Homeಅಂಕಣಗಳುಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

ಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 10/ ಜಾಗತಿಕ ಸಿನಿಮಾ/ ಗ್ರೀಸ್/ ಅರ್ಗಿರಿಸ್ ಪಪಡಿಮಿಟ್ರೊಪೊಲಸ್

ಸನ್‌ಟ್ಯಾನ್ (2016): ನಲವತ್ತೈದರ ಒಂಟಿಯಾಗಿರುವ ಡಾಕ್ಟರೊಬ್ಬ ಸಿಸಾನಲ್ ಟೂರಿಸ್ಟ್ ದ್ವೀಪದಲ್ಲಿ ಕೆಲಸ ಮಾಡಲು ನೇಮಕವಾಗಿ ಬರುತ್ತಾನೆ. ಚಳಿಗಾಲದಲ್ಲಿ ಜನ ವಿರಳವಾಗಿರುವ ದ್ವೀಪಕ್ಕೆ ಬೇಸಿಗೆ ಬಂದರೆ ಸಾಕು ಯೂರೋಪಿನ ಎಲ್ಲ ದೇಶಗಳಿಂದ ಯುವಕ ಯುವತಿಯರು ಬರುತ್ತಾರೆ. ಡಾಕ್ಟರ್‌ನ ದೈನಂದಿಕ ಜೀವನದಲ್ಲಿ ಮತ್ತು ಮಾನಸಿಕವಾಗಿ ಆಗುವ ಬದಲಾವಣೆಗಳೇ ಸಿನಿಮಾದ ಕಥಾನಕ.

ಡಾಕ್ಟರ್ ಒಂಟಿಯಾಗಿ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ, ಶಿಸ್ತುಬದ್ಧವಾಗಿ ಬದುಕುತ್ತಿರುತ್ತಾನೆ. ಜೊತೆಗೆ ಸುತ್ತಮುತ್ತಲಿನ ಜನರಾದ ರೆಸ್ಟ್ಟೊರೆಂಟ್‌ನ ಓನರ್, ಬಾರಿನ ಓನರ್, ದ್ವೀಪದ ಮೇಯರ್ ಹೀಗೆ ಎಲ್ಲರೂ ಇವನನ್ನು ಗೌರವಿಸುತ್ತಾರೆ.

ಬೇಸಿಗೆ ಶುರುವಾದೊಡನೆ ಯೂರೋಪಿನ ವಿವಿಧ ಭಾಗಗಳಿಂದ ಹದಿನೆಂಟು ಹತ್ತೊಂಬತ್ತರ ವಯಸ್ಸಿನ ಯುವಕ-ಯುವತಿಯರು ಗುಂಪುಗಳು ಬರುವುದರಿಂದ ದ್ವೀಪವೇ ಬದಲಾಗುತ್ತದೆ. ಸಾಮಾನ್ಯವಾಗಿ ಖಾಲಿಯಿರುವ ರಸ್ತೆಗಳಲ್ಲಿ ರಾತ್ರಿಗಳಲ್ಲೂ ಓಡಾಡುವ ವಾಹನಗಳು, ಬೆಳಿಗ್ಗೆವರೆಗೂ ತೆರೆದಿರುವ ರೆಸ್ಟ್ಟೊರೆಂಟ್‌ಗಳು, ನೈಟ್ ಕ್ಲಬ್‌ಗಳು, ಬೀಚ್‌ಗಳ ತುಂಬ ನಗ್ನವಾಗಿ ಓಡಾಡುತ್ತಾ, ಕುಣಿಯುತ್ತಾ, ಆಡುವ ಯುವಕ-ಯುವತಿಯರು.

ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡ ಯುವತಿ ತನ್ನ ಗೆಳೆಯರ ಗುಂಪಿನೊಂದಿಗೆ ಒಮ್ಮೆ ಆಸ್ಪತ್ರೆಗೆ ಬರುತ್ತಾಳೆ. ಗಾಯಗೊಂಡಿರುವ ಅನ್ನಾ, ಸ್ವಚ್ಚಂದವಾಗಿ ಸದಾ ನಗುತ್ತಾ ಇರುವ, ಯೌವ್ವನ ಚಿಲುಮೆಯ ತುತ್ತತುದಿಯಲ್ಲಿರುವ ಚೆಲುವೆ. ಅನ್ನಾಳಿಗೆ ಚಿಕಿತ್ಸೆ ನೀಡುವಾಗಲೇ ಆ ಗುಂಪು ಡಾಕ್ಟರಿಗೆ ಕೀಟಲೆ ಮಾಡುತ್ತದೆ. ಡಾಕ್ಟರ್ ಕೋಪಗೊಳ್ಳದೆ, ಸ್ನೇಹದಿಂದ ವರ್ತಿಸುತ್ತಾನೆ. ಅನ್ನಾ ಡಾಕ್ಟರನ್ನು ಮೆಚ್ಚಿಕೊಂಡು ಕೆನ್ನೆಗೊಂದು ಮುತ್ತನ್ನಿಡುತ್ತಾಳೆ.

ಸನ್ ಟ್ಯಾನ್

ಮತ್ತೆ ಡಾಕ್ಟರ್ ಮತ್ತು ಯುವ ಗುಂಪು ಬೀಚಿನಲ್ಲಿ ಭೇಟಿಯಾಗುತ್ತಾರೆ. ಅಲ್ಲಿಂದ, ಆಸ್ಪತ್ರೆಗೆ ಬಾಗಿಲು ಎಳೆದು, ಆ ಗುಂಪಿನ ಜೊತೆಯಲ್ಲೇ ಓಡಾಡುತ್ತಾ, ಕುಡಿಯುತ್ತಾ, ಕುಣಿಯುತ್ತಾ ಯುವಕನಂತಾಗುತ್ತಾನೆ. ಸಮಯ ಕಳೆಯುತ್ತಿದ್ದಂತೆ ಅವರೊಂದಿಗೆ ಇರಲು, ಮುಖ್ಯವಾಗಿ ಅನ್ನಾಳ ಜೊತೆಗಿರಲು ಹಂಬಲಿಸುತ್ತಾನೆ. ಕುಡಿದ ಮತ್ತಿನಲ್ಲಿ ಅವಳಿಗೆ ಮುತ್ತನ್ನಿಡುತ್ತಾನೆ. ಅವಳು ಅವನ ತಾಳಕ್ಕೆ ಕುಣಿಯುತ್ತಾಳೆ ಮತ್ತು ಯಾರು ಇಲ್ಲದ ಬೀಚಿನಲ್ಲಿ ಡಾಕ್ಟರ್ ಮತ್ತು ಅನ್ನಾ ಸೆಕ್ಸ್‌ನಲ್ಲಿ ಉನ್ಮತ್ತರಾಗುತ್ತಾರೆ.

ನಂತರದ ಐದು ದಿನಗಳು ಯುವ ಗುಂಪಿನ ಜಾಡೇ ಇಲ್ಲವಾಗುತ್ತದೆ. ಡಾಕ್ಟರ್ ಹಸಿದ ಹೆಬ್ಬುಲಿಯಂತೆ ಎಲ್ಲ ಬಾರ್‌ಗಳಿಗೂ, ನೈಟ್ ಕ್ಲಬ್‌ಗಳಿಗೆ ಹೋಗಿ ಅವಳನ್ನು ಹುಡುಕುತ್ತಾ, ಕುಡಿತದಲ್ಲಿ ಮುಳುಗುತ್ತಾನೆ. ಮತ್ತೆ ಅವನ ಮನೆಗೆ ಹಿಂತಿರುಗಿ ಬಂದು ಮಲಗಲು ಪ್ರಯತ್ನಿಸುತ್ತಾನೆ. ಆದರೆ ಅವನ ಮನಸ್ಸೆಲ್ಲ ಅನ್ನಾಳೇ ತುಂಬಿಕೊಂಡಿರುತ್ತಾಳೆ.

ಈ ಹುಡುಕಾಟದಲ್ಲಿ ಕೊನೆಗೂ ಅನ್ನಾ ಸಿಗುತ್ತಾಳೆ. ತನ್ನ ತಳಮಳದ ಹುಡುಕಾಟವನ್ನು ಪ್ರಸ್ತಾಪಿಸಿ, ’ಅವಳು ಎಲ್ಲಿ ಹೋಗಿದ್ದಳು?’ ಎಂದು ಹಕ್ಕಿನಿಂದ ಪ್ರಶ್ನಿಸುವುದು ಅನ್ನಾಳಿಗೆ ಇಷ್ಟವಾಗುವುದಿಲ್ಲ. ಡಾಕ್ಟರಿನ ಮನಸ್ಸಿನಲ್ಲಾದ ಕಳವಳಗಳನ್ನು ಅವಳ ಬಳಿ ಹಂಚಿಕೊಳ್ಳಲು ಪ್ರಯತ್ನಿಸಿದರೂ, ಅನ್ನಾ ಅವನೊಂದಿಗೆ ಏನನ್ನೂ ಮಾತಾಡದೆ, ಅವನನ್ನು ನಿರಾಕರಿಸುತ್ತಾಳೆ.

