿಸ್ಥಿತಿ. ಬೀದಿ ವ್ಯಾಪಾರಿಗಳಿಗೇನು ಕಷ್ಟ? ಬಾಡಿಗೆಯಿಲ್ಲ, ಕರೆಂಟ್ ಬಿಲ್ ಇಲ್ಲ, ತೆರಿಗೆಯಿಲ್ಲ ಎಂದು ಹಗುರವಾಗಿ ಮಾತನಾಡುವವರಿದ್ದಾರೆ. ಬೀದಿ ವ್ಯಾಪಾರಿಗಳ ಅಭದ್ರತೆ, ಅತಂತ್ರ ಬದುಕು ಇವುಗಳನ್ನೆಲ್ಲಾ ಅರ್ಥೈಸುವವರು ಬಹಳ ಕಡಿಮೆ. ಈ ವ್ಯಾಪಾರ ಎಷ್ಟು ದಿನ ಎಂದು ಬಲ್ಲವರಿಲ್ಲ, ಇಂತಹ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಬ್ಯಾಂಕ್‌ಗಳೂ ಸಾಲ ನೀಡುವುದಿಲ್ಲ. ಈ ಎಲ್ಲಾ ಸೂಕ್ಷ್ಮಗಳನ್ನು ಮನಗಂಡು ಟಿ.ಆರ್.ಎಫ್. ಇಂತಹ ಭದ್ರತೆಯಿಲ್ಲದ ವ್ಯಾಪಾರಿಗಳ ಕೈ ಹಿಡಿದು ಅವರಿಗೆ ಸ್ವಾವಲಂಬನೆಯ ಹಾದಿಯನ್ನು ತೆರೆದುಕೊಟ್ಟಿತು.

ವಿಕಲಚೇತನರ ಮನದಲ್ಲಿ ಮನೆ ಮಾಡಿರುವ ’ನಾವು ಕುಟುಂಬಕ್ಕೆ ಭಾರ’ ಎಂಬ ಭಾವವನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಟಿ.ಆರ್.ಎಫ್ ಕೆಲಸ ಮಾಡುತ್ತಾ ಬಂದಿದೆ. ಅವರಿಗೆ ಮೋಟಿವೇಶನ್ ಕ್ಲಾಸ್ ಗಳನು ನೀಡುವ ಮೂಲಕ ಅವರಲ್ಲಿ ಭರವಸೆಯನ್ನು ಮೂಡಿಸಿ ದುಡಿಮೆಯ ಹಾದಿ ತೋರಿಸಿಕೊಟ್ಟಿತು. ವ್ಯಾಪಾರದಲ್ಲಿ ಆಸಕ್ತಿ ಹೊಂದಿದವರಿಗೆ ಗೂಡಂಗಡಿ ಹಾಕಿ ಅದಕ್ಕೆ ಬಂಡವಾಳವನ್ನೂ ಕೊಟ್ಟಿತು. ಮೊಬೈಲ್ ಟೆಕ್ನಿಶಿಯನ್‌ನಂತಹ ವೃತ್ತಿ ತರಬೇತಿಗಳನ್ನು ಉಚಿತವಾಗಿ ನೀಡಿ ಬದುಕು ಕಟ್ಟಿಕೊಳ್ಳುವ ಕಲೆಯನ್ನು ತೋರಿಸಿತು.