ಇದನ್ನು ಜೀರ್ಣಿಸಿಕೊಳ್ಳಲಾಗದೆ ಡಾಕ್ಟರ್ ಪದೇ ಪದೇ ಆಕೆಯ ಬೆನ್ನು ಹತ್ತುತ್ತಾನೆ. ಆದರೆ ಗುಂಪಿನ ಎಲ್ಲರೂ ಇವನನ್ನು ತಿರಸ್ಕರಿಸುತ್ತಾರೆ. ಅತಿಯಾದ ಕುಡಿತದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಯ ಕೊಡಲಾಗುವುದಿಲ್ಲ. ಡಾಕ್ಟರ್ ಕೆಲಸವನ್ನು ತೊರೆದುಹೋಗಲು ಮೇಯರ್ ಹೇಳುತ್ತಾನೆ. ನೈಟ್ ಕ್ಲಬಿನಲ್ಲಿ ಕುಣಿಯುತ್ತಿದ್ದ ಅನ್ನಾಳಿಗೆ ಇಂಜಕ್ಷನ್‌ಅನ್ನು ಚುಚ್ಚಿ ಡಾಕ್ಟರ್ ಅವಳನ್ನು ಆಸ್ಪತ್ರೆಗೆ ಎತ್ತಿಕೊಂಡು ಬರುವಲ್ಲಿಗೆ ಸಿನಿಮಾ ಮುಗಿಯುತ್ತದೆ.

ನಲವತ್ತೈದರ ವಯಸ್ಸಿನಲ್ಲಿ ಭದ್ರತೆ, ಸ್ಥಿರತೆಯನ್ನು ಮನಸ್ಸು ಒಂದು ಕಡೆ ಕೇಳಿದರೆ, ಇಪ್ಪತ್ತರ ಸ್ವಾತಂತ್ರ ಮತ್ತು ಸ್ವಚಂದವನ್ನು ಮತ್ತೊಂದು ಕಡೆ ಕೇಳುತ್ತದೆ. ಹೀಗೆ ಚಲನೆ ಸುಲಭವಾಗಿ ಸಾಧ್ಯವಾಗದ ಈ ಎರಡು ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಈ ಸಿನಿಮಾ ಹಿಡಿದಿಟ್ಟಿದೆ.

ವೆಸ್ಟೆಡ್ ಯೂತ್ (2011): ಅಥೆನ್ಸಿನಲ್ಲಿ ಐವತ್ತರ ಗಡಿಯಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಹದಿನಾರು ವರ್ಷದ ಹುಡುಗನ ಬೇರೆ ಬೇರೆ ಬದುಕುಗಳನ್ನು ನೈಜವಾಗಿ ಚಿತ್ರಿಸುತ್ತಾ, ಒಂದು ನಡುರಾತ್ರಿಯ ಸಂದರ್ಭದಲ್ಲಿ ಇವರಿಬ್ಬರೂ ಎದುರಾಗಲು ಕಾರಣವಾಗುವ ಕಹಿ ಘಟನೆಯೇ ಸಿನಿಮಾದ ಕಥೆ.

ಈ ಸಿನಿಮಾದಲ್ಲಿ ಸಮಾನಾಂತರವಾಗಿ ನಡೆಯುವ ಎರಡು ಪೀಳಿಗೆಗಳ ಕಥೆಗಳು ಒಂದು ಕಡೆಗೆ ಚಲಿಸುತ್ತವೆ. ನಿಧಾನಗತಿಯ ಹಾಗೂ ಉತ್ಸಾಹವಿಲ್ಲದೆ, ಸದಾ ಮೊಬೈಲ್ ನೋಡುವ ಮಗಳಿಗೆ ಬೈಯುತ್ತಾ ಮತ್ತು ಸದಾ ಟಿವಿ ನೋಡುವ ತಾಯಿಯೊಂದಿಗೆ ಮಾತಾಡಲು ಪ್ರಯತ್ನಿಸಿ ಸೋತು, ಸಾಧಾರಣ ಜೀವನ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಒಂದು ಕಡೆಯಾದರೆ, ಇನ್ನೊಂದೆಡೆ, ಯಾವುದೇ ಒತ್ತಡಗಳಲ್ಲಿದೆ, ಉತ್ಸಾಹದಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುತ್ತಾ, ಸದಾ ಹರಟುತ್ತಾ, ಸ್ಕೇಟ್ ಬೋರ್ಡಿನ ಸಹಾಯದಿಂದ ಸುತ್ತಾಡುವ ಹುಡುಗ. ಹದ್ದುಬಸ್ತಿನಲ್ಲಿಡುವ ತಂದೆಯಿಂದ ತಪ್ಪಿಸಿಕೊಂಡು, ಆಸ್ಪತ್ರೆಯಲ್ಲಿ ರೋಗಿಯಾಗಿರುವ ತಾಯಿಯನ್ನು ಮಾತಾಡಿಸುತ್ತಾ, ಯಾವುದೇ ಜವಾಬ್ದಾರಿಗಳಲ್ಲಿದೇ ಬದುಕುತ್ತಿರುತ್ತಾನೆ.

ಹೀಗೆ ಸಾಗುವ ಇವರಿಬ್ಬರ ಒಂದೇ ದಿನದ ಕಥೆಯನ್ನು ಚಿತ್ರಿಸಲಾಗಿದೆ. ಹುಡುಗ ತನ್ನ ಗೆಳಯರೊಡಗೂಡಿ, ಅವರೆಲ್ಲ ಸುತ್ತಾಡುತ್ತಾ, ಸ್ಕೇಟ್ ಮಾಡುತ್ತಾ, ಹಸ್ತಮೈಥುನ ಮಾಡುತ್ತಾ, ಊರೆಲ್ಲ ಸುತ್ತಾಡಿ ನೈಟ್ ಕ್ಲಬ್ಬಿಗೆ ಬರುತ್ತಾರೆ. ಪೊಲೀಸ್ ತನ್ನ ಸಹೋದ್ಯೋಗಿಯೊಂದಿಗೆ, ವೀಲಿಂಗ್ ಮಾಡುತ್ತಿರುವ ಯುವಕರನ್ನು ಚದುರಿಸುತ್ತಾ, ರಾತ್ರಿಯೆಲ್ಲ ರಸ್ತೆಗಳನ್ನು ಗಮನಿಸುತ್ತಾ ಗಸ್ತು ಸುತ್ತಿ ನೈಟ್ ಕ್ಲಬ್ಬಿನತ್ತ ಬರುತ್ತಾರೆ.

ವೆಸ್ಟೆಡ್ ಯೂತ್

ನೈಟ್ ಕ್ಲಬ್ಬಿನಲ್ಲಿ ಕುಡಿದ ಮತ್ತಿನಲ್ಲಿ ಬೇರೊಂದು ಹುಡುಗಿಗೆ ಮುತ್ತನ್ನಿಡುವುದನ್ನು, ಹುಡುಗನ ಗರ್ಲ್‌ಫ್ರೆಂಡ್ ನೋಡಿ, ಇವನೊಂದಿಗೆ ಜಗಳ ಮಾಡಿಕೊಂಡು, ಹೊರಗೆ ಹೋಗುತ್ತಾಳೆ. ಅವಳನ್ನು ಸಮಾಧಾನಪಡಿಸಲು ಸಾಧ್ಯವಾಗದೆ ತಿರುಗಿ ನೈಟ್ ಕ್ಲಬ್ಬಿಗೆ ಬರುವಾಗ ಪೊಲೀಸ್ ವಾಹನ ಬರುತ್ತದೆ. ಹುಡುಗ ಗರ್ಲ್‌ಫ್ರೆಂಡಿನ ಮೇಲಿನ ತನ್ನ ಕೋಪದಿಂದ ಪೊಲೀಸ್ ವಾಹನವನ್ನು ತಡೆದು ತಟ್ಟುತ್ತಾನೆ. ಆಗ ಪೊಲೀಸರು ಇಳಿದು ಆತನೆಡೆಗೆ ಬಂದಾಗ, ಹುಡುಗ ಹೊರಗೆ ಕುಡಿದು ನಿಂತಿದ್ದ ಜನಗಳ ಗುಂಪಿನೊಂದಿಗೆ ಸೇರಿಕೊಳ್ಳುತ್ತಾನೆ.