ಹಿಂದೊಂದು ಕಾಲವಿತ್ತು. ಆಗ ಮೌಲ್ವಿಗಳನ್ನು ಮಸೀದಿಗಳಿಗಷ್ಟೇ ಸೀಮಿತಗೊಳಿಸಲಾಗುತ್ತಿತ್ತು. ಜಮಾಅತ್ ವ್ಯವಸ್ಥೆ ಹಾಕಿದ ಚೌಕಟ್ಟು ದಾಟಿದರೆ ಜಮಾಅತಿಗರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಇದಕ್ಕೆ ಭಯಪಟ್ಟು ಅವರು ತಮಗಾಗಿಯೇ ಸಿದ್ಧಪಡಿಸಲಾದ ಅಚ್ಚಿನೊಳಗೆ ಕೂತುಬಿಡುತ್ತಿದ್ದರು. ಅವರ ಬಿಡುವಿನ ಸಮಯ ಹಾಗೂ ಅವರೊಳಗೆ ಅಡಗಿದ ಪ್ರತಿಭೆ ಇವೆರಡನ್ನೂ ಬಳಸಿಕೊಂಡ ಟಿ.ಆರ್.ಎಫ್ ಈ ಕಾಲದಲ್ಲಿ ಅತಿಹೆಚ್ಚು ಬೇಡಿಕೆಯಿರುವ ಮೊಬೈಲ್ ಟೆಕ್ನಿಶಿಯನ್ ತರಬೇತಿ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್, ಕಂಪ್ಯೂಟರ್, ಫೋಟೋಗ್ರಾಫಿ, ಟ್ರೈವಿಂಗ್ ಮುಂತಾದ ಹೃಸ್ವ ಅವಧಿಯ ವೃತ್ತಿಪರ ತರಬೇತಿಗಳನ್ನು ನೀಡಿ ಮಸೀದಿಯಾಚೆಗೂ ಅವರು ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿತು. ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಕೂಲಿ ಕೆಲಸ, ಗಜರಿ ಹೆಕ್ಕುವ ಕೆಲಸವನ್ನು ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದ ಯುವಕರನ್ನು ’ಮರಳಿ ಬಾ ಶಾಲೆಗೆ’ ಯೋಜನೆಯಡಿಯಲ್ಲಿ ಎಸ್ಸೆಸ್ಸೆಲ್ಸಿ ಪಾಸು ಮಾಡಿಸಿ ಇಂತಹದ್ದೇ ವೃತ್ತಿಪರ ತರಬೇತಿಗಳನ್ನು ನೀಡಿ ದುಡಿಮೆಗೆ ಹೊಸತೊಂದು ಹಾದಿಯನ್ನು ತೋರಿಸಿಕೊಟ್ಟಿತು. ಈ ಯೋಜನೆಯ ಸದುಪಯೋಗ ಪಡೆದುಕೊಂಡ ಹಲವಾರು ಯುವಕರು ನಗರದಲ್ಲಿ ಸ್ವಂತ ಮೊಬೈಲ್ ಅಂಗಡಿಗಳನ್ನು ತೆರೆದು ಸ್ವಾವಲಂಬಿಗಳಾಗಿದ್ದಾರೆ. ವಿದೇಶಗಳಲ್ಲೂ ದುಡಿಯುತ್ತಿದ್ದಾರೆ.

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಮೊದಲಿಗೆ ತೆರವುಗೊಳಿಸಿದ್ದು ಬೀದಿ ವ್ಯಾಪಾರಿಗಳನ್ನು. ಇದು ಅವರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೀಡುಮಾಡಿತು. ಇದೇ ಕಾರಣಕ್ಕಿರಬೇಕು ಮಂಗಳೂರಿನ ಬೀದಿ ಬೀದಿಗಳಲ್ಲಿ ಗಿಜಿಗುಡುತ್ತಿದ್ದ ವ್ಯಾಪಾರಿಗಳು ಹಿಂದಿನಂತೆ ಈಗ ಕಾಣಸಿಗುವುದಿಲ್ಲ. ಟಿ.ಆರ್.ಎಫ್ ಲಾಕ್‌ಡೌನ್ ಬಳಿಕ ಬೀದಿ ವ್ಯಾಪಾರಿಗಳಿಗೆ ತಲಾ 5000 ರೂಪಾಯಿಗಳನ್ನು ನೀಡಿ ವ್ಯಾಪಾರವನ್ನು ಪುನಶ್ಚೇತನಗೊಳಿಸಿತು. ಇಂತಹ ಸೇವೆಯು ದೇಶಕ್ಕೆ ಒಂದು ಅನನ್ಯ ಮಾದರಿ. ಟಿ.ಆರ್.ಎಫ್‌ನ ಈ ಕೆಲಸಗಳು ಬಾಂಗ್ಲಾದೇಶದಲ್ಲಿ ಮೈಕ್ರೋ ಫೈನಾನ್ಸ್‌ಗಾಗಿ ನೊಬೆಲ್ ಪ್ರಶಸ್ತಿ ಪಡೆದ ಡಾ.ಮುಹಮ್ಮದ್ ಯೂನುಸ್‌ರ ಹೆಜ್ಜೆ ಗುರುತುಗಳನ್ನು ನೆನಪಿಸುವಂತಿದೆ. ಅದು ಯಶಸ್ಸಿನ ಉತ್ತುಂಗಕ್ಕೇರಲಿ ಎಂದು ಹಾರೈಸೋಣ..


ಇದನ್ನೂ ಓದಿ: ಬೆಂಗಳೂರು IISc ಪ್ರಾಧ್ಯಾಪಕಿ ರೋಹಿಣಿ ಗೋಡ್ಬೋಲೆಗೆ ಫ್ರಾನ್ಸ್‌‌ನ ಅತ್ಯುನ್ನತ ಗೌರವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...