ಕುಡಿದ ಗುಂಪು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಗುಂಪಿನಿಂದ ಖಾಲಿ ಬಾಟಲ್‌ಗಳನ್ನು ಪೋಲಿಸರ ಮೇಲೆ ಎಸೆಯುತ್ತಾರೆ. ಆಗ ಪೋಲಿಸನ ಸಹದ್ಯೋಗಿ ಆಕಸ್ಮಿಕವಾಗಿ ಗುಂಪಿನತ್ತ ಗುಂಡನ್ನು ಹಾರಿಸುತ್ತಾನೆ. ಆ ಗುಂಡಿಗೆ ಆ ಹುಡುಗ ಬಲಿಯಾಗುವುದೇ ಸಿನಿಮಾದ ಕೊನೆ.

ಈ ಸಿನಿಮಾ ಅಥೆನ್ಸಿನಲ್ಲಿ ನಡೆದ ನೈಜ ಘಟನೆಯ ಆಧಾರಿತವಾಗಿದೆ. ಹುಡುಗ ಮತ್ತು ಪೊಲೀಸ್ ಅಧಿಕಾರಿಯ ಕಾಂಟ್ರಾಸ್ಟ್ ಬದುಕನ್ನು ಚಿತ್ರಿಸುವುದರ ಜೊತೆಗೆ ಆಥೆನ್ಸಿನ ಜನಜೀವನವನ್ನು ಈ ಸಿನಿಮಾ ಕಟ್ಟಿಕೊಟ್ಟಿದೆ.
ಅರ್ಗಿರಿಸ್‌ರ ಜೊತೆ ಯಾನ್ ವೊಗಲ್ ಕೂಡ ಈ ಸಿನಿಮಾಕ್ಕೆ ಸಹ ನಿರ್ದೇಶನ ಮಾಡಿರುವುದು ವಿಶೇಷ.

ಅರ್ಗಿರಿಸ್ ಪಪಡಿಮಿಟ್ರೊಪೊಲಸ್: ಅರ್ಗಿರಿಸ್ ಮೂಲತಃ ನಿರ್ಮಾಪಕ. ಇವರು ಹತ್ತಕ್ಕೂ ಸಿನಿಮಾಗಳನ್ನು ನಿರ್ಮಿಸಿ, ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರ ಮುಖ್ಯ ಆಸಕ್ತಿ ಅಥೆನ್ಸಿನ ಜನಜೀವನವನ್ನು ಹಿಡಿಯುವುದರ ಜೊತೆಗೆ ಯುವ ಹಾಗೂ ವಯಸ್ಕ ಪೀಳಿಗೆಗಳ ನಡುವಿನ ವ್ಯತ್ಯಾಸಗಳನ್ನು ಕಟ್ಟಿಕೊಡುವುದು. ಎರಡು ಪೀಳಿಗೆಗಳ ದೃಷ್ಟಿಕೋನದಲ್ಲಿ ಅಥೆನ್ಸ್‌ಅನ್ನು ಅಥೆಂಟಿಕ್ ಆಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಸಂದರ್ಶನವೊಂದರಲ್ಲಿ ಹೇಳುವಂತೆ, ಒಬ್ಬ ನಟನನ್ನು ಆರಿಸಿಕೊಂಡು, ಆ ಪಾತ್ರದ ಸ್ನೇಹಿತರ ಪಾತ್ರಗಳಿಗೆ, ಆ ನಟನ ನಿಜವಾದ ಸ್ನೇಹಿತರನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿರುತ್ತಾರೆ ಅರ್ಗಿರಿಸ್. ನಟ ನಟಿಯರೊಂದಿಗೆ ಕಥೆಯನ್ನು ಚರ್ಚಿಸಿದ ನಂತರ, ಸ್ಕ್ರಿಪ್ಟ್‌ಅನ್ನು ಪಕ್ಕಕ್ಕಿಟ್ಟು, ನಟ-ನಟಿಯರೊಂದಿಗೆ ಸಮಯ ಕಳೆಯುತ್ತಾ, ಯಾವುದೇ ಒತ್ತಡವಿಲ್ಲದೆ ಸಿನಿಮಾ ಮಾಡುವುದು ಇವರ ಶೈಲಿ. ಪರಸ್ಪರರ ಕುರಿತು ಒಮ್ಮೆ ತಿಳಿದುಕೊಂಡ ನಂತರ ಕ್ಯಾಮರಾದಿಂದ ಅವರ ಬದುಕನ್ನು ಹಿಡಿಯುವ ಮೂಲಕ ಸಿನಿಮಾವನ್ನು ಕಟ್ಟುವುದು ಕೂಡ.

ಅರ್ಗಿರಿಸ್ ಪಪಡಿಮಿಟ್ರೊಪೊಲಸ್

ಇದರಿಂದ ಅವರ ಸಿನಿಮಾಗಳಲ್ಲಿ ನಿಜವಾದ ಬದುಕನ್ನು ಹಿಡಿಯಲು ಸಾಧ್ಯವಾಗುತ್ತದೆ ಹಾಗೂ ಗೆಳೆಯರೇ ಒಡಗೂಡಿ ನಟಿಸುವಾಗ ಯಾವುದೇ ರೀತಿಯ ಮುಚ್ಚುಮರೆ ಮುಜುಗರಗಳಿಲ್ಲದೆ ನಟಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಇವರ ಕ್ಯಾಮರಾ ಶೈಲಿ ಸದಾ ’ಹ್ಯಾಂಡ್ ಹೆಲ್ಡ್’ ಆಗಿರುತ್ತದೆ. ಪ್ರೇಕ್ಷಕರು ಪಾತ್ರಗಳೊಂದಿಗೆ ಅವರು ಹೋದ ಜಾಗಗಳಿಗೆಲ್ಲ ಹೋಗುತ್ತಾ, ಪ್ರೇಕ್ಷಕರು ಪಾತ್ರಗಳ ಗೆಳೆಯರೆಂಬಂತೆ ಮಾಡುತ್ತದೆ ಸಿನಿಮ್ಯಾಟೋಗ್ರಫಿ.

ಕಥೆಯ ವಿಷಯಕ್ಕೆ ಬಂದರೆ, ಮುಖ್ಯವಾದ ಘಟನೆಗಳೇ ಇರಬೇಕು ಅನ್ನದೇ, ಎಷ್ಟೋ ನಿರಾಸಕ್ತವಾದ ಚಟುವಟಿಕೆಗಳನ್ನು ಚಿತ್ರೀಕರಿಸುತ್ತಾರೆ. ಅದೇ ನಿಜವಾದ ಬದುಕಿನ ಸೂಚಕವೆನ್ನುವುದು ಉಲ್ಲೇಖನೀಯ.

ಅಥೆನ್ಸ್‌ನಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು, ವಿವಿಧ ವಯಸ್ಸಿನ ವ್ಯಕ್ತಿಗಳ, ಪೀಳಿಗೆಗಳ ದೃಷ್ಟಿಯಿಂದ ಅವರ ಬದುಕುಗಳ ಬಗ್ಗೆ ಚಿತ್ರಕತೆ ಬರೆದು, ಅವರಂತಿರುವ ನಟರನ್ನು ಅಥವಾ ನಟನೆಯೇ ತಿಳಿಯದವರನ್ನು ಆಯ್ಕೆ ಮಾಡಿ, ಅವರೊಂದಿಗೆ ಕೂಡಿಕೊಂಡು ಗೆಳೆಯರಂತೆ ಬದುಕುತ್ತಾ ಅವರ ಬದುಕನ್ನು ನೈಜವಾಗಿ ಕ್ಯಾಮರಾದ ಸಹಾಯದಿಂದ ಕಟ್ಟಿರುವುದನ್ನು ಅರ್ಗಿರಿಸ್‌ರ ಸಿನಿಮಾಗಳಲ್ಲಿ ನೋಡಬಹುದು.


ಇದನ್ನೂ ಓದಿ: ಪಿಕೆ ಟಾಕೀಸ್: ನಿಗೂಢ ಅಥೆನ್ಸ್‌ನ ಜನಜೀವನವನ್ನು ಚಿತ್ರಿಸಿರುವ ಅದನ್ನು ಅಲೆಗರಿಯಾಗಿಸುವ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...